Homeಎಲೆಮರೆಗಡಿನಾಡು ಬೀದರಿನಲ್ಲಿ ಸದ್ದಿಲ್ಲದೆ ದುಡಿಯುವ ಚಂದ್ರಪ್ಪ ಹೆಬ್ಬಾಳಕರ

ಗಡಿನಾಡು ಬೀದರಿನಲ್ಲಿ ಸದ್ದಿಲ್ಲದೆ ದುಡಿಯುವ ಚಂದ್ರಪ್ಪ ಹೆಬ್ಬಾಳಕರ

- Advertisement -
- Advertisement -
ಎಲೆಮರೆ-27

ಕುವೆಂಪು ಭಾಷಾ ಭಾರತಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸೆಮಿನಾರಿನೊಂದರಲ್ಲಿ ಚಂದ್ರಪ್ಪ ಹೆಬ್ಬಾಳಕರ್ ಅವರನ್ನು ನಾನು ಮೊದಲಿಗೆ ನೋಡಿದೆ. ಚೂರು ಕುಳ್ಳನೆ ವ್ಯಕ್ತಿ ಪುಟುಪುಟು ಓಡಾಡುತ್ತ ತಮ್ಮ `ಬೀದರ್ ಜಿಲ್ಲೆಯ ದಲಿತ ಕವಿ ಕಾವ್ಯ’ ಕೃತಿಯನ್ನು ಕೆಲವರಿಗೆ ಕೊಡುತ್ತಿದ್ದರು. ನಾನು ಕುತೂಹಲದಿಂದ ಈ ಪುಸ್ತಕವನ್ನು ಗಮನಿಸಿದೆ. ಇದೊಂದು ಶ್ರಮದಾಯಕ ಕೆಲಸ ಅನ್ನಿಸಿತು. ನಂತರ ಜನಪದ ಕವಿಗಳ ಭೇಟಿಗೆಂದು ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಹೋದಾಗ ಚಂದ್ರಪ್ಪ ಅವರನ್ನು ಕಂಡು ಮಾತನಾಡಿಸಿ, ಅವರ ಈ ಪುಸ್ತಕವನ್ನು ಪಡೆದೆ. ಈ ಭಾಗದ ಕೆ.ನೀಲಾ, ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ ಮೊದಲಾದವರೊಡಗೂಡಿ ಬಸವ ಕಲ್ಯಾಣದ ಕೆಲವೆಡೆಗಳಲ್ಲಿ ಸುತ್ತಾಡುವಾಗ ಇವರ ಜತೆ ಮತ್ತಷ್ಟು ಮಾತುಕತೆ ನಡೆಯಿತು. ರಾಜ್ಯವ್ಯಾಪಿ ಪ್ರಚಾರವಿಲ್ಲದೆ, ಜನತೆಗೆ ಅರಿವು ಮೂಡಿಸುವ ಕೆಲಸದಲ್ಲಿ ತಣ್ಣಗೆ ದುಡಿದವರಲ್ಲಿ ಚಂದ್ರಪ್ಪ ಹೆಬ್ಬಾಳಕರ ಅವರೂ ಒಬ್ಬರೆಂದು, ಅವರ ಬಗೆಗೆ ಗೌರವ ಮೂಡಿತು.

ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೇಮಳಖೇಡದ ಚಂದ್ರಪ್ಪ ಹೆಬ್ಬಾಳಕರ ಅವರು ಇದೀಗ ಬೀದರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಚಂದ್ರಪ್ಪನವರು 1958 ರಲ್ಲಿ ಚಿಟಗುಪ್ಪದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿದವರು, ನಂತರ ಪ್ರೌಢಶಾಲೆ ಶಿಕ್ಷಕರಾಗಿಯೂ, 1998ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿ ನಿವೃತ್ತರಾದರು. ಶಾಲಾ ಶಿಕ್ಷಕರಾದವರು ಸಮಾಜದೊಂದಿಗೆ ಒಡನಾಡುತ್ತಾ, ಜನತೆಯನ್ನು ತಿದ್ದುವ ಮೇಷ್ಟ್ರುಗಳಾಗಿಯೂ ರೂಪಾಂತರ ಹೊದುವವರು ವಿರಳ. ಅಂತವರಲ್ಲಿ ಚಂದ್ರಪ್ಪ ಹೆಬ್ಬಾಳಕರ ಅವರು ಒಬ್ಬರು.

