Homeಮುಖಪುಟಮೂಲನಿವಾಸಿಗಳ ’ಮಹಿಷ ದಸರಾ’ದ ಇತಿಹಾಸ- ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು

ಮೂಲನಿವಾಸಿಗಳ ’ಮಹಿಷ ದಸರಾ’ದ ಇತಿಹಾಸ- ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು

- Advertisement -
- Advertisement -

ಮೌರ್ಯರ ಕೊನೆಯ ದೊರೆ ಬೃಹದ್ರತನ ಸೇನೆಯ ಮುಖ್ಯಸ್ಥ ಪುಷ್ಯಮಿತ್ರಶುಂಗ ಅಮಾನುಷ ಸಂಚನ್ನು ರೂಪಿಸಿ ತನ್ನ ದೊರೆಯನ್ನು ಕೊಂದು ಅಸಮಾನತೆಯ ಸಂಕೇತವಾದ ಮನುಯುಗವನ್ನು ಆರಂಭಿಸುತ್ತಾನೆ. ಸುಮಿತ್ರಾ ಭಾರ್ಗವನೆಂಬ ವೈದಿಕಶಾಹಿಯ ಪ್ರವರ್ತಕ ‘ಮನುಸ್ಮೃತಿ’ ಎಂಬ ಸಮಾನತೆ ವಿರೋಧಿ ಧಾರ್ಮಿಕ ಕಟ್ಟುಪಾಡುಗಳನ್ನು ರೂಪಿಸಿದ್ದಾನೆ. ಮಹಿಳೆಯರು ಸ್ವತಂತ್ರರಲ್ಲ, ಶೂದ್ರರು ಹುಟ್ಟಿರುವುದೇ ಬ್ರಾಹ್ಮಣರ ಸೇವೆಗಾಗಿ, ಬ್ರಾಹ್ಮಣರು, ವೈಶ್ಯರು ಮತ್ತು ಕ್ಷತ್ರಿಯರು ಹುಟ್ಟಿರುವುದೇ ರಾಜ್ಯಾಡಳಿತ ನಡೆಸಲಿಕ್ಕಾಗಿ ಎಂಬ ಅವೈಜ್ಞಾನಿಕ ಹಾಗೂ ಅಮಾನವೀಯ ಚಿಂತನೆಗಳನ್ನು ಮೂಲನಿವಾಸಿಗಳ ಮೇಲೆ ಹೇರಿ ವೈದಿಕಶಾಹಿ ರೂಪುಗೊಳ್ಳಲು ಮನುವಾದಿಗಳು ಕಾರಣರಾದರು. ಇದನ್ನು ಅಂಬೇಡ್ಕರ್ ನಿಸರ್ಗ ಧರ್ಮ ಮತ್ತು ಮಾನವೀಯತೆಗಳಿಗೆ ವಿರುದ್ಧವಾದ ‘ಪ್ರತಿಕ್ರಾಂತಿ’ ಎಂಬುದಾಗಿ ಪ್ರತಿಪಾದಿಸಿದ್ದಾರೆ.

ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ಬೌದ್ಧವಾದಿ ಮತ್ತು ಮಹಾನ್ ಚಕ್ರವರ್ತಿ ಸಾಮ್ರಾಟ್ ಅಶೋಕನು ಮಹಾದೇವತೇರ ಎಂಬ ಬುದ್ಧನ ಅನುಯಾಯಿಯನ್ನು ದಕ್ಷಿಣ ಭಾರತಕ್ಕೆ ಬೌದ್ಧ ಧರ್ಮ ಪ್ರಚಾರ ಮತ್ತು ಮೌಲ್ಯಾಧಾರಿತ ಆಡಳಿತ ನೀಡುವ ಸಲುವಾಗಿ ಕಳುಹಿಸಿದನು. ಬೌದ್ಧ ಭಿಕ್ಕು ಮಹಾದೇವತೇರ ಅಂದು ಆಳಿದ ಮಹಿಷ ಮಂಡಲವೇ ಇಂದಿನ ಮೈಸೂರು ಎಂಬುದನ್ನು ಪ್ರಸಿದ್ಧ ಇತಿಹಾಸಕಾರ ಸೂರ್ಯನಾಥ ಕಾಮತ್ ಮೈಸೂರು ಗೆಜೆಟಿಯರ್‌ನಲ್ಲಿ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಮಂಡಿಸಿದ್ದಾರೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಷೂರು ಮೊದಲಾದ ಹೆಸರಿನಿಂದ ಮಹಿಷನ ಸಾಮ್ರಾಜ್ಯವು ಕರೆಯಲ್ಪಟ್ಟಿದೆ.

ಮಹಿಷೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿ ವಿಂದ್ಯಾಪರ್ವತದ ಮಹಿಸ್ಮೃತಿ ತಪ್ಪಲಿನವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಆಳಿದ ಮಹಿಷನನ್ನು ಈ ಭಾಗದ ಮೂಲನಿವಾಸಿಗಳು ಅತ್ಯಂತ ಪ್ರೀತಿ ಮತ್ತು ಧನ್ಯತೆಗಳಿಂದ ಸ್ಮರಿಸುತ್ತಾರೆ.

ಜಾಗತಿಕ ಇತಿಹಾಸ, ಬೌದ್ಧ ಇತಿಹಾಸ, ಮಹಿಷ ಮಂಡಲದ ಇತಿಹಾಸ ಮೊದಲಾದವುಗಳು ಆಂಗ್ಲಭಾಷೆ, ಪಾಳಿ ಭಾಷೆ ಮತ್ತಿತರ ಭಾಷೆಗಳಲ್ಲಿ ಯಥೇಚ್ಛವಾಗಿ ಲಭಿಸುತ್ತವೆ. ಮೌರ್ಯ ಚಕ್ರವರ್ತಿ ಬಿಂದುಸಾರನ ಕಾಲದಲ್ಲಿ ಮಹಿಷ ಮಂಡಲವು ಬಿಂದುಸಾರನ ಆಳ್ವಿಕೆಗೆ ಒಳಪಟ್ಟಿತ್ತೆಂಬುದನ್ನು ಬೌದ್ಧ ಗ್ರಂಥಗಳು ತಿಳಿಸುತ್ತವೆ. ಮಹಿಷನು ಸನಾತನ ಧರ್ಮ ಪ್ರತಿಪಾದಕರು ಹೇಳುವಂತೆ ರಾಕ್ಷಸನಲ್ಲ. ಮಹಿಷನು ಮಹಿಷ ಮಂಡಲದ ಮೂಲನಿವಾಸಿಗಳ ರಾಜ ಮತ್ತು ರಕ್ಷಕ. ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅನುಗುಣವಾಗಿ ರಾಜ್ಯಭಾರ ನಡೆಸಿ ಮಹಿಷ ಮಂಡಲವನ್ನು ಭಾರತದ ಕಲ್ಯಾಣ ರಾಜ್ಯವನ್ನಾಗಿ ರೂಪಿಸಿದ ಶ್ರೇಯಸ್ಸು ಮಹಿಷನಿಗೆ ಸಲ್ಲುತ್ತದೆ. ‘ಮಹಿಷನು ಇಂದ್ರಾದಿ ದೇವತೆಗಳಿಂದ ಮೂಲನಿವಾಸಿಗಳ ಮೇಲೆ ಜರುಗಿದ ಅನ್ಯಾಯಗಳ ವಿರುದ್ಧ ನಡೆಸಿದ ಯುದ್ಧದಲ್ಲಿ ಜಯಗಳಿಸಿದನು. ಒಂದು ಕಾಲದಲ್ಲಿ ಮೂಲನಿವಾಸಿಗಳ ದೊರೆಯಾದ ಮಹಿಷ ಯುದ್ಧದಲ್ಲಿ ದೇವತೆಗಳನ್ನು ಗೆದ್ದು ಅವರನ್ನು ಯಾವ ಅಧೋಗತಿಗೆ ಇಟ್ಟಿದ್ದನೆಂದರೆ ಅವರು ಭೂಮಿಯ ಮೇಲೆ ಭಿಕ್ಷುಕರಾಗಿ ಅಲೆದಾಡುತ್ತಿದ್ದರು’ (ಡಾ.ಬಿ.ಆರ್.ಅಂಬೇಡ್ಕರ್, ಸಂ.3, ಪು.395).

