Homeಮುಖಪುಟಕಿಚ್ಚುಹಚ್ಚಿ ಶಾಂತಿಯಾತ್ರೆ ಮಾಡಿದ್ದು ಇತಿಹಾಸದ ವ್ಯಂಗ್ಯ...!!

ಕಿಚ್ಚುಹಚ್ಚಿ ಶಾಂತಿಯಾತ್ರೆ ಮಾಡಿದ್ದು ಇತಿಹಾಸದ ವ್ಯಂಗ್ಯ…!!

- Advertisement -
- Advertisement -

ಬೆಂಕಿಕಡ್ಡಿ ಗೀರಿದ ಪರಿಣಾಮವೇ ಹಿಂಸಾಚಾರಕ್ಕೆ ಮೂಲ ಕಾರಣ. ಮೂರು ಕಿಡಿಗಳು ಹೊತ್ತಿಕೊಂಡು ಉರಿಯಲು ಆರಂಭಿಸಿದಾಗಲೇ ಆರಿಸುವ ಯತ್ನ ಮಾಡಿದ್ದರೆ ಯಾವುದೇ ಅನಾಹುತಗಳು ಸಂಭವಿಸುವ ಸಾಧ್ಯತೆ ಇರಲಿಲ್ಲ.. ಸೂತ್ರಧಾರಿಗಳು ಹೊತ್ತಿಸಿದ ಕಿಡಿಗಳು ಸುಡುತ್ತಲೇ ಹೋದವು. ಬೆಂಕಿ ಹೊತ್ತಿಕೊಳ್ಳುತ್ತಿ ದ್ದಂತೆಯೇ ತುಪ್ಪವನ್ನೂ ಸುರಿಯತೊಡಗಿದರು. ಬೆಂಕಿಯ ಕೆನ್ನಾಲಗೆಗಳು ಇಡೀ ಈಶಾನ್ಯ ದೆಹಲಿಯ ಹಲವು ಪ್ರದೇಶಗಳು ಹೊತ್ತಿ ಉರಿದವು. ಹಿಂಸಾಚಾರ 42 ಬಲಿ ಪಡೆಯಿತು. ನೂರಾರು ಮಂದಿ ಗಾಯಗೊಂಡರು. ಹಲವು ಮನೆಗಳು, ಶಾಪ್ ಮತ್ತು ಮನೆಗಳು ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಯಲ್ಲಿ ಭಸ್ಮವಾದವು. ಇದರ ಅರಿವು ಇರಬೇಕಾಗಿದ್ದವರು ಜಾಣತನ ಪ್ರದರ್ಶಿಸಿದರು. ಜಾಣತನ ಫಲವೇ ಹಿಂಸಾಚಾರ ಮತ್ತು ಬೆಂಕಿ .

ಧ್ವಂಸಗೈದ ಕೈಗಳಿಗೆ ಮಣ್ಣು ಮೆತ್ತಿಕೊಳ್ಳಲಿಲ್ಲ.ಮಣ್ಣುಮೆತ್ತಿಕೊಂಡ ಸಾಕ್ಷಿಯೂ ಇರಲಿಲ್ಲ.ಎಲ್ಲವೂ ಸೇವೆಯೊಳಗೆ ಮುಗಿದು ಹೋಗಿತ್ತು. 1992, 2002 ಮತ್ತು 2020 ಪ್ರತಿ ಘಟನೆಯ ನಡುವೆ 10 ವರ್ಷಗಳ ಅಂತರವಿದೆ. ಮೂರನೆಯದು 18 ವರ್ಷದ ಅಂತರ.ಇವೆಲ್ಲವೂ  “ನಿರ್ದಿಷ್ಟ ದಾಳಿ”ಯ ಭಾಗವೇ ಆಗಿವೆ. “ನಿರ್ದಿಷ್ಟ ದಾಳಿ”ಗೆ 28 ವರ್ಷಗಳ ಇತಿಹಾಸವಿದೆ. ಈ ಇತಿಹಾಸ ಕರಾಳ ಅಧ್ಯಾಯಗಳು ಪ್ರತಿ ಹತ್ತು ಇಲ್ಲವೇ ಹದಿನೆಂಟು ವರ್ಷಕ್ಕೊಮ್ಮೆ ತೆರೆದುಕೊಳ್ಳುತ್ತಲೇ ಹೋಗುತ್ತಿವೆ. ಸಂಘಟಿತ, ವ್ಯವಸ್ಥಿತ ಮತ್ತು “ನಿರ್ದಿಷ್ಟ ದಾಳಿ” ನಡೆದಾಗ ಸಾಮಾನ್ಯ ಜನತೆ ಜರ್ಝರಿತಗೊಂಡಿರುವುದಂತೂ ಸತ್ಯದ ಸಂಗತಿ.

