Homeಎಲೆಮರೆಗಡಿನಾಡು ಬೀದರಿನಲ್ಲಿ ಸದ್ದಿಲ್ಲದೆ ದುಡಿಯುವ ಚಂದ್ರಪ್ಪ ಹೆಬ್ಬಾಳಕರ

ಗಡಿನಾಡು ಬೀದರಿನಲ್ಲಿ ಸದ್ದಿಲ್ಲದೆ ದುಡಿಯುವ ಚಂದ್ರಪ್ಪ ಹೆಬ್ಬಾಳಕರ

- Advertisement -
- Advertisement -
ಎಲೆಮರೆ-27

ಕುವೆಂಪು ಭಾಷಾ ಭಾರತಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸೆಮಿನಾರಿನೊಂದರಲ್ಲಿ ಚಂದ್ರಪ್ಪ ಹೆಬ್ಬಾಳಕರ್ ಅವರನ್ನು ನಾನು ಮೊದಲಿಗೆ ನೋಡಿದೆ. ಚೂರು ಕುಳ್ಳನೆ ವ್ಯಕ್ತಿ ಪುಟುಪುಟು ಓಡಾಡುತ್ತ ತಮ್ಮ `ಬೀದರ್ ಜಿಲ್ಲೆಯ ದಲಿತ ಕವಿ ಕಾವ್ಯ’ ಕೃತಿಯನ್ನು ಕೆಲವರಿಗೆ ಕೊಡುತ್ತಿದ್ದರು. ನಾನು ಕುತೂಹಲದಿಂದ ಈ ಪುಸ್ತಕವನ್ನು ಗಮನಿಸಿದೆ. ಇದೊಂದು ಶ್ರಮದಾಯಕ ಕೆಲಸ ಅನ್ನಿಸಿತು. ನಂತರ ಜನಪದ ಕವಿಗಳ ಭೇಟಿಗೆಂದು ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಹೋದಾಗ ಚಂದ್ರಪ್ಪ ಅವರನ್ನು ಕಂಡು ಮಾತನಾಡಿಸಿ, ಅವರ ಈ ಪುಸ್ತಕವನ್ನು ಪಡೆದೆ. ಈ ಭಾಗದ ಕೆ.ನೀಲಾ, ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ ಮೊದಲಾದವರೊಡಗೂಡಿ ಬಸವ ಕಲ್ಯಾಣದ ಕೆಲವೆಡೆಗಳಲ್ಲಿ ಸುತ್ತಾಡುವಾಗ ಇವರ ಜತೆ ಮತ್ತಷ್ಟು ಮಾತುಕತೆ ನಡೆಯಿತು. ರಾಜ್ಯವ್ಯಾಪಿ ಪ್ರಚಾರವಿಲ್ಲದೆ, ಜನತೆಗೆ ಅರಿವು ಮೂಡಿಸುವ ಕೆಲಸದಲ್ಲಿ ತಣ್ಣಗೆ ದುಡಿದವರಲ್ಲಿ ಚಂದ್ರಪ್ಪ ಹೆಬ್ಬಾಳಕರ ಅವರೂ ಒಬ್ಬರೆಂದು, ಅವರ ಬಗೆಗೆ ಗೌರವ ಮೂಡಿತು.

ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೇಮಳಖೇಡದ ಚಂದ್ರಪ್ಪ ಹೆಬ್ಬಾಳಕರ ಅವರು ಇದೀಗ ಬೀದರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಚಂದ್ರಪ್ಪನವರು 1958 ರಲ್ಲಿ ಚಿಟಗುಪ್ಪದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿದವರು, ನಂತರ ಪ್ರೌಢಶಾಲೆ ಶಿಕ್ಷಕರಾಗಿಯೂ, 1998ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿ ನಿವೃತ್ತರಾದರು. ಶಾಲಾ ಶಿಕ್ಷಕರಾದವರು ಸಮಾಜದೊಂದಿಗೆ ಒಡನಾಡುತ್ತಾ, ಜನತೆಯನ್ನು ತಿದ್ದುವ ಮೇಷ್ಟ್ರುಗಳಾಗಿಯೂ ರೂಪಾಂತರ ಹೊದುವವರು ವಿರಳ. ಅಂತವರಲ್ಲಿ ಚಂದ್ರಪ್ಪ ಹೆಬ್ಬಾಳಕರ ಅವರು ಒಬ್ಬರು.

