Homeನಿಜವೋ ಸುಳ್ಳೋFact check: ಈ ಎರಡು ಪುಸ್ತಕಗಳು ಕೊರೊನ ವೈರಸ್ ಬಗ್ಗೆ ಮೊದಲೆ ಹೇಳಿದ್ದವೇ?

Fact check: ಈ ಎರಡು ಪುಸ್ತಕಗಳು ಕೊರೊನ ವೈರಸ್ ಬಗ್ಗೆ ಮೊದಲೆ ಹೇಳಿದ್ದವೇ?

- Advertisement -
- Advertisement -

ಡೀನ್ ಕೂಂಟ್ಜ್ ಬರೆದ “ದಿ ಐಸ್ ಆಫ್ ಡಾರ್ಕ್ನೆಸ್” (1981) ಮತ್ತು ಸಿಲ್ವಿಯಾ ಬ್ರೌನ್ ಬರೆದ “ಎಂಡ್ ಆಫ್ ಡೇಸ್” (2008) ಎಂಬ ಎರಡು ಪುಸ್ತಕಗಳು ಕೊರೊನಾ ವೈರಸ್ ಬಗ್ಗೆ ಭವಿಷ್ಯ ನುಡಿದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜಾಲತಾಣಿಗರು ಈ ಪುಸ್ತಕಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ “ಭೂಮ್ ಲೈವ್” ಫ್ಯಾಕ್ಟ್ ಚೆಕ್ ಮಾಡಿ ಅದರ ಬಗೆಗಿನ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.

ಕೊರೊನ ವೈರಸ್ ಸುತ್ತಲೂ ವೈವಿಧ್ಯಮಯ ತಪ್ಪು ಮಾಹಿತಿ ಮತ್ತು ದಾರಿತಪ್ಪಿಸುವ ವಾದಗಳು ಇಂಟರ್ನೆಟ್‌ನಲ್ಲಿ  ಇತ್ತೀಚೆಗೆ ಹರಿದಾಡುತ್ತಿವೆ. ವೈರಸ್ ಕಾಯಿಲೆಯ ಭವಿಷ್ಯವಾಣಿಯಾಗಿ ಕಾಂಟ್ಯಾಜಿಯನ್ ಚಲನಚಿತ್ರ ಜಾಲತಾಣದಲ್ಲಿ ಹರಿದಾಡಿದ ನಂತರ ಈ ಎರಡು ಪುಸ್ತಕಗಳು ವೈರಸ್ ಬಗ್ಗೆ ಈ ಹಿಂದೆಯೇ ಹೇಳಲಾಗಿತ್ತು ಎಂಬ ವಾದ ಹರಿಯಬಿಡಲಾಗಿದೆ.

ಇದರ ಬಗ್ಗೆ ಇತ್ತೀಚೆಗೆ ರಿಯಾಲಿಟಿ ಟಿವಿ ತಾರೆ ಮತ್ತು ಪ್ರಭಾವಶಾಲಿ ಉದ್ಯಮಿ ಕಿಮ್ ಕಾರ್ಡಶಿಯಾನ್ ವೆಸ್ಟ್ ಸಹ ಸಿಲ್ವಿಯಾ ಬ್ರೌನ್ ಭವಿಷ್ಯವಾಣಿ ಎಂದು ಚಿತ್ರವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ಅಲ್ಲದೆ ಕೊರೊನ ವೈರಸ್ ಬಗ್ಗೆ ಹಲವಾರು ಹಲವಾರು ವಾಟ್ಸಪ್ ಸಂದೇಶಗಳು, ಚಿತ್ರಗಳು ವಾಟ್ಸಪ್ ನಾದ್ಯಂತ ಹರಿದಾಡುತ್ತಿದೆ.

 

