Homeನಿಜವೋ ಸುಳ್ಳೋFact check: ಈ ಎರಡು ಪುಸ್ತಕಗಳು ಕೊರೊನ ವೈರಸ್ ಬಗ್ಗೆ ಮೊದಲೆ ಹೇಳಿದ್ದವೇ?

Fact check: ಈ ಎರಡು ಪುಸ್ತಕಗಳು ಕೊರೊನ ವೈರಸ್ ಬಗ್ಗೆ ಮೊದಲೆ ಹೇಳಿದ್ದವೇ?

- Advertisement -
- Advertisement -

ಡೀನ್ ಕೂಂಟ್ಜ್ ಬರೆದ “ದಿ ಐಸ್ ಆಫ್ ಡಾರ್ಕ್ನೆಸ್” (1981) ಮತ್ತು ಸಿಲ್ವಿಯಾ ಬ್ರೌನ್ ಬರೆದ “ಎಂಡ್ ಆಫ್ ಡೇಸ್” (2008) ಎಂಬ ಎರಡು ಪುಸ್ತಕಗಳು ಕೊರೊನಾ ವೈರಸ್ ಬಗ್ಗೆ ಭವಿಷ್ಯ ನುಡಿದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜಾಲತಾಣಿಗರು ಈ ಪುಸ್ತಕಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ “ಭೂಮ್ ಲೈವ್” ಫ್ಯಾಕ್ಟ್ ಚೆಕ್ ಮಾಡಿ ಅದರ ಬಗೆಗಿನ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.

ಕೊರೊನ ವೈರಸ್ ಸುತ್ತಲೂ ವೈವಿಧ್ಯಮಯ ತಪ್ಪು ಮಾಹಿತಿ ಮತ್ತು ದಾರಿತಪ್ಪಿಸುವ ವಾದಗಳು ಇಂಟರ್ನೆಟ್‌ನಲ್ಲಿ  ಇತ್ತೀಚೆಗೆ ಹರಿದಾಡುತ್ತಿವೆ. ವೈರಸ್ ಕಾಯಿಲೆಯ ಭವಿಷ್ಯವಾಣಿಯಾಗಿ ಕಾಂಟ್ಯಾಜಿಯನ್ ಚಲನಚಿತ್ರ ಜಾಲತಾಣದಲ್ಲಿ ಹರಿದಾಡಿದ ನಂತರ ಈ ಎರಡು ಪುಸ್ತಕಗಳು ವೈರಸ್ ಬಗ್ಗೆ ಈ ಹಿಂದೆಯೇ ಹೇಳಲಾಗಿತ್ತು ಎಂಬ ವಾದ ಹರಿಯಬಿಡಲಾಗಿದೆ.

ಇದರ ಬಗ್ಗೆ ಇತ್ತೀಚೆಗೆ ರಿಯಾಲಿಟಿ ಟಿವಿ ತಾರೆ ಮತ್ತು ಪ್ರಭಾವಶಾಲಿ ಉದ್ಯಮಿ ಕಿಮ್ ಕಾರ್ಡಶಿಯಾನ್ ವೆಸ್ಟ್ ಸಹ ಸಿಲ್ವಿಯಾ ಬ್ರೌನ್ ಭವಿಷ್ಯವಾಣಿ ಎಂದು ಚಿತ್ರವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ಅಲ್ಲದೆ ಕೊರೊನ ವೈರಸ್ ಬಗ್ಗೆ ಹಲವಾರು ಹಲವಾರು ವಾಟ್ಸಪ್ ಸಂದೇಶಗಳು, ಚಿತ್ರಗಳು ವಾಟ್ಸಪ್ ನಾದ್ಯಂತ ಹರಿದಾಡುತ್ತಿದೆ.

 

