Homeಮುಖಪುಟಯಾವ ಭಗವದ್ಗೀತೆ ಅನುಸರಿಸಬೇಕು?

ಯಾವ ಭಗವದ್ಗೀತೆ ಅನುಸರಿಸಬೇಕು?

- Advertisement -
- Advertisement -

ಇತ್ತೀಚೆಗೆ ಬೆಂಗಳೂರಿನಲ್ಲಿ ಇಸ್ಕಾನ್ ಸಂಸ್ಥೆ ’ಗೀತಾ ದಾನ ಯಜ್ಞ ಮಹೋತ್ಸವ’ ಆಚರಿಸಿದೆ ಮತ್ತು ಭಗವದ್ಗೀತೆಯ ಒಂದು ಲಕ್ಷ ಪ್ರತಿಗಳನ್ನು ಹಂಚಲು ನಿರ್ಧರಿಸಿದೆ. ಯಜ್ಞದಲ್ಲಿ ಭಾಗವಹಿಸಿದ ಭಾರತದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರು ಗೀತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಗೀತೆಯನ್ನು ಶಾಲಾ-ಕಾಲೇಜುಗಳಲ್ಲಿ ಪಠ್ಯವನ್ನಾಗಿ ಮಾಡಬೇಕೆಂದು ಕರ್ನಾಟಕದ ವಿದ್ಯಾ ಮಂತ್ರಿಗಳು ಹೇಳಿದ್ದಾರೆ. ಹಾಗೆಯೇ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಕಟೀಲರೂ ಹೇಳಿದ್ದಾರೆ. ಸಾಲದ್ದಕ್ಕೆ ಭಗವದ್ಗೀತೆ ಎಲ್ಲರಿಗೂ ಸ್ಫೂರ್ತಿ ಹಾಗೂ ಪ್ರೇರಣಾದಾಯಕ ಎಂದು ಉಡುಪಿ ವಿಶ್ವಪ್ರಸನ್ನತೀರ್ಥರು ಹೇಳಿದ್ದಾರೆ.

ಆದರೆ ಇವರು ಯಾವ ಗೀತೆಯ ಬಗ್ಗೆ ಹೇಳುತ್ತಿದ್ದಾರೆ? ಹಿಂದೂಗಳ ಸರಿಸುಮಾರು ಎಲ್ಲಾ ಧರ್ಮ ಗ್ರಂಥಗಳಲ್ಲಿ ಆಗಿರುವಂತೆ ಗೀತೆಯಲ್ಲಿಯೂ ಕಲಬೆರಕೆಯಾಗಿರುವುದರಿಂದ ಇವರು ಕಲಬೆರಕೆಯಾಗಿರುವ ಗೀತೆಯ ಬಗ್ಗೆ ಹೇಳುತ್ತಿದ್ದಾರೆಯೋ ಅಥವಾ ಕಲಬೆರಕೆಯಾಗುವ ಮೊದಲಿನ ಗೀತೆಯ ಬಗ್ಗೆ ಹೇಳುತ್ತಿದ್ದಾರೆಯೋ? ಯಾವ ಶ್ಲೋಕಗಳು ಮೂಲ ಗೀತೆಯಲ್ಲಿದ್ದವು, ಯಾವ ಶ್ಲೋಕಗಳನ್ನು ನಂತರ ಬೆರೆಸಲಾಗಿದೆ ಎಂದು ಇವರಿಗೆ ಹೇಳುವುದಕ್ಕೆ ಸಾಧ್ಯವಿದೆಯೇ? ’ಸ್ಫೂರ್ತಿದಾಯಕವಾದ ಹಾಗೂ ಪ್ರೇರಣಾದಾಯಕವಾದ’ ಶ್ಲೋಕಗಳು ಮೂಲ ಗೀತೆಯಲ್ಲಿದ್ದವೇ ಅಥವಾ ಅವುಗಳನ್ನು ನಂತರ ಕಲಬೆರಕೆ ಮಾಡಲಾಯಿತೇ? ಒಟ್ಟಿನಲ್ಲಿ ಇಂದು ಇಡೀ ಗೀತೆಯೇ ಸಂಶಯಾಸ್ಪದ ಗ್ರಂಥವಾಗಿ ಅದರ ವಿಶ್ವಾಸಾರ್ಹತೆಯೇ ಇಲ್ಲದಂತಾಗಿದೆ.

