Homeಕರ್ನಾಟಕಕಲ್ಯಾಣ ಕರ್ನಾಟಕ: ಹೆಸರು ಬದಲಿ ಮಾಡಿದ ಸರಕಾರವನ್ನೇ ಬದಲು ಮಾಡಿದ ಜನ

ಕಲ್ಯಾಣ ಕರ್ನಾಟಕ: ಹೆಸರು ಬದಲಿ ಮಾಡಿದ ಸರಕಾರವನ್ನೇ ಬದಲು ಮಾಡಿದ ಜನ

- Advertisement -
- Advertisement -

ಸೆಪ್ಟಂಬರ್ 2019ರಲ್ಲಿ ಕರ್ನಾಟಕ ಸರಕಾರ ಹೈದರಾಬಾದು ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿತು. ಆಗ ನಾನು ನನ್ನ ಸ್ನೇಹಿತರಲ್ಲಿ ಒಂದು ಸಂದೇಶ ಹಂಚಿಕೊಂಡಿದ್ದೆ- “ನಾಳೆ ಘನ ಸರಕಾರವು ತನ್ನೆಲ್ಲಾ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಮುಂತಾದವರನ್ನು ಈಶಾನ್ಯ ಭಾಗದ ಜಿಲ್ಲೆಗಳಿಗೆ ಕಳಿಸಲಿದೆ. ಅಲ್ಲಿನ ಎಲ್ಲಾ ಬಡವರನ್ನು ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿಸಲಿದ್ದಾರೆ. ಬಡವರೆಲ್ಲಾ ಸಾಲಾಗಿ ನಿಲ್ಲಲಿದ್ದಾರೆ. ಅವರ ಹೆಸರು, ವಿಳಾಸಗಳನ್ನು ಅಧಿಕಾರಿಗಳು ಬರೆದುಕೊಂಡು ದಾಖಲು ಮಾಡಲಿದ್ದಾರೆ. ಆ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಆ ಎಲ್ಲ ಬಡವರ ಹೆಸರುಗಳನ್ನು ಒಂದೊಂದಾಗಿ ಬದಲು ಮಾಡಿ ಎಲ್ಲರಿಗೂ ಲಕ್ಷ್ಮಿ ಪತಿ ಎಂದು ಹೊಸ ಹೆಸರು ಇಡಬೇಕು. ಈ ರೀತಿಯಿಂದ ಕಲ್ಯಾಣ ಕರ್ನಾಟಕದ ಉದ್ಘಾಟನೆ ಆಗಲಿದೆ” ಎಂದು. ಈ ರೀತಿ ಕರ್ನಾಟಕದ ಬಿಜೆಪಿ ಸರಕಾರ ಭಾರತದ ಅತಿ ಹಿಂದುಳಿದ ಭೂಪ್ರದೇಶದ ಕಲ್ಯಾಣ ಮಾಡಿಬಿಟ್ಟೆ ಎಂದು ತಿಳಿದುಕೊಂಡಿತು.

ಇದಕ್ಕೆ ಪ್ರತಿಕ್ರಿಯೆ ಭಿನ್ನವಾಗಿತ್ತು. ಬಹುತೇಕರು ಇದೊಂದು ‘ಗುಡ್ ಜೋಕ್’ ಅಂತ ನಕ್ಕರು. ಅಲ್ಲಿನ ನೆಲದ ಸಂಕಟ ಅರಿತವರು ನನ್ನೊಡನೆ ಮರುಗಿದರು. ಅಂದರೆ ಅಲ್ಲಿನ ಜನ ಮಾತ್ರ ನಗಲಿಲ್ಲ. ಅವರ ಪ್ರತಿಕ್ರಿಯೆ ರಚನಾತ್ಮಕವಾಗಿತ್ತು. ನಾಲ್ಕು ವರ್ಷದ ನಂತರ ಹೈದರಾಬಾದು ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿ ಮಾಡಿದ ಸರಕಾರವೆ ಬದಲಾಗಿಹೋಯಿತು.

