Homeಡೇಟಾ ಖೋಲಿಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

ಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

- Advertisement -
- Advertisement -

ʻʻಕವಿ ಅನ್ನುವವನು ಹಕ್ಕಿ ಇದ್ದಂಗಿರಬೇಕು, ಅವ ಕಾಣಬಾರದು ಆದರ ಅವನ ದನಿ ಕೇಳಸಬೇಕು,ʼʼ ಅಂತ ಮೊನ್ನೆ ತೀರಿಹೋದ ಹಿರಿಯ ಕಲಾವಿದ- ಕವಿ ಚಂದ್ರಕಾಂತ ಕುಸನೂರ ಹೇಳತಿದ್ದರು. ಆ ಮಾತಿಗೆ ತಕ್ಕಂತೆ ಇರುವ ಭಾರತದ ಆರೋಗ್ಯ ಮಂತ್ರಿ ಡಾ. ಹರ್ಷವರ್ಧನ ಅವರು ಮೊನ್ನೆ ಒಂದು ಮುತ್ತಿನಂಥ ಮಾತು ಹೇಳ್ಯಾರ.

ʻಕೀಲಿ ಕಿಟಕ್ (ಲಾಕು ಡೌನು) ಅನ್ನುವುದು ನಮ್ಮ ದೇಶಕ್ಕೆ ಸಾಮಾಜಿಕ ಲಸಿಕೆ ಇದ್ದಂತೆ. ದೇಹಾರೋಗ್ಯಕ್ಕೆ ರಸಾಯನಿಕ ಲಸಿಕೆ ಬೇಕಾದರೆ ಸಮಾಜದ ಆರೋಗ್ಯಕ್ಕೆ ಈ ಲಸಿಕೆ ಬೇಕುʼ ಅಂತ.

ಇದು ಹೌದಾ? ಖರೇನ? ಹೌದು ಅಂತಾದರ ಸರಕಾರದ ಉದ್ದೇಶ ಅರ ಏನು? ಈ ಕೀಲಿ ಕಿಟಕ್ ಟೈಂದಾಗ ಅವರು ಏನು ಮಾಡ್ಯಾರ? ಮುಂದ ಏನು ಮಾಡಬೇಕಂತ ಯೋಜನೆ ಇಟಗೊಂಡಾರ? ಅದರ ತಯಾರಿ ಏನು ನಡದದ? ರಸ್ತೆ ಮ್ಯಾಲೆ ತೊಡರು ಪಟ್ಟಿ ಹಾಕೋದು, ಯಾರರ ಬಡವರು ಹೊಂಟರ ಅವರಿಗೆ ಬಡದು ಎಲಬು ಮುರಿಯೋದು, ಸಾಹುಕಾರರ ಹೊಂಟರ ಕಿಸಿ ಕಿಸಿ ನಗೋದು, ಪುಢಾರಿ ಹೊಂಟರ ಸೆಲ್ಯೂಟು ಹೊಡೆಯೋದು ಇವಿಷ್ಟ ಮಾಡಬೇಕು ಅಂತ ಪೊಲಿಸರು ತಿಳಕೊಂಡಾರ.

ನಾವು ಏನಾದರೂ ಮಾಡಿದಂಗ ತೋರಸಬೇಕು ಅಂತ ಹೇಳಿ ನಗರಸಭೆಯವರು ಎಲ್ಲಿ ಬೇಕಲ್ಲಿ ಫಿನಾಯಿಲು- ನೀರು ಹೊಡೀಲಿಕ್ಕೆ ಹತ್ಯಾರ.