ಜೊತೆಗೆ ಕೂಂಟ್ಜ್ ಅವರ ಕಾದಂಬರಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ವಾಟ್ಸಾಪ್ ನಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲಿ “ದಿ ಐಸ್ ಆಫ್ ಡಾರ್ಕ್ನೆಸ್ ಎಂಬ ಪುಸ್ತಕವನ್ನು 1981 ರಲ್ಲಿ ಪ್ರಕಟಿಸಲಾಯಿತು, ಇದರಲ್ಲಿ ಕರೋನಾ ವೈರಸ್ ಅನ್ನು ಚೀನಾದ ಲ್ಯಾಬ್‌ನಲ್ಲಿ ಕದ್ದುಮುಚ್ಚಿ ತಯಾರಿಸಿದೆ ಎಂದು ಬರೆಯಲಾಗಿದೆ. ನಂತರ ಚೀನಾ ತನ್ನ ಬಡಜನರ ಜನಸಂಖ್ಯೆಯನ್ನು ಕಡಿಮೆ ಮಾಡಿ ಚೀನಾವು ಸೂಪರ್ ಪವರ್ ಆಗಲು ಬಳಸುತ್ತದೆ. ಪುಸ್ತಕದಲ್ಲಿ ಕರೋನಾ ವೈರಸ್ ಹೆಸರನ್ನು ವುಹಾನ್ 400 ಎಂದು ಹೆಸರಿಸಲಾಗಿದೆ. ಚೀನಾ ಈ ವೈರಸ್ ಅನ್ನು ಜೈವಿಕ ಅಸ್ತ್ರವಾಗಿ ಬಳಸುತ್ತದೆ” ಎಂದರ್ಥ ಬರುವ ಹಿಂದಿ ಸಂದೇಶಗಳು ಹರಿದಾಡುತ್ತಿದೆ.

ಇದೇ ರೀತಿಯ ಇನ್ನೊಂದು ಟ್ವೀಟನ್ನು ನೋಡಿ. 2019 ರ ಕೊನೆಯಲ್ಲಿ ವೈರಲ್ ರೋಗ ಸ್ಪೋಟಗೊಂಡ ನಂತರ ಕೂಂಟ್ಜ್ ಮತ್ತು ಬ್ರೌನ್ ಅವರ ಸ್ಪಷ್ಟವಾದ ಘೋಷಣೆಗಳಂತೆ ಕಾಣುವ ಎರಡು ಪುಸ್ತಕಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವುಗಳಿಗೆ ಸಂಬಂಧಿಸಿದ ಕೆಲವು ಟ್ವೀಟ್‌ಗಳನ್ನು ಗಮನಿಸಿ:

ಸಿಲ್ವಿಯಾ ಬ್ರೌನ್ ಅವರ ಎಂಡ್ ಆಫ್ ಡೇಸ್ ಕಾದಂಬರಿ ಕೊರೊನಾವೈರಸ್ ಬಗ್ಗೆ ಭವಿಷ್ಯ ನುಡಿದಿದೆಯೇ?

ಬ್ರೌನ್ ಅತಿಂದ್ರಿಯ ಶಕ್ತಿಯೊಂದಿಗೆ ಸಂವಹನ ಮಾಡುತ್ತೇನೆ ಎಂದು ಸ್ವಯಂ ಘೋಷಿಸಿಕೊಂಡ ವ್ಯಕ್ತಿಯಾಗಿದ್ದಾರೆ. ಅತೀಂದ್ರಿಯ ಶಕ್ತಿಯೊಂದಿಗೆ ಇತರ ಆತ್ಮಗಳೊಂದಿಗೆ ಸಂವಹನ ನಡೆಸುತ್ತೇನೆ ಎಂದು ಹೇಳುತ್ತಿದ್ದರು. ಈ ಹಿಂದೆ ಕಾಣೆಯಾದ ಮಕ್ಕಳ ಬಗ್ಗೆ ಪೋಷಕರಿಗೆ ಸುಳ್ಳು ಮಾಹಿತಿಯನ್ನು ನೀಡಿ ಕೋಪಕ್ಕೆ ತುತ್ತಾಗಿದ್ದರು.

ಕೊರೊನ ಬಗ್ಗೆ ಹರಡಲಾಗುತ್ತಿರುವ ಸಂದೇಶಗಳಲ್ಲಿ ಅವರ 2008 ರ ಪುಸ್ತಕ ಎಂಡ್ ಆಫ್ ಡೇಸ್‌ನ ಆಯ್ದ ಭಾಗವು ಹೀಗೆ ಹೇಳುತ್ತದೆ “ಸುಮಾರು 2020 ರಲ್ಲಿ ತೀವ್ರವಾದ ನ್ಯುಮೋನಿಯಾ ತರಹದ ಕಾಯಿಲೆ ಪ್ರಪಂಚದಾದ್ಯಂತ ಹರಡುತ್ತದೆ. ಅದು ಶ್ವಾಸಕೋಶ ಮತ್ತು ಶ್ವಾಸನಾಳದ ಮೇಲೆ ದಾಳಿ ಮಾಡುತ್ತದೆ. ಯಾವುದೇ ಚಿಕಿತ್ಸೆಗಳಿಗೂ ಅದು ಬಗ್ಗುವುದಿಲ್ಲ. ತುಂಬಾ ತೊಂದರೆ ಮಾಡುವ ಅದು ಬಂದ ತಕ್ಷಣ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ. ನಂತರ ಹತ್ತು ವರ್ಷಗಳಲ್ಲಿ ಮತ್ತೆ ದಾಳಿ ಮಾಡುತ್ತದೆ ಮತ್ತು ಅದರ ನಂತರ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ.

