Homeಅಂಕಣಗಳು`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

- Advertisement -
- Advertisement -

ಯಾವುದೇ ಒಂದು ಆರೋಪ ಕೇಳಿಬಂದಾಗ ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಿಯೇ ನೋಡಬೇಕು ಎಂಬುದು ಸಾರ್ವಜನಿಕ ಜೀವನದಿಂದ ನಾವು ಕಲಿತಿರುವ ಮೊದಲ ಪಾಠ. ಗಂಭೀರ ಆರೋಪಗಳು ನಮ್ಮ ಸಾರ್ವಜನಿಕ ಜೀವನದ, ಅದಕ್ಕೂ ಮಿಗಿಲಾಗಿ ರಾಜಕೀಯ ಜೀವನದ ಅವಿಭಾಜ್ಯ ಅಂಗದಂತಾಗಿ ಹೋಗಿವೆ. ನಮ್ಮ ಸುತ್ತಮುತ್ತಲ ಜನರೊಂದಿಗೆ ಒಡನಾಡುವಾಗಲೇ ಇಂಥ ಆರೋಪಗಳ ಸುಳಿದುಬಿಡುತ್ತವೆ.
ಆರೋಪಗಳಿಗೆ ಗುರಿಯಾದವನು ಗಂಡಸಾಗಿದ್ದರೆ ‘ಅವನು ಹಣ ಕಬಳಿಸಿದ್ದಾನೆ’ ಎಂದು ಹಾಗೂ ಹೆಣ್ಣಾಗಿದ್ದರೆ ‘ಅವಳು ನಡತೆಗೆಟ್ಟವಳು’ ಎಂದು ಹೇಳುವುದು ಸಾಮಾನ್ಯ. ಇದರ ಪ್ರತಿಕ್ರಿಯೆಯಾಗಿ ‘ಮೊದಲು ಸಾಕ್ಷಿ ತೋರಿಸಿ’ ಎನ್ನುವುದು ಕೂಡ ಸಹಜವಾಗಿಬಿಟ್ಟಿದೆ. ಆದುದರಿಂದ ಜಾಗತಿಕ ಮಟ್ಟದಲ್ಲಿ ಶೋಷಕರು ಬಹಿರಂಗಗೊಳ್ಳುತ್ತಿರುವಾಗೆಲ್ಲ ನಾನು ದ್ವಂದ್ವದಲ್ಲಿ ಬೀಳುತ್ತೇನೆ. ಇಲ್ಲಿನ ಎರಡು ನೈತಿಕ ಆದರ್ಶಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಮೊದಲನೆಯದಾಗಿ, ನಮ್ಮ ಸಾರ್ವಜನಿಕ ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಲೈಂಗಿಕ ಶೋಷಣೆ ವ್ಯಾಪಿಸಿಕೊಂಡಿರುವುದನ್ನು ನೋಡಬೇಕಾದ ದಯನೀಯ ಸ್ಥಿತಿ ನಮ್ಮೆದುರಿಗಿದೆ. ಆದ್ದರಿಂದ ಸಾರ್ವಜನಿಕವಾಗಿ ಇಂಥವು ಬಹಿರಂಗಗೊಳ್ಳುವುದು ಅತ್ಯವಶ್ಯಕ. ಆರೋಪಿಗಳು ಸಿಕ್ಕುಬಿದ್ದಮೇಲೂ ಖುಲ್ಲಂ ಖುಲ್ಲ ತಿರುಗಾಡುತ್ತಿರುವುದು ಯಾವುದೇ ರಾಷ್ಟ್ರೀಯ ಕಳಂಕಕ್ಕೆ ಸಮನಾದ ವಿಚಾರವೇ ಸರಿ. ಹೀಗಾಗಿ, ಈ ಪಿಡುಗು ದೊಡ್ಡ ಪ್ರಮಾಣದಲ್ಲಿ ಬಹಿರಂಗಗೊಂಡು, ಸ್ವಲ್ಪ ನಾಟಕೀಯ ತಿರುವು ಪಡೆದುಕೊಂಡರೆ ಇಂಥಾ ಅನೇಕ ಪ್ರಕರಣಗಳು ಬೆಳಕಿಗೆ ಬರುವಂತಾಗುತ್ತದೆ; ಜನತೆಗೆ ಈ ಕುರಿತು ಪ್ರಜ್ಞೆ ಮೂಡುವಂತಾಗುತ್ತದೆ.

