ಯುವಕರು ಪಡೆಗಳಿಂದ ನಿವೃತ್ತರಾಗುವ ಹೊತ್ತಿಗೆ, ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದುತ್ತದೆ. ಯಾವುದೇ ಕಾರಣಕ್ಕೂ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೆ ಇಲ್ಲ. ಇದು ಸಶಸ್ತ್ರ ಪಡೆಗಳು ಮತ್ತು ಅದರ ಮೂಲಕ ತರಬೇತಿ ಪಡೆಯುವ ಯುವಕರ ಒಳಿತಿಗಾಗಿ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಮಂಗಳವಾರ ಹೇಳಿದ್ದಾರೆ.
ಪಡೆಗಳಿಂದ ನಿವೃತ್ತರಾಗುವ ವೇಳೆ ಶಿಸ್ತುಬದ್ಧ, ತರಬೇತಿ ಪಡೆದ ಯುವಕರನ್ನು ನೇಮಿಸಿಕೊಳ್ಳಲು ಉದ್ಯಮಗಳು ಸ್ಪರ್ಧಿಸುತ್ತವೆ, ಹೀಗಾಗಿ ಅಗ್ನಿವೀರ್ಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಹೊಂದಿರುತ್ತಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಇದು ತಕ್ಷಣಕ್ಕೆ ತೆಗೆದುಕೊಂಡ ಪ್ರತಿಕ್ರಿಯೆಯೂ ಅಲ್ಲ. ಈ ಬಗ್ಗೆ ದಶಕಗಳಿಂದ ಚರ್ಚೆಯಾಗುತ್ತಿದೆ. 1970 ರ ದಶಕದಲ್ಲಿ, ನಾವು ಜನರಲ್ ಕೃಷ್ಣರಾವ್ ಸಮಿತಿ ರಚಿಸಿದ್ದೆವು. ಅದರಲ್ಲಿ ಜನರಲ್ ಚಿಬ್ಬರ್ ಮತ್ತು ಜನರಲ್ ಸುಂದರ್ ಸದಸ್ಯರಾಗಿದ್ದರು. ಮಾನವಶಕ್ತಿ ನೀತಿ ಸೇರಿದಂತೆ ಸೇನೆಯನ್ನು ಸುಧಾರಿಸುವ ಕುರಿತು ಅವರು ಮಾತನಾಡಿದ್ದರು” ಎಂದು ಅಜಿತ್ ದೋವಲ್ ಹೇಳಿದ್ದಾರೆ.
ಇದನ್ನೂ ಓದಿ: ‘ಅಗ್ನಿಪಥ್’ ವಿರೋಧಿಸಿ ಭಾರತ ಬಂದ್: ದೇಶಾದ್ಯಂತ 500 ರೈಲುಗಳು ರದ್ದು!
ಅದರ ನಂತರ 1989 ರಲ್ಲಿ ಅರುಣ್ ಸಿಂಗ್ ವರದಿ ಇತ್ತು. ನಂತರ ಒಂದು ಗುಂಪಿನ ಮಂತ್ರಿಗಳ ವರದಿ ಇತ್ತು .. ಸುಬ್ರಮಣ್ಯಂ ಸಮಿತಿಯ ವರದಿ, ಕಾರ್ಗಿಲ್ ಸಮಿತಿಯ ವರದಿ…ಇವೆಲ್ಲವೂ ಇದೇ ರೀತಿಯ ಮಾದರಿಯ ವರದಿಯಾಗಿತ್ತು. ಆದರೆ ಆಗ ಇದ್ದ ಒಂದು ಸಮಸ್ಯೆ ಏನೆಂದರೆ, ಇದು ಅಗತ್ಯ ಎಂದು ಎಲ್ಲರಿಗೂ ತಿಳಿದಿದ್ದರೂ, ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಇಚ್ಛೆ ಯಾರಿಗೂ ಇರಲಿಲ್ಲ ಎಂದು ದೋವಲ್ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
#WATCH LIVE | NSA Ajit Doval speaks to ANI's Smita Prakash on the #AgnipathRecruitmentScheme and other internal security issues https://t.co/DJ87xXO8j9
— ANI (@ANI) June 21, 2022
ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಬಿಜೆಪಿ ಸರ್ಕಾರ ಜಾರಿ ಮಾಡಿರುವ ಹೊಸ ಯೋಜನೆಯಾದ ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರಿದಿರುವ ಮಧ್ಯೆ, ಅಜಿತ್ ದೋವಲ್ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಯೋಜನೆಯಲ್ಲಿ ಯುವಕರನ್ನು 15 ವರ್ಷಗಳ ಬದಲಾಗಿ ನಾಲ್ಕು ವರ್ಷಗಳ ಅವಧಿಗೆ ಜವಾನ್ ಮಟ್ಟದಲ್ಲಿ ಮಾತ್ರ ನೇಮಕ ಮಾಡಲಾಗುತ್ತದೆ.
