Homeಚಳವಳಿಮಸ್ಕಿಯಿಂದ ರಾಜ್ಯದೆಲ್ಲೆಡೆ ಹೋರಾಟದ ಹಾಡುಗಳನ್ನು ಪಸರಿಸಿದ ಜನಕವಿ ದಾನಪ್ಪ ನಿಲೋಗಲ್

ಮಸ್ಕಿಯಿಂದ ರಾಜ್ಯದೆಲ್ಲೆಡೆ ಹೋರಾಟದ ಹಾಡುಗಳನ್ನು ಪಸರಿಸಿದ ಜನಕವಿ ದಾನಪ್ಪ ನಿಲೋಗಲ್

ಚಳವಳಿಯ ಸಂಗಾತಿಯಾಗಿ, ಆಯಾ ಕಾಲದ ಬಿಕ್ಕಟ್ಟುಗಳನ್ನು, ಜನರನ್ನು ಎಚ್ಚರಿಸಬೇಕಾದ ವಿದ್ಯಮಾನಗಳನ್ನು ಸರಳವಾಗಿ ಜನರ ಲಯದಲ್ಲಿ ಹಾಡು ಕಟ್ಟಿ ಹಾಡುತ್ತಾರೆ. ನಂತರ ಈ ಹಾಡಿಗೆ ಕಾಲು ಬಂದೋ, ರೆಕ್ಕೆ ಬಂದೋ ಬೇರೆ ಬೇರೆ ಕಡೆಗಳಿಗೆ ಚಲಿಸುತ್ತವೆ. ಹೀಗೆ ಚಲಿಸುತ್ತಾ ಚಳವಳಿಗಳ ಸಂಗಾತಿಗಳಾಗುತ್ತವೆ.

- Advertisement -
- Advertisement -

ಎಲೆಮರೆ-26

  • ಅರುಣ್‌ ಜೋಳದ ಕೂಡ್ಲಿಗಿ

ಕರ್ನಾಟಕದ ಜನಪರ ಚಳವಳಿ, ಕಾರ್ಯಾಗಾರ, ಸಭೆಗಳ ಹೋರಾಟದ ಹಾಡುಗಳಲ್ಲಿ ಒಂದಾದರೂ ಮಸ್ಕಿಯ ದಾನಪ್ಪ ನಿಲೋಗಲ್ ರಚನೆ ಇದ್ದೇ ಇರುತ್ತೆ. ಹೀಗೆ ಹಾಡುವಾಗ ಕೆಲವೊಮ್ಮೆ ಈ ಹಾಡನ್ನು ದಾನಪ್ಪ ಕಟ್ಟಿದ್ದು ಎನ್ನುವುದೂ ಮರೆಯಾಗುತ್ತದೆ. ಅಂದರೆ ದಾನಪ್ಪನ ಹಾಡುಗಳು ಜನಪದ ಗೀತೆಗಳಂತೆ ನಾಡಿನಾದ್ಯಂತ ಹೆಸರಿನ ಹಂಗಿಲ್ಲದೆ ಚಲಿಸುತ್ತಿವೆ. ಹೀಗೆ ಜನರನ್ನು ತಲುಪುವುದೇ ಮುಖ್ಯ ನನ್ನ ಹೆಸರನ್ನು ಹೇಳುವ ಅಗತ್ಯವಿಲ್ಲ ಎಂದು ಸ್ವತಃ ದಾನಪ್ಪ ತನ್ನ ಹಾಡನ್ನು ಸಾರ್ವಜನಿಕ ವಲಯಕ್ಕೆ ಒಪ್ಪಿಸಿದ್ದಾರೆ. ಹೀಗೆ ಎಂಬತ್ತರ ದಶಕದಿಂದಲೂ ದಲಿತ ಚಳವಳಿಯ ಸಂಗಾತಿಯಾಗಿ, ಆಯಾ ಕಾಲದ ಬಿಕ್ಕಟ್ಟುಗಳನ್ನು, ಜನರನ್ನು ಎಚ್ಚರಿಸಬೇಕಾದ ವಿದ್ಯಮಾನಗಳನ್ನು ಸರಳವಾಗಿ ಜನರ ಲಯದಲ್ಲಿ ಹಾಡು ಕಟ್ಟಿ ಹಾಡುತ್ತಾರೆ. ನಂತರ ಈ ಹಾಡಿಗೆ ಕಾಲು ಬಂದೋ, ರೆಕ್ಕೆ ಬಂದೋ ಬೇರೆ ಬೇರೆ ಕಡೆಗಳಿಗೆ ಚಲಿಸುತ್ತವೆ. ಹೀಗೆ ಚಲಿಸುತ್ತಾ ಚಳವಳಿಗಳ ಸಂಗಾತಿಗಳಾಗುತ್ತವೆ.