ಖಾಸಗಿ ಡಾಕ್ಟರು ಹೆದರಿಕೊಂಡು ಮನ್ಯಾಗ ಕೂತಾರ, ಸರಕಾರಿ ಡಾಕ್ಟರು (ಪಿಪಿಈ) ವೈಯಕ್ತಿಕ ಸಂರಕ್ಷಣೆ ಸಲಕರಣೆ ಇಲ್ಲದನ ದುಡೀಲಿಕ್ಕೆ ಹತ್ಯಾರ. ಐಎಎಸ್ಸು ಅಧಿಕಾರಿ ಇದು ಇನ್ನೂ ಎಲ್ -ಟೂ ಎರಡನೇ ಮಟ್ಟ. ಇನ್ನೂ ಮೂರು ಮಟ್ಟ ಅದಾವು ಇದು ಮುಗಿಲಾಕ. ಅವು ಮುಗಿಯೋದರಾಗ ನಾವರ ಅದನ್ನ ಮಟ್ಟ ಹಾಕಬೇಕು, ಅಥವಾ ಆದರ ನಮ್ಮನ್ನ ಮಟ್ಟ ಹಾಕಬೇಕು, ಅಂತ ಸಿಗರೇಟು ಸೇದಿಕೊಂತ ಸ್ವಗತದ ಹಂಗ ಮಾತಾಡಾಕ ಹತ್ಯಾರು. ಎಂದಿನಂತೆ `ಒಳ್ಳೇದಾದರ ನಾ ಮಾಡೇನಿ, ಕೆಟ್ಟಾದಾದರ ನನಗ ಸಂಬಂಧನ ಇಲ್ಲ’ ಅಂತ ರಾಜಕಾರಣಿಗಳು ಗುಮ್ಮನ ಗುಸಗನಂಗ ಕೂತಾರ.

ಸತ್ಯ ಅನ್ನೋದು ಮಾತ್ರ ಇವೆಲ್ಲದರ ನಡುವ ಐತಿ.

ಈ ಎಲ್ ಟೂ ಅಂದರೇನು? ಎಲ್ ಒನ್ ಅಂದರ ವಿದೇಶದಿಂದ ಬಂದವರು ರೋಗ ಹರಡೋದು. ಎಲ್ ಟೂ ಅಂದರ ಅವರ ಸಂಪರ್ಕಕ್ಕ ಬಂದವರು ಹರಡೋದು. ಎಲ್ ಥ್ರೀ ಅಂದರ ಸೋಂಕು ಎಲ್ಲಿಂದ ಬಂದದ ಅನ್ನೋದು ಗೊತ್ತಾಗಲಾರದ ಹಂಗ ಇರೋದು. ಎಲ್ ಫೋರು ಅಂದರ ಭಾಳ ಜನರಿಗೆ ಬರೋ ಅಂಟು ರೋಗ. ಎಲ್ ಫೈವ್ ಅಂದರ ಒಂದು ದೇಶ/ ಸಮಾಜ/ ರಾಜ್ಯದಾಗ ಸರಿ ಸುಮಾರು ಎಲ್ಲರಲ್ಲೂ ಇರೋ ರೋಗ.

ಈ ಲೆವಲ್ಲುಗಳನ್ನು ಹೆಂಗ ಗುರತು ಮಾಡ್ಯಾರ ಅನ್ನೋದು ತಿಳಕೊಂಡರ ನಮ್ಮ ಸರಕಾರದ ಲೆವಲ್ಲು ತಿಳೀತದ. ಮೊದಲಿಗೆ ವಿದೇಶ ಪ್ರವಾಸಿಗರ ಲೆಕ್ಕ ನೋಡರಿ. ಜನವರಿ ಒಂದರಿಂದ ಮಾರ್ಚು 23 ರ ತನಕಾ ಸುಮಾರು 15 ಲಕ್ಷ ಮಂದಿ ಭಾರತಕ್ಕ ಬ್ಯಾರ ಬ್ಯಾರೆ ದೇಶದಿಂದಾ ಬಂದಾರ ಅಂತ ಕೇಂದ್ರ ವಿಮಾನಯಾನ ಕಾರ್ಯದರ್ಶಿ ಹೇಳ್ಯಾರ. ಇವರಿಗೆ ಎಲ್ಲಾರಿಗೂ ಕೊರೊನಾ ಟೆಸ್ಟು ಮಾಡೀರೇನು? ಭಾರತದಾಗ ಇಲ್ಲೀ ತನಕಾ ಇದ್ದವರು, ಹೋದವರು ಬಂದವರು ಎಲ್ಲಾ ಸೇರಿ ಬರೇ ನಾಲ್ಕು ಲಕ್ಷ ಟೆಸ್ಟು ಮಾಡ್ಯಾರ ಅಂದ ಮ್ಯಾಲೆ ಇದರ ಹಕೀಕತ್ತು ಗೊತ್ತಾಗತದ.

