Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ-12; "ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ"

ಹಿಂಗಿದ್ದ ನಮ್ಮ ರಾಮಣ್ಣ-12; “ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ”

- Advertisement -
- Advertisement -

ನಮ್ಮೂರ ನಂಜುಂಡಯ್ಯ ನಿನಿಗೂ ಗೊತ್ತಲ್ಲ. ಅವುರ ಜೊತೆಲಿ ರಾಮಣ್ಣ ಕದಬಳ್ಳಿ, ಹಿರಿಸ್ಯಾವೆ ಇಲ್ಲಿಗ್ಯಲ್ಲ ಹೋಗಿ ಬರೋನು. ಕಲ್ಲಳ್ಳಿಲಿರೊ ನಮ್ಮ ಅಕ್ಕನ ಮನಿಗೂ ಹೋಗಿದ್ದ; ಅವುಳು ತನ್ನ ಮಗಳಿಗೆ ಒಂದು ಗಂಡು ನೋಡಕೇಳಿದ್ಲು. “ನಿನಿಗ್ಯಾಕಕ್ಕ ಮಗಳ ಮದುವೆ ಯೋಚನೆ. ಅವುಳಿಗೆ ಗಂಡು ನೋಡೋ ಜವಾಬ್ದಾರಿ ನನಿಗಿರ್ಲಿ ಅಂದಿದ್ದ. ಇಂತ ಮಾತು ಕೇಳಿದ್ರೆ ಯಾರಿಗೆ ಸಂತೋಷಾಗದಿಲ್ಲ ಹೇಳು. ಆ ಮಾತಂದ ಕೂಡ್ಳೆ ವಳ್ಳೆ ಅಡಗೆ ಮಾಡಿ ತುಪ್ಪ ಹಾಕಿ ಕಳಸೋಳು. ಊಟ ಅಂದ್ರೆ ಇನ್ನೇನು ನಾಟಿಕೋಳಿ. ಆ ಸಾರಿಗೆ ತುಪ್ಪ ಹಾಕಿದ್ರೆ ಕೇಳಿಯೇ. ರಾಮಣ್ಣ ಮನ ಮುಟ್ಟಂಗೆ ಮಾತಾಡೋನು. ಆದ್ರೆ ಒಬ್ಬ ಬಿಡುವಿಲ್ಲದ ವೈದ್ಯ ಮತ್ತೆ ಕತೆಗಾರನಿಗೆ ಗಂಡು ನೋಡೋ ಪುರುಸತ್ತೆಲ್ಲಿ? ಅದು ಗಂಡು ನೋಡಕ್ಕೇಳಿದೊರಿಗೆ ಗೊತ್ತಾಯ್ತು ಅನ್ಸುತ್ತೆ. ಅವುರ ದಾರಿ ಅವುರು ನೋಡಿಕಂಡ್ರು.

