Homeಮುಖಪುಟಬಡವರ ಪರವೆಂಬ ಮುಖವಾಡ ಕಳಚಿ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಮರಳಿದ ಬಿಜೆಪಿ.

ಬಡವರ ಪರವೆಂಬ ಮುಖವಾಡ ಕಳಚಿ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಮರಳಿದ ಬಿಜೆಪಿ.

ಬಡವರ ವಿರೋಧಿ ಲಾಕ್‌ಡೌನ್ ಮೂಲಕ ತನ್ನ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಬಿಜೆಪಿ ಮರಳಿದೆ. ಜನಸಾಮಾನ್ಯರಿಗೆ ಆದ ಭಾರೀ ತೊಂದರೆಯ ಹೊರತಾಗಿಯೂ, ನೋಟು ಅಮಾನ್ಯೀಕರಣದ ರಾಜಕೀಯ ಲಾಭವೆಂದರೆ, ಬಿಜೆಪಿಯನ್ನು ಬಡವರ ಪರ ಪಕ್ಷವೆಂದು ಬ್ರಾಂಡ್ ಮಾಡುವುದಾಗಿತ್ತು. ಅತ್ಯಂತ ಕೆಟ್ಟದಾಗಿ ಅನುಷ್ಟಾನಗೊಳಿಸಲಾದ ಕೊರೋನ ವೈರಸ್ ಲಾಕ್‌ಡೌನ್ ಈ ಚಿತ್ರವನ್ನು ಮಸುಕಾಗಿಸುತ್ತಿದೆ.

- Advertisement -
- Advertisement -

ಶಿವಂ ವಿಜ್

ಅನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿ ಪ್ರಿಂಟ್‌

ಒಂದು ನಿರ್ದಿಷ್ಟ ದಿನದ ರಾತ್ರಿ 8.00 ಗಂಟೆಗೆ ಮಾಡಿದ “ರಾಷ್ಟ್ರವನ್ನುದ್ದೇಶಿಸಿ ಭಾಷಣ”ದ ಮೂಲಕ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷದ ಇಮೇಜನ್ನು ಬದಲಿಸಿದರು. ಒಂದು ಕಾಲದಲ್ಲಿ ಭಾರತದ ಪೇಟೆ ಚೌಕದ “ಬ್ರಾಹ್ಮಣ-ಬನಿಯಾ (ವ್ಯಾಪಾರಿ)” ಪಕ್ಷ ಎಂದು ಕಾಣಲಾಗುತ್ತಿದ್ದ ಪಕ್ಷವೊಂದು ಆಗ, ಇಂದಿರಾ ಗಾಂಧಿಯವರಂತೆ ಶ್ರೀಮಂತರನ್ನು ಸಂಶಯದಿಂದ ನೋಡುವ “ಬಡಜನರ ಪರ” ಪಕ್ಷವಾಗಿ ಬದಲಾಗಿತ್ತು.

ಅದೊಂದು ಅಪಾಯಕಾರಿ ಜೂಜಾಗಿದ್ದು, ಭಾರೀ ಲಾಭ ತಂದುಕೊಟ್ಟಿತ್ತು. ಬಿಜೆಪಿಯ ಹಿಂದೂ ಮೇಲ್ಜಾತಿ, ಮಧ್ಯಮವರ್ಗ ಮತ್ತು ನಗರ ಮತಗಳ ಲೆಕ್ಕಾಚಾರ ಸರಿಯೆಂದು ಸಾಬೀತಾಯಿತು. ಏಕೆಂದರೆ, ಅವರಿಗೆ ಬೇರೆ ಬದಲಿ ಆಯ್ಕೆಗಳಿರಲಿಲ್ಲ.

