Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-3)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-3)

- Advertisement -
- Advertisement -

ಪ್ರಿನ್ಸ್‌ನ ಈ ಸಂಭಾಷಣೆ ಕುಟಿಲತೆಯಿಲ್ಲದೆ, ಎಲ್ಲವನ್ನೂ ಒಂದು ಮಟ್ಟಕ್ಕೆ ಭಿನ್ನವಿಸಿಕೊಳ್ಳುವ ರೀತಿಯಲ್ಲಿಯೇ ಇತ್ತು. ಆದರೆ, ಅಲ್ಲಿಗೆ ಸಂದರ್ಶಕನಾಗಿ ಬಂದಿದ್ದ ವ್ಯಕ್ತಿಯಿಂದ ಸಾಮಾನ್ಯ ಸೇವಕನೊಬ್ಬನೆಡೆಗೆ ತೂರಿಬರುತ್ತಿದ್ದ ಈ ಮಾತುಗಳು ಆ ಸೇವಕನಿಗೆ ಅಸಂಬದ್ಧವಲ್ಲ ಎಂದೆನಿಸಿರಲು ಸಾಧ್ಯವಿರಲಿಲ್ಲ. ಮತ್ತು ಅವನ ತೀರ್ಮಾನ ಇವೆರಡರಲ್ಲಿ ಒಂದು ಮಾತ್ರವಾಗಿತ್ತು ಎಂಬುದು ಬಹುಶಃ ವಿವರಣೆಯಾಗುತ್ತದೆ; ಅಂದರೆ ಅವನೊಬ್ಬ ಭಿಕ್ಷಾಟನೆಗೆ ಬಂದ ಠಕ್ಕ, ಅಥವ ಅವನು ಪ್ರಿನ್ಸ್, ಅವನೊಬ್ಬ ಪ್ರಿನ್ಸ್ ಆಗಿದ್ದರೂ ಒಬ್ಬ ಮೂರ್ಖಮಾತ್ರ, ಯಾವುದೇ ರೀತಿಯ ಕನಿಷ್ಟ ಮಹತ್ವಾಕಾಂಕ್ಷೆಯೂ ಇಲ್ಲದವನು; ಯಾವುದಾದರೂ ಮಹತ್ವಾಕಾಂಕ್ಷೆಯುಳ್ಳ ಒಬ್ಬ ಪ್ರಜ್ಞಾವಂತ ಪ್ರಿನ್ಸ್ ಖಂಡಿತವಾಗಿ ಸೇವಕರ ಕೋಣೆಯಲ್ಲಿ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ, ಮತ್ತು ತನ್ನದೇ ಆದ ಖಾಸಗಿ ವಿಷಯಗಳ ಬಗ್ಗೆ ಈ ರೀತಿ ಮಾತನಾಡುವುದಿಲ್ಲ. ಎರಡರಲ್ಲಿ ಯಾವುದೇ ಆದರೂ ಹೇಗೆ ಈ ಏಕಾಂಗಿ ಸಂದರ್ಶಕನ ಬಗ್ಗೆ ಜನರಲ್‌ಗೆ ನಿವೇದಿಸುವುದು?

“ನೀನು ಪಕ್ಕದ ನಿರೀಕ್ಷಣಾ ಕೊಠಡಿಗೆ ಹೋಗಬೇಕೆಂದು ನನಗೆ ನಿಜವಾಗಿ ಅನ್ನಿಸುತ್ತಿದೆ!” ಒತ್ತಾಯಪೂರ್ವಕವಾಗಿ ಅವನು ಹೇಳಿದ.