ನಮ್ಮ ಎಚ್.ಎಲ್ ಕೇಶವಮೂರ್ತಿ ನಮ್ಮೂರಿನೋರೆಯ. ಇಂಜಿನಿಯರಿಂಗ್ ಓದಿ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪ್ರೊಫೆಸರಾಗಿದ್ರು. ಎತ್ತರದಾಳು; ಗುಣದಲ್ಲೂ ಎತ್ತರವಾಗಿದ್ದೋರು. ಬರಿತಿದ್ದುದು ಮಾತ್ರ ’ಥೂ ಹಲ್ಕ’ ಕಾಲಂ. ಒಳ್ಳೆ ಹಾಸ್ಯ ಬರಿಯೋರು. RUM ಅಂದ್ರೆ ರಂಭಾ ಊರ್ವಶಿ ಮೇನಕೆ ಅಂತ ನಮಿಗ್ಯಲ್ಲ ತೋರಿದೋರೆ ಅವುರು. ತುಂಟಾಟದ ಜನಗಳ್ಯಲ್ಲ ಅವುರ ಕಾಲಂ ಓದೋರು. ಅದರಲ್ಲೂ ಲಂಕೇಶ್ ಪತ್ರಿಕೆಲಿ ಅವುರು ಬರದದ್ನೆಲ್ಲ ಬುಡದಂಗೆ ಓತ್ತಿದ್ದೊ. ಅವುರೊಂದು ಪುಸ್ತಕ ಬರದು ಪ್ರಕಟಿಸಿದ್ರು. ಅದ ಬಿಡುಗಡೆ ಮಾಡಬೇಕಲ್ಲಾ, ಯಾರಿಂದ ಮಾಡಸದು ಅಂತ ಯೋಚನೆ ಮಾಡಿ ಕೆ.ಹೆಚ್ ಶ್ರೀನಿವಾಸನ್ನ ಕರಸಿದ್ರು. ಶ್ರೀನಿವಾಸ ಭಾಳ ಬುದ್ಧಿವಂತ ರಾಜಕಾರಣಿ. ಸಾಹಿತ್ಯ ಸಂಗೀತದ ಬಗ್ಗೆ ಭಾಳ ಅಭಿರುಚಿ ಇದ್ದೋರು. ಶಿವಮೊಗ್ಗದಂತ ಸಾಂಸ್ಕೃತಿಕವಾದ ಊರಿಂದ ಗೆದ್ದು ಬರಕ್ಕೆ ಶ್ರೀನಿವಾಸನಂತ ವಿದ್ವಾಂಸನಿಗೆ ಸಾಧ್ಯ ಅಂತ ತಿಳಕಂಡಿದ್ದೊ. ಇದು ತಪ್ಪು ತಿಳಿವಳಿಕೆ ಅಂತ ಅಮ್ಯಾಲೆ ಗೊತ್ತಾತು. ಇರ್ಲಿ. ನಮ್ಮ ಕೇಶವಮೂರ್ತಿ ಬರದ ’ಯಂಗಾರ ಟಿಕೆಟ್ ಕೊಡಿ’ ಅನ್ನೊ ಪುಸ್ತಕ ಬಿಡುಗಡೆಗೆ ಶ್ರೀನಿವಾಸ ಬಂದ್ರು. ಈ ಪುಸ್ತಕದ ಒಂದು ಕತೆಲಿ ಪಾರ್ಟಿಯಿಂದ ಹಿರಿಯ ರಾಜಕಾರಣಿ ನನಿಗೆ ಟಿಕೆಟ್ ಕೊಡಿ ಅಂತನೆ. ಅಂದ್ರೆ ಹಿರಿತನ ಪರಿಗಣಿಸಿ ಕೊಡದಾದ್ರೆ ನನಿಕ್ಕೊಡಿ, ಯುವಕರನ್ನ ಪರಿಗಣಿಸೊದಾದ್ರೆ ನನ್ನ ಮಗನಿಗೆ ಕೊಡಿ, ಮಹಿಳೆಯರಿಗೆ ಕೊಡದಾದ್ರೆ ನನ್ನೆಡ್ತಿಗೆ ಕೊಡಿ ಇಲ್ಲ ನನ್ನ ಸೊಸಿಗೆ ಕೊಡಿ ಅಂತನೆ. ವಳ್ಳೆ ಇಂಟರೆಸ್ಟಿಂಗ್ ಕತೆ ಅದು.

“ಆ ಕತೆ ಈಗ ನಿಜವಾಗ್ಲು ನ್ಯಡಿತಾ ಅದಲ್ಲ ಹೇಳಣ್ಣ. ಕೆಲವು ಕತೆ ಕಾಲಜ್ಞಾನದ ಕತೆ ತರ ಇರತವೆ. ಅಂಥ ಕತೆ ಅದು. ನನ್ನ ಪಾರ್ಟಿಗೆ ನಾನೇ ಅಧ್ಯಕ್ಷ. ನನ್ನ ಮಕ್ಕಳು ಮರಿಗಳು ಸೊಸೆರು, ನಂಟ್ರು ಇಷ್ಟ್ರು ಬೀಗರು ಬಿಜ್ಜರಿಗ್ಯಲ್ಲ ಟಿಕೆಟ್ ಕೊಡನು ನಾನೆ ಅನ್ನಂಗಾಯ್ತಲ್ಲ ಹೇಳು”

ಅಗೆ ನೋಡಿದ್ರೆ ಕೇಶವಮೂರ್ತಿ ಸುಮಾರು ಕತೆ ನ್ಯಡಿತಾ ಅವೆ. ಬಿಡುಗಡೆ ಮಾಡಕ್ಕೆ ಬಂದ ಶ್ರೀನಿವಾಸ ಚನ್ನಾಗಿ ಮಾತಾಡಿದ, ಕಾರ್ಯಕ್ರಮನೂ ಚನ್ನಾಗಿತ್ತು. ಯಲ್ಲ ಸರಿ ರಾಮಣ್ಣನಿಗೆ ಉರಿಯತ್ತಿಗತ್ತು.

