Homeಮುಖಪುಟಚುನಾವಣಾ ಬಾಂಡ್ ಯೋಜನೆ; ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆಯೇ!

ಚುನಾವಣಾ ಬಾಂಡ್ ಯೋಜನೆ; ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆಯೇ!

- Advertisement -
- Advertisement -

ಆಡಳಿತ ನಡೆಸುವವರು ಮತ್ತು ವ್ಯಾಪಾರಿ ವರ್ಗದ ನಡುವೆ ಇರುವ ಸಹಕಾರ, ಸಹಯೋಗ, ಸಮನ್ವಯ ಹಾಗೂ ಅದರೊಂದಿಗೆ ನಡೆಯುವ ರಹಸ್ಯ ಒಪ್ಪಂದಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇಂತಹ ಏರ್ಪಾಡುಗಳು ಅತ್ಯಂತ ಅನೌಪಚಾರಿಕವಾಗಿರುತ್ತವೆ ಹಾಗೂ ಕಾನೂನಿನ ಪರಿಭಾಷೆಯೊಳಗೆ ಬರದಂತಹ ಏರ್ಪಾಡುಗಳಾಗಿರುತ್ತವೆ ಹಾಗೂ ಇಂತಹ ಏರ್ಪಾಡುಗಳಾಗಿವೆ ಅಥವಾ ಅಂತಹ ಸಾಧ್ಯತೆಗಳಿವೆ ಎನ್ನುವ ಸಮಯದಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳಿರುತ್ತವೆ. ಈ ಮುನ್ನ ಯಾವುದೇ ಉದ್ದಿಮೆ ಅಥವಾ ವ್ಯಾವಹಾರಿಕ ಸಂಸ್ಥೆ ತನ್ನ ಆಡಳಿತ ಹಾಗೂ ನೀತಿಗಳಲ್ಲಿ ಸರ್ಕಾರವನ್ನು ದೊಡ್ಡ ಮಟ್ಟದಲ್ಲಿ ಪ್ರಭಾವಿಸದಂತೆ ತಡೆಯೊಡ್ಡಲು ಹೆಚ್ಚು ಕಟ್ಟುನಿಟ್ಟಾದ ನಿಯಂತ್ರಣ ಮತ್ತು ನಿರ್ಬಂಧನೆಗಳನ್ನು ಹೇರಲಾಗಿತ್ತು. ಉದಾಹರಣೆಗೆ, ರಾಜಕೀಯ ಪಕ್ಷಗಳಿಗೆ ಯಾವುದೇ ಕಂಪನಿಯು ದೇಣಿಗೆ ನೀಡಬೇಕೆಂದಿದ್ದರೆ ಅವುಗಳು ತಮ್ಮ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಆದ ಸರಾಸರಿ ನಿವ್ವಳ ಲಾಭದಲ್ಲಿ ಗರಿಷ್ಠ 7.5% ಮಾತ್ರ ನೀಡಬಹುದಾಗಿತ್ತು.

ಆದರೆ, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ವಿಷಯದಲ್ಲಿ ಪಾರದರ್ಶಿಕತೆಯನ್ನು ತರುವ ನೆಪದಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲಾಯನ್ಸ್ (ಎನ್‌ಡಿಎ) ಸರಕಾರವು ಮೋದಿಯ ನೇತೃತ್ವದಲ್ಲಿ ಈ ನಿಯಂತ್ರಣ ಕಾನೂನು ಮತ್ತು ನೀತಿಗಳಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿತು. ಅದರಿಂದ ಆಗಿದ್ದೇನೆಂದರೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಟ್ಟಾರೆ ಪ್ರಕ್ರಿಯೆಯು ಇನ್ನಷ್ಟು ಅಪಾರದರ್ಶಕವಾಯಿತು. ವಿರೋಧ ಪಕ್ಷಗಳ ಮೇಲೆ ಅನಧಿಕೃತ ನಿಯಂತ್ರಣಕ್ಕೆ ಮತ್ತು ಅವುಗಳನ್ನು ಮ್ಯಾನಿಪುಲೇಟ್ ಮಾಡುವುದಕ್ಕೆ ಎಡೆಮಾಡಿಕೊಟ್ಟಿತು, ಅಷ್ಟೇ ಅಲ್ಲದೇ, ದಾನಿಗಳ ಮೇಲೆಯೂ ನಿಯಂತ್ರಣ ಸಾಧಿಸಿದಂತಾಯಿತು ಹಾಗೂ ಶೆಲ್ ಕಂಪನಿಗಳ ಮೂಲಕ ಮನಿ ಲಾಂಡರಿಂಗ್‌ನ ಕೆಲಸವನ್ನು ಕಾನೂನುಬದ್ಧಗೊಳಿಸಿದಂತಾಯಿತು.

