Homeನಿಜವೋ ಸುಳ್ಳೋFact check: ಈ ಎರಡು ಪುಸ್ತಕಗಳು ಕೊರೊನ ವೈರಸ್ ಬಗ್ಗೆ ಮೊದಲೆ ಹೇಳಿದ್ದವೇ?

Fact check: ಈ ಎರಡು ಪುಸ್ತಕಗಳು ಕೊರೊನ ವೈರಸ್ ಬಗ್ಗೆ ಮೊದಲೆ ಹೇಳಿದ್ದವೇ?

- Advertisement -
- Advertisement -

ಡೀನ್ ಕೂಂಟ್ಜ್ ಬರೆದ “ದಿ ಐಸ್ ಆಫ್ ಡಾರ್ಕ್ನೆಸ್” (1981) ಮತ್ತು ಸಿಲ್ವಿಯಾ ಬ್ರೌನ್ ಬರೆದ “ಎಂಡ್ ಆಫ್ ಡೇಸ್” (2008) ಎಂಬ ಎರಡು ಪುಸ್ತಕಗಳು ಕೊರೊನಾ ವೈರಸ್ ಬಗ್ಗೆ ಭವಿಷ್ಯ ನುಡಿದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜಾಲತಾಣಿಗರು ಈ ಪುಸ್ತಕಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ “ಭೂಮ್ ಲೈವ್” ಫ್ಯಾಕ್ಟ್ ಚೆಕ್ ಮಾಡಿ ಅದರ ಬಗೆಗಿನ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.

ಕೊರೊನ ವೈರಸ್ ಸುತ್ತಲೂ ವೈವಿಧ್ಯಮಯ ತಪ್ಪು ಮಾಹಿತಿ ಮತ್ತು ದಾರಿತಪ್ಪಿಸುವ ವಾದಗಳು ಇಂಟರ್ನೆಟ್‌ನಲ್ಲಿ  ಇತ್ತೀಚೆಗೆ ಹರಿದಾಡುತ್ತಿವೆ. ವೈರಸ್ ಕಾಯಿಲೆಯ ಭವಿಷ್ಯವಾಣಿಯಾಗಿ ಕಾಂಟ್ಯಾಜಿಯನ್ ಚಲನಚಿತ್ರ ಜಾಲತಾಣದಲ್ಲಿ ಹರಿದಾಡಿದ ನಂತರ ಈ ಎರಡು ಪುಸ್ತಕಗಳು ವೈರಸ್ ಬಗ್ಗೆ ಈ ಹಿಂದೆಯೇ ಹೇಳಲಾಗಿತ್ತು ಎಂಬ ವಾದ ಹರಿಯಬಿಡಲಾಗಿದೆ.

ಇದರ ಬಗ್ಗೆ ಇತ್ತೀಚೆಗೆ ರಿಯಾಲಿಟಿ ಟಿವಿ ತಾರೆ ಮತ್ತು ಪ್ರಭಾವಶಾಲಿ ಉದ್ಯಮಿ ಕಿಮ್ ಕಾರ್ಡಶಿಯಾನ್ ವೆಸ್ಟ್ ಸಹ ಸಿಲ್ವಿಯಾ ಬ್ರೌನ್ ಭವಿಷ್ಯವಾಣಿ ಎಂದು ಚಿತ್ರವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ಅಲ್ಲದೆ ಕೊರೊನ ವೈರಸ್ ಬಗ್ಗೆ ಹಲವಾರು ಹಲವಾರು ವಾಟ್ಸಪ್ ಸಂದೇಶಗಳು, ಚಿತ್ರಗಳು ವಾಟ್ಸಪ್ ನಾದ್ಯಂತ ಹರಿದಾಡುತ್ತಿದೆ.

 

