Homeಕರ್ನಾಟಕಭಟ್ಕಳದಲ್ಲಿ ಫೆ.28ರಂದು ಅಂಬೇಡ್ಕರ್‌ ದೀಕ್ಷೆ ಸಮಾವೇಶ; ವಿವಿಧ ಸಂಘಟನೆಗಳು ಭಾಗಿ

ಭಟ್ಕಳದಲ್ಲಿ ಫೆ.28ರಂದು ಅಂಬೇಡ್ಕರ್‌ ದೀಕ್ಷೆ ಸಮಾವೇಶ; ವಿವಿಧ ಸಂಘಟನೆಗಳು ಭಾಗಿ

ಸುಮಾರು ಹದಿನಾಲ್ಕು ಸಂಘಟನೆಗಳು ಸೇರಿ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿವೆ

- Advertisement -
- Advertisement -

“ಸಮಾನತಾವಾದಿ ದರ್ಶನವನ್ನು ರಾಜಕೀಯ ಮತ್ತು ಸಾಮಾಜಿಕ ತತ್ವಗಳನ್ನಾಗಿಸಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಈ ಕಾರಣಕ್ಕಾಗಿ ನಮಗೆ ಇಂದು ಅಂಬೇಡ್ಕರ್ ವೈಚಾರಿಕತೆಯ ದೀಕ್ಷೆ ಬೇಕಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ದೀಕ್ಷೆ ಸಮಾವೇಶವನ್ನು ಭಟ್ಕಳದಲ್ಲಿ ಇದೇ ಫೆಬ್ರುವರಿ 28ರಂದು ಹಮ್ಮಿಕೊಳ್ಳಲಾಗಿದೆ” ಎಂದು ವಿವಿಧ ಸಂಘಟನೆಗಳ ಪ್ರಕಟಣೆ ತಿಳಿಸಿದೆ.

ಭಟ್ಕಳದ ಲಕ್ಷ್ಮಿ ಸರಸ್ವತಿ ಮೊಗೇರ ವಿದ್ಯಾವರ್ಧಕ ಸಂಘ, ಜೈಭೀಮ್ ಸಂಘಟನೆ, ಜಿಲ್ಲಾ ಮೊಗೇರ ಸಮಾಜ, ಗೊಂಡ ಸಮಾಜ ಕಾರ್ಯಕ್ರಮವನ್ನು ಆಯೋಜಿಸಿವೆ. ಖಾರ್ವಿ ಸಮಾಜ, ಗೊಂಡ ಸಮಾಜ, ವಿಶ್ವಕರ್ಮ ಸಮಾಜ, ಮರಾಠಿ ಸಮಾಜ, ಕಾರಾವಾರ ಮೀನು ಮಾರಾಟ ಫೆಡರೇಷನ್‌, ದೇವಾಡಿಗ ಸಮಾಜ ಶಿರಾಲಿ, ಹರಿಕಾಂತ ಜಿಲ್ಲಾ ನಾಡದೋಣಿ ಸಂಘ ಮತ್ತು ಸಾಂಪ್ರದಾಯ ಮೀನುಗಾರರ ಒಕ್ಕೂಟ ಕುಮುಟ, ಮೀನುಗಾರ ಪರ್ಶೀಯನ್ ಬೋಟ್ ಯುನಿಯನ್ ಅಂಕೋಲಾ, ಹೊನ್ನಾವರ ಕೊಕ್ಕೆಶ್ವರ ದೇವಸ್ಥಾನ ಮತ್ತು ರಾಮಕ್ಷತ್ರಿಯ ಸಮಾಜದ ಮುಖಂಡರು, ಬೆಳ್ನಿ ಹರಿಕಾಂತ ಸಮಾಜ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

“ಸಮಾನತಾವಾದಿ ಅಖಂಡ ಭಾರತಕ್ಕಾಗಿ ಅಂಬೇಡ್ಕರ್‌ವಾದಿ ಅಭಿಯಾನ” ಎಂದು ಈ ಸಮಾವೇಶವನ್ನು ಸಂಘಟನೆಗಳು ಕರೆದಿವೆ.

