Homeಅಂತರಾಷ್ಟ್ರೀಯವಿವಾದಾತ್ಮಕ 'ಶಾಂತಿ ಮಂಡಳಿ'ಗೆ ಭಾರತವನ್ನು ಆಹ್ವಾನಿಸಿದ ಟ್ರಂಪ್ : ವಿಶ್ವಸಂಸ್ಥೆ ವಿರುದ್ದ ಅಮೆರಿಕ ಅಧ್ಯಕ್ಷರ ಹೊಸ...

ವಿವಾದಾತ್ಮಕ ‘ಶಾಂತಿ ಮಂಡಳಿ’ಗೆ ಭಾರತವನ್ನು ಆಹ್ವಾನಿಸಿದ ಟ್ರಂಪ್ : ವಿಶ್ವಸಂಸ್ಥೆ ವಿರುದ್ದ ಅಮೆರಿಕ ಅಧ್ಯಕ್ಷರ ಹೊಸ ತಂತ್ರ?

- Advertisement -
- Advertisement -

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಝಾ ಪ್ರದೇಶಕ್ಕೆ ಸಂಬಂಧಿಸಿದಂತೆ ರಚಿಸಿರುವ ವಿವಾದಾತ್ಮಕ “ಬೋರ್ಡ್ ಆಫ್ ಪೀಸ್” (ಶಾಂತಿ ಮಂಡಳಿ) ಎಂಬ ಉಪಕ್ರಮಕ್ಕೆ ಭಾರತ ಸೇರಿದಂತೆ ಹಲವು ದೇಶಗಳನ್ನು ಆಹ್ವಾನಿಸಿದ್ದಾರೆ.

ಈ ಉಪಕ್ರಮವು ವಿಶ್ವಸಂಸ್ಥೆಯನ್ನು ಪಕ್ಕಕ್ಕೆ ತಳ್ಳಿ, ಗಾಝಾ ಪ್ರದೇಶದಲ್ಲಿ ಸಮಾನಾಂತರ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗ್ತಿದೆ.

ಈ ಮಂಡಳಿಯ ಆಶಯಗಳು ಗಾಝಾ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ, ಭವಿಷ್ಯದಲ್ಲಿ ಇತರ ಅಂತಾರಾಷ್ಟ್ರೀಯ ಸಂಘರ್ಷಗಳಿಗೂ ವಿಸ್ತರಿಸಬಹುದು ಎಂಬ ಸೂಚನೆಗಳಿವೆ. ಟ್ರಂಪ್ ಅವರ ಈ ಯೋಜನೆಯು ಗಾಝಾದಲ್ಲಿ ಇತ್ತೀಚಿನ ಯುದ್ಧದ ನಂತರದ ಪುನರ್ನಿರ್ಮಾಣ, ಆಡಳಿತ, ಹಮಾಸ್ ಸಂಘಟನೆಯ ಸಂಪೂರ್ಣ ನಿಶ್ಯಸ್ತ್ರಗೊಳಿಸುವುದು ಮತ್ತು ಶಾಂತಿ ಸ್ಥಾಪನೆಗೆ ಸಂಬಂಧಿಸಿದ 20-ಸೂತ್ರಗಳ ಯೋಜನೆಯ ಭಾಗವಾಗಿದೆ ಎಂದು ವರದಿಗಳು ಹೇಳಿವೆ.

ಆದರೆ, ಈ ಮಂಡಳಿಯ ಮಸೂದಾ ಚಾರ್ಟರ್‌ನಲ್ಲಿ (ಡ್ರಾಫ್ಟ್ ಚಾರ್ಟರ್) ಗಾಝಾ ಉಲ್ಲೇಖವೇ ಇಲ್ಲದಿರುವುದರಿಂದ, ಇದು ವಿಶ್ವಸಂಸ್ಥೆಯನ್ನು ಬದಲಿಸುವ ಅಥವಾ ಅದಕ್ಕೆ ವಿರುದ್ದವಾಗಿ ಕಾರ್ಯನಿರ್ವಹಿಸುವ ದೊಡ್ಡ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗ್ತಿದೆ. ಮಂಡಳಿಯ ಸದಸ್ಯತ್ವಕ್ಕಾಗಿ ಕೆಲವು ದೇಶಗಳಿಗೆ 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ವರದಿಗಳೂ ಇವೆ, ಇದರಿಂದ ಶಾಶ್ವತ ಸ್ಥಾನ ದೊರೆಯುತ್ತದೆ.