ಸೇನೆಯಲ್ಲಿ ನಾಲ್ಕು ವರ್ಷಗಳು ಸೇವೆ ಮಾಡಿದ ನಂತರ ನಿರುದ್ಯೋಗಿಗಲಾಗುತ್ತಾರೆ ಎಂಬ ವಾದವನ್ನು ಅವರು ನಿರಾಕರಿಸಿದ್ದು, ‘ತಪ್ಪು ತಿಳುವಳಿಕೆಯನ್ನು ಸೃಷ್ಟಿಸಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಗ್ನಿಪಥ ಯೋಜನೆ: ’ಮೋದಿ ಹಿಟ್ಲರ್ ಮಾರ್ಗವನ್ನು ಅನುಸರಿಸಿದರೆ ಹಿಟ್ಲರ್ನಂತೆ ಸಾಯುತ್ತಾರೆ’- ಕಾಂಗ್ರೆಸ್ ನಾಯಕ
“ನಾವು 22 ಅಥವಾ 23 ವರ್ಷ ವಯಸ್ಸಿನ ಯುವಕನ ಬಗ್ಗೆ ಮಾತನಾಡುತ್ತಿದ್ದೇವೆ. ನಾಲ್ಕು ವರ್ಷಗಳ ಸೇವೆ ಮಾಡಿ ಶಿಸ್ತುಬದ್ಧವಾಗಿ, ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಪಡೆಯುತ್ತಾನೆ. ಕೌಶಲ್ಯಗಳನ್ನು ಕಲಿಯುತ್ತಾನೆ, ಆತ್ಮವಿಶ್ವಾಸವನ್ನು ಬೆಳೆಸಿಕೊಂಳ್ಳುತ್ತಾನೆ, ತರಬೇತಿ ಹೊಂದುತ್ತಾನೆ ಮತ್ತು ಅಖಿಲ ಭಾರತ ದೃಷ್ಟಿಕೋನವನ್ನು ಪಡೆಯುತ್ತಾನೆ. ಸಮಾಜವನ್ನು ಎದುರಿಸಲು ಹೆಚ್ಚು ಸಜ್ಜಾಗುತ್ತಾರೆ. ಇಷ್ಟೇ ಅಲ್ಲದೆ, ಅವರಿಗೆ ಪ್ಲಸ್ ಟುಗೆ ಸಮಾನವಾದ ಅರ್ಹತೆಯನ್ನು ನೀಡಲಾಗುತ್ತದೆ. ಜೊತೆಗೆ ಅವರ ಬಳಿ 11 ಲಕ್ಷ ರೂಪಾಯಿ ಇರುತ್ತದೆ ಅದನ್ನು ಅವರು ಹೆಚ್ಚಿನ ಅಧ್ಯಯನಕ್ಕೆ ಬಳಸಬಹುದು” ಎಂದು ಅಜಿತ್ ದೋವಲ್ ಹೇಳಿದ್ದಾರೆ.
“ಅಗ್ನಿವೀರ್ ನಿವೃತ್ತಿಯಾಗುವ ಹೊತ್ತಿಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ. ಖಾಸಗಿ ವಲಯದಲ್ಲಿ ಸಾಕಷ್ಟು ಅವಕಾಶಗಳು ದೊರೆಯಲಿವೆ. ಕೈಗಾರಿಕೆಗಳು ಶಿಸ್ತುಬದ್ಧ ಮತ್ತು ತರಬೇತಿ ಪಡೆಯುವ ಜನರನ್ನು ನೇಮಿಸಿಕೊಳ್ಳಲು ಬಯಸುತ್ತವೆ. ಅವರ ಚಿಕ್ಕ ವಯಸ್ಸು ಅವರ ದೊಡ್ಡ ಆಸ್ತಿ. ಅವರ ಭವಿಷ್ಯವು ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ದೋವಲ್, “ಇದರಲ್ಲಿ ಎರಡು ಗುಂಪಿನ ಜನರ ವಿರೋಧವಿದೆ. ಮೊದಲನೆಯದಾಗಿ ಸೇನಾ ಯೋಧರು ಇದ್ದು, ಅವರು ಸಂಪೂರ್ಣ ಮಾಹಿತಿಯ ಕೊರತೆಯಿಂದ ವಿರೋಧಿಸುತ್ತಿದ್ದಾರೆ. ಎರಡನೆಯದ್ದು ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಗ್ನಿಪಥ್: ಬೆಳಗಾವಿಯಲ್ಲಿ ಆಂದೋಲನ ತಡೆಯಲು ಬಿಗಿ ಭದ್ರತೆ; ವಿದ್ಯಾರ್ಥಿ ನಾಯಕರು ವಶಕ್ಕೆ
“ಇವರು ರಾಷ್ಟ್ರದ ಭದ್ರತೆಯ ಬಗ್ಗೆ ಯಾವುದೇ ಕಾಳಜಿಯನ್ನು ಹೊಂದಿಲ್ಲ ಅಥವಾ ಅವರು ರಾಷ್ಟ್ರಕ್ಕೆ ಸಮರ್ಪಿತರಾಗಿಲ್ಲ. ಅವರು ಸಂಘರ್ಷದ ಉದ್ಯಮಿಗಳು. ಇವರು ಕಲ್ಲು ತೂರಾಟ, ಪ್ರತಿಭಟನೆಗಳು ಮತ್ತು ರೈಲುಗಳನ್ನು ಸುಡುವ ಜನರು. ಇದರಲ್ಲಿ ಅಗ್ನಿವೀರ್ ಎಂದಿಗೂ ದಾರಿ ತಪ್ಪುವುದಿಲ್ಲ. ಪ್ರತಿಭಟಿಸುವವರಲ್ಲಿ ಯಾರೊಬ್ಬರೂ ಪಡೆಗಳನ್ನು ಸೇರಲು ಆಸಕ್ತಿ ಹೊಂದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.