Homeಮುಖಪುಟ370ನೇ ವಿಧಿ ರದ್ದತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಅಪ್ರಜಾಸತ್ತಾತ್ಮಕ ಆಡಳಿತಕ್ಕೆ ಅಧಿಕೃತ ಮುದ್ರೆ

370ನೇ ವಿಧಿ ರದ್ದತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಅಪ್ರಜಾಸತ್ತಾತ್ಮಕ ಆಡಳಿತಕ್ಕೆ ಅಧಿಕೃತ ಮುದ್ರೆ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತದ ಅಡಿಯಲ್ಲಿ ಮಾಡಲಾದ ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಡಿಸೆಂಬರ್ 11ರಂದು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ವಿಧಿ 370ರ ಅನ್ವಯ ಹೊರಡಿಸಲಾಗಿದ್ದ ಸಾಂವಿಧಾನಿಕ ಆದೇಶಗಳಾದ 272 ಮತ್ತು 273ನ್ನೂ ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಈ ಸಾಂವಿಧಾನಿಕ ಆದೇಶಗಳು- 370ನೇ ವಿಧಿಯನ್ನು ಕೂಡಲೇ ಕಿತ್ತುಹಾಕದೆಯೇ, ನಿಷ್ಕ್ರಿಯಗೊಳಿಸಿದ್ದವು. ಅಂತಿಮವಾಗಿ ಮತ್ತು ಅತ್ಯಂತ ಗಮನಾರ್ಹವಾಗಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿರುವುದನ್ನೂ ನ್ಯಾಯಾಲಯವು ಎತ್ತಿಹಿಡಿದಿದೆ. ಲಡಾಕ್ ಒಂದು ವಿಧಾನಸಭೆ ಇಲ್ಲದೆಯೇ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಹೊಂದಿರುವಂತೆ ಇದನ್ನು ಮಾಡಲಾಗಿದೆ.

ಇದು ಭಾರತದಲ್ಲಿ ಒಕ್ಕೂಟ ತತ್ವದ ಮೇಲೆ ಗಂಭೀರ ಪರಿಣಾಮ ಉಂಟುಮಾಡುವ ತೀರಾ ನಿರಾಶಾದಾಯಕ ತೀರ್ಪಾಗಿದೆ. ಈ ತೀರ್ಪು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದುದರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಡಿಯುವುದರ ಮೂಲಕ ಆರಂಭವಾಗುತ್ತದೆ. ಬಿಜೆಪಿ-ಪಿಡಿಪಿ ಸರಕಾರವು ಕುಸಿದುಬಿದ್ದಾಗ, ಅಲ್ಲಿ ಒಂದು ಕಾರ್ಯಸಾಧ್ಯ ಸರಕಾರವು ವಿಧಾನಸಭೆಯಲ್ಲಿ ಬಹುಮತದ ಬೆಂಬಲ ಪಡೆಯಲು ಸಾಧ್ಯವೇ ಎಂಬುದನ್ನು ರಾಜ್ಯಪಾಲರು ಪರಿಗಣಿಸದೆಯೇ, 356ನೇ ವಿಧಿಯನ್ನು ಘೋಷಿಸಿ, ರಾಜ್ಯ ವಿಧಾನಸಭೆಯನ್ನು ಬರಖಾಸ್ತು ಮಾಡಿದ್ದರು.

ರಾಷ್ಟ್ರಪತಿ ಆಡಳಿತದ ಈ ಅವಧಿಯಲ್ಲಿಯೇ ಬಿಜೆಪಿಯು ರಾಷ್ಟ್ರಪತಿ ಆದೇಶಗಳಾದ 272 ಮತ್ತು 273ರ ಮೂಲಕ ವಿಧಿ 370ನ್ನು ನಿಷ್ಕ್ರಿಯಗೊಳಿಸಿತ್ತು ಮತ್ತು ಭಾರತೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯ ಒಂದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳದರ್ಜೆಗೆ ಇಳಿಸಿತು. 370ನೇ ವಿಧಿಯ ಕುರಿತು ಸುಪ್ರೀಂಕೋರ್ಟ್ ಈ ತೀರ್ಪು ನೀಡಿದ್ದು ಈ ಮಟ್ಟದ ಕಾನೂನುಬಾಹಿರತೆಯ ಬಗ್ಗೆಯೇ.