ದಾನಪ್ಪ ಮಸ್ಕಿಯಲ್ಲೇ ಇದ್ದರೂ ಆತನ ಹಾಡುಗಳು ದಣಿವರಿಯದೆ ಚಳವಳಿಯಲ್ಲಿ ನಿರತವಾಗಿರುತ್ತವೆ. ‘ದಾನಪ್ಪನ ಜತೆ ಹಾಡಿದವರು, ಹಾಡುಕಟ್ಟಿದವರು ಅದನ್ನೇ ಏಣಿ ಮಾಡಿಕೊಂಡು ಕಳೆದು ಹೋದರೂ, ದಾನಪ್ಪ ಮಾತ್ರ ಈಗಲೂ ಹಾಡನ್ನೇ ಬದುಕುತ್ತಿದ್ದಾರೆ. ಇದೇ ನನ್ನಂಥವರಿಗೆ ಸೋಜಿಗ’ ಎನ್ನುವ ಕೊಟಗಾನಹಳ್ಳಿ ರಾಮಯ್ಯನವರ ಮಾತುಗಳು ದಾನಪ್ಪನವರ ಬದ್ಧತೆಗೆ ಸಾಕ್ಷಿಯಾಗಿವೆ.

’ಹೈದರಾಬಾದ್ ಕರ್ನಾಟಕ ಅಂದ್ರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದದ್ದು ಅಂತಾರೆ ಅದು ಸತ್ಯ, ಅದರ ಜೊತೆಗೆ ಹಿಂದುಳಿಯೋಕೆ ಕಾರಣ ಏನು ಅಂತ ನೋಡುವಾಗ ಇಲ್ಲಿ ಫ್ಯೂಡಲ್ ಸಂಸ್ಕೃತಿ ಜೀವಂತವಾಗಿರುವ ನೆಲ. ಅಂತೆಯೇ ಸ್ವಾತಂತ್ರ್ಯ ಸಿಕ್ಕು ಒಂದು ವರ್ಷದ ನಂತರ ಸ್ವಾತಂತ್ರ್ಯ ಸಿಕ್ಕ ಪ್ರದೇಶ. ಹೈದರಾಬಾದ್ ನಿಜಾಮನ ಆಡಳಿತವಿದ್ದ ಕಾರಣ ಫ್ಯೂಡಲ್ ವ್ಯವಸ್ಥೆಯೂ ಜೀವಂತವಾಗಿದ್ದು, ಪ್ರತಿಯೊಂದು ಹಳ್ಳಿಯಲ್ಲಿಯೂ ದಲಿತ ಮತ್ತು ಅಸ್ಪೃಶ್ಯರ ಜೀವನ ಗಂಭೀರವಾದ ಕಡು ಬಡತನದಲ್ಲಿತ್ತು. ಇವರಿಗೆ ಭೂಮಿ ಇಲ್ಲ, ಓದು ಇಲ್ಲ. ಹೀಗಿರುವಾಗ ಗೌಡ್ರು, ಜಮೀನ್ದಾರರ ದಬ್ಬಾಳಿಕೆಯ ಆಡಳಿತ. ಈ ಸ್ಥಿತಿಯಲ್ಲಿ ನನಗೆ ಓದಲು ಅವಕಾಶ ಸಿಕ್ಕದ್ದೇ ದೊಡ್ ವಿಷ್ಯ. ನಮ್ದು ನಿಲೋಗಲ್ ಆದ್ರೂ ಸಹ ಹತ್ತನ್ನೆರಡು ಕಿ.ಮೀ ದೂರದ ಹಟ್ಟಿ ಗೋಲ್ಡ್ ಮೈನ್ಸ್‌ನಲ್ಲಿ ನಮ್ಮಪ್ಪ ಕಾರ್ಮಿಕ ಆಗಿದ್ದ ಕಾರಣ ನನಗೆ ಓದೋಕೆ ಅವಕಾಶ ಸಿಕ್ತು. ಗೆದ್ದಲಗಟ್ಟಿ, ನಿಲೋಗಲ್‌ಗಳು ಧಣಿಗಳ ದರ್ಬಾರ್ ಇರೋ ಊರುಗಳು. ಅಕಸ್ಮಾತ್ ಕೂಲಿ ಆಗಿ ಕಳೆದು ಹೋಗೋನು ಓದಿ ಉಳಕಂಡೆ’ ಎಂದು ಬಾಲ್ಯದ ಅನುಭವಗಳನ್ನು ಹೇಳುತ್ತಾರೆ ದಾನಪ್ಪ.

