Homeಅಂಕಣಗಳುದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

- Advertisement -
- Advertisement -

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಒಂದು ಕೃತಿ. ಅದು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‍ನಂತಹ ಸರ್ವಾಧಿಕಾರಿಗೆ ಅತಿಮಾನವತೆಯ ಪಾಠ ಮಾಡಿತೇ? ಯಾವ ರಣ-ರತಿಗಳಿಗೆ ಅಮಾನವೀಯ ರೌದ್ರವನ್ನು ತುಂಬಿ ಮನುಕುಲದಲ್ಲಿಯೇ ರಕ್ತದಲ್ಲಿ ಕೆಟ್ಟ ಇತಿಹಾಸ ಬರೆದ ನಾಜಿಗಳಿಗೆ ಪುಕ್ಕಟೆಯಾಗಿ ಈ ದಸ್ ಸ್ಪೋಕ್ ಝರತುಷ್ಟ್ರ ಹಂಚುವಷ್ಟು ಕೇಡಿನ ಸಂಚಾಗಿತ್ತೇ ಈ ಕೃತಿ.

ಇಲ್ಲ. “ಮನುಷ್ಯತ್ವ ಎಂಬುವುದು ಪಶುತ್ವ ಮತ್ತು ಅತಿಮಾನವತ್ವದ ನಡುವಿನ ಆಳವಾದ ಕಣಿವೆಯ ಮೇಲೆ ಕಟ್ಟಲ್ಪಟ್ಟಿರುವ ಹಗ್ಗ. ಇದರ ಮೇಲೆ ನಡೆಯುವುದಾಗಲಿ, ದಾಟುವುದಾಗಲಿ, ಹಿಂದಕ್ಕೆ ತಿರುಗಿ ನೋಡುವುದಾಗಲಿ, ಅಲ್ಲಿಯೇ ನಿಂತು ತಳಮಳಗೊಳ್ಳುವುದಾಗಲಿ ಅಪಾಯಕರ. ಮನುಷ್ಯನೆಂದರೆ ಪಶುತ್ವ ಮತ್ತು ಅತಿಮಾನವತ್ವ; ಈ ಎರಡರ ನಡುವಿನ ಸೇತುವೆಯೇ ಹೊರತು, ಮನುಷ್ಯತ್ವವು ಗುರಿಯೇನಲ್ಲ.” ಹಾಗೆಂದು ಝರತುಷ್ಟ್ರನಿಂದ ಹೇಳಿಸುವ ನೀಷೆಗೆ ಮನುಷ್ಯನೆಂದರೆ ಇಷ್ಟ. ಏಕೆಂದರೆ ಅವನು ಹಿಂದಕ್ಕೂ ಸರಿಯಬಲ್ಲ. ಮುಂದಕ್ಕೂ ಸಾಗಬಲ್ಲ.

ತೂಗಾಡುವ ಲೋಲಕದಂತಿರುವ ಡೋಲಾಯಮಾನದ ಸ್ಥಿತಿಯಲ್ಲಿರುವ ಮನಸ್ಸಿನ ಒಂದೊಂದು ಅತಿ ಸಣ್ಣ ಚಲನೆಯ ಸ್ಥಿತಿಯನ್ನು ಒಪ್ಪುವ ಅಥವಾ ಮೆಚ್ಚುವ ಝರತುಷ್ಟ್ರ ನೀಷೆಯ ಮನಸ್ಸಿನ ತಾತ್ವಿಕ ತಾಕಲಾಟಗಳೇ ಆಗಿವೆ. ಅವನು ಒಳಿತು ಕೆಡಕುಗಳ ಆಚೆಗೆ ಸಾಗುವ ಚೈತನ್ಯ. ಚೈತನ್ಯವು ಇದು ಸಮ್ಮತ, ಇದು ತಿರಸ್ಕೃತವೆಂದು ನೋಡದು. ಇದು ಒಳ್ಳೆಯದು ಅಥವಾ ಕೆಟ್ಟದು ಎಂದು ನಿರ್ಧರಿಸದು. ಇದು ತಮ್ಮವರು, ಅವರು ಪರಕೀಯರೆಂದು ಪಕ್ಷಪಾತ ಮಾಡದು.