ಜೊತೆಗೆ ಕೂಂಟ್ಜ್ ಅವರ ಕಾದಂಬರಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ವಾಟ್ಸಾಪ್ ನಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲಿ “ದಿ ಐಸ್ ಆಫ್ ಡಾರ್ಕ್ನೆಸ್ ಎಂಬ ಪುಸ್ತಕವನ್ನು 1981 ರಲ್ಲಿ ಪ್ರಕಟಿಸಲಾಯಿತು, ಇದರಲ್ಲಿ ಕರೋನಾ ವೈರಸ್ ಅನ್ನು ಚೀನಾದ ಲ್ಯಾಬ್‌ನಲ್ಲಿ ಕದ್ದುಮುಚ್ಚಿ ತಯಾರಿಸಿದೆ ಎಂದು ಬರೆಯಲಾಗಿದೆ. ನಂತರ ಚೀನಾ ತನ್ನ ಬಡಜನರ ಜನಸಂಖ್ಯೆಯನ್ನು ಕಡಿಮೆ ಮಾಡಿ ಚೀನಾವು ಸೂಪರ್ ಪವರ್ ಆಗಲು ಬಳಸುತ್ತದೆ. ಪುಸ್ತಕದಲ್ಲಿ ಕರೋನಾ ವೈರಸ್ ಹೆಸರನ್ನು ವುಹಾನ್ 400 ಎಂದು ಹೆಸರಿಸಲಾಗಿದೆ. ಚೀನಾ ಈ ವೈರಸ್ ಅನ್ನು ಜೈವಿಕ ಅಸ್ತ್ರವಾಗಿ ಬಳಸುತ್ತದೆ” ಎಂದರ್ಥ ಬರುವ ಹಿಂದಿ ಸಂದೇಶಗಳು ಹರಿದಾಡುತ್ತಿದೆ.

ಇದೇ ರೀತಿಯ ಇನ್ನೊಂದು ಟ್ವೀಟನ್ನು ನೋಡಿ. 2019 ರ ಕೊನೆಯಲ್ಲಿ ವೈರಲ್ ರೋಗ ಸ್ಪೋಟಗೊಂಡ ನಂತರ ಕೂಂಟ್ಜ್ ಮತ್ತು ಬ್ರೌನ್ ಅವರ ಸ್ಪಷ್ಟವಾದ ಘೋಷಣೆಗಳಂತೆ ಕಾಣುವ ಎರಡು ಪುಸ್ತಕಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವುಗಳಿಗೆ ಸಂಬಂಧಿಸಿದ ಕೆಲವು ಟ್ವೀಟ್‌ಗಳನ್ನು ಗಮನಿಸಿ:

ಸಿಲ್ವಿಯಾ ಬ್ರೌನ್ ಅವರ ಎಂಡ್ ಆಫ್ ಡೇಸ್ ಕಾದಂಬರಿ ಕೊರೊನಾವೈರಸ್ ಬಗ್ಗೆ ಭವಿಷ್ಯ ನುಡಿದಿದೆಯೇ?

ಬ್ರೌನ್ ಅತಿಂದ್ರಿಯ ಶಕ್ತಿಯೊಂದಿಗೆ ಸಂವಹನ ಮಾಡುತ್ತೇನೆ ಎಂದು ಸ್ವಯಂ ಘೋಷಿಸಿಕೊಂಡ ವ್ಯಕ್ತಿಯಾಗಿದ್ದಾರೆ. ಅತೀಂದ್ರಿಯ ಶಕ್ತಿಯೊಂದಿಗೆ ಇತರ ಆತ್ಮಗಳೊಂದಿಗೆ ಸಂವಹನ ನಡೆಸುತ್ತೇನೆ ಎಂದು ಹೇಳುತ್ತಿದ್ದರು. ಈ ಹಿಂದೆ ಕಾಣೆಯಾದ ಮಕ್ಕಳ ಬಗ್ಗೆ ಪೋಷಕರಿಗೆ ಸುಳ್ಳು ಮಾಹಿತಿಯನ್ನು ನೀಡಿ ಕೋಪಕ್ಕೆ ತುತ್ತಾಗಿದ್ದರು.

ಕೊರೊನ ಬಗ್ಗೆ ಹರಡಲಾಗುತ್ತಿರುವ ಸಂದೇಶಗಳಲ್ಲಿ ಅವರ 2008 ರ ಪುಸ್ತಕ ಎಂಡ್ ಆಫ್ ಡೇಸ್‌ನ ಆಯ್ದ ಭಾಗವು ಹೀಗೆ ಹೇಳುತ್ತದೆ “ಸುಮಾರು 2020 ರಲ್ಲಿ ತೀವ್ರವಾದ ನ್ಯುಮೋನಿಯಾ ತರಹದ ಕಾಯಿಲೆ ಪ್ರಪಂಚದಾದ್ಯಂತ ಹರಡುತ್ತದೆ. ಅದು ಶ್ವಾಸಕೋಶ ಮತ್ತು ಶ್ವಾಸನಾಳದ ಮೇಲೆ ದಾಳಿ ಮಾಡುತ್ತದೆ. ಯಾವುದೇ ಚಿಕಿತ್ಸೆಗಳಿಗೂ ಅದು ಬಗ್ಗುವುದಿಲ್ಲ. ತುಂಬಾ ತೊಂದರೆ ಮಾಡುವ ಅದು ಬಂದ ತಕ್ಷಣ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ. ನಂತರ ಹತ್ತು ವರ್ಷಗಳಲ್ಲಿ ಮತ್ತೆ ದಾಳಿ ಮಾಡುತ್ತದೆ ಮತ್ತು ಅದರ ನಂತರ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ.

