Homeಕರ್ನಾಟಕಕಲ್ಯಾಣ ಕರ್ನಾಟಕ: ಹೆಸರು ಬದಲಿ ಮಾಡಿದ ಸರಕಾರವನ್ನೇ ಬದಲು ಮಾಡಿದ ಜನ

ಕಲ್ಯಾಣ ಕರ್ನಾಟಕ: ಹೆಸರು ಬದಲಿ ಮಾಡಿದ ಸರಕಾರವನ್ನೇ ಬದಲು ಮಾಡಿದ ಜನ

- Advertisement -
- Advertisement -

ಸೆಪ್ಟಂಬರ್ 2019ರಲ್ಲಿ ಕರ್ನಾಟಕ ಸರಕಾರ ಹೈದರಾಬಾದು ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿತು. ಆಗ ನಾನು ನನ್ನ ಸ್ನೇಹಿತರಲ್ಲಿ ಒಂದು ಸಂದೇಶ ಹಂಚಿಕೊಂಡಿದ್ದೆ- “ನಾಳೆ ಘನ ಸರಕಾರವು ತನ್ನೆಲ್ಲಾ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಮುಂತಾದವರನ್ನು ಈಶಾನ್ಯ ಭಾಗದ ಜಿಲ್ಲೆಗಳಿಗೆ ಕಳಿಸಲಿದೆ. ಅಲ್ಲಿನ ಎಲ್ಲಾ ಬಡವರನ್ನು ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿಸಲಿದ್ದಾರೆ. ಬಡವರೆಲ್ಲಾ ಸಾಲಾಗಿ ನಿಲ್ಲಲಿದ್ದಾರೆ. ಅವರ ಹೆಸರು, ವಿಳಾಸಗಳನ್ನು ಅಧಿಕಾರಿಗಳು ಬರೆದುಕೊಂಡು ದಾಖಲು ಮಾಡಲಿದ್ದಾರೆ. ಆ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಆ ಎಲ್ಲ ಬಡವರ ಹೆಸರುಗಳನ್ನು ಒಂದೊಂದಾಗಿ ಬದಲು ಮಾಡಿ ಎಲ್ಲರಿಗೂ ಲಕ್ಷ್ಮಿ ಪತಿ ಎಂದು ಹೊಸ ಹೆಸರು ಇಡಬೇಕು. ಈ ರೀತಿಯಿಂದ ಕಲ್ಯಾಣ ಕರ್ನಾಟಕದ ಉದ್ಘಾಟನೆ ಆಗಲಿದೆ” ಎಂದು. ಈ ರೀತಿ ಕರ್ನಾಟಕದ ಬಿಜೆಪಿ ಸರಕಾರ ಭಾರತದ ಅತಿ ಹಿಂದುಳಿದ ಭೂಪ್ರದೇಶದ ಕಲ್ಯಾಣ ಮಾಡಿಬಿಟ್ಟೆ ಎಂದು ತಿಳಿದುಕೊಂಡಿತು.

ಇದಕ್ಕೆ ಪ್ರತಿಕ್ರಿಯೆ ಭಿನ್ನವಾಗಿತ್ತು. ಬಹುತೇಕರು ಇದೊಂದು ‘ಗುಡ್ ಜೋಕ್’ ಅಂತ ನಕ್ಕರು. ಅಲ್ಲಿನ ನೆಲದ ಸಂಕಟ ಅರಿತವರು ನನ್ನೊಡನೆ ಮರುಗಿದರು. ಅಂದರೆ ಅಲ್ಲಿನ ಜನ ಮಾತ್ರ ನಗಲಿಲ್ಲ. ಅವರ ಪ್ರತಿಕ್ರಿಯೆ ರಚನಾತ್ಮಕವಾಗಿತ್ತು. ನಾಲ್ಕು ವರ್ಷದ ನಂತರ ಹೈದರಾಬಾದು ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿ ಮಾಡಿದ ಸರಕಾರವೆ ಬದಲಾಗಿಹೋಯಿತು.

