Homeಮುಖಪುಟಯಾವ ಭಗವದ್ಗೀತೆ ಅನುಸರಿಸಬೇಕು?

ಯಾವ ಭಗವದ್ಗೀತೆ ಅನುಸರಿಸಬೇಕು?

- Advertisement -
- Advertisement -

ಇತ್ತೀಚೆಗೆ ಬೆಂಗಳೂರಿನಲ್ಲಿ ಇಸ್ಕಾನ್ ಸಂಸ್ಥೆ ’ಗೀತಾ ದಾನ ಯಜ್ಞ ಮಹೋತ್ಸವ’ ಆಚರಿಸಿದೆ ಮತ್ತು ಭಗವದ್ಗೀತೆಯ ಒಂದು ಲಕ್ಷ ಪ್ರತಿಗಳನ್ನು ಹಂಚಲು ನಿರ್ಧರಿಸಿದೆ. ಯಜ್ಞದಲ್ಲಿ ಭಾಗವಹಿಸಿದ ಭಾರತದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರು ಗೀತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಗೀತೆಯನ್ನು ಶಾಲಾ-ಕಾಲೇಜುಗಳಲ್ಲಿ ಪಠ್ಯವನ್ನಾಗಿ ಮಾಡಬೇಕೆಂದು ಕರ್ನಾಟಕದ ವಿದ್ಯಾ ಮಂತ್ರಿಗಳು ಹೇಳಿದ್ದಾರೆ. ಹಾಗೆಯೇ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಕಟೀಲರೂ ಹೇಳಿದ್ದಾರೆ. ಸಾಲದ್ದಕ್ಕೆ ಭಗವದ್ಗೀತೆ ಎಲ್ಲರಿಗೂ ಸ್ಫೂರ್ತಿ ಹಾಗೂ ಪ್ರೇರಣಾದಾಯಕ ಎಂದು ಉಡುಪಿ ವಿಶ್ವಪ್ರಸನ್ನತೀರ್ಥರು ಹೇಳಿದ್ದಾರೆ.

ಆದರೆ ಇವರು ಯಾವ ಗೀತೆಯ ಬಗ್ಗೆ ಹೇಳುತ್ತಿದ್ದಾರೆ? ಹಿಂದೂಗಳ ಸರಿಸುಮಾರು ಎಲ್ಲಾ ಧರ್ಮ ಗ್ರಂಥಗಳಲ್ಲಿ ಆಗಿರುವಂತೆ ಗೀತೆಯಲ್ಲಿಯೂ ಕಲಬೆರಕೆಯಾಗಿರುವುದರಿಂದ ಇವರು ಕಲಬೆರಕೆಯಾಗಿರುವ ಗೀತೆಯ ಬಗ್ಗೆ ಹೇಳುತ್ತಿದ್ದಾರೆಯೋ ಅಥವಾ ಕಲಬೆರಕೆಯಾಗುವ ಮೊದಲಿನ ಗೀತೆಯ ಬಗ್ಗೆ ಹೇಳುತ್ತಿದ್ದಾರೆಯೋ? ಯಾವ ಶ್ಲೋಕಗಳು ಮೂಲ ಗೀತೆಯಲ್ಲಿದ್ದವು, ಯಾವ ಶ್ಲೋಕಗಳನ್ನು ನಂತರ ಬೆರೆಸಲಾಗಿದೆ ಎಂದು ಇವರಿಗೆ ಹೇಳುವುದಕ್ಕೆ ಸಾಧ್ಯವಿದೆಯೇ? ’ಸ್ಫೂರ್ತಿದಾಯಕವಾದ ಹಾಗೂ ಪ್ರೇರಣಾದಾಯಕವಾದ’ ಶ್ಲೋಕಗಳು ಮೂಲ ಗೀತೆಯಲ್ಲಿದ್ದವೇ ಅಥವಾ ಅವುಗಳನ್ನು ನಂತರ ಕಲಬೆರಕೆ ಮಾಡಲಾಯಿತೇ? ಒಟ್ಟಿನಲ್ಲಿ ಇಂದು ಇಡೀ ಗೀತೆಯೇ ಸಂಶಯಾಸ್ಪದ ಗ್ರಂಥವಾಗಿ ಅದರ ವಿಶ್ವಾಸಾರ್ಹತೆಯೇ ಇಲ್ಲದಂತಾಗಿದೆ.