ಈಶಾನ್ಯ ಕರ್ನಾಟಕದ ಇತಿಹಾಸದ ಭಾಗ ಆಗಿಹೋಗಿರುವ ನಿಜಾಮ ಸರಕಾರದ ಆಡಳಿತವನ್ನು ನೆನಪಿಸುವ ಹೆಸರು ಹೈದರಬಾದು ಕರ್ನಾಟಕ. ಅದನ್ನು ಅಳಿಸುವ ಪ್ರಯತ್ನ ಮಾಡಿದವರು ಕನಿಷ್ಟ ಪಕ್ಷ ನಿಜಾಮರಿಗಿಂತಲೂ ಒಳ್ಳೆಯ ಆಡಳಿತ ಕೊಡಬೇಕಾಗಿತ್ತು. ಅದನ್ನೂ ಕೊಡಲಿಲ್ಲ.

ಮಲ್ಲಿಕಾರ್ಜುನ್ ಖರ್ಗೆ

ಜಿಲ್ಲಾ ಹಾಗೂ ತಾಲೂಕು ಗಡಿ ಬದಲಾವಣೆಗಳು ಆಗಿದ್ದರಿಂದ 2018ರಲ್ಲಿ ಹೈದ್ರಾಬಾದು ಕರ್ನಾಟಕದಲ್ಲಿ ಇದ್ದ 40 ಸೀಟುಗಳು ಈಗ ಕಲ್ಯಾಣ ಕರ್ನಾಟಕದಲ್ಲಿ 41 ಆಗಿವೆ. ಜನರ ಮನಸ್ಸಿನಲ್ಲಿ ವಿವಿಧ ಪಕ್ಷಗಳ ಕಡೆ ಇದ್ದ ಒಲವೂ ಬದಲಾವಣೆ ಆಗಿದೆ. ಕೇವಲ ಐದು ವರ್ಷದ ಹಿಂದೆ 40ರಲ್ಲಿ 15 ಸೀಟು ಗೆದ್ದ ಆಳುವ ಪಕ್ಷ ಬಿಜೆಪಿ, 10ಕ್ಕೆ ಇಳಿಯಿತು. 21 ಸೀಟು ಗೆದ್ದಿದ್ದ ಕಾಂಗ್ರೆಸ್‌ನ ಬಲ 26ಕ್ಕೆ ಏರಿತು. ನಾಲ್ಕು ಸೀಟು ಗೆದ್ದಿದ್ದ ಜೆಡಿಎಸ್ ಒಂದೇ ಸೀಟು ಉಳಿಸಿಕೊಂಡಿತು. ಇಬ್ಬರು ಸ್ವತಂತ್ರರು ಗೆದ್ದರು.

2019ರಲ್ಲಿ ನಮ್ಮ ಕೆಲ ಪ್ರಜಾ ಪ್ರತಿನಿಧಿಗಳು ಪಕ್ಷ ಬದಲಾವಣೆ ಮಾಡಿದರು. ಅದು ಕೇವಲ ಪ್ರವಚನ-ಭಾಷಣ-ಸಭೆ-ಧ್ಯಾನಗಳಿಂದ ಆಗಲಿಲ್ಲ. ಅದಕ್ಕೆ ಒಂದು ಆಪರೇಷನ್ ಮಾಡಬೇಕಾಯಿತು. ಈ ಆಪರೇಷನ್ ಕಮಲವು ಯಾವುದೇ ಸ್ವಾರ್ಥಕ್ಕಾಗಿ ಅಲ್ಲದೆ, ಕೇವಲ ತಮ್ಮ ಮನ ಪರಿವರ್ತ ಯಿಂದ, ಸೈದ್ಧಾಂತಿಕ ಮರುಚಿಂತನೆಗಳಿಂದಾಗಿ ನಡೆಯಿತು ಎಂದು ಆ ಶಸ್ತ್ರ ಚಿಕಿತ್ಸೆಯಿಂದ ಗುಣವಾಗಿ ಹೊರಬಂದ ನಮ್ಮ ಪ್ರಜಾ ಹಿತರಕ್ಷಕರು ಹೇಳಿಕೊಂಡರು. ಆನಂತರ ಕಾಂಗ್ರೆಸ್ 18 ಸ್ಥಾನಕ್ಕೆ ಕುಸಿಯಿತು. ಬಿಜೆಪಿಯ ಸಂಖ್ಯಾಬಲ ಹೆಚ್ಚಿತು.