ಈಶಾನ್ಯ ಕರ್ನಾಟಕದ ಇತಿಹಾಸದ ಭಾಗ ಆಗಿಹೋಗಿರುವ ನಿಜಾಮ ಸರಕಾರದ ಆಡಳಿತವನ್ನು ನೆನಪಿಸುವ ಹೆಸರು ಹೈದರಬಾದು ಕರ್ನಾಟಕ. ಅದನ್ನು ಅಳಿಸುವ ಪ್ರಯತ್ನ ಮಾಡಿದವರು ಕನಿಷ್ಟ ಪಕ್ಷ ನಿಜಾಮರಿಗಿಂತಲೂ ಒಳ್ಳೆಯ ಆಡಳಿತ ಕೊಡಬೇಕಾಗಿತ್ತು. ಅದನ್ನೂ ಕೊಡಲಿಲ್ಲ.

ಮಲ್ಲಿಕಾರ್ಜುನ್ ಖರ್ಗೆ

ಜಿಲ್ಲಾ ಹಾಗೂ ತಾಲೂಕು ಗಡಿ ಬದಲಾವಣೆಗಳು ಆಗಿದ್ದರಿಂದ 2018ರಲ್ಲಿ ಹೈದ್ರಾಬಾದು ಕರ್ನಾಟಕದಲ್ಲಿ ಇದ್ದ 40 ಸೀಟುಗಳು ಈಗ ಕಲ್ಯಾಣ ಕರ್ನಾಟಕದಲ್ಲಿ 41 ಆಗಿವೆ. ಜನರ ಮನಸ್ಸಿನಲ್ಲಿ ವಿವಿಧ ಪಕ್ಷಗಳ ಕಡೆ ಇದ್ದ ಒಲವೂ ಬದಲಾವಣೆ ಆಗಿದೆ. ಕೇವಲ ಐದು ವರ್ಷದ ಹಿಂದೆ 40ರಲ್ಲಿ 15 ಸೀಟು ಗೆದ್ದ ಆಳುವ ಪಕ್ಷ ಬಿಜೆಪಿ, 10ಕ್ಕೆ ಇಳಿಯಿತು. 21 ಸೀಟು ಗೆದ್ದಿದ್ದ ಕಾಂಗ್ರೆಸ್‌ನ ಬಲ 26ಕ್ಕೆ ಏರಿತು. ನಾಲ್ಕು ಸೀಟು ಗೆದ್ದಿದ್ದ ಜೆಡಿಎಸ್ ಒಂದೇ ಸೀಟು ಉಳಿಸಿಕೊಂಡಿತು. ಇಬ್ಬರು ಸ್ವತಂತ್ರರು ಗೆದ್ದರು.

2019ರಲ್ಲಿ ನಮ್ಮ ಕೆಲ ಪ್ರಜಾ ಪ್ರತಿನಿಧಿಗಳು ಪಕ್ಷ ಬದಲಾವಣೆ ಮಾಡಿದರು. ಅದು ಕೇವಲ ಪ್ರವಚನ-ಭಾಷಣ-ಸಭೆ-ಧ್ಯಾನಗಳಿಂದ ಆಗಲಿಲ್ಲ. ಅದಕ್ಕೆ ಒಂದು ಆಪರೇಷನ್ ಮಾಡಬೇಕಾಯಿತು. ಈ ಆಪರೇಷನ್ ಕಮಲವು ಯಾವುದೇ ಸ್ವಾರ್ಥಕ್ಕಾಗಿ ಅಲ್ಲದೆ, ಕೇವಲ ತಮ್ಮ ಮನ ಪರಿವರ್ತ ಯಿಂದ, ಸೈದ್ಧಾಂತಿಕ ಮರುಚಿಂತನೆಗಳಿಂದಾಗಿ ನಡೆಯಿತು ಎಂದು ಆ ಶಸ್ತ್ರ ಚಿಕಿತ್ಸೆಯಿಂದ ಗುಣವಾಗಿ ಹೊರಬಂದ ನಮ್ಮ ಪ್ರಜಾ ಹಿತರಕ್ಷಕರು ಹೇಳಿಕೊಂಡರು. ಆನಂತರ ಕಾಂಗ್ರೆಸ್ 18 ಸ್ಥಾನಕ್ಕೆ ಕುಸಿಯಿತು. ಬಿಜೆಪಿಯ ಸಂಖ್ಯಾಬಲ ಹೆಚ್ಚಿತು.