ಇದನ್ನೂ ಓದಿರಿ: ಜಾತಿ ತಾರತಮ್ಯ ನಿಷೇಧಿಸಿ ಅಮೆರಿಕದ ಸಿಯಾಟಲ್‌ ಸಿಟಿ ಕೌನ್ಸಿಲ್‌ನಿಂದ ಮಹತ್ವದ ಸುಗ್ರೀವಾಜ್ಞೆ

“ನಾವುಗಳು ನಿಜ ಮನುಷ್ಯರಾಗಲು ಅಂಬೇಡ್ಕರ್ ಅವರ ದೀಕ್ಷೆ ಬೇಕು. ಈಗ ನಾವು ಒಂದು ಜಾತಿಯ ಕೂಪ ಮಂಡೂಕಗಳಾಗಿದ್ದೇವೆ. ಒಂದು ಧರ್ಮವನ್ನು ಕುರುಡಾಗಿ ಅನುಸರಿಸಿ ಧರ್ಮಾಂಧರಾಗಿದ್ದೇವೆ. ಒಂದು ಕೋಮಿನ ಪಾರಂಪರಿಕ ಅಹಮ್ಮನ್ನು ಮೈಗಂಟಿಸಿಕೊಂಡು ಕೋಮುವಾದಿಗಳಾಗಿದ್ದೇವೆ. ಅಸಹಾಯಕರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಅತ್ಯಾಚಾರ ಮಾಡಿ ರಾಕ್ಷಸರಾಗುತ್ತಿದ್ದೇವೆ. ಸುಳ್ಳುಗಳನ್ನು ಆರಾಧಿಸುತ್ತ, ಭ್ರಾಮಕ ಪ್ರತಿಮೆಗಳನ್ನು ಆರಾಧಿಸುತ್ತಾ, ಧರ್ಮದ ಅಫೀಮು ತಿಂದು ಚಿಂತನಾ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ” ಎಂದು ಸಂಘಟನೆಗಳು ವಿಷಾದಿಸಿವೆ.

ಸಮಾವೇಶದ ಕುರಿತ ಸಂಘಟನೆಗಳು ನೀಡಿರುವ ಪತ್ರಿಕಾ ಪ್ರಕಟಣೆ

ವರ್ತಮಾನದ ಭಾರತವು ಇಂದು ಜಾತಿ ಅಸಹನೆ, ಧಾರ್ಮಿಕ ಅಸಹಿಷ್ಣತೆ, ಕೋಮು ದ್ವೇಷ, ದಲಿತರ ಮೇಲಿನ ದೌರ್ಜನ್ಯ, ಸ್ತ್ರೀಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮುಂತಾದ ಅಮಾನವೀಯ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಇಲ್ಲಿನ ಸರಕಾರಗಳು ದೇಶದ ಆಳುವ ವರ್ಗದ, ಸಾಮ್ರಾಜ್ಯಶಾಹಿಗಳ ಮತ್ತು ಧಾರ್ಮಿಕ ಮೂಲಭೂತವಾದಿಗಳ ಹಿತಕಾಯುವ ನಿಟ್ಟಿನಲ್ಲಿ ಸಮಾಜದ ಸಾಮರಸ್ಯವನ್ನು ನಾಶ ಮಾಡುತ್ತಿವೆ.

ನಮ್ಮ ರಕ್ಷಣೆಯ ಹೊಣೆ ಹೊತ್ತಿರುವ ಸರಕಾರಗಳು ಇಲ್ಲಿನ ಜನಸಾಮಾನ್ಯನ ಹಿತವನ್ನು ಕಾಯುತ್ತಿಲ್ಲ, ಬದಲಿಗೆ ದುಡಿವ ಜನರ ಬದುಕನ್ನು ಬಲಿಕೊಟ್ಟಾದರೂ ಪುರೋಹಿತಶಾಹಿ ಮತ್ತು ಬಂಡವಾಳಶಾಹಿಗಳನ್ನು ಕಾಪಾಡುವ ಹೊಣೆ ಹೊತ್ತುಕೊಂಡಿವೆ. ದಲಿತ, ಆದಿವಾಸಿ, ಅಲೆಮಾರಿ ಮತ್ತು ರೈತರನ್ನೂ ಒಳಗೊಂಡಂತೆ ದುಡಿವ ಸಮುದಾಯಗಳ ಬದುಕುಗಳು ಇನ್ನಿಲ್ಲದ ಆತಂಕಗಳಿಗೆ ದೂಡಲ್ಪಟ್ಟಿವೆ. ಕೋಮು ಮತ್ತು ಧಾರ್ಮಿಕ ದ್ವೇಷಗಳು ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಿವೆ.