ಗುಲ್ಬರ್ಗಾ ಬೀದರ ಭಾಗದಲ್ಲಿ `ಬಾನಾಮತಿ’ಯ ಕುರಿತ ಮೌಢ್ಯ ವ್ಯಾಪಕವಾಗಿದೆ. ಈ ಕಾರಣಕ್ಕೆ ಜನರು ಸದಾ ಆತಂಕಿತರಾಗಿರುತ್ತಾರೆ. ಈ ಬಾನಾಮತಿ ಕುರಿತಂತೆ ಬಹಳ ಹಿಂದೆಯೇ ಹೆಚ್.ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇದೊಂದು ಮಾನಸಿಕ ವ್ಯಾಧಿ. ಇದಕ್ಕೆ ಪ್ರಜ್ಞಾವಂತಿಕೆಯೊಂದೆ ಮದ್ದು ಎಂದು ನರಸಿಂಹಯ್ಯ ಹೇಳಿದ್ದರು. ಈ ಬಾನಾಮತಿ ಕುರಿತಂತೆ ಸ್ಥಳೀಯರು ವೈಚಾರಿಕವಾಗಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಆಲೋಚನೆಯಲ್ಲಿ ಚಂದ್ರಪ್ಪ ಅವರು ಸ್ಥಳೀಯವಾಗಿ ಹಲವು ಬಾನಾಮತಿ ಪ್ರಕರಣಗಳಲ್ಲಿ ಹಳ್ಳಿಗಳಿಗೆ ತೆರಳಿ ಜನರನ್ನು ಮೌಢ್ಯದಿಂದ ಹೊರಬರುವಂತೆ ಜಾಗೃತಿ ಮೂಡಿಸಿದ್ದಾರೆ. ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಬಾನಾಮತಿ ನಿರ್ಮೂಲನ ಸಮಿತಿಯ ಸಂಚಾಲಕರಾಗಿ ಬೀದರ್ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಲ್ಲಿ ನಾಟಕ ಪ್ರದರ್ಶನ ಮತ್ತು ಉಪನ್ಯಾಸಗಳನ್ನು ಏರ್ಪಡಿಸಿ ಶಾಲೆಗಳಲ್ಲಿ ವೈಚಾರಿಕತೆ ಮೂಡಿಸಲು ಚಂದ್ರಪ್ಪ ಅವರು ಶ್ರಮಿಸಿದ್ದಾರೆ. ಭಾರತೀಯ ಜ್ಞಾನವಿಜ್ಞಾನ ಸಂಘಟನೆಯ ಸದಸ್ಯರಾಗಿ ಪವಾಡ ಬಯಲಿನ ಮೂಲಕ ಮೌಢ್ಯಗಳ ಬಗೆಗೆ ಅರಿವು ಮೂಡಿಸುವುದರಲ್ಲಿಯೂ ಸಕ್ರಿಯವಾಗಿದ್ದಾರೆ.