ಇದನ್ನೂ ಓದಿ: ನಾನು ಕಂಡಂತೆ ಸಿದ್ದರಾಮಯ್ಯ: ಲೇಖಕ ಕೆ. ಶ್ರೀನಾಥ್

ಈಗ ಸಾಕಷ್ಟು ಬದಲಾವಣೆ ಆಗಿದೆ. ಕಾಂಗ್ರೆಸ್‌ನ ಸಂಖ್ಯೆ 8ರಷ್ಟು ಹೆಚ್ಚಾಗಿದೆ. ಆ ಸೀಟುಗಳನ್ನು ಬಿಜೆಪಿ ಕಳೆದುಕೊಂಡಿದೆ. ಆದರೆ ಈ ಬದಲಾವಣೆ ಏಕರೂಪಿಯಾಗಿಲ್ಲ. ಬಳ್ಳಾರಿಯ ಎಲ್ಲಾ ಐದು ಸ್ಥಾನಗಳು ಕಾಂಗ್ರೆಸ್‌ಗೆ ಲಭಿಸಿದರೆ, ಬೀದರ್‌ನ ಆರು ಸ್ಥಾನಗಳಲ್ಲಿ ಕೇವಲ ಎರಡು ಕಾಂಗ್ರೆಸ್ ಹಾಗೂ ನಾಲ್ಕು ಬಿಜೆಪಿ ಗೆದ್ದುಕೊಂಡಿವೆ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆ ಕಲಬುರ್ಗಿಯಲ್ಲಿ 9ರಲ್ಲಿ 7ನ್ನು ಅವರ ಪಕ್ಷದ ಹುರಿಯಾಳುಗಳು ಗೆದ್ದರೆ, ಕೊಪ್ಪಳದಲ್ಲಿ ಮೂವರು ವಿಜಯಿಯಾಗಿದ್ದಾರೆ. ಹೊಸ ಜಿಲ್ಲೆ ವಿಜಯನಗರದಲ್ಲಿ ಎರಡರಲ್ಲಿ ಕಾಂಗ್ರೆಸ್ ಹುದ್ದರಿಗಳು ಗೆದ್ದರು. ಹಟ ಮಾಡಿ ಹೊಸ ಜಿಲ್ಲೆ ನಿರ್ಮಾಣ ಮಾಡಿದ ಆನಂದ್ ಸಿಂಗ್ ಅವರ ಜಾಗದಲ್ಲಿ ನಿಂತಿದ್ದ ಅವರ ಮಗ ಸಿದ್ಧಾರ್ಥನನ್ನು ಅಲ್ಲಿಯ ಜನ ಸೋಲಿಸಿದರು.

