Homeಮುಖಪುಟಚುನಾವಣಾ ಬಾಂಡ್ ಯೋಜನೆ; ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆಯೇ!

ಚುನಾವಣಾ ಬಾಂಡ್ ಯೋಜನೆ; ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆಯೇ!

- Advertisement -
- Advertisement -

ಆಡಳಿತ ನಡೆಸುವವರು ಮತ್ತು ವ್ಯಾಪಾರಿ ವರ್ಗದ ನಡುವೆ ಇರುವ ಸಹಕಾರ, ಸಹಯೋಗ, ಸಮನ್ವಯ ಹಾಗೂ ಅದರೊಂದಿಗೆ ನಡೆಯುವ ರಹಸ್ಯ ಒಪ್ಪಂದಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇಂತಹ ಏರ್ಪಾಡುಗಳು ಅತ್ಯಂತ ಅನೌಪಚಾರಿಕವಾಗಿರುತ್ತವೆ ಹಾಗೂ ಕಾನೂನಿನ ಪರಿಭಾಷೆಯೊಳಗೆ ಬರದಂತಹ ಏರ್ಪಾಡುಗಳಾಗಿರುತ್ತವೆ ಹಾಗೂ ಇಂತಹ ಏರ್ಪಾಡುಗಳಾಗಿವೆ ಅಥವಾ ಅಂತಹ ಸಾಧ್ಯತೆಗಳಿವೆ ಎನ್ನುವ ಸಮಯದಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳಿರುತ್ತವೆ. ಈ ಮುನ್ನ ಯಾವುದೇ ಉದ್ದಿಮೆ ಅಥವಾ ವ್ಯಾವಹಾರಿಕ ಸಂಸ್ಥೆ ತನ್ನ ಆಡಳಿತ ಹಾಗೂ ನೀತಿಗಳಲ್ಲಿ ಸರ್ಕಾರವನ್ನು ದೊಡ್ಡ ಮಟ್ಟದಲ್ಲಿ ಪ್ರಭಾವಿಸದಂತೆ ತಡೆಯೊಡ್ಡಲು ಹೆಚ್ಚು ಕಟ್ಟುನಿಟ್ಟಾದ ನಿಯಂತ್ರಣ ಮತ್ತು ನಿರ್ಬಂಧನೆಗಳನ್ನು ಹೇರಲಾಗಿತ್ತು. ಉದಾಹರಣೆಗೆ, ರಾಜಕೀಯ ಪಕ್ಷಗಳಿಗೆ ಯಾವುದೇ ಕಂಪನಿಯು ದೇಣಿಗೆ ನೀಡಬೇಕೆಂದಿದ್ದರೆ ಅವುಗಳು ತಮ್ಮ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಆದ ಸರಾಸರಿ ನಿವ್ವಳ ಲಾಭದಲ್ಲಿ ಗರಿಷ್ಠ 7.5% ಮಾತ್ರ ನೀಡಬಹುದಾಗಿತ್ತು.

ಆದರೆ, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ವಿಷಯದಲ್ಲಿ ಪಾರದರ್ಶಿಕತೆಯನ್ನು ತರುವ ನೆಪದಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲಾಯನ್ಸ್ (ಎನ್‌ಡಿಎ) ಸರಕಾರವು ಮೋದಿಯ ನೇತೃತ್ವದಲ್ಲಿ ಈ ನಿಯಂತ್ರಣ ಕಾನೂನು ಮತ್ತು ನೀತಿಗಳಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿತು. ಅದರಿಂದ ಆಗಿದ್ದೇನೆಂದರೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಟ್ಟಾರೆ ಪ್ರಕ್ರಿಯೆಯು ಇನ್ನಷ್ಟು ಅಪಾರದರ್ಶಕವಾಯಿತು. ವಿರೋಧ ಪಕ್ಷಗಳ ಮೇಲೆ ಅನಧಿಕೃತ ನಿಯಂತ್ರಣಕ್ಕೆ ಮತ್ತು ಅವುಗಳನ್ನು ಮ್ಯಾನಿಪುಲೇಟ್ ಮಾಡುವುದಕ್ಕೆ ಎಡೆಮಾಡಿಕೊಟ್ಟಿತು, ಅಷ್ಟೇ ಅಲ್ಲದೇ, ದಾನಿಗಳ ಮೇಲೆಯೂ ನಿಯಂತ್ರಣ ಸಾಧಿಸಿದಂತಾಯಿತು ಹಾಗೂ ಶೆಲ್ ಕಂಪನಿಗಳ ಮೂಲಕ ಮನಿ ಲಾಂಡರಿಂಗ್‌ನ ಕೆಲಸವನ್ನು ಕಾನೂನುಬದ್ಧಗೊಳಿಸಿದಂತಾಯಿತು.

