Homeಅಂಕಣಗಳುದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

- Advertisement -
- Advertisement -

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಒಂದು ಕೃತಿ. ಅದು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‍ನಂತಹ ಸರ್ವಾಧಿಕಾರಿಗೆ ಅತಿಮಾನವತೆಯ ಪಾಠ ಮಾಡಿತೇ? ಯಾವ ರಣ-ರತಿಗಳಿಗೆ ಅಮಾನವೀಯ ರೌದ್ರವನ್ನು ತುಂಬಿ ಮನುಕುಲದಲ್ಲಿಯೇ ರಕ್ತದಲ್ಲಿ ಕೆಟ್ಟ ಇತಿಹಾಸ ಬರೆದ ನಾಜಿಗಳಿಗೆ ಪುಕ್ಕಟೆಯಾಗಿ ಈ ದಸ್ ಸ್ಪೋಕ್ ಝರತುಷ್ಟ್ರ ಹಂಚುವಷ್ಟು ಕೇಡಿನ ಸಂಚಾಗಿತ್ತೇ ಈ ಕೃತಿ.

ಇಲ್ಲ. “ಮನುಷ್ಯತ್ವ ಎಂಬುವುದು ಪಶುತ್ವ ಮತ್ತು ಅತಿಮಾನವತ್ವದ ನಡುವಿನ ಆಳವಾದ ಕಣಿವೆಯ ಮೇಲೆ ಕಟ್ಟಲ್ಪಟ್ಟಿರುವ ಹಗ್ಗ. ಇದರ ಮೇಲೆ ನಡೆಯುವುದಾಗಲಿ, ದಾಟುವುದಾಗಲಿ, ಹಿಂದಕ್ಕೆ ತಿರುಗಿ ನೋಡುವುದಾಗಲಿ, ಅಲ್ಲಿಯೇ ನಿಂತು ತಳಮಳಗೊಳ್ಳುವುದಾಗಲಿ ಅಪಾಯಕರ. ಮನುಷ್ಯನೆಂದರೆ ಪಶುತ್ವ ಮತ್ತು ಅತಿಮಾನವತ್ವ; ಈ ಎರಡರ ನಡುವಿನ ಸೇತುವೆಯೇ ಹೊರತು, ಮನುಷ್ಯತ್ವವು ಗುರಿಯೇನಲ್ಲ.” ಹಾಗೆಂದು ಝರತುಷ್ಟ್ರನಿಂದ ಹೇಳಿಸುವ ನೀಷೆಗೆ ಮನುಷ್ಯನೆಂದರೆ ಇಷ್ಟ. ಏಕೆಂದರೆ ಅವನು ಹಿಂದಕ್ಕೂ ಸರಿಯಬಲ್ಲ. ಮುಂದಕ್ಕೂ ಸಾಗಬಲ್ಲ.

ತೂಗಾಡುವ ಲೋಲಕದಂತಿರುವ ಡೋಲಾಯಮಾನದ ಸ್ಥಿತಿಯಲ್ಲಿರುವ ಮನಸ್ಸಿನ ಒಂದೊಂದು ಅತಿ ಸಣ್ಣ ಚಲನೆಯ ಸ್ಥಿತಿಯನ್ನು ಒಪ್ಪುವ ಅಥವಾ ಮೆಚ್ಚುವ ಝರತುಷ್ಟ್ರ ನೀಷೆಯ ಮನಸ್ಸಿನ ತಾತ್ವಿಕ ತಾಕಲಾಟಗಳೇ ಆಗಿವೆ. ಅವನು ಒಳಿತು ಕೆಡಕುಗಳ ಆಚೆಗೆ ಸಾಗುವ ಚೈತನ್ಯ. ಚೈತನ್ಯವು ಇದು ಸಮ್ಮತ, ಇದು ತಿರಸ್ಕೃತವೆಂದು ನೋಡದು. ಇದು ಒಳ್ಳೆಯದು ಅಥವಾ ಕೆಟ್ಟದು ಎಂದು ನಿರ್ಧರಿಸದು. ಇದು ತಮ್ಮವರು, ಅವರು ಪರಕೀಯರೆಂದು ಪಕ್ಷಪಾತ ಮಾಡದು.