ಸೂತ್ರ ಹಿಡಿದವರು ಪರದೆಯ ಹಿಂದೆ ಇದ್ದಾರೆ. ಪರದೆಯ ಹಿಂದೆ ಯಾರು ಕುಳಿತಿದ್ದಾರೆ? ಯಾವ ಬೊಂಬೆ ಸೂತ್ರ ಹಿಡಿದ್ದಾರೆಂಬುದು ಪ್ರೇಕ್ಷಕರಿಗೆ ಗೊತ್ತಾಗುತ್ತಿಲ್ಲ. ಸೂತ್ರಧಾರರು ನಿರ್ದೇಶಿಸಿದಂತೆ ಗೊಂಬೆಗಳು ನರ್ತಿಸುತ್ತಿವೆ. ಕೊಳ್ಳಿ ಇಟ್ಟಂತೆ ನಟಿಸಿದರೆ ವಾಸ್ತವದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತದೆ. ಪಾತ್ರದ ಹತ್ಯೆ ನಡೆದುಹೋದರೆ ವಾಸ್ತವದಲ್ಲಿ ಹಲವು ತಲೆಗಳು ಉರುಳಿಹೋಗಿರುತ್ತವೆ. ಸೂತ್ರಧಾರರ ಶಕ್ತಿ ಏನೆಂಬುದು ಅವರ ಬೊಂಬೆ ಆಡಿಸುವ ರೀತಿಯಲ್ಲೇ ತಿಳಿಯುತ್ತದೆ. ರಂಗಸ್ಥಳದಲ್ಲಿ ಅಭಿನಯಿಸುವ ಬೊಂಬೆಗಳು ನಿಜ ಜೀವನದಲ್ಲಿ ಜೀವಂತ ಮನುಷ್ಯರೇ ಆಗಿರುತ್ತಾರೆ. ಅಂಥ ಬೊಂಬೆಗಳಿಂದಾಗಿಯೇ ಈಶಾನ್ಯ ದೆಹಲಿ ಹೊತ್ತಿ ಉರಿಯುತ್ತಿರುವುದು.

ಬೊಂಬೆಗಳು ಅಭಿನಯಿಸುವಾಗ ಯಾರೂ ರಂಗಸ್ಥಳಕ್ಕೆ ಹೋಗುವಂತಿಲ್ಲ. ಹೋಗಬೇಕಾದವರು ಹತ್ತಿರದಲ್ಲೇ ನಿಂತು ತಾದಾತ್ಮ್ಯದಿಂದ ನೋಡುತ್ತಾರೆ. ಬೊಂಬೆಗಳ ಅಭಿನಯ ಅಂಥದ್ದು. ನಿಜದಲ್ಲಿ ಬೆಂಕಿ ಹಚ್ಚಿದರೂ, ಜೀವಗಳು ಉರುಳಿಬಿದ್ದರೂ ಅದು ರಂಗದ ಮೇಲೆಯೇ ನಡೆದಂತೆ ಕಾಣುತ್ತದೆ. ಸೂತ್ರಧಾರರ ”ಪಾಲಕರು” ಆಜ್ಞಾನುವರ್ತಿಗಳು ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿ ನೀರು ಸುರಿದು ಆರಿಸುವ ಪ್ರಯತ್ನ ಮಾಡಬಹುದಿತ್ತು ಅದು ಮಾಡಲೇ ಇಲ್ಲ. ”ಊರೆಲ್ಲಾ ಕೊಳ್ಳೇ ಹೋದಮೇಲೆ ದಿಡ್ಡಿ ಬಾಗಿಲು ಹಾಕಿದರು” ಎಂಬಂತೆ ಪಾಲಕರು ನಡೆದುಕೊಂಡರು. ಸೂತ್ರದಾರರ ಕೈಚಳಕ ಪ್ರೇಕ್ಷಕರನ್ನು ಮನರಂಜಿಸಿತ್ತು. ಅವರ ಬಯಕೆಯೂ ಈಡೇರಿತ್ತು.