ಮಹಿಷನು ಇಂದ್ರಾದಿ ದೇವತೆಗಳ ವಿರುದ್ಧ ವೀರೋಚಿತವಾಗಿ ಹೋರಾಟ ನಡೆಸಿ ಜಯಗಳಿಸಿದ ಸಂತಸದ ಸುದ್ದಿ ದಶ ದಿಕ್ಕುಗಳಲ್ಲಿಯೂ ಹರಡಿದ ಹಿನ್ನೆಲೆಯಲ್ಲಿ ಮೂಲನಿವಾಸಿಗಳು ಮಹಿಷನ ವಿಜಯವನ್ನು ‘ದಸರಾ’ ಎಂಬ ಹೆಸರಿನಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ. ಬೌದ್ಧ ಇತಿಹಾಸದಲ್ಲಿ ಈ ಸಂಭ್ರಮವನ್ನು ‘ವಿಜಯದಶಮಿ’ ಎಂದು ದಾಖಲಿಸಲಾಗಿದೆ. ಪಿತೃಪಕ್ಷವೆಂಬುದು ಪೂರ್ವಜನರನ್ನು ಪ್ರೀತಿ ಮತ್ತು ಕೃತಜ್ಞತೆಗಳಿಂದ ಸ್ಮರಿಸಿ ಬಂಧುಗಳಿಗೆ ಅನ್ನದಾಸೋಹ ನಡೆಸುವ ಮಾನವೀಯ ಪರಂಪರೆಯನ್ನು ಮಹಿಷನು ರೂಪಿಸಿದನು. ಈ ಪರಂಪರೆ ಇಂದಿಗೂ ಕೂಡ ಮೈಸೂರು ನಗರದ ವಿವಿಧ ಭಾಗಗಳಲ್ಲಿ ಎಲ್ಲ ಜನಾಂಗಗಳಲ್ಲಿಯೂ ಆಚರಣೆಯಲ್ಲಿದೆ.

ಚಾಮುಂಡಿ ಎಂಬ ಹೆಸರು ಬೌದ್ಧ ಇತಿಹಾಸ, ಭಾರತೀಯ ಇತಿಹಾಸ ಮತ್ತು ಮಹಿಷ ಮಂಡಲದ ಇತಿಹಾಸಗಳಲ್ಲಿ ದಾಖಲಾಗಿಲ್ಲ. ಚಾಮುಂಡಿ ಎಂಬುದು ಮಿಥ್ಯೆ, ಸತ್ಯವಲ್ಲ. ಮಹಿಷನನ್ನು ದುಷ್ಟನೆಂದು ವೈದಿಕರು ಪ್ರತಿಬಿಂಬಿಸಿ ಆತನನ್ನು ಚಾಮುಂಡಿ ವಧಿಸಿ ಪ್ರಜೆಗಳನ್ನು ರಕ್ಷಿಸಿದಳು ಎಂಬುದು ಆಧಾರ ರಹಿತವಾದ ಕಟ್ಟುಕಥೆ. ‘ಮಹಿಷ ದುಷ್ಟನಲ್ಲ, ಚಾಮುಂಡಿ ದುಷ್ಟ ಶಿಕ್ಷಕಿಯಲ್ಲ’ ಎಂಬ ಸತ್ಯಸಂದೇಶವನ್ನು ಮೂಲನಿವಾಸಿಗಳಿಗೆ ರವಾನಿಸಿ ಕಳೆದು ಹೋದ ಚರಿತ್ರೆಯನ್ನು ಪುನಾರೂಪಿಸುವ ಸಲುವಾಗಿ ‘ಮೂಲ ನಿವಾಸಿಗಳಿಂದ ಮಹಿಷ ದಸರಾ’ ಆಚರಿಸಲಾಗುತ್ತಿದೆಯೇ ವಿನಹ ಯಾವ ಧರ್ಮಕ್ಕೆ ಅಥವಾ ಜನಾಂಗಕ್ಕೆ ಅವಹೇಳನ ಮಾಡುವ ಉದ್ದೇಶದಿಂದಲ್ಲ.