ಖಾಸಗೀಕರಣ, ಜಾಗತೀಕಕರಣ ಮತ್ತು ನವಉದಾರವಾದಿ ಆರ್ಥಿಕ ನೀತಿಗಳು ದೇಶದ ಬಹುಸಂಖ್ಯಾತ ಶ್ರಮಿಕರ ದುಡಿವ ಕೈಗಳನ್ನೇ ಕತ್ತರಿಸಿ ಹಾಕುತ್ತಿವೆ. ಒಂದು ದೇಶ, ಒಂದು ಭಾಷೆ, ಒಂದು ಸಮವಸ್ತ್ರ, ಒಂದು ಸರಕಾರ, ಒಂದೇ ಧರ್ಮ ಎಂಬ ಫ್ಯಾಸಿಸ್ಟ್ ರಾಜಕಾರಣವು ದೇಶದ ಬಹುತ್ವವನ್ನು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ನಾಶ ಮಾಡುತ್ತಿದೆ. ದಲಿತ, ಆದಿವಾಸಿ, ಮಹಿಳೆಯ, ಅಲೆಮಾರಿ, ರೈತ ಮತ್ತು ಹಿಂದುಳಿದ ಸಮುದಾಯಗಳ ಮೇಲೆ ನಿರಂತರವಾಗಿ ಕೊಲೆ, ಅತ್ಯಾಚಾರ ಮತ್ತು ದಬ್ಬಾಳಿಕೆಗಳು ನಡೆಯುತ್ತಿವೆ. ಈ ಬಹುಸಂಖ್ಯಾತ ದುಡಿವ ಸಮುದಾಯಗಳ ಪರವಾಗಿ ನಮ್ಮ ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ನಿಲ್ಲುತ್ತಿಲ್ಲ. ಈ ಸಮುದಾಯಗಳ ಹಿತ ಕಾಪಾಡಬೇಕಾದ ಮಾಧ್ಯಮಗಳೂ ಸಹ ಕಾರ್ಪೋರೇಟ್ ವರ್ಗದ ಹಿತಕಾಯಲು ನಿಂತಿವೆ.

ಹಿಂದೆ ರಾಜಪ್ರಭುತ್ವಗಳು ಜನವಿರೋಧಿಗಳಾಗಿದ್ದಾಗ ಅವರನ್ನು ಸರಿದಾರಿಗೆ ತರುವ ಹೊಣೆಯನ್ನು ನಮ್ಮ ದೇಶದ ಸಂತರು, ಸನ್ಯಾಸಿಗಳು, ಆಧ್ಯಾತ್ಮಿಕ ಕ್ಷೇತ್ರದ ಅನುಭಾವಿಗಳು ಹೊತ್ತುಕೊಳ್ಳುತ್ತಿದ್ದರು. ಆದರೆ ಇಂದು ದೇಶದ ಸಾಧುಸಂತರು ಧಾರ್ಮಿಕ ಉನ್ಮಾದದಿಂದ ಹೂಂಕರಿಸುತ್ತಿದ್ದಾರೆ. ಅನ್ಯಕೋಮಿನವರನ್ನು, ದುರ್ಬಲರನ್ನು ಕೊಲ್ಲುವ, ಕಡಿಯುವ, ಗಲಭೆ ಎಬ್ಬಿಸುವುದಕ್ಕೆ ಪೂರಕವಾದ ಭಾಷಣಗಳನ್ನು ಮಾಡುತ್ತಿದ್ದಾರೆ. ತಮ್ಮ ವಿರುದ್ಧ ತರಲಾದ ಅಪಾಯಕಾರಿ ಕೃಷಿಕಾಯ್ದೆಗಳನ್ನು ಪ್ರತಿಭಟಿಸಿ ಧರಣಿ ಕೂತ ರೈತರಲ್ಲಿ ಅನೇಕರು ಪ್ರತಿಭಟನಾ ಸ್ಥಳದಲ್ಲಿಯೇ ಸತ್ತರು. ಆಗ ನಮ್ಮ ದೇಶವನ್ನು ಮುನ್ನಡೆಸಬೇಕಾದ ವ್ಯಕ್ತಿಯೇ `ರೈತರೇನು ನನಗಾಗಿ ಸತ್ತರೇ?’ ಎಂಬ ಹೇಳಿಕೆಗಳನ್ನು ಕೊಡುತ್ತಾನೆ.