ಇದನ್ನೂ ಓದಿ: ನಾನು ಕಂಡಂತೆ ಸಿದ್ದರಾಮಯ್ಯ: ಲೇಖಕ ಕೆ. ಶ್ರೀನಾಥ್

ಈಗ ಸಾಕಷ್ಟು ಬದಲಾವಣೆ ಆಗಿದೆ. ಕಾಂಗ್ರೆಸ್‌ನ ಸಂಖ್ಯೆ 8ರಷ್ಟು ಹೆಚ್ಚಾಗಿದೆ. ಆ ಸೀಟುಗಳನ್ನು ಬಿಜೆಪಿ ಕಳೆದುಕೊಂಡಿದೆ. ಆದರೆ ಈ ಬದಲಾವಣೆ ಏಕರೂಪಿಯಾಗಿಲ್ಲ. ಬಳ್ಳಾರಿಯ ಎಲ್ಲಾ ಐದು ಸ್ಥಾನಗಳು ಕಾಂಗ್ರೆಸ್‌ಗೆ ಲಭಿಸಿದರೆ, ಬೀದರ್‌ನ ಆರು ಸ್ಥಾನಗಳಲ್ಲಿ ಕೇವಲ ಎರಡು ಕಾಂಗ್ರೆಸ್ ಹಾಗೂ ನಾಲ್ಕು ಬಿಜೆಪಿ ಗೆದ್ದುಕೊಂಡಿವೆ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆ ಕಲಬುರ್ಗಿಯಲ್ಲಿ 9ರಲ್ಲಿ 7ನ್ನು ಅವರ ಪಕ್ಷದ ಹುರಿಯಾಳುಗಳು ಗೆದ್ದರೆ, ಕೊಪ್ಪಳದಲ್ಲಿ ಮೂವರು ವಿಜಯಿಯಾಗಿದ್ದಾರೆ. ಹೊಸ ಜಿಲ್ಲೆ ವಿಜಯನಗರದಲ್ಲಿ ಎರಡರಲ್ಲಿ ಕಾಂಗ್ರೆಸ್ ಹುದ್ದರಿಗಳು ಗೆದ್ದರು. ಹಟ ಮಾಡಿ ಹೊಸ ಜಿಲ್ಲೆ ನಿರ್ಮಾಣ ಮಾಡಿದ ಆನಂದ್ ಸಿಂಗ್ ಅವರ ಜಾಗದಲ್ಲಿ ನಿಂತಿದ್ದ ಅವರ ಮಗ ಸಿದ್ಧಾರ್ಥನನ್ನು ಅಲ್ಲಿಯ ಜನ ಸೋಲಿಸಿದರು.