ಹಾಗೆ ಅಂತಹ ಎಲ್ಲ ಕಡೆಗಳ ಫಲಿತಾಂಶಗಳಿಗೆ ರಾಜ್ಯ ಅಥವಾ ಜಿಲ್ಲಾ ಮಟ್ಟದ ಕಾರಣಗಳೇ ಇರಬೇಕು ಅಂತ ಅಲ್ಲ; ಬೀದರ್ ಜಿಲ್ಲೆಯಲ್ಲಿ ಅತಿ ಸ್ಥಳೀಯ ಕಾರಣಗಳಿಂದಾಗಿ, ವಿಪರೀತ ಪರಿಣಾಮ ಬಂದಿದೆ. ಕಲ್ಯಾಣ ಕರ್ನಾಟಕದ ಎಲ್ಲ ಕಡೆ ಕಾಂಗ್ರೆಸ್ ಬಂದರೆ ಇಲ್ಲಿ ಮಾತ್ರ ಬಿಜೆಪಿ ಹೆಚ್ಚು ಸೀಟು ಗೆದ್ದಿದೆ. ರಾಜ್ಯದ ಟ್ರೆಂಡ್‌ಗೆ ಇದು ವಿರುದ್ಧವಾಗಿದೆ. ಇದು ಹೊಸದಲ್ಲ. 1999ರಲ್ಲಿಯೂ ಕೂಡ ಹೀಗೆಯೇ ಆಗಿತ್ತು. ಜಿಲ್ಲೆಗೆ ಒಂದು ಮಂತ್ರಿ ಮಾಡಲೇಬೇಕು ಎಂದುಕೊಂಡು ಬಸವರಾಜ ಪಾಟೀಲ್ ಹುಮ್ನಾಬಾದ್ ಅವರನ್ನು ಪರಿಷತ್ತಿನ ಸದಸ್ಯರನ್ನಾಗಿಸಿ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಲಾಯಿತು.

ಈಶ್ವರ ಸಿಂಗ್ ಠಾಕೂರ್

ಈಗಿನ ಬೀದರ ಫಲಿತಾಂಶಕ್ಕೂ ಅಲ್ಲಿನ ಸ್ಥಳೀಯ ವಿದ್ಯಮಾನಗಳೇ ಕಾರಣ. ಅಲ್ಲಿನ ಕೆಲವು ಬಿಜೆಪಿ ನಾಯಕರು ಕೆಲ ವಿಷಯಗಳ ಬಗ್ಗೆ ಪ್ರತಿಷ್ಟೆ ಬೆಳೆಸಿಕೊಂಡು, ಅವರ ಹಿಂಬಾಲಕರು ಒಗ್ಗೂಡಿ ಕೆಲಸ ಮಾಡದೆ ಇರುವ ಕಾರಣಕ್ಕಾಗಿ ಹಾಗೂ, ತ್ರಿಕೋನ ಸ್ಪರ್ಧೆಯ ಗದ್ದಲದಲ್ಲಿ ಒಬ್ಬರನ್ನು ಸೋಲಿಸಲು ಇನ್ನೊಬ್ಬರನ್ನು ಗೆಲ್ಲಿಸುವ ಆಟ ನಡೆದಿದ. ಅಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಬಜರಂಗ ದಳ ಕಾರ್ಯಕರ್ತ ಈಶ್ವರ ಸಿಂಗ್ ಠಾಕೂರ್ ಅವರು ತಮ್ಮನ್ನು ತಮ್ಮ ಪಕ್ಷದ ಕೆಲ ನಾಯಕರು ಸೋಲಿಸಿದರು ಎಂದು ಆರೋಪಿಸಿದ್ದಾರೆ. ಲೋಕಸಭಾ ಸದಸ್ಯ ಭಗವಂತ ಖೂಬಾ ಅವರು ಬಿಜೆಪಿಯನ್ನು ಏಕವ್ಯಕ್ತಿ ಸಂಸ್ಥೆಯಾಗಿ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ, ಅದರಿಂದ ಹಳೆಯ ಕಾರ್ಯಕರ್ತರು ದೂರ ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಈ ರೀತಿ ಗಾಳಿ ಬೀಸುತ್ತಿದ್ದಾಗ ನಮ್ಮ ಮಾಧ್ಯಮದವರು ತಲೆಗೊಂದು ತರತರ ವಿಚಾರ ಮಾಡಿದರು.