ದೇಶದ ಅತ್ಮವನ್ನೇ ನಡುಗಿಸುತ್ತಿರುವ ಇಂತಹ ಸಂದರ್ಭದಲ್ಲಿ ನಾಗರಿಕ ಸಮಾಜ ಮಾತ್ರ ಸದ್ದೇ ಮಾಡದೆ ತಣ್ಣಗೆ ಕೂತಂತಿದೆ. ಮಾಧ್ಯಮಗಳು ಯಥಾವತ್ತು ಪ್ರಭುತ್ವದ ಭಜನೆಯಲ್ಲಿ ತೊಡಗಿಕೊಂಡಿವೆ. ದಲಿತರನ್ನು, ಮುಸ್ಲಿಮರನ್ನು ಕೊಲ್ಲುವ ಮತ್ತು ರೈತರ ಸಾವುಗಳನ್ನು ನಗಣ್ಯವಾಗಿಸುವ, ಮಹಿಳೆಯರ ಮೇಲೆ ನಿತ್ಯ ನಡೆವ ಅತ್ಯಾಚಾರ ಮತ್ತು ಕೊಲೆಗಳು ಸರಕಾರಗಳ ಕಣ್ಗಾವಲಲ್ಲೇ ನಡೆಯುತ್ತಿವೆ. ಸಾವುಗಳನ್ನು, ಹಲ್ಲೆಗಳನ್ನು, ಅತ್ಯಾಚಾರಗಳನ್ನು ಮತ್ತು ಕೊಲೆಗಳನ್ನು ಸರ್ವೇಸಾಧರಣ ಸಂಗತಿಯಾಗಿಸಿಬಿಡುವ ವಾತಾವರಣದಲ್ಲಿ ಹಿಂಸೆಯು ಹೇಗೆ ಅಂತರ್ಗತವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆದರೆ ನಾಗರಿಕ ಭಾರತವು ಪ್ರಭುತ್ವ ಹಂಚಿದ ಮಾರಕ ಅಫೀಮಿನಲ್ಲಿ ಓಲಾಡುತ್ತಿದೆ. ನಮ್ಮನ್ನಾವರಿಸಿರುವ ಹಿಂಸೆಯಿಂದ ಬದಿಗೆ ಸರಿಯುತ್ತಿರುವ ಮಾನವೀಯ ಮೌಲ್ಯಗಳ ಕುರಿತು ಯೋಚಿಸುವುದೇ ಅಪರಾಧ ಎಂದು ಪರಿಗಣಿಸಲಾಗುತ್ತಿದೆ. ದಮನಿತರ ಮೇಲೆ ನಡೆಯುವ ಕೊಲೆ ಅತ್ಯಾಚಾರಗಳನ್ನೂ ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವ ಹಂತಕ್ಕೆ ಹೋಗಿರುವ ಸಮಾಜದಲ್ಲಿ ಅಂತಃಸಾಕ್ಷಿ ಇರಲು ಸಾಧ್ಯವೇ?