’ನಮ್ಮ ಮನೆ ಎದುರು ಈರಣ್ಣನ ಕಟ್ಟೆ ಇತ್ತು. ಅಲ್ಲಿ ಭಜನಿ ಮಾಡತಿದ್ದರು. ನಾನು ಮಕ್ಕಂಡೇ ಈ ಭಜನಿ ಹಾಡುಗಳನ್ನು ಕೇಳಿಸಿಕೊಂಡು ಗುನುಗ್ತಾ ಇದ್ದೆ. ಹಿಮ್ಮೇಳವಾಗಿ ಭಜನಿಯಲ್ಲಿ ಕೂತು ಹಾಡತಿದ್ದೆ. ಕ್ರಿಶ್ಚಿಯನ್ ಮಾಸ್ ಗೀತೆಗಳ ಜತೆ ಹಾಡ್ತಿದ್ದೆ. ನಮ್ಮಪ್ಪ ಭಜನೆ ಪದಾನ ಚೊಲೋ ಹಾಡತಿದ್ದ. `ಗೂಳಿ ಬಂತು ಗೂಳಿ ಬಂತಣ್ಣಾ, ಗುರುಮಠಕೆ ತಕ್ಕ ಗೂಳಿ ಬಂತು ಗೂಳಿ ಬಂತಣ್ಣಾ..’ ತರಹದ ಜನಪದ ಭಜನೆಗಳು ನನ್ನೊಳಗೆ ಹಾಡಿನ ಲಯವನ್ನು ಕೂರಿಸ್ತಾ ಇದ್ವು. ’ನೀರ ನಿಲ್ಲದ ಬಾವಿ ತುಂಬುವುದೋ/ತುಂಬಿ ತುಳಕುವುದೋ/ಇರುವಿ ನೀರಡಿಸಿ ಬಂದು ಕುಡಿಯುವುದೋ/ಜಲ ಬತ್ತುವುದೋ/ ರೆಕ್ಕೆ ಇಲ್ಲದ ಪಕ್ಷಿ ಸುತ್ತುವುದೋ..’ ಈ ತರಹದ ತತ್ವಪದಗಳು ನನಗೆ ಹೆಚ್ಚು ಪ್ರಭಾವ ಬರ‍್ತಾ ಇದ್ವು. ಇಂತಹ ಹಿನ್ನೆಲೆಯ ಕಾರಣ ಇದೇ ಹಾಡಿಕೆ ಲಯಗಾರಿಕೆ ಚಳವಳಿಗೆ ದುಮುಕಿದ ಮೇಲೆ ಮತ್ತೆ ನನ್ನೊಳಗೆ ಹೊಸ ರೂಪ ಪಡೆದವು. ದಲಿತ ಕಲಾ ಮಂಡಳಿಯ ಹಾಡಿಕೆ, ಪದ ರಚನೆಗಳೂ ಆ ಕಾಲಕ್ಕೆ ನಮ್ಮನ್ನು ತುಂಬಾ ಪ್ರಭಾವ ಬೀರಿದ್ವು. ಪಿಚ್ಚಳ್ಳಿ ಶ್ರೀನಿವಾಸರ ಹಾಡುಗಳು ಆಗ ದೊಡ್ಡಮಟ್ಟದಲ್ಲಿ ಚಳವಳಿಯಲ್ಲಿ ಹಾಡಿಕೆಗೆ ಬಂದಿದ್ದವು. ಹೀಗಿರುವಾಗ ಹಿರೇನಗನೂರು ಹೋಟೆಲ್ ಪ್ರವೇಶ ಹೋರಾಟದ ಸಂದರ್ಭದಲ್ಲಿ ’ಅವತ್ತು ಸೋಮವಾರ, ಅಪ್ಪ ಬಸವನ ವಾರ’ ಅನ್ನೋ ಮೊದಲ ಹಾಡನ್ನ ಬರದೆ. ಎಂಬತ್ತರ ದಶಕದಲ್ಲಿ ಕ್ರಾಂತಿಕಾರಿ ಕವಿ ಗದ್ದರ್ ಅವರ ಕಾರ್ಯಕ್ರಮ ನೋಡಲು ಸಿಕ್ಕಿತು. ಜನಪರ ಸಾಹಿತ್ಯದ ಒಳ ತಿರುಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿತು. ’ವಂಚಿತರೇ ಈ ದೇಶದ ವಾರಸುದಾರರು’ ಎನ್ನುವ ಸ್ಪಷ್ಟ ಕಲ್ಪನೆ ಬಂದಿತು. ಜನ ಕಲಾ ಮಂಡಳಿಯ ನಂಟಿನಿಂದ ಚೌಡಕಿ ಕತೆ, ನೀಲಗಿರಿ, ಹೆಸರಾದ ತವರೂರು, ಕೊಡಗು ಹೀಗೆ ಆಯಾ ಕಾಲದ ವಿಷ್ಯಗಳನ್ನು ಹಾಡುಗಳನ್ನಾಗಿ ಬರೆಯೋದು ಹಾಡೋದು ಶುರುವಾತು.