ಎರಡನೆಯದು, ನಿಷ್ಪಕ್ಷಪಾತ ತನಿಖೆಯ ಅವಶ್ಯಕತೆಯಿದೆ ಎನ್ನುವುದು. ಘಟನೆ ಜರುಗಿ ಎಷ್ಟೋ ವರ್ಷಗಳ ಬಳಿಕ ಯಾವುದೇ ವ್ಯಕ್ತಿಯ ವಿರುದ್ಧ ಗಂಭೀರ ಆರೋಪ ಮಾಡಿದರೆ ಅದಕ್ಕೆ ಗಟ್ಟಿ ಸಾಕ್ಷಿ ಇಲ್ಲದ ಸ್ಥಿತಿ ಉಂಟಾಗಿ ನಿಷ್ಪಕ್ಷಪಾತತೆ ಮತ್ತು ನ್ಯಾಯದ ಮೂಲ ಸಿದ್ಧಾಂತದ ಉಲ್ಲಂಘನೆಯಾಗುತ್ತದೆ. ಇದರ ದುರುಪಯೋಗ ಮಾಡುವ ಸಾಧ್ಯತೆಯಿರುತ್ತದೆ ಮತ್ತು ಇದನ್ನೇ ಮಾಡಲಾಗುತ್ತಿದೆ. ಆದ್ದರಿಂದ ಕಳೆದ ವರ್ಷ ಕೆಲ ಅಕಾಡೆಮಿಕ್ ಅಪರಾಧಿಗಳ ಹೆಸರುಗಳನ್ನು ಒಗ್ಗೂಡಿಸಿ ಸಾರ್ವತ್ರಿಕಗೊಳಿಸಿದಾಗ, ನಾನು ಇದರೊಂದಿಗೆ ನಿಲ್ಲುವುದು ಸಾಧ್ಯವಾಗಿರಲಿಲ್ಲ. ಮುಂದೆ, ಕೆಲವು ಸ್ತ್ರೀವಾದಿಗಳು ಇಂಥಾ ವಿಚಾರದಲ್ಲಿ ಗಂಭೀರವಾಗಿ ಉತ್ತರಿಸುವ ಬೇಡಿಕೆಯಿಟ್ಟಾಗಷ್ಟೇ ನನಗೆ ಈ ಹೊಯ್ದಾಟದಿಂದ ಹೊರ ಬರುವುದು ಸಾಧ್ಯವಾಯಿತು.
ಆದರೆ ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಸದ್ಯದ ಅಲೆ ಈ ವಿಚಾರಕ್ಕಿಂತ ಕೊಂಚ ಬೇರೆಯಾಗಿದೆ. ಅದು ಉನ್ನತ ಪದವಿಗಳಲ್ಲಿ ಕುಳಿತವರು, ಮಾಧ್ಯಮಗಳ ಗೌರವಾನ್ವಿತ ವ್ಯಕ್ತಿಗಳೂ ತಮ್ಮ ಸ್ಥಾನದ ದುರುಪಯೋಗ ಮಾಡಿ ಮಹಿಳೆಯರನ್ನು ಪೀಡಿಸಿದ್ದಾರೆ, ಅವರನ್ನು ಕೀಳಾಗಿ ಕಾಣಲಾಗಿದೆ ಮತ್ತು ಅವರ ಘನತೆಯನ್ನು ಉಲ್ಲಂಘಿಸಲಾಗಿದೆ ಎನ್ನುವುದು.
