Homeಅಂಕಣಗಳುದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

- Advertisement -
- Advertisement -

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಒಂದು ಕೃತಿ. ಅದು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‍ನಂತಹ ಸರ್ವಾಧಿಕಾರಿಗೆ ಅತಿಮಾನವತೆಯ ಪಾಠ ಮಾಡಿತೇ? ಯಾವ ರಣ-ರತಿಗಳಿಗೆ ಅಮಾನವೀಯ ರೌದ್ರವನ್ನು ತುಂಬಿ ಮನುಕುಲದಲ್ಲಿಯೇ ರಕ್ತದಲ್ಲಿ ಕೆಟ್ಟ ಇತಿಹಾಸ ಬರೆದ ನಾಜಿಗಳಿಗೆ ಪುಕ್ಕಟೆಯಾಗಿ ಈ ದಸ್ ಸ್ಪೋಕ್ ಝರತುಷ್ಟ್ರ ಹಂಚುವಷ್ಟು ಕೇಡಿನ ಸಂಚಾಗಿತ್ತೇ ಈ ಕೃತಿ.

ಇಲ್ಲ. “ಮನುಷ್ಯತ್ವ ಎಂಬುವುದು ಪಶುತ್ವ ಮತ್ತು ಅತಿಮಾನವತ್ವದ ನಡುವಿನ ಆಳವಾದ ಕಣಿವೆಯ ಮೇಲೆ ಕಟ್ಟಲ್ಪಟ್ಟಿರುವ ಹಗ್ಗ. ಇದರ ಮೇಲೆ ನಡೆಯುವುದಾಗಲಿ, ದಾಟುವುದಾಗಲಿ, ಹಿಂದಕ್ಕೆ ತಿರುಗಿ ನೋಡುವುದಾಗಲಿ, ಅಲ್ಲಿಯೇ ನಿಂತು ತಳಮಳಗೊಳ್ಳುವುದಾಗಲಿ ಅಪಾಯಕರ. ಮನುಷ್ಯನೆಂದರೆ ಪಶುತ್ವ ಮತ್ತು ಅತಿಮಾನವತ್ವ; ಈ ಎರಡರ ನಡುವಿನ ಸೇತುವೆಯೇ ಹೊರತು, ಮನುಷ್ಯತ್ವವು ಗುರಿಯೇನಲ್ಲ.” ಹಾಗೆಂದು ಝರತುಷ್ಟ್ರನಿಂದ ಹೇಳಿಸುವ ನೀಷೆಗೆ ಮನುಷ್ಯನೆಂದರೆ ಇಷ್ಟ. ಏಕೆಂದರೆ ಅವನು ಹಿಂದಕ್ಕೂ ಸರಿಯಬಲ್ಲ. ಮುಂದಕ್ಕೂ ಸಾಗಬಲ್ಲ.

ತೂಗಾಡುವ ಲೋಲಕದಂತಿರುವ ಡೋಲಾಯಮಾನದ ಸ್ಥಿತಿಯಲ್ಲಿರುವ ಮನಸ್ಸಿನ ಒಂದೊಂದು ಅತಿ ಸಣ್ಣ ಚಲನೆಯ ಸ್ಥಿತಿಯನ್ನು ಒಪ್ಪುವ ಅಥವಾ ಮೆಚ್ಚುವ ಝರತುಷ್ಟ್ರ ನೀಷೆಯ ಮನಸ್ಸಿನ ತಾತ್ವಿಕ ತಾಕಲಾಟಗಳೇ ಆಗಿವೆ. ಅವನು ಒಳಿತು ಕೆಡಕುಗಳ ಆಚೆಗೆ ಸಾಗುವ ಚೈತನ್ಯ. ಚೈತನ್ಯವು ಇದು ಸಮ್ಮತ, ಇದು ತಿರಸ್ಕೃತವೆಂದು ನೋಡದು. ಇದು ಒಳ್ಳೆಯದು ಅಥವಾ ಕೆಟ್ಟದು ಎಂದು ನಿರ್ಧರಿಸದು. ಇದು ತಮ್ಮವರು, ಅವರು ಪರಕೀಯರೆಂದು ಪಕ್ಷಪಾತ ಮಾಡದು.