ಬೀದರ ಭಾಗದಲ್ಲಿ ಬೌದ್ಧಧರ್ಮಕ್ಕೆ ಪ್ರವೇಶಿಸಿದ ದಲಿತರ ಸಂಖ್ಯೆ ಹೆಚ್ಚು. ಹಳ್ಳಿ ಹಳ್ಳಿಗಳಲ್ಲಿಯೂ ಚಿಕ್ಕ ಚಿಕ್ಕ ಬೌದ್ಧವಿಹಾರಗಳು ಸ್ಥಾಪನೆಯಾಗಿವೆ. ಹೀಗಿರುವಾಗ ಬೌದ್ಧಧರ್ಮದ ಅನುಸರಣೆಯೂ ಮೌಢ್ಯಕ್ಕೆ ತಿರುಗಬಾರದೆಂದು ಈ ಭಾಗದ ಕೆಲವರು ಬೌದ್ಧ ವೈಚಾರಿಕತೆಯನ್ನು ವಿಸ್ತರಿಸುತ್ತಿದ್ದಾರೆ. ಹೆಬ್ಬಾಳಕರ ಅವರು 1994 ರಿಂದ 2001ರ ತನಕ ಬೌದ್ಧಿಷ್ಟ್ ಸೊಸೈಟಿ ಆಫ್ ಇಂಡಿಯಾದ ಬೀದರ ಜಿಲ್ಲೆಯ ಕಾರ್ಯಕಾರಿ ಸದಸ್ಯರಾಗಿ ನೂರಾರು ಹಳ್ಳಿಗಳಿಗೆ ಬಾಬಾ ಸಾಹೇಬರ ಬೌದ್ಧದಮ್ಮದ ತಿಳಿವನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ನೂರಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ `ಧಮ್ಮ ದೀಪ’ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದಾರೆ.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಚಂದ್ರಪ್ಪ ಅವರ ಸಾಹಿತ್ಯ ರಚನೆ ಅಷ್ಟಾಗಿ ಚರ್ಚೆಗೆ ಒಳಗಾಗಿಲ್ಲ. ಈ ತನಕ ಅವರು `ಬೀದರ್ ಜಿಲ್ಲೆಯ ಮೊಹರಂ ಪದಗಳು’ `ಭೀಮಕವಿ ಶ್ರೀ ಮಾಣಿಕರಾವ ಜ್ಯೋತಿ’ `ಶೇರ್ ಎ ದಖನ್: ಬಿ.ಶ್ಯಾಮಸುಂದರ್’ `ಉರಿಲಿಂಗ ಪೆದ್ದಿ ಪರಂಪರೆ’ `ದಲಿತೋದ್ಧಾರಕರು’ ಒಳಗೊಂಡಂತೆ ಹದಿನೈದಕ್ಕಿಂತ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ `ಬೀದರ್ ಜಿಲ್ಲೆಯ ದಲಿತ ಕವಿ ಕಾವ್ಯ’ ಒಂದು ಅತ್ಯುತ್ತಮ ಕೃತಿ. ಇಡೀ ಬೀದರನ ಹಳ್ಳಿ ಹಳ್ಳಿಗಳ ಸುತ್ತಿ ಸಂಪಾದಿಸಿದ್ದಾರೆ. ಈ ಕೃತಿ 2012 ರಲ್ಲಿ ಪ್ರಕಟವಾಗಿದೆ. ಹತ್ತೊಂಬತ್ತನೆ ಶತಮಾನದ ಆದಿಯಲ್ಲಿ ಜೀವಿಸಿದ್ದರು ಎನ್ನಲಾಗುವ ಹುಮನಾಬಾದ ತಾಲೂಕಿನ ಚಿಡಗುಪ್ಪಿಯ ತಿಪರಂಚಿ ಮಾಸ್ತರರಿಂದ ಮೊದಲುಗೊಂಡು 1979 ರಲ್ಲಿ ಜನಿಸಿದ ಮಚ್ಚೇಂದ್ರ ಪಿ. ಅಣಕಲ್ ತನಕ ಒಟ್ಟು 85 ದಲಿತ ಕವಿಗಳ ವಿವರ ಮತ್ತು ಆಯ್ದ ಕವಿತೆಗಳನ್ನು ಕೊಡಲಾಗಿದೆ. ಹೆಚ್ಚುಕಡಿಮೆ ಒಂದು ಶತಮಾನದ ಅಂತರದಲ್ಲಿ ಇಷ್ಟು ಕವಿಗಳ ಮೊತ್ತ ದೊಡ್ಡದಲ್ಲವಾದರೂ ದಲಿತ ಕವಿಗಳು ಎನ್ನುವಾಗ ಈ ಸಂಖ್ಯೆಯ ಮಹತ್ವ ಅರಿವಿಗೆ ಬರುತ್ತದೆ.

ಈ ಸಂಕಲನದ ಕವಿತೆಗಳನ್ನು ಕನ್ನಡದ ಆಧುನಿಕ ಕಾವ್ಯದ ಜೊತೆಗಿಟ್ಟು ನೋಡಲಾಗದು. ಅಥವಾ ಇಲ್ಲಿನ ಯಾವ ಕವಿಗಳ ಹೆಸರೂ ನಮ್ಮ ಕನ್ನಡ ಕವಿಗಳ ಪಟ್ಟಿಯಲ್ಲಿ ಕಾಣದು. ಅಷ್ಟರ ಮಟ್ಟಿಗೆ ಈ ಕವಿಗಳು ಮತ್ತವರ ಕವಿತೆ ಬೀದರ ಭಾಗಕ್ಕೆ ಮಾತ್ರ ಸೀಮಿತವಾದಂತೆ ಕಾಣುತ್ತದೆ ಅಥವಾ ಕನ್ನಡ ಸಾಹಿತ್ಯ ಪರಂಪರೆ ಬೀದರ ಭಾಗದ ಕವಿ ಕಾವ್ಯವನ್ನು ಹೊರಗಿಟ್ಟಂತೆ ಗೋಚರಿಸುತ್ತಿದೆ. ಹೀಗೆ ತಮ್ಮದೇ ಆದ ವಿಶಿಷ್ಠತೆಯನ್ನು ಮೈಗೂಡಿಸಿಕೊಂಡ ಈ ಭಾಗದ ದಲಿತ ಕಾವ್ಯಮೀಮಾಂಸೆ ಯಾವುದು? ಕನ್ನಡ ಕಾವ್ಯ ಎಂದು ಕರೆಯುವಾಗ ಈ ಭಾಗದ ಕಾವ್ಯಕ್ಕಿರುವ ವಿಶಿಷ್ಠ ಚಹರೆ ಏನು? ಎನ್ನುವುದರ ಕುರಿತು ಚರ್ಚಿಸುವ ಅಗತ್ಯವಿದೆ.