ಇಂದು ಪ್ರಚಲಿತವಾಗಿರುವ ಗೀತೆಯಲ್ಲಿ 700 ಶ್ಲೋಕಗಳಿವೆ. ಅವುಗಳಲ್ಲಿ 574 ಕೃಷ್ಣ ಹೇಳಿದ್ದು, 84 ಅರ್ಜುನ ಹೇಳಿದ್ದು, 41 ಸಂಜಯ ಹೇಳಿದ್ದು ಹಾಗೂ 1 ಧೃತರಾಷ್ಟ್ರ ಹೇಳಿದ್ದು. ಆದರೆ ಮಹಾಭಾರತದ ಭೀಷ್ಮಪರ್ವದ 43ನೆಯ ಅಧ್ಯಾಯದಲ್ಲಿ ಒಂದು ಶ್ಲೋಕ ಹೀಗೆ ಹೇಳುತ್ತದೆ: ’ಷಟ್‌ಶತಾನಿ ಸಂವಿಶಾನಿ ಶ್ಲೋಕಾನಾಂ ಪ್ರಾಹ ಕೇಶವಃ, ಅರ್ಜುನಃ ಸಪ್ತಪಂಚಾಶತ್ಸಪ್ತಷಷ್ಠಿಂ ತು ಸಂಜಯಃ, ಧೃತರಾಷ್ಟ್ರಃ ಶ್ಲೋಕಮೇಕಂ ಗೀತಾಯಾ ಮಾನಮುಚ್ಯತೆ’. ಅಂದರೆ ಗೀತೆಯಲ್ಲಿ ಕೃಷ್ಣ ಹೇಳಿದ 620, ಅರ್ಜುನ ಹೇಳಿದ 57, ಸಂಜಯ ಹೇಳಿದ 68 ಹಾಗೂ ಧೃತರಾಷ್ಟ್ರ ಹೇಳಿದ 1 ಶ್ಲೋಕಗಳು ಇವೆ ಎಂದು ಮೇಲಿನ ಸಾಲು ಹೇಳುತ್ತದೆ. ಆದರೆ ಈ ಶ್ಲೋಕದ ಪ್ರಕಾರ ಗೀತೆಯಲ್ಲಿರುವ ಶ್ಲೋಕಗಳ ಮೊತ್ತ 746 ಆಗುತ್ತದೆ. ಅಂದರೆ ಇಂದು ಲಭ್ಯವಿರುವ ಗೀತೆಯಲ್ಲಿ ಕೃಷ್ಣ ಹೇಳಿದ ಶ್ಲೋಕಗಳಲ್ಲಿ 46 ಕಡಿಮೆ ಇವೆ, ಸಂಜಯ ಹೇಳಿದ ಶ್ಲೋಕಗಳಲ್ಲಿ 27 ಕಡಿಮೆ ಇವೆ ಹಾಗೂ ಅರ್ಜುನ ಹೇಳಿದ ಶ್ಲೋಕಗಳಲ್ಲಿ 27 ಶ್ಲೋಕಗಳು ಹೆಚ್ಚಿಗಿವೆ ಎಂದಾಯಿತು.

