Homeಮುಖಪುಟಯಾವ ಭಗವದ್ಗೀತೆ ಅನುಸರಿಸಬೇಕು?

ಯಾವ ಭಗವದ್ಗೀತೆ ಅನುಸರಿಸಬೇಕು?

- Advertisement -
- Advertisement -

ಇತ್ತೀಚೆಗೆ ಬೆಂಗಳೂರಿನಲ್ಲಿ ಇಸ್ಕಾನ್ ಸಂಸ್ಥೆ ’ಗೀತಾ ದಾನ ಯಜ್ಞ ಮಹೋತ್ಸವ’ ಆಚರಿಸಿದೆ ಮತ್ತು ಭಗವದ್ಗೀತೆಯ ಒಂದು ಲಕ್ಷ ಪ್ರತಿಗಳನ್ನು ಹಂಚಲು ನಿರ್ಧರಿಸಿದೆ. ಯಜ್ಞದಲ್ಲಿ ಭಾಗವಹಿಸಿದ ಭಾರತದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರು ಗೀತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಗೀತೆಯನ್ನು ಶಾಲಾ-ಕಾಲೇಜುಗಳಲ್ಲಿ ಪಠ್ಯವನ್ನಾಗಿ ಮಾಡಬೇಕೆಂದು ಕರ್ನಾಟಕದ ವಿದ್ಯಾ ಮಂತ್ರಿಗಳು ಹೇಳಿದ್ದಾರೆ. ಹಾಗೆಯೇ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಕಟೀಲರೂ ಹೇಳಿದ್ದಾರೆ. ಸಾಲದ್ದಕ್ಕೆ ಭಗವದ್ಗೀತೆ ಎಲ್ಲರಿಗೂ ಸ್ಫೂರ್ತಿ ಹಾಗೂ ಪ್ರೇರಣಾದಾಯಕ ಎಂದು ಉಡುಪಿ ವಿಶ್ವಪ್ರಸನ್ನತೀರ್ಥರು ಹೇಳಿದ್ದಾರೆ.

ಆದರೆ ಇವರು ಯಾವ ಗೀತೆಯ ಬಗ್ಗೆ ಹೇಳುತ್ತಿದ್ದಾರೆ? ಹಿಂದೂಗಳ ಸರಿಸುಮಾರು ಎಲ್ಲಾ ಧರ್ಮ ಗ್ರಂಥಗಳಲ್ಲಿ ಆಗಿರುವಂತೆ ಗೀತೆಯಲ್ಲಿಯೂ ಕಲಬೆರಕೆಯಾಗಿರುವುದರಿಂದ ಇವರು ಕಲಬೆರಕೆಯಾಗಿರುವ ಗೀತೆಯ ಬಗ್ಗೆ ಹೇಳುತ್ತಿದ್ದಾರೆಯೋ ಅಥವಾ ಕಲಬೆರಕೆಯಾಗುವ ಮೊದಲಿನ ಗೀತೆಯ ಬಗ್ಗೆ ಹೇಳುತ್ತಿದ್ದಾರೆಯೋ? ಯಾವ ಶ್ಲೋಕಗಳು ಮೂಲ ಗೀತೆಯಲ್ಲಿದ್ದವು, ಯಾವ ಶ್ಲೋಕಗಳನ್ನು ನಂತರ ಬೆರೆಸಲಾಗಿದೆ ಎಂದು ಇವರಿಗೆ ಹೇಳುವುದಕ್ಕೆ ಸಾಧ್ಯವಿದೆಯೇ? ’ಸ್ಫೂರ್ತಿದಾಯಕವಾದ ಹಾಗೂ ಪ್ರೇರಣಾದಾಯಕವಾದ’ ಶ್ಲೋಕಗಳು ಮೂಲ ಗೀತೆಯಲ್ಲಿದ್ದವೇ ಅಥವಾ ಅವುಗಳನ್ನು ನಂತರ ಕಲಬೆರಕೆ ಮಾಡಲಾಯಿತೇ? ಒಟ್ಟಿನಲ್ಲಿ ಇಂದು ಇಡೀ ಗೀತೆಯೇ ಸಂಶಯಾಸ್ಪದ ಗ್ರಂಥವಾಗಿ ಅದರ ವಿಶ್ವಾಸಾರ್ಹತೆಯೇ ಇಲ್ಲದಂತಾಗಿದೆ.