ಭಾರತದಲ್ಲಿ #ಮೀಟೂ ಅನಾಮಧೇಯ ಸೆರಗಿನಲ್ಲಿ ಅಡಗಿಕೊಂಡಿಲ್ಲ. ಮಹಿಳೆಯರು ಬಹಿರಂಗವಾಗಿ ಹೊರಬರುತ್ತಿದ್ದಾರೆ, ತಮ್ಮ ಪರಿಚಯವನ್ನು ಸಾರ್ವಜನಿಕಗೊಳಿಸುತ್ತಿದ್ದಾರೆ, ಅಪರಾಧಿಗಳ ಹೆಸರುಗಳನ್ನು ಹೇಳುತ್ತಿದ್ದಾರೆ ಮತ್ತು ಅವರಾಡುತ್ತಿರುವ ಮಾತುಗಳಿಗಾಗಿ ತಲೆದಂಡ ತೆರಲು ಅವರು ತಯಾರಾಗಿದ್ದಾರೆ. ಅವರ ಸಾಹಸಗಳನ್ನು ನೋಡುವಾಗ, ಅವರು ಈ ವಿಚಾರವಾಗಿ ದೃಢನಿಲುವು ತಳೆದಿದ್ದಾರೆ, ಅವರನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅವರ ಕೈಯಲ್ಲಿ ಕೇವಲ ಅವಸರದ ಆರೋಪಗಳಿಲ್ಲ ಎನ್ನುವ ಅಭಿಪ್ರಾಯ ತಳೆಯಬೇಕಾಗುತ್ತದೆ.
ಕಳೆದ ವಾರ ಈ ಕುರಿತು ನಾವು ಓದಿದ ಬಹುತೇಕ ಸುದ್ದಿಗಳು ಸವಿಸ್ತಾರವಾಗಿದ್ದು ಬಹು ಗಂಭೀರ ಸ್ವರೂಪದವುಗಳಾಗಿವೆ, ಮಹಿಳೆಯರು ಹೇಳುತ್ತಿರುವಂತಹ ಸನ್ನಿವೇಶಜನ್ಯ ಸಾಕ್ಷ್ಯಗಳು ಈ ಆರೋಪಗಳನ್ನು ಪುಷ್ಟೀಕರಿಸುತ್ತಿವೆ. ಈ ಸಾಕ್ಷ್ಯಾಧಾರಗಳನ್ನು ನಿಖರ ಸಾಕ್ಷಿಯಾಗಿ ನ್ಯಾಯಾಲಯ ಒಪ್ಪಲಿಕ್ಕಿಲ್ಲ. ಆದರೆ ಇವುಗಳನ್ನು ನಂಬಿಕೆಗೆ ಅರ್ಹವಲ್ಲ ಹಾಗೂ ಪ್ರಾಮಾಣಿಕವಲ್ಲ ಎನ್ನಲು ಸಂವೇದನಾಶೂನ್ಯರಾಗಬೇಕಾಗುತ್ತದೆ. ಈ ಸತ್ಯದ ಜೊತೆಗೆ ಮಹಿಳೆಯರು ಬಲಾಢ್ಯ ವ್ಯಕ್ತಿಗಳ ವಿರುದ್ಧ ನಿಂತಿದ್ದಾರೆ, ಅದು ನಿಮ್ಮ ಮನಸ್ಸನ್ನು ತಟ್ಟಲಾರದು ಎಂದಾದರೆ ನೀವು ದೂಷಣೆಗೆ ಅರ್ಹರೇ ಸರಿ.