ಈ ವಿಷಯವನ್ನು ಮತ್ತಷ್ಟು ಜಟಿಲಗೊಳಿಸಿದ್ದು, ಜಮ್ಮು ಮತ್ತು ಕಾಶ್ಮೀರದ ವಿಲಕ್ಷಣ ಇತಿಹಾಸ ಮತ್ತು ಭಾರತೀಯ ಒಕ್ಕೂಟಕ್ಕೆ ಅದರ ಸೇರ್ಪಡೆಯ ಚರಿತ್ರೆ. ಭಾರತದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದಾಗ, ಈ ಇತಿಹಾಸವೇ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಗೆ ಕಾರಣವಾದ್ದು. ಸುಪ್ರೀಂಕೋರ್ಟ್ ಈ ಇತಿಹಾಸವನ್ನು ಪರಿಶೀಲಿಸಿ, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಭಾಗವಾಗಿದ್ದು, ಭಾರತೀಯ ಸಂವಿಧಾನವು ಅದಕ್ಕೆ ಪೂರ್ಣಪ್ರಮಾಣದಲ್ಲಿ ಅನ್ವಯಿಸುತ್ತದೆ ಎಂದು ತೀರ್ಮಾನಿಸುತ್ತದೆ. ಹೀಗೆ ಮಾಡುವುದರ ಮೂಲಕ ನ್ಯಾಯಾಲಯವು ಆ ಕಾಶ್ಮೀರವು ಭಾರತಕ್ಕೆ ಸೇರ್ಪಡೆಯಾದ ಐತಿಹಾಸಿಕ ಕಾರಣಗಳನ್ನು ಮತ್ತು ಸೇರ್ಪಡೆಯ ಸಮಯದಲ್ಲಿ ಒಪ್ಪಿಕೊಳ್ಳಲಾಗಿದ್ದ ಐತಿಹಾಸಿಕ ಬದ್ಧತೆಗಳನ್ನು ಗೌರವಿಸುವ ಭಾರತದ ಕರ್ತವ್ಯವನ್ನು ಅವಗಣಿಸುತ್ತದೆ.

ತೀರಾ ಕಳವಳಕಾರಿಯಾದ ಈ ತೀರ್ಪಿನ ಅತ್ಯಂತ ಆತಂಕಕಾರಿ ಭಾಗವೆಂದರೆ, ಸಂವಿಧಾನದ ವಿಧಿ 3ನ್ನು ನಡೆಸಿಕೊಂಡ ರೀತಿ. ವಿಧಿ 3ರ ಅನ್ವಯ ಕೇಂದ್ರ ಸರಕಾರಕ್ಕೆ ಈಗ ಅಸ್ತಿತ್ವದಲ್ಲಿರುವ ರಾಜ್ಯ ಒಂದರ ಪ್ರದೇಶಗಳನ್ನು ವಿಭಜಿಸಿ ಹೊಸ ರಾಜ್ಯ ಒಂದನ್ನು ರಚಿಸುವ ಅಧಿಕಾರವೇನೋ ಇದೆ. ಹೀಗಿದ್ದರೂ, ಹೊಸರಾಜ್ಯ ಒಂದನ್ನು ಸ್ಥಾಪಿಸುವ ಮಸೂದೆಯನ್ನು ರಾಜ್ಯ ವಿಧಾನಭೆಯು ಬಹುಮತದಿಂದ ಅಂಗೀಕರಿಸಿದರೆ ಮಾತ್ರವೇ ಇದು ಸಾಧ್ಯ. ಆದುದರಿಂದ, ಉದಾಹರಣೆಗಾಗಿ- ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣದ ರಚನೆಯಾದದ್ದು, ಆಂಧ್ರಪ್ರದೇಶದ ವಿಧಾನಸಭೆಯು ತೆಲಂಗಾಣ ರಾಜ್ಯ ರಚನೆಯ ಮಸೂದೆಯನ್ನು ಬಹುಮತದಿಂದ ಅಂಗೀಕರಿಸಿದ ನಂತರ ಮಾತ್ರವೇ ಎಂಬುದನ್ನು ಗಮನಿಸಬಹುದು. ಸಂವಿಧಾನದ ವಿಧಿ 3ರ ಅನ್ವಯ ಅಧಿಕಾರವನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡದಂತೆ ಒಂದು ಪ್ರಮುಖ ರಕ್ಷಣೆಯಾಗಿ ಇದು ಉಳಿದಿದೆ.