2013 ರಲ್ಲಿ ಬ್ರೌನ್ ನಿಧನ ಹೊಂದುತ್ತಾರೆ. 2020 ರಲ್ಲಿ ಪ್ರಪಂಚದಾದ್ಯಂತ ಹರಡುವ ಉಸಿರಾಟದ ಕಾಯಿಲೆಯ ಮುನ್ಸೂಚನೆಯು ಸಾಕಷ್ಟು ನಿಖರವಾಗಿದೆಯಾದರೂ ಕೊರೊನ ವೈರಸ್ ಹೊಸತಲ್ಲ. ಇದಕ್ಕೆ ಲಸಿಕೆಗಳು ಅಥವಾ ಚಿಕಿತ್ಸೆಗಳು ಇನ್ನೂ ಕಂಡು ಹಿಡಿದಿಲ್ಲ. ಈ ಕಾಯಿಲೆಯು “ತುಂಬಾ ತೊಂದರೆ ಪಡಿಸುತ್ತದೆ” ಮತ್ತು “ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ” ಎಂದು ಅವರು ಹೇಳಿಕೊಂಡಂತೆ ವೈದ್ಯಕೀಯ ವೃತ್ತಿಪರರು ಮತ್ತು ವಿಜ್ಞಾನಿಗಳು ಕರೋನ ವೈರಸ್ ಕಾಲೋಚಿತ ಕಾಯಿಲೆಯಾಗಬಹುದು ಎಂದು ಊಹಿಸಿದ್ದಾರೆ. ಎಂಡ್ ಆಫ್ ಡೇಸ್: ಪ್ರಿಡಿಕ್ಷನ್ಸ್ ಅಂಡ್ ಪ್ರೊಫೆಸೀಸ್ ಎಬೌಟ್ ಎಂಡ್ ದಿ ವರ್ಲ್ಡ್ (2008) ನಲ್ಲಿನ ‘ಭವಿಷ್ಯವಾಣಿಯು’ 2000 ರ ದಶಕದ ಆರಂಭದಲ್ಲಿ SARS (ತೀವ್ರ ತೀವ್ರವಾದ ಉಸಿರಾಟದ ಸಿಂಡ್ರೋಮ್) ವೈರಸ್ ಪತ್ತೆಯಾಗಿತ್ತು. ಇದರಿಂದಾಗಿ ವಿಶ್ವದಾದ್ಯಂತದ ಎರಡನೇ ಉಸಿರಾಟದ ಕಾಯಿಲೆ ಬರುತ್ತದೆ ಎಂದು ಬ್ರೌನ್ ಊಹಿಸಿರಬಹುದು.

ಡೀನ್ ಕೂಂಟ್ಜ್ ಅವರ ದಿ ಐಸ್ ಆಫ್ ಡಾರ್ಕ್ನೆಸ್ ಬಗ್ಗೆ ಏನು?

ಅಮೆರಿಕಾದ ಲೇಖಕ ಡೀನ್ ಕೂಂಟ್ಜ್ ಅವರು 1981ರಲ್ಲಿ ಪ್ರಕಟಿಸಿದ ಕಾಲ್ಪನಿಕ ಕೃತಿಯಾಗಿದೆ. ಕೂಂಟ್ಜ್ ತನ್ನ ಪುಸ್ತಕದಲ್ಲಿ ನಿರೂಪಿಸಲ್ಪಟ್ಟ ಘಟನೆಗಳು ವಾಸ್ತವವಾಗುತ್ತದೆ ಎಂದು ಹೇಳಿಕೊಂಡಿಲ್ಲ. ಇದು ವುಹಾನ್ ನಗರದ ಹೊರಗಿನ ಚೀನೀ ಮಿಲಿಟರಿ ಲ್ಯಾಬ್‌ನ ನಿರೂಪಣೆಯನ್ನು ಹೊಂದಿದೆ, ಅಲ್ಲಿ ಜೈವಿಕ ಶಸ್ತ್ರಾಸ್ತ್ರವನ್ನು ರಚಿಸಲಾಗುತ್ತದೆ ಮತ್ತು ಅದಕ್ಕೆ “ವುಹಾನ್ -400” ಎಂದು  ಹೆಸರಿಸಲಾಗಿದೆ. ಚೀನಾದ ಪ್ರಖ್ಯಾತ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ವುಹಾನ್ ಪ್ರಾಂತ್ಯದಲ್ಲಿದೆ, ಇಲ್ಲಿಂದಲೇ ಕೊರೊನಾವೈರಸ್ ಹರಡಿದೆ ಎಂದು ಹೇಳಲಾಗುತ್ತಿದೆ.