ನಾನವುನ ಕ್ವಾಟ್ರಸಿಗೋದಾಗ “ಏನ್ಲ ಆ ಶ್ರೀನಿವಾಸನ್ನ ಕರಸಿ ಕೇಶವಮೂರ್ತಿ ಪುಸ್ತಕ ಬಿಡುಗಡೆ ಮಾಡುಸ್ತಿ, ನಮ್ಮವ ಮಾಡಸಕ್ಕಾಗದಿಲವುಲ ನಿನಿಗೆ? ಒಂದೇ ಊರಿನೋರು ಸೇರಿಕಂಡು ಕಡಿಗೂ ನಿಮ್ಮಾಟ ತೋರೆಬುಟ್ರಲ್ಲ” ಅಂತ ರೇಗಿದ. ಕೆಲವು ಮಾತು ಹಳ್ಳಿಗರ ಸಣ್ಣತನದಲ್ಲೇ ಇರವು, ಯಾವ ಮುಚ್ಚುಮರೆ ಇಲ್ದೆ ಜಾಡಿಸಿಬುಡೋನು. ನಾನು ಇದೇನಿಂಗಂದನಲ್ಲ ಅಂತ ಅವುನ್ನೆ ನೋಡ್ತ ನಿಂತಗಂಡೆ. “ಮಕ ಏನ್ನೊಡ್ತಿ ಕೈ ತ್ವಳಕಲ ಉಣ್ಣುವೆ” ಅಂದ.

ಅವುನಂದ ಮಾತು ನನಿಗೆ ಕ್ವರಿತಿದ್ರಿಂದ “ಅದ್ಯಾವುದು ನಿನ್ನ ಪುಸ್ತಕ ಕೊಡಪ್ಪ, ಬಿಡುಗಡೆ ಮಾಡ್ಸನ, ಯಾರ್‍ನ ಕರಿಬೇಕೇಳು” ಅಂದೆ.

“ಈಗ್ಯಾವು ಇಲ್ಲ ಕಲ” ಅಂದ.