2018ರಲ್ಲಿ ಚುನಾವಣಾ ಬಾಂಡ್‌ಗಳನ್ನು ತರುವುದಕ್ಕೆ ಮುನ್ನ ಮೋದಿ ಸರಕಾರವು 2017ರಲ್ಲಿ ಕಂಪನೀಸ್ ಆಕ್ಟ್‌ಗೆ ತಿದ್ದುಪಡಿ ತಂದಿತು. ಅದರಿಂದ ಆಗಿದ್ದು, ರಾಜಕೀಯದಲ್ಲಿನ ಮತ್ತು ಕಾರ್ಪೊರೆಟ್ ಜಗತ್ತಿನ ನೀತಿಬಾಹಿರ ಶಕ್ತಿಗಳೆಲ್ಲವೂ ಒಂದೆಡೆ ಬಂದು, ಕಾನೂನುಬದ್ಧವಾಗಿರುವ ಒಂದು ರೀತಿಯ ಅಪವಿತ್ರ ಮೈತ್ರಿಯನ್ನು ರಚಿಸಿಕೊಳ್ಳಲು ಅನುವು ಮಾಡಿಕೊಟ್ಟಿತು; ಆಗ ಕಾರ್ಪೊರೆಟ್ ಕಂಪನಿಗಳಿಂದ, ಆ ಕಂಪನಿಗಳ ಅಮಾಯಕ ಷೇರುದಾರರಿಂದ ಮೌಲ್ಯದಿಂದ ಲೂಟಿ ಹೊಡೆಯಲು, ಕಪ್ಪುಹಣವನ್ನು ಬಿಳಿಹಣವಾಗಿ ಮಾರ್ಪಾಡಾಗಿಸಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮರಳಿ ತರಲು ರೌಂಡ್ ಟ್ರಿಪಿಂಗ್ ಮಾಡಲು ಮಾರಾಟ ಕಡಿಮೆ ತೋರಿಸುವುದು ಮುಂತಾದ ಕೃತ್ಯಗಳಿಗೆ ಎಡೆಮಾಡಿಕೊಟ್ಟಂತಾಯಿತು; ಇದು ಆಗಿದ್ದಕ್ಕೆ ಒಂದು ಮುಖ್ಯ ಕಾರಣ, ಆಯಾ ಕಂಪನಿಗಳ ಹಿಂದಿನ ಮೂರು ವರ್ಷಗಳಲ್ಲಿ ಸರಾಸರಿ ನಿವ್ವಳ ಲಾಭದಲ್ಲಿ 7.5% ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬೇಕೆಂಬ ನಿಯಮವನ್ನು ತೆಗೆದುಹಾಕಿದ್ದಕ್ಕೆ. ಇದರಿಂದ ನಿಜವಾಗಿ ಆಗಿದ್ದೇನೆಂದರೆ, ಆದಾಯದ ದಾಖಲೆಗಳಲ್ಲಿ ವಿಂಡೋ ಡ್ರೆಸಿಂಗ್ (ತೆರಿಗೆ ಉಳಿಸಲು ತಮ್ಮ ಬ್ಯಾಲೆನ್ಸ್ ಶೀಟ್‌ಅನ್ನು ತಿರುಚುವುದು) ಮಾಡುವುದರಲ್ಲಿ ನಿರತವಾಗುವುದು ಹೆಚ್ಚಿತು ಹಾಗೂ ರಾಜಕೀಯ ಪಕ್ಷಗಳಿಗೆ ಎಲ್ಲೆ ಇಲ್ಲದೇ ದೇಣಿಗೆ ನೀಡುವ ಹೆಸರಿನಲ್ಲಿ ಬ್ಯಾಲೆನ್ಸ್ ಶೀಟ್‌ಗಳಿಂದ ಹಣವನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಶುರುವಾಯಿತು. ಈ ತಿದ್ದುಪಡಿಯ ಪರಿಣಾಮವಾಗಿ ಶೆಲ್ ಕಂಪನಿಗಳಲ್ಲಿ ಹಣ ತೊಡಗಿಸಲೆಂದೇ ಇನ್ನೊಂದು ಶೆಲ್ ಕಂಪನಿಯನ್ನು ಸೃಷ್ಟಿಸಿ, ಆಡಳಿತಾರೂಢ ರಾಜಕೀಯ ಪಕ್ಷಗಳಿಗೆ ಯಾವುದೇ ನಿಯಂತ್ರಣವಿಲ್ಲದೇ, ಮುಂಚೆ ಇದ್ದ ಒಟ್ಟಾರೆ ಲಾಭದ 7.5%ನ ಮಿತಿಯ ನಿಯಂತ್ರಣವಿಲ್ಲದೇ ಲಂಚ ನೀಡಲು ದಾರಿ ಮಾಡಿಕೊಟ್ಟಂತಾಯಿತು.