ನಮ್ಮ ಸಮಾಜಕ್ಕೆ ಈಗ ಬೇಕಿರುವುದು ಸಹನೆ, ಸಾಮರಸ್ಯ ಮತ್ತು ಸಮಾನತಾವಾದಿ ಆಶಯಗಳು. ಬುದ್ಧನ ಚಿಂತನಗಳಲ್ಲಿ, ಬಸವಣ್ಣನ ವೈಚಾರಕತೆಯಲ್ಲಿ, ಸಂತರು ಕಟ್ಟಿದ ಚಳುವಳಿಗಳಲ್ಲಿ, ಪುರೋಗಾಮಿ ಹೋರಾಟಗಳಲ್ಲಿ ಮಾನವೀಯ ಮೌಲ್ಯಗಳಿವೆ. ಈ ಮಾನವೀಯ ಮೌಲ್ಯಗಳ ಸಾರವನ್ನು ಹೀರಿ ದೇಶದ ವೈಚಾರಿಕತೆಯನ್ನು ಕಟ್ಟಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರು ಆಧುನಿಕ ಭಾರತದ ನಿಜ ಸಂತ, ರಾಜನೀತಿಜ್ಞ ಮತ್ತು ದಾರ್ಶನಿಕ. ಭಾರತದ ಪ್ರಗತಿಪರ ವೈಚಾರಿಕ ಧಾರೆಗಳನ್ನು ಮತ್ತು ಜಗತ್ತಿನ ಹಲವು ರಾಜಕೀಯ ಚಿಂತನೆಗಳನ್ನು ಬಾಬಾ ಸಾಹೇಬರು ಅನುಸಂಧಾನ ಮಾಡಿದ್ದಾರೆ. ಅವರು ರಚಿಸಿ ನಮ್ಮ ಕೈಗಿಟ್ಟಿರುವ ಸಂವಿಧಾನವು ಈ ಎರಡೂ ವೈಚಾರಿಕ ಧಾರೆಗಳ ಸಮ್ಮಿಲನವೇ ಆಗಿದೆ. ಸಂವಿಧಾನ ಆಧುನಿಕ ಭಾರತವನ್ನು, ಸಮಾಜವಾದಿ ಆಶಯಗಳ ಭಾರತವನ್ನು ಮತ್ತು ಸಮಸಮಾಜವನ್ನು ಕಟ್ಟಲು ನಮಗಿರುವ ದಾರಿ ಯಾವುದೆಂದರೆ; ಅದು ಸಂವಿಧಾನ ನಮಗೆ ಹಾಕಿಕೊಟ್ಟಿರುವ ದಾರಿ. ಈ ದಾರಿಯಲ್ಲಿ ಮಾತ್ರ ಮಾನವೀಯ ಭಾರತವನ್ನು ಕಟ್ಟಲು ಸಾಧ್ಯ. ಈ ಕಾರಣದಿಂದ ಹಲವು ದಾಳಿಗಳಿಗೆ ಒಳಗಾಗಿರುವ ವರ್ತಮಾನದ ಭಾರತವನ್ನು ಸಾಮರಸ್ಯದ ದೇಶವನ್ನಾಗಿ ಕಟ್ಟಲು ಅಂಬೇಡ್ಕರ್ ಅವರ ವೈಚಾರಿಕತೆ ಎಲ್ಲರ ಮೈಗೂಡುವ ಅಗತ್ಯವಿದೆ. ಅಗತ್ಯ. ಈ ಕಾರಣಕ್ಕಾಗಿಯೇ ನಾವು ಇಂದು ಅಂಬೇಡ್ಕರ್ ದೀಕ್ಷೆಯನ್ನು ಪಡೆಯುವ ಅಗತ್ಯವಿದೆ.

ಅಂಬೇಡ್ಕರ್ ದೀಕ್ಷೆ ಯಾಕೆ?

ಅಂಬೇಡ್ಕರ್ ದೀಕ್ಷೆ ಯಾಕೆ? ಅಕ್ಟೋಬರ್ 14, 1956ರಂದು ಬಾಬಾಸಾಹೇಬರು ಸಾವಿರಾರು ವರ್ಷಗಳಿಂದ ನಮ್ಮನ್ನು ಸುತ್ತುವರೆದಿದ್ದ ಸಂಕೋಲೆಗಳನ್ನು ಕಿತ್ತು ಹಾಕಿ ಧಮ್ಮ ದೀಕ್ಷೆಯನ್ನು ಪಡೆದರು. `ನಾನು ನನ್ನ ಮೂಲ ಅಧ್ಯಾತ್ಮಕಕ್ಕೆ ಹಿಂದಿರುಗುತ್ತಿದ್ದೇನೆ’ ಎಂದು ಬೌದ್ಧರಾದರು. ಮಾನವೀಯತೆ, ಪ್ರಚ್ಛನ್ನ ವೈಚಾರಿಕ ಎಚ್ಚರ ಮತ್ತು ಸಮಾನತೆಯನ್ನು ಬೋಧಿಸುವ ಬೌದ್ಧ ತತ್ವಗಳಲ್ಲಿ ಅಪಾರ ಮಾನವ ಪ್ರೇಮವಿದೆ ಎಂಬುದು ಬಾಬಾಸಾಹೇಬರ ಅಭಿಮತವಾಗಿತ್ತು. ಅಂಬೇಡ್ಕರ್ ತಮ್ಮ ಜೀವಿತಾವಧಿಯ ಕೊನೆಯಲ್ಲಿ ತೆಗೆದುಕೊಂಡ ಈ ನಿರ್ಧಾರವು ದಲಿತರ ಅಧ್ಯಾತ್ಮಿಕ ವಿಮೋಚನೆಗೆ ದಾರಿ ಮಾಡಿಕೊಟ್ಟಿತು. ಇಂದು ನಮಗೆ ಈ ತರಹ ವಿಮೋಚನೆಯ ಅಗತ್ಯವಿದೆ. ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಮಗೆ ಕೇವಲ ಅಧ್ಯಾತ್ಮಿಕ ಪರಿಹಾರಗಳು ಮಾತ್ರವಲ್ಲ, ಸಾಮಾಜಿಕ ಮತ್ತು ರಾಜಕೀಯ ವಿಮೋಚನೆಗೆ ಬೇಕಾದ ತತ್ವಗಳಿವೆ. ಈ ಕಾರಣಕ್ಕಾಗಿ ನಮಗೆ ಅಂಬೇಡ್ಕರ್ ದೀಕ್ಷೆಯ ಅಗತ್ಯವಿದೆ.

