Homeಮುಖಪುಟಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

ಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

- Advertisement -
- Advertisement -

15ನೇ ಆಗಸ್ಟ್‌ಗೆ ಒಂದು ದಿನ ಮುನ್ನ ಬಂದ ಈ ಸುದ್ದಿ ಸ್ವಾತಂತ್ರ್ಯದ ಪರವಿರುವ ಪ್ರತಿಯೊಬ್ಬ ಭಾರತೀಯಳಿ/ನಿಗೆ ಚಿಂತೆಗೆ ದೂಡುತ್ತಿದೆ. ಸುದ್ದಿ ಏನೆಂದರೆ, ಅಶೋಕ ಯುನಿವರ್ಸಿಟಿಯ ಅರ್ಥಶಾಸ್ತ್ರದ ಯುವ ಪ್ರೊಫೆಸರ್ ಸಬ್ಯಸಾಚಿ ದಾಸ್ ರಾಜೀನಾಮೆ ನೀಡಬೇಕಾಗಿ ಬಂದಿದೆ. ಅವರು ಮಾಡಿದ ಅಪರಾಧವೇನೆಂದರೆ ಅವರು 2019ರ ಚುನಾವಣೆಗಳ ಅಂಕಿಅಂಶಗಳ ವಿಶ್ಲೇಷಣೆ ಮಾಡಿ ಒಂದು ಅಕೆಡೆಮಿಕ್ ಪ್ರಬಂಧ ಬರೆದಿದ್ದರು. ಈ ಸುದ್ದಿ ದೇಶದ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಉಳಿದುಕೊಂಡಿರುವ ಅಕೆಡೆಮಿಕ್ ಸ್ವಾತಂತ್ರದ ಮೇಲೆ ಘೋರ ಆಘಾತವಾಗಿದೆ.

ಅಂದಹಾಗೆ ಈ ಲೇಖಕರಿಗೆ ಹೆದರುವ ಯಾವ ಕಾರಣವೂ ಸರಕಾರಕ್ಕಿಲ್ಲ. ಸಬ್ಯಸಾಚಿ ದಾಸ್ ಇನ್ನೂ ಒಬ್ಬ ಪ್ರಸಿದ್ಧವಾದ ಅರ್ಥಶಾಸ್ತ್ರಜ್ಞರಲ್ಲ. ಅವರ ಹೆಚ್ಚಿನ ಲೇಖನಗಳು ಕಲ್ಯಾಣ ಯೋಜನೆಗಳ ಮೌಲ್ಯಮಾಪದಂತಹ ಪ್ರಶ್ನೆಗಳ ಮೇಲಿವೆ. ಯಾವುದೇ ರಾಜಕೀಯ ಸಂಘಟನೆ ಅಥವಾ ಸಿದ್ಧಾಂತದೊಂದಿಗೆ ಅವರ ಯಾವುದೇ ಸಂಬಂಧಗಳು ಕಂಡುಬಂದಿಲ್ಲ. ಹಾಗೂ ಸರಕಾರ ತನ್ನ ದಂಡ ಚಲಾಯಿಸಲು ಅಶೋಕ ಯುನಿವರ್ಸಿಟಿ ಯಾವುದೇ ಸರಕಾರಿ ಅನುದಾನದ ಮೇಲೆ ನಡೆಯುವ ಸಂಸ್ಥೆಯಂತೂ ಅಲ್ಲ.