ಜೊತೆಗೆ ಕೂಂಟ್ಜ್ ಅವರ ಕಾದಂಬರಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ವಾಟ್ಸಾಪ್ ನಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲಿ “ದಿ ಐಸ್ ಆಫ್ ಡಾರ್ಕ್ನೆಸ್ ಎಂಬ ಪುಸ್ತಕವನ್ನು 1981 ರಲ್ಲಿ ಪ್ರಕಟಿಸಲಾಯಿತು, ಇದರಲ್ಲಿ ಕರೋನಾ ವೈರಸ್ ಅನ್ನು ಚೀನಾದ ಲ್ಯಾಬ್‌ನಲ್ಲಿ ಕದ್ದುಮುಚ್ಚಿ ತಯಾರಿಸಿದೆ ಎಂದು ಬರೆಯಲಾಗಿದೆ. ನಂತರ ಚೀನಾ ತನ್ನ ಬಡಜನರ ಜನಸಂಖ್ಯೆಯನ್ನು ಕಡಿಮೆ ಮಾಡಿ ಚೀನಾವು ಸೂಪರ್ ಪವರ್ ಆಗಲು ಬಳಸುತ್ತದೆ. ಪುಸ್ತಕದಲ್ಲಿ ಕರೋನಾ ವೈರಸ್ ಹೆಸರನ್ನು ವುಹಾನ್ 400 ಎಂದು ಹೆಸರಿಸಲಾಗಿದೆ. ಚೀನಾ ಈ ವೈರಸ್ ಅನ್ನು ಜೈವಿಕ ಅಸ್ತ್ರವಾಗಿ ಬಳಸುತ್ತದೆ” ಎಂದರ್ಥ ಬರುವ ಹಿಂದಿ ಸಂದೇಶಗಳು ಹರಿದಾಡುತ್ತಿದೆ.

ಇದೇ ರೀತಿಯ ಇನ್ನೊಂದು ಟ್ವೀಟನ್ನು ನೋಡಿ. 2019 ರ ಕೊನೆಯಲ್ಲಿ ವೈರಲ್ ರೋಗ ಸ್ಪೋಟಗೊಂಡ ನಂತರ ಕೂಂಟ್ಜ್ ಮತ್ತು ಬ್ರೌನ್ ಅವರ ಸ್ಪಷ್ಟವಾದ ಘೋಷಣೆಗಳಂತೆ ಕಾಣುವ ಎರಡು ಪುಸ್ತಕಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವುಗಳಿಗೆ ಸಂಬಂಧಿಸಿದ ಕೆಲವು ಟ್ವೀಟ್‌ಗಳನ್ನು ಗಮನಿಸಿ:

ಸಿಲ್ವಿಯಾ ಬ್ರೌನ್ ಅವರ ಎಂಡ್ ಆಫ್ ಡೇಸ್ ಕಾದಂಬರಿ ಕೊರೊನಾವೈರಸ್ ಬಗ್ಗೆ ಭವಿಷ್ಯ ನುಡಿದಿದೆಯೇ?

ಬ್ರೌನ್ ಅತಿಂದ್ರಿಯ ಶಕ್ತಿಯೊಂದಿಗೆ ಸಂವಹನ ಮಾಡುತ್ತೇನೆ ಎಂದು ಸ್ವಯಂ ಘೋಷಿಸಿಕೊಂಡ ವ್ಯಕ್ತಿಯಾಗಿದ್ದಾರೆ. ಅತೀಂದ್ರಿಯ ಶಕ್ತಿಯೊಂದಿಗೆ ಇತರ ಆತ್ಮಗಳೊಂದಿಗೆ ಸಂವಹನ ನಡೆಸುತ್ತೇನೆ ಎಂದು ಹೇಳುತ್ತಿದ್ದರು. ಈ ಹಿಂದೆ ಕಾಣೆಯಾದ ಮಕ್ಕಳ ಬಗ್ಗೆ ಪೋಷಕರಿಗೆ ಸುಳ್ಳು ಮಾಹಿತಿಯನ್ನು ನೀಡಿ ಕೋಪಕ್ಕೆ ತುತ್ತಾಗಿದ್ದರು.

ಕೊರೊನ ಬಗ್ಗೆ ಹರಡಲಾಗುತ್ತಿರುವ ಸಂದೇಶಗಳಲ್ಲಿ ಅವರ 2008 ರ ಪುಸ್ತಕ ಎಂಡ್ ಆಫ್ ಡೇಸ್‌ನ ಆಯ್ದ ಭಾಗವು ಹೀಗೆ ಹೇಳುತ್ತದೆ “ಸುಮಾರು 2020 ರಲ್ಲಿ ತೀವ್ರವಾದ ನ್ಯುಮೋನಿಯಾ ತರಹದ ಕಾಯಿಲೆ ಪ್ರಪಂಚದಾದ್ಯಂತ ಹರಡುತ್ತದೆ. ಅದು ಶ್ವಾಸಕೋಶ ಮತ್ತು ಶ್ವಾಸನಾಳದ ಮೇಲೆ ದಾಳಿ ಮಾಡುತ್ತದೆ. ಯಾವುದೇ ಚಿಕಿತ್ಸೆಗಳಿಗೂ ಅದು ಬಗ್ಗುವುದಿಲ್ಲ. ತುಂಬಾ ತೊಂದರೆ ಮಾಡುವ ಅದು ಬಂದ ತಕ್ಷಣ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ. ನಂತರ ಹತ್ತು ವರ್ಷಗಳಲ್ಲಿ ಮತ್ತೆ ದಾಳಿ ಮಾಡುತ್ತದೆ ಮತ್ತು ಅದರ ನಂತರ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ.