ದೇವರು ಸತ್ತ ಎಂದು ತಾನು ಸ್ಪಷ್ಟವಾಗಿ ಅರಿತವನಂತೆ ಘೋಷಿಸುತ್ತಾ ಕ್ರೈಸ್ತ ಧರ್ಮಕ್ಕೆ ವಿರೋಧದ ದಾರಿಯಲ್ಲಿ ನಡೆದವನಂತೆ ಕಾಣುತ್ತಾನೆ. ಆದರೆ, “ಕೆಳಕ್ಕೆ ಬಿದ್ದಿರುವವರನ್ನು ನಾನು ಪ್ರೀತಿಸುತ್ತೇನೆ. ಏಕೆಂದರೆ ಆಚೆಯ ತೀರಕ್ಕಾಗಿ ಹಾತೊರೆಯುತ್ತಿರುವ ಅವರು ಗೌರವಕ್ಕೆ ಪಾತ್ರರಾಗುತ್ತಾರೆ. ಸ್ವರ್ಗಗಳಿಗಾಗಿ ಬೀಳಲು ಸಿದ್ಧವಿರುವ, ತ್ಯಾಗಗಳನ್ನು ಮಾಡುವವರನ್ನು ನಾನು ಮೆಚ್ಚುವುದಿಲ್ಲ” ಎಂದು ಯೇಸುವಿನ ದನಿಯನ್ನು ಪುನರುಚ್ಚರಿಸುತ್ತಾನೆ.

ಜೂಜಾಡುವಾಗ ದಾಳಗಳು ತನ್ನ ಅನುಕೂಲಕ್ಕೆ ಬಿದ್ದರೆ ನಾನು ಮೋಸಗಾರನೇ ಎಂದು ನಾಚುವವನನ್ನು ಮೆಚ್ಚುವ ನೀಷೆಯಲ್ಲಿ ಅಪರಾಧ ಪ್ರಜ್ಞೆಯೂ ಇರುತ್ತದೆ. ಅದನ್ನು ಅಪರಾಧವೆಂದು ಹೇಳಲು ಸಿದ್ಧವಿಲ್ಲದೇ ಅಸ್ತಿತ್ವದಲ್ಲಿ ಘಟಿಸುತ್ತಿರುವ ಒಂದು ವಿದ್ಯಮಾನದಂತೆ ಮೆಚ್ಚುವ ಮನಸ್ಥಿತಿಯೂ ಇದೆ.

ಇಂಥಾ ದ್ವಂದ್ವ ಮನಸ್ಥಿತಿಯನ್ನು ಪ್ರಾಮಾಣಿಕವಾಗಿಯೇ ಹೊಂದಿದ್ದ ನೀಷೆ ಹುಚ್ಚಾಸ್ಪತ್ರೆಯಲ್ಲಿ ದಿನಗಳನ್ನು ಕಳೆಯಬೇಕಾಯಿತು. ಹೊರಗಿದ್ದ ಲೋಕವನ್ನೂ ಮತ್ತು ತಾನು ಕಂಡುಕೊಂಡಿದ್ದ ಲೋಕವನ್ನೂ ಏಕಕಾಲದಲ್ಲಿ ಲೋಲಕದಂತೆ ಡೋಲಾಯಮಾನದ ಸ್ಥಿತಿಯಲ್ಲಿ ನೋಡುತ್ತಿದ್ದ. ಪಕ್ಷಪಾತಗಳಿಲ್ಲದೇ ನೋಡುತ್ತಿದ್ದ. ಒಳಿತು ಕೆಡಕುಗಳ ಭಾವಗಳಿಲ್ಲದೇ ನೋಡುತ್ತಿದ್ದ. ಪಕ್ಷವಹಿಸದ ಕಾರಣ ಅವನ ಮುಕ್ತ ಚೈತನ್ಯವಾಗಿದ್ದ. ಮುಕ್ತವಾದ ಹೃದಯವನ್ನು ಹೊಂದಿದ್ದ. ಸಂಘರ್ಷಪ್ರಿಯ ಸಮಾಜದಲ್ಲಿ ಯಾವುದಾದರೂ ಪಕ್ಷವನ್ನು ವಹಿಸದಿದ್ದರೆ ಅವನನ್ನು ಬೆಂಬಲಿಸಲು ಯಾವ ಪಕ್ಷದವರೂ ಬರುವುದಿಲ್ಲ. ಗಾಯವಾದರೆ ಆಗಲಿ ಎನ್ನುತ್ತಾನೆ. ಹುಚ್ಚನಲ್ಲವೇ ಅವನು? ಗಾಯಗಳನ್ನು ಸಹಿಸಿಕೊಳ್ಳುತ್ತಾ ತನ್ನ ಆಂತರ್ಯವನ್ನು ಕಾಪಾಡಿಕೊಳ್ಳುವವನು ಹೆಚ್ಚಲ್ಲವೇ ಅವನು?

