Homeಕರ್ನಾಟಕಹನೂರು ಕ್ಷೇತ್ರ ಸಮೀಕ್ಷೆ: ಕುಟುಂಬ ಪ್ರತಿಷ್ಠೆಯ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಸವಾಲಾಗಬಲ್ಲರೆ?

ಹನೂರು ಕ್ಷೇತ್ರ ಸಮೀಕ್ಷೆ: ಕುಟುಂಬ ಪ್ರತಿಷ್ಠೆಯ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಸವಾಲಾಗಬಲ್ಲರೆ?

ಲಿಂಗಾಯತ ಸಮುದಾಯ ಪ್ರಾಬಲ್ಯವಿರುವ ಹನೂರಿನಲ್ಲಿ ಒಕ್ಕಲಿಗ ಸಮುದಾಯದ ಆರ್.ನರೇಂದ್ರ ಹ್ಯಾಟ್ರಿಕ್ ಗೆಲುವು ಸಾಧಿಸಿರುವುದು ವಿಶೇಷ

- Advertisement -
- Advertisement -

ಕರ್ನಾಟಕದ ಮತದಾರರು ವ್ಯಕ್ತಿಗಿಂತ ಪಕ್ಷವನ್ನು ಪರಿಗಣಿಸುತ್ತಾರೆಂದು ಕೆಲವು ಸಮೀಕ್ಷೆಗಳು ಹೇಳುತ್ತವೆ. ಆದರೆ ಹನೂರು ವಿಧಾನಸಭಾ ಕ್ಷೇತ್ರವು ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಯ ಕ್ಷೇತ್ರ. ಮಾಜಿ ಶಾಸಕರುಗಳಾದ ದಿವಂಗತ ರಾಜೂಗೌಡ ಮತ್ತು ಎಚ್.ನಾಗಪ್ಪ ಕುಟುಂಬವೇ ಇಲ್ಲಿನ ರಾಜಕಾರಣದ ಕ್ಷೇತ್ರ ಬಿಂದು.

ಹೆಚ್ಚೆಂದರೆ 12,000 ಒಕ್ಕಲಿಗ ಮತದಾರರಿರುವ ಈ ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು 45,000 ಲಿಂಗಾಯಿತರಿದ್ದರೂ ಒಕ್ಕಲಿಗ ಸಮುದಾಯದ ರಾಜೂಗೌಡ ಕುಟುಂಬ ಮೇಲುಗೈ ಸಾಧಿಸಿರುವುದು ಇಲ್ಲಿನ ವಿಶೇಷ. ಲಿಂಗಾಯತ ಸಮುದಾಯದ ನಾಗಪ್ಪ ಕುಟುಂಬ ಕ್ಷೇತ್ರವನ್ನು ತನ್ನ ತಕ್ಕೆಗೆ ಮರಳಿ ಪಡೆಯಲು ಸತತ ಯತ್ನಿಸುತ್ತಿದೆ.