ನಾವುಗಳು ನಿಜ ಮನುಷ್ಯರಾಗಲು ಅಂಬೇಡ್ಕರ್ ಅವರ ದೀಕ್ಷೆ ಬೇಕು. ಈಗ ನಾವು ಒಂದು ಜಾತಿಯ ಕೂಪ ಮಂಡೂಕಗಳಾಗಿದ್ದೇವೆ. ಒಂದು ಧರ್ಮವನ್ನು ಕುರುಡಾಗಿ ಅನುಸರಿಸಿ ಧರ್ಮಾಂಧರಾಗಿದ್ದೇವೆ. ಒಂದು ಕೋಮಿನ ಪಾರಂಪರಿಕ ಅಹಮ್ಮನ್ನು ಮೈಗಂಟಿಸಿಕೊಂಡು ಕೋಮುವಾದಿಗಳಾಗಿದ್ದೇವೆ. ಅಸಹಾಯಕರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಅತ್ಯಾಚಾರ ಮಾಡಿ ರಾಕ್ಷಸರಾಗುತ್ತಿದ್ದೇವೆ. ಸುಳ್ಳುಗಳನ್ನು ಆರಾಧಿಸುತ್ತ, ಭ್ರಾಮಕ ಪ್ರತಿಮೆಗಳನ್ನು ಆರಾಧಿಸುತ್ತಾ, ಧರ್ಮದ ಅಫೀಮು ತಿಂದು ಚಿಂತನಾ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ. ಪೊಳ್ಳು ವಿಗ್ರಹದ ಹೊರಮೈಯ ಚಂದವನ್ನು ಅಖಂಡವಾಗಿ ಪೂಜಿಸುವ ಭಕ್ತರಾಗಿದ್ದೇವೆ. ಈ ಎಲ್ಲ ಸಂಗತಿಗಳ ನಡುವೆ ಭಾರತದ ನಿಜ ಮನುಷ್ಯನ ಅವಸಾನವಾಗಿದೆ.

ಭಾರತದ ಸಮಾಜವನ್ನು ಮಾನವೀಯತೆಯ ಗಟ್ಟಿ ನೆಲೆಗಟ್ಟಿನ ಮೇಲೆ ಕಟ್ಟಬೇಕಿದೆ. ಅದಕ್ಕಾಗಿ ಈ ದೇಶದಲ್ಲಿ ಹೊಸ ಮನುಷ್ಯರನ್ನು ಸೃಷ್ಟಿಸಬೇಕಿದೆ. ಈ ಸೃಷ್ಟಿಯ ಕೆಲಸವು ಕೇವಲ ಸಮಾನತಾವಾದಿ ವೈಚಾರಿಕತೆಯಿಂದ ಮಾತ್ರ ಸಾಧ್ಯ. ಈ ಸಮಾನತಾವಾದಿ ದರ್ಶನವನ್ನು ರಾಜಕೀಯ ಮತ್ತು ಸಾಮಾಜಿಕ ತತ್ವಗಳನ್ನಾಗಿಸಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಈ ಕಾರಣಕ್ಕಾಗಿ ನಮಗೆ ಇಂದು ಅಂಬೇಡ್ಕರ್ ವೈಚಾರಿಕತೆಯ ದೀಕ್ಷೆ ಬೇಕಿದೆ. ಕೇವಲ ರಾಜಕೀಯ ಕ್ಷೇತ್ರವನ್ನು ಮಾತ್ರವಲ್ಲ, ನಮ್ಮ ಸಾಮಾಜಿಕ ನೋಟಕ್ರಮವನ್ನೇ ಬದಲಿಸುವ ಸಲುವಾಗಿ ನಾವಿಂದು ಈ `ಅಂಬೇಡ್ಕರ್ ದೀಕ್ಷೆ’ಯನ್ನು ಪಡೆಯುವ ಅಗತ್ಯವಿದೆ. ಈ ಕಾರಣಕ್ಕಾಗಿ ನಾವಿಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