ನಾಲ್ಕು ವರ್ಷಗಳ ನಂತರ, ಇನ್ನೊಂದು 8.00 ಗಂಟೆಯ “ರಾಷ್ಟ್ರವನ್ನುದ್ದೇಶಿಸಿ ಭಾಷಣ”ದ ಮೂಲಕ ಬಹಳ ಜಾಗರೂಕತೆಯಿಂದ ಕಟ್ಟಿದ ತನ್ನ ಪಕ್ಷದ ಬಡವರ ಪರ ಇಮೇಜನ್ನು ಮೋದಿ ಅಪಾಯಕ್ಕೆ ಒಡ್ಡಿದ್ದಾರೆ. ಅಗತ್ಯವಾಗಿದ್ದರೂ, ಭಯಾನಕ ರೀತಿಯಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ 21 ದಿನಗಳ ರಾಷ್ಟ್ರವ್ಯಾಪಿ ಕೊರೋನ ವೈರಸ್ ಲಾಕ್‌ಡೌನ್, ಬಿಜೆಪಿಯ ಬಡವರ ಪರ ಇಮೇಜನ್ನು ಕಳಚಿಹಾಕಿದ್ದು, ಸ್ವಭಾವತಃ ಅದು ಹಿಂದೂ ಮೇಲ್ಜಾತಿ, ಮಧ್ಯಮವರ್ಗ ಮತ್ತು ನಗರ ಪಕ್ಷ ಎಂಬುದನ್ನು ಅನಾವರಣಗೊಳಿಸಿದೆ. ಕೆಲವೊಮ್ಮೆ ಅದು ಮತದಾರರನ್ನು ಓಲೈಸಲು ಬೇರೆ ರೀತಿಯಲ್ಲಿ ವರ್ತಿಸಿದರೂ ಅದು ಅದೇ ರೀತಿಯಲ್ಲಿ ಯೋಚನೆ ಮಾಡುತ್ತದೆ.

ಈ ಲಾಕ್‌ಡೌನ್ ಎಂಬುದು ದಿನಗೂಲಿಯ ವಲಸೆ ಕಾರ್ಮಿಕರು ‌ನೂರಾರು ಕಿ.ಮೀ. ನಡೆದಾದರೂ ತಮ್ಮ ಮನೆಗಳಿಗೆ ಮರಳುವುದನ್ನು ಅನಿವಾರ್ಯಗೊಳಿಸುತ್ತದೆ ಎಂದು ಮೋದಿ ಸರಕಾರ ಯೋಚಿಸಿರಲೇ ಇಲ್ಲ ಎಂಬುದು ಸ್ಪಷ್ಟ. ಇಂತಹಾ ಒಂದು ಪ್ರಮಾದವು ವಾಸ್ತವವಾಗಿ ಅಸ್ತಿತ್ವದಲ್ಲಿರುವ ಭಾರತ ಮತ್ತು ‘7, ಲೋಕ್‌ ಕಲ್ಯಾಣ್ ಮಾರ್ಗ್‌’ನ ಕಲ್ಪನೆಯ ಭಾರತದ ನಡುವಿನ ಕಳಚಿದ ಕೊಂಡಿಯನ್ನು ತೋರಿಸುತ್ತದೆ.

“ನೋಟ್ ಬಂಧಿ” ಮತ್ತು “ಘರ್ ಬಂಧಿ” ನಡುವಿನ ವ್ಯತ್ಯಾಸಗಳೇನು? ಅನೇಕರು ನೋಟ್ ಬಂಧಿ ಮತ್ತು ಘರ್ ಬಂಧಿಗಳ- ಅಂದರೆ, ಅಮಾನ್ಯೀಕರಣ ಮತ್ತು ಲಾಕ್‌ಡೌನ್ ನಡುವೆ ಅನೇಕ ಕಣ್ಣಿಗೆ ರಾಚುವ ಸಾಮ್ಯತೆಗಳನ್ನು ಗುರುತಿಸಿದ್ದಾರೆ. ಉತ್ತಮ ಉದ್ದೇಶ, ಹಠಾತ್ ಘೋಷಣೆ, ನಾಲ್ಕು ಗಂಟೆಗಳ ಕಾಲಾವಧಿ, ಜನರ ಸಾವು, ಆದೇಶಗಳ ದಿನವಹಿ ಬದಲಾವಣೆ, ಎಡೆಬಿಡಂಗಿತನ… ಇತ್ಯಾದಿ ಇತ್ಯಾದಿ. ಆದರೆ ಇಲ್ಲಿ ದೊಡ್ಡ ವ್ಯತ್ಯಾಸವಿದೆ. ಅಮಾನ್ಯೀಕರಣವು ಬಡಜನರ ಪರ, ಶ್ರೀಮಂತರ ವಿರುದ್ಧ ಎಂದು ಭಾವಿಸಲಾಯಿತು. (ಕಪ್ಪುಹಣ, ಸ್ವಿಸ್ ಬ್ಯಾಂಕ್, 15 ಲಕ್ಷ ಖಾತೆಗೆ ಹಣ, ಭಯೋತ್ಪಾದನೆಯ ಬೆನ್ನುಮೂಳೆ ಇತ್ಯಾದಿ ಬೊಗಳೆಗಳ ಕಾರಣದಿಂದ). ಆದರೆ, ಕೊರೋನ ವೈರಸ್ ಲಾಕ್‌ಡೌನ್ ಇದಕ್ಕೆ ತದ್ವಿರುದ್ಧವಾಗಿದೆ.