ಇಂದು ಪ್ರಚಲಿತವಾಗಿರುವ ಗೀತೆಯಲ್ಲಿ 700 ಶ್ಲೋಕಗಳಿವೆ. ಅವುಗಳಲ್ಲಿ 574 ಕೃಷ್ಣ ಹೇಳಿದ್ದು, 84 ಅರ್ಜುನ ಹೇಳಿದ್ದು, 41 ಸಂಜಯ ಹೇಳಿದ್ದು ಹಾಗೂ 1 ಧೃತರಾಷ್ಟ್ರ ಹೇಳಿದ್ದು. ಆದರೆ ಮಹಾಭಾರತದ ಭೀಷ್ಮಪರ್ವದ 43ನೆಯ ಅಧ್ಯಾಯದಲ್ಲಿ ಒಂದು ಶ್ಲೋಕ ಹೀಗೆ ಹೇಳುತ್ತದೆ: ’ಷಟ್‌ಶತಾನಿ ಸಂವಿಶಾನಿ ಶ್ಲೋಕಾನಾಂ ಪ್ರಾಹ ಕೇಶವಃ, ಅರ್ಜುನಃ ಸಪ್ತಪಂಚಾಶತ್ಸಪ್ತಷಷ್ಠಿಂ ತು ಸಂಜಯಃ, ಧೃತರಾಷ್ಟ್ರಃ ಶ್ಲೋಕಮೇಕಂ ಗೀತಾಯಾ ಮಾನಮುಚ್ಯತೆ’. ಅಂದರೆ ಗೀತೆಯಲ್ಲಿ ಕೃಷ್ಣ ಹೇಳಿದ 620, ಅರ್ಜುನ ಹೇಳಿದ 57, ಸಂಜಯ ಹೇಳಿದ 68 ಹಾಗೂ ಧೃತರಾಷ್ಟ್ರ ಹೇಳಿದ 1 ಶ್ಲೋಕಗಳು ಇವೆ ಎಂದು ಮೇಲಿನ ಸಾಲು ಹೇಳುತ್ತದೆ. ಆದರೆ ಈ ಶ್ಲೋಕದ ಪ್ರಕಾರ ಗೀತೆಯಲ್ಲಿರುವ ಶ್ಲೋಕಗಳ ಮೊತ್ತ 746 ಆಗುತ್ತದೆ. ಅಂದರೆ ಇಂದು ಲಭ್ಯವಿರುವ ಗೀತೆಯಲ್ಲಿ ಕೃಷ್ಣ ಹೇಳಿದ ಶ್ಲೋಕಗಳಲ್ಲಿ 46 ಕಡಿಮೆ ಇವೆ, ಸಂಜಯ ಹೇಳಿದ ಶ್ಲೋಕಗಳಲ್ಲಿ 27 ಕಡಿಮೆ ಇವೆ ಹಾಗೂ ಅರ್ಜುನ ಹೇಳಿದ ಶ್ಲೋಕಗಳಲ್ಲಿ 27 ಶ್ಲೋಕಗಳು ಹೆಚ್ಚಿಗಿವೆ ಎಂದಾಯಿತು.