ಅವರೆಲ್ಲಾರೂ ಗೃಹ ಬಂಧನದಾಗ ಇರಬೇಕು ಅಂತ ಒಂದು ಕಾಯಿದೆ ಮಾಡಿದರು. ಆದರ ಅವರ ಪರೀಕ್ಷೆ ಮಾಡಲಿಲ್ಲ. ಇದು ಒಂದೀಟು ನೆನಪ ಇಟಗೋರಿ.

ಇನ್ನ ಎಲ್ ಟೂ. ಈ ರೋಗ ಈಟ ಭಯಂಕರ ಐತಿ ಅಂತ ಯಾವಾನಿಗೂ ಗೊತ್ತಿರಾಕಿಲ್ಲ. ಇದನ್ನ ಹೆಂಗ ಬಗೀ ಹರಸಬೇಕು ಅಂತ ಸರಕಾರಕ್ಕ ಹೊಳೀಲಿಲ್ಲ.

ಆವಾಗ ಅವರ ಕೈಗೆ ಸಿಕ್ಕವರು ತಬಲೀಘಿ ಜಮಾತಿನವರು. ಅವರು ಸುಮಾರು ಮೂರು ಸಾವಿರ ಜನ ದೆಹಲಿ ನಿಜಾಮುದ್ದೀನ ಮಸೀದಿಯೊಳಗ ಸೇರಿದ್ದರು, ಅದರಾಗ ಮಾರ್ಚು 28ರ ರಾತ್ರಿ ಪೋಲಿಸರು ಬಂದು ರೇಡು ಮಾಡಿ ಒಂದೂವರೆ ಸಾವಿರ ಜನರನ್ನ ಹೊರಗ ಹಾಕಿದರು, ಹೌದ? ಅವರನ್ನ ಅವರವರ ಊರಿಗೆ ಕಳಸದೇ ಅಲ್ಲೇ ದೆಹಲಿಯೊಳಗ ಇಟಗೊಂಡಿದ್ದರ ಅವರು ಸಾವಿರಾರು ಕಿಲೋಮೀಟರು ರೇಲ್ವೇದಾಗ ಪ್ರವಾಸ ಮಾಡೋ ನೌಬತ್ತು ಬರತಿರಲಿಲ್ಲ. ಅವರಿಂದ ಬ್ಯಾರೆದವರಿಗೆ ಸೋಂಕು ತಗಲೋ ಪರಿಸ್ಥಿತಿ ಇರತಿರಲಿಲ್ಲ.