ಇಂದು ಪ್ರಚಲಿತವಾಗಿರುವ ಗೀತೆಯಲ್ಲಿ 700 ಶ್ಲೋಕಗಳಿವೆ. ಅವುಗಳಲ್ಲಿ 574 ಕೃಷ್ಣ ಹೇಳಿದ್ದು, 84 ಅರ್ಜುನ ಹೇಳಿದ್ದು, 41 ಸಂಜಯ ಹೇಳಿದ್ದು ಹಾಗೂ 1 ಧೃತರಾಷ್ಟ್ರ ಹೇಳಿದ್ದು. ಆದರೆ ಮಹಾಭಾರತದ ಭೀಷ್ಮಪರ್ವದ 43ನೆಯ ಅಧ್ಯಾಯದಲ್ಲಿ ಒಂದು ಶ್ಲೋಕ ಹೀಗೆ ಹೇಳುತ್ತದೆ: ’ಷಟ್‌ಶತಾನಿ ಸಂವಿಶಾನಿ ಶ್ಲೋಕಾನಾಂ ಪ್ರಾಹ ಕೇಶವಃ, ಅರ್ಜುನಃ ಸಪ್ತಪಂಚಾಶತ್ಸಪ್ತಷಷ್ಠಿಂ ತು ಸಂಜಯಃ, ಧೃತರಾಷ್ಟ್ರಃ ಶ್ಲೋಕಮೇಕಂ ಗೀತಾಯಾ ಮಾನಮುಚ್ಯತೆ’. ಅಂದರೆ ಗೀತೆಯಲ್ಲಿ ಕೃಷ್ಣ ಹೇಳಿದ 620, ಅರ್ಜುನ ಹೇಳಿದ 57, ಸಂಜಯ ಹೇಳಿದ 68 ಹಾಗೂ ಧೃತರಾಷ್ಟ್ರ ಹೇಳಿದ 1 ಶ್ಲೋಕಗಳು ಇವೆ ಎಂದು ಮೇಲಿನ ಸಾಲು ಹೇಳುತ್ತದೆ. ಆದರೆ ಈ ಶ್ಲೋಕದ ಪ್ರಕಾರ ಗೀತೆಯಲ್ಲಿರುವ ಶ್ಲೋಕಗಳ ಮೊತ್ತ 746 ಆಗುತ್ತದೆ. ಅಂದರೆ ಇಂದು ಲಭ್ಯವಿರುವ ಗೀತೆಯಲ್ಲಿ ಕೃಷ್ಣ ಹೇಳಿದ ಶ್ಲೋಕಗಳಲ್ಲಿ 46 ಕಡಿಮೆ ಇವೆ, ಸಂಜಯ ಹೇಳಿದ ಶ್ಲೋಕಗಳಲ್ಲಿ 27 ಕಡಿಮೆ ಇವೆ ಹಾಗೂ ಅರ್ಜುನ ಹೇಳಿದ ಶ್ಲೋಕಗಳಲ್ಲಿ 27 ಶ್ಲೋಕಗಳು ಹೆಚ್ಚಿಗಿವೆ ಎಂದಾಯಿತು.