ನನ್ನ ಪ್ರತಿಯೊಂದು ಹಾಡಿನ ಮೊದಲ ತಾಲೀಮು ನನ್ನ ಮನೆ. ನನ್ನ ಹೆಂಡ್ತಿ ಮೇರಿ (ಮರಿಯಮ್ಮ) ಮಕ್ಕಳಾದ ಸ್ನೇಹಲತಾ, ಪ್ರಶಾಂತ್, ಪ್ರಮೋದ್ ಇವರನ್ನು ಅದೆಷ್ಟೋ ರಾತ್ರಿಗಳು ನಿದ್ದೆಗೆಡಿಸಿ ಕೋರಸ್ಸಿಗೆ ಎಬ್ಸಿದ್ದು, ರಾಗ ಲಯ ತಿದ್ದಿ ತೀಡಿ ಹಾಡು ಹೊರಬರೋ ಹೊತ್ತಿಗೆ ಬೆಳಕರಿದದ್ದೂ ಇದೆ’ ಎಂದು ಹಾಡಿಕೆಯ ಜಾಡನ್ನು ದಾನಪ್ಪ ನೆನೆಯುತ್ತಾರೆ.

ಅಂಬೇಡ್ಕರ್ ಹೇಳುವ `ಓದು-ಹೋರಾಟ’ ಒಟ್ಟೊಟ್ಟಿಗೆ ಆಗಬೇಕೆಂಬ ಮಾತನ್ನು ದಾನಪ್ಪ ಅಕ್ಷರಶಃ ಪಾಲಿಸಿದ್ದರು. ಬಿ.ಕೆ ಅವರ ಮಾರ್ಗದರ್ಶನ, ದಲಿತ ಕಲಾ ಮಂಡಳಿಯ ಪಿಚ್ಚಳ್ಳಿ ಶ್ರೀನಿವಾಸ, ಮುನಿಸ್ವಾಮಿ ಮೊದಲಾದವರ ಹೋರಾಟದ ಹಾಡುಗಳ ಸ್ಪೂರ್ತಿ, ಇದೆಲ್ಲದರ ಪರಿಣಾಮ ಧಾರವಾಡ ಜಿಲ್ಲೆಯ ದ.ಸಂ.ಸದ ಚಟುವಟಿಕೆಗಳು ಹಳ್ಳಿಗಳತ್ತ ನಡೆದದ್ದು, ಬ್ಯಾಡಗಿ ತಾಲೂಕಿನ ದುಮ್ಮಿಹಾಳ ಘಾಳ ಪೂಜೆ ಭೂ ಹೋರಾಟ, ಧರಣಿ ಹೋರಾಟ, ಅರೆಸ್ಟು, ಧಿಕ್ಕಾರಗಳು ಇವೆಲ್ಲ ದಾನಪ್ಪನ ನಿತ್ಯದ ಒಡನಾಡಿಗಳಾದವು. ’ಬಿ.