ಯಕ್ಷಗೊಂಬೆಗಳು ಪರಸ್ಪರ ಕಲ್ಲು ತೂರಿಕೊಂಡಿದ್ದವು. ಇದು ಜನರಿಗೆ ಕಾಣುವ ಹೊತ್ತಿಗೆ ಪರಸ್ಪರ ವಿರೋಧಿ ಗುಂಪು ಕಲ್ಲುತೂರಿಕೊಂಡಂತೆ. ಯಾಕೆ ಹೀಗೆ? ಇಂತಹ ನಾಟಕದ ದೃಶ್ಯಗಳ ಸೂತ್ರಧಾರರು ಆಟ ಆಡಲು ಬೇಕು. ಆ ಆಟ ಪ್ರೇಕ್ಷಕರಿಂದ ಹೊಗಳಿಕೆಯ ಗದ್ದುಗೆಗೆ ಏರಿಸುತ್ತದೆ. ಸೂತ್ರದಾರರು ಹೊಗಳಿಕೆಯ ಗದ್ದುಗೆ ಹಿಡಿಯುವುದೇ ತೊಗಲು ಬೊಂಬೆಗಳ ನರ್ತನದಿಂದ. ಆ ತೊಗಲು ಗೊಂಬೆಗಳು ಇಡೀ ದೇಶದ ಯಾವುದೇ ರಾಜ್ಯದಲ್ಲಿರಬಹುದು. ಅವು ಸದಾ ಕುಣಿಯುತ್ತಲೇ ಇರುತ್ತವೆ. ಗೊಂಬೆಗಳು ಹೆಚ್ಚುಹೆಚ್ಚು ಕುಣಿದಂತೆ ಪ್ರೇಕ್ಷಕ ಅಳುತ್ತಾನೆ, ನಗುತ್ತಾನೆ, ನೋವು ತಾಳಲಾರದೆ ಆಕ್ರಂದನ ಮಾಡುತ್ತಾನೆ.

ಮಹಾಭಾರತದಲ್ಲಿ ಕೃಷ್ಣ ಸೂತ್ರಧಾರ  ಅರ್ಜುನನ ಸಾರಥಿ. ದ್ವಾರಕಾ ನಗರಿಯ ಅವತಾರ ಪುರುಷ. ಅಂಥ ಕೃಷ್ಣ ಯುದ್ದರಂಗದಲ್ಲಿ ಕುದುರೆಯ ಲಗಾಮು ಹಿಡಿದು ಅರ್ಜುನನಿಗೆ ನೆರವಾದ. ಪಾಂಡವರಿಗೆ ಪಟ್ಟಾಧಿಕಾರ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದ. ಯುದ್ದದಲ್ಲಿ ಸಾವು ನೋವಾದಾಗ ಅವರು ಮಾಡಿದ ಪಾಪದ ಫಲ ಅಂದ. ಧರ್ಮಕ್ಕೆ ಜ್ಲಾನಿ ಉಂಟಾದಾಗ ಅವತಾರವೆತ್ತಿ ದುಷ್ಟರ ಸಂಹಾರ ಮಾಡುತ್ತೇನೆ ಎಂದ. ಆ ದುಷ್ಟರು ಕೂಡ ನಮ್ಮೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸಿದ್ದವರೇ. ಆದರೆ ಅಧಿಕಾರದ ಆಸೆಗೆ ನಮ್ಮೊಂದಿಗಿನ ದುಷ್ಟರೆಂದು ಕರೆಯಲ್ಪಡುವವನ್ನು ಕೊಲ್ಲಲು ಪ್ರೇರೇಪಿಸಿದ. ದುಷ್ಟರು ಯಾರು ಎಂಬುದನ್ನು ನಿರ್ಧರಿಸುವರು ದ್ವಾರಕೆಯ ಪುತ್ರರು. ದ್ವಾರಕೆಯ ಸೂತ್ರದಾರರು ಮಾಡಿದ್ದು ತಪ್ಪಲ್ಲವೇ ಎಂದು ಕೇಳಿದರೆ ಧರ್ಮದ ಕಡೆ ಮುಖ ಮಾಡುತ್ತಾರೆ. ಆ ಮುಖಗಳಿಗೆ ರಕ್ತದ ಕಲೆಗಳು ಮೆತ್ತಿಕೊಂಡಿವೆ.