ಯದುವಂಶದ ಅರಸರು ನೂರಾರು ವರ್ಷಗಳಿಂದ ಆಚರಿಸುತ್ತಿರುವ ‘ದಸರಾ ಉತ್ಸವ’ದಲ್ಲಿ ಚಾಮುಂಡಿ ಕೇಂದ್ರ ಬಿಂದುವಲ್ಲ. ಇಂದಿಗೂ ಕೂಡ ಯದುವಂಶದ ಅರಸರು ದಸರಾ, ಹಬ್ಬ, ಪೂಜೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ‘ಮಹಿಷ ಮಂಡಲದ ಮಹಾರಾಜರಿಗೆ ಪರಾಕ್’ ಎಂದು ಇತಿಹಾಸ ಪ್ರಜ್ಞೆಯಿಂದ ಗೌರವಿಸುವುದು ಮುಂದುವರೆದಿದೆ. ಯದುವಂಶದ ಪ್ರಮುಖ ದೊರೆಗಳಲ್ಲಿ ಒಬ್ಬರಾದ ಜಯಚಾಮರಾಜೇಂದ್ರ ಒಡೆಯರ್ ತಮ್ಮ ಎಲ್ಲಾ ಪತ್ರ ವ್ಯವಹಾರಗಳು ಮತ್ತು ದಾಖಲೆಗಳಲ್ಲಿ ‘ಮಹಿಷೂರು’ ಎಂದು ಇತಿಹಾಸ ಪ್ರಜ್ಞೆಯಿಂದ ನಮೂದಿಸಿದ್ದಾರೆ.

ಭಾರತದ ವೈದಿಕಶಾಹಿ ಮೂಲನಿವಾಸಿಗಳ ಶ್ರೇಷ್ಠ ದೊರೆಗಳಾದ ಬಲಿಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮೊದಲಾದವರನ್ನು ತುಚ್ಛೀಕರಿಸಿ ಬೌದ್ಧ ಪರಂಪರೆಯನ್ನು ನಾಶಮಾಡುವ ಹುನ್ನಾರ ನಡೆಸಿದ್ದಾರೆ. ದೇವಾಲಯಗಳನ್ನು ಕಟ್ಟುವುದು, ದೇವರನ್ನು ಸೃಷ್ಟಿಸುವುದು, ಭಕ್ತಾದಿಗಳನ್ನು ರೂಪಿಸುವುದು, ಮೌಢ್ಯಗಳನ್ನು ವೈಭವೀಕರಿಸುವುದು, ಪಾಪ-ಕರ್ಮ ಎಂಬ ಭಯ ಸೃಷ್ಟಿಸಿ ಮೂಲನಿವಾಸಿಗಳನ್ನು ದಾರಿತಪ್ಪಿಸಿ ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ‘ಹುಂಡಿ’ಯೊಳಗೆ ಅಥವಾ ‘ಮಂಗಳಾರತಿ ತಟ್ಟೆ’ಯೊಳಗೆ ಇಟ್ಟು ತದನಂತರ ತಮ್ಮ ಆಸ್ತಿಯನ್ನು ಹೆಚ್ಚಿಸಿಕೊಂಡು ಹೆಂಡತಿ ಮಕ್ಕಳನ್ನು ಯಾವುದೇ ಶ್ರಮ, ರಕ್ತ, ಬೆವರು ಸುರಿಸದೇ ಉದ್ಧರಿಸುವ ಸಲುವಾಗಿ ವೈದಿಕರು ಚಾಮುಂಡಿಯಂತಹ 333ಕೋಟಿ ದೇವಾನುದೇವತೆಗಳನ್ನು ಸೃಷ್ಟಿಸಿ ನಯವಂಚಕರಾಗಿ ಸುಖದಿಂದ ಬದುಕುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇಂತಹ ಪ್ರಕೃತಿ ವಿರೋಧಿ ಹಾಗೂ ಸಂವಿಧಾನ ವಿರೋಧಿ ವೈದಿಕಶಾಹಿ ಹುನ್ನಾರಗಳನ್ನು ಮಹಿಷ ದಸರಾ ಸಂದರ್ಭದಲ್ಲಿ ಮೂಲನಿವಾಸಿಗಳ ಗಮನಕ್ಕೆ ತಂದು ಅವರನ್ನು ಸರಿದಾರಿಗೆ ತರುವ ಬಹುದೊಡ್ಡ ಜವಾಬ್ದಾರಿ ಪ್ರಗತಿಪರ ಚಿಂತಕರ ಮೇಲಿದೆ. ದೇವರು ಮತ್ತು ಧರ್ಮಗಳ ಹೆಸರಿನಲ್ಲಿ ಮೂಲನಿವಾಸಿಗಳನ್ನು ಮೌಢ್ಯದೆಡೆಗೆ, ಬಡತನದೆಡೆಗೆ, ಅಸಹಾಯಕತೆಯೆಡೆಗೆ ಮತ್ತು ವಿನಾಶದೆಡೆಗೆ ಕೊಂಡೊಯ್ಯುವ ವೈದಿಕರ ಅಥವಾ ಸನಾತನ ಧರ್ಮ ಪ್ರತಿಪಾದಕರ ಆಟ ನಿಲ್ಲಲೇ ಬೇಕು.