ಗುಲ್ಬರ್ಗಾ ಬೀದರ ಭಾಗದಲ್ಲಿ `ಬಾನಾಮತಿ’ಯ ಕುರಿತ ಮೌಢ್ಯ ವ್ಯಾಪಕವಾಗಿದೆ. ಈ ಕಾರಣಕ್ಕೆ ಜನರು ಸದಾ ಆತಂಕಿತರಾಗಿರುತ್ತಾರೆ. ಈ ಬಾನಾಮತಿ ಕುರಿತಂತೆ ಬಹಳ ಹಿಂದೆಯೇ ಹೆಚ್.ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇದೊಂದು ಮಾನಸಿಕ ವ್ಯಾಧಿ. ಇದಕ್ಕೆ ಪ್ರಜ್ಞಾವಂತಿಕೆಯೊಂದೆ ಮದ್ದು ಎಂದು ನರಸಿಂಹಯ್ಯ ಹೇಳಿದ್ದರು. ಈ ಬಾನಾಮತಿ ಕುರಿತಂತೆ ಸ್ಥಳೀಯರು ವೈಚಾರಿಕವಾಗಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಆಲೋಚನೆಯಲ್ಲಿ ಚಂದ್ರಪ್ಪ ಅವರು ಸ್ಥಳೀಯವಾಗಿ ಹಲವು ಬಾನಾಮತಿ ಪ್ರಕರಣಗಳಲ್ಲಿ ಹಳ್ಳಿಗಳಿಗೆ ತೆರಳಿ ಜನರನ್ನು ಮೌಢ್ಯದಿಂದ ಹೊರಬರುವಂತೆ ಜಾಗೃತಿ ಮೂಡಿಸಿದ್ದಾರೆ. ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಬಾನಾಮತಿ ನಿರ್ಮೂಲನ ಸಮಿತಿಯ ಸಂಚಾಲಕರಾಗಿ ಬೀದರ್ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಲ್ಲಿ ನಾಟಕ ಪ್ರದರ್ಶನ ಮತ್ತು ಉಪನ್ಯಾಸಗಳನ್ನು ಏರ್ಪಡಿಸಿ ಶಾಲೆಗಳಲ್ಲಿ ವೈಚಾರಿಕತೆ ಮೂಡಿಸಲು ಚಂದ್ರಪ್ಪ ಅವರು ಶ್ರಮಿಸಿದ್ದಾರೆ. ಭಾರತೀಯ ಜ್ಞಾನವಿಜ್ಞಾನ ಸಂಘಟನೆಯ ಸದಸ್ಯರಾಗಿ ಪವಾಡ ಬಯಲಿನ ಮೂಲಕ ಮೌಢ್ಯಗಳ ಬಗೆಗೆ ಅರಿವು ಮೂಡಿಸುವುದರಲ್ಲಿಯೂ ಸಕ್ರಿಯವಾಗಿದ್ದಾರೆ.