ಮಹಾಭಾರತದ ಈ ಶ್ಲೋಕ ಮಹಾಭಾರತದ ಹಲವು ಆವೃತ್ತಿಗಳಲ್ಲಿ ಲಭ್ಯವಿದ್ದರೂ ಹಲವು ಆವೃತ್ತಿಗಳಲ್ಲಿ ಲಭ್ಯವಿರುವುದಿಲ್ಲ. ಉದಾಹರಣೆಗೆ ಈ ಶ್ಲೋಕ ಪುಣೆಯ ಭಂಡಾರಕರ ಓರಿಎಂಟಲ್ ರಿಸರ್ಚ ಇನ್ಸ್ಟಿಟ್ಯೂಟಿನ ಆವೃತ್ತಿಯಲ್ಲಿ ಲಭ್ಯವಿಲ್ಲ ಆದರೆ ಗೋರಖಪುರದ ಗೀತಾ ಪ್ರೆಸ್ ಪ್ರಕಟಿಸಿರುವ ಆವೃತ್ತಿಯಲ್ಲಿ ಲಭ್ಯವಿರುತ್ತದೆ. ಹಾಗಾದರೆ ಮಹಾಭಾರತದ ಈ ಶ್ಲೋಕವನ್ನು ಪ್ರಾಮಾಣಿಕವೆಂದು ನಂಬಿದರೆ ಗೀತೆಯಲ್ಲಿ ಕಲಬೆರಕೆಯಾಗಿದೆ ಎಂಬುವುದನ್ನು ಒಪ್ಪಬೇಕಾಗುತ್ತದೆ. ಆದರೆ ಗೀತೆಯ 700 ಶ್ಲೋಕಗಳನ್ನು ಪ್ರಾಮಾಣಿಕ ಎಂದು ನಂಬಿದರೆ, ಮಹಾಭಾರತದ ಈ ಶ್ಲೋಕವನ್ನು ಕಲಬೆರಕೆಯಾದುದು ಎಂದು ನಂಬಬೇಕಾಗುತ್ತದೆ. ಎರಡೂ ಶ್ಲೋಕಗಳು ಬರುವುದು ಮಹಾಭಾರತದ ಭೀಷ್ಮಪರ್ವದಲ್ಲಿಯೇ ಅಂದ ಮೇಲೆ ಇವೆರಡರಲ್ಲಿ ಯಾವುದನ್ನು ಪ್ರಾಮಾಣಿಕ, ಯಾವುದನ್ನು ಕಲಬೆರಕೆ ಎಂದು ಹೇಳುವುದು? ಯಾವುದನ್ನೋ ಒಪ್ಪುವುದಾದರೆ ಹಾಗೆ ಹೇಳಲು ಆಧಾರಗಳೇನು?

ಇದನ್ನೂ ಓದಿ: ಭಗವದ್ಗೀತೆಯಲ್ಲಿ ಅದ್ಯಾವ ನೈತಿಕ ಶಿಕ್ಷಣವಿದೆ?

ಸಂದರ್ಭ ಹಾಗೂ ಆಂತರಿಕ ವಿರೋಧಾಭಾಸ ಮೊದಲಾದವುಗಳ ಆಧಾರದ ಮೇಲೆ ಇಂತಹ ಕಲಬೆರಕೆಗಳನ್ನು ಗುರುತಿಸುವುದು ಸಾಧ್ಯವಿಲ್ಲ ಯಾಕೆಂದರೆ ಈ ಕಲಬೆರಕೆಗಳನ್ನು ಅತ್ಯಂತ ಚಾತುರ್ಯದಿಂದ ಅಳವಡಿಸಲಾಗಿದೆ ಎನ್ನುತ್ತಾರೆ ಮಹಾಭಾರತದ ಸಂಪಾದನೆಯಲ್ಲಿ ಭಾಗವಹಿಸಿದ ಪ್ರತಾಪ ಚಂದ್ರ ರಾಯ್ ಅವರು.