  • `ಅಂಬೇಡ್ಕರ್ ದೀಕ್ಷೆ’ ಎಂದರೆ, ಅಂಬೇಡ್ಕರ್ ಅವರನ್ನು ಕುರಿತು ಭಜನೆ ಮಾಡುವುದಲ್ಲ. ಅವರ ಪ್ರತಿಮೆಯನ್ನು ಆರಾಧಿಸುವುದಲ್ಲ.
  • `ಅಂಬೇಡ್ಕರ್ ದೀಕ್ಷೆ’ ಎಂದರೆ, ಅಂಬೇಡ್ಕರ್ ಅವರ ಸಾಮಾಜಿಕ, ರಾಜಕೀಯ ಮತ್ತು ಅಧ್ಯಾತ್ಮಿಕ ತತ್ವಗಳನ್ನು ನಾವು ವೈಯಕ್ತಿಕವಾಗಿ ಪಾಲಿಸುವುದು. ಮತ್ತು ಸಮಾಜದ ಇತರರೂ ಈ ತತ್ವಗಳನ್ನು ಆಚರಣೆಗೆ ತರಲು ಪ್ರೇರಣೆ ನೀಡುವುದು.
  • ಸಮಾಜವು ಇಂದು ಅನೇಕ ಕೇಡುಗಳ ವಿರುದ್ಧ ಹೋರಾಡಬೇಕಿದೆ. ಅಸಮಾನತೆ, ಧಾರ್ಮಿಕ ಮೂಲಭೂತವಾದ, ವ್ಯಕ್ತಿಪೂಜೆ, ಕೋಮುವಾದ, ಜಾತಿ ಅಸಹನೆ, ಅತ್ಯಾಚಾರಗಳಂತಹ ಭಯಾನಕ ಆಧುನಿಕ ಕೇಡುಗಳ ವಿರುದ್ಧ ಹೋರಾಡಲು ಮುಂದಾಗಬೇಕಿದೆ.
  • ಈ ಕೇಡುಗಳ ವಿರುದ್ಧ ಹೋರಾಡಲು ನಾವು ಸಂಘಟಿತರಾಗುವ ಅಗತ್ಯವಿದೆ. ಸಂಘಟಿತರಾಗುವುದೆಂದರೆ, ಒಂದು ವೈಚಾರಿಕ ನೆಲೆಗಟ್ಟಿನಲ್ಲಿ ಒಗ್ಗೂಡುವುದು.
  • ಈ ಒಗ್ಗೂಡುವಿಕೆ ಅಖಂಡವಾಗಿರಬೇಕು. ಈ ಅಖಂಡತೆಯನ್ನು ಸಾಧಿಸಲು ನಾವು ಶಿಕ್ಷಣ ಪಡೆಯುವುದು ಅಗತ್ಯ. ಶಿಕ್ಷಣ ಪಡೆಯುವುದೆಂದರೆ, ನಮ್ಮ ವರ್ತಮಾನವನ್ನು ಛಿದ್ರಗೊಳಿಸುತ್ತಿರುವ ಕೇಡು ಮತ್ತು ಹಿಂಸೆಗಳನ್ನು ಅರ್ಥ ಮಾಡಿಕೊಳ್ಳುವುದು.
  • ಈ ಕೇಡು ಹಿಂಸೆಗಳನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ, ಅವುಗಳ ವಿರುದ್ಧ ನಾವು ಪ್ರಬಲ ಹೋರಾಟಗಳನ್ನು ಕಟ್ಟುವ ಅಗತ್ಯವಿದೆ. ಈ ಹೋರಾಟವು ಸಮಾಜದ ಎಲ್ಲ ವರ್ಗಗಳ ದಮನಿತರ ದನಿಗಳನ್ನು ಒಳಗೊಳ್ಳಬೇಕು.
  • ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂಲತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಾವು ಈಗ ಅಂಬೇಡ್ಕರ್ ದೀಕ್ಷೆಯನ್ನು ಯಶಸ್ವಿಗೊಳಿಸುವ ಅಗತ್ಯವಿದೆ.