“ಮತ್ತೆ ಬರದು ಮಡಿಕಂಡಿರನಂಗೆ ಹೇಳ್ತಿ” ಅಂದೆ. ಏನೊ ಹೊಳದೋನಂಗೆ, ಲೇ ಒಂದು ಕ್ಯಲಸ ಮಾಡ್ಳ. ಯಂಗಿದ್ರು ನಮ್ಮ ಪ್ರೈಮರಿ ಹೆಲ್ತ್ ಸೆಂಟರ್ ಕಟ್ಟಡಕ್ಕೆ ನಲ್ಲಿ ಕನಕ್ಷನ್ ಕೊಡ್ತರೆ, ಆ ಕಾರ್ಯಕ್ರಮಕ್ಕೆ ನಿಮ್ಮ ಅಣ್ಣಯ್ಯನ ಕರಸು ಅಂದ. ಅಣ್ಣಯ್ಯ ಅಂದ್ರೆ ಹಿರಿಸ್ಯಾವೆ ಶ್ರೀಕಂಠಯ್ಯ. ಆಗವುರು ಜನಾಂಗದಲ್ಲಿ ಪ್ರಭಾವಿ ರಾಜಕಾರಣಿ. ಚುಂಚನಗಿರಿ ಬಹುತೇಕ ಕಟ್ಟಡದ ಶಿಲಾನ್ಯಾಸ ಪ್ರಾರಂಭೋತ್ಸವದಲ್ಲಿ ಅವುರೆಸರಿನ ಕಲ್ಲವೆ. ನಮ್ಮ ರಾಮಣ್ಣ ಅಂಥೋರಿಂದ ನಲ್ಲಿ ತಿರುಗಿಸಿದ್ರೆ ನಾನೊಬ್ಬ ಭಗೀರಥನಂಗಾಯ್ತಿನಿ ಅಂತ ತಿಳಕಂಡಿದ್ದ. ನಿಜವಾಗ್ಲು ಆಗವುನು ತುಂಬಾ ಕೆಲ್ಸ ಮಾಡಿದ್ದ. ಡಿ.ಹೆಚ್.ಓ ಪ್ರೊಗ್ರೆಸ್ ವರ್ಕ್‌ನ ಕೇಳೋನು. ಅದಕ್ಕಾಗಿ ರಾಮಣ್ಣ ತುಂಬಾ ಕೆಲಸ ಮಾಡೋನು. ಒಂಥರ ಹರದನಳ್ಳಿಲಿ ಮಾಡಿದ್ದ ಕ್ಯಲಸನ್ಯಲ್ಲ ಇಲ್ಲೂ ಮಾಡಿದ. ಅವುನೇ ಡ್ರಾಯಿಂಗಾಪಿಸರ್ರಾದ್ರಿಂದ ಜನಗಳಿಂದ ಕ್ಯಲಸ ತಗಿಯೋನು. ಆದ್ರಿಂದ ತನ್ನ ಸಾಧನೆ ಮಂತ್ರಿಗಳ ಗಮನಕ್ಕೆ ಬರ್ಲಿ ಅನ್ನೋದು ಅವುನಪೇಕ್ಷೆಯಾಗಿತ್ತು. ಆದ್ರಿಂದ ತಾನು ಬರದ ಕತೆ ಪುಸ್ತಕ ಬಿಡುಗಡೆಗಿಂತ ಹೆಲ್ತಸೆಂಟರ್‌ಗೆನಲ್ಲಿ ನೀರುಬರದು ಮುಖ್ಯವಾಗಿತ್ತು.

“ಅಲ್ಲೊ ಮಾರಾಯ ಆಸುಪತ್ರೆ ವಳಗಾಕಿರೊ ನಲ್ಲಿ ತಿರುಗ್ಸಕ್ಕೆ ಮಿನಿಸ್ಟ್ರ ಕರಸು ಅಂತಿಯಲ್ಲಾ, ನಿನಿಗೇನೇಳನ. ಮನುಷ್ಯ ಇಷ್ಟು ಸಣ್ಣದಾಗಿ ಯೋಚನೆ ಮಾಡಬಾರ್ದು” ಅಂದೆ. “ನಿನಿಗೇನು ಗೊತ್ಲ ನೀರಿತ ಮಹತ್ವ. ಆಸ್ಪತ್ರೆ ಉದ್ಘಾಟನೆ ಆಯ್ತು ಅಂತ್ಲೆ ಇಟಗೊ. ನೀರಿಲ್ದೆ ಅಲ್ಲೇನು ಮಾಡಿಲ. ನದಿ ಪಕ್ಕದಲ್ಲೆ ನಾಗರಿಕತೆ ಹುಟ್ಟಿರದು ತಿಳಕೊ. ಅದು ಮಿನಿಷ್ಟ್ರಿಗೂ ಗೊತ್ತು. ನೀನು ಸುಮ್ಮನೆ ಕರಿಲ” ಅಂದ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