“ಯಾಕೆ, ಈಗ ನಾನೇನಾದರೂ ಅಲ್ಲಿ ಕುಳಿತಿದ್ದಿದ್ದರೆ, ನನಗೆ ನನ್ನ ಸ್ವಂತ ವಿವರಗಳನ್ನು ಹೇಳುವ ಅವಕಾಶವೇ ಸಿಗುತ್ತಿರಲಿಲ್ಲ. ನೀನಿನ್ನೂ ನನ್ನ ವಿಷಯದಲ್ಲಿ ನೆಮ್ಮದಿಯನ್ನ ಕಳೆದುಕೊಂಡವನಂತೆ ಇದೀಯ, ಮತ್ತು ನನ್ನ ಉಟ್ಟ ಬಟ್ಟೆ ಮತ್ತು ಗಂಟಿನ ಕಡೆಗೆ ಕಣ್ಣು ಹಾಯಿಸುತ್ತಲೇ ಇದ್ದೀಯ. ಆ ಕಾರ್ಯದರ್ಶಿಗೆ ಕಾಯದೆ ಈಗ ನೀನು ಒಳಗೆ ಹೋಗಿ ನನ್ನ ಬಗ್ಗೆ ಯಾಕೆ ತಿಳಿಸಬಾರದು?”

“ಇಲ್ಲ, ಇಲ್ಲ! ನಿನ್ನಂತಹ ಸಂದರ್ಶಕನ ಬಗ್ಗೆ ಕಾರ್ಯದರ್ಶಿ ಬರದೇ ನನಗೆ ಹೇಳಲಾಗುವುದಿಲ್ಲ. ಅದಲ್ಲದೇ ಆಗಲೇ ಜನರಲ್ ತಿಳಿಸಿರುವಂತೆ ಅವರಿಗೆ ತೊಂದರೆ ಕೊಡುವಂತಿಲ್ಲ, ಅವರೀಗ ಕರ್ನಲ್ ಸಿ– ಜೊತೆ ಇದ್ದಾರೆ. ಗ್ಯಾವ್ರಿಲ ಅರ್ಡಾಲಿಯೊನೋವಿಚ್‌ಗೆ ಒಳಗಡೆಗೆ ಸೀದ ಹೊಗುವ ಸ್ವಾತಂತ್ರ್ಯವಿದೆ.”

“ಅವರ್‍ಯಾರು, ಗುಮಾಸ್ತರೇ?”

“ಏನು? ಗ್ಯಾವ್ರಿಲ ಅರ್ಡಾಲಿಯೊನೋವಿಚ್? ಓ ಇಲ್ಲ; ಅವರು ಅನೇಕ ಸಂಸ್ಥೆಗಳಲ್ಲಿ ಒಂದು ಸಂಸ್ಥೆಗೆ ಸೇರಿದವರು. ನೋಡಿಲ್ಲಿ, ಯಾವುದಕ್ಕೂ ಮೊದಲು ಆ ನಿನ್ನ ಗಂಟನ್ನ ಅಲ್ಲಿಡು.”

“ಸರಿ, ನಾನು ಹಾಗೆಯೇ ಮಾಡುತ್ತೇನೆ, ನನ್ನ ಮೇಲಿನ ಅಂಗಿಯನ್ನೂ ತೆಗೆದುಬಿಡಲೇ?”

“ಹೌದು ಖಂಡಿತವಾಗಿ, ಏನೇ ಆದರೂ ಅದನ್ನ ಹಾಕಿಕೊಂಡು ನೀನು ಒಳಗಡೆಗೆ ಹೋಗುವ ಹಾಗಿಲ್ಲ.”

ಪ್ರಿನ್ಸ್ ಮೇಲೆದ್ದು ತನ್ನ ಮೇಲಿನ ಅಂಗಿಯನ್ನ ತೆಗೆದ; ಅವನ ಬೆಳಗ್ಗೆ ಧರಿಸುವ ಉಡುಪು ಒಂದೆರಡು ಕಡೆ ಸ್ವಲ್ಪ ಸವೆದಿದ್ದರೂ ಸಾಕಷ್ಟು ಚೆನ್ನಾಗಿತ್ತು. ಅವನೊಂದು ಸ್ಟೀಲ್ ಗಡಿಯಾರದ ಚೈನನ್ನು ಧರಿಸಿದ್ದ ಮತ್ತು ಅದರ ಇನ್ನೊಂದು ತುದಿಗೆ ಜಿನೀವ ಬೆಳ್ಳಿಯ ಗಡಿಯಾರವೊಂದನ್ನ ಸಿಕ್ಕಿಸಲಾಗಿತ್ತು. ಪ್ರಿನ್ಸ್ ಮೂರ್ಖನಿದ್ದಿರಬಹುದಾದರೂ ಕೂಡ, ಹಾಗೂ ಆತ ತನ್ನನ್ನು ಹೇಗೋ ಸಂತುಷ್ಟಗೊಳಿಸಿದ್ದರೂ ಕೂಡ, ಒಬ್ಬ ಸಂದರ್ಶಕನ ಜೊತೆಯಲ್ಲಿ ಮಾತನಾಡುವುದು ಜನರಲ್‌ನ ಸೇವಕನಿಗೆ ಸಮಂಜಸವೆಂದೆನಿಸಲಿಲ್ಲ.