ಲಾಕ್‌ಡೌನ್ ಅಗತ್ಯವಾಗಿತ್ತು ಮತ್ತು ಅದು ಸೋಂಕಿನ ಹರಡುವಿಕೆಯನ್ನು ನಿಧಾನಗೊಳಿಸುತ್ತದೆ; “ನಕ್ಷೆಯಲ್ಲಿನ ತಿರುವನ್ನು ಸಪಾಟುಗೊಳಿಸುತ್ತದೆ” ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಲಾಕ್‌ಡೌನ್ ನಿರಂತರ ಮುಂದುವರಿಸದ ಹೊರತಾಗಿ ಪ್ರಕರಣಗಳ ಸಂಖ್ಯೆ ಏರುವುದಿಲ್ಲ ಎಂದು ಸೂಚಿಸುವಂತದ್ದು ಏನೂ ಇಲ್ಲ. ಹಾಗೆ ಮಾಡುವುದು ಸಾಧ್ಯವೇ ಇಲ್ಲ.

ಆದರೆ, ಬಡಜನರು ಪ್ರಪಂಚದಲ್ಲಿಯೇ ಅತ್ಯಂತ ಕಠಿಣವಾದ ಲಾಕ್‌ಡೌನ್‌ನಿಂದ ಈಗಾಗಲೇ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜನರ ಲಾಕ್‌ಡೌನ್ ಸಂಕಷ್ಟ ಪರಿಹಾರಕ್ಕೆ ಟಿವಿಯಲ್ಲಿ ರಾಮಾಯಣ, ಮಹಾಭಾರತ ನೋಡಿ ಎಂದು ಮಧ್ಯಮ ವರ್ಗದ ಮನಸ್ಥಿತಿ ಇರುವ ಸರಕಾರವಷ್ಟೇ ಫರ್ಮಾನು ಹೊರಡಿಸಲು ಸಾಧ್ಯ. ಏಕೆಂದರೆ, ಲಾಕ್‌ಡೌನ್‌ನಿಂದ ಜನರಿಗೆ ಮನೆಯಲ್ಲಿ ಕುಳಿತು ಬೋರಾಗುತ್ತದೆ ಎಂದಷ್ಟೇ ಸರಕಾರ ಭಾವಿಸಿದೆ. ಆದರೆ, ಬಡವರ ಚಿಂತೆ ಬೋರಾಗುವುದು ಅಲ್ಲ. ಅವರು ಇನ್ನೂ- ಕೆಲಸವಿಲ್ಲ, ಹೊಟ್ಟೆಗಿಲ್ಲ, ಮನೆಯಿಲ್ಲ, ಮುಂದೇನು ಮುಂತಾದ ಚಿಂತೆಗಳಲ್ಲಿ ಮುಳುಗಿದ್ದಾರೆ.

ಮನೆ ಸೇರರಲು ಪರದಾಡುತ್ತಿರುವ ಪ್ರಜೆಗಳಿಗೆ “ಮನೆಯಲ್ಲಿ ಕುಳಿತು ರಾಮಾಯಣ ನೋಡಿ” ಎಂದ ಮೋದಿ ಸರಕಾರ.

ಪ್ರಜೆಗಳಲ್ಲ; ಕೇವಲ ವಸ್ತುಗಳು!