ಆದರೂ ಪುಸ್ತಕದಲ್ಲಿರುವ ಕಾಲ್ಪನಿಕ ವುಹಾನ್ -400 ಮತ್ತು ಕೊರೊನ ವೈರಸ್ ನಡುವೆ ಇಲ್ಲಿ ಹಲವಾರು ಹೋಲಿಕೆಗಳಿವೆ. ಅವುಗಳ ನಡುವಿನ ಕೆಲವು ಪ್ರಮುಖ ವ್ಯತ್ಯಾಸಗಳನ್ನು ಕೆಳಗೆ ನೀಡಲಾಗಿದೆ:

• ದಿ ಐಸ್ ಆಫ್ ಡಾರ್ಕ್ನೆಸ್ “ಹೊಸ ಮತ್ತು ಅಪಾಯಕಾರಿ” ಬಯೋ ಶಸ್ತ್ರಾಸ್ತ್ರ ವೈರಸ್ ಕಥೆಯು ಆಕಸ್ಮಿಕವಾಗಿ ನಾಗರಿಕರಿಂದ ಸಂಕುಚಿತಗೊಳಿಸುತ್ತದೆ. ಅವರು ಕೇವಲ ನಾಲ್ಕು ಗಂಟೆಗಳ ಕಾಲಾವಧಿಯಲ್ಲಿ ಸೋಂಕಿಗೆ ಒಳಗಾಗುತ್ತಾರೆ. ಆದರೆ ಕೊರೊನ 1-14 ದಿನಗಳ ಕಾಲಾವಧಿಯಲ್ಲಿ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕೊರೊನಾದ ಸಾಮಾನ್ಯ ಸಮಯ ಸುಮಾರು ಐದು ದಿನಗಳು.

  • ಸಾಹಿತ್ಯಿಕವಾದ ವುಹಾನ್-400 100% ಸಾವಿನ ಪ್ರಮಾಣವನ್ನು ಹೊಂದಿದೆ, ಸೋಂಕಿತ ವ್ಯಕ್ತಿಗಳು 12-24 ಗಂಟೆಗಳ ಮೀರಿ ಬದುಕುಳಿಯುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೊನ ವೈರಸ್ ಬಾಧಿತರ ಸಾವಿನ ಪ್ರಮಾಣ ಕೇವಲ ಶೇಕಡಾ 3- 4% ರ ನಡುವೆ ಇರುತ್ತದೆ.

ಇನ್ನು ಪುಸ್ತಕದಲ್ಲಿ ಉಲ್ಲೇಖಿಸಲಾದ ಕಾಲ್ಪನಿಕ “ವುಹಾನ್ -400” ನ ಲಕ್ಷಣಗಳು ಕೊರೊನ ವೈರಸ್‌ನ ಲಕ್ಷಣಗಳಿಗಿಂತ ಭಿನ್ನವಾಗಿವೆ.

