Homeಮುಖಪುಟಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

ಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

- Advertisement -
- Advertisement -

15ನೇ ಆಗಸ್ಟ್‌ಗೆ ಒಂದು ದಿನ ಮುನ್ನ ಬಂದ ಈ ಸುದ್ದಿ ಸ್ವಾತಂತ್ರ್ಯದ ಪರವಿರುವ ಪ್ರತಿಯೊಬ್ಬ ಭಾರತೀಯಳಿ/ನಿಗೆ ಚಿಂತೆಗೆ ದೂಡುತ್ತಿದೆ. ಸುದ್ದಿ ಏನೆಂದರೆ, ಅಶೋಕ ಯುನಿವರ್ಸಿಟಿಯ ಅರ್ಥಶಾಸ್ತ್ರದ ಯುವ ಪ್ರೊಫೆಸರ್ ಸಬ್ಯಸಾಚಿ ದಾಸ್ ರಾಜೀನಾಮೆ ನೀಡಬೇಕಾಗಿ ಬಂದಿದೆ. ಅವರು ಮಾಡಿದ ಅಪರಾಧವೇನೆಂದರೆ ಅವರು 2019ರ ಚುನಾವಣೆಗಳ ಅಂಕಿಅಂಶಗಳ ವಿಶ್ಲೇಷಣೆ ಮಾಡಿ ಒಂದು ಅಕೆಡೆಮಿಕ್ ಪ್ರಬಂಧ ಬರೆದಿದ್ದರು. ಈ ಸುದ್ದಿ ದೇಶದ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಉಳಿದುಕೊಂಡಿರುವ ಅಕೆಡೆಮಿಕ್ ಸ್ವಾತಂತ್ರದ ಮೇಲೆ ಘೋರ ಆಘಾತವಾಗಿದೆ.

ಅಂದಹಾಗೆ ಈ ಲೇಖಕರಿಗೆ ಹೆದರುವ ಯಾವ ಕಾರಣವೂ ಸರಕಾರಕ್ಕಿಲ್ಲ. ಸಬ್ಯಸಾಚಿ ದಾಸ್ ಇನ್ನೂ ಒಬ್ಬ ಪ್ರಸಿದ್ಧವಾದ ಅರ್ಥಶಾಸ್ತ್ರಜ್ಞರಲ್ಲ. ಅವರ ಹೆಚ್ಚಿನ ಲೇಖನಗಳು ಕಲ್ಯಾಣ ಯೋಜನೆಗಳ ಮೌಲ್ಯಮಾಪದಂತಹ ಪ್ರಶ್ನೆಗಳ ಮೇಲಿವೆ. ಯಾವುದೇ ರಾಜಕೀಯ ಸಂಘಟನೆ ಅಥವಾ ಸಿದ್ಧಾಂತದೊಂದಿಗೆ ಅವರ ಯಾವುದೇ ಸಂಬಂಧಗಳು ಕಂಡುಬಂದಿಲ್ಲ. ಹಾಗೂ ಸರಕಾರ ತನ್ನ ದಂಡ ಚಲಾಯಿಸಲು ಅಶೋಕ ಯುನಿವರ್ಸಿಟಿ ಯಾವುದೇ ಸರಕಾರಿ ಅನುದಾನದ ಮೇಲೆ ನಡೆಯುವ ಸಂಸ್ಥೆಯಂತೂ ಅಲ್ಲ.