ಮಹಾಭಾರತದ ಈ ಶ್ಲೋಕ ಮಹಾಭಾರತದ ಹಲವು ಆವೃತ್ತಿಗಳಲ್ಲಿ ಲಭ್ಯವಿದ್ದರೂ ಹಲವು ಆವೃತ್ತಿಗಳಲ್ಲಿ ಲಭ್ಯವಿರುವುದಿಲ್ಲ. ಉದಾಹರಣೆಗೆ ಈ ಶ್ಲೋಕ ಪುಣೆಯ ಭಂಡಾರಕರ ಓರಿಎಂಟಲ್ ರಿಸರ್ಚ ಇನ್ಸ್ಟಿಟ್ಯೂಟಿನ ಆವೃತ್ತಿಯಲ್ಲಿ ಲಭ್ಯವಿಲ್ಲ ಆದರೆ ಗೋರಖಪುರದ ಗೀತಾ ಪ್ರೆಸ್ ಪ್ರಕಟಿಸಿರುವ ಆವೃತ್ತಿಯಲ್ಲಿ ಲಭ್ಯವಿರುತ್ತದೆ. ಹಾಗಾದರೆ ಮಹಾಭಾರತದ ಈ ಶ್ಲೋಕವನ್ನು ಪ್ರಾಮಾಣಿಕವೆಂದು ನಂಬಿದರೆ ಗೀತೆಯಲ್ಲಿ ಕಲಬೆರಕೆಯಾಗಿದೆ ಎಂಬುವುದನ್ನು ಒಪ್ಪಬೇಕಾಗುತ್ತದೆ. ಆದರೆ ಗೀತೆಯ 700 ಶ್ಲೋಕಗಳನ್ನು ಪ್ರಾಮಾಣಿಕ ಎಂದು ನಂಬಿದರೆ, ಮಹಾಭಾರತದ ಈ ಶ್ಲೋಕವನ್ನು ಕಲಬೆರಕೆಯಾದುದು ಎಂದು ನಂಬಬೇಕಾಗುತ್ತದೆ. ಎರಡೂ ಶ್ಲೋಕಗಳು ಬರುವುದು ಮಹಾಭಾರತದ ಭೀಷ್ಮಪರ್ವದಲ್ಲಿಯೇ ಅಂದ ಮೇಲೆ ಇವೆರಡರಲ್ಲಿ ಯಾವುದನ್ನು ಪ್ರಾಮಾಣಿಕ, ಯಾವುದನ್ನು ಕಲಬೆರಕೆ ಎಂದು ಹೇಳುವುದು? ಯಾವುದನ್ನೋ ಒಪ್ಪುವುದಾದರೆ ಹಾಗೆ ಹೇಳಲು ಆಧಾರಗಳೇನು?

ಇದನ್ನೂ ಓದಿ: ಭಗವದ್ಗೀತೆಯಲ್ಲಿ ಅದ್ಯಾವ ನೈತಿಕ ಶಿಕ್ಷಣವಿದೆ?

ಸಂದರ್ಭ ಹಾಗೂ ಆಂತರಿಕ ವಿರೋಧಾಭಾಸ ಮೊದಲಾದವುಗಳ ಆಧಾರದ ಮೇಲೆ ಇಂತಹ ಕಲಬೆರಕೆಗಳನ್ನು ಗುರುತಿಸುವುದು ಸಾಧ್ಯವಿಲ್ಲ ಯಾಕೆಂದರೆ ಈ ಕಲಬೆರಕೆಗಳನ್ನು ಅತ್ಯಂತ ಚಾತುರ್ಯದಿಂದ ಅಳವಡಿಸಲಾಗಿದೆ ಎನ್ನುತ್ತಾರೆ ಮಹಾಭಾರತದ ಸಂಪಾದನೆಯಲ್ಲಿ ಭಾಗವಹಿಸಿದ ಪ್ರತಾಪ ಚಂದ್ರ ರಾಯ್ ಅವರು.