ಯಾವ ಲೇಖನದ ಮೇಲೆ ಇಷ್ಟೊಂದು ವಿವಾದವಾಗಿದೆಯೋ, ಅದು ಈಗ ರಹಸ್ಯವಾಗಿ ಉಳಿದಿಲ್ಲ. ಈ ಲೇಖನವನ್ನು ಕೇವಲ ಒಂದೆರಡು ಕಾನ್ಫರೆನ್ಸ್‌ಗಳಲ್ಲಿ ಪ್ರಸ್ತುತಪಡಿಸಲಾಗಿದೆ ಹಾಗೂ ಪ್ರಕಟವಾಗುವುದಕ್ಕೂ ಮುಂಚೆ ಚರ್ಚೆಗೆ ಲಭ್ಯವಿದೆ. ಈ ಲೇಖನದಲ್ಲಿ ಸರಕಾರದ ಯಾವ ಟೀಕೆಯೂ ಇಲ್ಲ, ಬಿಜೆಪಿಯನ್ನು ನಿಂದಿಸಿಲ್ಲ, ಯಾವುದೇ ಆರೋಪ ಪ್ರತ್ಯಾರೋಪಗಳಿಲ್ಲ ಹಾಗೂ ಯಾವುದೇ ರಾಜಕೀಯ ವಾಗ್ದಾಳಿಯೂ ಇಲ್ಲ. “ಡೆಮಾಕ್ರಟಿಕ್ ಬ್ಯಾಕ್‌ಸ್ಲೈಡಿಂಗ್ ಇನ್ ವರ್ಲ್ಡ್‌ಸ್ ಲಾರ್ಜೆಸ್ಟ್ ಡೆಮಾಕ್ರಸಿ” (ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರಜಾಸತ್ತೆಯ ಹಿನ್ನಡೆ) ತಲೆಬರಹದ ಈ ಲೇಖನದಲ್ಲಿ 2019ರ ಲೋಕಸಭಾ ಚುನಾವಣೆಗಳ ಅಧಿಕೃತ ಪರಿಣಾಮಗಳನ್ನು ಸಂಖ್ಯಾಶಾಸ್ತ್ರದ ವಿಧಾನದ ಮೂಲಕ ವಿಶ್ಲೇಷಣೆ ಮಾಡಿದ್ದಾರೆ. ಒಂದು ಕಾಲದಲ್ಲಿ ನಾನೂ ಈ ವಿಷಯದ ಪರಿಣಿತನಾಗಿದ್ದರಿಂದ ವಿಶ್ವಾಸದಿಂದ ಇಷ್ಟು ಹೇಳಬಲ್ಲೆ; ಸಬ್ಯಸಾಚಿ ದಾಸ್‌ರ ಈ ಲೇಖನ ಭಾರತದ ಚುನಾವಣಾ ಅಂಕಿಅಂಶಗಳ ಮೇಲೆ ಬರೆಯಲಾಗಿರುವ ಅತ್ಯಂತ ಗಂಭೀರ ಹಾಗೂ ಗಹನವಾದ ಲೇಖನಗಳಲ್ಲಿ ಒಂದು ಎಂದು.