ಕಳೆದ 5 ವರ್ಷಗಳಿಂದ ಮೈಸೂರಿನಲ್ಲಿ ಮೂಲನಿವಾಸಿಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಸುಸ್ಥಿರಗೊಳಿಸುವ ಸಲುವಾಗಿ ಎಲ್ಲ ಪ್ರಗತಿಪರರು ಮತ್ತು ಮಹಿಷ ಮಂಡಲದ ಮೂಲನಿವಾಸಿಗಳು ಸ್ವಪ್ರೇರಣೆಯಿಂದ, ಅಹಿಂಸಾತ್ಮಕವಾಗಿ ಮತ್ತು ಸಂವಿಧಾನಬದ್ಧವಾಗಿ ‘ಮಹಿಷ ದಸರಾ’ ಆಚರಿಸುತ್ತಿದ್ದಾರೆ. ಮಹಿಷ ಮಂಡಲದ ಮೂಲನಿವಾಸಿಗಳು ಮತ್ತು ನಾಗಬೌದ್ಧ ಬಂಧುಗಳಿಂದ ಯಾವುದೇ ದುಂದುವೆಚ್ಚ ಅಥವಾ ಕಂದಾಚಾರವಿಲ್ಲದೇ ‘ಮಹಿಷನ ಕ್ಷಾತ್ರಶಕ್ತಿ – ಮೂಲನಿವಾಸಿಗಳ ಮಹಾಶಕ್ತಿ’ ಎಂಬ ಧ್ಯೇಯೋದ್ದೇಶದಿಂದ ಮಹಿಷ ದಸರಾ ಆಚರಿಸಲಾಗುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳು, ಉದ್ದಿಮೆದಾರರು, ಮಧ್ಯವರ್ತಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಮುಕ್ತವಾದ ‘ಮಹಿಷ ದಸರಾ – 2019’ನ್ನು ದಿನಾಂಕ 27-09-2019ರ ಶುಕ್ರವಾರ ಮೂಲನಿವಾಸಿ ಬಂಧುಗಳು ಹಮ್ಮಿಕೊಂಡಿದ್ದರು. ಮೈಸೂರು ಪುರಭವನದ ಅಂಬೇಡ್ಕರ್ ಪ್ರತಿಮೆ ಸ್ಥಳದಿಂದ ಬುದ್ಧರಥ, ಭೀಮರಥ, ಅಶೋಕ ರಥ ಮತ್ತು ಮಹಿಷರಥಗಳ ಮೆರವಣಿಗೆ ಮಹಾಬಲ ಬೆಟ್ಟಕ್ಕೆ ಸಾಗಿ ಮಹಿಷ ಮಂಡಲದ ಸಾಮ್ರಾಟ ಮಹಿಷನಿಗೆ ಪುಷ್ಪಾರ್ಚನೆ, ಗಣ್ಯರಿಂದ ನುಡಿನಮನ, ಪುಸ್ತಕ ಬಿಡುಗಡೆ, ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬೌದ್ಧ ಧಮ್ಮ ದೀಕ್ಷೆ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೋಮುವಾದಿಗಳ ಸಂಚು
ದಿನಾಂಕ 26-09-2019ರಂದು ಸ್ಥಳೀಯ ಸಂಸದ ಪ್ರತಾಪ್‍ಸಿಂಹ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಾದವರು ವೈದಿಕರು ಮತ್ತು ಕೋಮುವಾದಿಗಳು ರೂಪಿಸಿದ ಸಂಚಿಗೆ ಬಲಿಯಾಗಿ ಪುರಭವನ ಮತ್ತು ಮಹಾಬಲ ಬೆಟ್ಟದ ಮಹಿಷ ಪ್ರತಿಮೆ ಇರುವ ಸ್ಥಳಗಳಲ್ಲಿ ಸೆಕ್ಷನ್ 144 ಕಾನೂನಿನನ್ವಯ ಕಫ್ರ್ಯೂ ವಿಧಿಸಿ ಮಹಿಷ ದಸರಾ ಆಚರಣೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದರು. ಆದರೆ ಇದರಿಂದ ಧೃತಿಗೆಡದ ಮೂಲನಿವಾಸಿ ಬಂಧುಗಳು ಅಶೋಕಪುರಂನಲ್ಲಿರುವ ಅಂಬೇಡ್ಕರ್ ಪಾರ್ಕಿನಲ್ಲಿ ಮಹಿಷ ದಸರಾ ಆಚರಿಸಲು ಕೂಡಲೇ ನಿರ್ಧರಿಸಿದರು. ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಸಾವಿರಾರು ಜನರಿಗೆ ಮಹಿಷ ದಸರಾ ಕಾರ್ಯಕ್ರಮ ಸ್ಥಳ ಬದಲಾವಣೆ ಬಗ್ಗೆ ಸಕಾಲದಲ್ಲಿ ಮಾಹಿತಿ ನೀಡಲಾಯಿತು. ವ್ಯವಸ್ಥಾಪಕರ ನಿರೀಕ್ಷೆಗೂ ಮೀರಿ ಮೈಸೂರು ನಗರ, ಅಶೋಕಪುರಂ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ಜನ ಅತ್ಯಂತ ಪ್ರೀತಿಯಿಂದ ಯಾರ ಅಡ್ಡಿಯಿಲ್ಲದೇ ಮಹಿಷ ದಸರಾ ಆಚರಿಸಿದರು.