ತಮಾಷೆ ಎಂದರೆ ಭೀಷ್ಮ ಪರ್ವದಲ್ಲಿ ಸ್ವತಃ ಕೃಷ್ಣನೇ ತಾನು ಉಪದೇಶಿಸಿದ ಗೀತೆಯನ್ನು ಅಶ್ವಮೇಧಿಕ ಪರ್ವದ ಹೊತ್ತಿಗೆ ಅಂದರೆ ಯುದ್ಧದ ನಂತರ ಯುಧಿಷ್ಠಿರ ಅಶ್ವಮೇಧ ಯಜ್ಞವನ್ನು ಮಾಡುವ ಹೊತ್ತಿಗೆ ಮರೆತುಬಿಟ್ಟಿದ್ದ. ಮಹಾಭಾರತದ ಅಶ್ವಮೇಧಿಕ ಪರ್ವದಲ್ಲಿ ಅರ್ಜುನ ಕೃಷ್ಣನಿಗೆ ಗೀತೆಯನ್ನು ಪುನಃ ಉಪದೇಶಿಸುವಂತೆ ಕೇಳಿದಾಗ ಕೃಷ್ಣ ’ಸ ಹಿ ಧಮಃ ಸುಪರ್ಯಾಪ್ತೋ ಬ್ರಹ್ಮಣಃ ಪದವೇದನೇ, ನ ಶಕ್ಯಂ ತನ್ಮಯಾ ಭೂಯಸ್ತಥಾ ವಕ್ತುಂ ಅಶೇಷತಃ’ ಎನ್ನುತ್ತಾನೆ. ತಾನು ಅದನ್ನು ಮರೆತುದಾಗಿಯೂ, ಆದುದರಿಂದ ಪುನರುಪದೇಶಿಸಲು ತನಗೆ ಸಾಧ್ಯವಿಲ್ಲ ಎಂದೂ ಹೇಳುತ್ತಾನೆ. ತಾನೇ ಉಪದೇಶಿಸಿದ ಗೀತೆಯನ್ನು ಸ್ವತಃ ಕೃಷ್ಣನೇ ಮರೆತಿದ್ದ ಎಂದ ಮೇಲೆ ಪಾಂಡವರ ಸ್ವರ್ಗಾರೋಹಣ ಆದ ಮೇಲೆ ಮಹಾಭಾರತವನ್ನು ಬರೆದವನಿಗೆ ಅದು ಹೇಗೆ ನೆನಪಿರಲು ಸಾಧ್ಯ? ಹಾಗಾದರೆ ಮೂಲ ಗೀತೆಯ ವಿಶ್ವಾಸಾರ್ಹತೆಯನ್ನು ಸ್ಥಾಪಿಸುವುದು ಹೇಗೆ?

ಹಾಗಾದರೆ ಯಾರು, ಯಾಕೆ ಮತ್ತು ಯಾವ್ಯಾವ ಶ್ಲೋಕಗಳನ್ನು ತೆಗೆದು ಹಾಕಿ ಯಾವ ಹೊಸ ಶ್ಲೋಕಗಳನ್ನು ಸೇರಿಸಿದ್ದಾರೆ ಎಂದು ಕಂಡುಕೊಳ್ಳುವುದು ಹೇಗೆ? ಕೃಷ್ಣ ಹೇಳಿದ ಶ್ಲೋಕಗಳಲ್ಲಿ 100 ಶ್ಲೋಕಗಳನ್ನು ತೆಗೆದು ಹಾಕಿ 54 ಹೊಸ ಶ್ಲೋಕಗಳನ್ನು ಸೇರಿಸಿದ್ದರೂ ಮೊತ್ತ ಅಷ್ಟೇ ಉಳಿಯುವುದರಿಂದ ಈಗ ಕೃಷ್ಣ ಹೇಳಿದ ಎನ್ನಲಾಗುವ 574 ಶ್ಲೋಕಗಳು ಮೂಲ ಗೀತೆಯಲ್ಲಿಯೂ ಇದ್ದವು, ಅವು ಕೃಷ್ಣನೇ ಹೇಳಿದ ಶ್ಲೋಕಗಳು ಎಂದು ಪ್ರಮಾಣೀಕರಿಸುವುದು ಹೇಗೆ?