2013 ರಲ್ಲಿ ಬ್ರೌನ್ ನಿಧನ ಹೊಂದುತ್ತಾರೆ. 2020 ರಲ್ಲಿ ಪ್ರಪಂಚದಾದ್ಯಂತ ಹರಡುವ ಉಸಿರಾಟದ ಕಾಯಿಲೆಯ ಮುನ್ಸೂಚನೆಯು ಸಾಕಷ್ಟು ನಿಖರವಾಗಿದೆಯಾದರೂ ಕೊರೊನ ವೈರಸ್ ಹೊಸತಲ್ಲ. ಇದಕ್ಕೆ ಲಸಿಕೆಗಳು ಅಥವಾ ಚಿಕಿತ್ಸೆಗಳು ಇನ್ನೂ ಕಂಡು ಹಿಡಿದಿಲ್ಲ. ಈ ಕಾಯಿಲೆಯು “ತುಂಬಾ ತೊಂದರೆ ಪಡಿಸುತ್ತದೆ” ಮತ್ತು “ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ” ಎಂದು ಅವರು ಹೇಳಿಕೊಂಡಂತೆ ವೈದ್ಯಕೀಯ ವೃತ್ತಿಪರರು ಮತ್ತು ವಿಜ್ಞಾನಿಗಳು ಕರೋನ ವೈರಸ್ ಕಾಲೋಚಿತ ಕಾಯಿಲೆಯಾಗಬಹುದು ಎಂದು ಊಹಿಸಿದ್ದಾರೆ. ಎಂಡ್ ಆಫ್ ಡೇಸ್: ಪ್ರಿಡಿಕ್ಷನ್ಸ್ ಅಂಡ್ ಪ್ರೊಫೆಸೀಸ್ ಎಬೌಟ್ ಎಂಡ್ ದಿ ವರ್ಲ್ಡ್ (2008) ನಲ್ಲಿನ ‘ಭವಿಷ್ಯವಾಣಿಯು’ 2000 ರ ದಶಕದ ಆರಂಭದಲ್ಲಿ SARS (ತೀವ್ರ ತೀವ್ರವಾದ ಉಸಿರಾಟದ ಸಿಂಡ್ರೋಮ್) ವೈರಸ್ ಪತ್ತೆಯಾಗಿತ್ತು. ಇದರಿಂದಾಗಿ ವಿಶ್ವದಾದ್ಯಂತದ ಎರಡನೇ ಉಸಿರಾಟದ ಕಾಯಿಲೆ ಬರುತ್ತದೆ ಎಂದು ಬ್ರೌನ್ ಊಹಿಸಿರಬಹುದು.

ಡೀನ್ ಕೂಂಟ್ಜ್ ಅವರ ದಿ ಐಸ್ ಆಫ್ ಡಾರ್ಕ್ನೆಸ್ ಬಗ್ಗೆ ಏನು?

ಅಮೆರಿಕಾದ ಲೇಖಕ ಡೀನ್ ಕೂಂಟ್ಜ್ ಅವರು 1981ರಲ್ಲಿ ಪ್ರಕಟಿಸಿದ ಕಾಲ್ಪನಿಕ ಕೃತಿಯಾಗಿದೆ. ಕೂಂಟ್ಜ್ ತನ್ನ ಪುಸ್ತಕದಲ್ಲಿ ನಿರೂಪಿಸಲ್ಪಟ್ಟ ಘಟನೆಗಳು ವಾಸ್ತವವಾಗುತ್ತದೆ ಎಂದು ಹೇಳಿಕೊಂಡಿಲ್ಲ. ಇದು ವುಹಾನ್ ನಗರದ ಹೊರಗಿನ ಚೀನೀ ಮಿಲಿಟರಿ ಲ್ಯಾಬ್‌ನ ನಿರೂಪಣೆಯನ್ನು ಹೊಂದಿದೆ, ಅಲ್ಲಿ ಜೈವಿಕ ಶಸ್ತ್ರಾಸ್ತ್ರವನ್ನು ರಚಿಸಲಾಗುತ್ತದೆ ಮತ್ತು ಅದಕ್ಕೆ “ವುಹಾನ್ -400” ಎಂದು  ಹೆಸರಿಸಲಾಗಿದೆ. ಚೀನಾದ ಪ್ರಖ್ಯಾತ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ವುಹಾನ್ ಪ್ರಾಂತ್ಯದಲ್ಲಿದೆ, ಇಲ್ಲಿಂದಲೇ ಕೊರೊನಾವೈರಸ್ ಹರಡಿದೆ ಎಂದು ಹೇಳಲಾಗುತ್ತಿದೆ.