ಟ್ರಂಪ್ ಕಡೆಯಿಂದ ಭಾರತಕ್ಕೆ ಆಹ್ವಾನ ಬಂದಿರುವುದು ನಿಜ, ಆದರೆ ಭಾರತ ಇನ್ನೂ ಈ ಆಹ್ವಾನವನ್ನು ಸ್ವೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಎಂಬ ನಿರ್ಧಾರ ತೆಗೆದುಕೊಂಡಿಲ್ಲ. ಅಮೆರಿಕದ ಭಾರತದ ರಾಯಭಾರಿ ಸೆರ್ಜಿಯೊ ಗೊರ್ ಅವರು ಎಕ್ಸ್‌ನಲ್ಲಿ ಇದನ್ನು ದೃಢೀಕರಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ಪತ್ರವನ್ನು ಹಂಚಿಕೊಂಡಿದ್ದಾರೆ. ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು (ಅನಾಮಧೇಯರಾಗಿ ಮಾತನಾಡಿ) ಆಹ್ವಾನ “ಕೈಯಲ್ಲಿದೆ” ಎಂದು ಹೇಳಿದ್ದಾರೆ, ಆದರೆ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ ಅಥವಾ ನಿರ್ಧಾರ ತೆಗೆದುಕೊಂಡಿಲ್ಲ. ವಿದೇಶಾಂಗ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ, ಮತ್ತು ಪ್ರಶ್ನೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ಹೇಳಿವೆ.

ಜನವರಿ 16ರಂದು ಬರೆದಿರುವ ಪತ್ರದಲ್ಲಿ, “ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ಮತ್ತು ಜಾಗತಿಕ ಸಂಘರ್ಷವನ್ನು ಪರಿಹರಿಸಲು ದಿಟ್ಟ ಹೊಸ ವಿಧಾನವನ್ನು ಕೈಗೊಳ್ಳಲು” ಟ್ರಂಪ್ ಅವರೊಂದಿಗೆ ಕೈ ಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದೆ.

ಪತ್ರದಲ್ಲಿ “ಬೋರ್ಡ್ ಆಫ್ ಪೀಸ್” ಅನ್ನು ಇದುವರೆಗೆ ಸ್ಥಾಪಿತವಾದ ಅತ್ಯಂತ ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಮಂಡಳಿ ಎಂದು ವಿವರಿಸಲಾಗಿದೆ. ಇದನ್ನು ಹೊಸ ಅಂತಾರಾಷ್ಟ್ರೀಯ ಸಂಸ್ಥೆ ಮತ್ತು ತಾತ್ಕಾಲಿಕ ಆಡಳಿತ ಸಂಸ್ಥೆ ಎಂದು ಸ್ಥಾಪಿಸಲಾಗುತ್ತದೆ ಎಂಬುವುದಾಗಿ ಹೇಳಲಾಗಿದೆ. ಈ ಪದ ಬಳಕೆ, ಚಾರ್ಟರ್, ಅಸ್ತಿತ್ವದಲ್ಲಿರುವ ಬಹುಪಕ್ಷೀಯ ಸಂಸ್ಥೆಗಳಿಗೆ ಪರ್ಯಾಯವನ್ನು ರಚಿಸುವ ಟ್ರಂಪ್ ಅವರ ಉದ್ದೇಶಗಳ ಬಗ್ಗೆ ಆತಂಕವನ್ನು ಉಂಟು ಮಾಡಿದೆ.

ಚಾರ್ಟರ್‌ನಲ್ಲಿ ಗಾಝಾ ಉಲ್ಲೇಖವೇ ಇಲ್ಲ

ಆರಂಭದಲ್ಲಿ ಗಾಝಾ ಪುನರ್ನಿರ್ಮಾಣಕ್ಕಾಗಿ ಮಂಡಳಿ ರಚಿಸಲಾಗುತ್ತಿದೆ ಎಂದರೂ, ಚಾರ್ಟರ್‌ನಲ್ಲಿ “ಗಾಝಾ” ಎಂಬ ಪದವೇ ಇಲ್ಲ. ಬದಲಿಗೆ, ಸಂಘರ್ಷದಿಂದ ಪ್ರಭಾವಿತ ಅಥವಾ ಬೆದರಿಕೆಗೊಳಗಾದ ಪ್ರದೇಶಗಳು ಎಂದು ಹೇಳಲಾಗಿದೆ. ಇದರಿಂದ ಭವಿಷ್ಯದಲ್ಲಿ ಇತರ ಜಾಗತಿಕ ಸಂಘರ್ಷಗಳಿಗೂ (ಉದಾ. ಉಕ್ರೇನ್, ಸಿರಿಯಾ ಇತ್ಯಾದಿ) ವಿಸ್ತರಣೆಯಾಗಬಹುದು ಎಂಬ ಆತಂಕ ಎದುರಾಗಿದೆ.