ಹಿಂದೂ ಧರ್ಮ ಗ್ರಂಥಗಳಲ್ಲಿ ಹಿಗ್ಗಾಮುಗ್ಗಾ ಕಲಬೆರಕೆ ಮಾಡಿರುವುದನ್ನು ಮಹಾಭಾರತವೂ ಒಪ್ಪುತ್ತದೆ, ಮನುವೂ ಒಪ್ಪುತ್ತಾನೆ. ಯಜ್ಞಗಳಲ್ಲಿ ಹೆಂಡ, ಮೀನು, ಮಾಂಸ ಮೊದಲಾದವುಗಳಿಗೆ ಅವಕಾಶವಿಲ್ಲದಿದ್ದರೂ ಧೂರ್ತರು ಅವುಗಳ ಬಗ್ಗೆ ತಮಗಿರುವ ದುರಾಸೆಯಿಂದಾಗಿ ಅವುಗಳನ್ನು ಸೇರಿಸಿದ್ದಾರೆ ಎಂದು ಮಹಾಭಾರತ ಹೇಳುತ್ತದೆ. “ಸುರಾ ಮತ್ಸ್ಯಾ ಮಧು ಮಾಂಸಮಾಸವಂ ಕೃಸರೌದನಮ್, ಧೂತೈಃ ಪ್ರವರ್ತಿತ ಹ್ರೋತನ್ನೈತದ್ ವೇದೇಷು ಕಲ್ಪಿತಮ್, ಮಾನಾನ್ಮೋಹಾಚ್ಚ ಲೋಭಾಚ್ಚ ಲೌಲ್ಯಮೆತತ್ಪ್ರಕಲ್ಪಿತಮ” (ಮಹಾಭಾರತ, ಶಾಂತಿ ಪರ್ವ 264.9-10). ಮನುಸ್ಮೃತಿಯ 9ನೆಯ ಅಧ್ಯಾಯದ 66ನೆಯ ಶ್ಲೋಕ ಹೀಗೆ ಹೇಳುತ್ತದೆ: “ಅಯಂ ದ್ವಿಜೈರ್ಹಿ ವಿದ್ವದ್ಭಿಃ ಪಶುಧರ್ಮೋ ವಿಗರ್ಹಿತಃ, ಮನುಷ್ಯಾಣಾಮಪಿ ಪ್ರೊಕ್ತೋ ವೇನೇ ರಾಜ್ಯಂ ಪ್ರಶಾಸತಿ”, ಅಂದರೆ ವೇಣನೆಂಬ ರಾಜನು ರಾಜ್ಯಭಾರ ಮಾಡುತ್ತಿದ್ದಾಗ ಇಂತಹ ಮೃಗೀಯ ಆಚರಣೆಗಳನ್ನು ಅಜ್ಞಾನಿ ದ್ವಿಜರಿಂದ ಸೇರಿಸಲಾಯಿತು. ಯಜ್ಞದಂತಹ ಪವಿತ್ರ ಆಚರಣೆಯಲ್ಲಿಯೇ ಕಲಬೆರಕೆ ಮಾಡುವವರು ಇನ್ನು ಗ್ರಂಥಗಳನ್ನು ಬಿಟ್ಟಾರೆಯೇ?

ಇಂತಹ ಕಲಬೆರಕೆಗಳನ್ನು ಯಾರು ಮಾಡಲು ಸಾಧ್ಯ? ಹಾಗೆ ಮಾಡಲು ಮೊದಲನೆಯದಾಗಿ ಅವರಿಗೆ ಸಂಸ್ಕೃತ ಭಾಷೆಯ ಜ್ಞಾನವಿರಬೇಕು. ಎರಡನೆಯದಾಗಿ ಅವರು ಆ ಗ್ರಂಥಗಳ ಸ್ವಾಧೀನವನ್ನು ಪಡೆದಿರಬೇಕು. ಶೂದ್ರರಂತೂ ಮಾಡಿರಲಾರರು ಏಕೆಂದರೆ ಮನು ಸ್ಪಷ್ಟವಾಗಿಯೇ ದ್ವಿಜರನ್ನು ದೂಷಿಸುತ್ತಾನೆ. ಅಂಥವರು ಯಾರು ಎಂಬುದು ಓದುಗರ ಕಲ್ಪನೆಗೇ ಬಿಟ್ಟ ವಿಷಯ. ಆದರೆ ಜನಸಾಮಾನ್ಯರಿಗಿರುವ ಪ್ರಶ್ನೆ ಎಂದರೆ ಯಾವ ಶ್ಲೋಕಗಳನ್ನು ಪ್ರಾಮಾಣಿಕ ಎಂದು ಪರಿಗಣಿಸಿ ಅನುಸರಿಸಬೇಕು, ಆ ಶ್ಲೋಕಗಳು ಅನುಕರಣಯೋಗ್ಯವೇ ಎನ್ನುವುದು.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...