ರಾಜೂಗೌಡ ಮತ್ತು ನಾಗಪ್ಪ ಕುಟುಂಬವಷ್ಟೇ ದಶಕಗಳ ಕಾಲ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸುತ್ತಾ ಬಂದಿವೆ. ಈಗಲೂ ಅಷ್ಟೇ ಎರಡು ಕುಟುಂಬಗಳ ನಡುವೆಯೇ ರಾಷ್ಟ್ರೀಯ ಪಕ್ಷಗಳ ಟಿಕೆಟ್ ಹಂಚಿಕೆಯಾಗಿದೆ. ಒಂದು ಕಾಲಕ್ಕೆ ಹನೂರು ವಿಧಾನಸಭಾ ಕ್ಷೇತ್ರವೂ ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಭದ್ರಕೋಟೆಯಾಗಿತ್ತು. ಆದರೆ ನಾಗಪ್ಪನವರು ಕಾಡುಗಳ್ಳ ವೀರಪ್ಪನ್ ಗುಂಡಿಗೆ ಬಲಿಯಾದ ಬಳಿಕ, ಅವರ ಪತ್ನಿ ಪರಿಮಳಾ ನಾಗಪ್ಪ ಸತತವಾಗಿ ಪಕ್ಷ ನಿಷ್ಠೆಯನ್ನು ಬದಲಿಸುತ್ತಾ ಬಂದಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ಇಲ್ಲಿ ಜಾತಿ ಸಮೀಕರಣಕ್ಕಿಂತ ಎರಡು ಕುಟುಂಬಗಳ ಪ್ರತಿಷ್ಠೆಯೇ ಚುನಾವಣಾ ಫಲಿತಾಂಶದ ಫ್ಯಾಕ್ಟರ್ ಆಗಿತ್ತು. ಆದರೆ ಜೆಡಿಎಸ್ಸಿನಲ್ಲಿ ಸಕ್ರಿಯವಾಗಿರುವ, ಕಳೆದ ಚುನಾವಣೆಯಲ್ಲಿ ಸೋತಿಸುವ ರಿಯಲ್ ಎಸ್ಟೇಟ್ ಉದ್ಯಮಿ, ಕುರುಬ ಸಮುದಾಯದ ಎಂ.ಆರ್.ಮಂಜುನಾಥ್ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಸುತ್ತಾಡಿದ್ದಾರೆ. ಕೊರೊನಾ ಸಮಯದಲ್ಲಿ ಒಂದಿಷ್ಟು ಕಾಣೆಯಾಗಿದ್ದು ಬಿಟ್ಟರೆ, ಮಂಜುನಾಥ್ ತನ್ನದೇ ಕಾರ್ಯಕರ್ತರನ್ನು ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಅಭ್ಯರ್ಥಿಯಾಗಿದ್ದಾರೆ. 2018ರ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲು ಮಂಜುನಾಥ್ ಪ್ರವೇಶ ಕಾರಣವಾಗಿತ್ತು. ಈ ಬಾರಿಯೂ ಮಂಜುನಾಥ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದ್ದು, ಮತ್ತೆ ನೆಲೆಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.

ರಾಜೂಗೌಡರ ಪುತ್ರ ಆರ್.ನರೇಂದ್ರ ಅವರು ಕಾಂಗ್ರೆಸ್ಸಿನಿಂದ ಮೂರು ಬಾರಿ ಸತತವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಬಿಟ್ಟರೆ, ಉಳಿದೆರಡು ಅವಧಿಯಲ್ಲಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂಬ ಆರೋಪಗಳಿವೆ. ಆದರೆ ನರೇಂದ್ರ ಅವರು ಹೇಳುವುದೇ ಬೇರೆ. “ಬಿಜೆಪಿಯಂತಹ ಭ್ರಷ್ಟ ಸರ್ಕಾರ ಇನ್ನೊಂದಿಲ್ಲ. ನಮ್ಮ ಕ್ಷೇತ್ರಕ್ಕೆ ನೀಡಬೇಕಾದ ಅನುದಾನವನ್ನು ನೀಡುತ್ತಿಲ್ಲ’’ ಎಂದು ಆರೋಪಿಸುತ್ತಾ ಬಂದಿದ್ದಾರೆ.

ಹನೂರು ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ 50,000, ಪರಿಶಿಷ್ಟ ಪಂಗಡದ 35,000, ಲಿಂಗಾಯತರು 45,000, ತಮಿಳು ಭಾಷಿಕರು 20,000, ಕುರುಬರು 20,000, ಕ್ರಿಶ್ಚಿಯನ್ನರು 10,000, ಉಪ್ಪಾರರು 13,000, ಒಕ್ಕಲಿಗರು 12,000, ಮುಸ್ಲಿಮರು 9,000, ಇತರ ಸಮುದಾಯದ 12,000 ಮತದಾರರು ಇದ್ದಾರೆಂದು ಅಂದಾಜಿಸಲಾಗಿದೆ. ಸಾಮಾನ್ಯ ಕ್ಷೇತ್ರವಾದ ಇಲ್ಲಿ ಲಿಂಗಾಯತರು ಗಣನೀಯವಾಗಿ ಇದ್ದರೂ ನರೇಂದ್ರ ಅವರನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲ.