“ಮತ್ತೆ ಎಷ್ಟು ಹೊತ್ತಿಗೆ ಮೇಡಮ್ ಜನಗಳನ್ನ ಭೇಟಿಮಾಡುವುದು?” ಪ್ರಿನ್ಸ್ ತಾನು ಮುಂಚೆ ಕುಳಿತಿದ್ದ ಜಾಗದಲ್ಲೇ ಪುನಃ ಕುಳಿತುಕೊಳ್ಳುತ್ತಾ ಸೇವಕನನ್ನು ಕೇಳಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

“ಓ ಅದೆಲ್ಲಾ ನನ್ನ ವ್ಯಾಪ್ತಿಗೆ ಬರುವುದಿಲ್ಲ! ನನಗೆ ತಿಳಿದಿರುವುದರ ಪ್ರಕಾರ ಮೇಡಮ್‌ರನ್ನು ಯಾವ ಸಮಯದಲ್ಲಿ ಬೇಕಾದರೂ ಭೇಟಿ ಮಾಡಬಹುದು; ಅದು ಸಂದರ್ಶಕರ ಮೇಲೆ ಅವಲಂಬಿತವಾಗಿರುತ್ತದೆ. ಉಡುಪಿನ ವಿನ್ಯಾಸಕ ಹನ್ನೊಂದು ಗಂಟೆಗೆ ಹೋಗುತ್ತಾನೆ. ಗ್ಯಾವ್ರಿಲ ಅರ್ಡಾಲಿಯೊನೋವಿಚ್‌ನನ್ನು ಎಲ್ಲರಿಗಿಂತ ಮೊದಲು ಒಳಗೆ ಬಿಡುತ್ತಾರೆ. ಮತ್ತು ಅವನನ್ನು ಮಧ್ಯಾಹ್ನದ ಊಟಕ್ಕೂ ಒಮ್ಮೊಮ್ಮೆ ಸೇರಿಸಿಕೊಳ್ಳುತ್ತಾರೆ.”

“ಈ ಋತುವಿನಲ್ಲಿ ವಿದೇಶಕ್ಕಿಂತ ಇಲ್ಲಿನ ಕೋಣೆಗಳು ಹೆಚ್ಚು ಬೆಚ್ಚಗಿರುತ್ತವೆ” ಪ್ರಿನ್ಸ್ ಗಮನಿಸಿ ಹೇಳಿದ; “ಆದರೆ ನಾನಿದ್ದ ದೇಶದಲ್ಲಿ ಹೊರಗಡೆ ಹೋದಾಗ ಮಾತ್ರ ಇಲ್ಲಿಗಿಂತ ಜಾಸ್ತಿ ಬೆಚ್ಚಗಿರುತ್ತದೆ. ಒಬ್ಬ ರಷ್ಯದವನು ಚಳಿಗಾಲದಲ್ಲಿ ಅಲ್ಲಿನ ಮನೆಗಳಲ್ಲಿ ಜೀವಿಸುವುದು ರೂಢಿಯಾಗುವವರೆಗೂ ಅಸಾಧ್ಯ.”

“ಅಲ್ಲಿ ಕೋಣೆಗಳನ್ನು ಬೆಚ್ಚಗೆ ಕಾಯಿಸುವುದೇ ಇಲ್ಲವೇ?”