2018ರಲ್ಲಿ ಚುನಾವಣಾ ಬಾಂಡ್‌ಗಳನ್ನು ತರುವುದಕ್ಕೆ ಮುನ್ನ ಮೋದಿ ಸರಕಾರವು 2017ರಲ್ಲಿ ಕಂಪನೀಸ್ ಆಕ್ಟ್‌ಗೆ ತಿದ್ದುಪಡಿ ತಂದಿತು. ಅದರಿಂದ ಆಗಿದ್ದು, ರಾಜಕೀಯದಲ್ಲಿನ ಮತ್ತು ಕಾರ್ಪೊರೆಟ್ ಜಗತ್ತಿನ ನೀತಿಬಾಹಿರ ಶಕ್ತಿಗಳೆಲ್ಲವೂ ಒಂದೆಡೆ ಬಂದು, ಕಾನೂನುಬದ್ಧವಾಗಿರುವ ಒಂದು ರೀತಿಯ ಅಪವಿತ್ರ ಮೈತ್ರಿಯನ್ನು ರಚಿಸಿಕೊಳ್ಳಲು ಅನುವು ಮಾಡಿಕೊಟ್ಟಿತು; ಆಗ ಕಾರ್ಪೊರೆಟ್ ಕಂಪನಿಗಳಿಂದ, ಆ ಕಂಪನಿಗಳ ಅಮಾಯಕ ಷೇರುದಾರರಿಂದ ಮೌಲ್ಯದಿಂದ ಲೂಟಿ ಹೊಡೆಯಲು, ಕಪ್ಪುಹಣವನ್ನು ಬಿಳಿಹಣವಾಗಿ ಮಾರ್ಪಾಡಾಗಿಸಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮರಳಿ ತರಲು ರೌಂಡ್ ಟ್ರಿಪಿಂಗ್ ಮಾಡಲು ಮಾರಾಟ ಕಡಿಮೆ ತೋರಿಸುವುದು ಮುಂತಾದ ಕೃತ್ಯಗಳಿಗೆ ಎಡೆಮಾಡಿಕೊಟ್ಟಂತಾಯಿತು; ಇದು ಆಗಿದ್ದಕ್ಕೆ ಒಂದು ಮುಖ್ಯ ಕಾರಣ, ಆಯಾ ಕಂಪನಿಗಳ ಹಿಂದಿನ ಮೂರು ವರ್ಷಗಳಲ್ಲಿ ಸರಾಸರಿ ನಿವ್ವಳ ಲಾಭದಲ್ಲಿ 7.5% ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬೇಕೆಂಬ ನಿಯಮವನ್ನು ತೆಗೆದುಹಾಕಿದ್ದಕ್ಕೆ. ಇದರಿಂದ ನಿಜವಾಗಿ ಆಗಿದ್ದೇನೆಂದರೆ, ಆದಾಯದ ದಾಖಲೆಗಳಲ್ಲಿ ವಿಂಡೋ ಡ್ರೆಸಿಂಗ್ (ತೆರಿಗೆ ಉಳಿಸಲು ತಮ್ಮ ಬ್ಯಾಲೆನ್ಸ್ ಶೀಟ್‌ಅನ್ನು ತಿರುಚುವುದು) ಮಾಡುವುದರಲ್ಲಿ ನಿರತವಾಗುವುದು ಹೆಚ್ಚಿತು ಹಾಗೂ ರಾಜಕೀಯ ಪಕ್ಷಗಳಿಗೆ ಎಲ್ಲೆ ಇಲ್ಲದೇ ದೇಣಿಗೆ ನೀಡುವ ಹೆಸರಿನಲ್ಲಿ ಬ್ಯಾಲೆನ್ಸ್ ಶೀಟ್‌ಗಳಿಂದ ಹಣವನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಶುರುವಾಯಿತು. ಈ ತಿದ್ದುಪಡಿಯ ಪರಿಣಾಮವಾಗಿ ಶೆಲ್ ಕಂಪನಿಗಳಲ್ಲಿ ಹಣ ತೊಡಗಿಸಲೆಂದೇ ಇನ್ನೊಂದು ಶೆಲ್ ಕಂಪನಿಯನ್ನು ಸೃಷ್ಟಿಸಿ, ಆಡಳಿತಾರೂಢ ರಾಜಕೀಯ ಪಕ್ಷಗಳಿಗೆ ಯಾವುದೇ ನಿಯಂತ್ರಣವಿಲ್ಲದೇ, ಮುಂಚೆ ಇದ್ದ ಒಟ್ಟಾರೆ ಲಾಭದ 7.5%ನ ಮಿತಿಯ ನಿಯಂತ್ರಣವಿಲ್ಲದೇ ಲಂಚ ನೀಡಲು ದಾರಿ ಮಾಡಿಕೊಟ್ಟಂತಾಯಿತು.