ನಿಶಿಕಾಂತ್ ದುಬೆ

ಈ ಅಂಕಿಅಂಶಗಳ ಅಥವಾ ವಿಧಾನದಲ್ಲಿ ಯಾವುದೇ ವಿವಾದವಿಲ್ಲ, ವಿವಾದವಿರುವುದು ಈ ಲೇಖನದ ನಿಷ್ಕರ್ಷದಲ್ಲಿ. 2019ರ ಚುನಾವಣೆಗಳ ಮತಗಟ್ಟೆಯಿಂದ ಹಿಡಿದು ಸೀಟುಗಳ ತನಕ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ ಏನೋ ಸಮಸ್ಯೆ ಇದೆ ಎಂಬ ನಿಷ್ಕರ್ಷಕ್ಕೆ ಲೇಖಕರು ಬರುತ್ತಾರೆ. ಯಾವ 59 ಕ್ಷೇತ್ರಗಳಲ್ಲಿ ಸೋಲುಗೆಲುವಿನ ತೀರ್ಮಾನ ಶೇ.5ಕ್ಕಿಂತ ಕಡಿಮೆ ಆಗಿದೆಯೋ, ಅವುಗಳಲ್ಲಿ 41 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗಣಿತದ ಸಾಮಾನ್ಯ ನಿಯಮಗಳ ಅನುಗುಣವಾಗಿ ಹಾಗೂ ದೇಶ ಮತ್ತು ಜಗತ್ತಿನ ಚುನಾವಣೆಗಳ ಹಳೆಯ ದಾಖಲೆಗಳನ್ನು ನೋಡಿದರೆ, ಇದು ಅತ್ಯಂತ ಅಸಾಮಾನ್ಯವಾದ ಪ್ರವೃತ್ತಿಯಾಗಿ ಕಂಡುಬರುತ್ತದೆ. ಈ ಇಡೀ ಲೇಖನ ಅಸಾಮಾನ್ಯ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನೋಡುತ್ತದೆ. ಬಿಜೆಪಿಯು ಅತ್ಯುತ್ತಮವಾಗಿ ಊಹೆಮಾಡಿರಬಹುದಾದ ಮುನ್ಸೂಚನೆ ಮತ್ತು ಉತ್ತಮವಾದ ಚುನಾವಣಾ ಪ್ರಚಾರದ ಕಾರಣದಿಂದ ಹೀಗೆ ಆಗಿರಬಹುದು ಎಂಬ ಸಾಧ್ಯತೆಯನ್ನು ಈ ಲೇಖನವು ಪರಿಶೀಲಿಸಿ ಅದನ್ನು ತಳ್ಳಿಹಾಕುತ್ತದೆ. ನಂತರ ಒಂದೊಂದು ವಿಷಯಕ್ಕೆ ಸಾಕ್ಷ್ಯ ಒದಗಿಸುತ್ತ ಈ ಲೇಖನವು ಕೆಲವು ಕ್ಷೇತ್ರಗಳಲ್ಲಿ ಅಕ್ರಮ ಆಗಿದೆ ಎಂಬುದನ್ನು ಸೂಚಿಸುತ್ತದೆ. ಲೇಖಕರ ಪ್ರಕಾರ, ಇದು ಕೆಲವು ಆಯ್ದ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಅಥವಾ ಮತದಾನದ ಅಥವಾ ಮತ ಎಣಿಕೆಯಲ್ಲಿ ಅಕ್ರಮ ಮಾಡುವುದರ ಮೂಲಕ ಆಗಿದೆ. ಈ ಲೇಖನ ಸಂಖ್ಯಾಶಾಸ್ತ್ರೀಯ ಪದ್ಧತಿಯ ಮೇಲೆ ಆಧಾರಿತವಾಗಿರುವುದರಿಂದ ಮೋಸದಾಟದ ಸಾಧ್ಯತೆಯನ್ನು ಸೂಚಿಸಬಲ್ಲದು; ಆದರೆ ಅದಕ್ಕೆ ಸಾಕ್ಷ್ಯ ಒದಗಿಸಲಾರದು. ಯಾವುದೇ ಸೆನ್ಸೇಷನಲ್ ಆರೋಪ ಹೊರಿಸುವ ಕೆಲಸ ಮಾಡದೇ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, ಹೀಗೆ ಮಾಡಿದ್ದರೂ ಕೂಡ ಇದರಿಂದ ಬಿಜೆಪಿಗೆ ಗರಿಷ್ಠ 9ರಿಂದ 18 ಸೀಟುಗಳ ನಷ್ಟವಾಗುತ್ತಿತ್ತು. ಅದರಿಂದ ಬಿಜೆಪಿಯ ಬಹುಮತದ ಮೇಲೆ ಯಾವ ಪರಿಣಾಮವೂ ಬೀರುತ್ತಿರಲಿಲ್ಲ. ಹಾಗಾಗಿ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, 2019ರಲ್ಲಿ ಬಿಜೆಪಿಯು ಮೋಸದಿಂದ ಚುನಾವಣೆ ಗೆದ್ದಿತ್ತು ಎಂಬ ನಿಷ್ಕರ್ಷವು ಖಂಡಿತವಾಗಿಯೂ ತಪ್ಪಾಗುತ್ತದೆ.