ತಮಾಷೆ ಎಂದರೆ ಭೀಷ್ಮ ಪರ್ವದಲ್ಲಿ ಸ್ವತಃ ಕೃಷ್ಣನೇ ತಾನು ಉಪದೇಶಿಸಿದ ಗೀತೆಯನ್ನು ಅಶ್ವಮೇಧಿಕ ಪರ್ವದ ಹೊತ್ತಿಗೆ ಅಂದರೆ ಯುದ್ಧದ ನಂತರ ಯುಧಿಷ್ಠಿರ ಅಶ್ವಮೇಧ ಯಜ್ಞವನ್ನು ಮಾಡುವ ಹೊತ್ತಿಗೆ ಮರೆತುಬಿಟ್ಟಿದ್ದ. ಮಹಾಭಾರತದ ಅಶ್ವಮೇಧಿಕ ಪರ್ವದಲ್ಲಿ ಅರ್ಜುನ ಕೃಷ್ಣನಿಗೆ ಗೀತೆಯನ್ನು ಪುನಃ ಉಪದೇಶಿಸುವಂತೆ ಕೇಳಿದಾಗ ಕೃಷ್ಣ ’ಸ ಹಿ ಧಮಃ ಸುಪರ್ಯಾಪ್ತೋ ಬ್ರಹ್ಮಣಃ ಪದವೇದನೇ, ನ ಶಕ್ಯಂ ತನ್ಮಯಾ ಭೂಯಸ್ತಥಾ ವಕ್ತುಂ ಅಶೇಷತಃ’ ಎನ್ನುತ್ತಾನೆ. ತಾನು ಅದನ್ನು ಮರೆತುದಾಗಿಯೂ, ಆದುದರಿಂದ ಪುನರುಪದೇಶಿಸಲು ತನಗೆ ಸಾಧ್ಯವಿಲ್ಲ ಎಂದೂ ಹೇಳುತ್ತಾನೆ. ತಾನೇ ಉಪದೇಶಿಸಿದ ಗೀತೆಯನ್ನು ಸ್ವತಃ ಕೃಷ್ಣನೇ ಮರೆತಿದ್ದ ಎಂದ ಮೇಲೆ ಪಾಂಡವರ ಸ್ವರ್ಗಾರೋಹಣ ಆದ ಮೇಲೆ ಮಹಾಭಾರತವನ್ನು ಬರೆದವನಿಗೆ ಅದು ಹೇಗೆ ನೆನಪಿರಲು ಸಾಧ್ಯ? ಹಾಗಾದರೆ ಮೂಲ ಗೀತೆಯ ವಿಶ್ವಾಸಾರ್ಹತೆಯನ್ನು ಸ್ಥಾಪಿಸುವುದು ಹೇಗೆ?

ಹಾಗಾದರೆ ಯಾರು, ಯಾಕೆ ಮತ್ತು ಯಾವ್ಯಾವ ಶ್ಲೋಕಗಳನ್ನು ತೆಗೆದು ಹಾಕಿ ಯಾವ ಹೊಸ ಶ್ಲೋಕಗಳನ್ನು ಸೇರಿಸಿದ್ದಾರೆ ಎಂದು ಕಂಡುಕೊಳ್ಳುವುದು ಹೇಗೆ? ಕೃಷ್ಣ ಹೇಳಿದ ಶ್ಲೋಕಗಳಲ್ಲಿ 100 ಶ್ಲೋಕಗಳನ್ನು ತೆಗೆದು ಹಾಕಿ 54 ಹೊಸ ಶ್ಲೋಕಗಳನ್ನು ಸೇರಿಸಿದ್ದರೂ ಮೊತ್ತ ಅಷ್ಟೇ ಉಳಿಯುವುದರಿಂದ ಈಗ ಕೃಷ್ಣ ಹೇಳಿದ ಎನ್ನಲಾಗುವ 574 ಶ್ಲೋಕಗಳು ಮೂಲ ಗೀತೆಯಲ್ಲಿಯೂ ಇದ್ದವು, ಅವು ಕೃಷ್ಣನೇ ಹೇಳಿದ ಶ್ಲೋಕಗಳು ಎಂದು ಪ್ರಮಾಣೀಕರಿಸುವುದು ಹೇಗೆ?