ನಂತರ 2018ರಲ್ಲಿ ಇಂತಹ ಕಾನೂನುಬಾಹಿರವಾಗಿ ಹಣವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಲು (ಸಕ್ರಮಗೊಳಿಸಲು) ’ಚುನಾವಣಾ ಬಾಂಡ್‌ಗಳ ವ್ಯವಸ್ಥೆ’ಯನ್ನು ಪರಿಚಯಿಸಲಾಯಿತು. 2017ರ ಫೆಬ್ರುವರಿ 1ರಂದು ಒಕ್ಕೂಟ ಬಜೆಟ್ ಭಾಷಣದಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿಯು ಅತ್ಯಂತ ವ್ಯಂಗ್ಯವಾಗಿ ಹೇಳಿದ್ದೇನೆಂದರೆ, ಭಾರತದಲ್ಲಿ ರಾಜಕೀಯ ದೇಣಿಗೆ ನೀಡುವ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಈ ಕ್ರಮ ತರಲಾಗುತ್ತಿದೆ ಎಂದರು. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಿಕತೆ ಮತ್ತು ಹೊಣೆಗಾರಿಕೆಯನ್ನು ತರಲು ಈ ಚುನಾವಣಾ ಬಾಂಡ್ ಯೋಜನೆಯನ್ನು ತರಲಾಗಿದ್ದರೂ, ಈ ಯೋಜನೆಯ ವಿನ್ಯಾಸವು ತನ್ನ ಗುರಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟ.