ಸಧ್ಯಕ್ಕೆ ತೊಗಲು ಬೊಂಬೆಯಾಟ ನಿಂತಿದೆ. ಯುದ್ದದಲ್ಲಿ ಕಾಲು, ಕಣ್ಣು, ಕೈ ಕಳೆದುಕಕೊಂಡ, ಗಾಯಗೊಂಡ ಅಮಾಯಕರು ಧನ್ವಂತರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬಗಳ ರೋಧಿಸುತ್ತಿವೆ. ಮನೆ, ಅಂಗಡಿ ಕಳೆದು ಕೊಂಡವರು ದಿಕ್ಕುಗಾಣದೆ ಯಾರತ್ತಲೋ ಸಹಾಯಹಸ್ತ ಚಾಚಿದ್ದಾರೆ. ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕ್ರೂರ ಮನಸ್ಸುಗಳು ಜಯದಲ್ಲಿ ಸಂಭ್ರಮಿಸುತ್ತಿವೆ. ದುಃಖತಪ್ತರು ‘ಹರ ಕೊಲ್ಲಲ್ ಪರ ಕಾಯ್ವನೆ’? ಎಂದು ಗೋಳಾಡುತ್ತಿದ್ದಾರೆ. ಭೀಭತ್ಸ ಸನ್ನಿವೇಶ ನಮ್ಮೆದುರಿಗಿದೆ. ದುಃಖದ ಕಾರ್ಮೋಡಗಳು ಮಳೆಸುರಿಸುತ್ತಿವೆ. ಭೂಮಿ ನೆನೆಯದು ಬೆಂಕಿ ಆರದು ಅನ್ನುವಂತಿದೆ. ‘ಎಳವನ ಮೇಲೆ ಕುರುಡ ಕುಳಿತಿದ್ದಾನೆ/ ದಾರಿ ಸಾಗುವುದೆಂತೋ ನೋಡಬೇಕಾಗಿದೆ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಬಗ್ಗೆ ತುಟಿ ಬಿಚ್ಚದ ಸರ್ಕಾರ; ‘ಬೆಳಗಾವಿ ಚಲೋ’ ಹೋರಾಟಕ್ಕೆ ಕರೆ

ಗುರುವಾರ (ಡಿ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಮೀಸಲಾತಿ ಬಗ್ಗೆ ತುಟಿ ಬಿಚ್ಚದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ' 'ಬೆಳಗಾವಿ ಚಲೋ'...

ಅಖಂಡ ಕರ್ನಾಟಕದ ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ವಿಲೀನಗೊಳಿಸಲು ಇದು ಸಕಾಲ: ಡಾ.ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಮತ್ತು ನೆರೆ ರಾಜ್ಯಗಳ ಅಚ್ಚ ಕನ್ನಡ ಪ್ರದೇಶಗಳ ನಡುವಿನ ಭೌತಿಕ ಗಡಿಗಳು ಇದ್ದಂತೆ ಇದ್ದರೂ ಸಾಂಸ್ಕೃತಿಕವಾಗಿ ಹೇರಲಾಗುತ್ತಿರುವ ಗಡಿಗಳನ್ನು ಅಪ್ರಸ್ತುತವಾಗಿಸುವುದು ಸಾಧ್ಯವಿದೆ. ಇಂತಹ ಪ್ರದೇಶಗಳೊಂದಿಗೆ ಕರ್ನಾಟಕದ ಭಾವನಾತ್ಮಕ ಸಂಬಂಧದ ವಿಸ್ತರಣೆಗೆ ಇದು...

ಅರುಂಧತಿ ರಾಯ್ ಅವರ ಪುಸ್ತಕದ ಮುಖಪುಟ ವಿರೋಧಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಖ್ಯಾತ ಲೇಖಕಿ ಅರುಂಧತಿ ರಾಯ್ ಅವರ 'ಮದರ್ ಮೇರಿ ಕಮ್ಸ್ ಟು ಮಿ' ಪುಸ್ತಕದ ಮುಖಪುಟ ಚಿತ್ರದ ಪ್ರಸಾರದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ಏಕೆಂದರೆ, ಲೇಖಕರು ಧೂಮಪಾನವನ್ನು...