2013 ರಲ್ಲಿ ಬ್ರೌನ್ ನಿಧನ ಹೊಂದುತ್ತಾರೆ. 2020 ರಲ್ಲಿ ಪ್ರಪಂಚದಾದ್ಯಂತ ಹರಡುವ ಉಸಿರಾಟದ ಕಾಯಿಲೆಯ ಮುನ್ಸೂಚನೆಯು ಸಾಕಷ್ಟು ನಿಖರವಾಗಿದೆಯಾದರೂ ಕೊರೊನ ವೈರಸ್ ಹೊಸತಲ್ಲ. ಇದಕ್ಕೆ ಲಸಿಕೆಗಳು ಅಥವಾ ಚಿಕಿತ್ಸೆಗಳು ಇನ್ನೂ ಕಂಡು ಹಿಡಿದಿಲ್ಲ. ಈ ಕಾಯಿಲೆಯು “ತುಂಬಾ ತೊಂದರೆ ಪಡಿಸುತ್ತದೆ” ಮತ್ತು “ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ” ಎಂದು ಅವರು ಹೇಳಿಕೊಂಡಂತೆ ವೈದ್ಯಕೀಯ ವೃತ್ತಿಪರರು ಮತ್ತು ವಿಜ್ಞಾನಿಗಳು ಕರೋನ ವೈರಸ್ ಕಾಲೋಚಿತ ಕಾಯಿಲೆಯಾಗಬಹುದು ಎಂದು ಊಹಿಸಿದ್ದಾರೆ. ಎಂಡ್ ಆಫ್ ಡೇಸ್: ಪ್ರಿಡಿಕ್ಷನ್ಸ್ ಅಂಡ್ ಪ್ರೊಫೆಸೀಸ್ ಎಬೌಟ್ ಎಂಡ್ ದಿ ವರ್ಲ್ಡ್ (2008) ನಲ್ಲಿನ ‘ಭವಿಷ್ಯವಾಣಿಯು’ 2000 ರ ದಶಕದ ಆರಂಭದಲ್ಲಿ SARS (ತೀವ್ರ ತೀವ್ರವಾದ ಉಸಿರಾಟದ ಸಿಂಡ್ರೋಮ್) ವೈರಸ್ ಪತ್ತೆಯಾಗಿತ್ತು. ಇದರಿಂದಾಗಿ ವಿಶ್ವದಾದ್ಯಂತದ ಎರಡನೇ ಉಸಿರಾಟದ ಕಾಯಿಲೆ ಬರುತ್ತದೆ ಎಂದು ಬ್ರೌನ್ ಊಹಿಸಿರಬಹುದು.

ಡೀನ್ ಕೂಂಟ್ಜ್ ಅವರ ದಿ ಐಸ್ ಆಫ್ ಡಾರ್ಕ್ನೆಸ್ ಬಗ್ಗೆ ಏನು?

ಅಮೆರಿಕಾದ ಲೇಖಕ ಡೀನ್ ಕೂಂಟ್ಜ್ ಅವರು 1981ರಲ್ಲಿ ಪ್ರಕಟಿಸಿದ ಕಾಲ್ಪನಿಕ ಕೃತಿಯಾಗಿದೆ. ಕೂಂಟ್ಜ್ ತನ್ನ ಪುಸ್ತಕದಲ್ಲಿ ನಿರೂಪಿಸಲ್ಪಟ್ಟ ಘಟನೆಗಳು ವಾಸ್ತವವಾಗುತ್ತದೆ ಎಂದು ಹೇಳಿಕೊಂಡಿಲ್ಲ. ಇದು ವುಹಾನ್ ನಗರದ ಹೊರಗಿನ ಚೀನೀ ಮಿಲಿಟರಿ ಲ್ಯಾಬ್‌ನ ನಿರೂಪಣೆಯನ್ನು ಹೊಂದಿದೆ, ಅಲ್ಲಿ ಜೈವಿಕ ಶಸ್ತ್ರಾಸ್ತ್ರವನ್ನು ರಚಿಸಲಾಗುತ್ತದೆ ಮತ್ತು ಅದಕ್ಕೆ “ವುಹಾನ್ -400” ಎಂದು  ಹೆಸರಿಸಲಾಗಿದೆ. ಚೀನಾದ ಪ್ರಖ್ಯಾತ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ವುಹಾನ್ ಪ್ರಾಂತ್ಯದಲ್ಲಿದೆ, ಇಲ್ಲಿಂದಲೇ ಕೊರೊನಾವೈರಸ್ ಹರಡಿದೆ ಎಂದು ಹೇಳಲಾಗುತ್ತಿದೆ.