ಬೀದರ ಜಿಲ್ಲೆಯ ಬಸವಕಲ್ಯಾಣದ ಪ್ರಭಾವ ಈ ಭಾಗದ ಕವಿಗಳ ಮೇಲೆ ಸಹಜವಾಗಿದೆ. ಹೀಗಾಗಿ ಈ ಭಾಗದ ಕವಿಗಳಲ್ಲಿ ವಚನದ ಅನುಕರಣೆಯಿದೆ. ಹೆಬ್ಬಾಳಕರ ಕೂಡ `ಚಂದ್ರಣ್ಣ’ ಎನ್ನುವ ವಚನಾಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಚಂದ್ರಪ್ಪ ಜಾನಪದ ವಿದ್ವಾಂಸರೂ ಕೂಡ. ಈ ಭಾಗದ ಮೊಹರಂ ಪದಗಳನ್ನು ಸಂಗ್ರಹಿಸಿದ್ದಾರೆ. ಅಂತೆಯೇ ಬೀದರ್ ಜಿಲ್ಲಾ ಜನಪದ ಸೊಗಡು ಕೃತಿಯಲ್ಲಿ ಈ ಭಾಗದ ಜನಪದ ಸಾಹಿತ್ಯದ ಬಗ್ಗೆ ಗಮನಸೆಳೆದಿದ್ದಾರೆ.

ಚಂದ್ರಪ್ಪ ಹೆಬ್ಬಾಳಕರನ್ನು ಗುರುತಿಸಿ ಬೀದರ್ ಗುಲ್ಬರ್ಗಾ ಭಾಗದ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ, ಸನ್ಮಾನಗಳನ್ನು ಮಾಡಿ ಪುರಸ್ಕರಿಸಿವೆ. 2015 ರಲ್ಲಿ ಇವರ ಸಾಹಿತ್ಯಿಕ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯು ಲಭಿಸಿತು. ಬಹುಶಃ ಆಗ ಹೋರಾಟಗಾರ್ತಿ ಕೆ.ನೀಲಾ ಅವರು ಸಾಹಿತ್ಯ ಅಕಾಡೆಮಿಯ ಸದಸ್ಯರಾಗದೆ ಇದ್ದಿದ್ದರೆ, ಚಂದ್ರಪ್ಪ ಅವರನ್ನು ಸಾಹಿತ್ಯ ಅಕಾಡೆಮಿ ಗುರುತಿಸುತ್ತಿರಲಿಲ್ಲ.

ದುರಂತವೆಂದರೆ, ಇವರ ಆಯ್ಕೆಯನ್ನು ಇತರೆ ಅಕಾಡೆಮಿ ಸದಸ್ಯರು ವಿರೋಧಿಸಿದ್ದರು. ಕಾರಣ ಚಂದ್ರಪ್ಪ ಅವರ ಕೆಲಸವು ರಾಜ್ಯಮಟ್ಟದಲ್ಲಿ ಪ್ರಚಾರಕ್ಕೆ ಬಂದಿರಲಿಲ್ಲ. ಅಂತೆಯೇ ಹಳ್ಳಿಹಳ್ಳಿ ತಿರುಗಾಡಿ ವೈಚಾರಿಕತೆ ರೂಪಿಸುವ ಶ್ರಮದಾಯಕ ಕೆಲಸವು ಸಾಹಿತ್ಯ ಅಕಾಡೆಮಿಯ ಮೌಲ್ಯಮಾಪನಕ್ಕೆ ಸಿಕ್ಕದಿರುವುದು ಅಕಾಡೆಮಿಯ ಮಿತಿಯನ್ನೂ ತೋರಿಸುತ್ತದೆ. ಈ ಭಾಗದಲ್ಲಿ ಹೋರಾಟ ಚಳವಳಿ ವೈಚಾರಿಕ ಎಚ್ಚರವನ್ನು ಮೂಡಿಸುತ್ತಿರುವ ಕೆ.ನೀಲಾ, ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ, ಆರ್.ಕೆ.ಹುಡುಗಿ ಮೊದಲಾದವರ ತಂಡದ ಜತೆ ಚಂದ್ರಪ್ಪ ಅವರೂ ಸೇರಿಕೊಂಡು ಕೆಲಸ ಮಾಡುತ್ತಾರೆ. ಹೀಗೆ ಸ್ಥಳೀಯವಾಗಿ ಗ್ರಾಮಗಳಲ್ಲಿ ವೈಚಾರಿಕತೆ ಮೂಡಿಸುವ ಇಂತಹ ಹಿರಿಯರ ಕೆಲಸಗಳನ್ನು ಗುರುತಿಸುವ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...