ನಾನು ಸುಮ್ಮನಾದೆ. ಆಗ ತಿರುಗ “ನೋಡ್ಲ ನಮ್ಮ ಜನಕೆ ನೀರಿನ ಮಹತ್ವನೇ ಗೊತ್ತಿಲ್ಲ. ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ. ಮಳೆಹನಿ ಬಿದ್ದಾಗ್ಲೆ ಭೂಮಿ ಕೆಲಸ ಶುರುವಾಗದು. ನೀರಿದ್ದ ಜಾಗ ಸಮೃದ್ಧವಾಗಿರತವೆ. ಇಲ್ಲದ ಜಾಗ ಬರಡಾಗಿರತವೆ. ಮನುಸ ಸತ್ತಾಗ ಬಾಯಿಗೆ ನೀರು ಬುಡ್ತರೆ ಕಲ. ನೀರಿಲ್ದೆಯಿದ್ರೆ ಜಗತ್ತು ಒಂದು ಕ್ಷಣನೂ ಇರಲ್ಲ ಕಲ. ಮಿನಿಸ್ಟ್ರಿಂದ ನಲ್ಲಿ ಉದ್ಘಾಟನೆಯಾಗ್ಲಿ. ಜನಕೆ ನೀರಿನ ಮಹತ್ವ ಏನು ಅನ್ನದ ಹೇಳನ ಅಂತ ನೀರಾವಾರಿ ಎಕ್ಸ್‌ಪರ್ಟ್ ತರ ಮಾತಾಡಿದ. ಆ ಕ್ಷಣಕೆ ಅವುನ ಬಗ್ಗೆ ಅಭಿಮಾನ ಬತ್ತು. ಆದ್ರೆ ನಲ್ಲಿ ಉದ್ಘಾಟನೆಗೆ ಮಿನಿಸ್ಟ್ರು ಕರಿಯೋ ಅಂತ ಹುಡುಗಾಟಿಕೆ ಕ್ಯಲಸಕ್ಕೆ ಹೋಗಲಿಲ್ಲ.