ಆದರೂ ಪುಸ್ತಕದಲ್ಲಿರುವ ಕಾಲ್ಪನಿಕ ವುಹಾನ್ -400 ಮತ್ತು ಕೊರೊನ ವೈರಸ್ ನಡುವೆ ಇಲ್ಲಿ ಹಲವಾರು ಹೋಲಿಕೆಗಳಿವೆ. ಅವುಗಳ ನಡುವಿನ ಕೆಲವು ಪ್ರಮುಖ ವ್ಯತ್ಯಾಸಗಳನ್ನು ಕೆಳಗೆ ನೀಡಲಾಗಿದೆ:

• ದಿ ಐಸ್ ಆಫ್ ಡಾರ್ಕ್ನೆಸ್ “ಹೊಸ ಮತ್ತು ಅಪಾಯಕಾರಿ” ಬಯೋ ಶಸ್ತ್ರಾಸ್ತ್ರ ವೈರಸ್ ಕಥೆಯು ಆಕಸ್ಮಿಕವಾಗಿ ನಾಗರಿಕರಿಂದ ಸಂಕುಚಿತಗೊಳಿಸುತ್ತದೆ. ಅವರು ಕೇವಲ ನಾಲ್ಕು ಗಂಟೆಗಳ ಕಾಲಾವಧಿಯಲ್ಲಿ ಸೋಂಕಿಗೆ ಒಳಗಾಗುತ್ತಾರೆ. ಆದರೆ ಕೊರೊನ 1-14 ದಿನಗಳ ಕಾಲಾವಧಿಯಲ್ಲಿ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕೊರೊನಾದ ಸಾಮಾನ್ಯ ಸಮಯ ಸುಮಾರು ಐದು ದಿನಗಳು.

  • ಸಾಹಿತ್ಯಿಕವಾದ ವುಹಾನ್-400 100% ಸಾವಿನ ಪ್ರಮಾಣವನ್ನು ಹೊಂದಿದೆ, ಸೋಂಕಿತ ವ್ಯಕ್ತಿಗಳು 12-24 ಗಂಟೆಗಳ ಮೀರಿ ಬದುಕುಳಿಯುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೊನ ವೈರಸ್ ಬಾಧಿತರ ಸಾವಿನ ಪ್ರಮಾಣ ಕೇವಲ ಶೇಕಡಾ 3- 4% ರ ನಡುವೆ ಇರುತ್ತದೆ.

ಇನ್ನು ಪುಸ್ತಕದಲ್ಲಿ ಉಲ್ಲೇಖಿಸಲಾದ ಕಾಲ್ಪನಿಕ “ವುಹಾನ್ -400” ನ ಲಕ್ಷಣಗಳು ಕೊರೊನ ವೈರಸ್‌ನ ಲಕ್ಷಣಗಳಿಗಿಂತ ಭಿನ್ನವಾಗಿವೆ.