ಹಾಗೆ ಅಂತಹ ಎಲ್ಲ ಕಡೆಗಳ ಫಲಿತಾಂಶಗಳಿಗೆ ರಾಜ್ಯ ಅಥವಾ ಜಿಲ್ಲಾ ಮಟ್ಟದ ಕಾರಣಗಳೇ ಇರಬೇಕು ಅಂತ ಅಲ್ಲ; ಬೀದರ್ ಜಿಲ್ಲೆಯಲ್ಲಿ ಅತಿ ಸ್ಥಳೀಯ ಕಾರಣಗಳಿಂದಾಗಿ, ವಿಪರೀತ ಪರಿಣಾಮ ಬಂದಿದೆ. ಕಲ್ಯಾಣ ಕರ್ನಾಟಕದ ಎಲ್ಲ ಕಡೆ ಕಾಂಗ್ರೆಸ್ ಬಂದರೆ ಇಲ್ಲಿ ಮಾತ್ರ ಬಿಜೆಪಿ ಹೆಚ್ಚು ಸೀಟು ಗೆದ್ದಿದೆ. ರಾಜ್ಯದ ಟ್ರೆಂಡ್‌ಗೆ ಇದು ವಿರುದ್ಧವಾಗಿದೆ. ಇದು ಹೊಸದಲ್ಲ. 1999ರಲ್ಲಿಯೂ ಕೂಡ ಹೀಗೆಯೇ ಆಗಿತ್ತು. ಜಿಲ್ಲೆಗೆ ಒಂದು ಮಂತ್ರಿ ಮಾಡಲೇಬೇಕು ಎಂದುಕೊಂಡು ಬಸವರಾಜ ಪಾಟೀಲ್ ಹುಮ್ನಾಬಾದ್ ಅವರನ್ನು ಪರಿಷತ್ತಿನ ಸದಸ್ಯರನ್ನಾಗಿಸಿ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಲಾಯಿತು.

ಈಶ್ವರ ಸಿಂಗ್ ಠಾಕೂರ್

ಈಗಿನ ಬೀದರ ಫಲಿತಾಂಶಕ್ಕೂ ಅಲ್ಲಿನ ಸ್ಥಳೀಯ ವಿದ್ಯಮಾನಗಳೇ ಕಾರಣ. ಅಲ್ಲಿನ ಕೆಲವು ಬಿಜೆಪಿ ನಾಯಕರು ಕೆಲ ವಿಷಯಗಳ ಬಗ್ಗೆ ಪ್ರತಿಷ್ಟೆ ಬೆಳೆಸಿಕೊಂಡು, ಅವರ ಹಿಂಬಾಲಕರು ಒಗ್ಗೂಡಿ ಕೆಲಸ ಮಾಡದೆ ಇರುವ ಕಾರಣಕ್ಕಾಗಿ ಹಾಗೂ, ತ್ರಿಕೋನ ಸ್ಪರ್ಧೆಯ ಗದ್ದಲದಲ್ಲಿ ಒಬ್ಬರನ್ನು ಸೋಲಿಸಲು ಇನ್ನೊಬ್ಬರನ್ನು ಗೆಲ್ಲಿಸುವ ಆಟ ನಡೆದಿದ. ಅಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಬಜರಂಗ ದಳ ಕಾರ್ಯಕರ್ತ ಈಶ್ವರ ಸಿಂಗ್ ಠಾಕೂರ್ ಅವರು ತಮ್ಮನ್ನು ತಮ್ಮ ಪಕ್ಷದ ಕೆಲ ನಾಯಕರು ಸೋಲಿಸಿದರು ಎಂದು ಆರೋಪಿಸಿದ್ದಾರೆ. ಲೋಕಸಭಾ ಸದಸ್ಯ ಭಗವಂತ ಖೂಬಾ ಅವರು ಬಿಜೆಪಿಯನ್ನು ಏಕವ್ಯಕ್ತಿ ಸಂಸ್ಥೆಯಾಗಿ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ, ಅದರಿಂದ ಹಳೆಯ ಕಾರ್ಯಕರ್ತರು ದೂರ ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಈ ರೀತಿ ಗಾಳಿ ಬೀಸುತ್ತಿದ್ದಾಗ ನಮ್ಮ ಮಾಧ್ಯಮದವರು ತಲೆಗೊಂದು ತರತರ ವಿಚಾರ ಮಾಡಿದರು.