“ಸ್ವಲ್ಪವೇ ಸ್ವಲ್ಪ ಮಾಡುತ್ತಾರೆ; ಆದರೆ ಅಲ್ಲಿನ ಮನೆಗಳು ಮತ್ತು ಕಾಯಿಸುವ ಒಲೆಗಳು ನಮ್ಮದುಕ್ಕಿಂತ ಬಹಳ ವಿಭಿನ್ನವಾಗಿರುತ್ತವೆ.”

“ಹೌದ! ನೀನು ಬಹಳ ಕಾಲ ಅಲ್ಲಿಯೇ ಇದ್ದೆಯಾ?”

“ನಾಲ್ಕು ವರ್ಷಗಳು! ನಾನು ಎಲ್ಲಾ ಸಮಯದಲ್ಲೂ ಒಂದೇ ಜಾಗದಲ್ಲಿ ಇರುತ್ತಿದ್ದೆ. ಒಂದು ಹಳ್ಳಿಯಲ್ಲಿ.”

“ನೀನು ರಷ್ಯವನ್ನು ಬಹಳವಾಗಿ ಮರೆತುಬಿಟ್ಟಿರಬೇಕು, ಹೌದಲ್ಲವೊ?”

“ಹೌದು, ಖಂಡಿತವಾಗಿಯೂ ನಾನು ಮರೆತುಬಿಟ್ಟಿದ್ದೆ, ಬಹಳಷ್ಟು; ಮತ್ತೊಂದು ವಿಷಯ ನೀನು ನಂಬುತ್ತೀಯೋ ಇಲ್ಲವೋ, ನಾನು ರಷ್ಯನ್ ಭಾಷೆ ಮಾತನಾಡುವುದನ್ನ ಹೇಗೆ ಮರೆಯಲೇ ಇಲ್ಲ? ಎಂದು ನನ್ನ ಬಗ್ಗೆಯೇ ಆಶ್ಚರ್ಯಪಡುತ್ತೇನೆ. ಈಗಲೂ, ನಾನು ನಿನ್ನ ಜೊತೆ ಮಾತನಾಡುವಾಗ ಕೂಡ ’ಅದೆಷ್ಟು ಚೆನ್ನಾಗಿ ನಾನು ರಷ್ಯನ್ ಭಾಷೆಯನ್ನ ಮಾತನಾಡುತ್ತೇನೆ’ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಆ ಕಾರಣಕ್ಕಾಗಿಯೂ ಭಾಗಶಃ ಬೆಳೆಗ್ಗೆಯಿಂದಲೂ ಸಿಕ್ಕಾಪಟ್ಟೆ ಮಾತನಾಡುತ್ತಿದ್ದೇನೆ. ನಿನಗೆ ಖಂಡಿತವಾಗಿ ಹೇಳುತ್ತೇನೆ, ನೆನ್ನೆ ಸಂಜೆಯಿಂದಲೂ ರಷ್ಯನ್ ಭಾಷೆಯಲ್ಲಿ ಮಾತನಾಡುತ್ತಾ ಸಾಗುವ ಬಯಕೆ ಬಲವಾಗಿ ಹೆಚ್ಚುತ್ತಿದೆ.”

“ಹ್ಮ್, ಹೌದು; ನೀನು ಹಿಂದಿನ ವರ್ಷಗಳಲ್ಲಿ ಪೀಟರ್ಸ್‌ಬರ್ಗ್‌ನಲ್ಲೇ ವಾಸಮಾಡುತ್ತಿದ್ದೆಯಾ?”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

ಈ ಒಳ್ಳೆಯ ಸೇವಕನಿಗೆ, ತನ್ನ ವಿವೇಚನಾಶೀಲತೆಯಿಂದ ಕೂಡಿದ ನಿಷ್ಠುರತೆಯ ಸ್ವಭಾವದ ಹೊರತಾಗಿಯೂ, ಈ ರೀತಿಯ ಸೌಮ್ಯವಾದ ಮತ್ತು ಒಪ್ಪುವಂತ ಸಂಭಾಷಣೆಯನ್ನ ಮುಂದುವರಿಸುವ ಚಪಲವನ್ನ ನಿಗ್ರಹಿಸಿಕೊಳ್ಳಲಾಗಲಿಲ್ಲ.