ಇಂಥ ನೋವಿನ ಕಥೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿಡುವುದು, ಪ್ರತಿಷ್ಠಿತರ ಹೆಸರುಗಳನ್ನೆತ್ತಿ ಛೀಮಾರಿ ಹಾಕುವುದರಿಂದ ನ್ಯಾಯ ಪಡೆಯಬಹುದೆ? ನನ್ನ ಉತ್ತರ ಹೌದು. ಇವರಲ್ಲಿ ಹೆಚ್ಚಿನ ಮಹಿಳೆಯರು ಜ್ಯೂನಿಯರ್ ಉದ್ಯೋಗಿಗಳಾಗಿದ್ದರು ಮತ್ತು ಅಲ್ಲಿ ತಮ್ಮ ಪುರುಷ ಸಹೋದ್ಯೋಗಿಗಳಿಂದ ಕಿರುಕುಳವನ್ನು ಸಹಿಸಿದ್ದಾರೆಂದರೆ ಅವರಿಗೆ ದುಪ್ಪಟ್ಟು ನಷ್ಟ ಸಹಿಸಬೇಕಾದ ಬಿಕ್ಕಟ್ಟಿನ ಸನ್ನಿವೇಶವಿತ್ತು ಎಂದರ್ಥ.
ಕೆಸರೆರಚುವ ಪರವಾನಗಿ ಸಿಕ್ಕಂತಾಗುತ್ತದೆ ಎಂಬುದು ಇಲ್ಲಿನ ಅಪಾಯ. ಪ್ರತಿಯೊಂದು ಪ್ರೇಮ ಪ್ರಸಂಗ, ವಿಕೃತವಾದ ಪ್ರತಿಯೊಂದು ಸಂಬಂಧ, ಎಲ್ಲಾ ದುಡುಕುತನ, ಮೂರ್ಖತನ, ಕೊನೆಗೆ ಭ್ರಾಂತಿಯೂ ಕೂಡ ಪ್ರಹಾರದ ರೀತಿಯಲ್ಲಿ ಬಳಸುವ ಸಾಧ್ಯತೆಯಿದೆ. ಹೌದು, ಈ ಸಾಮೂಹಿಕ ಮತ್ತು ಸಾರ್ವಜನಿಕ ‘ಸತ್ಯೋದ್ಘಾಟನೆ’ಗೆ ತನ್ನದೇ ಮಾನದಂಡ ಹಾಗೂ ಪ್ರೋಟೋಕಾಲ್ ವಿಕಸಿತಗೊಳಿಸಬೇಕಾಗುತ್ತದೆ, ಯಾರೂ ಇದರ ದುರುಪಯೋಗ ಮಾಡದಂತೆ. ಆದರೆ ಭಾರತದಲ್ಲಿ #ಮೀಟೂ ಸಂದರ್ಭವು ತೆರೆದಿರುವ ಅಪರೂಪದ ಬೆಳಕಿಂಡಿಯನ್ನು ಮುಚ್ಚಲು ಯಾರಿಗೂ ಅಧಿಕಾರವಿಲ್ಲ.
ಇದು ನಮ್ಮ ಜನಪ್ರಿಯ ಸಂಸ್ಕೃತಿಯನ್ನು ಬದಲಿಸುವ ಆಂದೋಲನವಾಗಬಹುದೇ ಎಂಬುದು ಇದು ಇನ್ನಷ್ಟು ಪ್ರೋತ್ಸಾಹ, ಪ್ರಚಾರ ಪಡೆದುಕೊಳ್ಳುತ್ತದೋ ಅಥವಾ ಇದನ್ನು ಹತ್ತಿಕ್ಕಲಾಗುತ್ತದೋ ಎಂಬುದರ ಮೇಲೆ ನಿಂತಿದೆ.