ಹಿಂದೂ ಧರ್ಮ ಗ್ರಂಥಗಳಲ್ಲಿ ಹಿಗ್ಗಾಮುಗ್ಗಾ ಕಲಬೆರಕೆ ಮಾಡಿರುವುದನ್ನು ಮಹಾಭಾರತವೂ ಒಪ್ಪುತ್ತದೆ, ಮನುವೂ ಒಪ್ಪುತ್ತಾನೆ. ಯಜ್ಞಗಳಲ್ಲಿ ಹೆಂಡ, ಮೀನು, ಮಾಂಸ ಮೊದಲಾದವುಗಳಿಗೆ ಅವಕಾಶವಿಲ್ಲದಿದ್ದರೂ ಧೂರ್ತರು ಅವುಗಳ ಬಗ್ಗೆ ತಮಗಿರುವ ದುರಾಸೆಯಿಂದಾಗಿ ಅವುಗಳನ್ನು ಸೇರಿಸಿದ್ದಾರೆ ಎಂದು ಮಹಾಭಾರತ ಹೇಳುತ್ತದೆ. “ಸುರಾ ಮತ್ಸ್ಯಾ ಮಧು ಮಾಂಸಮಾಸವಂ ಕೃಸರೌದನಮ್, ಧೂತೈಃ ಪ್ರವರ್ತಿತ ಹ್ರೋತನ್ನೈತದ್ ವೇದೇಷು ಕಲ್ಪಿತಮ್, ಮಾನಾನ್ಮೋಹಾಚ್ಚ ಲೋಭಾಚ್ಚ ಲೌಲ್ಯಮೆತತ್ಪ್ರಕಲ್ಪಿತಮ” (ಮಹಾಭಾರತ, ಶಾಂತಿ ಪರ್ವ 264.9-10). ಮನುಸ್ಮೃತಿಯ 9ನೆಯ ಅಧ್ಯಾಯದ 66ನೆಯ ಶ್ಲೋಕ ಹೀಗೆ ಹೇಳುತ್ತದೆ: “ಅಯಂ ದ್ವಿಜೈರ್ಹಿ ವಿದ್ವದ್ಭಿಃ ಪಶುಧರ್ಮೋ ವಿಗರ್ಹಿತಃ, ಮನುಷ್ಯಾಣಾಮಪಿ ಪ್ರೊಕ್ತೋ ವೇನೇ ರಾಜ್ಯಂ ಪ್ರಶಾಸತಿ”, ಅಂದರೆ ವೇಣನೆಂಬ ರಾಜನು ರಾಜ್ಯಭಾರ ಮಾಡುತ್ತಿದ್ದಾಗ ಇಂತಹ ಮೃಗೀಯ ಆಚರಣೆಗಳನ್ನು ಅಜ್ಞಾನಿ ದ್ವಿಜರಿಂದ ಸೇರಿಸಲಾಯಿತು. ಯಜ್ಞದಂತಹ ಪವಿತ್ರ ಆಚರಣೆಯಲ್ಲಿಯೇ ಕಲಬೆರಕೆ ಮಾಡುವವರು ಇನ್ನು ಗ್ರಂಥಗಳನ್ನು ಬಿಟ್ಟಾರೆಯೇ?

ಇಂತಹ ಕಲಬೆರಕೆಗಳನ್ನು ಯಾರು ಮಾಡಲು ಸಾಧ್ಯ? ಹಾಗೆ ಮಾಡಲು ಮೊದಲನೆಯದಾಗಿ ಅವರಿಗೆ ಸಂಸ್ಕೃತ ಭಾಷೆಯ ಜ್ಞಾನವಿರಬೇಕು. ಎರಡನೆಯದಾಗಿ ಅವರು ಆ ಗ್ರಂಥಗಳ ಸ್ವಾಧೀನವನ್ನು ಪಡೆದಿರಬೇಕು. ಶೂದ್ರರಂತೂ ಮಾಡಿರಲಾರರು ಏಕೆಂದರೆ ಮನು ಸ್ಪಷ್ಟವಾಗಿಯೇ ದ್ವಿಜರನ್ನು ದೂಷಿಸುತ್ತಾನೆ. ಅಂಥವರು ಯಾರು ಎಂಬುದು ಓದುಗರ ಕಲ್ಪನೆಗೇ ಬಿಟ್ಟ ವಿಷಯ. ಆದರೆ ಜನಸಾಮಾನ್ಯರಿಗಿರುವ ಪ್ರಶ್ನೆ ಎಂದರೆ ಯಾವ ಶ್ಲೋಕಗಳನ್ನು ಪ್ರಾಮಾಣಿಕ ಎಂದು ಪರಿಗಣಿಸಿ ಅನುಸರಿಸಬೇಕು, ಆ ಶ್ಲೋಕಗಳು ಅನುಕರಣಯೋಗ್ಯವೇ ಎನ್ನುವುದು.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...