ಒಕ್ಕೂಟ ಸರಕಾರವು ಮುಂದುವರಿದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಈ ರೀತಿಯಲ್ಲಿ- ಹೇಗಿದ್ದರೂ ಕೇಂದ್ರ ಸರಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರಿಗೆ ಒಪ್ಪಿಗೆ ನೀಡುವ ಅರ್ಹತೆ ಇದೆ ಎಂಬ ಊಹೆಯ ಮೇರೆಗೆ ರಾಜ್ಯ ಜನತೆಯ ವಿಧಾನಸಭೆಯ ಒಪ್ಪಿಗೆಯನ್ನು ಸಂಪೂರ್ಣವಾಗಿ ಬದಿಗೆ ಸರಿಸಲಾಯಿತು. ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ರಾಜ್ಯವನ್ನು ಎರಡಾಗಿ ವಿಭಜಿಸಿದ್ದು ಮಾತ್ರವಲ್ಲದೇ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳದರ್ಜೆಗೆ ಇಳಿಸಲಾಯಿತು ಎಂಬ ವಾಸ್ತವವೇ ಸಂವಿಧಾನಕ್ಕೆ ಮಾಡಲಾದ ಮೋಸವಲ್ಲದೇ ಬೇರೇನೂ ಅಲ್ಲ. ದುರದೃಷ್ಟವಶಾತ್ ಸುಪ್ರೀಂಕೋರ್ಟ್, ಕೇಂದ್ರ ಸರಕಾರದಿಂದ ನಡೆದ ಈ ಅಧಿಕಾರ ಕಬಳಿಕೆಯನ್ನು ಕಡೆಗಣಿಸಲು ನಿರ್ಧರಿಸಿತು.

ರಾಜ್ಯವೊಂದಕ್ಕೆ ಕೇಂದ್ರಾಡಳಿತ ಪ್ರದೇಶವಾಗಿ ಹಿಂಬಡ್ತಿ ನೀಡಿರುವುದಕ್ಕೆ ಭಾರತೀಯ ಸಾಂವಿಧಾನಿಕ ಇತಿಹಾಸದಲ್ಲಿಯೇ ಪೂರ್ವ ಉದಾಹರಣೆಯೊಂದಿಲ್ಲ. ಕೆಲವು ನಿರ್ದಿಷ್ಟ ಪ್ರದೇಶಗಳು- “ಕಾರ್ಯಸಾಧ್ಯ ಆಡಳಿತ ಘಟಕಗಳು” ಆಗಿಲ್ಲದೇ ಇರುವಾಗ ಅಥವಾ ತಮ್ಮನ್ನು ತಾವು ಸುಸ್ಥಿರವಾಗಿ ಉಳಿಸಿಕೊಳ್ಳಲು ಬೇಕಾದ ಸಂಪನ್ಮೂಲಗಳು ಇಲ್ಲದೇ ಇದ್ದಾಗ ಮಾತ್ರವೇ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಗಿತ್ತು. ಸ್ವತಃ ಸುಪ್ರೀಂಕೋರ್ಟೇ ಗಮನಿಸಿರುವಂತೆ, ಭಾರತದಲ್ಲಿ ಒಕ್ಕೂಟ ತತ್ವದ ಇತಿಹಾಸವೇ- ಹೇಗೆ ಕೇಂದ್ರಾಡಳಿತ ಪ್ರದೇಶಗಳು ಪೂರ್ಣ ರಾಜ್ಯಗಳಾಗುವತ್ತ ಮುನ್ನಡೆಯುತ್ತವೆ ಎಂಬುದರ ಇತಿಹಾಸವೇ ಆಗಿದೆ. ದಿಲ್ಲಿ ಮತ್ತು ಗೋವಾ ಇದಕ್ಕೆ ಎರಡು ಉದಾಹರಣೆಗಳು. ಇದಕ್ಕೆ ತದ್ವಿರುದ್ಧವಾದ ದಿಕ್ಕಿನಲ್ಲಿ ಸಾಗುವುದೆಂದರೆ, ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕೃತ್ಯವೇ ಆಗುತ್ತದೆ. ಭಾರತದ ಒಕ್ಕೂಟ ತತ್ವಕ್ಕೆ ಈ ಹೊಡೆತದ ಪರಿಣಾಮವನ್ನು ಸುಪ್ರೀಂ ಕೋರ್ಟ್ ಅರ್ಥಮಾಡಿಕೊಂಡಿರುವಂತೆ ಕಾಣುತ್ತಿದೆಯಾದರೂ, ಆ ಕುರಿತು ಏನನ್ನೂ ಮಾಡಲು ಬಯಸದಿರುವಂತೆಯೂ ಕಾಣುತ್ತಿದೆ.