ಈಗ ವಿದೇಶದಿಂದ ಬಂದವರು ಎಷ್ಟು ಜನರಿಗೆ ಸೋಂಕು ಹಚ್ಚಿದರು ಅಂತ ಯಾವಾನಿಗೂ ಗೊತ್ತಿಲ್ಲ. ಆದರ ದೆಹಲಿಗೆ ಹೋದವರಿಗೆ ಎಷ್ಟು ಮಂದೀಗೆ ಬಂದೇತಿ, ಅವರಿಂದ ಎಷ್ಟು ಜನರಿಗೆ ಬಂದೇತಿ ಅನ್ನೋದು ಗೊತ್ತೈತಿ. ಯಾಕಂದರ ಸರಕಾರದವರು ಇವರಿಗೆ ನಿಜಾಮುದ್ದೀನ ಪ್ರವಾಸ/ದೆಹಲಿ ಪ್ರವಾಸದಿಂದ ಬಂದಿದೆ ಅಂತ ಹೇಳತಾರ. ವಿದೇಶಿ ಪ್ರವಾಸದಿಂದ/ವಿದೇಶಕ್ಕ ಹೋದವರ ಸಂಪರ್ಕದಿಂದ ಬಂದೇತಿ ಅಂತ ಹೇಳೋದಿಲ್ಲ. ಬೆಂಗಳೂರು, ಬಾಗಲಕೋಟಿ, ಮಂಗಳೂರಿನ್ಯಾಗ ವಿದೇಶ ಸಂಚಾರಿ ಬಿಳೀ ಕಾಲರಿನ ಐಟಿ/ಬೀಟಿ ಮಂದಿಗೆನೂ ರೋಗ ಬಂದೇತಿ, ಅವರಿಂದ ಅವರ ಮನೀಯವರಿಗೆ ಬಂದೇತಿ. ಗುಜರಾತು-ರಾಜಸ್ಥಾನ- ಮೈಸೂರು -ಮಹಾರಾಷ್ಟ್ರದಾಗ ಚೀನಾಕ್ಕ ಹೋಗಿ ಬಂದವರಿಗೆ ಬಂದೇತಿ. ಅದನ್ನ ಯಾರೂ ಹೇಳಾಕ ಹತ್ತಿಲ್ಲ.

ಇದೂ ನೆನಪ ಇಟಗೋರಿ.

ಅಧಿಕಾರಿಗಳು ಹುಡುಕಿ -ಹುಡುಕಿ ಮುಸಲ್ಮಾನರಿಗೆ ಪರೀಕ್ಷೆ ಮಾಡತಾರು. ಐಸೋಲೇಷನ್ನು – ಕಂಟೇನಮೆಂಟು ಝೋನಿನ್ಯಾಗ ಸಹಿತ ಎತಿಗೊಂಡು ಹೋಗಿ ರಾಂಡಮ್ ಟೆಸ್ಟ (ಯಾದೃಶ್ಚಿಕ/ ಅನಿಶ್ಚಿತ ಪರೀಕ್ಷೆ)ಮಾಡಾಕ ಹತ್ಯಾರು. ಕಂಟೇನುಮೆಂಟು ಝೋನಿನ್ಯಾಗ ಯಾರೂ ಹೊರಗ ಹೋಗಂಗಿಲ್ಲ, ಒಳಗ ಬರಂಗಿಲ್ಲ. ಹಂಗಾರ ಅವರಿಗೆ ಪರೀಕ್ಷೆ ಅನಿಶ್ಚಿತ ಪರೀಕ್ಷೆ ಮಾಡೋ ಜರೂರತ್ತು ಏನೈತಿ? ಕೆಲವು ಜಿಲ್ಲೆಯೊಳಗ ಅಂತೂ ಇನ್ನು ಮುಂದೆ ಕಂಟೇನುಮೆಂಟ ಆಗಬಹುದಾದ ಪ್ರದೇಶ ಅಂತ ಸುದ್ದಿ ಬರತಾವು. ಕೀಲಿ ಕಿಟಕ್ಕಿನ ನಂತರ ದೇಶದಾಗ ನೂರಾರು ಊರಾಗ ಸಾವಿರಾರು ಜಾತ್ರಿ ಆಗ್ಯಾವು. ಅದರಾಗ ಲಕ್ಷಾಂತರ ಮಂದಿ ಭಾಗವಹಿಸಿದಾರ. ಆದರ ಅವರೆಲ್ಲಾರಿಗೂ ಟೆಸ್ಟು ಮಾಡ್ಯಾರೇನು? ಇಲ್ಲ.