ಸಂಸ್ಥೆಗಳು ವಿಫಲವಾಗಿವೆ” ಎಂಬ ಭಾಷೆ

ಚಾರ್ಟರ್‌ನ ಪೀಠಿಕೆಯಲ್ಲಿ “institutions that have too often failed” (ತುಂಬಾ ಬಾರಿ ವಿಫಲವಾದ ಸಂಸ್ಥೆಗಳು) ಮತ್ತು “more nimble and effective” (ಹೆಚ್ಚು ಚುರುಕು ಮತ್ತು ಪರಿಣಾಮಕಾರಿ) ಸಂಸ್ಥೆಯ ಅಗತ್ಯ ಎಂದು ಹೇಳಲಾಗಿದೆ. ಇದು ವಿಶ್ವ ಸಂಸ್ಥೆಯನ್ನು ನೇರವಾಗಿ ಟೀಕಿಸುವಂತಿದೆ ಎಂದು ವಿಮರ್ಶಕರು ಹೇಳುತ್ತಾರೆ. ಟ್ರಂಪ್ ಅವರು ವಿಶ್ವ ಸಂಸ್ಥೆಯನ್ನು “bloated” (ಉಬ್ಬಿದ), “ineffective”(ಪರಿಣಾಮಕಾರಿಯಲ್ಲದ) ಎಂದು ಹಲವು ಬಾರಿ ಟೀಕಿಸಿದ್ದಾರೆ.

ಸಮಾನಾಂತರ ಸಂಸ್ಥೆಯ ಆತಂಕ

ಡಿಪ್ಲೊಮ್ಯಾಟ್‌ಗಳು ಇದನ್ನು “Trump United Nations” ಅಥವಾ “Mini-UN” ಎಂದು ಕರೆದಿದ್ದಾರೆ. ಇದು ವಿಶ್ವ ಸಂಸ್ಥೆಯನ್ನು ಸೈಡ್‌ಲೈನ್ ಮಾಡಿ, ಅಮೆರಿಕ ನೇತೃತ್ವದ (ಟ್ರಂಪ್ ಅಧ್ಯಕ್ಷೆಯ) ಹೊಸ ವ್ಯವಸ್ಥೆಯನ್ನು ರಚಿಸುವ ಪ್ರಯತ್ನ ಎಂದು ಯುರೋಪ್, ರಷ್ಯಾ, ಚೀನಾ ಮುಂತಾದ ದೇಶಗಳ ಡಿಪ್ಲೊಮ್ಯಾಟ್‌ಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಶ್ವ ಸಂಸ್ಥೆಯನ್ನು ಬದಲಿಸುವಟ್ರ ಅಥವಾ ಪ್ರತಿರೂಪವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂಬ ಭಯ ವ್ಯಕ್ತವಾಗಿದೆ.

ಟ್ರಂಪ್‌ ನಿಯಂತ್ರಣ

ಟ್ರಂಪ್ ಅವರು ಮಂಡಳಿಯ ಅಧ್ಯಕ್ಷ ಆಗಿರುತ್ತಾರೆ ಮತ್ತು ಸದಸ್ಯರ ಆಯ್ಕೆ, ನಿರ್ಣಯಗಳ ಅನುಮೋದನೆ, ಅವಧಿ ನವೀಕರಣ ಇತ್ಯಾದಿ ಅಧಿಕಾರಗಳನ್ನು ಹೊಂದಿರುತ್ತಾರೆ. 1 ಬಿಲಿಯನ್ ಡಾಲರ್ ಕೊಡುಗೆಯ ಮೇಲೆ ಶಾಶ್ವತ ಸದಸ್ಯತ್ವ ಸಿಗುವ ವ್ಯವಸ್ಥೆಯೂ ವಿವಾದಾಸ್ಪದವಾಗಿದೆ. ಇದು ಹಣದ ಮೂಲಕ ಪ್ರಭಾವ ಖರೀದಿಸುವಂತಿದೆ ಎಂಬ ಟೀಕೆ ವ್ಯಕ್ತವಾಗಿದೆ.

ವಿಶ್ವಸಂಸ್ಥೆಯ ಅನುಮೋದನೆ ಇದ್ದರೂ ಆಂತಕ ಏಕೆ?

ಟ್ರಂಪ್ ಅವರ ಹೊಸ ಮಂಡಳಿಗೆ ಸಂಬಂಧಿಸಿದಂತೆ ನವೆಂಬರ್ 17, 2025 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ 2803 (2025) ಅನ್ನು ಅಂಗೀಕರಿಸಿದೆ. ಚೀನಾ ಮತ್ತು ರಷ್ಯಾ ಹೊರತುಪಡಿಸಿ ಉಳಿದ 13 ಸದಸ್ಯ ರಾಷ್ಟ್ರಗಳು (ಫ್ರಾನ್ಸ್, ಯುಕೆ, ಯುಎಸ್‌ ಸೇರಿದಂತೆ) ನಿರ್ಣಯದ ಪರವಾಗಿ ಮತ ಚಲಾಯಿಸಿವೆ.