ಆದರೂ ಪುಸ್ತಕದಲ್ಲಿರುವ ಕಾಲ್ಪನಿಕ ವುಹಾನ್ -400 ಮತ್ತು ಕೊರೊನ ವೈರಸ್ ನಡುವೆ ಇಲ್ಲಿ ಹಲವಾರು ಹೋಲಿಕೆಗಳಿವೆ. ಅವುಗಳ ನಡುವಿನ ಕೆಲವು ಪ್ರಮುಖ ವ್ಯತ್ಯಾಸಗಳನ್ನು ಕೆಳಗೆ ನೀಡಲಾಗಿದೆ:

• ದಿ ಐಸ್ ಆಫ್ ಡಾರ್ಕ್ನೆಸ್ “ಹೊಸ ಮತ್ತು ಅಪಾಯಕಾರಿ” ಬಯೋ ಶಸ್ತ್ರಾಸ್ತ್ರ ವೈರಸ್ ಕಥೆಯು ಆಕಸ್ಮಿಕವಾಗಿ ನಾಗರಿಕರಿಂದ ಸಂಕುಚಿತಗೊಳಿಸುತ್ತದೆ. ಅವರು ಕೇವಲ ನಾಲ್ಕು ಗಂಟೆಗಳ ಕಾಲಾವಧಿಯಲ್ಲಿ ಸೋಂಕಿಗೆ ಒಳಗಾಗುತ್ತಾರೆ. ಆದರೆ ಕೊರೊನ 1-14 ದಿನಗಳ ಕಾಲಾವಧಿಯಲ್ಲಿ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕೊರೊನಾದ ಸಾಮಾನ್ಯ ಸಮಯ ಸುಮಾರು ಐದು ದಿನಗಳು.

  • ಸಾಹಿತ್ಯಿಕವಾದ ವುಹಾನ್-400 100% ಸಾವಿನ ಪ್ರಮಾಣವನ್ನು ಹೊಂದಿದೆ, ಸೋಂಕಿತ ವ್ಯಕ್ತಿಗಳು 12-24 ಗಂಟೆಗಳ ಮೀರಿ ಬದುಕುಳಿಯುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೊನ ವೈರಸ್ ಬಾಧಿತರ ಸಾವಿನ ಪ್ರಮಾಣ ಕೇವಲ ಶೇಕಡಾ 3- 4% ರ ನಡುವೆ ಇರುತ್ತದೆ.

ಇನ್ನು ಪುಸ್ತಕದಲ್ಲಿ ಉಲ್ಲೇಖಿಸಲಾದ ಕಾಲ್ಪನಿಕ “ವುಹಾನ್ -400” ನ ಲಕ್ಷಣಗಳು ಕೊರೊನ ವೈರಸ್‌ನ ಲಕ್ಷಣಗಳಿಗಿಂತ ಭಿನ್ನವಾಗಿವೆ.