ಮಹಾಭಾರತದ ಈ ಶ್ಲೋಕ ಮಹಾಭಾರತದ ಹಲವು ಆವೃತ್ತಿಗಳಲ್ಲಿ ಲಭ್ಯವಿದ್ದರೂ ಹಲವು ಆವೃತ್ತಿಗಳಲ್ಲಿ ಲಭ್ಯವಿರುವುದಿಲ್ಲ. ಉದಾಹರಣೆಗೆ ಈ ಶ್ಲೋಕ ಪುಣೆಯ ಭಂಡಾರಕರ ಓರಿಎಂಟಲ್ ರಿಸರ್ಚ ಇನ್ಸ್ಟಿಟ್ಯೂಟಿನ ಆವೃತ್ತಿಯಲ್ಲಿ ಲಭ್ಯವಿಲ್ಲ ಆದರೆ ಗೋರಖಪುರದ ಗೀತಾ ಪ್ರೆಸ್ ಪ್ರಕಟಿಸಿರುವ ಆವೃತ್ತಿಯಲ್ಲಿ ಲಭ್ಯವಿರುತ್ತದೆ. ಹಾಗಾದರೆ ಮಹಾಭಾರತದ ಈ ಶ್ಲೋಕವನ್ನು ಪ್ರಾಮಾಣಿಕವೆಂದು ನಂಬಿದರೆ ಗೀತೆಯಲ್ಲಿ ಕಲಬೆರಕೆಯಾಗಿದೆ ಎಂಬುವುದನ್ನು ಒಪ್ಪಬೇಕಾಗುತ್ತದೆ. ಆದರೆ ಗೀತೆಯ 700 ಶ್ಲೋಕಗಳನ್ನು ಪ್ರಾಮಾಣಿಕ ಎಂದು ನಂಬಿದರೆ, ಮಹಾಭಾರತದ ಈ ಶ್ಲೋಕವನ್ನು ಕಲಬೆರಕೆಯಾದುದು ಎಂದು ನಂಬಬೇಕಾಗುತ್ತದೆ. ಎರಡೂ ಶ್ಲೋಕಗಳು ಬರುವುದು ಮಹಾಭಾರತದ ಭೀಷ್ಮಪರ್ವದಲ್ಲಿಯೇ ಅಂದ ಮೇಲೆ ಇವೆರಡರಲ್ಲಿ ಯಾವುದನ್ನು ಪ್ರಾಮಾಣಿಕ, ಯಾವುದನ್ನು ಕಲಬೆರಕೆ ಎಂದು ಹೇಳುವುದು? ಯಾವುದನ್ನೋ ಒಪ್ಪುವುದಾದರೆ ಹಾಗೆ ಹೇಳಲು ಆಧಾರಗಳೇನು?

ಇದನ್ನೂ ಓದಿ: ಭಗವದ್ಗೀತೆಯಲ್ಲಿ ಅದ್ಯಾವ ನೈತಿಕ ಶಿಕ್ಷಣವಿದೆ?

ಸಂದರ್ಭ ಹಾಗೂ ಆಂತರಿಕ ವಿರೋಧಾಭಾಸ ಮೊದಲಾದವುಗಳ ಆಧಾರದ ಮೇಲೆ ಇಂತಹ ಕಲಬೆರಕೆಗಳನ್ನು ಗುರುತಿಸುವುದು ಸಾಧ್ಯವಿಲ್ಲ ಯಾಕೆಂದರೆ ಈ ಕಲಬೆರಕೆಗಳನ್ನು ಅತ್ಯಂತ ಚಾತುರ್ಯದಿಂದ ಅಳವಡಿಸಲಾಗಿದೆ ಎನ್ನುತ್ತಾರೆ ಮಹಾಭಾರತದ ಸಂಪಾದನೆಯಲ್ಲಿ ಭಾಗವಹಿಸಿದ ಪ್ರತಾಪ ಚಂದ್ರ ರಾಯ್ ಅವರು.