ದೇವರು ಸತ್ತ ಎಂದು ತಾನು ಸ್ಪಷ್ಟವಾಗಿ ಅರಿತವನಂತೆ ಘೋಷಿಸುತ್ತಾ ಕ್ರೈಸ್ತ ಧರ್ಮಕ್ಕೆ ವಿರೋಧದ ದಾರಿಯಲ್ಲಿ ನಡೆದವನಂತೆ ಕಾಣುತ್ತಾನೆ. ಆದರೆ, “ಕೆಳಕ್ಕೆ ಬಿದ್ದಿರುವವರನ್ನು ನಾನು ಪ್ರೀತಿಸುತ್ತೇನೆ. ಏಕೆಂದರೆ ಆಚೆಯ ತೀರಕ್ಕಾಗಿ ಹಾತೊರೆಯುತ್ತಿರುವ ಅವರು ಗೌರವಕ್ಕೆ ಪಾತ್ರರಾಗುತ್ತಾರೆ. ಸ್ವರ್ಗಗಳಿಗಾಗಿ ಬೀಳಲು ಸಿದ್ಧವಿರುವ, ತ್ಯಾಗಗಳನ್ನು ಮಾಡುವವರನ್ನು ನಾನು ಮೆಚ್ಚುವುದಿಲ್ಲ” ಎಂದು ಯೇಸುವಿನ ದನಿಯನ್ನು ಪುನರುಚ್ಚರಿಸುತ್ತಾನೆ.

ಜೂಜಾಡುವಾಗ ದಾಳಗಳು ತನ್ನ ಅನುಕೂಲಕ್ಕೆ ಬಿದ್ದರೆ ನಾನು ಮೋಸಗಾರನೇ ಎಂದು ನಾಚುವವನನ್ನು ಮೆಚ್ಚುವ ನೀಷೆಯಲ್ಲಿ ಅಪರಾಧ ಪ್ರಜ್ಞೆಯೂ ಇರುತ್ತದೆ. ಅದನ್ನು ಅಪರಾಧವೆಂದು ಹೇಳಲು ಸಿದ್ಧವಿಲ್ಲದೇ ಅಸ್ತಿತ್ವದಲ್ಲಿ ಘಟಿಸುತ್ತಿರುವ ಒಂದು ವಿದ್ಯಮಾನದಂತೆ ಮೆಚ್ಚುವ ಮನಸ್ಥಿತಿಯೂ ಇದೆ.

ಇಂಥಾ ದ್ವಂದ್ವ ಮನಸ್ಥಿತಿಯನ್ನು ಪ್ರಾಮಾಣಿಕವಾಗಿಯೇ ಹೊಂದಿದ್ದ ನೀಷೆ ಹುಚ್ಚಾಸ್ಪತ್ರೆಯಲ್ಲಿ ದಿನಗಳನ್ನು ಕಳೆಯಬೇಕಾಯಿತು. ಹೊರಗಿದ್ದ ಲೋಕವನ್ನೂ ಮತ್ತು ತಾನು ಕಂಡುಕೊಂಡಿದ್ದ ಲೋಕವನ್ನೂ ಏಕಕಾಲದಲ್ಲಿ ಲೋಲಕದಂತೆ ಡೋಲಾಯಮಾನದ ಸ್ಥಿತಿಯಲ್ಲಿ ನೋಡುತ್ತಿದ್ದ. ಪಕ್ಷಪಾತಗಳಿಲ್ಲದೇ ನೋಡುತ್ತಿದ್ದ. ಒಳಿತು ಕೆಡಕುಗಳ ಭಾವಗಳಿಲ್ಲದೇ ನೋಡುತ್ತಿದ್ದ. ಪಕ್ಷವಹಿಸದ ಕಾರಣ ಅವನ ಮುಕ್ತ ಚೈತನ್ಯವಾಗಿದ್ದ. ಮುಕ್ತವಾದ ಹೃದಯವನ್ನು ಹೊಂದಿದ್ದ. ಸಂಘರ್ಷಪ್ರಿಯ ಸಮಾಜದಲ್ಲಿ ಯಾವುದಾದರೂ ಪಕ್ಷವನ್ನು ವಹಿಸದಿದ್ದರೆ ಅವನನ್ನು ಬೆಂಬಲಿಸಲು ಯಾವ ಪಕ್ಷದವರೂ ಬರುವುದಿಲ್ಲ. ಗಾಯವಾದರೆ ಆಗಲಿ ಎನ್ನುತ್ತಾನೆ. ಹುಚ್ಚನಲ್ಲವೇ ಅವನು? ಗಾಯಗಳನ್ನು ಸಹಿಸಿಕೊಳ್ಳುತ್ತಾ ತನ್ನ ಆಂತರ್ಯವನ್ನು ಕಾಪಾಡಿಕೊಳ್ಳುವವನು ಹೆಚ್ಚಲ್ಲವೇ ಅವನು?