  • ವುಹಾನ್ -400 ಅಕ್ಷರಶಃ ಮೆದುಳಿನ ಅಂಗಾಂಶವನ್ನು ತಿನ್ನುತ್ತದೆ. ವಿಷದ ಸ್ರವಿಸುವಿಕೆಯು ದೈಹಿಕ ಕ್ರಿಯೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಕೊರೊನ ವೈರಸ್ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಸೌಮ್ಯವಾದ ನೆಗಡಿಯ ಲಕ್ಷಣಗಳನ್ನು ಹೊಂದಿದೆ. ತೀವ್ರವಾದ ನ್ಯುಮೋನಿಯಾ, ತೀವ್ರ ತೀವ್ರವಾದ ಉಸಿರಾಟದ ಕಾಯಿಲೆ, ಮೂತ್ರಪಿಂಡ ವೈಫಲ್ಯ ಇದ್ದರೆ ಸಾವಿಗೆ ಕಾರಣವಾಗಬಹುದು.
  • ದಿ ಐಸ್ ಆಫ್ ಡಾರ್ಕ್ನೆಸ್ ಕಥಾವಸ್ತುವಿನ ಪ್ರಕಾರ ಕಾಲ್ಪನಿಕ “ವುಹಾನ್ -400” ವೈರಸ್ ಅನ್ನು ಪ್ರಯೋಗಾಲಯದಲ್ಲಿ ಬಯೋ ಶಸ್ತ್ರಾಸ್ತ್ರವಾಗಿ ರಚಿಸಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕರೋನ ವೈರಸ್‌ನ ಹೊರಹೊಮ್ಮುವಿಕೆ ಕಳೆದ ವರ್ಷದ ಕೊನೆಯಲ್ಲಿ ವುಹಾನ್‌ನ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಮಾರಾಟ ಮಾಡುತ್ತಿದ್ದಾಗ ಎಂದು ವರದಿಯಾಗಿದೆ. ಆದಾಗ್ಯೂ, ವಿಜ್ಞಾನಿಗಳು ಇನ್ನೂ ಅದರ ಮೂಲವನ್ನು ಕಂಡುಹಿಡಿದಿಲ್ಲ.
  • ಕಾಲ್ಪನಿಕ “ವುಹಾನ್ -400” ಅನ್ನು ಎಬೋಲಾಗಿಂತ ತುಂಬಾ ಕೆಟ್ಟದಾಗಿದೆ ಎಂದು ವಿವರಿಸಲಾಗಿದೆ, ಆದರೆ ಕರೋನ ವೈರಸ್‌ ಎಬೋಲಾಗಿಂತ ಕಡಿಮೆ ಅಪಾಯಕಾರಿಯಾಗಿದೆ. ಡಬ್ಲ್ಯುಎಚ್‌ಒ ಪ್ರಕಾರ, ಸರಾಸರಿಯಾಗಿ ಎಬೋಲಾ ಪ್ರಕರಣದ ಸಾವಿನ ಪ್ರಮಾಣವು ಸುಮಾರು 50% ರಷ್ಟಿದ್ದರೆ. ಆದರೆ ಕರೋನ ವೈರಸ್‌ ಸೋಂಕಿತ ಸಾವಿನ ಪ್ರಮಾಣ ಶೇಕಡಾ 3- 4% ರ ನಡುವೆ ಇರುತ್ತದೆ.

ಕೂಂಟ್ಜ್ ಅವರ ಪುಸ್ತಕಕ್ಕೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, 1981 ರಲ್ಲಿ ಬಂದ ದಿ ಐಸ್ ಆಫ್ ಡಾರ್ಕ್ನೆಸ್ ನ ಮೊದಲ ಆವೃತ್ತಿಯು ಕಾಲ್ಪನಿಕ ವೈರಸ್ ಅನ್ನು ರಷ್ಯಾದ ಪ್ರದೇಶದ “ಗೋರ್ಕಿ -400” ಎಂದು ಹೆಸರಿಸಿದೆ. ಈ ಮೊದಲ ಆವೃತ್ತಿಯಲ್ಲಿನ ಇತರ ವಿವರಗಳು ಸಹ ಅದೇ ಕಥಾವಸ್ತುವಿನೊಂದಿಗೆ ಹೊಂದಿಕೆಯಾಗುತ್ತವೆ. ಉದಾಹರಣೆಗೆ “ಗೋರ್ಕಿ -400” ಅನ್ನು “ಗೋರ್ಕಿ” ಯ ಹೊರಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು “ದಶಕದಲ್ಲಿ ಸೋವಿಯತ್‌ನ ಅತ್ಯಂತ ಪ್ರಮುಖ, ಅಪಾಯಕಾರಿ ಹೊಸ ಜೈವಿಕ ಅಸ್ತ್ರ” ಎಂದು ಹೇಳಲಾಗಿತ್ತು.

ಶೀತಲ ಸಮರದ ನಂತರ 1989 ರಲ್ಲಿ ಕಾದಂಬರಿಯ ಬಿಡುಗಡೆಯ ನಂತರ ವೈರಸ್‌ನ ಹೆಸರನ್ನು ಬದಲಾಯಿಸಲಾಯಿತು. ಈ ಕಾದಂಬರಿಯನ್ನು ಮೊದಲ ಬಾರಿಗೆ ಲೇ ನಿಕೋಲ್ಸ್‌ನ ನಾಮ್ ಡೆ ಪ್ಲುಮ್ ಅಡಿಯಲ್ಲಿ ಪ್ರಕಟಿಸಲಾಗಿತ್ತು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...