ಇದೇವೇಳೆಗೆ, ಪೊಲೀಸರು ಅವರನ್ನು ಥಳಿಸುತ್ತಿದ್ದು, ಅವರು ಮಾನವರಲ್ಲ; ಕೇವಲ ವಸ್ತುಗಳು ಎಂಬಂತೆ ನಡೆಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಅವರೇ ವೈರಸ್‌ಗಳು ಎಂಬಂತೆ ಅವರನ್ನು ಮಂದೆ ಸೇರಿಸಿ, ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದಾರೆ, ಅವರಿಗೆ ಹೊಡೆಯುತ್ತಿದ್ದಾರೆ, ಅವಮಾನಕಾರಿ ಶಿಕ್ಷೆಗಳನ್ನು ಕೊಡುತ್ತಿದ್ದಾರೆ. ಇವೆಲ್ಲವೂ ನಡೆದ ಬಳಿಕ ಅವರು ಭಾರತ ಸರಕಾರದ ಬಗ್ಗೆ ಯಾವ ಅಭಿಪ್ರಾಯ ತಳೆದಿರಬಹುದು? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅತ್ಯಂತ ಕೆಟ್ಟಸ್ಥಿತಿಯಲ್ಲಿರುವುದು ಗೋವಾ. ಅಲ್ಲಿನ ಅತಿರೇಕಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಜನರಿಗೆ ಹಾಲು ಮತ್ತು ಬ್ರೆಡ್ ಕೊಳ್ಳಲೂ ಬಿಡುತ್ತಿಲ್ಲ. ಜನರು ದೂರದರ್ಶನವನ್ನೇ ತಿನ್ನಲಿ ಎಂದಾತ ಯೋಚಿಸಿದಂತಿದೆ.

ಪ್ರಜೆಗಳ ಆತ್ಮಗೌರವವನ್ನೇ ಮುರಿಯುವ ಅವಮಾನಕಾರಿ ಶಿಕ್ಷೆಗಳು

ವಲಸಿಗರು ಮನೆತಲಪುವುದು ಹೇಗೆ ಎಂದು ಚಿಂತಿಸುತ್ತಿರುವಾಗ ಸಾರ್ವಜನಿಕ ರಂಗದ ದೂರದರ್ಶನ ಜನರು ತಾವು ಮನೆಯಲ್ಲಿ ಕುಳಿತು ರಾಮಾಯಣ ನೋಡುತ್ತಿರುವ ಚಿತ್ರಗಳನ್ನು ಕಳುಹಿಸುವಂತೆ ಕೇಳಿಕೊಳ್ಳುತ್ತಿದೆ. ಇಲ್ಲಿ ತಿಳಿದೂ ತಿಳಿದೂ ಬಿಜೆಪಿಯು ನಿಜವಾಗಿಯೂ ಏನಾಗಿದೆಯೋ ಅದರ ಪರವಾಗಿಯೇ ತಾರತಮ್ಯವನ್ನು ತೋರಲಾಗುತ್ತಿದೆ. ಬಿಜೆಪಿ ನಿಜವಾಗಿಯೂ ಏನೆಂದರೆ, ಅದೊಂದು ನಗರವಾಸಿ ಮಧ್ಯಮ ವರ್ಗ ಮತ್ತು ಮೇಲ್ಜಾತಿಗಳ ಪಕ್ಷ.

ಹೊಡಿಬಡಿ ಪೊಲೀಸರು

ಅದು ಕಾಲಾಂತರದಲ್ಲಿ ಈ ಇಮೇಜನ್ನು ಸ್ವಲ್ಪ ಮಟ್ಟಿಗೆ ಕಳಚಿಕೊಳ್ಳುವುದರ ಮೂಲಕ ಈಗ ಭಯಹುಟ್ಟಿಸುವ ರಾಷ್ಟ್ರೀಯ ಪ್ರಾಬಲ್ಯ ಪಡೆದಿದೆ. ಅದು ಸ್ಮಾರ್ಟ್ ಗ್ರಾಮಗಳ ಬದಲಿಗೆ ಸ್ಮಾರ್ಟ್‌ಸಿಟಿಗಳ ಬಗ್ಗೆ ಯೋಚಿಸಿತು. ಹಣದುಬ್ಬರವನ್ನು ಕೆಳಮಟ್ಟದಲ್ಲಿ ಇರಿಸುವಲ್ಲಿ ರೈತರ ಪಾತ್ರವನ್ನು ಕಡೆಗಣಿಸಿತು… ಇತ್ಯಾದಿ. ಇದರಿಂದ ಬರಬಹುದಾದ ಹಿಂಬಡಿತವನ್ನು ಶೌಚಾಲಯ, ಎಲ್‌ಪಿಜಿ ಸಿಲಿಂಡರ್‌ಗಳು, ಅಗ್ಗದ ಮನೆಗಳು ಇತ್ಯಾದಿ ಕಣ್ಕಟ್ಟುಗಳ ಮೂಲಕ ನಿಭಾಯಿಸಿತು.