ಇದನ್ನೂ ಓದಿ: Explained : 370ನೇ ವಿಧಿ ರದ್ದು; 1947ರಿಂದ ಇದುವರೆಗೆ…

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮುಂದೆ ನೀಡಲಾಗುವುದು ಮತ್ತು ಕೇಂದ್ರಾಡಳಿತ ಪ್ರದೇಶವಾಗಿ ಅದರ ಈಗಿನ ಸ್ಥಾನಮಾನ ಕೇವಲ ತಾತ್ಕಾಲಿಕ ಎಂಬ ಸಾಲಿಸಿಟರ್ ಜನರಲ್ ಅವರ ವಾದದಿಂದ ಸುಪ್ರೀಂಕೋರ್ಟ್ ತೃಪ್ತಿ ಹೊಂದಿರುವಂತಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಸೆಪ್ಟೆಂಬರ್ 2024ರ ಒಳಗೆ ಚುನಾವಣೆ ನಡೆಸಬೇಕು ಮತ್ತು ಅದಕ್ಕೆ ಆದಷ್ಟು ಬೇಗ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಹೇಳುವುದರಿಂದಲೇ ಸುಪ್ರೀಂಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ತೃಪ್ತಿಪಡೆದಿರುವಂತಿದೆ.

ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಹಿಂಬಡ್ತಿಗೊಳಿಸುವುದರ ಹಿಂದಿರುವ ತಪ್ಪು ಉದ್ದೇಶದ ಪ್ರಶ್ನೆಯ ಕುರಿತು ಸುಪ್ರೀಂ ಕೋರ್ಟ್ ಗಮನಹರಿಸುವುದಿಲ್ಲ. ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿಸುವ ಕೇಂದ್ರ ಸರಕಾರದ ಕೃತ್ಯಕ್ಕೆ ಸಾಂವಿಧಾನಿಕ ಸಮರ್ಥನೆಗಳು ಏನಾಗಿದ್ದವು? ಒಟ್ಟು 476 ಪುಟಗಳ ಇಡೀ ತೀರ್ಪಿನಲ್ಲಿ ಹಕ್ಕು ಕಸಿದಿರುವ ಗಂಭೀರ ಕೃತ್ಯಕ್ಕೆ ಸುಪ್ರೀಂಕೋರ್ಟ್ ನೀಡಿರಬಹುದಾದ ಒಂದೇಒಂದು ಸಮರ್ಥನೆಯನ್ನು ಹುಡುಕಲು ಸಾಧ್ಯವಿಲ್ಲ. ಇದು ತಪ್ಪೆಂದು ಸುಪ್ರೀಂಕೋರ್ಟಿಗೆ ಗೊತ್ತಿರುವಂತಿದೆ; ಕೇಂದ್ರಾಡಳಿತ ಸ್ಥಾನಮಾನ ಕೇವಲ ತಾತ್ಕಾಲಿಕವಾದದ್ದು ಮತ್ತು ಸರಕಾರಕ್ಕೆ ಅನುಗುಣವಾಗಿ ಈ ಆದೇಶವನ್ನು ತಿರುವು ಮುರುವು ಮಾಡಲಾಗುವುದು ಎಂದು ದಾಖಲಿಸುವ ಮೂಲಕ ಅದು ತನ್ನ ಆತ್ಮಸಾಕ್ಷಿಗೆ ಮುಲಾಮು ಹಚ್ಚಿದೆ.