ಇದನ್ನೂ ಓದಿ: ಸಬ್ಯಸಾಚಿ ದಾಸ್ ಗೆ ಬೆಂಬಲಿಸಿ ಅಶೋಕ ವಿವಿಯ ಮತ್ತೋರ್ವ ಪ್ರಾಧ್ಯಾಪಕ ರಾಜೀನಾಮೆ

ಇಷ್ಟು ಸೀಮಿತವಾದ ಮಾತು ಹೇಳಿದ್ದಕ್ಕೆ ಇಷ್ಟೊಂದು ವಿವಾದ ಸೃಷ್ಟಿಯಾಗಿದೆ. ಬಿಜೆಪಿಯ ಸಮರ್ಥಕರು ಲೇಖಕರ ಮೇಲೆ ಎಲ್ಲಾ ಬಗೆಯ ಅಕೆಡೆಮಿಕ್ ಮತ್ತು ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಇಂತಹ ಲೇಖನ ಬರೆಯುವುದಕ್ಕೆ ನೀವು ಹೇಗೆ ಅನುಮತಿ ನೀಡಿದಿರಿ ಎಂದು ಬಿಜೆಪಿ ಎಂಪಿ ನಿಶಿಕಾಂತ್ ದುಬೆ (ಇವರ ಡಿಗ್ರಿ ಬಗ್ಗೆ ವಿವಾದವಿದೆ) ಅಶೋಕ ಯುನಿವರ್ಸಿಟಿಗೆ ಕೇಳಿದರು. ತಮ್ಮ ಅಧ್ಯಾಪಕರ ಪರವಾಗಿ ನಿಲ್ಲುವುದರ ಬದಲಾಗಿ ಅಶೋಕ ಯುನಿವರ್ಸಿಟಿಯು ಒಂದು ಹೇಳಿಕೆ ನೀಡಿ ಲೇಖನ ಮತ್ತು ಲೇಖಕರಿಂದ ಅಂತರ ಕಾಪಾಡಿಕೊಂಡಿತು. ಈಗ ಗೊತ್ತಾಗಿದ್ದೇನೆಂದರೆ, ಪ್ರೊ ದಾಸ್ ಅವರು ವಿಶ್ವವಿದ್ಯಾಲಯಕ್ಕೆ ರಾಜೀನಾಮೆ ನೀಡಿದ್ದಾರೆ (ಅವರನ್ನು ವಿಶ್ವವಿದ್ಯಾಲಯವು ಕೆಲಸದಿಂದ ತೆಗೆದುಹಾಕಿಲ್ಲ); ಆದರೆ ಇಂತಹ ಪರಿಸ್ಥಿತಿಯಲ್ಲಿ ನೀಡಿದ ರಾಜೀನಾಮೆಯನ್ನು ಐಚ್ಛಿಕ ಸೇವಾನಿವೃತ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಿಸ್ಸಂಶಯವಾಗಿ ಲೇಖಕರ ಮೇಲೆ ಒತ್ತಡ ಹಾಕಲಾಗಿ, ಆ ಕಾರಣದಿಂದ ರಾಜೀನಾಮೆ ನೀಡಬೇಕಾಗಿ ಬಂದಿರುವುದು ಸ್ವಾಭಾವಿಕ.

ಅಶೋಕ ವಿಶ್ವವಿದ್ಯಾಲಯದಲ್ಲಿ ಈ ಘಟನೆ ಆಗಿರುವುದು ದೇಶಕ್ಕೆ ಒಂದು ಅಶುಭ ಸಂಕೇತ ನೀಡಿದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಮುನ್ನ ಪ್ರೊ ಪ್ರತಾಪ್ ಭಾನು ಮೆಹ್ತಾ ಮತ್ತು ರಾಜೇಂದ್ರನ್ ನಾರಾಯಣರಿಗೂ ಸರಕಾರೀ ಒತ್ತಡದ ಅನುಮಾನದ ಕಾರಣದಿಂದ ಇದೇ ಅಶೋಕ ವಿಶ್ವವಿದ್ಯಾಲಯ ತೊರೆಯಬೇಕಾಗಿ ಬಂದಿತ್ತು. ಈ ವಿಶ್ವವಿದ್ಯಾಲಯವು ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳಲ್ಲಿ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ತನ್ನ ಗುರುತು ದಾಖಲಿಸಿಕೊಂಡಿದೆ; ಇದು ಹಣಕಾಸಿನ ವಿಷಯದಲ್ಲೂ ಸರಕಾರಿ ನಿಯಂತ್ರಣದಿಂದ ಸ್ವತಂತ್ರವಾಗಿದೆ. ತಾನು ಅಕೆಡೆಮಿಕ್ ಸ್ವಾತಂತ್ರ್ಯಕ್ಕೆ ಬದ್ಧವಾಗಿರುವುದಾಗಿ ವಿಶ್ವವಿದ್ಯಾಲಯ ಹೇಳಿಕೊಳ್ಳುತ್ತದೆ.