ಲಿಂಗಾಯತರು ಹೆಚ್ಚಿರುವ ಕಾರಣಕ್ಕೆ ವಸತಿ ಸಚಿವ ವಿ.ಸೋಮಣ್ಣವರ ಕಣ್ಣು ಈ ಕ್ಷೇತ್ರದ ಮೇಲಿತ್ತು. 2018ರ ಚುನಾವಣೆಯಲ್ಲಿಯೂ ಇಲ್ಲಿಂದ ಸ್ಪರ್ಧಿಸುವ ಆಸಕ್ತಿಯನ್ನು ಸೋಮಣ್ಣ ತೋರಿದ್ದರು. ಆದರೆ ನಾಗಪ್ಪನವರ ಪತ್ನಿ, ಪರಿಮಳಾ ನಾಗಪ್ಪ ಅದಕ್ಕೆ ಒಪ್ಪಲಿಲ್ಲ. ಕ್ಷೇತ್ರದ ಮೇಲೆ ಕುಟುಂಬದ ಹಿಡಿತವನ್ನು ಬಿಟ್ಟುಕೊಡಲು ಅವರು ಸಿದ್ಧವಿರಲಿಲ್ಲ. ಹೀಗಾಗಿ ಯಾವುದಾದರೊಂದು ಪಕ್ಷದಲ್ಲಿ ನಾಗಪ್ಪ ಕುಟುಂಬ ಸ್ಪರ್ಧಿಸುತ್ತಾ ಬಂದಿದೆ. ಸೋಲುಗಳನ್ನು ಕಂಡರೂ ಎರಡನೇ ಅತಿಹೆಚ್ಚು ಮತಪಡೆಯುವಲ್ಲಿ ನಾಗಪ್ಪ ಕುಟುಂಬ ಸಫಲವಾಗಿದೆ.

ವಿ.ಸೋಮಣ್ಣ ಮತ್ತು ಪರಿಮಳಾ ನಾಗಪ್ಪ

ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡು ಬೆಳೆದ ದಿವಂಗತ ಎಚ್.ನಾಗಪ್ಪ ಮತ್ತು ಕಾಂಗ್ರೆಸ್ಸಿನಲ್ಲಿದ್ದ ದಿವಂಗತ ರಾಜೂಗೌಡರ ನಡುವೆಯೇ ಹಲವು ಚುನಾವಣೆಗಳಲ್ಲಿ ಪೈಪೋಟಿ ನಡೆದಿರುವುದನ್ನು ಕ್ಷೇತ್ರದ ಚುನಾವಣಾ ಇತಿಹಾಸ ಹೇಳುತ್ತದೆ. 1967ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಎಚ್‌ ನಾಗಪ್ಪ, 1972ರಲ್ಲಿ ಆರ್‌ ರಾಜೇಗೌಡ ಗೆಲುವು ಸಾಧಿಸಿದ್ದರು. 1978ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನ ರಾಜೂಗೌಡ ಗೆದ್ದಿದ್ದರು. ಮತ್ತೆ 1983ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಪಿ.ಶಿವಮೂರ್ತಿ ಗೆಲುವು ಸಾಧಿಸಿದ್ದರು. 1985ರಲ್ಲಿ ಕಾಂಗ್ರೆಸ್‌ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿದ್ದ ರಾಜೂಗೌಡರು ಮತ್ತೆ ಗೆದ್ದು ಕ್ಷೇತ್ರದ ಮೇಲೆ ತಮ್ಮ ಪ್ರಾಬಲ್ಯವನ್ನು ಸಾಬೀತು ಮಾಡಿದ್ದರು. ಬಳಿಕ ನಡೆದ 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮರಳಿದ ರಾಜೂಗೌಡ ಮತ್ತೊಮ್ಮೆ ಆಯ್ಕೆಯಾದರು. 1994ರ ಚುನಾವಣೆಯಲ್ಲಿ ಜನತಾ ದಳದ ಎಚ್‌ ನಾಗಪ್ಪ ಗೆದ್ದರೆ, 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ ರಾಜುಗೌಡ ಮಗದೊಮ್ಮೆ ಗೆದ್ದಿದ್ದರು.

ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾಗಿದ್ದ ನಾಗಪ್ಪ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದನು. ವೀರಪ್ಪನ್ ಕಾರ್ಯಾಚರಣೆ ನಡೆಸುತ್ತಿದ್ದ ಕಾಡಿನ ವ್ಯಾಪ್ತಿಯಲ್ಲೇ ಹನೂರು ಕ್ಷೇತ್ರವಿದೆ. ವೀರಪ್ಪನ್ ಆತಂಕದಲ್ಲೇ ಇಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಕ್ಷೇತ್ರದ ಮಾಜಿ ಶಾಸಕರಾಗಿದ್ದ ಹನೂರು ನಾಗಪ್ಪ ಅವರನ್ನು ಕಾಮಗೆರೆಯ ಅವರ ಮನೆಯಿಂದ 2002ರ ಆಗಸ್ಟ್ ನಲ್ಲಿ ವೀರಪ್ಪನ್ ಅಪಹರಿಸಿದ್ದ. ವೀರಪ್ಪನ್ ವಶದಲ್ಲಿದ್ದಾಗಲೇ ನಾಗಪ್ಪ ಡಿಸೆಂಬರ್ 2002ರಲ್ಲಿ ಚಂಗಡಿ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಘಟನೆ ರಾಜ್ಯದಲ್ಲಿ ತಲ್ಲಣ ಸೃಷ್ಟಿ ಮಾಡಿತು. 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವು ಪರಿಮಳಾ ನಾಗಪ್ಪನವರಿಗೆ ಟಿಕೆಟ್ ನೀಡಿತು. ರಾಜೂಗೌಡ ಅವರ ಪುತ್ರ ನರೇಂದ್ರ ಪ್ರತಿಸ್ಪರ್ಧಿಯಾಗಿದ್ದರು. ಆ ಚುನಾವಣೆಯಲ್ಲಿ ಗೆದ್ದಿದ್ದ ನಾಗಪ್ಪ ಕುಟುಂಬ ಮತ್ತೆ ಇಲ್ಲಿ ಗೆಲುವು ಕಾಣಲಿಲ್ಲ.

2008ರ ವೇಳೆಗೆ ಜೆಡಿಎಸ್ಸಿನೊಂದಿಗೆ ಮುನಿಸಿಕೊಂಡ ಪರಿಮಳಾ ಅವರು ಬಿಎಸ್ಪಿಗೆ ಹಾರಿದರು. ನರೇಂದ್ರ ವಿರುದ್ಧ 23,140 ಮತದಂತರದಲ್ಲಿ ಸೋಲು ಕಂಡಿದ್ದರು. 2013ರಲ್ಲಿ ಯಡಿಯೂರಪ್ಪನವರ ಕೆಜೆಪಿಯಿಂದ ಸ್ಪರ್ಧಿಸುವ ಇಚ್ಛೆ ಪರಿಮಳಾ ಅವರಿಗಿತ್ತು. ಆ ವೇಳೆ ಸೋಮಣ್ಣನವರು ಕೆಜೆಪಿ ಟಿಕೆಟ್ ಪಡೆದು ಹನೂರಿಗೆ ಬರುತ್ತಾರೆಂಬ ಸುದ್ದಿ ಹಬ್ಬಿತು. ಗೊಂದಲದಲ್ಲಿದ್ದ ಪರಿಮಳಾ ಅವರು ಮತ್ತೆ ಜೆಡಿಎಸ್ಸಿಗೆ ಬಂದರು. ಈ ಚುನಾವಣೆಯಲ್ಲಿ 11,549 ಮತಗಳಂತರದಲ್ಲಿ ಮತ್ತೆ ಸೋತರು. ಆ ನಂತರದಲ್ಲಿ ಜೆಡಿಎಸ್ ಟಿಕೆಟ್ ದೊರಕಲಿಲ್ಲ. ನಾಗಪ್ಪ ಕುಟುಂಬ ಬಿಜೆಪಿಗೆ ಹೊರಳಿತು. ಜೆಡಿಎಸ್ ನಿಂದ ಉದ್ಯಮಿ ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಯಿತು. ಬಿಜೆಪಿಯಿಂದ ನಾಗಪ್ಪ ಅವರ ಪುತ್ರ ಡಾ.ಪ್ರೀತನ್ ನಾಗಪ್ಪ ಕಣಕ್ಕಿಳಿದರು. ಭಾರೀ ಪೈಪೋಟಿ ನೀಡಿದ ಪ್ರೀತನ್, ಕೇವಲ 3513 ಮತಗಳ ಅಂತರದಲ್ಲಿ ಸೋತರು. ಪ್ರೀತನ್ ನಾಗಪ್ಪ 56931 ಮತಗಳನ್ನು ಪಡೆದರೆ, ಜೆಡಿಎಸ್ಸಿನ ಎಂ.ಆರ್.ಮಂಜುನಾಥ್ 44,957 ಮತಗಳನ್ನು ಪಡೆದಿರುವುದು ವಿಶೇಷ. ಬಿಎಸ್ಪಿ ಜೊತೆಯಲ್ಲಿ ಜೆಡಿಎಸ್ ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿದ್ದರಿಂದ ಜೆಡಿಎಸ್ ಮತಗಳು ಹೆಚ್ಚಾದವು ಎಂದು ಹೇಳಲಾಗುತ್ತದೆ.