“ಪೀಟರ್ಸ್‌ಬರ್ಗ್‌ನಲ್ಲಾ? ಇಲ್ಲ, ನಾನೆಂದೂ ಇರಲಿಲ್ಲ. ಈಗ ಎಲ್ಲರೂ ಹೇಳುತ್ತಾರೆ ಎಷ್ಟೊಂದು ಬದಲಾಗಿದೆ ಎಂದು, ಮತ್ತು ಈ ನಗರವನ್ನ ಚೆನ್ನಾಗಿ ಬಲ್ಲವರೂ ಕೂಡ ಅವರಿಗೆ ಗೊತ್ತಿದ್ದುದನ್ನೆಲ್ಲಾ ಪುನಃ ಕಲಿಯಬೇಕೆನ್ನುತ್ತಾರೆ. ಎಲ್ಲರೂ ಇಲ್ಲಿನ ಹೊಸ ನ್ಯಾಯಾಲಯಗಳ ಬಗ್ಗೆ ಮತ್ತು ಅಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಬಹಳಷ್ಟು ಮಾತನಾಡಿಕೊಳ್ಳುತ್ತಾರೆ. ಹೌದಲ್ಲವಾ?”

“ಹೂ ಹೌದು! ಅದು ನಿಜವೇನೋ ಸರಿ. ಈಗ, ನೀನಿದ್ದ ದೇಶದಲ್ಲಿ ಕಾನೂನಿನ ವ್ಯವಸ್ಥೆ ಹೇಗಿದೆ, ಅಲ್ಲಿ ಕಾನೂನನ್ನು ಇಲ್ಲಿಗಿಂತ ಹೆಚ್ಚು ನ್ಯಾಯಯುತವಾಗಿ ನಿರ್ವಹಿಸುತ್ತಾರ?”

“ಓ, ನನಗದರ ಬಗ್ಗೆ ತಿಳಿದಿಲ್ಲ! ನಮ್ಮ ಕಾನೂನು ನಿರ್ವಹಣಾ ವ್ಯವಸ್ಥೆಯ ಬಗ್ಗೆ ಸಾಕಷ್ಟು ಒಳ್ಳೆಯದನ್ನ ಕೇಳಿದ್ದೀನಿ ಕೂಡ. ಒಂದು ವಿಷಯ ಎಂದರೆ ಇಲ್ಲಿ ಮರಣದಂಡನೆಯ ಶಿಕ್ಷೆ ಜಾರಿಯಲ್ಲಿಲ್ಲ.”

“ಅಲ್ಲೆಲ್ಲಾ ಅದು ಇದೆಯೇ?”

“ಹೌದು.. ನಾನೊಂದು ಮರಣದಂಡನೆಯ ಪ್ರಕ್ರಿಯೆಯನ್ನ ಫ್ರಾನ್ಸಿನಲ್ಲಿ ಕಣ್ಣಾರೆ ನೋಡಿದ್ದೇನೆ…. ಲಿಯೋನ್ಸ್ ಎಂಬ ಜಾಗದಲ್ಲಿ. ಶ್ನೈಡರ್ ಅದನ್ನು ನನಗೆ ತೋರಿಸಲೋಸುಗವೇ ಅಲ್ಲಿಗೆ ನನ್ನನ್ನು ತಮ್ಮ ಜೊತೆಯಲ್ಲಿ ಕರೆದೊಯ್ದಿದ್ದರು.”

“ಏನು, ಆ ವ್ಯಕ್ತಿಯನ್ನ ನೇಣುಗಂಬಕ್ಕೆ ಏರಿಸಿದರೆ?”

“ಇಲ್ಲ ಫ್ರಾನ್ಸಿನಲ್ಲಿ ಜನಗಳ ತಲೆಯನ್ನ ಕತ್ತರಿಸಿಬಿಡುತ್ತಾರೆ.”