ಕೆಯವರ ನಿರಂತರ ಒಡನಾಟ, ರಾಮದೇವ ರಾಕೆ, ಹೆಚ್.ಗೋವಿಂದಯ್ಯ, ಶಿವಲಿಂಗಪ್ಪ (ಶಿವಮೊಗ್ಗ), ಸಿ.ಎಂ.ಮುನಿಯಪ್ಪ (ಕೋಲಾರ) ಎಂ.ವೆಂಕಟಸ್ವಾಮಿ, ದೇವನೂರ ಮಹಾದೇವ, ಕವಿ ಸಿದ್ಧಲಿಂಗಯ್ಯ, ಮೊದಲಾದವರ ಭೇಟಿ ಚರ್ಚೆ ಮಾತುಕತೆ ನನ್ನನ್ನು ಮತ್ತಷ್ಟು ಗಟ್ಟಿಯಾಗಿಸಿದವು’ ಎಂದು ದಾನಪ್ಪ ನೆನೆಯುತ್ತಾರೆ.

ಹೀಗೆ ದಾನಪ್ಪ ನಿಲೋಗಲ್ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೀಗೊಂದು ಹೋರಾಟದ ಹಾಡಿನ ಪರಂಪರೆಯನ್ನು ಹುಟ್ಟುಹಾಕಿದ್ದಾರೆ. ಇದೀಗ ದಾನಪ್ಪನ ಮಗ ಪ್ರಶಾಂತನೂ ಈ ಪರಂಪರೆ ಮುಂದುವರಿಸಿದ್ದಾನೆ. ಗಂಗಾವತಿಯ ರಮೇಶ್ ಗಬ್ಬೂರು ಈ ಪರಂಪರೆಯನ್ನು ತಮ್ಮ ವಿದ್ಯಾರ್ಥಿಗಳ ಮೂಲಕ ಈ ಹಾಡಿಕೆಯ ಪರಂಪರೆಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ.


ಇದನ್ನೂ ಓದಿ: ರೆಡ್ಡಿ ಸಹೋದರರ ವಿರುದ್ಧ ಪಟ್ಟುಬಿಡದೇ ಹೋರಾಡಿ ಗೆದ್ದ ದಿಟ್ಟ ಯುವತಿಯ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...