ಖಲೀಲ್ ಗಿಬ್ರಾನನ ಅಲ್‍ಮುಸ್ತಾಫನಂತೆ ಝರತುಷ್ಟ್ರ ಯೌವನದ ಪ್ರೌಡಿಮೆಯ ವಯಸ್ಸಿನಲ್ಲಿ ಮನೆಯನ್ನು ಬಿಟ್ಟು ಬೆಟ್ಟಗುಡ್ಡಗಳ ಕಡೆ ತೆರಳಿ ಏಕಾಂತದಲ್ಲಿ ಹತ್ತು ವರ್ಷಗಳನ್ನು ಕಳೆದ. ಮಿಂಚನ್ನು ಕಂಡುಕೊಂಡ. ಆನಂದದಿಂದಲೇ ಹೊತ್ತುಹೊತ್ತನ್ನೂ ಕಳೆದ. ಕೊನೆಗೊಂದು ದಿನ ತಾನು ಏನನ್ನು ಕಂಡುಕೊಂಡಿದ್ದಾನೆಯೋ, ಅದನ್ನು ಜನರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ. ಏಕೆಂದರೆ, “ಅತಿಯಾಗಿ ಮಧುವನ್ನು ಹೀರಿದ ದುಂಬಿಯು ಆಯಾಸಗೊಂಡಿರುವಂತೆ ನಾನು ಪಡೆದಿರುವ ಅರಿವಿನಿಂದ ನಾನು ಬಳಲಿದ್ದೇನೆ. ಈಗ ಈ ಮಧುಕರ ವೃತ್ತಿಯನ್ನು ಮಾಡಬೇಕು. ಸೂರ್ಯನು ಪಡುವಣದಲ್ಲಿ ಸಂಜೆ ಇಳಿಯುವಂತೆ ಈ ಪ್ರವಾದಿಯೂ, ದಾರ್ಶನಿಕನೂ, ಮಿಂಚನ್ನು ಕಂಡುಕೊಂಡಿರುವ ಅತಿಮಾನವನೂ, ಆನಂದದ ಪ್ರತಿಮೆಯಾಗಿರುವವನೂ ಇಳಿಯಬೇಕಿದೆ. ಏಕೆಂದರೆ, ಇಳಿಯದೇ ಹೋದರೆ ಕೆಳಗಿರುವ ಜನರಿಗೆ ನಾವು ಪಡೆದಿರುವುದನ್ನು ನೀಡಲಾಗುವುದಿಲ್ಲ. ಏರುತ್ತಲೇ ಹೋದರೆ ಏರಲಾಗದವರಿಗೆ ಅತಿಮಾನವನ ಚೈತನ್ಯವನ್ನು ತಗುಲಿಸುವುದಾದರೂ ಹೇಗೆ?” ಎನ್ನುತ್ತಾ ಸೂರ್ಯನನ್ನು ಸಮಾನತೆಯ ಕಣ್ಣು ಎಂದು ಕರೆಯುತ್ತಾನೆ.

ರಾತ್ರಿ ಸುಖವಾದ ನಿದ್ರೆ ಮಾಡಲು ಇಡೀ ದಿನ ಎಚ್ಚರವಾಗಿರಬೇಕು ಎಂಬ ಅರ್ಥದಲ್ಲಿ ನ್ಶೆತಿಕತೆಯನ್ನು ಬೋಧಿಸುವ ಪಂಡಿತರನ್ನು ಕಂಡು ಕಂಡು ಇವನಿಗೆ ನಗುಬರುತ್ತದೆ. ಬದುಕಿನ ಕೊನೆಯಲ್ಲಿ ಶಾಂತಿಗಾಣಲು ಇಡೀ ಬದುಕು ಸದ್ಗುಣಗಳನ್ನು ಪಾಲಿಸುವುದು, ಒಳ್ಳೆಯವನಾಗಿರುವುದಕ್ಕೆ ಹೆಣಗಾಡುವುದು ನಗೆ ತರುವುದು ನೀಷೆಗೆ. ಇಂತಹ ಆಷಾಢಭೂತಿಗಿಂತ ಪ್ರಾಮಾಣಿಕ ವ್ಯಕ್ತಿಯಾಗಿ ಹುಚ್ಚನ್ನು ಹೊಂದಿರುವುದು ಒಂದು ಅನುಗ್ರಹವೆನ್ನುತ್ತಾನೆ ನೀಷೆ.