ಖಲೀಲ್ ಗಿಬ್ರಾನನ ಅಲ್‍ಮುಸ್ತಾಫನಂತೆ ಝರತುಷ್ಟ್ರ ಯೌವನದ ಪ್ರೌಡಿಮೆಯ ವಯಸ್ಸಿನಲ್ಲಿ ಮನೆಯನ್ನು ಬಿಟ್ಟು ಬೆಟ್ಟಗುಡ್ಡಗಳ ಕಡೆ ತೆರಳಿ ಏಕಾಂತದಲ್ಲಿ ಹತ್ತು ವರ್ಷಗಳನ್ನು ಕಳೆದ. ಮಿಂಚನ್ನು ಕಂಡುಕೊಂಡ. ಆನಂದದಿಂದಲೇ ಹೊತ್ತುಹೊತ್ತನ್ನೂ ಕಳೆದ. ಕೊನೆಗೊಂದು ದಿನ ತಾನು ಏನನ್ನು ಕಂಡುಕೊಂಡಿದ್ದಾನೆಯೋ, ಅದನ್ನು ಜನರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ. ಏಕೆಂದರೆ, “ಅತಿಯಾಗಿ ಮಧುವನ್ನು ಹೀರಿದ ದುಂಬಿಯು ಆಯಾಸಗೊಂಡಿರುವಂತೆ ನಾನು ಪಡೆದಿರುವ ಅರಿವಿನಿಂದ ನಾನು ಬಳಲಿದ್ದೇನೆ. ಈಗ ಈ ಮಧುಕರ ವೃತ್ತಿಯನ್ನು ಮಾಡಬೇಕು. ಸೂರ್ಯನು ಪಡುವಣದಲ್ಲಿ ಸಂಜೆ ಇಳಿಯುವಂತೆ ಈ ಪ್ರವಾದಿಯೂ, ದಾರ್ಶನಿಕನೂ, ಮಿಂಚನ್ನು ಕಂಡುಕೊಂಡಿರುವ ಅತಿಮಾನವನೂ, ಆನಂದದ ಪ್ರತಿಮೆಯಾಗಿರುವವನೂ ಇಳಿಯಬೇಕಿದೆ. ಏಕೆಂದರೆ, ಇಳಿಯದೇ ಹೋದರೆ ಕೆಳಗಿರುವ ಜನರಿಗೆ ನಾವು ಪಡೆದಿರುವುದನ್ನು ನೀಡಲಾಗುವುದಿಲ್ಲ. ಏರುತ್ತಲೇ ಹೋದರೆ ಏರಲಾಗದವರಿಗೆ ಅತಿಮಾನವನ ಚೈತನ್ಯವನ್ನು ತಗುಲಿಸುವುದಾದರೂ ಹೇಗೆ?” ಎನ್ನುತ್ತಾ ಸೂರ್ಯನನ್ನು ಸಮಾನತೆಯ ಕಣ್ಣು ಎಂದು ಕರೆಯುತ್ತಾನೆ.

ರಾತ್ರಿ ಸುಖವಾದ ನಿದ್ರೆ ಮಾಡಲು ಇಡೀ ದಿನ ಎಚ್ಚರವಾಗಿರಬೇಕು ಎಂಬ ಅರ್ಥದಲ್ಲಿ ನ್ಶೆತಿಕತೆಯನ್ನು ಬೋಧಿಸುವ ಪಂಡಿತರನ್ನು ಕಂಡು ಕಂಡು ಇವನಿಗೆ ನಗುಬರುತ್ತದೆ. ಬದುಕಿನ ಕೊನೆಯಲ್ಲಿ ಶಾಂತಿಗಾಣಲು ಇಡೀ ಬದುಕು ಸದ್ಗುಣಗಳನ್ನು ಪಾಲಿಸುವುದು, ಒಳ್ಳೆಯವನಾಗಿರುವುದಕ್ಕೆ ಹೆಣಗಾಡುವುದು ನಗೆ ತರುವುದು ನೀಷೆಗೆ. ಇಂತಹ ಆಷಾಢಭೂತಿಗಿಂತ ಪ್ರಾಮಾಣಿಕ ವ್ಯಕ್ತಿಯಾಗಿ ಹುಚ್ಚನ್ನು ಹೊಂದಿರುವುದು ಒಂದು ಅನುಗ್ರಹವೆನ್ನುತ್ತಾನೆ ನೀಷೆ.