ರಾಮಣ್ಣ ನಾಗಮಂಗಲದಲ್ಲಿ ಇದ್ದಾಗ ಬತ್ತಿದ್ದ ಸಾಹಿತಿಗಳು ಬೆಳ್ಳೂರಿಗೆ ಬಂದಮ್ಯಾಲೆ ಕಡಿಮಾದ್ರು. ರಾಮಣ್ಣನಿಗೂ ಇಲ್ಲಿ ಕೆಲಸ ಜಾಸ್ತಿಯಾಗಿತ್ತು. ಅವುನ ವರ್ಗಾವಣೆ ಸಮಸ್ಯೆಗಿಂತ ನನ್ನ ವರ್ಗಾವಣೆ ಸಮಸ್ಯೆ ಎದುರಾಯ್ತು. ಅವುನ ವರ್ಗಾವಣೆ ಅರಸು ಕಾಲದ್ದು. ನನ್ನ ವರ್ಗಾವಣೆ ಜೆ.ಹೆಚ್ ಪಟೇಲ್ರ ಕಾಲದ್ದು. ಅವುರು ಯಲ್ಲಾಕ್ಕು ಬಿ.ಎಸ್ ಪಾಟಿಲನ ಕಡೆ ಕೈ ತೋರತಿದ್ರು. ಆದ್ರೆ ಆ ಪಾಟೀಲನೆ ನನ್ನ ಗಾಂಧಿನಗರಕ್ಕೆ ಹಾಕಿದ್ದು. ಪಟೇಲ್ರಿಗೆ ನಮ್ಮಣ್ಣ ತುಂಬ ಪರಿಚಯ ಇದ್ದಿದರಿಂದ ಅಣ್ಣನ್ನ ಕರಕಂಡು ಪಟೇಲ್ರತ್ರಕ್ಕೆ ಹೋದೆ. ಈ ಪಟೇಲ್ರು ಸೋಷಲಿಸ್ಟರು. ಅವುರು ನಿರುದ್ಯೋಗ ಬಗ್ಗೆ ಚಿಂತೆ ಮಾಡೋರೆ ವರತು ವರ್ಗಾವಣೆ ಬಗ್ಗೆ ಯೋಚನೆ ಮಾಡೋರಲ್ಲ. ಕ್ಯಲಸ ಸಿಕ್ಕಿದ ಮ್ಯಾಲೆ ಎಲ್ಯಾದರೇನು ಹೋಗಿ ಮಾಡಬೇಕು. ಅದು ಬುಟ್ಟು ವಳ್ಳೆ ಜಾಗನೆ ಬೇಕು ಅಂದ್ರೆ ಸೋಷಲಿಸ್ಟ ಮನಸು ಒಪ್ಪತಿರಲಿಲ್ಲ. ಅದ್ಕಕಿಂತ್ಲೂ ವರ್ಗಾವಣೆದೆ ಒಂದು ದಂಧೆಯಾದ್ರೆ ಯಾರೂ ಕ್ಯಲಸ ಮಾಡದೆ ಬರೀ ವರ್ಗಾ ಮಾಡಿಸಿಗಳದ್ರಲ್ಲೇ ಇರತರೆ ಅದ್ರಿಂದ ನಮ್ಮಣ್ಣನ ಕರಕಂಡೋದಾಗ್ಲು ಪಟೇಲ್ರು “ಏ ಪಾಟೀಲ ಅದೇನ್ ನೋಡು. ಕೃಷ್ಣಪ್ಪನೋರು ಬಂದವುರೆ” ಅಂತ ವಳ್ಳೆ ಮಾತಾಡಿ ಕಳಿಸಿದ್ರು. ಆದ್ರು ಏನೂ ಆಗಲಿಲ್ಲ. ಹೆಚ್.ಎನ್. ನಂಜೇಗೌಡ್ರು ಬಸವನಗುಡಿಲಿದ್ರು; ಇವ್ಯಲ್ಲ ಸುಲಭವಾಗಿ ಸಿಗೊ ಜಾಗಲ್ಲ ಅಂತ ತಿಳಿದು, ಆಗ ಇನ್ನೇನು ಮಾಡದು ಅಂತ ವರ್ಗಾವಣೆ ದಂದೆಗಿರೊ ಮಾರ್ಗನೆ ಹಿಡಿಬೇಕಾಯ್ತು. ಆಗ ವಿ.ಸೋಮಣ್ಣ ನಮ್ಮ ಕಾರ್ಪೊರೇಟ್ರು. ಮುಂದೆ ಆತ ಇನ್‌ಚಾರ್ಜ್ ಮಂತ್ರಿಯಾದ್ರು; ಹಳೆಬಾಂಧವ್ಯ ಹೇಳಿದಾಗ ಬಸವನಗುಡಿಲಿ ನಮ್ಮ ಜನ ಜಾಸ್ತಿಯವರೆ ಅಂತ ತಿಳಿದು ನಂಜೇಗೌಡ್ರ ಶಿಫಾರಸ್ಸಿಗೆ ಆರ್ಡರ್ ಇಶ್ಯೂ ಮಾಡಿದ್ರು. ನಾನೊಬ್ಬ ಮಾಜಿಮಂತ್ರಿ ತಮ್ಮ ಅನ್ನದು ಯಾವ ಕ್ಯಲಸನೂ ಮಾಡಲಿಲ್ಲ. ಏನು ಬೇಕೊ ಅದ ಮಾಡಿದಾಗ್ಲೆ ಆರ್ಡರು ಕೈಗೆ ಬತ್ತು. ಇದು ಯರಡು ದಶಕದ ಹಿಂದಿನ ಮಾತು. ಈಗಂತೂ ಮಾತಾಡಂಗೇಯಿಲ್ಲ ಬುಡು. ರಾಮಣ್ಣನ ಕ್ಯಲಸನ ಮುಖ್ಯಮಂತ್ರಿಯಿಂದ್ಲೇ ಮಾಡಿಸಿದ ನಾನು, ನನ್ನ ಕ್ಯಲಸಕ್ಕೆ ಕಷ್ಟ ಪಟ್ಟಿದ್ದೂ ಅಲ್ದೆ ಅನ್ಯಮಾರ್ಗ ಹಿಡಿಬೇಕಾಯ್ತು.