ಮೂಲನಿವಾಸಿಗಳ ದಿಗ್ವಿಜಯ
ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು, ಇತಿಹಾಸಕಾರ ಪ್ರೊ.ನಂಜರಾಜೇ ಅರಸ್, ಧಾರ್ಮಿಕ ಮುಖಂಡ ಜ್ಞಾನಪ್ರಕಾಶ ಸ್ವಾಮೀಜಿ, ಇತಿಹಾಸಕಾರ ಚಿನ್ನಸ್ವಾಮಿ ಸೋಸಲೆ, ಸಮುದಾಯ ಮುಖಂಡರಾದ ಪುರುಷೋತ್ತಮ, ಶಾಂತರಾಜು, ಸಿದ್ಧಸ್ವಾಮಿ ಮೊದಲಾದವರ ನೇತೃತ್ವದಲ್ಲಿ ಪುಸ್ತಕ ಬಿಡುಗಡೆ, ಮಹಿಷರತ್ನ ಪ್ರಶಸ್ತಿ ಪ್ರಧಾನ, ನುಡಿನಮನ ಮತ್ತು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಗಮವಾಗಿ ಜರುಗಿದವು. ಪಟ್ಟಭದ್ರ ಹಿತಾಸಕ್ತಿಗಳಿಂದಲೇ ಕೂಡಿದ ರಾಜ್ಯ ಸರ್ಕಾರದ ವಿರುದ್ಧ ಮೂಲನಿವಾಸಿ ಬಂಧುಗಳು ಸೆಡ್ಡು ಹೊಡೆದು ತಮ್ಮ ಸಂಘಟನಾ ಶಕ್ತಿ ಮತ್ತು ಪರಿಶ್ರಮಗಳನ್ನು ಆಧರಿಸಿ ಅತ್ಯಂತ ಯಶಸ್ವಿಯಾಗಿ ಮಹಿಷ ದಸರಾ-2019 ಆಚರಿಸಿದರು. ಹಲವಾರು ಪ್ರಗತಿಪರ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಮತ್ತು ಮಾಧ್ಯಮಗಳು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...