ಯಾವ ಲೇಖನದ ಮೇಲೆ ಇಷ್ಟೊಂದು ವಿವಾದವಾಗಿದೆಯೋ, ಅದು ಈಗ ರಹಸ್ಯವಾಗಿ ಉಳಿದಿಲ್ಲ. ಈ ಲೇಖನವನ್ನು ಕೇವಲ ಒಂದೆರಡು ಕಾನ್ಫರೆನ್ಸ್‌ಗಳಲ್ಲಿ ಪ್ರಸ್ತುತಪಡಿಸಲಾಗಿದೆ ಹಾಗೂ ಪ್ರಕಟವಾಗುವುದಕ್ಕೂ ಮುಂಚೆ ಚರ್ಚೆಗೆ ಲಭ್ಯವಿದೆ. ಈ ಲೇಖನದಲ್ಲಿ ಸರಕಾರದ ಯಾವ ಟೀಕೆಯೂ ಇಲ್ಲ, ಬಿಜೆಪಿಯನ್ನು ನಿಂದಿಸಿಲ್ಲ, ಯಾವುದೇ ಆರೋಪ ಪ್ರತ್ಯಾರೋಪಗಳಿಲ್ಲ ಹಾಗೂ ಯಾವುದೇ ರಾಜಕೀಯ ವಾಗ್ದಾಳಿಯೂ ಇಲ್ಲ. “ಡೆಮಾಕ್ರಟಿಕ್ ಬ್ಯಾಕ್‌ಸ್ಲೈಡಿಂಗ್ ಇನ್ ವರ್ಲ್ಡ್‌ಸ್ ಲಾರ್ಜೆಸ್ಟ್ ಡೆಮಾಕ್ರಸಿ” (ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರಜಾಸತ್ತೆಯ ಹಿನ್ನಡೆ) ತಲೆಬರಹದ ಈ ಲೇಖನದಲ್ಲಿ 2019ರ ಲೋಕಸಭಾ ಚುನಾವಣೆಗಳ ಅಧಿಕೃತ ಪರಿಣಾಮಗಳನ್ನು ಸಂಖ್ಯಾಶಾಸ್ತ್ರದ ವಿಧಾನದ ಮೂಲಕ ವಿಶ್ಲೇಷಣೆ ಮಾಡಿದ್ದಾರೆ. ಒಂದು ಕಾಲದಲ್ಲಿ ನಾನೂ ಈ ವಿಷಯದ ಪರಿಣಿತನಾಗಿದ್ದರಿಂದ ವಿಶ್ವಾಸದಿಂದ ಇಷ್ಟು ಹೇಳಬಲ್ಲೆ; ಸಬ್ಯಸಾಚಿ ದಾಸ್‌ರ ಈ ಲೇಖನ ಭಾರತದ ಚುನಾವಣಾ ಅಂಕಿಅಂಶಗಳ ಮೇಲೆ ಬರೆಯಲಾಗಿರುವ ಅತ್ಯಂತ ಗಂಭೀರ ಹಾಗೂ ಗಹನವಾದ ಲೇಖನಗಳಲ್ಲಿ ಒಂದು ಎಂದು.