ರೋಹಿಂಗ್ಯಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸಿಐಜೆ ಸೂರ್ಯಕಾಂತ್ ಅವರಿಗೆ ಮಾಜಿ ನ್ಯಾಯಾದೀಶರು, ವಕೀಲರು, ಶಿಕ್ಷಣ ತಜ್ಞರಿಂದ ಮುಕ್ತ ಪತ್ರ

ರೋಹಿಂಗ್ಯಾಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ತಜ್ಞರು ಸೂರ್ಯಕಾಂತ್ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ.  ಕಿರುಕುಳದಿಂದ ಪಲಾಯನ ಮಾಡಿದ...

ಛತ್ತೀಸ್‌ಗಢ: ‘ಎಸ್‌ಇಸಿಎಲ್‌ ಅಮೇರಾ’ ಕಲ್ಲಿದ್ದಲು ಗಣಿ ವಿಸ್ತರಣೆ ವಿರೋಧಿಸಿ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ

ಛತ್ತೀಸ್‌ಗಢದ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ಎಸ್‌ಇಸಿಎಲ್‌) ಅಮೇರಾ ಕಲ್ಲಿದ್ದಲು ಗಣಿಗಾರಿಕೆ ವಿಸ್ತರಣೆ ವಿರೋಧಿಸಿ ಡಿ.3 ರಂದು ಅಂಬಿಕಾಪುರದ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಮೇಲೆ ಗ್ರಾಮಸ್ಥರು...

ಗಂಟೆಗಟ್ಟಲೆ ಇಂಡಿಗೋ ವಿಮಾನ ವಿಳಂಬ: ‘ನನ್ನ ಮಗಳಿಗೆ ಸ್ಯಾನಿಟರಿ ಪ್ಯಾಡ್‌ ಕೊಡಿ..’ ಎಂದು ಬೇಡಿಕೊಂಡ ತಂದೆ

ದೇಶಾದ್ಯಂತ ಇಂಡಿಗೋ ಪ್ರಯಾಣಿಕರು ಭಾರಿ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ, ವಿಮಾನಯಾನ ಸಂಸ್ಥೆಯ ವಿಳಂಬ ಮತ್ತು ರದ್ದತಿ ನಿರ್ಧಾರವು ಸತತ ನಾಲ್ಕನೇ ದಿನವೂ (ಡಿ. 5) ಮುಂದುವರೆದಿದೆ. ಅವ್ಯವಸ್ಥೆಯ ನಡುವೆಯೇ, ವಿಮಾನ ನಿಲ್ದಾಣದಿಂದ ಬಂದ...

ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ: ಪುಟಿನ್‌ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಹೇಳಿಕೆ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ. ಶಾಂತಿಯ ಪರವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗೆಂದು ಭಾರತಕ್ಕೆ ಆಗಮಿಸಿದ್ದು,...

ಮನೆ ಕಟ್ಟಲು, ವಾಹನ ಖರೀದಿಸಲು ಇದು ಸುಸಮಯ: ರೆಪೊ ದರ ಕಡಿತಗೊಳಿಸಿದ ಆರ್.ಬಿ.ಐ

ಡಿಸೆಂಬರ್ 05, ಶುಕ್ರವಾರದಂದು ನಡೆದ ಹಣಕಾಸು ನೀತಿ ಸಭೆಯಲ್ಲಿ (MPC) ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇಂದಿನ ಕಡಿತದ ನಂತರ, ಕೇಂದ್ರ ಬ್ಯಾಂಕ್ ಈ...

ಉತ್ತರ ಪ್ರದೇಶ| ದಲಿತ ಯುವಕನ ಮೇಲೆ ಹಲ್ಲೆ; ಬಂದೂಕು ತೋರಿಸಿ ವಿವಸ್ತ್ರಗೊಳಿಸಿದ ಗುಂಪು

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಗುಂಪು ದಲಿತ ಯುವಕನನ್ನು ಚಪ್ಪಲಿಯಿಂದ ಹೊಡೆದು, ಮುಷ್ಟಿ, ಕಾಲು ಮತ್ತು...

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ಇಂಡಿಗೋ ರದ್ದುಗೊಳಿಸಿದೆ. ಶುಕ್ರವಾರ ಹಲವಾರು ವಿಮಾನ ನಿಲ್ದಾಣಗಳಲ್ಲಿ 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.  ಶುಕ್ರವಾರ (ಡಿಸೆಂಬರ್ 5, 2025) ಮಧ್ಯರಾತ್ರಿಯವರೆಗೆ ಎಲ್ಲಾ...