ಬುದ್ಧಿವಂತರ ಜಿಲ್ಲೆಯ ಮೂಲದವರಾದ ಅತಿ ಬುದ್ಧಿವಂತ ದೆಹಲಿ ವಾಸಿ ಪತ್ರಕರ್ತರೊಬ್ಬರು ನನಗೆ ಫೋನು ಮಾಡಿದ್ದರು: “ಬಿಜೆಪಿ- ಸಂಘ ಪರಿವಾರದವರ ಪ್ರಯೋಗ ಕರಾವಳಿಯಲ್ಲಿ ಯಶಸ್ವಿಯಾದಂತೆ ಹೈದರಬಾದು ಕರ್ನಾಟಕದಲ್ಲಿ ಆಗುತ್ತಿಲ್ಲವಲ್ಲಾ ಯಾಕೆ” ಎನ್ನುವುದು ಅವರ ಪ್ರಶ್ನೆ. “ಬಹುಶಃ ಕರಾವಳಿಯಲ್ಲಿ ಅವರ ಬಂಡವಾಳಕ್ಕೆ ತಕ್ಕ ಲಾಭ ಸಿಕ್ಕಷ್ಟು ಈಶಾನ್ಯ ಭಾಗದಲ್ಲಿ ಸಿಕ್ಕಿಲ್ಲ. ಅದಕ್ಕೆ ಅವರು ಅಲ್ಲಿ ಪ್ರಯತ್ನ ಕೈಬಿಟ್ಟಿದ್ದಾರೆ” ಎಂಬ ಅವರ ಸಿದ್ಧಾಂತವನ್ನೂ ಪ್ರತಿಪಾದಿಸಿದರು. ಅದಕ್ಕೆ ನನ್ನ ಪ್ರತಿಕ್ರಿಯೆ ಕೇಳಿದರು.

“ಅದು ಕೇವಲ ರಾಜಕಾರಣ ಇರಲಿಕ್ಕಿಲ್ಲ. ಅದಕ್ಕೆ ಐತಿಹಾಸಿಕ ಕಾರಣ ಇರಬಹುದು. ಕೇವಲ ರಾಜಕೀಯ ಪಕ್ಷ ಅಥವಾ ಸಂಘಟನೆಯ ಪ್ರಯತ್ನವಷ್ಟೆ ಅದಕ್ಕೆ ಕಾರಣ ಅಲ್ಲ ಎಂದು ನಾನು ಹೇಳಿದೆ. “ಈಶಾನ್ಯ ಭಾಗದ ಸಾಂಸ್ಕೃತಿಕ ಪರಂಪರೆ ಅದಕ್ಕೆ ಮುಖ್ಯ ಕಾರಣ. ಅಲ್ಲಿನ ಸೂಫಿ-ಶರಣ ಚಳವಳಿಗಳು ಹಾಗೂ ಎಲ್ಲರಿಗೂ ಬಾಗಿಲು ತೆರೆಯುವ ದರ್ಗಾ ಹಾಗೂ ಮಠಗಳ ಸಂಸ್ಕೃತಿ ಸಹ ಕಾರಣ” ಎಂದು ಸೇರಿಸಿದೆ. “ಅದನ್ನೆಲ್ಲ ನಾನು ನೋಡಿಯೇ ಬಂದಿದ್ದೇನೆ. ಆದೇನೂ ಕಾರಣ ಇರಲಿಕ್ಕಿಲ್ಲ ಎಂದು ಅವರು ತಮ್ಮದೇ ವಾದ ಮಂಡಿಸಿದರು. ರಾಜ್ಯದ ವಿವಿಧ ಭಾಗದ ವಿವಿಧ ಬದಲಾವಣೆಗಳಿಗೆ ಪಕ್ಷ ರಾಜಕೀಯವೆ ಕಾರಣ ಎನ್ನುವ ಅರ್ಥ ಬರುವ ದೊಡ್ಡ ಲೇಖನವೊಂದನ್ನು ಅವರು ದೊಡ್ಡ ಪತ್ರಿಕೆಯೊಂದರಲ್ಲಿ ಬರೆದರು.

‘ಹೇಗಿದೆ?’ ಅಂತ ಆಮೇಲೆ ಕೇಳಿದರು. ‘ಒಳ್ಳೆ ದೂರದರ್ಶನ ವರದಿ ಇದ್ದ ಹಾಗೆ ಇದೆ’ ಎಂದೆ. ಅವರಿಗೆ ಜೋಕು ಅರ್ಥ ಆಗಲಿಲ್ಲ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...