  • ವುಹಾನ್ -400 ಅಕ್ಷರಶಃ ಮೆದುಳಿನ ಅಂಗಾಂಶವನ್ನು ತಿನ್ನುತ್ತದೆ. ವಿಷದ ಸ್ರವಿಸುವಿಕೆಯು ದೈಹಿಕ ಕ್ರಿಯೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಕೊರೊನ ವೈರಸ್ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಸೌಮ್ಯವಾದ ನೆಗಡಿಯ ಲಕ್ಷಣಗಳನ್ನು ಹೊಂದಿದೆ. ತೀವ್ರವಾದ ನ್ಯುಮೋನಿಯಾ, ತೀವ್ರ ತೀವ್ರವಾದ ಉಸಿರಾಟದ ಕಾಯಿಲೆ, ಮೂತ್ರಪಿಂಡ ವೈಫಲ್ಯ ಇದ್ದರೆ ಸಾವಿಗೆ ಕಾರಣವಾಗಬಹುದು.
  • ದಿ ಐಸ್ ಆಫ್ ಡಾರ್ಕ್ನೆಸ್ ಕಥಾವಸ್ತುವಿನ ಪ್ರಕಾರ ಕಾಲ್ಪನಿಕ “ವುಹಾನ್ -400” ವೈರಸ್ ಅನ್ನು ಪ್ರಯೋಗಾಲಯದಲ್ಲಿ ಬಯೋ ಶಸ್ತ್ರಾಸ್ತ್ರವಾಗಿ ರಚಿಸಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕರೋನ ವೈರಸ್‌ನ ಹೊರಹೊಮ್ಮುವಿಕೆ ಕಳೆದ ವರ್ಷದ ಕೊನೆಯಲ್ಲಿ ವುಹಾನ್‌ನ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಮಾರಾಟ ಮಾಡುತ್ತಿದ್ದಾಗ ಎಂದು ವರದಿಯಾಗಿದೆ. ಆದಾಗ್ಯೂ, ವಿಜ್ಞಾನಿಗಳು ಇನ್ನೂ ಅದರ ಮೂಲವನ್ನು ಕಂಡುಹಿಡಿದಿಲ್ಲ.
  • ಕಾಲ್ಪನಿಕ “ವುಹಾನ್ -400” ಅನ್ನು ಎಬೋಲಾಗಿಂತ ತುಂಬಾ ಕೆಟ್ಟದಾಗಿದೆ ಎಂದು ವಿವರಿಸಲಾಗಿದೆ, ಆದರೆ ಕರೋನ ವೈರಸ್‌ ಎಬೋಲಾಗಿಂತ ಕಡಿಮೆ ಅಪಾಯಕಾರಿಯಾಗಿದೆ. ಡಬ್ಲ್ಯುಎಚ್‌ಒ ಪ್ರಕಾರ, ಸರಾಸರಿಯಾಗಿ ಎಬೋಲಾ ಪ್ರಕರಣದ ಸಾವಿನ ಪ್ರಮಾಣವು ಸುಮಾರು 50% ರಷ್ಟಿದ್ದರೆ. ಆದರೆ ಕರೋನ ವೈರಸ್‌ ಸೋಂಕಿತ ಸಾವಿನ ಪ್ರಮಾಣ ಶೇಕಡಾ 3- 4% ರ ನಡುವೆ ಇರುತ್ತದೆ.

ಕೂಂಟ್ಜ್ ಅವರ ಪುಸ್ತಕಕ್ಕೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, 1981 ರಲ್ಲಿ ಬಂದ ದಿ ಐಸ್ ಆಫ್ ಡಾರ್ಕ್ನೆಸ್ ನ ಮೊದಲ ಆವೃತ್ತಿಯು ಕಾಲ್ಪನಿಕ ವೈರಸ್ ಅನ್ನು ರಷ್ಯಾದ ಪ್ರದೇಶದ “ಗೋರ್ಕಿ -400” ಎಂದು ಹೆಸರಿಸಿದೆ. ಈ ಮೊದಲ ಆವೃತ್ತಿಯಲ್ಲಿನ ಇತರ ವಿವರಗಳು ಸಹ ಅದೇ ಕಥಾವಸ್ತುವಿನೊಂದಿಗೆ ಹೊಂದಿಕೆಯಾಗುತ್ತವೆ. ಉದಾಹರಣೆಗೆ “ಗೋರ್ಕಿ -400” ಅನ್ನು “ಗೋರ್ಕಿ” ಯ ಹೊರಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು “ದಶಕದಲ್ಲಿ ಸೋವಿಯತ್‌ನ ಅತ್ಯಂತ ಪ್ರಮುಖ, ಅಪಾಯಕಾರಿ ಹೊಸ ಜೈವಿಕ ಅಸ್ತ್ರ” ಎಂದು ಹೇಳಲಾಗಿತ್ತು.

ಶೀತಲ ಸಮರದ ನಂತರ 1989 ರಲ್ಲಿ ಕಾದಂಬರಿಯ ಬಿಡುಗಡೆಯ ನಂತರ ವೈರಸ್‌ನ ಹೆಸರನ್ನು ಬದಲಾಯಿಸಲಾಯಿತು. ಈ ಕಾದಂಬರಿಯನ್ನು ಮೊದಲ ಬಾರಿಗೆ ಲೇ ನಿಕೋಲ್ಸ್‌ನ ನಾಮ್ ಡೆ ಪ್ಲುಮ್ ಅಡಿಯಲ್ಲಿ ಪ್ರಕಟಿಸಲಾಗಿತ್ತು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...