  • ವುಹಾನ್ -400 ಅಕ್ಷರಶಃ ಮೆದುಳಿನ ಅಂಗಾಂಶವನ್ನು ತಿನ್ನುತ್ತದೆ. ವಿಷದ ಸ್ರವಿಸುವಿಕೆಯು ದೈಹಿಕ ಕ್ರಿಯೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಕೊರೊನ ವೈರಸ್ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಸೌಮ್ಯವಾದ ನೆಗಡಿಯ ಲಕ್ಷಣಗಳನ್ನು ಹೊಂದಿದೆ. ತೀವ್ರವಾದ ನ್ಯುಮೋನಿಯಾ, ತೀವ್ರ ತೀವ್ರವಾದ ಉಸಿರಾಟದ ಕಾಯಿಲೆ, ಮೂತ್ರಪಿಂಡ ವೈಫಲ್ಯ ಇದ್ದರೆ ಸಾವಿಗೆ ಕಾರಣವಾಗಬಹುದು.
  • ದಿ ಐಸ್ ಆಫ್ ಡಾರ್ಕ್ನೆಸ್ ಕಥಾವಸ್ತುವಿನ ಪ್ರಕಾರ ಕಾಲ್ಪನಿಕ “ವುಹಾನ್ -400” ವೈರಸ್ ಅನ್ನು ಪ್ರಯೋಗಾಲಯದಲ್ಲಿ ಬಯೋ ಶಸ್ತ್ರಾಸ್ತ್ರವಾಗಿ ರಚಿಸಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕರೋನ ವೈರಸ್‌ನ ಹೊರಹೊಮ್ಮುವಿಕೆ ಕಳೆದ ವರ್ಷದ ಕೊನೆಯಲ್ಲಿ ವುಹಾನ್‌ನ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಮಾರಾಟ ಮಾಡುತ್ತಿದ್ದಾಗ ಎಂದು ವರದಿಯಾಗಿದೆ. ಆದಾಗ್ಯೂ, ವಿಜ್ಞಾನಿಗಳು ಇನ್ನೂ ಅದರ ಮೂಲವನ್ನು ಕಂಡುಹಿಡಿದಿಲ್ಲ.
  • ಕಾಲ್ಪನಿಕ “ವುಹಾನ್ -400” ಅನ್ನು ಎಬೋಲಾಗಿಂತ ತುಂಬಾ ಕೆಟ್ಟದಾಗಿದೆ ಎಂದು ವಿವರಿಸಲಾಗಿದೆ, ಆದರೆ ಕರೋನ ವೈರಸ್‌ ಎಬೋಲಾಗಿಂತ ಕಡಿಮೆ ಅಪಾಯಕಾರಿಯಾಗಿದೆ. ಡಬ್ಲ್ಯುಎಚ್‌ಒ ಪ್ರಕಾರ, ಸರಾಸರಿಯಾಗಿ ಎಬೋಲಾ ಪ್ರಕರಣದ ಸಾವಿನ ಪ್ರಮಾಣವು ಸುಮಾರು 50% ರಷ್ಟಿದ್ದರೆ. ಆದರೆ ಕರೋನ ವೈರಸ್‌ ಸೋಂಕಿತ ಸಾವಿನ ಪ್ರಮಾಣ ಶೇಕಡಾ 3- 4% ರ ನಡುವೆ ಇರುತ್ತದೆ.

ಕೂಂಟ್ಜ್ ಅವರ ಪುಸ್ತಕಕ್ಕೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, 1981 ರಲ್ಲಿ ಬಂದ ದಿ ಐಸ್ ಆಫ್ ಡಾರ್ಕ್ನೆಸ್ ನ ಮೊದಲ ಆವೃತ್ತಿಯು ಕಾಲ್ಪನಿಕ ವೈರಸ್ ಅನ್ನು ರಷ್ಯಾದ ಪ್ರದೇಶದ “ಗೋರ್ಕಿ -400” ಎಂದು ಹೆಸರಿಸಿದೆ. ಈ ಮೊದಲ ಆವೃತ್ತಿಯಲ್ಲಿನ ಇತರ ವಿವರಗಳು ಸಹ ಅದೇ ಕಥಾವಸ್ತುವಿನೊಂದಿಗೆ ಹೊಂದಿಕೆಯಾಗುತ್ತವೆ. ಉದಾಹರಣೆಗೆ “ಗೋರ್ಕಿ -400” ಅನ್ನು “ಗೋರ್ಕಿ” ಯ ಹೊರಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು “ದಶಕದಲ್ಲಿ ಸೋವಿಯತ್‌ನ ಅತ್ಯಂತ ಪ್ರಮುಖ, ಅಪಾಯಕಾರಿ ಹೊಸ ಜೈವಿಕ ಅಸ್ತ್ರ” ಎಂದು ಹೇಳಲಾಗಿತ್ತು.

ಶೀತಲ ಸಮರದ ನಂತರ 1989 ರಲ್ಲಿ ಕಾದಂಬರಿಯ ಬಿಡುಗಡೆಯ ನಂತರ ವೈರಸ್‌ನ ಹೆಸರನ್ನು ಬದಲಾಯಿಸಲಾಯಿತು. ಈ ಕಾದಂಬರಿಯನ್ನು ಮೊದಲ ಬಾರಿಗೆ ಲೇ ನಿಕೋಲ್ಸ್‌ನ ನಾಮ್ ಡೆ ಪ್ಲುಮ್ ಅಡಿಯಲ್ಲಿ ಪ್ರಕಟಿಸಲಾಗಿತ್ತು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...