ಚುನಾವಣಾ ಬಾಂಡ್‌ನ ಯೋಜನೆಯ ವಿನ್ಯಾಸದಲ್ಲಿ ಇರುವ ಅತ್ಯಂತ ಗಮನಾರ್ಹ ಲಕ್ಷಣವೆಂದರೆ 1000 ರೂಪಾಯಿಗಳಿಂದ 1 ಕೋಟಿ ರೂಪಾಯಿಗಳವರೆಗಿನ ಮೌಲ್ಯದಲ್ಲಿ ಬೀಯರರ್ ಇನ್‌ಸ್ಟ್ರುಮೆಂಟ್‌ನ್ನು ನೀಡುವ ಸ್ವರೂಪ; ಅದು ಪಾರದರ್ಶಿಕತೆ ಮತ್ತು ಹೊಣೆಗಾರಿಕೆಯ ನಿಟ್ಟಿನಲ್ಲಿ ಅತ್ಯಂತ ಗಂಭೀರವಾದ ಸಂಶಯಗಳನ್ನು ಸೃಷ್ಟಿಸುತ್ತದೆ. (ಬೀಯರರ್ ಇನ್‌ಸ್ಟ್ರುಮೆಂಟ್- ಆ ಇನ್‌ಸ್ಟ್ರುಮೆಂಟ್‌ಅನ್ನು ಹೊಂದಿರುವರಿಗೆ ಅದರ ಮೌಲ್ಯವು ಅನಾಮಧೇಯವಾಗಿ ಸಲ್ಲುತ್ತದೆ. ಅದು ಅದರ ಮೇಲೆ ದುಡ್ಡು ಕೊಟ್ಟಿದ್ದವರ ಅಥವಾ ಸ್ವೀಕರಿಸಿದ್ದವರ ಹೆಸರು ಇರುವುದಿಲ್ಲ.) ಅಂದರೆ ಈ ಪ್ರಕ್ರಿಯೆಗೂ ಮತ್ತು ಒಂದು ಪಕ್ಷಕ್ಕೆ ನಗದು ರೂಪದಲ್ಲಿ ಹಣ ಕೊಡುವುದಕ್ಕೂ ವ್ಯತ್ಯಾಸವಿಲ್ಲ. ಏಕೆಂದರೆ ನಗದು ಹಣವೂ ಬೀಯರರ್ ಇನ್‌ಸ್ಟ್ರುಮೆಂಟ್ ಆಗಿದೆ. ಆದರೆ ಹಣವನ್ನು ನಗದು ರೂಪದಲ್ಲಿ ನೀಡಲು ಗರಿಷ್ಠ 2000/- ರೂಪಾಯಿಯ ಮಿತಿ ಇದೆ. ಆದರೆ ಚುನಾವಣಾ ಬಾಂಡ್‌ಗಳ ಗರಿಷ್ಠ ಮಿತಿ 1 ಕೋಟಿ ರೂಪಾಯಿ. ನಗದು ಹಣ ಮತ್ತು ಚುನಾವಣಾ ಬಾಂಡ್‌ನಲ್ಲಿ ಇರುವ ಅನಾಮಧೇಯತೆಯ ಸ್ವರೂಪದಿಂದ ರಾಜಕೀಯ ಪಕ್ಷಗಳಿಗೆ ಅದರಲ್ಲೂ ಆಡಳಿತಾರೂಢ ಪಕ್ಷಗಳಿಗೆ ಲಂಚ ನೀಡುವುದು ಅತ್ಯಂತ ಸುಲಭವಾಗಿದೆ. ಈಗ ಚುನಾವಣಾ ಬಾಂಡ್ ಇಲ್ಲದೇ ಇರುವ ಸನ್ನಿವೇಶ ಕಲ್ಪಿಸಿಕೊಳ್ಳಿ; ಒಬ್ಬ ವ್ಯಕ್ತಿಯೋ ಅಥವಾ ಕಾರ್ಪೊರೆಟ್ ಕಂಪನಿಯೋ ಒಂದು ರಾಜಕೀಯ ಪಕ್ಷಕ್ಕೆ ನೂರು ಕೋಟಿ ರೂಪಾಯಿಯ ಲಂಚ ಕೊಡಬೇಕಾದರೆ, ಆಗ ಅವರು ಲಭ್ಯವಿರುವ 2000ದ ಅಥವಾ 500ರ ಅತ್ಯಂತ ದೊಡ್ಡ ಸಂಖ್ಯೆಯ ನೋಟುಗಳನ್ನು ಏರ್ಪಾಡು ಮಾಡಿ, ಅವುಗಳನ್ನು ಸೂಟ್‌ಕೇಸ್‌ನಲ್ಲಿ ಭದ್ರಗೊಳಿಸಿ ತಲುಪಿಸಬೇಕಾಗಬಹುದು; ಅದು ಸ್ವಾಭಾವಿಕವಾಗಿ ಅಪಾಯಕಾರಿ ನಡೆ. ಆದರೆ, ಮೋದಿ ಸರಕಾರ ತಂದ ಚುನಾವಣಾ ಬಾಂಡ್‌ಗಳು ಬಂದನಂತರ ಒಂದು ಪುಟ್ಟ ಚೀಲದಲ್ಲಿ 1 ಕೋಟಿಯ ಮೌಲ್ಯದ ನೂರು ಚುನಾವಣಾ ಬಾಂಡ್‌ಗಳನ್ನು ತೆಗೆದುಕೊಂಡು ಹೋದರೆ 100 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸುಲಭವಾಗಿ ತಲುಪಿಸಬಹುದು. ಬಾಂಡ್ ನೀಡಿದವರ ಹೆಸರು ಇರುವುದಿಲ್ಲವಾದ್ದರಿಂದ ಅವನ್ನು ಅನಾಮಧೇಯವಾಗಿ ರಾಜಕೀಯ ಪಕ್ಷಗಳು ನಗದು ಮಾಡಿಕೊಳ್ಳಬಹುದು.