ನಂತರ 2018ರಲ್ಲಿ ಇಂತಹ ಕಾನೂನುಬಾಹಿರವಾಗಿ ಹಣವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಲು (ಸಕ್ರಮಗೊಳಿಸಲು) ’ಚುನಾವಣಾ ಬಾಂಡ್‌ಗಳ ವ್ಯವಸ್ಥೆ’ಯನ್ನು ಪರಿಚಯಿಸಲಾಯಿತು. 2017ರ ಫೆಬ್ರುವರಿ 1ರಂದು ಒಕ್ಕೂಟ ಬಜೆಟ್ ಭಾಷಣದಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿಯು ಅತ್ಯಂತ ವ್ಯಂಗ್ಯವಾಗಿ ಹೇಳಿದ್ದೇನೆಂದರೆ, ಭಾರತದಲ್ಲಿ ರಾಜಕೀಯ ದೇಣಿಗೆ ನೀಡುವ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಈ ಕ್ರಮ ತರಲಾಗುತ್ತಿದೆ ಎಂದರು. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಿಕತೆ ಮತ್ತು ಹೊಣೆಗಾರಿಕೆಯನ್ನು ತರಲು ಈ ಚುನಾವಣಾ ಬಾಂಡ್ ಯೋಜನೆಯನ್ನು ತರಲಾಗಿದ್ದರೂ, ಈ ಯೋಜನೆಯ ವಿನ್ಯಾಸವು ತನ್ನ ಗುರಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟ.