ಇನ್ನ ಇದು ಮಸಲ್ಮಾನರನ್ನ ನೇರವಾಗಿ ಸಂಬಂಧಿಸಿದ ರೋಗ, ಅವರು ಬೇಕಂತಲೇ ಬ್ಯಾರೆದವರಿಗೆ ಹಚ್ಚಾಕುಂತಾರು, ಅವರು ಟೆಸ್ಟು ಮಾಡಿಸಿಕೊಳ್ಳಾಕ ಒಲ್ಲೆ ಅಂತಾರು, ಡಾಕ್ಟರಿಗೆ ಹೊಡ್ಯಾಕ ಕುಂತಾರು ಅನ್ನೋದು ಖರೇ ಆದರ, ಅದಕ್ಕ ಸರಕಾರ ಮಾಹಿತಿ ನೀಡಿ ಜಾಗೃತಿ ಕೊಡೋ ಕೆಲಸ ಮಾಡಬೇಕಾಗಿತ್ತು. ಅದಕ್ಕ ಬೇಕಾದ ಸಾಹಿತ್ಯ ಉರ್ದು- ಬ್ಯಾರಿ- ನವಾಯಿತಿ, ಮುಂತಾದ ಆ ಜನಾಂಗದ ಜನಾ ಮಾತಾಡೋ ಭಾಷೆದಾಗ ತಯಾರು ಮಾಡಬೇಕಾಗಿತ್ತು. ಹಂಗ ಮಾಡೇತೇನು?

ಅವರ ಸಮಾಜದ ರಾಜಕೀಯ- ಧಾರ್ಮಿಕ- ಸಾಂಸ್ಕೃತಿಕ ನಾಯಕರ ಕೂಡಾ ಕುತಗೊಂಡ ಮಾತಾಡಿ ನಿಮ್ಮ ಜನರಿಗೆ ನೀವು ಮನ ಒಲಸರಿ ಅಂತ ಹೇಳಬೇಕಾಗಿತ್ತು. ಹೇಳ್ಯಾರೇನು?

ಇನ್ನ ಮ್ಯಾಲೆ ಎಲ್ ಥ್ರೀದಾಗ ಜಾಸ್ತಿ ಜನರಿಗೆ ರೋಗ ಬಂದರ ಅದರ ಮೂಲ ಗೊತ್ತಿಲ್ಲ ಅಂತ ಅಂದು ಕೈ ತೊಳಕೊಂಡ ಬಿಡೋದು. ಗೈರು ಮುಸ್ಲೀಮರು ಯಾರರ ವಿದೇಶ ಪ್ರವಾಸ, ದೇವಸ್ಥಾನ, ಜಾತ್ರಿ, ಗುರುದ್ವಾರ, ಚರ್ಚು -ಬೂದಿ ಬಾಬಾಗಳ ಕಡೆ ಹೋದವರು ಇದ್ದರ, ಅವರಿಗೆ ಅಲ್ಲಿಗೆ ಹೋಗಿದ್ದಕ್ಕ ರೋಗ ಬಂದಿದ್ದರ ಅದನ್ನ ಈ ಮೂಲದಿಂದ ಬಂದವರು ಅಂತ ಗುರುತು ಹಿಡಯಲಾರದೇ ʻಅಸ್ಪಷ್ಟ ಮೂಲಗಳುʼ, ʻಅನಾಮಿಕ ಮೂಲಗಳುʼ ಅಂತ ಹೇಳಿ ಬಿಡೋದು. ಆಳುವ ಪಕ್ಷದ ಐಟಿ ಸೆಲ್ಲಿನ್ಯಾಗ ಇವರ ಮನಿ ಬಾಜೂಕ ಮಸೀದಿ ಇತ್ತು, ಇವರ ಮನ್ಯಾಗ ಕೆಲಸಾ ಮಾಡೋರು ಮುಸಲ್ಮಾನರು, ಇವರ ಹೊಲದಾಗ ದುಡಿಯೋರು ಮುಸಲ್ಮಾನರು- ಇವರು ಬೆಳಿಯೋ ಕಾಯಿ ಪಲ್ಯಾ ಖರೀದಿ ಮಾಡೋರು ಮುಸಲ್ಮಾನರು. ಅವರಿಂದ ಇವರಿಗೆಲ್ಲಾ ಬಂದೇತಿ ಅಂತ ಒಂದು ನೂರು ವರ್ಷದ ಹಳೇ ಬ್ಲಾಕ್ ಅಂಡ ವೈಟು ವಿಡಿಯೋ ಬಿಟ್ಟು ನಂಬಿಸಿ ಬಿಡೋದು. ಇದು ಎಲ್ ಥ್ರೀ ಲೆಕ್ಕಾಚಾರ.