ನಿಶಿಕಾಂತ್ ದುಬೆ

ಈ ಅಂಕಿಅಂಶಗಳ ಅಥವಾ ವಿಧಾನದಲ್ಲಿ ಯಾವುದೇ ವಿವಾದವಿಲ್ಲ, ವಿವಾದವಿರುವುದು ಈ ಲೇಖನದ ನಿಷ್ಕರ್ಷದಲ್ಲಿ. 2019ರ ಚುನಾವಣೆಗಳ ಮತಗಟ್ಟೆಯಿಂದ ಹಿಡಿದು ಸೀಟುಗಳ ತನಕ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ ಏನೋ ಸಮಸ್ಯೆ ಇದೆ ಎಂಬ ನಿಷ್ಕರ್ಷಕ್ಕೆ ಲೇಖಕರು ಬರುತ್ತಾರೆ. ಯಾವ 59 ಕ್ಷೇತ್ರಗಳಲ್ಲಿ ಸೋಲುಗೆಲುವಿನ ತೀರ್ಮಾನ ಶೇ.5ಕ್ಕಿಂತ ಕಡಿಮೆ ಆಗಿದೆಯೋ, ಅವುಗಳಲ್ಲಿ 41 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗಣಿತದ ಸಾಮಾನ್ಯ ನಿಯಮಗಳ ಅನುಗುಣವಾಗಿ ಹಾಗೂ ದೇಶ ಮತ್ತು ಜಗತ್ತಿನ ಚುನಾವಣೆಗಳ ಹಳೆಯ ದಾಖಲೆಗಳನ್ನು ನೋಡಿದರೆ, ಇದು ಅತ್ಯಂತ ಅಸಾಮಾನ್ಯವಾದ ಪ್ರವೃತ್ತಿಯಾಗಿ ಕಂಡುಬರುತ್ತದೆ. ಈ ಇಡೀ ಲೇಖನ ಅಸಾಮಾನ್ಯ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನೋಡುತ್ತದೆ. ಬಿಜೆಪಿಯು ಅತ್ಯುತ್ತಮವಾಗಿ ಊಹೆಮಾಡಿರಬಹುದಾದ ಮುನ್ಸೂಚನೆ ಮತ್ತು ಉತ್ತಮವಾದ ಚುನಾವಣಾ ಪ್ರಚಾರದ ಕಾರಣದಿಂದ ಹೀಗೆ ಆಗಿರಬಹುದು ಎಂಬ ಸಾಧ್ಯತೆಯನ್ನು ಈ ಲೇಖನವು ಪರಿಶೀಲಿಸಿ ಅದನ್ನು ತಳ್ಳಿಹಾಕುತ್ತದೆ. ನಂತರ ಒಂದೊಂದು ವಿಷಯಕ್ಕೆ ಸಾಕ್ಷ್ಯ ಒದಗಿಸುತ್ತ ಈ ಲೇಖನವು ಕೆಲವು ಕ್ಷೇತ್ರಗಳಲ್ಲಿ ಅಕ್ರಮ ಆಗಿದೆ ಎಂಬುದನ್ನು ಸೂಚಿಸುತ್ತದೆ. ಲೇಖಕರ ಪ್ರಕಾರ, ಇದು ಕೆಲವು ಆಯ್ದ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಅಥವಾ ಮತದಾನದ ಅಥವಾ ಮತ ಎಣಿಕೆಯಲ್ಲಿ ಅಕ್ರಮ ಮಾಡುವುದರ ಮೂಲಕ ಆಗಿದೆ. ಈ ಲೇಖನ ಸಂಖ್ಯಾಶಾಸ್ತ್ರೀಯ ಪದ್ಧತಿಯ ಮೇಲೆ ಆಧಾರಿತವಾಗಿರುವುದರಿಂದ ಮೋಸದಾಟದ ಸಾಧ್ಯತೆಯನ್ನು ಸೂಚಿಸಬಲ್ಲದು; ಆದರೆ ಅದಕ್ಕೆ ಸಾಕ್ಷ್ಯ ಒದಗಿಸಲಾರದು. ಯಾವುದೇ ಸೆನ್ಸೇಷನಲ್ ಆರೋಪ ಹೊರಿಸುವ ಕೆಲಸ ಮಾಡದೇ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, ಹೀಗೆ ಮಾಡಿದ್ದರೂ ಕೂಡ ಇದರಿಂದ ಬಿಜೆಪಿಗೆ ಗರಿಷ್ಠ 9ರಿಂದ 18 ಸೀಟುಗಳ ನಷ್ಟವಾಗುತ್ತಿತ್ತು. ಅದರಿಂದ ಬಿಜೆಪಿಯ ಬಹುಮತದ ಮೇಲೆ ಯಾವ ಪರಿಣಾಮವೂ ಬೀರುತ್ತಿರಲಿಲ್ಲ. ಹಾಗಾಗಿ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, 2019ರಲ್ಲಿ ಬಿಜೆಪಿಯು ಮೋಸದಿಂದ ಚುನಾವಣೆ ಗೆದ್ದಿತ್ತು ಎಂಬ ನಿಷ್ಕರ್ಷವು ಖಂಡಿತವಾಗಿಯೂ ತಪ್ಪಾಗುತ್ತದೆ.