ಬೀದರ ಭಾಗದಲ್ಲಿ ಬೌದ್ಧಧರ್ಮಕ್ಕೆ ಪ್ರವೇಶಿಸಿದ ದಲಿತರ ಸಂಖ್ಯೆ ಹೆಚ್ಚು. ಹಳ್ಳಿ ಹಳ್ಳಿಗಳಲ್ಲಿಯೂ ಚಿಕ್ಕ ಚಿಕ್ಕ ಬೌದ್ಧವಿಹಾರಗಳು ಸ್ಥಾಪನೆಯಾಗಿವೆ. ಹೀಗಿರುವಾಗ ಬೌದ್ಧಧರ್ಮದ ಅನುಸರಣೆಯೂ ಮೌಢ್ಯಕ್ಕೆ ತಿರುಗಬಾರದೆಂದು ಈ ಭಾಗದ ಕೆಲವರು ಬೌದ್ಧ ವೈಚಾರಿಕತೆಯನ್ನು ವಿಸ್ತರಿಸುತ್ತಿದ್ದಾರೆ. ಹೆಬ್ಬಾಳಕರ ಅವರು 1994 ರಿಂದ 2001ರ ತನಕ ಬೌದ್ಧಿಷ್ಟ್ ಸೊಸೈಟಿ ಆಫ್ ಇಂಡಿಯಾದ ಬೀದರ ಜಿಲ್ಲೆಯ ಕಾರ್ಯಕಾರಿ ಸದಸ್ಯರಾಗಿ ನೂರಾರು ಹಳ್ಳಿಗಳಿಗೆ ಬಾಬಾ ಸಾಹೇಬರ ಬೌದ್ಧದಮ್ಮದ ತಿಳಿವನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ನೂರಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ `ಧಮ್ಮ ದೀಪ’ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದಾರೆ.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಚಂದ್ರಪ್ಪ ಅವರ ಸಾಹಿತ್ಯ ರಚನೆ ಅಷ್ಟಾಗಿ ಚರ್ಚೆಗೆ ಒಳಗಾಗಿಲ್ಲ. ಈ ತನಕ ಅವರು `ಬೀದರ್ ಜಿಲ್ಲೆಯ ಮೊಹರಂ ಪದಗಳು’ `ಭೀಮಕವಿ ಶ್ರೀ ಮಾಣಿಕರಾವ ಜ್ಯೋತಿ’ `ಶೇರ್ ಎ ದಖನ್: ಬಿ.ಶ್ಯಾಮಸುಂದರ್’ `ಉರಿಲಿಂಗ ಪೆದ್ದಿ ಪರಂಪರೆ’ `ದಲಿತೋದ್ಧಾರಕರು’ ಒಳಗೊಂಡಂತೆ ಹದಿನೈದಕ್ಕಿಂತ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ `ಬೀದರ್ ಜಿಲ್ಲೆಯ ದಲಿತ ಕವಿ ಕಾವ್ಯ’ ಒಂದು ಅತ್ಯುತ್ತಮ ಕೃತಿ. ಇಡೀ ಬೀದರನ ಹಳ್ಳಿ ಹಳ್ಳಿಗಳ ಸುತ್ತಿ ಸಂಪಾದಿಸಿದ್ದಾರೆ. ಈ ಕೃತಿ 2012 ರಲ್ಲಿ ಪ್ರಕಟವಾಗಿದೆ. ಹತ್ತೊಂಬತ್ತನೆ ಶತಮಾನದ ಆದಿಯಲ್ಲಿ ಜೀವಿಸಿದ್ದರು ಎನ್ನಲಾಗುವ ಹುಮನಾಬಾದ ತಾಲೂಕಿನ ಚಿಡಗುಪ್ಪಿಯ ತಿಪರಂಚಿ ಮಾಸ್ತರರಿಂದ ಮೊದಲುಗೊಂಡು 1979 ರಲ್ಲಿ ಜನಿಸಿದ ಮಚ್ಚೇಂದ್ರ ಪಿ. ಅಣಕಲ್ ತನಕ ಒಟ್ಟು 85 ದಲಿತ ಕವಿಗಳ ವಿವರ ಮತ್ತು ಆಯ್ದ ಕವಿತೆಗಳನ್ನು ಕೊಡಲಾಗಿದೆ. ಹೆಚ್ಚುಕಡಿಮೆ ಒಂದು ಶತಮಾನದ ಅಂತರದಲ್ಲಿ ಇಷ್ಟು ಕವಿಗಳ ಮೊತ್ತ ದೊಡ್ಡದಲ್ಲವಾದರೂ ದಲಿತ ಕವಿಗಳು ಎನ್ನುವಾಗ ಈ ಸಂಖ್ಯೆಯ ಮಹತ್ವ ಅರಿವಿಗೆ ಬರುತ್ತದೆ.

ಈ ಸಂಕಲನದ ಕವಿತೆಗಳನ್ನು ಕನ್ನಡದ ಆಧುನಿಕ ಕಾವ್ಯದ ಜೊತೆಗಿಟ್ಟು ನೋಡಲಾಗದು. ಅಥವಾ ಇಲ್ಲಿನ ಯಾವ ಕವಿಗಳ ಹೆಸರೂ ನಮ್ಮ ಕನ್ನಡ ಕವಿಗಳ ಪಟ್ಟಿಯಲ್ಲಿ ಕಾಣದು. ಅಷ್ಟರ ಮಟ್ಟಿಗೆ ಈ ಕವಿಗಳು ಮತ್ತವರ ಕವಿತೆ ಬೀದರ ಭಾಗಕ್ಕೆ ಮಾತ್ರ ಸೀಮಿತವಾದಂತೆ ಕಾಣುತ್ತದೆ ಅಥವಾ ಕನ್ನಡ ಸಾಹಿತ್ಯ ಪರಂಪರೆ ಬೀದರ ಭಾಗದ ಕವಿ ಕಾವ್ಯವನ್ನು ಹೊರಗಿಟ್ಟಂತೆ ಗೋಚರಿಸುತ್ತಿದೆ. ಹೀಗೆ ತಮ್ಮದೇ ಆದ ವಿಶಿಷ್ಠತೆಯನ್ನು ಮೈಗೂಡಿಸಿಕೊಂಡ ಈ ಭಾಗದ ದಲಿತ ಕಾವ್ಯಮೀಮಾಂಸೆ ಯಾವುದು? ಕನ್ನಡ ಕಾವ್ಯ ಎಂದು ಕರೆಯುವಾಗ ಈ ಭಾಗದ ಕಾವ್ಯಕ್ಕಿರುವ ವಿಶಿಷ್ಠ ಚಹರೆ ಏನು? ಎನ್ನುವುದರ ಕುರಿತು ಚರ್ಚಿಸುವ ಅಗತ್ಯವಿದೆ.