ಜಮ್ಮು ಮತ್ತು ಕಾಶ್ಮೀರ ಪ್ರದೇಶಕ್ಕೆ ಸೆಪ್ಟೆಂಬರ್ 2024ರ ಒಳಗೆ ಚುನಾವಣೆ ನಡೆಸಬೇಕು ಎಂದು, ಆದಷ್ಟು ಬೇಗನೇ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಬದಲಿಸಿ

ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳುತ್ತಿರುವಾಗಲೇ, ಅದಕ್ಕೆ ಯಾವುದೇ ಸಮಯಸೂಚಿಯನ್ನು ನಿಗದಿಪಡಿಸುವುದಿಲ್ಲ.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿ ಪ್ರಾತಿನಿಧ್ಯ ಅನುಭವಿಸುತ್ತಿದ್ದ ಲಡಾಕ್ ಈಗ ಯಾವುದೇ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿದೆ ಎಂಬುದನ್ನು ಗುರುತಿಸುವುದು ಕೂಡಾ ಅತ್ಯಗತ್ಯ. ಸುಪ್ರೀಂಕೋರ್ಟಿನ ಪ್ರಕಾರ ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿರುವುದು ಸಾಂವಿಧಾನಿಕವಾಗಿ ಸಿಂಧು ಮತ್ತು ಲಡಾಕಿನ ಜನರಿಗೆ ಒಂದು ಕೇಂದ್ರಾಡಳಿತವಾಗಿ ಅಥವಾ ರಾಜ್ಯದ ಸ್ಥಾನಮಾನದ ಮೂಲಕ ಒಂದು ವಿಧಾನಸಭೆಯನ್ನು ಕೊಡಬೇಕಾದ ಅಗತ್ಯವಿಲ್ಲ. ರಾಷ್ಟ್ರೀಯ ಭದ್ರತಾ ಆತಂಕಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯವು ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ನಿರ್ಧಾರವನ್ನು ಸಮರ್ಥಿಸಲು ಬಯಸುತ್ತಿದೆ. ಸುಪ್ರೀಂಕೋರ್ಟಿನ ನಿರ್ಧಾರಗಳ ಪ್ರಕಾರವೇ ರಾಷ್ಟ್ರೀಯ ಭದ್ರತೆಯು ಕೇವಲ ಹೇಳಿಕೆ ಮಾತ್ರವೇ ಆಗದೆ, ದತ್ತಾಂಶಗಳ ಮೂಲಕ ಅದನ್ನು ಸಮರ್ಥಿಸಬೇಕು. ಸರಕಾರವು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದೇ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ದಾರಿಯನ್ನಾಗಿ ಏಕೆ ಕಾಣಬೇಕು ಮತ್ತು ಲಡಾಕಿ ಜನರ ಪ್ರಾತಿನಿಧಿಕ ಪ್ರಜಾಪ್ರಭುತ್ವದ ಹಕ್ಕುಗಳನ್ನು ಬಲಿಕೊಡದೆಯೇ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಬೇರೆ ದಾರಿಗಳಿದ್ದವೇ ಎಂಬ ಕುರಿತು ಕೆಲವು ಕಠಿಣ ಪ್ರಶ್ನೆಗಳಿಗೆ ಕೇಂದ್ರ ಸರಕಾರವು ಉತ್ತರ ನೀಡುವಂತೆ ಕನಿಷ್ಟ ಪಕ್ಷ ಆಗ್ರಹಿಸಬೇಕು. ಇಂತಹ ಯಾವುದೇ ವಿಶ್ಲೇಷಣೆಯನ್ನು ನ್ಯಾಯಾಲಯವು ಪರಿಶೀಲಿಸಿರುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಈ ತೀರ್ಪು ಭಾರತೀಯ ಸಂವಿಧಾನದ ಅಡಿಯಲ್ಲಿ ಪ್ರಾತಿನಿಧಿಕ ಆಡಳಿತದ ಲಡಾಕಿಗಳ ಸಾಂವಿಧಾನಿಕ ಹಕ್ಕುಗಳಿಗೆ ತೀವ್ರವಾದ ಹೊಡೆತವನ್ನು ನೀಡಿದೆ. ಯಾವುದೇ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯ ಇಲ್ಲದೇ ಕೇಂದ್ರ ಸರಕಾರ ನಡೆಸುತ್ತಿರುವ ಆಡಳಿತ ವಿರುದ್ಧ ಲಡಾಕಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು- ಲಡಾಕಿ ಜನರು ಅನುಭವಿಸುತ್ತಿರುವ ಒಂದು ರೀತಿಯ ದ್ರೋಹದ ಭಾವನೆಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತವೆ. ನ್ಯಾಯಾಲಯವು ದುರದೃಷ್ಟವಶಾತ್ ಈ ಅಪ್ರಜಾಸತ್ತಾತ್ಮಕ ಆಡಳಿತವನ್ನು ಅಧಿಕೃತಗೊಳಿಸಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...