ಡಿಸೆಂಬರ್ 2018ರಲ್ಲಿ ಹಿಂದಿ ಬೆಲ್ಟಿನ ಮೂರು ರಾಜ್ಯಗಳನ್ನು ಕಳೆದುಕೊಂಡ ಬಳಿಕ ರೈತರಿಗೆ ನಗದು ಹಣದ ಭರವಸೆ ನೀಡುವುದು ಬಿಜೆಪಿಗೆ ಅನಿವಾರ್ಯವಾಯಿತು. ಆದರೆ, ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ತನ್ನ ನಿಜರೂಪವನ್ನು ಅನಾವರಣಗೊಳಿಸಿದೆ. ಈ ಕೂಲಿ ಕಾರ್ಮಿಕರು ಏಕೆ ರಸ್ತೆಯಲ್ಲಿದ್ದಾರೆ? ಎಲ್ಲಿದ್ದರೋ ಅಲ್ಲಿಯೇ ಉಳಿದಿರಲು ಆವರಿಗೇನು ದಾಡಿ? ಸಾಮಾಜಿಕ ಜಾಲತಣಗಳಲ್ಲಿ ಮೋದಿ ಭಕ್ತರಿಂದ ನಾವು ನೋಡುತ್ತಿರುವ ಪ್ರತಿಕ್ರಿಯೆಗಳು ಈ ರೀತಿಯವು.

ಕನಿಷ್ಟ 22 ಮಂದಿ ಮನೆಗೆ ಮರಳುವಾಗ ಹೆದ್ದಾರಿ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಸಾವುಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಆದರೆ, ಜನರು ಹೆದ್ದಾರಿಗಳಲ್ಲಿ ನಡೆಯುತ್ತಾರೆಂದು ವಾಹನ ಚಾಲಕರಿಗಾಗಲೀ, ಲಾಕ್‌ಡೌನ್ ಸಂದರ್ಭದಲ್ಲಿ ವಾಹನಗಳು ಹೆದ್ದಾರಿಯಲ್ಲಿ ಓಡುತ್ತವೆ ಎಂದು ವಲಸಿಗರಾಗಲೀ ಊಹಿಸಿರಲಾರರು.

ಬಡತನ ಕಂಡವರಾರು? 

ನರೇಂದ್ರ ಮೋದಿ ಬಟ್ಟಲು ಜಾಗಟೆ ಬಡಿಯಲು ಜನರಿಗೆ ಮತ್ತು ಶಕ್ತಿಪ್ರದರ್ಶನ ಮಾಡಲು ಬಿಜೆಪಿಗೆ ಮೂರು ದಿನಗಳ ಕಾಲಾವಕಾಶ ಕೊಟ್ಟರು. ಆದರೆ, ಲಾಕ್‌ಡೌನ್‌ಗೆ ಆತ ಕೊಟ್ಟದ್ದು ಕೇವಲ ನಾಲ್ಕು ಗಂಟೆಗಳಿಗೂ ಕಡಿಮೆ ಅವಕಾಶ. ಅಗತ್ಯ ವಸ್ತುಗಳೂ ಸೇರಿದಂತೆ ಸರಕುಗಳನ್ನು ಹೊತ್ತ ಲಾರಿಗಳನ್ನು ರಾಜ್ಯಗಳ ಗಡಿಯಲ್ಲಿ ನಿಲ್ಲಿಸಲಾಯಿತು. ಈ ಲಾರಿಗಳ ಚಾಲಕರು ಹೇಗೆ ಮನೆ ತಲಪಬೇಕು? ಹೇಗೆ ಉಣ್ಣಬೇಕು? ಇಂತಹಾ ಪ್ರಶ್ನೆಗಳನ್ನು ಕುರಿತು ಯೋಚನೆಯನ್ನೇ ಮಾಡಿರಲಿಲ್ಲ. ಏಕೆಂದರೆ, ಬಿಜೆಪಿಯ ಮನಸ್ಥಿತಿಯು ಯಾವುದೇ ಚಿಂತೆಯಿಲ್ಲದೇ ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡು, ಮನೆಯಲ್ಲಿ ಕುಳಿತು ರಾಮಾಯಣ, ಮಹಾಭಾರತ ನೋಡುವ ತಾಕತ್ತಿರುವ ಮೇಲ್ಜಾತಿಯ ಶ್ರೀಮಂತ ವರ್ತಕ ಮತ್ತು ಮಧ್ಯಮ ವರ್ಗದ್ದಾಗಿದೆ.