2018ರ ಜನವರಿ 2ರಂದು ಭಾರತ ಸರಕಾರದ ಬಜೆಟ್ ಡಿವಿಷನ್ ಆಫ್ ಮಿನಿಸ್ಟ್ರಿ ಆಫ್ ಫೈನಾನ್ಸ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ಪ್ರಕಾರ, “ಚುನಾವಣಾ ಬಾಂಡ್‌ಗಳಿಗೆ ಕೇವಲ 15 ದಿನಗಳ ಅವಧಿ ಇದ್ದು, ಆ ಅವಧಿಯಲ್ಲಿ ಅದನ್ನು ರೆಪ್ರಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್, 1951ರ (1951ರ 43ನೇ) ಸೆಕ್ಷನ್ 29ಎ ಅಡಿಯಲ್ಲಿ ನೋಂದಾಯಿಸಲಾದ ಹಾಗೂ ಲೋಕಸಭೆ ಅಥವಾ ವಿಧಾನಸಭೆಗೆ ನಡೆದ ಕಳೆದ ಚುನಾವಣೆಯಲ್ಲಿ ಒಟ್ಟು ಮತದಾನದ 1% ಗಿಂತಲೂ ಕಡಿಮೆ ಮತ ಪಡೆಯದೇ ಇದ್ದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸಬಹುದಾಗಿದೆ”. ಇದರರ್ಥ ಬಿಜೆಪಿ, ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಜೆಡಿಎಸ್ ಮುಂತಾದ ದೊಡ್ಡ ಪಕ್ಷಗಳು ಮಾತ್ರ ದೇಣಿಗೆ ಪಡೆಯಲು ಅರ್ಹರಾಗಿರುತ್ತವೆ ಹಾಗೂ ಇದರಿಂದ ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅವರನ್ನು ಪ್ರತಿನಿಧಿಸುವ ಪರ್ಯಾಯ, ಹೊಸ ಪಕ್ಷಗಳು ಈ ಬಾಂಡ್‌ಗಳ ಲಾಭ ಪಡೆಯದೇ ಅವುಗಳು ಬೆಳೆಯುವ ಸಾಧ್ಯತೆಗಳನ್ನು ತಡೆದಂತಾಗುತ್ತದೆ.

ಇನ್ನೊಂದು ವಿಷಯವೇನೆಂದರೆ, ಇಲ್ಲಿಯವರೆಗೆ ಆದ ಒಟ್ಟಾರೆ ಚುನಾವಣಾ ಬಾಂಡ್‌ಗಳಲ್ಲಿ 75% ಬಾಂಡ್‌ಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಜೆಪಿ ಪಕ್ಷಕ್ಕೇ ಹೋಗಿವೆ. ಮೋದಿ ಸರಕಾರದ ’ನಾ ಖಾವೂಂಗಾ, ನಾ ಖಾನೆದೂಂಗಾ’ (ತಿನ್ನಲ್ಲ, ತಿನ್ನಕ್ಕೆ ಬಿಡುವುದಿಲ್ಲ) ಎಂಬ ಘೋಷಣೆ, ಚುನಾವಣಾ ಬಾಂಡ್ ಪರಿಚಯಿಸುವ ಮತ್ತು ಕಂಪನಿಗಳ ರಾಜಕೀಯ ದೇಣಿಗೆಗೆ ಇದ್ದ 7.5% ಮಿತಿಯನ್ನು ತೆಗೆದುಹಾಕುವ ಕ್ರಮಗಳಿಗೆ ಹೊಂದಾಣಿಕೆಯಾಗುವುದಿಲ್ಲ. ಈ ಕ್ರಮಗಳು ಸೂಚಿಸುತ್ತಿರುವುದು ಸ್ಪಷ್ಟವಾಗಿದೆ – ಖಾವೂಂಗಾ, ಖಾನೆದೂಂಗಾ, ಕಾನೂನ್‌ಕೆ ಆಧಾರ್‌ಪೆ’ (ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆ”.