ತಮಾಷೆ ಎಂದರೆ ಭೀಷ್ಮ ಪರ್ವದಲ್ಲಿ ಸ್ವತಃ ಕೃಷ್ಣನೇ ತಾನು ಉಪದೇಶಿಸಿದ ಗೀತೆಯನ್ನು ಅಶ್ವಮೇಧಿಕ ಪರ್ವದ ಹೊತ್ತಿಗೆ ಅಂದರೆ ಯುದ್ಧದ ನಂತರ ಯುಧಿಷ್ಠಿರ ಅಶ್ವಮೇಧ ಯಜ್ಞವನ್ನು ಮಾಡುವ ಹೊತ್ತಿಗೆ ಮರೆತುಬಿಟ್ಟಿದ್ದ. ಮಹಾಭಾರತದ ಅಶ್ವಮೇಧಿಕ ಪರ್ವದಲ್ಲಿ ಅರ್ಜುನ ಕೃಷ್ಣನಿಗೆ ಗೀತೆಯನ್ನು ಪುನಃ ಉಪದೇಶಿಸುವಂತೆ ಕೇಳಿದಾಗ ಕೃಷ್ಣ ’ಸ ಹಿ ಧಮಃ ಸುಪರ್ಯಾಪ್ತೋ ಬ್ರಹ್ಮಣಃ ಪದವೇದನೇ, ನ ಶಕ್ಯಂ ತನ್ಮಯಾ ಭೂಯಸ್ತಥಾ ವಕ್ತುಂ ಅಶೇಷತಃ’ ಎನ್ನುತ್ತಾನೆ. ತಾನು ಅದನ್ನು ಮರೆತುದಾಗಿಯೂ, ಆದುದರಿಂದ ಪುನರುಪದೇಶಿಸಲು ತನಗೆ ಸಾಧ್ಯವಿಲ್ಲ ಎಂದೂ ಹೇಳುತ್ತಾನೆ. ತಾನೇ ಉಪದೇಶಿಸಿದ ಗೀತೆಯನ್ನು ಸ್ವತಃ ಕೃಷ್ಣನೇ ಮರೆತಿದ್ದ ಎಂದ ಮೇಲೆ ಪಾಂಡವರ ಸ್ವರ್ಗಾರೋಹಣ ಆದ ಮೇಲೆ ಮಹಾಭಾರತವನ್ನು ಬರೆದವನಿಗೆ ಅದು ಹೇಗೆ ನೆನಪಿರಲು ಸಾಧ್ಯ? ಹಾಗಾದರೆ ಮೂಲ ಗೀತೆಯ ವಿಶ್ವಾಸಾರ್ಹತೆಯನ್ನು ಸ್ಥಾಪಿಸುವುದು ಹೇಗೆ?

ಹಾಗಾದರೆ ಯಾರು, ಯಾಕೆ ಮತ್ತು ಯಾವ್ಯಾವ ಶ್ಲೋಕಗಳನ್ನು ತೆಗೆದು ಹಾಕಿ ಯಾವ ಹೊಸ ಶ್ಲೋಕಗಳನ್ನು ಸೇರಿಸಿದ್ದಾರೆ ಎಂದು ಕಂಡುಕೊಳ್ಳುವುದು ಹೇಗೆ? ಕೃಷ್ಣ ಹೇಳಿದ ಶ್ಲೋಕಗಳಲ್ಲಿ 100 ಶ್ಲೋಕಗಳನ್ನು ತೆಗೆದು ಹಾಕಿ 54 ಹೊಸ ಶ್ಲೋಕಗಳನ್ನು ಸೇರಿಸಿದ್ದರೂ ಮೊತ್ತ ಅಷ್ಟೇ ಉಳಿಯುವುದರಿಂದ ಈಗ ಕೃಷ್ಣ ಹೇಳಿದ ಎನ್ನಲಾಗುವ 574 ಶ್ಲೋಕಗಳು ಮೂಲ ಗೀತೆಯಲ್ಲಿಯೂ ಇದ್ದವು, ಅವು ಕೃಷ್ಣನೇ ಹೇಳಿದ ಶ್ಲೋಕಗಳು ಎಂದು ಪ್ರಮಾಣೀಕರಿಸುವುದು ಹೇಗೆ?