ಒಂದು ವೇಳೆ ಇಂತಹ ವಿಶ್ವವಿದ್ಯಾಲಯದ ಯಾವುದೇ ಅಧ್ಯಾಪಕನಿ/ಳಿಗೆ ತನ್ನ ಸಂಶೋಧನೆಗೆ ಇಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂದರೆ ದೇಶದ ಉಳಿದೆಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಅಕೆಡೆಮಿಕ್ ಸಂಸ್ಥೆಗಳ ಪರಿಸ್ಥಿತಿ ಹೇಗಿರಬಹುದು ಎಂಬುದು ಸ್ಪಷ್ಟವಾಗುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ವಕಾಲತ್ತು ಮಾಡುತ್ತ ಜಾನ್ ಸ್ಟುವರ್ಟ್ ಮಿಲ್ ಹೇಳಿದ್ದೇನೆಂದರೆ, ’ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕೇವಲ ಸತ್ಯ ಮತ್ತು ಪ್ರಾಮಾಣಿಕ ಮಾತುಗಳನ್ನು ಹೇಳುವ ಸ್ವಾತಂತ್ರ್ಯವಲ್ಲ. ಕೆಲವು ಅಪವಾದಗಳನ್ನು ಹೊರತುಪಡಿಸಿ, ಯಾವುದನ್ನು ನಾವು ಅಸತ್ಯ ಎಂದುಕೊಳ್ಳುತ್ತೇವೋ, ಅದನ್ನು ಸಾರ್ವಜನಿಕವಾಗಿ ಹೇಳುವ ಸ್ವಾತಂತ್ರ್ಯ ಇರಬೇಕು, ಆಗ ಅದರ ಸಾರ್ವಜನಿಕ ಖಂಡನೆ, ನಿರಾಕರಣೆ ಆಗಿ, ನಾವೆಲ್ಲ ಸತ್ಯದ ದಿಕ್ಕಿನಲ್ಲಿ ಮುಂದೆಹೋಗಬಹುದು’ ಎಂದು. ಹಾಗಾಗಿ, ಸಬ್ಯಸಾಚಿ ದಾಸ್‌ರ ಲೇಖನ ದೋಷಪೂರ್ಣವಾಗಿದೆ ಹಾಗೂ ಅವರ ನಿಷ್ಕರ್ಷ ಪೊಳ್ಳಾಗಿದೆ ಎಂದು ವಾದಕ್ಕಾಗಿ ಒಂದು ಕ್ಷಣ ಒಪ್ಪಿಕೊಂಡರೂ ಸಹ ಆಗಲೂ ಅವರ ಧ್ವನಿ ಹತ್ತಿಕ್ಕುವುದು ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರ ಅಂಕಿಅಂಶಗಳು, ವಿಧಾನ ಮತ್ತು ನಿಷ್ಕರ್ಷದ ನಿರಾಕರಣೆ ಮಾಡಲು, ಖಂಡಿಸಲು ಅಧಿಕಾರವಿದೆ; ಆ ಪ್ರಯತ್ನವನ್ನು ಬಿಜೆಪಿ ಸಮರ್ಥಕರು ಕಳೆದ ಎರಡು ವಾರಗಳಿಂದ ಮಾಡಿದ್ದಾರೆ. ಆದರೆ ಅಧಿಕಾದ ಬಲದಿಂದ ಇಂತಹ ಧ್ವನಿಯನ್ನು ಮುಚ್ಚಿಹಾಕುವುದು ನಮ್ಮ ಪ್ರಜಾಪ್ರಭುತ್ವದ ದೌರ್ಬಲ್ಯದ ಸೂಚನೆ ನೀಡುತ್ತದೆ. ಇದರಿಂದ ಸಬ್ಯಸಾಚಿ ದಾಸ್ ಅವರು ಆಡಳಿತ ಪಕ್ಷದ ದೌರ್ಬಲ್ಯದ ಮೇಲೆಯೇ ದಾಳಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತೆ ಹಾಗೂ ಏನೋ ಅಕ್ರಮ ನಡೆದಿದೆ ಎಂಬ ಅನುಮಾನಕ್ಕೆ ಪುಷ್ಟಿನೀಡುತ್ತದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷರು. ರೈತ ಸಮಸ್ಯೆಗಳನ್ನು ಒಳಗೊಂಡಂತೆ ಪ್ರಸಕ್ತ ದೇಶದ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಯೋಗೇಂದ್ರ ಅವರು ಜನಪರ ಹೋರಾಟಗಳಲ್ಲಿ ಭಾಗಿಯಾಗುವಂತೆಯೇ ಅವುಗಳ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಸಲು ಜನಪ್ರಿಯ ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...