ಇದನ್ನೂ ಓದಿ: ಸಬ್ಯಸಾಚಿ ದಾಸ್ ಗೆ ಬೆಂಬಲಿಸಿ ಅಶೋಕ ವಿವಿಯ ಮತ್ತೋರ್ವ ಪ್ರಾಧ್ಯಾಪಕ ರಾಜೀನಾಮೆ

ಇಷ್ಟು ಸೀಮಿತವಾದ ಮಾತು ಹೇಳಿದ್ದಕ್ಕೆ ಇಷ್ಟೊಂದು ವಿವಾದ ಸೃಷ್ಟಿಯಾಗಿದೆ. ಬಿಜೆಪಿಯ ಸಮರ್ಥಕರು ಲೇಖಕರ ಮೇಲೆ ಎಲ್ಲಾ ಬಗೆಯ ಅಕೆಡೆಮಿಕ್ ಮತ್ತು ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಇಂತಹ ಲೇಖನ ಬರೆಯುವುದಕ್ಕೆ ನೀವು ಹೇಗೆ ಅನುಮತಿ ನೀಡಿದಿರಿ ಎಂದು ಬಿಜೆಪಿ ಎಂಪಿ ನಿಶಿಕಾಂತ್ ದುಬೆ (ಇವರ ಡಿಗ್ರಿ ಬಗ್ಗೆ ವಿವಾದವಿದೆ) ಅಶೋಕ ಯುನಿವರ್ಸಿಟಿಗೆ ಕೇಳಿದರು. ತಮ್ಮ ಅಧ್ಯಾಪಕರ ಪರವಾಗಿ ನಿಲ್ಲುವುದರ ಬದಲಾಗಿ ಅಶೋಕ ಯುನಿವರ್ಸಿಟಿಯು ಒಂದು ಹೇಳಿಕೆ ನೀಡಿ ಲೇಖನ ಮತ್ತು ಲೇಖಕರಿಂದ ಅಂತರ ಕಾಪಾಡಿಕೊಂಡಿತು. ಈಗ ಗೊತ್ತಾಗಿದ್ದೇನೆಂದರೆ, ಪ್ರೊ ದಾಸ್ ಅವರು ವಿಶ್ವವಿದ್ಯಾಲಯಕ್ಕೆ ರಾಜೀನಾಮೆ ನೀಡಿದ್ದಾರೆ (ಅವರನ್ನು ವಿಶ್ವವಿದ್ಯಾಲಯವು ಕೆಲಸದಿಂದ ತೆಗೆದುಹಾಕಿಲ್ಲ); ಆದರೆ ಇಂತಹ ಪರಿಸ್ಥಿತಿಯಲ್ಲಿ ನೀಡಿದ ರಾಜೀನಾಮೆಯನ್ನು ಐಚ್ಛಿಕ ಸೇವಾನಿವೃತ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಿಸ್ಸಂಶಯವಾಗಿ ಲೇಖಕರ ಮೇಲೆ ಒತ್ತಡ ಹಾಕಲಾಗಿ, ಆ ಕಾರಣದಿಂದ ರಾಜೀನಾಮೆ ನೀಡಬೇಕಾಗಿ ಬಂದಿರುವುದು ಸ್ವಾಭಾವಿಕ.

ಅಶೋಕ ವಿಶ್ವವಿದ್ಯಾಲಯದಲ್ಲಿ ಈ ಘಟನೆ ಆಗಿರುವುದು ದೇಶಕ್ಕೆ ಒಂದು ಅಶುಭ ಸಂಕೇತ ನೀಡಿದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಮುನ್ನ ಪ್ರೊ ಪ್ರತಾಪ್ ಭಾನು ಮೆಹ್ತಾ ಮತ್ತು ರಾಜೇಂದ್ರನ್ ನಾರಾಯಣರಿಗೂ ಸರಕಾರೀ ಒತ್ತಡದ ಅನುಮಾನದ ಕಾರಣದಿಂದ ಇದೇ ಅಶೋಕ ವಿಶ್ವವಿದ್ಯಾಲಯ ತೊರೆಯಬೇಕಾಗಿ ಬಂದಿತ್ತು. ಈ ವಿಶ್ವವಿದ್ಯಾಲಯವು ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳಲ್ಲಿ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ತನ್ನ ಗುರುತು ದಾಖಲಿಸಿಕೊಂಡಿದೆ; ಇದು ಹಣಕಾಸಿನ ವಿಷಯದಲ್ಲೂ ಸರಕಾರಿ ನಿಯಂತ್ರಣದಿಂದ ಸ್ವತಂತ್ರವಾಗಿದೆ. ತಾನು ಅಕೆಡೆಮಿಕ್ ಸ್ವಾತಂತ್ರ್ಯಕ್ಕೆ ಬದ್ಧವಾಗಿರುವುದಾಗಿ ವಿಶ್ವವಿದ್ಯಾಲಯ ಹೇಳಿಕೊಳ್ಳುತ್ತದೆ.