2008, 2013 ಮತ್ತು 2018ರ ಚುನಾವಣೆಗಳಲ್ಲಿ ನರೇಂದ್ರ ಗೆದ್ದಿದ್ದಾರೆ. ನಾಗಪ್ಪ ಕುಟುಂಬಕ್ಕೆ ಕ್ಷೇತ್ರ ಕೈತಪ್ಪಿ ಹೋದರೂ 2018ರ ಚುನಾವಣೆಯಲ್ಲಿ ನಾಗಪ್ಪ ಪುತ್ರ ಪ್ರೀತನ್ ಬಿಜೆಪಿಯಿಂದ ಸ್ಪರ್ಧಿಸಿ ನರೇಂದ್ರ ಅವರಿಗೆ ನಡುಕ ಹುಟ್ಟಿಸಿದ್ದು ಸುಳ್ಳಲ್ಲ.

ಸತತ ಸೋಲುಗಳನ್ನು ಕಂಡಿರುವ ನಾಗಪ್ಪ ಕುಟುಂಬದ ಮೇಲೆ ಕ್ಷೇತ್ರದ ಜನರ ಅನುಕಂಪವಿದೆ. ಆದರೆ ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕವನ್ನು ನರೇಂದ್ರ ಅವರು ಹೊಂದಿರುವುದನ್ನು ಅಲ್ಲಗಳೆಯಲಾಗದು.

ಬೆಂಗಳೂರಿನಲ್ಲಿ ವೈದ್ಯರಾಗಿರುವ ಪ್ರೀತನ್ ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆಂಬ ಆರೋಪಗಳಿವೆ. ಇದು ಪ್ರೀತನ್ ಮೇಲೆ ಗುಮಾನಿ ಹೆಚ್ಚಿಸಲು ಕಾರಣವಾಗಿದೆ. ಇದರ ಜೊತೆಗೆ ಬಿಜೆಪಿಯಿಂದ ಇನ್ನು ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದರು. ಅದರಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದವರು ಡಾ.ಎಸ್.ದತ್ತೇಶ್‌ ಕುಮಾರ್‌.

ಚಾಮರಾಜನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ದತ್ತೇಶ್ ಮೂಲತಃ ಉದ್ಯಮಿ, ಕೊಳ್ಳೇಗಾಲದಲ್ಲಿರುವ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ. 2013ರಲ್ಲಿ ನರೇಂದ್ರ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ, 13,258 ಮತ ಗಳಿಸಿ, ಮೂರನೇ ಸ್ಥಾನದಲ್ಲಿದ್ದರು. 2018ರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪ್ರೀತನ್ ಅವರಿಗೆ ಪಕ್ಷ ಮಣೆ ಹಾಕಿತು. ನಂತರದಲ್ಲಿ ದತ್ತೇಶ್ ಪಕ್ಷ ಸಂಘಟನೆಯತ್ತ ಗಮನ ಹರಿಸಿದರು. ಜಿಲ್ಲಾ ಉಪಾಧ್ಯಕ್ಷ ಸ್ಥಾನವೂ ಅವರಿಗೆ ದೊರಕಿತು. ಇನ್ನೇನು ಟಿಕೆಟ್ ಸಿಗುತ್ತದೆ ಎಂಬ ಉತ್ಸಾಹದಲ್ಲಿದ್ದಾಗ ಮತ್ತೆ ನಾಗಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿತು.