ಆದರೆ ಇಂದು ಮಹಿಳೆಯರು ಸರ್ವವ್ಯಾಪಿಯಾಗಿರುವ ಅಶ್ಲೀಲ ಪ್ರಪಂಚದಲ್ಲಿ ಪ್ರತಿನಿತ್ಯ ಭೀಷಣ ರೂಪದ ಲೈಂಗಿಕ ದೌರ್ಜನ್ಯಗಳಿಗೆ ಈಡಾಗುತ್ತಲೇ ಇದ್ದಾರೆ. ಅವರ ಪರಿಸ್ಥಿತಿಯನ್ನು ಕೇಳುವವರೇ ಇಲ್ಲ. ಈ ಆಂದೋಲನವು ಮಹಾನಗರಗಳಿಂದ ಕುಗ್ರಾಮಗಳವರೆಗೆ ವಿಸ್ತರಿಸಬೇಕು, ಮಾಧ್ಯಮಗಳಿಂದ ಹಿಡಿದು ಬ್ಯುಸಿನೆಸ್ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದವರೆಗೆ, ಸಂಘಟಿತ ಕ್ಷೇತ್ರದಿಂದ ಅಸಂಘಟಿತ ಕ್ಷೇತ್ರಗಳತನಕ, ಹಾಗೆಯೇ ಸಾರ್ವಜನಿಕ ಜೀವನದಿಂದ ಬಿಡಿಬಿಡಿ ಕೌಟುಂಬಿಕ ಲೈಂಗಿಕ ದೌರ್ಜನ್ಯಗಳ ತನಕ ವ್ಯಾಪಿಸಬೇಕಿದೆ. ಹೀಗಾದಲ್ಲಿ ಭಾರತದಲ್ಲಿ #ಮೀಟೂ ಚಳವಳಿ ನಮ್ಮ ಲೈಂಗಿಕ ಸಂವೇದನಾಶೀಲತೆ ಮತ್ತು ಸಾಮುದಾಯಿಕ ಕಟ್ಟುಪಾಡುಗಳನ್ನು ಪುನರ್ನಿರ್ಮಿಸಬಲ್ಲದು.
ನಾನು ಭಾರತದಲ್ಲಿ #ಮೀಟೂ ವಿಚಾರದಲ್ಲಿ ಓದುತ್ತಿರುವಾಗಲೇ ಎರಡು ಸುದ್ದಿಗಳು ಗಮನ ಸೆಳೆದವು. ಬಿಹಾರದ ಕೆಲ ಶಾಲಾ ವಿದ್ಯಾರ್ಥಿನಿಯರು ಹಲ್ಲೆಗೊಳಗಾಗಿದ್ದರೂ ಲೈಂಗಿಕ ದೌರ್ಜನ್ಯವನ್ನು ವಿರೋಧಿಸುವ ಸಾಹಸ ಮಾಡಿದ್ದಾರೆ. ಟ್ಯಾಗೋರರ ಕನಸಿನ ವಿಶ್ವವಿದ್ಯಾಲಯವಾದ ವಿಶ್ವಭಾರತಿಯಲ್ಲಿ ಎಂಥಾ ಅಕಾಡೆಮಿಕ್ ವ್ಯಕ್ತಿಯನ್ನು ನಮ್ಮ ಭಾರತದ ರಾಷ್ಟ್ರಪತಿಯವರು ಉಪಕುಲಪತಿಯನ್ನಾಗಿ ನಿಯುಕ್ತಗೊಳಿಸಿದ್ದಾರೆಂದರೆ ಆ ವ್ಯಕ್ತಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಸಿಕ್ಕುಬಿದ್ದು ಶಿಕ್ಷೆಗೊಳಗಾಗಿದ್ದಾರೆ.
ಈ ಎರಡು ಉದಾಹರಣೆಗಳು ಯಾವ ಕಪ್ಪು ಕಲೆಗಳ ಕಡೆಗೆ ಬೊಟ್ಟುಮಾಡುತ್ತವೆಯೋ ಅತ್ತ #ಮೀಟೂ ಚಳವಳಿಯ ಗಮನ ಹರಿಯಲೇಬೇಕಾಗಿದೆ. ಈಗ ನಾವು ಸಾರ್ವಜನಿಕವಾಗಿ ದಿಟ್ಟ ದನಿಯೆತ್ತಿರುವ ಆ ಮಹಿಳೆಯರಿಗೂ ಹಾಗೂ ದನಿ ಎತ್ತವಂತೆ ಮಾಡಿದ #ಮೀಟೂ ಅಭಿಯಾನದಲ್ಲಿ ಭಾಗಿಯಾದ ಎಲ್ಲರಿಗೂ ಸಲಾಮು ಹೇಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...