ಚುನಾವಣಾ ಬಾಂಡ್‌ನ ಯೋಜನೆಯ ವಿನ್ಯಾಸದಲ್ಲಿ ಇರುವ ಅತ್ಯಂತ ಗಮನಾರ್ಹ ಲಕ್ಷಣವೆಂದರೆ 1000 ರೂಪಾಯಿಗಳಿಂದ 1 ಕೋಟಿ ರೂಪಾಯಿಗಳವರೆಗಿನ ಮೌಲ್ಯದಲ್ಲಿ ಬೀಯರರ್ ಇನ್‌ಸ್ಟ್ರುಮೆಂಟ್‌ನ್ನು ನೀಡುವ ಸ್ವರೂಪ; ಅದು ಪಾರದರ್ಶಿಕತೆ ಮತ್ತು ಹೊಣೆಗಾರಿಕೆಯ ನಿಟ್ಟಿನಲ್ಲಿ ಅತ್ಯಂತ ಗಂಭೀರವಾದ ಸಂಶಯಗಳನ್ನು ಸೃಷ್ಟಿಸುತ್ತದೆ. (ಬೀಯರರ್ ಇನ್‌ಸ್ಟ್ರುಮೆಂಟ್- ಆ ಇನ್‌ಸ್ಟ್ರುಮೆಂಟ್‌ಅನ್ನು ಹೊಂದಿರುವರಿಗೆ ಅದರ ಮೌಲ್ಯವು ಅನಾಮಧೇಯವಾಗಿ ಸಲ್ಲುತ್ತದೆ. ಅದು ಅದರ ಮೇಲೆ ದುಡ್ಡು ಕೊಟ್ಟಿದ್ದವರ ಅಥವಾ ಸ್ವೀಕರಿಸಿದ್ದವರ ಹೆಸರು ಇರುವುದಿಲ್ಲ.) ಅಂದರೆ ಈ ಪ್ರಕ್ರಿಯೆಗೂ ಮತ್ತು ಒಂದು ಪಕ್ಷಕ್ಕೆ ನಗದು ರೂಪದಲ್ಲಿ ಹಣ ಕೊಡುವುದಕ್ಕೂ ವ್ಯತ್ಯಾಸವಿಲ್ಲ. ಏಕೆಂದರೆ ನಗದು ಹಣವೂ ಬೀಯರರ್ ಇನ್‌ಸ್ಟ್ರುಮೆಂಟ್ ಆಗಿದೆ. ಆದರೆ ಹಣವನ್ನು ನಗದು ರೂಪದಲ್ಲಿ ನೀಡಲು ಗರಿಷ್ಠ 2000/- ರೂಪಾಯಿಯ ಮಿತಿ ಇದೆ. ಆದರೆ ಚುನಾವಣಾ ಬಾಂಡ್‌ಗಳ ಗರಿಷ್ಠ ಮಿತಿ 1 ಕೋಟಿ ರೂಪಾಯಿ. ನಗದು ಹಣ ಮತ್ತು ಚುನಾವಣಾ ಬಾಂಡ್‌ನಲ್ಲಿ ಇರುವ ಅನಾಮಧೇಯತೆಯ ಸ್ವರೂಪದಿಂದ ರಾಜಕೀಯ ಪಕ್ಷಗಳಿಗೆ ಅದರಲ್ಲೂ ಆಡಳಿತಾರೂಢ ಪಕ್ಷಗಳಿಗೆ ಲಂಚ ನೀಡುವುದು ಅತ್ಯಂತ ಸುಲಭವಾಗಿದೆ. ಈಗ ಚುನಾವಣಾ ಬಾಂಡ್ ಇಲ್ಲದೇ ಇರುವ ಸನ್ನಿವೇಶ ಕಲ್ಪಿಸಿಕೊಳ್ಳಿ; ಒಬ್ಬ ವ್ಯಕ್ತಿಯೋ ಅಥವಾ ಕಾರ್ಪೊರೆಟ್ ಕಂಪನಿಯೋ ಒಂದು ರಾಜಕೀಯ ಪಕ್ಷಕ್ಕೆ ನೂರು ಕೋಟಿ ರೂಪಾಯಿಯ ಲಂಚ ಕೊಡಬೇಕಾದರೆ, ಆಗ ಅವರು ಲಭ್ಯವಿರುವ 2000ದ ಅಥವಾ 500ರ ಅತ್ಯಂತ ದೊಡ್ಡ ಸಂಖ್ಯೆಯ ನೋಟುಗಳನ್ನು ಏರ್ಪಾಡು ಮಾಡಿ, ಅವುಗಳನ್ನು ಸೂಟ್‌ಕೇಸ್‌ನಲ್ಲಿ ಭದ್ರಗೊಳಿಸಿ ತಲುಪಿಸಬೇಕಾಗಬಹುದು; ಅದು ಸ್ವಾಭಾವಿಕವಾಗಿ ಅಪಾಯಕಾರಿ ನಡೆ. ಆದರೆ, ಮೋದಿ ಸರಕಾರ ತಂದ ಚುನಾವಣಾ ಬಾಂಡ್‌ಗಳು ಬಂದನಂತರ ಒಂದು ಪುಟ್ಟ ಚೀಲದಲ್ಲಿ 1 ಕೋಟಿಯ ಮೌಲ್ಯದ ನೂರು ಚುನಾವಣಾ ಬಾಂಡ್‌ಗಳನ್ನು ತೆಗೆದುಕೊಂಡು ಹೋದರೆ 100 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸುಲಭವಾಗಿ ತಲುಪಿಸಬಹುದು. ಬಾಂಡ್ ನೀಡಿದವರ ಹೆಸರು ಇರುವುದಿಲ್ಲವಾದ್ದರಿಂದ ಅವನ್ನು ಅನಾಮಧೇಯವಾಗಿ ರಾಜಕೀಯ ಪಕ್ಷಗಳು ನಗದು ಮಾಡಿಕೊಳ್ಳಬಹುದು.