ರಾಜ್ಯ ಗಡಿಗಳಲ್ಲಿ ನಿಲ್ಲಿಸಲಾದ ಅಗತ್ಯವಸ್ತು ಪೂರೈಕೆ ಲಾರಿಗಳು

ಅಗತ್ಯ ಸೇವೆಗಳಲ್ಲಿ ಇರುವ ಜನರಿಗೆ ಪ್ರಯಾಣದ ಅವಕಾಶ ಒದಗಿಸಲಾಯಿತು. ಆದರೆ, ಅವರಿಗೂ ಪೊಲೀಸರು ಕಿರುಕುಳ ನೀಡಿ, ಲಾಠಿ ಪ್ರಹಾರ ಮಾಡಿದರು. ಸಾರ್ವಜನಿಕ ಸಾರಿಗೆ ಸಂಪೂರ್ಣ ಮುಚ್ಚಿದೆ. ಒಬ್ಬ ಸ್ವಚ್ಛತಾ ಕಾರ್ಮಿಕ ತನ್ನ ಕೆಲಸಕ್ಕಾಗಿ ಸುತ್ತಾಡುವುದು ಹೇಗೆ? ಆಸ್ಪತ್ರೆಗಳ ಸ್ವಚ್ಛತಾ ಸಿಬ್ಬಂದಿ ಕೆಲಸಕ್ಕೆ ಹೋಗುವುದಾದರೂ ಹೇಗೆ? ರಾಷ್ಟ್ರೀಯ ಲಾಕ್‌ಡೌನ್ ನಡುವೆ ಆಸ್ಪತ್ರೆಗೆಳು ಅವರಿಗೆ ಸಾರಿಗೆ ಒದಗಿಸುವುದಾದರೂ ಹೇಗೆ? ಅವರು ಪ್ರತೀದಿನ ಹಲವಾರು ಕಿ.ಮೀ.ಗಳಷ್ಟು ನಡೆಯಬೇಕಾಗಿದೆ. ಬಿಜೆಪಿ ಈ ಕುರಿತು ಯೋಚಿಸಲೇ ಇಲ್ಲ. ಅದರ ಚಿಂತನೆಯ ಪ್ರಕಾರ ಪ್ರತಿಯೊಬ್ಬರ ಬಳಿ ಕಾರಿದೆ. ಅದಕ್ಕೆ ಗೊತ್ತಿರುವ ಎಲ್ಲರ ಬಳಿಯೂ ಇದೆ.


ಇದನ್ನೂ ಓದಿ: ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ :ಎ.ನಾರಾಯಣ್


ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್ ತಡವಾಗಿ ಘೋಷಿಸಿರುವ ಪ್ಯಾಕೇಜ್ ಒಂದು ಕಣ್ಕಟ್ಟಾಗಿದ್ದು, ಅದು ಅತ್ಯಗತ್ಯವಾಗಿ ಬೇಕಾಗಿರುವವರಿಗೆ, ಮುಖ್ಯವಾಗಿ ವಲಸೆ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ, ಅತೀ ಸಣ್ಣ ರೈತರಿಗೆ ಯಾವುದೇ ತುರ್ತು ಅಥವಾ ತಕ್ಷಣದ ಪರಿಹಾರ ಒದಗಿಸುವುದಿಲ್ಲ.

ನರೇಂದ್ರ ಮೋದಿ- “ಗರೀಬಿ ದೇಖಿ ಹೈ ಮೈನೇ” (ಬಡತನ ನೋಡಿದ್ದೇನೆ ನಾನು) ಎಂದು ಹೇಳಿ ಮರುಳು ಮಾಡಬಹುದಾದ ಕಾಲ ಇದಲ್ಲ. ಈ ಲಾಕ್‌ಡೌನ್ ಬಳಿಕ ಈ ಪ್ರಧಾನಿಗೆ ಬಡತನ ಏನೆಂದು ಗೊತ್ತು ಎಂದು ಹೇಳುವುದೂ, ನಂಬುವುದೂ ಕಷ್ಟ!


ನಾನುಗೌರಿ ಯೂಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಆಗಲು ಇಲ್ಲಿ ಕ್ಲಿಕ್‌ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...