“ಆ ಅಪರಾಧಿ ಏನು ಮಾಡಿದ? ಜೋರಾಗಿ ಕಿರುಚಿಕೊಂಡನೇ?”

“ಓ ಇಲ್ಲ, ಅದೊಂದು ಕ್ಷಣದಲ್ಲಿ ನಡೆಯುವ ಕೆಲಸ. ಅವರು ಮನುಷ್ಯನನ್ನು ಒಂದು ಚೌಕಟ್ಟಿನಲ್ಲಿ ಬಗ್ಗಿ ಕೂರುವಂತೆ ಮಾಡುತ್ತಾರೆ ಮತ್ತು ಒಂದು ಅಗಲವಾದ ಹರಿತವಾದ ಚಾಕು ಯಂತ್ರವೊಂದರ ಮೂಲಕ ಮೇಲಿನಿಂದ ಅವನ ಕತ್ತಿನ ಮೇಲೆ ಬೀಳುತ್ತದೆ, ಅದು ಅತಿ ಭಯಂಕರವಾದ ಭಾರದಿಂದ ಕೂಡಿರುತ್ತದೆ. ಅದನ್ನ ಗಿಲೊಟಿನ್ ಎಂದು ಕರೆಯುತ್ತಾರೆ. ಇಡೀ ತಲೆಯ ಭಾಗವನ್ನು ಕತ್ತರಿಸಿಬಿಡಲು ವೇಗದಿಂದ ಕೆಳಗೆ ಬೀಳುತ್ತದೆ. ಕಣ್ಣು ಮಿಟುಕಿಸುವಷ್ಟೂ ಸಮಯವಿರುವುದಿಲ್ಲ. ಆದರೆ ಅದಕ್ಕಾಗಿ ನಡೆಯುವ ತಯ್ಯಾರಿ ಮಾತ್ರ ಭಯಂಕರ. ಅವರು ಮರಣದಂಡನೆಯ ತೀರ್ಪನ್ನ ಓದುತ್ತಾರೆ, ನಿನಗೆ ಗೊತ್ತಾ, ಅಪರಾಧಿಯ ಕೈಗಳನ್ನ ಕಟ್ಟುವುದರ ಮೂಲಕ ತಯಾರಿ ನಡೆಸುತ್ತಾರೆ ಮತ್ತು ಅವನನ್ನು ಗಾಡಿಯಲ್ಲಿ ವಧಾಸ್ಥಾನದ ಬಳಿಗೆ ಒಯ್ಯುತ್ತಾರೆ, ಮತ್ತು ಈ ಮರಣದಂಡನೆ ಪ್ರಕ್ರಿಯೆಯಲ್ಲಿ ಅತ್ಯಂತ ಭಯ ಹುಟ್ಟಿಸುವ ಭಾಗವೇ ಇದು. ಸುತ್ತಲೂ ಜನರು ಗುಂಪು ಕಟ್ಟಿಕೊಂಡು ನಿಲ್ಲುತ್ತಾರೆ. ಹೆಂಗಸರೂ ಕೂಡ. ಆದರೆ ಹೆಂಗಸರುಗಳು ಬಂದು ನೋಡುವುದನ್ನು ಅವರು ಉತ್ತೇಜಿಸುವುದೇ ಇಲ್ಲ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-3)

“ಇಲ್ಲ, ಇಲ್ಲ, ಇದೆಲ್ಲಾ ಹೆಂಗಸರು ನೋಡುವಂತಹುದಲ್ಲ.”