ದೇವರು ಸತ್ತ ಎಂದು ತಾನು ಸ್ಪಷ್ಟವಾಗಿ ಅರಿತವನಂತೆ ಘೋಷಿಸುತ್ತಾ ಕ್ರೈಸ್ತ ಧರ್ಮಕ್ಕೆ ವಿರೋಧದ ದಾರಿಯಲ್ಲಿ ನಡೆದವನಂತೆ ಕಾಣುತ್ತಾನೆ. ಆದರೆ, “ಕೆಳಕ್ಕೆ ಬಿದ್ದಿರುವವರನ್ನು ನಾನು ಪ್ರೀತಿಸುತ್ತೇನೆ. ಏಕೆಂದರೆ ಆಚೆಯ ತೀರಕ್ಕಾಗಿ ಹಾತೊರೆಯುತ್ತಿರುವ ಅವರು ಗೌರವಕ್ಕೆ ಪಾತ್ರರಾಗುತ್ತಾರೆ. ಸ್ವರ್ಗಗಳಿಗಾಗಿ ಬೀಳಲು ಸಿದ್ಧವಿರುವ, ತ್ಯಾಗಗಳನ್ನು ಮಾಡುವವರನ್ನು ನಾನು ಮೆಚ್ಚುವುದಿಲ್ಲ” ಎಂದು ಯೇಸುವಿನ ದನಿಯನ್ನು ಪುನರುಚ್ಚರಿಸುತ್ತಾನೆ.

ಜೂಜಾಡುವಾಗ ದಾಳಗಳು ತನ್ನ ಅನುಕೂಲಕ್ಕೆ ಬಿದ್ದರೆ ನಾನು ಮೋಸಗಾರನೇ ಎಂದು ನಾಚುವವನನ್ನು ಮೆಚ್ಚುವ ನೀಷೆಯಲ್ಲಿ ಅಪರಾಧ ಪ್ರಜ್ಞೆಯೂ ಇರುತ್ತದೆ. ಅದನ್ನು ಅಪರಾಧವೆಂದು ಹೇಳಲು ಸಿದ್ಧವಿಲ್ಲದೇ ಅಸ್ತಿತ್ವದಲ್ಲಿ ಘಟಿಸುತ್ತಿರುವ ಒಂದು ವಿದ್ಯಮಾನದಂತೆ ಮೆಚ್ಚುವ ಮನಸ್ಥಿತಿಯೂ ಇದೆ.

ಇಂಥಾ ದ್ವಂದ್ವ ಮನಸ್ಥಿತಿಯನ್ನು ಪ್ರಾಮಾಣಿಕವಾಗಿಯೇ ಹೊಂದಿದ್ದ ನೀಷೆ ಹುಚ್ಚಾಸ್ಪತ್ರೆಯಲ್ಲಿ ದಿನಗಳನ್ನು ಕಳೆಯಬೇಕಾಯಿತು. ಹೊರಗಿದ್ದ ಲೋಕವನ್ನೂ ಮತ್ತು ತಾನು ಕಂಡುಕೊಂಡಿದ್ದ ಲೋಕವನ್ನೂ ಏಕಕಾಲದಲ್ಲಿ ಲೋಲಕದಂತೆ ಡೋಲಾಯಮಾನದ ಸ್ಥಿತಿಯಲ್ಲಿ ನೋಡುತ್ತಿದ್ದ. ಪಕ್ಷಪಾತಗಳಿಲ್ಲದೇ ನೋಡುತ್ತಿದ್ದ. ಒಳಿತು ಕೆಡಕುಗಳ ಭಾವಗಳಿಲ್ಲದೇ ನೋಡುತ್ತಿದ್ದ. ಪಕ್ಷವಹಿಸದ ಕಾರಣ ಅವನ ಮುಕ್ತ ಚೈತನ್ಯವಾಗಿದ್ದ. ಮುಕ್ತವಾದ ಹೃದಯವನ್ನು ಹೊಂದಿದ್ದ. ಸಂಘರ್ಷಪ್ರಿಯ ಸಮಾಜದಲ್ಲಿ ಯಾವುದಾದರೂ ಪಕ್ಷವನ್ನು ವಹಿಸದಿದ್ದರೆ ಅವನನ್ನು ಬೆಂಬಲಿಸಲು ಯಾವ ಪಕ್ಷದವರೂ ಬರುವುದಿಲ್ಲ. ಗಾಯವಾದರೆ ಆಗಲಿ ಎನ್ನುತ್ತಾನೆ. ಹುಚ್ಚನಲ್ಲವೇ ಅವನು? ಗಾಯಗಳನ್ನು ಸಹಿಸಿಕೊಳ್ಳುತ್ತಾ ತನ್ನ ಆಂತರ್ಯವನ್ನು ಕಾಪಾಡಿಕೊಳ್ಳುವವನು ಹೆಚ್ಚಲ್ಲವೇ ಅವನು?