“ಯಾರೂ ತಿಳಿಯದ ಅನೇಕಾನೇಕ ಬಗೆಯ ಅಂತರಂಗಗಳು ಈ ಲೋಕದಲ್ಲಿವೆ. ಸರಿ, ಇದನ್ನು ತಿಳಿಯಬೇಕೆಂದರೆ ಮೊದಲು ತನ್ನದೇ ಅಂತರಂಗವನ್ನು ರೂಪಿಸಿಕೊಳ್ಳಬೇಕು. ಆಮೇಲೆ ತಿಳಿದುಕೊಳ್ಳಬೇಕು” ಎನ್ನುವ ಝರತುಷ್ಟ್ರ ವ್ಯಕ್ತಿವಾದಿಯಂತೆ ಕಾಣುತ್ತಾನೆ. ಆದರೆ, ಝರತುಷ್ಟ್ರ ಭೇಟಿ ಮಾಡುವ ಯುವಕನಾಗಲಿ, ಇತರರಾಗಲಿ ಒಬ್ಬೊಬ್ಬರೂ ಒಂದೊಂದು ಅರಿಮೆಗಳಿಂದ, ವ್ಯಸನಗಳಿಂದ, ಗೀಳುಗಳಿಂದ; ಒಟ್ಟಾರೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವರು. ಆದರೆ ಝರತುಷ್ಟ್ರ ಅವನ್ನು ಸಮಸ್ಯೆ ಎನ್ನುವುದಿಲ್ಲ. ವಾಸ್ತವ ಎನ್ನುತ್ತಾನೆ. ಆದರೆ ಸಂವಾದಗಳಿಂದ ಸಮಾಲೋಚನೆ ಮಾಡಿ ಅವುಗಳಿಂದ ಹೊರತಾಗಲು ನೆರವಾಗುತ್ತಾನೆ.

ದಸ್ ಸ್ಪೋಕ್ ಝರತುಷ್ಟ್ರ ಜಗತ್ತಿನ ಮಾನವ ಮನಸ್ಥಿತಿಯ ಡೋಲಾಯಮಾನದ ಸ್ಥಿತಿಗತಿಗಳನ್ನು ಒಳಿತು ಕೆಡಕುಗಳಿಂದಾಚೆಗೆ ಮೆಚ್ಚುತ್ತಾ ಬೆತ್ತಲೆಯಾಗಿರುವ ಚೈತನ್ಯವಾಗಿ ನಿಲ್ಲುತ್ತದೆ. ಅದೊಂದು ವಿದ್ಯುತ್ಚಕ್ತಿಯಂತೆ ಬರಿಯ ಚೈತನ್ಯ. ಯಾರು ಯಾವುದಕ್ಕೆ ಬಳಸಿಕೊಳ್ಳುವರೋ ಅವರವರ ವಿವೇಚನೆ ಮತ್ತು ಗ್ರಹಿಕೆಗೆ ಬಿಟ್ಟದ್ದು. ಮೂಲದ್ರವ್ಯದಂತೆ ಒದಗುವ ಯಾವುದೇ ಚೈತ್ಯನ್ಯದ ಜಾಯಮಾನ ಅದೇ ಆಗಿರುತ್ತದೆ.

ಭಗವತ್ಗೀತೆಯನ್ನು ಗೋಡ್ಸೆಯೂ ಓದುತ್ತಿದ್ದ, ಗಾಂಧಿಯೂ ಓದುತ್ತಿದ್ದರು. ಬಾಲ ಗಂಗಾಧರ ತಿಲಕ್ ಓದಿ ರಚಿಸಿದ ಭಾರತೀಯರ ತಾತ್ವಿಕತೆಯು ಡಿ ಡಿ ಕೋಸಾಂಬಿಯವರು ಗೀತೆಯಿಂದ ಗ್ರಹಿಸಿದ್ದಕ್ಕಿಂತ ಭಿನ್ನ. ಆದರೆ ಅವರವರ ಪ್ರಾಮಾಣಿಕ ಬದ್ಧತೆಯಿಂದ ಅವರು ಗ್ರಹಿಸಿದ ತಾತ್ವಿಕತೆಯು ಅವರವರ ನಡೆನುಡಿಗಳಲ್ಲಿ ಪುಟಕಿಟ್ಟುಕೊಳ್ಳುತ್ತದೆ.

ಹಿಟ್ಲರನಿಗೆ ಅರ್ಥವಾದ ನೀಷೆಯ ಅತಿಮಾನವತ್ವವಾದವು ಬೇರೊಬ್ಬರ ಗ್ರಹಿಕೆಯಲ್ಲಿ ಮನುಷ್ಯತ್ವ ಮತ್ತು ಪಶುತ್ವಗಳನ್ನು ಮೀರಿದ ಬಯಲಲ್ಲಿ ಕರುಣೆಯ ಕಣ್ಣ ಮಿಂಚಾದರೆ, ಪಡೆದ ಸಮಭಾವದ ಆನಂದವಾದರೆ ಆಶ್ಚರ್ಯವೇನಿಲ್ಲ. ಏಕೆಂದರೆ ‘ಝರತುಷ್ಟ್ರ ಹಾಗೆಂದದ್ದು’ ಮೂಲದ್ರವ್ಯಗಳನ್ನೇ ಹೊರತು ಸಿದ್ಧವಿಷಯಗಳನ್ನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...