“ಇಲ್ಲ ಖಂಡಿತ ಇಲ್ಲ! ಅಬ್ಬಾ! ಆ ಅಪರಾಧಿ ಒಬ್ಬ ಅಪ್ಪಟ ಬುದ್ಧಿವಂತ ಧೈರ್ಯಶಾಲಿ ಮನುಷ್ಯ; ಲೆ ಗ್ರಾಸ್ ಎನ್ನುವುದು ಅವನ ಹೆಸರಾಗಿತ್ತು; ಮತ್ತು ನಾನು ಇನ್ನೊಂದು ಮಾತು ಹೇಳುತ್ತೇನೆ, ನಿನಗಿಷ್ಟ ಬಂದಂತೆ, ನಂಬಿದರೆ ನಂಬು ಬಿಟ್ಟರೆ ಬಿಡು, ಅವನು ವಧ್ಯಶಿಲೆಯನ್ನ ಹತ್ತುವಾಗ ಅಳುವುದಕ್ಕೆ ಶುರುಮಾಡಿದ, ಖಂಡಿತವಾಗಿಯೂ ಅವನು ಅಳುತ್ತಿದ್ದ, ಅವನೊಂದು ಬಿಳಿಯ ಹಾಳೆಯಂತೆ ಬಿಳಿಚಿಕೊಂಡಿದ್ದ. ಅವನು ಅಳುತ್ತಿದ್ದದ್ದು- ಅಳುತ್ತಾ ಇದ್ದುದು ಒಂದು ಭಯಾನಕವಾದ ದೃಶ್ಯವಲ್ಲವೇ? ಯಾರಾದರೂ ಕೂಡ ಒಬ್ಬ ವಯಸ್ಕನಾದ ಮನುಷ್ಯ ಭಯದಿಂದ ಅಳುವುದನ್ನ ಕೇಳಿದರೆ- ಮಗುವಲ್ಲ, ಒಬ್ಬ ನಲವತ್ತೈದು ವರ್ಷದ ವಯಸ್ಕ, ಹಿಂದೆಂದೂ ತನ್ನ ಜೀವನದಲ್ಲೇ ಅಳದೇ ಇದ್ದ ವ್ಯಕ್ತಿ, ಅವನ ಮನಸ್ಸಿನಲ್ಲಿ ಆ ಕ್ಷಣದಲ್ಲಿ ಏನು ನಡೆಯುತ್ತಿರಬಹುದು ಅನ್ನುವುದನ್ನ ಕಲ್ಪಿಸಿಕೊ; ಯಾವ ರೀತಿಯ ಘೋರವಾದ ಪ್ರಕ್ಷುಬ್ಧತೆಯನ್ನ ಅವನ ಆತ್ಮ ಸಹಿಸಿದ್ದಿರಬೇಕು; ಇದೊಂದು ಆತ್ಮದ ಮೇಲೆ ಎಸಗುತ್ತಿರುವ ಹೀನಾಯವಾದ ಆಕ್ರೋಶ. ಅದಲ್ಲದೆ ಬೇರೇನೂ ಅಲ್ಲ. ಅದು ’ನೀನು ಯಾರನ್ನೂ ಕೊಲ್ಲುವುದಿಲ್ಲ (Though shall not kill)’ ಎಂದು ಹೇಳಿದೆಯೆಂಬ ಕಾರಣಕ್ಕೆ, ಅವನು ಇನ್ನೊಬ್ಬರನ್ನ ಕೊಂದ ಎಂಬ ಕಾರಣ ನೀಡಿ ಅವನನ್ನ ಕೊಲೆಮಾಡಬೇಕೆ? ಇಲ್ಲ ಇದು ಸರಿಯಲ್ಲ, ಇದೊಂದು ಅಸಿಂಧು ಎನ್ನಬಹುದಾದಂತಹ ಸಿದ್ಧಾಂತ. ನಾನು ನಿನಗೆ ಈಗ ಹೇಳುತ್ತಿರುವುದು ಒಂದು ತಿಂಗಳ ಹಿಂದೆಯಷ್ಟೇ ನೋಡಿದ ಘಟನೆ ಮತ್ತು ಅದು ನನ್ನ ಕಣ್ಣ ಮುಂದೆ ಇಲ್ಲಿಯವರೆಗೂ ವಿಕಟ ನರ್ತನ ಮಾಡುತ್ತಲೇ ಇದೆ. ನಾನು ಆ ಭಯಾನಕ ದೃಶ್ಯವನ್ನ ಆಗಾಗ ಕನಸಿನಲ್ಲಿ ಕಾಣುತ್ತಲೇ ಇರುತ್ತೇನೆ.”

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...