ಇದರಿಂದ ಸಿಟ್ಟಿಗೆದ್ದ ದತ್ತೇಶ್, ಪಕ್ಷ ತೊರೆದು ಕಾಂಗ್ರೆಸ್ ಸೇರುವ ಸೂಚನೆಗಳು ದೊರೆತ್ತಿದ್ದವು. ಆದರೆ ಅಂತಿಮವಾಗಿ ಬಿಜೆಪಿಯಲ್ಲೇ ಉಳಿದು, ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ದತ್ತೇಶ್ ಅವರಂತೆಯೇ ಉದ್ಯಮಿಗಳಾದ ವೆಂಕಟೇಶ್‌, ನಿಶಾಂತ್‌ ಟಿಕೆಟ್‌ಗಾಗಿ ಪೈಪೋಟಿ ನೀಡಿದ್ದರು. ಒಂದೇ ವೇಳೆ ಪ್ರೀತನ್ ಗೆದ್ದರೆ, ಮತ್ತೆ ನಾಗಪ್ಪ ಕುಟುಂಬ ಮೇಲುಗೈ ಸಾಧಿಸುತ್ತದೆ ಎಂಬ ಭಯ ಇತರ ಬಿಜೆಪಿ ಮುಖಂಡರಿಗೆ ಇದ್ದರೆ ಒಳೇಟುಗಳು ಬೀಳುವ ಸಾಧ್ಯತೆ ಇದೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ಸಿನಲ್ಲಿ ಈ ಒಡಕು ಇಲ್ಲವಾಗಿದೆ.

ಉಳಿದಂತೆ ಬಿಎಸ್‌ಪಿಯಿಂದ ಮಾದೇಶ, ಎಎಪಿಯಿಂದ ಕೆ.ಹರೀಶ್‌, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದಿಂದ (ಅಠಾವಳೆ) ಟಿ.ಜಾನ್‌ ಪೀಟರ್‌, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಎನ್‌.ಪ್ರದೀಪ್‌ಕುಮಾರ್‌, ಕರ್ನಾಟಕ ಪ್ರಜಾ ಪಾರ್ಟಿಯಿಂದ (ರೈತ ಪರ್ವ) ಜಿ.ಮುರುಗೇಶನ್‌, ಸರ್ವೋದಯ ಕರ್ನಾಟಕ ಪಕ್ಷದಿಂದ ಶೈಲೇಂದ್ರ ಶ್ರೀಕಂಠಸ್ವಾಮಿ, ಕಂಟ್ರಿ ಸಿಟಿಜನ್‌ ಪಾರ್ಟಿಯಿಂದ ಸಿದ್ದಪ್ಪ ಆರ್‌., ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುರೇಶ್‌ ಎಂ., ಪಕ್ಷೇತರರಾಗಿ ಹನೂರು ನಾಗರಾಜು, ಪ್ರದೀಪ್‌ಕುಮಾರ್‌ ಎಂ, ಮುಜಾಮಿಲ್‌ ಪಾಷಾ, ಟಿ.ಮುತ್ತುರಾಜು, ರಾಜಶೇಖರ್‌, ಸಿ.ಸಿದ್ದಾರ್ಥನ್‌ ಮತ್ತು ಸೆಲ್ವರಾಜ್‌ ಎಸ್‌ ಕಣದಲ್ಲಿದ್ದಾರೆ.

ಮೇಲು ನೋಟಕ್ಕೆ ಬಿಜೆಪಿ- ಕಾಂಗ್ರೆಸ್ ನಡುವೆ ಪೈಪೋಟಿ ಕಂಡು ಬಂದರೂ ಮಂಜುನಾಥ್ ಸುಮ್ಮನೆ ಕೂರುವವರಲ್ಲ. ಹೀಗಾಗಿ ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಕಾಣುತ್ತಿದೆ. ಒಕ್ಕಲಿಗ ಸಮುದಾಯದ ನರೇಂದ್ರ, ಲಿಂಗಾಯತ ಸಮುದಾಯದ ಪ್ರೀತನ್, ಕುರುಬ ಸಮುದಾಯದ ಮಂಜುನಾಥ್ ನಡುವೆ ವಿವಿಧ ಜಾತಿಗಳ ಮತಗಳು ಹೇಗೆ ವಿಭಜನೆಯಾಗುತ್ತವೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ಬಿಜೆಪಿಯೊಳಗೆ ಒಳೇಟು ಹೆಚ್ಚಾದರೆ ಕುಟುಂಬ ಪ್ರತಿಷ್ಠೆಯ ಕಣದಲ್ಲಿ ನರೇಂದ್ರ ಅವರು ಮರು ಆಯ್ಕೆಯಾಗುವ ಸಾಧ್ಯತೆಯೂ ನಿಚ್ಚಳವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...