ಖಲೀಲ್ ಗಿಬ್ರಾನನ ಅಲ್‍ಮುಸ್ತಾಫನಂತೆ ಝರತುಷ್ಟ್ರ ಯೌವನದ ಪ್ರೌಡಿಮೆಯ ವಯಸ್ಸಿನಲ್ಲಿ ಮನೆಯನ್ನು ಬಿಟ್ಟು ಬೆಟ್ಟಗುಡ್ಡಗಳ ಕಡೆ ತೆರಳಿ ಏಕಾಂತದಲ್ಲಿ ಹತ್ತು ವರ್ಷಗಳನ್ನು ಕಳೆದ. ಮಿಂಚನ್ನು ಕಂಡುಕೊಂಡ. ಆನಂದದಿಂದಲೇ ಹೊತ್ತುಹೊತ್ತನ್ನೂ ಕಳೆದ. ಕೊನೆಗೊಂದು ದಿನ ತಾನು ಏನನ್ನು ಕಂಡುಕೊಂಡಿದ್ದಾನೆಯೋ, ಅದನ್ನು ಜನರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ. ಏಕೆಂದರೆ, “ಅತಿಯಾಗಿ ಮಧುವನ್ನು ಹೀರಿದ ದುಂಬಿಯು ಆಯಾಸಗೊಂಡಿರುವಂತೆ ನಾನು ಪಡೆದಿರುವ ಅರಿವಿನಿಂದ ನಾನು ಬಳಲಿದ್ದೇನೆ. ಈಗ ಈ ಮಧುಕರ ವೃತ್ತಿಯನ್ನು ಮಾಡಬೇಕು. ಸೂರ್ಯನು ಪಡುವಣದಲ್ಲಿ ಸಂಜೆ ಇಳಿಯುವಂತೆ ಈ ಪ್ರವಾದಿಯೂ, ದಾರ್ಶನಿಕನೂ, ಮಿಂಚನ್ನು ಕಂಡುಕೊಂಡಿರುವ ಅತಿಮಾನವನೂ, ಆನಂದದ ಪ್ರತಿಮೆಯಾಗಿರುವವನೂ ಇಳಿಯಬೇಕಿದೆ. ಏಕೆಂದರೆ, ಇಳಿಯದೇ ಹೋದರೆ ಕೆಳಗಿರುವ ಜನರಿಗೆ ನಾವು ಪಡೆದಿರುವುದನ್ನು ನೀಡಲಾಗುವುದಿಲ್ಲ. ಏರುತ್ತಲೇ ಹೋದರೆ ಏರಲಾಗದವರಿಗೆ ಅತಿಮಾನವನ ಚೈತನ್ಯವನ್ನು ತಗುಲಿಸುವುದಾದರೂ ಹೇಗೆ?” ಎನ್ನುತ್ತಾ ಸೂರ್ಯನನ್ನು ಸಮಾನತೆಯ ಕಣ್ಣು ಎಂದು ಕರೆಯುತ್ತಾನೆ.

ರಾತ್ರಿ ಸುಖವಾದ ನಿದ್ರೆ ಮಾಡಲು ಇಡೀ ದಿನ ಎಚ್ಚರವಾಗಿರಬೇಕು ಎಂಬ ಅರ್ಥದಲ್ಲಿ ನ್ಶೆತಿಕತೆಯನ್ನು ಬೋಧಿಸುವ ಪಂಡಿತರನ್ನು ಕಂಡು ಕಂಡು ಇವನಿಗೆ ನಗುಬರುತ್ತದೆ. ಬದುಕಿನ ಕೊನೆಯಲ್ಲಿ ಶಾಂತಿಗಾಣಲು ಇಡೀ ಬದುಕು ಸದ್ಗುಣಗಳನ್ನು ಪಾಲಿಸುವುದು, ಒಳ್ಳೆಯವನಾಗಿರುವುದಕ್ಕೆ ಹೆಣಗಾಡುವುದು ನಗೆ ತರುವುದು ನೀಷೆಗೆ. ಇಂತಹ ಆಷಾಢಭೂತಿಗಿಂತ ಪ್ರಾಮಾಣಿಕ ವ್ಯಕ್ತಿಯಾಗಿ ಹುಚ್ಚನ್ನು ಹೊಂದಿರುವುದು ಒಂದು ಅನುಗ್ರಹವೆನ್ನುತ್ತಾನೆ ನೀಷೆ.