ನನಿಗೆ ದೇವೆಗೌಡ್ರ ಪರಿಚಯನೂ ಚನ್ನಾಗೇಯಿತ್ತು. ಅವುರೂ ಜನಗಳ ಕಷ್ಟಕ್ಕೆ ಸ್ಪಂದಿಸೊ ರಾಜಕಾರಣಿನೆ. ಅದ್ಕೆ ಅಲವ ಅವುರ ಮನೆ ಹತ್ರ ಜನಗಳಿರದು. ದೇವೇಗೌಡ್ರು ನಮ್ಮೂರಿಗೂ ಬತ್ತಿದ್ರು ಆಗ ನಮ್ಮೂರ ಹೆಚ್.ಬಿ ರಾಮೇಗೌಡ್ರ ಮುಖಾಂತರ ಪರಿಚಯ ಆಗಿದ್ರು. ಡಾ. ಕೃಷ್ಣನೂ ಬಂದು ಹೋಗನು. ಇವುರ್‍ಯಲ್ಲ ಪದೇಪದೆ ಬಂದು ಹೋಗದ್ರಿಂದ ಪರಿಚಯ ಆಗಿದ್ರು. ದೇವೇಗೌಡ್ರಂತೂ ನನ್ನನ್ನ ಎಲ್.ಕೆ ಅಡ್ವಾನಿಗೆ ಪರಿಚಯ ಮಾಡಿಸಿ, ಇರಾನ್‌ಗೆ ಕಳಿಸೋ ವ್ಯವಸ್ಥೆ ಮಾಡಿದ್ರು. ಆ ಟೈಮಲ್ಲಿ ವೆಸ್ಪಾ ಸ್ಕೂಟರ್‌ನ ಎಮ್ಮೆಲ್ಲೆ ಕೋಟಾದಲ್ಲಿ ಡಿಸ್‌ಕೌಂಟಿಗೆ ಕೊಡರು. ದೇವೇಗೌಡ್ರ ಕೇಳಿದ್ದೆ; ಆಗ ಅವುರ ಜೊತೆಯಿದ್ದ ಸಿ.ಎಂ ಇಬ್ರಾಹಿಂ ನನಿಗೆ ಬೇಕು ಅಂತ ಹಟ ಹಿಡಿದಿದ್ರು. ಹಾಗೆ ಒಂದಿನ ದೇವೇಗೌಡ್ರ ನೋಡಕ್ಕೋಗಿದ್ದೆ. ವಿಧಾನಸೌಧದ ಲಾಂಜಲಿದ್ರು. “ಏನು ಡಾಕ್ಟರೆ” ಅಂದ್ರು. “ಸ್ಕೂಟರ್ ಕೊಡಿಸಿ ಸಾರ್” ಅಂದೆ. ಅಂಗಂದ ಕೂಡ್ಲೆ ಸಿಟ್ಟಿನಿಂದ “ಹೋಗಪ್ಪ ಹೋಗು, ನಿಮ್ಮಣ್ಣ ಶ್ರೀಕಂಠಯ್ಯನೆ ಜೋಬಲ್ಲವುನೆ, ನೀನಿಲ್ಲಿ ಬಂದು ಸ್ಕೂಟರ್ ಕೇಳ್ತಿ” ಅಂತ ಮುಖ ತಿರುಗಿದ್ರು. ನಾನು ನಮ್ಮಣ್ಣನಿಗಿಂತ್ಲೂ ದೇವೇಗೌಡ್ರ ಅಭಿಮಾನಿಯಾಗಿದ್ದೆ. ದೇವರಾಜ ಅರಸು ಹೇಮಾವತಿ ನೀರನ್ನ ನಾಗಮಂಗಲಕ್ಕೆ ಕೊಡ್ತಿನಿ ಅನ್ನೊ ಆಶ್ವಾಸನೆ ಸಿಕ್ಕಿದ ಮೇಲೆ ನಮ್ಮಣ್ಣ ಕಾಂಗ್ರೆಸ್ ಸೇರಿದ್ದು. ಇಲ್ಲಿ ಸ್ವಹಿತಾಸಕ್ತಿಗಿಂತ ಬರಡು ತಾಲೂಕಿನ ನೀರಿನ ಸಮಸ್ಯೆ ನಮ್ಮಣ್ಣ ಪಾರ್ಟಿ ಬದಲಾಯ್ಸಂಗೆ ಮಾಡಿತ್ತು. ನನಿಗೆ ಲೀಡ್ರುಗಳು ಕಾಣತಿದ್ರೆ ವರತು ಪಾರ್ಟಿಗಳು ಕಾಣತಿರಲಿಲ್ಲ. ಅಂತ ಟೈಮಲ್ಲಿ ದೇವೇಗೌಡ್ರು ಮೂದಲಿಸಿದ್ರಿಂದ ತಿರಗ ಅವುರ ಕಡಿಕೆ ಸುಳಿಲಿಲ್ಲ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...