ನಿರ್ಣಯವು ಬೋರ್ಡ್ ಆಫ್ ಪೀಸ್ ಅನ್ನು ಸ್ವಾಗತಿಸುತ್ತದೆ ಮತ್ತು ಅದನ್ನು ತಾತ್ಕಾಲಿಕ ಆಡಳಿತ ಸಂಸ್ಥೆಯಾಗಿದೆ ಗುರುತಿಸುತ್ತದೆ. ಮಂಡಳಿ ಗಾಝಾ ಪುನರ್ನಿರ್ಮಾಣ, ಆಡಳಿತ, ಹಣಕಾಸು ಸಹಾಯ ಮತ್ತು ಸ್ಥಿರತೆಗೆ ನೇತೃತ್ವ ನೀಡುತ್ತದೆ ಎಂದು ನಿರ್ಣಯ ಹೇಳುತ್ತದೆ.

ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆ (ಐಎಸ್‌ಎಫ್‌) ಸ್ಥಾಪಿಸಲು ನಿರ್ಣಯ ಅನುಮತಿ ನೀಡುತ್ತದೆ. ಈ ಪಡೆ ತಾತ್ಕಾಲಿಕ ಅಂತಾರಾಷ್ಟ್ರೀಯ ಸೇನೆಯಾಗಿದ್ದು, ಗಾಝಾದಲ್ಲಿ ಭದ್ರತೆ, ಹಮಾಸ್ ನಿಶಸ್ತ್ರೀಕರಣ ಮತ್ತು ಸಹಾಯ ವಿತರಣೆಗೆ ಸಹಾಯ ಮಾಡುತ್ತದೆ ಎಂದು ನಿರ್ಣಯ ಹೇಳುತ್ತದೆ.

ಗಾಝಾ ಪುನರ್ನಿರ್ಮಾಣಕ್ಕಾಗಿ ಈ ಯೋಜನೆಯನ್ನು ನಿರ್ಣಯ ಬೆಂಬಲಿಸುತ್ತದೆ ಮತ್ತು ಪ್ಯಾಲೆಸ್ಟೈನ್ ಅಥಾರಿಟಿ (ಪಿಎ) ಸುಧಾರಣೆಗಳ ನಂತರ ಭವಿಷ್ಯದಲ್ಲಿ ಪ್ಯಾಲೆಸ್ಟೈನ್ ಸ್ವಯಂ ನಿರ್ಧಾರದ ಹಾದಿ (pathway to self-determination and statehood) ಸಾಧ್ಯವಾಗಬಹುದು ಎಂದು ಹೇಳುತ್ತದೆ.

ಈ ನಿರ್ಣಯದ ಮೂಲಕ ವಿಶ್ವ ಸಂಸ್ಥೆ ಟ್ರಂಪ್ ಅವರ ಯೋಜನೆಗೆ ಅಂತಾರಾಷ್ಟ್ರೀಯ ಕಾನೂನು ಮಾನ್ಯತೆ ನೀಡಿದೆ ಎಂದು ಅಮೆರಿಕ ಮತ್ತು ಬೆಂಬಲಿಗರು ಹೇಳುತ್ತಾರೆ. ಇದು ಯುದ್ಧವನ್ನು ಅಂತ್ಯಗೊಳಿಸಿ, ಸಹಾಯ ಮತ್ತು ಪುನರ್ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ.

ವಿಶ್ವ ಸಂಸ್ಥೆ ನಿರ್ಣಯದ ಮೂಲಕ ಟ್ರಂಪ್ ಅವರ ಗಾಝಾ ಪುನರ್ನಿರ್ಮಾಣಕ್ಕೆ ಮಾನ್ಯತೆ ನೀಡಿದೆ. ಆದರೆ ಮಂಡಳಿಯ ಚಾರ್ಟರ್‌ನ ಜಾಗತಿಕ ವ್ಯಾಪ್ತಿ ಮತ್ತು ವಿಶ್ವ ಸಂಸ್ಥೆ “ವಿಫಲ” ಎಂದು ಟೀಕಿಸುವ ಭಾಷೆಯಿಂದಾಗಿ, ಇದು ವಿಶ್ವ ಸಂಸ್ಥೆಯನ್ನು ಅನ್ನು ಮೀರಿ ಅಥವಾ ಬದಲಿಸುವ ಸಮಾನಾಂತರ ಸಂಸ್ಥೆಯಾಗಿ ಬೆಳೆಯಬಹುದು ಎಂಬ ದೊಡ್ಡ ಆತಂಕ ಉಳಿದಿದೆ. ಭಾರತ ಸೇರಿದಂತೆ ಹಲವು ದೇಶಗಳು ಇದರಿಂದಾಗಿ ಎಚ್ಚರಿಕೆಯಿಂದ ಪ್ರತಿಕ್ರಿಯಿಸುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...