“ಯಾರೂ ತಿಳಿಯದ ಅನೇಕಾನೇಕ ಬಗೆಯ ಅಂತರಂಗಗಳು ಈ ಲೋಕದಲ್ಲಿವೆ. ಸರಿ, ಇದನ್ನು ತಿಳಿಯಬೇಕೆಂದರೆ ಮೊದಲು ತನ್ನದೇ ಅಂತರಂಗವನ್ನು ರೂಪಿಸಿಕೊಳ್ಳಬೇಕು. ಆಮೇಲೆ ತಿಳಿದುಕೊಳ್ಳಬೇಕು” ಎನ್ನುವ ಝರತುಷ್ಟ್ರ ವ್ಯಕ್ತಿವಾದಿಯಂತೆ ಕಾಣುತ್ತಾನೆ. ಆದರೆ, ಝರತುಷ್ಟ್ರ ಭೇಟಿ ಮಾಡುವ ಯುವಕನಾಗಲಿ, ಇತರರಾಗಲಿ ಒಬ್ಬೊಬ್ಬರೂ ಒಂದೊಂದು ಅರಿಮೆಗಳಿಂದ, ವ್ಯಸನಗಳಿಂದ, ಗೀಳುಗಳಿಂದ; ಒಟ್ಟಾರೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವರು. ಆದರೆ ಝರತುಷ್ಟ್ರ ಅವನ್ನು ಸಮಸ್ಯೆ ಎನ್ನುವುದಿಲ್ಲ. ವಾಸ್ತವ ಎನ್ನುತ್ತಾನೆ. ಆದರೆ ಸಂವಾದಗಳಿಂದ ಸಮಾಲೋಚನೆ ಮಾಡಿ ಅವುಗಳಿಂದ ಹೊರತಾಗಲು ನೆರವಾಗುತ್ತಾನೆ.

ದಸ್ ಸ್ಪೋಕ್ ಝರತುಷ್ಟ್ರ ಜಗತ್ತಿನ ಮಾನವ ಮನಸ್ಥಿತಿಯ ಡೋಲಾಯಮಾನದ ಸ್ಥಿತಿಗತಿಗಳನ್ನು ಒಳಿತು ಕೆಡಕುಗಳಿಂದಾಚೆಗೆ ಮೆಚ್ಚುತ್ತಾ ಬೆತ್ತಲೆಯಾಗಿರುವ ಚೈತನ್ಯವಾಗಿ ನಿಲ್ಲುತ್ತದೆ. ಅದೊಂದು ವಿದ್ಯುತ್ಚಕ್ತಿಯಂತೆ ಬರಿಯ ಚೈತನ್ಯ. ಯಾರು ಯಾವುದಕ್ಕೆ ಬಳಸಿಕೊಳ್ಳುವರೋ ಅವರವರ ವಿವೇಚನೆ ಮತ್ತು ಗ್ರಹಿಕೆಗೆ ಬಿಟ್ಟದ್ದು. ಮೂಲದ್ರವ್ಯದಂತೆ ಒದಗುವ ಯಾವುದೇ ಚೈತ್ಯನ್ಯದ ಜಾಯಮಾನ ಅದೇ ಆಗಿರುತ್ತದೆ.

ಭಗವತ್ಗೀತೆಯನ್ನು ಗೋಡ್ಸೆಯೂ ಓದುತ್ತಿದ್ದ, ಗಾಂಧಿಯೂ ಓದುತ್ತಿದ್ದರು. ಬಾಲ ಗಂಗಾಧರ ತಿಲಕ್ ಓದಿ ರಚಿಸಿದ ಭಾರತೀಯರ ತಾತ್ವಿಕತೆಯು ಡಿ ಡಿ ಕೋಸಾಂಬಿಯವರು ಗೀತೆಯಿಂದ ಗ್ರಹಿಸಿದ್ದಕ್ಕಿಂತ ಭಿನ್ನ. ಆದರೆ ಅವರವರ ಪ್ರಾಮಾಣಿಕ ಬದ್ಧತೆಯಿಂದ ಅವರು ಗ್ರಹಿಸಿದ ತಾತ್ವಿಕತೆಯು ಅವರವರ ನಡೆನುಡಿಗಳಲ್ಲಿ ಪುಟಕಿಟ್ಟುಕೊಳ್ಳುತ್ತದೆ.

ಹಿಟ್ಲರನಿಗೆ ಅರ್ಥವಾದ ನೀಷೆಯ ಅತಿಮಾನವತ್ವವಾದವು ಬೇರೊಬ್ಬರ ಗ್ರಹಿಕೆಯಲ್ಲಿ ಮನುಷ್ಯತ್ವ ಮತ್ತು ಪಶುತ್ವಗಳನ್ನು ಮೀರಿದ ಬಯಲಲ್ಲಿ ಕರುಣೆಯ ಕಣ್ಣ ಮಿಂಚಾದರೆ, ಪಡೆದ ಸಮಭಾವದ ಆನಂದವಾದರೆ ಆಶ್ಚರ್ಯವೇನಿಲ್ಲ. ಏಕೆಂದರೆ ‘ಝರತುಷ್ಟ್ರ ಹಾಗೆಂದದ್ದು’ ಮೂಲದ್ರವ್ಯಗಳನ್ನೇ ಹೊರತು ಸಿದ್ಧವಿಷಯಗಳನ್ನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...