ಬುದ್ಧಿವಂತರ ಜಿಲ್ಲೆಯ ಮೂಲದವರಾದ ಅತಿ ಬುದ್ಧಿವಂತ ದೆಹಲಿ ವಾಸಿ ಪತ್ರಕರ್ತರೊಬ್ಬರು ನನಗೆ ಫೋನು ಮಾಡಿದ್ದರು: “ಬಿಜೆಪಿ- ಸಂಘ ಪರಿವಾರದವರ ಪ್ರಯೋಗ ಕರಾವಳಿಯಲ್ಲಿ ಯಶಸ್ವಿಯಾದಂತೆ ಹೈದರಬಾದು ಕರ್ನಾಟಕದಲ್ಲಿ ಆಗುತ್ತಿಲ್ಲವಲ್ಲಾ ಯಾಕೆ” ಎನ್ನುವುದು ಅವರ ಪ್ರಶ್ನೆ. “ಬಹುಶಃ ಕರಾವಳಿಯಲ್ಲಿ ಅವರ ಬಂಡವಾಳಕ್ಕೆ ತಕ್ಕ ಲಾಭ ಸಿಕ್ಕಷ್ಟು ಈಶಾನ್ಯ ಭಾಗದಲ್ಲಿ ಸಿಕ್ಕಿಲ್ಲ. ಅದಕ್ಕೆ ಅವರು ಅಲ್ಲಿ ಪ್ರಯತ್ನ ಕೈಬಿಟ್ಟಿದ್ದಾರೆ” ಎಂಬ ಅವರ ಸಿದ್ಧಾಂತವನ್ನೂ ಪ್ರತಿಪಾದಿಸಿದರು. ಅದಕ್ಕೆ ನನ್ನ ಪ್ರತಿಕ್ರಿಯೆ ಕೇಳಿದರು.

“ಅದು ಕೇವಲ ರಾಜಕಾರಣ ಇರಲಿಕ್ಕಿಲ್ಲ. ಅದಕ್ಕೆ ಐತಿಹಾಸಿಕ ಕಾರಣ ಇರಬಹುದು. ಕೇವಲ ರಾಜಕೀಯ ಪಕ್ಷ ಅಥವಾ ಸಂಘಟನೆಯ ಪ್ರಯತ್ನವಷ್ಟೆ ಅದಕ್ಕೆ ಕಾರಣ ಅಲ್ಲ ಎಂದು ನಾನು ಹೇಳಿದೆ. “ಈಶಾನ್ಯ ಭಾಗದ ಸಾಂಸ್ಕೃತಿಕ ಪರಂಪರೆ ಅದಕ್ಕೆ ಮುಖ್ಯ ಕಾರಣ. ಅಲ್ಲಿನ ಸೂಫಿ-ಶರಣ ಚಳವಳಿಗಳು ಹಾಗೂ ಎಲ್ಲರಿಗೂ ಬಾಗಿಲು ತೆರೆಯುವ ದರ್ಗಾ ಹಾಗೂ ಮಠಗಳ ಸಂಸ್ಕೃತಿ ಸಹ ಕಾರಣ” ಎಂದು ಸೇರಿಸಿದೆ. “ಅದನ್ನೆಲ್ಲ ನಾನು ನೋಡಿಯೇ ಬಂದಿದ್ದೇನೆ. ಆದೇನೂ ಕಾರಣ ಇರಲಿಕ್ಕಿಲ್ಲ ಎಂದು ಅವರು ತಮ್ಮದೇ ವಾದ ಮಂಡಿಸಿದರು. ರಾಜ್ಯದ ವಿವಿಧ ಭಾಗದ ವಿವಿಧ ಬದಲಾವಣೆಗಳಿಗೆ ಪಕ್ಷ ರಾಜಕೀಯವೆ ಕಾರಣ ಎನ್ನುವ ಅರ್ಥ ಬರುವ ದೊಡ್ಡ ಲೇಖನವೊಂದನ್ನು ಅವರು ದೊಡ್ಡ ಪತ್ರಿಕೆಯೊಂದರಲ್ಲಿ ಬರೆದರು.

‘ಹೇಗಿದೆ?’ ಅಂತ ಆಮೇಲೆ ಕೇಳಿದರು. ‘ಒಳ್ಳೆ ದೂರದರ್ಶನ ವರದಿ ಇದ್ದ ಹಾಗೆ ಇದೆ’ ಎಂದೆ. ಅವರಿಗೆ ಜೋಕು ಅರ್ಥ ಆಗಲಿಲ್ಲ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...