“ಯಾರೂ ತಿಳಿಯದ ಅನೇಕಾನೇಕ ಬಗೆಯ ಅಂತರಂಗಗಳು ಈ ಲೋಕದಲ್ಲಿವೆ. ಸರಿ, ಇದನ್ನು ತಿಳಿಯಬೇಕೆಂದರೆ ಮೊದಲು ತನ್ನದೇ ಅಂತರಂಗವನ್ನು ರೂಪಿಸಿಕೊಳ್ಳಬೇಕು. ಆಮೇಲೆ ತಿಳಿದುಕೊಳ್ಳಬೇಕು” ಎನ್ನುವ ಝರತುಷ್ಟ್ರ ವ್ಯಕ್ತಿವಾದಿಯಂತೆ ಕಾಣುತ್ತಾನೆ. ಆದರೆ, ಝರತುಷ್ಟ್ರ ಭೇಟಿ ಮಾಡುವ ಯುವಕನಾಗಲಿ, ಇತರರಾಗಲಿ ಒಬ್ಬೊಬ್ಬರೂ ಒಂದೊಂದು ಅರಿಮೆಗಳಿಂದ, ವ್ಯಸನಗಳಿಂದ, ಗೀಳುಗಳಿಂದ; ಒಟ್ಟಾರೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವರು. ಆದರೆ ಝರತುಷ್ಟ್ರ ಅವನ್ನು ಸಮಸ್ಯೆ ಎನ್ನುವುದಿಲ್ಲ. ವಾಸ್ತವ ಎನ್ನುತ್ತಾನೆ. ಆದರೆ ಸಂವಾದಗಳಿಂದ ಸಮಾಲೋಚನೆ ಮಾಡಿ ಅವುಗಳಿಂದ ಹೊರತಾಗಲು ನೆರವಾಗುತ್ತಾನೆ.

ದಸ್ ಸ್ಪೋಕ್ ಝರತುಷ್ಟ್ರ ಜಗತ್ತಿನ ಮಾನವ ಮನಸ್ಥಿತಿಯ ಡೋಲಾಯಮಾನದ ಸ್ಥಿತಿಗತಿಗಳನ್ನು ಒಳಿತು ಕೆಡಕುಗಳಿಂದಾಚೆಗೆ ಮೆಚ್ಚುತ್ತಾ ಬೆತ್ತಲೆಯಾಗಿರುವ ಚೈತನ್ಯವಾಗಿ ನಿಲ್ಲುತ್ತದೆ. ಅದೊಂದು ವಿದ್ಯುತ್ಚಕ್ತಿಯಂತೆ ಬರಿಯ ಚೈತನ್ಯ. ಯಾರು ಯಾವುದಕ್ಕೆ ಬಳಸಿಕೊಳ್ಳುವರೋ ಅವರವರ ವಿವೇಚನೆ ಮತ್ತು ಗ್ರಹಿಕೆಗೆ ಬಿಟ್ಟದ್ದು. ಮೂಲದ್ರವ್ಯದಂತೆ ಒದಗುವ ಯಾವುದೇ ಚೈತ್ಯನ್ಯದ ಜಾಯಮಾನ ಅದೇ ಆಗಿರುತ್ತದೆ.

ಭಗವತ್ಗೀತೆಯನ್ನು ಗೋಡ್ಸೆಯೂ ಓದುತ್ತಿದ್ದ, ಗಾಂಧಿಯೂ ಓದುತ್ತಿದ್ದರು. ಬಾಲ ಗಂಗಾಧರ ತಿಲಕ್ ಓದಿ ರಚಿಸಿದ ಭಾರತೀಯರ ತಾತ್ವಿಕತೆಯು ಡಿ ಡಿ ಕೋಸಾಂಬಿಯವರು ಗೀತೆಯಿಂದ ಗ್ರಹಿಸಿದ್ದಕ್ಕಿಂತ ಭಿನ್ನ. ಆದರೆ ಅವರವರ ಪ್ರಾಮಾಣಿಕ ಬದ್ಧತೆಯಿಂದ ಅವರು ಗ್ರಹಿಸಿದ ತಾತ್ವಿಕತೆಯು ಅವರವರ ನಡೆನುಡಿಗಳಲ್ಲಿ ಪುಟಕಿಟ್ಟುಕೊಳ್ಳುತ್ತದೆ.

ಹಿಟ್ಲರನಿಗೆ ಅರ್ಥವಾದ ನೀಷೆಯ ಅತಿಮಾನವತ್ವವಾದವು ಬೇರೊಬ್ಬರ ಗ್ರಹಿಕೆಯಲ್ಲಿ ಮನುಷ್ಯತ್ವ ಮತ್ತು ಪಶುತ್ವಗಳನ್ನು ಮೀರಿದ ಬಯಲಲ್ಲಿ ಕರುಣೆಯ ಕಣ್ಣ ಮಿಂಚಾದರೆ, ಪಡೆದ ಸಮಭಾವದ ಆನಂದವಾದರೆ ಆಶ್ಚರ್ಯವೇನಿಲ್ಲ. ಏಕೆಂದರೆ ‘ಝರತುಷ್ಟ್ರ ಹಾಗೆಂದದ್ದು’ ಮೂಲದ್ರವ್ಯಗಳನ್ನೇ ಹೊರತು ಸಿದ್ಧವಿಷಯಗಳನ್ನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...