ಆದರ್ಶ ಐಯ್ಯರ್

ಆದರ್ಶ ಐಯ್ಯರ್
ಸಹ ಅಧ್ಯಕ್ಷರು, ಜನಾಧಿಕಾರ ಸಂಘರ್ಷ ಪರಿಷತ್ತು (ಜೆಸ್‌ಪಿ)


ಇದನ್ನೂ ಓದಿ: ಚುನಾವಣಾ ಬಾಂಡ್‌‌ ಪ್ರಕರಣದ ವಿಚಾರಣೆಗೆ ಒಪ್ಪಿಕೊಂಡ ಸುಪ್ರೀಂಕೋರ್ಟ್‌; ಏನಿದು ಚುನಾವಣಾ ಬಾಂಡ್‌?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ: ವರ್ಷದಲ್ಲಿ 1,000 ಆರ್‌ಎಸ್‌ಎಸ್‌ ಶಾಲೆ: ಶಿಕ್ಷಣ ವ್ಯವಸ್ಥೆಯನ್ನೇ ‘ರಾಷ್ಟ್ರೀಯತಾವಾದಿ’ಗೊಳಿಸುವುದಾಗಿ ಘೋಷಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶೈಕ್ಷಣಿಕ ವಿಭಾಗವಾಗಿರುವ ವಿದ್ಯಾ ಭಾರತಿಯ ಶಾಲೆಗಳ ಸಂಖ್ಯೆಯನ್ನು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ...

SIR ನ್ಯಾಯಸಮ್ಮತವಾಗಿಲ್ಲ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಆತಂಕ

ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ...

ಜಂತರ್ ಮಂತರ್ ಹಲ್ಲೆ: ‘ತಲೆಬುರುಡೆ ಒಡೆದೆ, ಜೈಲಿಗೆ ಹೋಗಲಿಲ್ಲ; ಕಪಿಲ್ ಮಿಶ್ರಾ ನನ್ನ ಅಣ್ಣ’: ಬಿಜೆಪಿ ಬೆಂಬಲದ ಬಗ್ಗೆ ದಾಳಿ ಆರೋಪಿ ಬಹಿರಂಗ ಹೇಳಿಕೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರಿಯ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಪ್ರಕರಣದ ಆರೋಪಿಯಾಗಿರುವ ಸ್ವತಃ ಬಲಪಂಥೀಯ ಹಾಗೂ ಹಿಂದೂತ್ವ ಕಾರ್ಯಕರ್ತ...

ದೆಹಲಿ: ‘ಖಾನ್’ ಎಂಬ ಹೆಸರಿನ ಕಾರಣಕ್ಕೆ ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ, FIR ದಾಖಲಿಸುವಂತೆ ಸಾಕೇತ್ ಠಾಣೆಯಲ್ಲಿ ಧರಣಿ

ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ '4PM ನ್ಯೂಸ್ ನೆಟ್‌ವರ್ಕ್'ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ...

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...

ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯತ್ವ ರದ್ದಾಗುತ್ತಾ? ರಾಜಭವನದ ಮೌನಕ್ಕೆ ಮೂಡಿದ ಅನುಮಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ತನಿಖಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ...

‘ಜಿಡಿಪಿ ಬಿಟ್ಟು ನಿಮ್ಮ ಮುಖದ ಸೌಂದರ್ಯದ ರಹಸ್ಯ ತಿಳಿಸಿ..’; ಪ್ರಧಾನಿ ಮೋದಿ ಕಾಲೆಳೆದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಇತ್ತೀಚೆಗೆ ಬಿಡುಗಡೆಯಾದ ಭಾರತದ ತ್ರೈಮಾಸಿಕ ಜಿಡಿಪಿ ಅಂಕಿಅಂಶಗಳ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ. 2026-27ರ ಹಣಕಾಸು ವರ್ಷದ ಮೊದಲ...

ರಾಜಕೀಯ ಪಕ್ಷಗಳ ಬಿಎಲ್‌ಎಗಳು ಎಸ್‌ಐಆರ್‌ನ ಎಲ್ಲ ಮಾಹಿತಿಗಳನ್ನೂ ಪರಿಶೀಲಿಸಲು ಜವಾಬ್ದಾರರಲ್ಲ : ದೆಹಲಿ ಹೈಕೋರ್ಟ್

ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಎಣಿಕೆ ನಮೂನೆಗಳಲ್ಲಿರುವ (ಎನ್ಯುಮರೇಷನ್ ಫಾರಂ) ಎಲ್ಲ ವಿವರಗಳನ್ನು ಪರಿಶೀಲಿಸಲು ಜವಾಬ್ದಾರರಲ್ಲ ಎಂದು ದೆಹಲಿ ಹೈಕೋರ್ಟ್...