ಚಾಮುಂಡಿ ಬೆಟ್ಟದಲ್ಲಿ ಕಳೆದ ಎಂಟು ವರ್ಷದಿಂದ ಆಚರಿಸಿಕೊಂಡು ಬರುತ್ತಿರುವ ಮಹಿಷಾ ದಸರಾಗೆ ಜಿಲ್ಲಾಡಳಿತ ಅನುಮತಿ ನಿಕರಿಸಿದ ಹಿನ್ನಲೆ, ಮೈಸೂರಿನ ಅಶೋಕಪುರಂನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಭಾನುವಾರ ಸಾಂಕೀತಿಕ ಮಹಿಷ ದಸರಾವನ್ನು ಆಚರಿಸಲಾಗಿದೆ.
ಜಿಲ್ಲಾಡಳಿತವು ಮಹಿಷಾ ದಸರಾಗೆ ಅನುಮತಿ ನಿರಾಕರಿಸಿರುವುದರಿಂದ ಚಾಮುಂಡಿ ಬೆಟ್ಟದಲ್ಲಿ ಇರುವ ಮಹಿಷಾ ಪ್ರತಿಮೆಗೆ ಬಟ್ಟೆಗಳಿಂದ ಸಂಪೂರ್ಣವಾಗಿ ಮುಚ್ಚಲಾಗಿದ್ದು, ಮೂರ್ತಿಯ ಸುತ್ತ ಬ್ಯಾರಿಕೇಟ್ ಇಟ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದರ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಹಿಷಾ ದಸರಾ ಆಯೋಜನಾ ಸಮಿತಿಯು ಕಳೆದ ಎಂಟು ವರ್ಷದಿಂದ ಮಹಿಷಾ ದಸರಾವನ್ನು ಆಚರಿಸುತ್ತಿದೆ. ಪೌರಾಣಿಕ ಕಥೆಗಳ ಪ್ರಕಾರ ರಾಕ್ಷಸನೆಂದು ಪರಿಗಣಿಸಲ್ಪಟ್ಟ ಮಹಿಷಾಸುರನನ್ನು ಚಾಮುಂಡೇಶ್ವರಿ ದೇವಿಯು ವಧೆ ಮಾಡುತ್ತಾಳೆ. ಆದರೆ ಮಹಿಷಾ ದಸರಾ ಆಯೋಜನಾ ಸಮಿತಿಯು ಮಹಿಷಾಸುರ ರಾಕ್ಷಸನಲ್ಲ, ಆತ ರಕ್ಷಕನಾಗಿದ್ದು, ಮಹಿಷಾ ಮಂಡಲದ ಶ್ರೇಷ್ಠ ದೊರೆ ಎಂದು ಪ್ರತಿಪಾದಿಸುತ್ತದೆ. ಹತ್ತು ದಿನಗಳ ಕಾಲ ನಡೆಯುವ ವಾರ್ಷಿಕ ದಸರಾ ಉತ್ಸವ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಮಹಿಷ ದಸರಾವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಮಹಿಷಾಸುರ ಯಾರು? ಕೋಣನ ಬಲಿಯ ಮೇಲೆ ಮಹಿಷ ಮರ್ಧನ ಪುರಾಣದ ಹೇರಿಕೆಯೇ?
ಮಹಿಷ ದಸರಾ ಆಯೋಜನಾ ಸಮಿತಿಯ ಮುಖ್ಯಸ್ಥರಾದ ಮಾಜಿ ಮೇಯರ್ ಪುರುಷೋತ್ತಮ್, ಉರಿಳಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಖ್ಯಾತ ಸಾಹಿತಿ ಕೆ.ಎಸ್. ಭಗವಾನ್, ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ವಿ. ನಂಜರಾಜ್ ಅರಸ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮಹಿಷ ದಸರಾವನ್ನು ಆಚರಿಸಲಾಗಿದೆ.
“ಮಹಿಷಾಸುರ ದಯಾಪರ ಆಡಳಿತಗಾರನಾಗಿದ್ದು, ಮಾನವತಾವಾದಿಯಾಗಿದ್ದನು” ಎಂದು ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಇಚ್ಛೆಯ ದೇವರನ್ನು ಪೂಜಿಸುವ ಸಾಂವಿಧಾನಿಕ ಹಕ್ಕಿನಿಂದ ನಾವು ವಂಚಿತರಾಗಿದ್ದೇವೆ ಎಂದು ಅವರು ವಿಷಾದಿಸಿದ್ದಾರೆ.