2018ರ ಜನವರಿ 2ರಂದು ಭಾರತ ಸರಕಾರದ ಬಜೆಟ್ ಡಿವಿಷನ್ ಆಫ್ ಮಿನಿಸ್ಟ್ರಿ ಆಫ್ ಫೈನಾನ್ಸ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ಪ್ರಕಾರ, “ಚುನಾವಣಾ ಬಾಂಡ್‌ಗಳಿಗೆ ಕೇವಲ 15 ದಿನಗಳ ಅವಧಿ ಇದ್ದು, ಆ ಅವಧಿಯಲ್ಲಿ ಅದನ್ನು ರೆಪ್ರಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್, 1951ರ (1951ರ 43ನೇ) ಸೆಕ್ಷನ್ 29ಎ ಅಡಿಯಲ್ಲಿ ನೋಂದಾಯಿಸಲಾದ ಹಾಗೂ ಲೋಕಸಭೆ ಅಥವಾ ವಿಧಾನಸಭೆಗೆ ನಡೆದ ಕಳೆದ ಚುನಾವಣೆಯಲ್ಲಿ ಒಟ್ಟು ಮತದಾನದ 1% ಗಿಂತಲೂ ಕಡಿಮೆ ಮತ ಪಡೆಯದೇ ಇದ್ದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸಬಹುದಾಗಿದೆ”. ಇದರರ್ಥ ಬಿಜೆಪಿ, ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಜೆಡಿಎಸ್ ಮುಂತಾದ ದೊಡ್ಡ ಪಕ್ಷಗಳು ಮಾತ್ರ ದೇಣಿಗೆ ಪಡೆಯಲು ಅರ್ಹರಾಗಿರುತ್ತವೆ ಹಾಗೂ ಇದರಿಂದ ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅವರನ್ನು ಪ್ರತಿನಿಧಿಸುವ ಪರ್ಯಾಯ, ಹೊಸ ಪಕ್ಷಗಳು ಈ ಬಾಂಡ್‌ಗಳ ಲಾಭ ಪಡೆಯದೇ ಅವುಗಳು ಬೆಳೆಯುವ ಸಾಧ್ಯತೆಗಳನ್ನು ತಡೆದಂತಾಗುತ್ತದೆ.

ಇನ್ನೊಂದು ವಿಷಯವೇನೆಂದರೆ, ಇಲ್ಲಿಯವರೆಗೆ ಆದ ಒಟ್ಟಾರೆ ಚುನಾವಣಾ ಬಾಂಡ್‌ಗಳಲ್ಲಿ 75% ಬಾಂಡ್‌ಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಜೆಪಿ ಪಕ್ಷಕ್ಕೇ ಹೋಗಿವೆ. ಮೋದಿ ಸರಕಾರದ ’ನಾ ಖಾವೂಂಗಾ, ನಾ ಖಾನೆದೂಂಗಾ’ (ತಿನ್ನಲ್ಲ, ತಿನ್ನಕ್ಕೆ ಬಿಡುವುದಿಲ್ಲ) ಎಂಬ ಘೋಷಣೆ, ಚುನಾವಣಾ ಬಾಂಡ್ ಪರಿಚಯಿಸುವ ಮತ್ತು ಕಂಪನಿಗಳ ರಾಜಕೀಯ ದೇಣಿಗೆಗೆ ಇದ್ದ 7.5% ಮಿತಿಯನ್ನು ತೆಗೆದುಹಾಕುವ ಕ್ರಮಗಳಿಗೆ ಹೊಂದಾಣಿಕೆಯಾಗುವುದಿಲ್ಲ. ಈ ಕ್ರಮಗಳು ಸೂಚಿಸುತ್ತಿರುವುದು ಸ್ಪಷ್ಟವಾಗಿದೆ – ಖಾವೂಂಗಾ, ಖಾನೆದೂಂಗಾ, ಕಾನೂನ್‌ಕೆ ಆಧಾರ್‌ಪೆ’ (ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆ”.

ಆದರ್ಶ ಐಯ್ಯರ್

ಆದರ್ಶ ಐಯ್ಯರ್
ಸಹ ಅಧ್ಯಕ್ಷರು, ಜನಾಧಿಕಾರ ಸಂಘರ್ಷ ಪರಿಷತ್ತು (ಜೆಸ್‌ಪಿ)


ಇದನ್ನೂ ಓದಿ: ಚುನಾವಣಾ ಬಾಂಡ್‌‌ ಪ್ರಕರಣದ ವಿಚಾರಣೆಗೆ ಒಪ್ಪಿಕೊಂಡ ಸುಪ್ರೀಂಕೋರ್ಟ್‌; ಏನಿದು ಚುನಾವಣಾ ಬಾಂಡ್‌?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...