ಇದನ್ನೂ ಓದಿರಿ: ದಲಿತ ಕುಟುಂಬಕ್ಕೆ ಬೆದರಿಕೆ; ಸ್ವಘೋಷಿತ ದೇವಮಾನವನ ಸಹೋದರನ ವಿರುದ್ಧ ಎಫ್‌ಐಆರ್‌

ಈ ಕಾರಣಕ್ಕಾಗಿ 28/02/2023ರಂದು ಭಟ್ಕಳದ ಅಂಬೇಡ್ಕರ್ ದೀಕ್ಷಾ ಸಮಾವೇಶದಲ್ಲಿ ನಾವೆಲ್ಲ ಭಾಗಿಗಳಾಗೋಣ. ಅಂದಿನ ಈ ಸಮಾವೇಶವನ್ನು ಕಾಗ್ರೆಸ್‌ ಯುವ ನಾಯಕರಾದ ಪ್ರಿಯಾಂಕ್ ಖರ್ಗೆಯವರು ಉದ್ಘಾಟಿಸಲಿದ್ದಾರೆ. ದಲಿತ ಹೋರಾಟಗಾರರಾದ ಮಾವಳ್ಳಿ ಶಂಕರ್, ಎನ್. ವೆಂಕಟೇಶ್, ಪತ್ರಕರ್ತರಾದ ಡಿ. ಉಮಾಪತಿ, ಆದಿವಾಸಿ ಹಕ್ಕುಗಳ ಪರ ಹೋರಾಟಗಾರ ಸಿರಿಗಂಧ ಶ್ರೀನಿವಾಸಮೂರ್ತಿ ಅಂಬೇಡ್ಕರ್ ದೀಕ್ಷೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದ್ದಾರೆ. ಕರಾವಳಿಯ ದುಡಿವ ವರ್ಗಕ್ಕೆ ಸೇರಿದ ನಾಡವ, ನಾಮಧಾರಿ, ಮೊಗೇರ, ಗೊಂಡ, ಖಾರ್ವಿ, ಹರಿಕಾಂತ, ವಿಶ್ವಕರ್ಮ, ಮರಾಠಿ, ರಾಮಕ್ಷತ್ರಿಯ ಸಮಾಜ, ದೇವಾಡಿಗ ಸಮುದಾಯ, ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಪಾಲ್ಗೊಳ್ಳುತ್ತಿವೆ.

ಕಾರ್ಯಕ್ರಮ ಭಾಗವಹಿಸುವ ಸಂಘಟನೆಗಳು

ಲಕ್ಷ್ಮಿ ಸರಸ್ವತಿ ಮೊಗೇರ ವಿದ್ಯಾವರ್ಧಕ ಸಂಘ (ರಿ), ಭಟ್ಕಳ
ಜೈಭೀಮ್ ಸಂಘಟನೆ, ಭಟ್ಕಳ
ಮೀನು ಮಾರಾಟ ಫೇಡರೇಶನ್, ಕಾರವಾರ.
ಜಿಲ್ಲಾ ಮೊಗೇರ ಸಮಾಜ, ಭಟ್ಕಳ
ಖಾರ್ವಿ ಸಮಾಜ ಭಟ್ಕಳ.
ದೇವಾಡಿಗ ಸಮಾಜ ಶಿರಾಲಿ.
ಹರಿಕಾಂತ, ಜಿಲ್ಲಾ ನಾಡದೋಣಿ ಸಂಘ ಮತ್ತು ಸಾಂಪ್ರದಾಯ ಮೀನುಗಾರರ ಒಕ್ಕೂಟ, ಕುಮುಟ
ಮೀನುಗಾರ ಪರ್ಶೀಯನ್ ಬೋಟ್, ಯುನಿಯನ್ ಅಂಕೋಲಾ.
ಸೇವಾ ಸಮಿತಿ, ಕೊಕ್ಕೆಶ್ವರ ದೇವಸ್ಥಾನ ಮತ್ತು ರಾಮಕ್ಷತ್ರಿಯ ಸಮಾಜದ ಮುಖಂಡರು, ಮಂಕಿ, ಹೊನ್ನಾವರ.
ಹರಿಕಾಂತ ಸಮಾಜ ಬೆಳ್ನಿ.
ಗೊಂಡ ಸಮಾಜ, ಭಟ್ಕಳ.
ವಿಶ್ವಕರ್ಮ ಸಮಾಜ ಭಟ್ಕಳ
ಮರಾಠಿ ಸಮಾಜ ಭಟ್ಕಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...