ಒಂದು ವೇಳೆ ಇಂತಹ ವಿಶ್ವವಿದ್ಯಾಲಯದ ಯಾವುದೇ ಅಧ್ಯಾಪಕನಿ/ಳಿಗೆ ತನ್ನ ಸಂಶೋಧನೆಗೆ ಇಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂದರೆ ದೇಶದ ಉಳಿದೆಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಅಕೆಡೆಮಿಕ್ ಸಂಸ್ಥೆಗಳ ಪರಿಸ್ಥಿತಿ ಹೇಗಿರಬಹುದು ಎಂಬುದು ಸ್ಪಷ್ಟವಾಗುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ವಕಾಲತ್ತು ಮಾಡುತ್ತ ಜಾನ್ ಸ್ಟುವರ್ಟ್ ಮಿಲ್ ಹೇಳಿದ್ದೇನೆಂದರೆ, ’ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕೇವಲ ಸತ್ಯ ಮತ್ತು ಪ್ರಾಮಾಣಿಕ ಮಾತುಗಳನ್ನು ಹೇಳುವ ಸ್ವಾತಂತ್ರ್ಯವಲ್ಲ. ಕೆಲವು ಅಪವಾದಗಳನ್ನು ಹೊರತುಪಡಿಸಿ, ಯಾವುದನ್ನು ನಾವು ಅಸತ್ಯ ಎಂದುಕೊಳ್ಳುತ್ತೇವೋ, ಅದನ್ನು ಸಾರ್ವಜನಿಕವಾಗಿ ಹೇಳುವ ಸ್ವಾತಂತ್ರ್ಯ ಇರಬೇಕು, ಆಗ ಅದರ ಸಾರ್ವಜನಿಕ ಖಂಡನೆ, ನಿರಾಕರಣೆ ಆಗಿ, ನಾವೆಲ್ಲ ಸತ್ಯದ ದಿಕ್ಕಿನಲ್ಲಿ ಮುಂದೆಹೋಗಬಹುದು’ ಎಂದು. ಹಾಗಾಗಿ, ಸಬ್ಯಸಾಚಿ ದಾಸ್‌ರ ಲೇಖನ ದೋಷಪೂರ್ಣವಾಗಿದೆ ಹಾಗೂ ಅವರ ನಿಷ್ಕರ್ಷ ಪೊಳ್ಳಾಗಿದೆ ಎಂದು ವಾದಕ್ಕಾಗಿ ಒಂದು ಕ್ಷಣ ಒಪ್ಪಿಕೊಂಡರೂ ಸಹ ಆಗಲೂ ಅವರ ಧ್ವನಿ ಹತ್ತಿಕ್ಕುವುದು ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರ ಅಂಕಿಅಂಶಗಳು, ವಿಧಾನ ಮತ್ತು ನಿಷ್ಕರ್ಷದ ನಿರಾಕರಣೆ ಮಾಡಲು, ಖಂಡಿಸಲು ಅಧಿಕಾರವಿದೆ; ಆ ಪ್ರಯತ್ನವನ್ನು ಬಿಜೆಪಿ ಸಮರ್ಥಕರು ಕಳೆದ ಎರಡು ವಾರಗಳಿಂದ ಮಾಡಿದ್ದಾರೆ. ಆದರೆ ಅಧಿಕಾದ ಬಲದಿಂದ ಇಂತಹ ಧ್ವನಿಯನ್ನು ಮುಚ್ಚಿಹಾಕುವುದು ನಮ್ಮ ಪ್ರಜಾಪ್ರಭುತ್ವದ ದೌರ್ಬಲ್ಯದ ಸೂಚನೆ ನೀಡುತ್ತದೆ. ಇದರಿಂದ ಸಬ್ಯಸಾಚಿ ದಾಸ್ ಅವರು ಆಡಳಿತ ಪಕ್ಷದ ದೌರ್ಬಲ್ಯದ ಮೇಲೆಯೇ ದಾಳಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತೆ ಹಾಗೂ ಏನೋ ಅಕ್ರಮ ನಡೆದಿದೆ ಎಂಬ ಅನುಮಾನಕ್ಕೆ ಪುಷ್ಟಿನೀಡುತ್ತದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷರು. ರೈತ ಸಮಸ್ಯೆಗಳನ್ನು ಒಳಗೊಂಡಂತೆ ಪ್ರಸಕ್ತ ದೇಶದ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಯೋಗೇಂದ್ರ ಅವರು ಜನಪರ ಹೋರಾಟಗಳಲ್ಲಿ ಭಾಗಿಯಾಗುವಂತೆಯೇ ಅವುಗಳ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಸಲು ಜನಪ್ರಿಯ ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...