ಹಿಂದೂ ಧರ್ಮ ಗ್ರಂಥಗಳಲ್ಲಿ ಹಿಗ್ಗಾಮುಗ್ಗಾ ಕಲಬೆರಕೆ ಮಾಡಿರುವುದನ್ನು ಮಹಾಭಾರತವೂ ಒಪ್ಪುತ್ತದೆ, ಮನುವೂ ಒಪ್ಪುತ್ತಾನೆ. ಯಜ್ಞಗಳಲ್ಲಿ ಹೆಂಡ, ಮೀನು, ಮಾಂಸ ಮೊದಲಾದವುಗಳಿಗೆ ಅವಕಾಶವಿಲ್ಲದಿದ್ದರೂ ಧೂರ್ತರು ಅವುಗಳ ಬಗ್ಗೆ ತಮಗಿರುವ ದುರಾಸೆಯಿಂದಾಗಿ ಅವುಗಳನ್ನು ಸೇರಿಸಿದ್ದಾರೆ ಎಂದು ಮಹಾಭಾರತ ಹೇಳುತ್ತದೆ. “ಸುರಾ ಮತ್ಸ್ಯಾ ಮಧು ಮಾಂಸಮಾಸವಂ ಕೃಸರೌದನಮ್, ಧೂತೈಃ ಪ್ರವರ್ತಿತ ಹ್ರೋತನ್ನೈತದ್ ವೇದೇಷು ಕಲ್ಪಿತಮ್, ಮಾನಾನ್ಮೋಹಾಚ್ಚ ಲೋಭಾಚ್ಚ ಲೌಲ್ಯಮೆತತ್ಪ್ರಕಲ್ಪಿತಮ” (ಮಹಾಭಾರತ, ಶಾಂತಿ ಪರ್ವ 264.9-10). ಮನುಸ್ಮೃತಿಯ 9ನೆಯ ಅಧ್ಯಾಯದ 66ನೆಯ ಶ್ಲೋಕ ಹೀಗೆ ಹೇಳುತ್ತದೆ: “ಅಯಂ ದ್ವಿಜೈರ್ಹಿ ವಿದ್ವದ್ಭಿಃ ಪಶುಧರ್ಮೋ ವಿಗರ್ಹಿತಃ, ಮನುಷ್ಯಾಣಾಮಪಿ ಪ್ರೊಕ್ತೋ ವೇನೇ ರಾಜ್ಯಂ ಪ್ರಶಾಸತಿ”, ಅಂದರೆ ವೇಣನೆಂಬ ರಾಜನು ರಾಜ್ಯಭಾರ ಮಾಡುತ್ತಿದ್ದಾಗ ಇಂತಹ ಮೃಗೀಯ ಆಚರಣೆಗಳನ್ನು ಅಜ್ಞಾನಿ ದ್ವಿಜರಿಂದ ಸೇರಿಸಲಾಯಿತು. ಯಜ್ಞದಂತಹ ಪವಿತ್ರ ಆಚರಣೆಯಲ್ಲಿಯೇ ಕಲಬೆರಕೆ ಮಾಡುವವರು ಇನ್ನು ಗ್ರಂಥಗಳನ್ನು ಬಿಟ್ಟಾರೆಯೇ?

ಇಂತಹ ಕಲಬೆರಕೆಗಳನ್ನು ಯಾರು ಮಾಡಲು ಸಾಧ್ಯ? ಹಾಗೆ ಮಾಡಲು ಮೊದಲನೆಯದಾಗಿ ಅವರಿಗೆ ಸಂಸ್ಕೃತ ಭಾಷೆಯ ಜ್ಞಾನವಿರಬೇಕು. ಎರಡನೆಯದಾಗಿ ಅವರು ಆ ಗ್ರಂಥಗಳ ಸ್ವಾಧೀನವನ್ನು ಪಡೆದಿರಬೇಕು. ಶೂದ್ರರಂತೂ ಮಾಡಿರಲಾರರು ಏಕೆಂದರೆ ಮನು ಸ್ಪಷ್ಟವಾಗಿಯೇ ದ್ವಿಜರನ್ನು ದೂಷಿಸುತ್ತಾನೆ. ಅಂಥವರು ಯಾರು ಎಂಬುದು ಓದುಗರ ಕಲ್ಪನೆಗೇ ಬಿಟ್ಟ ವಿಷಯ. ಆದರೆ ಜನಸಾಮಾನ್ಯರಿಗಿರುವ ಪ್ರಶ್ನೆ ಎಂದರೆ ಯಾವ ಶ್ಲೋಕಗಳನ್ನು ಪ್ರಾಮಾಣಿಕ ಎಂದು ಪರಿಗಣಿಸಿ ಅನುಸರಿಸಬೇಕು, ಆ ಶ್ಲೋಕಗಳು ಅನುಕರಣಯೋಗ್ಯವೇ ಎನ್ನುವುದು.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...