ಇದನ್ನ ನೆನಪ ಇಟಗೋರಿ.

ಯಾರ ಎನ ತಿಪ್ಪರಲಾಗಾ ಹೊಡದರೂ ಸಹಿತ ಎಲ್ ಫೋರು ತಪ್ಪಸಲಿಕ್ಕೆ ಆಗಂಗಿಲ್ಲ ಅಂತ ವಿಜ್ಞಾನಿಗಳು ಹೇಳಾಕ ಹತ್ಯಾರು. ಆವಾಗ ಸೋಂಕು ಮತ್ತು ಸಾವಿನ ಸಂಖ್ಯೆ ಎಷ್ಟೋ ಪಟ್ಟು ಹೆಚ್ಚು ಆಗತೇತಿ ಅಂತಾರು. ಆಗ ಸತ್ತವರು ಸಾಯಲಿ, ಇಷ್ಟು ಜನಾ ಮುಂಬಯಿದಾಗ ಪ್ರವಾಹ ಬಂದಾಗ ಸಾಯತಾರು ಅಂತ ಸುಮ್ಮನಾಗಿ ಬಿಡೋದು. ಅಥವಾ ಸುಮಾರು ಎರಡು ಲಕ್ಷ ಜನಾ ಸತ್ತರು ಅಂದರ ನಾವು ಒಳ್ಳೇ ರೀತಿಯಿಂದ ರೋಗ ನಿರ್ವಹಣೆ ಮಾಡೇವಿ ಅಂತ ಅರ್ಥ ಅಂತ ಟ್ರಂಪಣ್ಣನವರ ಹೇಳಿದಂಗ ಮಾಡಿ ಕಿರು ನಗೆ ಸೂಸೋದು.

ಕಡೀಕೆ ಎಲ್ ಫೈವು. ಅದರಾಗ ಶೇಕಡಾ 80- 90 ಜನರ ದೇಹದಾಗ ಈ ವೈರಸ್ಸು ಇರತೇತಿ. ಆದರ ಸಾವಿನ ಸಂಖ್ಯೆ ಕಮ್ಮಿ ಇರತೇತಿ. ಒಂದು ಉದಾಹರಣೆ ಕೊಡಬೇಕು ಅಂದರ ಕ್ಯಾನ್ಸರ ರೋಗದಿಂದ ಭಾರತದಾಗ 1,300 ಜನಾ ದಿನಾ ಸಾಯತಾರು. ಕರೋನಾ ಇದನ್ನಂತೂ ಹಿಂದ ಹಾಕಲಿಕ್ಕೆ ಸಾಧ್ಯ ಇಲ್ಲ. ಹಿಂಗಾಗಿ ಸಮರ್ಥ ನಿರ್ವಹಣಾಕಾರರಾಗಿ, ವಿಶ್ವಗುರುವಾಗಿ, ಹೊಸಾ ಷೇರವಾನಿ ಪೈಜಾಮಾ ಧರಿಸಿ ಪೋಸು ಕೊಡೋದು.

ಇವಿಷ್ಟು ನಮ್ಮ ಸರಕಾರದ ಲೆವಲ್ಲಿನ ವಿಚಾರ. ಇಷ್ಟೊತ್ತಿನ ತನಕಾ ಹೇಳಿದ್ದು ರೋಗದ ಲೆವಲ್ಲಿನ ಬಗ್ಗೆ. ಆಳುವ ಪಕ್ಷದ ಚುನಾವಣಾ ತಂತ್ರದ ಹಂತಗಳು ಅಂತ ತಿಳದ-ಗಿಳದೀರಿ ಮತ್ತ ಎಲ್ಲರ ನೀವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...