ಬೀದರ ಜಿಲ್ಲೆಯ ಬಸವಕಲ್ಯಾಣದ ಪ್ರಭಾವ ಈ ಭಾಗದ ಕವಿಗಳ ಮೇಲೆ ಸಹಜವಾಗಿದೆ. ಹೀಗಾಗಿ ಈ ಭಾಗದ ಕವಿಗಳಲ್ಲಿ ವಚನದ ಅನುಕರಣೆಯಿದೆ. ಹೆಬ್ಬಾಳಕರ ಕೂಡ `ಚಂದ್ರಣ್ಣ’ ಎನ್ನುವ ವಚನಾಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಚಂದ್ರಪ್ಪ ಜಾನಪದ ವಿದ್ವಾಂಸರೂ ಕೂಡ. ಈ ಭಾಗದ ಮೊಹರಂ ಪದಗಳನ್ನು ಸಂಗ್ರಹಿಸಿದ್ದಾರೆ. ಅಂತೆಯೇ ಬೀದರ್ ಜಿಲ್ಲಾ ಜನಪದ ಸೊಗಡು ಕೃತಿಯಲ್ಲಿ ಈ ಭಾಗದ ಜನಪದ ಸಾಹಿತ್ಯದ ಬಗ್ಗೆ ಗಮನಸೆಳೆದಿದ್ದಾರೆ.

ಚಂದ್ರಪ್ಪ ಹೆಬ್ಬಾಳಕರನ್ನು ಗುರುತಿಸಿ ಬೀದರ್ ಗುಲ್ಬರ್ಗಾ ಭಾಗದ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ, ಸನ್ಮಾನಗಳನ್ನು ಮಾಡಿ ಪುರಸ್ಕರಿಸಿವೆ. 2015 ರಲ್ಲಿ ಇವರ ಸಾಹಿತ್ಯಿಕ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯು ಲಭಿಸಿತು. ಬಹುಶಃ ಆಗ ಹೋರಾಟಗಾರ್ತಿ ಕೆ.ನೀಲಾ ಅವರು ಸಾಹಿತ್ಯ ಅಕಾಡೆಮಿಯ ಸದಸ್ಯರಾಗದೆ ಇದ್ದಿದ್ದರೆ, ಚಂದ್ರಪ್ಪ ಅವರನ್ನು ಸಾಹಿತ್ಯ ಅಕಾಡೆಮಿ ಗುರುತಿಸುತ್ತಿರಲಿಲ್ಲ.

ದುರಂತವೆಂದರೆ, ಇವರ ಆಯ್ಕೆಯನ್ನು ಇತರೆ ಅಕಾಡೆಮಿ ಸದಸ್ಯರು ವಿರೋಧಿಸಿದ್ದರು. ಕಾರಣ ಚಂದ್ರಪ್ಪ ಅವರ ಕೆಲಸವು ರಾಜ್ಯಮಟ್ಟದಲ್ಲಿ ಪ್ರಚಾರಕ್ಕೆ ಬಂದಿರಲಿಲ್ಲ. ಅಂತೆಯೇ ಹಳ್ಳಿಹಳ್ಳಿ ತಿರುಗಾಡಿ ವೈಚಾರಿಕತೆ ರೂಪಿಸುವ ಶ್ರಮದಾಯಕ ಕೆಲಸವು ಸಾಹಿತ್ಯ ಅಕಾಡೆಮಿಯ ಮೌಲ್ಯಮಾಪನಕ್ಕೆ ಸಿಕ್ಕದಿರುವುದು ಅಕಾಡೆಮಿಯ ಮಿತಿಯನ್ನೂ ತೋರಿಸುತ್ತದೆ. ಈ ಭಾಗದಲ್ಲಿ ಹೋರಾಟ ಚಳವಳಿ ವೈಚಾರಿಕ ಎಚ್ಚರವನ್ನು ಮೂಡಿಸುತ್ತಿರುವ ಕೆ.ನೀಲಾ, ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ, ಆರ್.ಕೆ.ಹುಡುಗಿ ಮೊದಲಾದವರ ತಂಡದ ಜತೆ ಚಂದ್ರಪ್ಪ ಅವರೂ ಸೇರಿಕೊಂಡು ಕೆಲಸ ಮಾಡುತ್ತಾರೆ. ಹೀಗೆ ಸ್ಥಳೀಯವಾಗಿ ಗ್ರಾಮಗಳಲ್ಲಿ ವೈಚಾರಿಕತೆ ಮೂಡಿಸುವ ಇಂತಹ ಹಿರಿಯರ ಕೆಲಸಗಳನ್ನು ಗುರುತಿಸುವ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...