ಮಹಿಷಾ ದಸರಾ ಸಮಾರಂಭದಲ್ಲಿ ಮಾತನಾಡಿದ ಪ್ರೊ.ನಂಜರಾಜ್ ಅರಸ್, “ಮಹಿಷ ದಸರಾಗೆ ಬಿಜೆಪಿ ಸರ್ಕಾರ ಅನುಮತಿ ನಿರಾಕರಿಸಿದೆ. ಗಣೇಶ ಪೆಂಡಾಲ್ಗಳಲ್ಲಿ ಪೂಜಿಸಲ್ಪಟ್ಟ ಸಾವರ್ಕರ್ ಮತ್ತು ನಾಥೂರಾಂ ಗೋಡ್ಸೆಯವರ ಭಾವಚಿತ್ರಗಳನ್ನು ಮೆರವಣಿಗೆ ಮಾಡಲಾಗಿದೆ. ಅವರಿಗಿಂತ ಮಹಿಷ ಕೆಟ್ಟವನಾ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಹಿಷಾಸುರ ತೋಡಾ ಬುಡಕಟ್ಟಿನವನೇ? ನಾಗ ಕುಲದವನೇ? ಬೌದ್ಧ ಅರಸನೇ?
ಮಹಿಷನಿಂದ ಮೈಸೂರಿಗೆ ಹೆಸರು ಬಂದಿದೆ ಎಂದು ವಾದಿಸಿದ ಪ್ರೊ. ಅರಸ್, “ಜಯಚಾಮಜೇಂದ್ರ ಒಡೆಯರ್ ಸೇರಿದಂತೆ ಮೈಸೂರಿನ ಹಿಂದಿನ ದೊರೆಗಳ ಲೆಟರ್ಹೆಡ್ಗಳ ಪ್ರತಿಗಳು ತಮ್ಮ ಬಳಿ ಇವೆ. ಮುಂದಿನ ವರ್ಷ ನೂತನ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಷ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವಂತಾಗಲಿ. ಯಾರೂ ಅಧಿಕಾರಕ್ಕೆ ಬರಲಿ. ಬಿಜೆಪಿ ಅಧಿಕಾರಕ್ಕೆ ಬರಬಾರದು” ಎಂದು ಅವರು ಹೇಳಿದ್ದಾರೆ.
ಮಹಿಷಾಸುರನ ಬಗ್ಗೆ ಮತ್ತಷ್ಟು ಓದಿಗೆ:
ಮಹಿಷಾಸುರ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ: ಡಾ.ಚಮರಂ
‘ಮಹಿಷಾ ದಸರಾ,’ ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್
ವರ್ತಮಾನದಲ್ಲಿ ಪುರಾಣಗಳನ್ನು ಶೋಧಿಸಿ ಮರುಕಟ್ಟುವ ಅಗತ್ಯ
ಬಲಿಯ ಆದರ್ಶ ರಾಜ್ಯ ಮತ್ತು ಅದನ್ನು ಕಸಿದುಕೊಂಡು ಕಟ್ಟಿದ ಪುರಾಣದ ಬಗ್ಗೆ ಜ್ಯೋತಿಬಾ ಫುಲೆ ಬರಹ
ಮೂಲನಿವಾಸಿಗಳ ’ಮಹಿಷ ದಸರಾ’ದ ಇತಿಹಾಸ- ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು



ಮನುವಾದಿಗಳು ಹೇಳಿದ ಪೌರಾಣಿಕ ಪಾತ್ರಗಳು ಮಾತ್ರ ದೇವರು. ಇಲ್ಲೂ ವಂಚನೆ ಇವರು ಹೇಳಿದ ದೇವರಿಗೆ ಮಾತ್ರ ಪೂಜೆ ಸಲ್ಲಿಸಬೇಕು! ಅಂಬೇಡ್ಕರ್ ವಾದಿ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಿ ರಾಜ್ಯದಾದ್ಯಂತ ಮಹಿಶ ದಸರಾ ನಡೆಯುವಂತೆ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು.