Homeಅಂಕಣಗಳು`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

- Advertisement -
- Advertisement -

ಯಾವುದೇ ಒಂದು ಆರೋಪ ಕೇಳಿಬಂದಾಗ ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಿಯೇ ನೋಡಬೇಕು ಎಂಬುದು ಸಾರ್ವಜನಿಕ ಜೀವನದಿಂದ ನಾವು ಕಲಿತಿರುವ ಮೊದಲ ಪಾಠ. ಗಂಭೀರ ಆರೋಪಗಳು ನಮ್ಮ ಸಾರ್ವಜನಿಕ ಜೀವನದ, ಅದಕ್ಕೂ ಮಿಗಿಲಾಗಿ ರಾಜಕೀಯ ಜೀವನದ ಅವಿಭಾಜ್ಯ ಅಂಗದಂತಾಗಿ ಹೋಗಿವೆ. ನಮ್ಮ ಸುತ್ತಮುತ್ತಲ ಜನರೊಂದಿಗೆ ಒಡನಾಡುವಾಗಲೇ ಇಂಥ ಆರೋಪಗಳ ಸುಳಿದುಬಿಡುತ್ತವೆ.
ಆರೋಪಗಳಿಗೆ ಗುರಿಯಾದವನು ಗಂಡಸಾಗಿದ್ದರೆ ‘ಅವನು ಹಣ ಕಬಳಿಸಿದ್ದಾನೆ’ ಎಂದು ಹಾಗೂ ಹೆಣ್ಣಾಗಿದ್ದರೆ ‘ಅವಳು ನಡತೆಗೆಟ್ಟವಳು’ ಎಂದು ಹೇಳುವುದು ಸಾಮಾನ್ಯ. ಇದರ ಪ್ರತಿಕ್ರಿಯೆಯಾಗಿ ‘ಮೊದಲು ಸಾಕ್ಷಿ ತೋರಿಸಿ’ ಎನ್ನುವುದು ಕೂಡ ಸಹಜವಾಗಿಬಿಟ್ಟಿದೆ. ಆದುದರಿಂದ ಜಾಗತಿಕ ಮಟ್ಟದಲ್ಲಿ ಶೋಷಕರು ಬಹಿರಂಗಗೊಳ್ಳುತ್ತಿರುವಾಗೆಲ್ಲ ನಾನು ದ್ವಂದ್ವದಲ್ಲಿ ಬೀಳುತ್ತೇನೆ. ಇಲ್ಲಿನ ಎರಡು ನೈತಿಕ ಆದರ್ಶಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಮೊದಲನೆಯದಾಗಿ, ನಮ್ಮ ಸಾರ್ವಜನಿಕ ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಲೈಂಗಿಕ ಶೋಷಣೆ ವ್ಯಾಪಿಸಿಕೊಂಡಿರುವುದನ್ನು ನೋಡಬೇಕಾದ ದಯನೀಯ ಸ್ಥಿತಿ ನಮ್ಮೆದುರಿಗಿದೆ. ಆದ್ದರಿಂದ ಸಾರ್ವಜನಿಕವಾಗಿ ಇಂಥವು ಬಹಿರಂಗಗೊಳ್ಳುವುದು ಅತ್ಯವಶ್ಯಕ. ಆರೋಪಿಗಳು ಸಿಕ್ಕುಬಿದ್ದಮೇಲೂ ಖುಲ್ಲಂ ಖುಲ್ಲ ತಿರುಗಾಡುತ್ತಿರುವುದು ಯಾವುದೇ ರಾಷ್ಟ್ರೀಯ ಕಳಂಕಕ್ಕೆ ಸಮನಾದ ವಿಚಾರವೇ ಸರಿ. ಹೀಗಾಗಿ, ಈ ಪಿಡುಗು ದೊಡ್ಡ ಪ್ರಮಾಣದಲ್ಲಿ ಬಹಿರಂಗಗೊಂಡು, ಸ್ವಲ್ಪ ನಾಟಕೀಯ ತಿರುವು ಪಡೆದುಕೊಂಡರೆ ಇಂಥಾ ಅನೇಕ ಪ್ರಕರಣಗಳು ಬೆಳಕಿಗೆ ಬರುವಂತಾಗುತ್ತದೆ; ಜನತೆಗೆ ಈ ಕುರಿತು ಪ್ರಜ್ಞೆ ಮೂಡುವಂತಾಗುತ್ತದೆ.

ಎರಡನೆಯದು, ನಿಷ್ಪಕ್ಷಪಾತ ತನಿಖೆಯ ಅವಶ್ಯಕತೆಯಿದೆ ಎನ್ನುವುದು. ಘಟನೆ ಜರುಗಿ ಎಷ್ಟೋ ವರ್ಷಗಳ ಬಳಿಕ ಯಾವುದೇ ವ್ಯಕ್ತಿಯ ವಿರುದ್ಧ ಗಂಭೀರ ಆರೋಪ ಮಾಡಿದರೆ ಅದಕ್ಕೆ ಗಟ್ಟಿ ಸಾಕ್ಷಿ ಇಲ್ಲದ ಸ್ಥಿತಿ ಉಂಟಾಗಿ ನಿಷ್ಪಕ್ಷಪಾತತೆ ಮತ್ತು ನ್ಯಾಯದ ಮೂಲ ಸಿದ್ಧಾಂತದ ಉಲ್ಲಂಘನೆಯಾಗುತ್ತದೆ. ಇದರ ದುರುಪಯೋಗ ಮಾಡುವ ಸಾಧ್ಯತೆಯಿರುತ್ತದೆ ಮತ್ತು ಇದನ್ನೇ ಮಾಡಲಾಗುತ್ತಿದೆ. ಆದ್ದರಿಂದ ಕಳೆದ ವರ್ಷ ಕೆಲ ಅಕಾಡೆಮಿಕ್ ಅಪರಾಧಿಗಳ ಹೆಸರುಗಳನ್ನು ಒಗ್ಗೂಡಿಸಿ ಸಾರ್ವತ್ರಿಕಗೊಳಿಸಿದಾಗ, ನಾನು ಇದರೊಂದಿಗೆ ನಿಲ್ಲುವುದು ಸಾಧ್ಯವಾಗಿರಲಿಲ್ಲ. ಮುಂದೆ, ಕೆಲವು ಸ್ತ್ರೀವಾದಿಗಳು ಇಂಥಾ ವಿಚಾರದಲ್ಲಿ ಗಂಭೀರವಾಗಿ ಉತ್ತರಿಸುವ ಬೇಡಿಕೆಯಿಟ್ಟಾಗಷ್ಟೇ ನನಗೆ ಈ ಹೊಯ್ದಾಟದಿಂದ ಹೊರ ಬರುವುದು ಸಾಧ್ಯವಾಯಿತು.
ಆದರೆ ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಸದ್ಯದ ಅಲೆ ಈ ವಿಚಾರಕ್ಕಿಂತ ಕೊಂಚ ಬೇರೆಯಾಗಿದೆ. ಅದು ಉನ್ನತ ಪದವಿಗಳಲ್ಲಿ ಕುಳಿತವರು, ಮಾಧ್ಯಮಗಳ ಗೌರವಾನ್ವಿತ ವ್ಯಕ್ತಿಗಳೂ ತಮ್ಮ ಸ್ಥಾನದ ದುರುಪಯೋಗ ಮಾಡಿ ಮಹಿಳೆಯರನ್ನು ಪೀಡಿಸಿದ್ದಾರೆ, ಅವರನ್ನು ಕೀಳಾಗಿ ಕಾಣಲಾಗಿದೆ ಮತ್ತು ಅವರ ಘನತೆಯನ್ನು ಉಲ್ಲಂಘಿಸಲಾಗಿದೆ ಎನ್ನುವುದು.
ಭಾರತದಲ್ಲಿ #ಮೀಟೂ ಅನಾಮಧೇಯ ಸೆರಗಿನಲ್ಲಿ ಅಡಗಿಕೊಂಡಿಲ್ಲ. ಮಹಿಳೆಯರು ಬಹಿರಂಗವಾಗಿ ಹೊರಬರುತ್ತಿದ್ದಾರೆ, ತಮ್ಮ ಪರಿಚಯವನ್ನು ಸಾರ್ವಜನಿಕಗೊಳಿಸುತ್ತಿದ್ದಾರೆ, ಅಪರಾಧಿಗಳ ಹೆಸರುಗಳನ್ನು ಹೇಳುತ್ತಿದ್ದಾರೆ ಮತ್ತು ಅವರಾಡುತ್ತಿರುವ ಮಾತುಗಳಿಗಾಗಿ ತಲೆದಂಡ ತೆರಲು ಅವರು ತಯಾರಾಗಿದ್ದಾರೆ. ಅವರ ಸಾಹಸಗಳನ್ನು ನೋಡುವಾಗ, ಅವರು ಈ ವಿಚಾರವಾಗಿ ದೃಢನಿಲುವು ತಳೆದಿದ್ದಾರೆ, ಅವರನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅವರ ಕೈಯಲ್ಲಿ ಕೇವಲ ಅವಸರದ ಆರೋಪಗಳಿಲ್ಲ ಎನ್ನುವ ಅಭಿಪ್ರಾಯ ತಳೆಯಬೇಕಾಗುತ್ತದೆ.
ಕಳೆದ ವಾರ ಈ ಕುರಿತು ನಾವು ಓದಿದ ಬಹುತೇಕ ಸುದ್ದಿಗಳು ಸವಿಸ್ತಾರವಾಗಿದ್ದು ಬಹು ಗಂಭೀರ ಸ್ವರೂಪದವುಗಳಾಗಿವೆ, ಮಹಿಳೆಯರು ಹೇಳುತ್ತಿರುವಂತಹ ಸನ್ನಿವೇಶಜನ್ಯ ಸಾಕ್ಷ್ಯಗಳು ಈ ಆರೋಪಗಳನ್ನು ಪುಷ್ಟೀಕರಿಸುತ್ತಿವೆ. ಈ ಸಾಕ್ಷ್ಯಾಧಾರಗಳನ್ನು ನಿಖರ ಸಾಕ್ಷಿಯಾಗಿ ನ್ಯಾಯಾಲಯ ಒಪ್ಪಲಿಕ್ಕಿಲ್ಲ. ಆದರೆ ಇವುಗಳನ್ನು ನಂಬಿಕೆಗೆ ಅರ್ಹವಲ್ಲ ಹಾಗೂ ಪ್ರಾಮಾಣಿಕವಲ್ಲ ಎನ್ನಲು ಸಂವೇದನಾಶೂನ್ಯರಾಗಬೇಕಾಗುತ್ತದೆ. ಈ ಸತ್ಯದ ಜೊತೆಗೆ ಮಹಿಳೆಯರು ಬಲಾಢ್ಯ ವ್ಯಕ್ತಿಗಳ ವಿರುದ್ಧ ನಿಂತಿದ್ದಾರೆ, ಅದು ನಿಮ್ಮ ಮನಸ್ಸನ್ನು ತಟ್ಟಲಾರದು ಎಂದಾದರೆ ನೀವು ದೂಷಣೆಗೆ ಅರ್ಹರೇ ಸರಿ.
ಇಂಥ ನೋವಿನ ಕಥೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿಡುವುದು, ಪ್ರತಿಷ್ಠಿತರ ಹೆಸರುಗಳನ್ನೆತ್ತಿ ಛೀಮಾರಿ ಹಾಕುವುದರಿಂದ ನ್ಯಾಯ ಪಡೆಯಬಹುದೆ? ನನ್ನ ಉತ್ತರ ಹೌದು. ಇವರಲ್ಲಿ ಹೆಚ್ಚಿನ ಮಹಿಳೆಯರು ಜ್ಯೂನಿಯರ್ ಉದ್ಯೋಗಿಗಳಾಗಿದ್ದರು ಮತ್ತು ಅಲ್ಲಿ ತಮ್ಮ ಪುರುಷ ಸಹೋದ್ಯೋಗಿಗಳಿಂದ ಕಿರುಕುಳವನ್ನು ಸಹಿಸಿದ್ದಾರೆಂದರೆ ಅವರಿಗೆ ದುಪ್ಪಟ್ಟು ನಷ್ಟ ಸಹಿಸಬೇಕಾದ ಬಿಕ್ಕಟ್ಟಿನ ಸನ್ನಿವೇಶವಿತ್ತು ಎಂದರ್ಥ.
ಕೆಸರೆರಚುವ ಪರವಾನಗಿ ಸಿಕ್ಕಂತಾಗುತ್ತದೆ ಎಂಬುದು ಇಲ್ಲಿನ ಅಪಾಯ. ಪ್ರತಿಯೊಂದು ಪ್ರೇಮ ಪ್ರಸಂಗ, ವಿಕೃತವಾದ ಪ್ರತಿಯೊಂದು ಸಂಬಂಧ, ಎಲ್ಲಾ ದುಡುಕುತನ, ಮೂರ್ಖತನ, ಕೊನೆಗೆ ಭ್ರಾಂತಿಯೂ ಕೂಡ ಪ್ರಹಾರದ ರೀತಿಯಲ್ಲಿ ಬಳಸುವ ಸಾಧ್ಯತೆಯಿದೆ. ಹೌದು, ಈ ಸಾಮೂಹಿಕ ಮತ್ತು ಸಾರ್ವಜನಿಕ ‘ಸತ್ಯೋದ್ಘಾಟನೆ’ಗೆ ತನ್ನದೇ ಮಾನದಂಡ ಹಾಗೂ ಪ್ರೋಟೋಕಾಲ್ ವಿಕಸಿತಗೊಳಿಸಬೇಕಾಗುತ್ತದೆ, ಯಾರೂ ಇದರ ದುರುಪಯೋಗ ಮಾಡದಂತೆ. ಆದರೆ ಭಾರತದಲ್ಲಿ #ಮೀಟೂ ಸಂದರ್ಭವು ತೆರೆದಿರುವ ಅಪರೂಪದ ಬೆಳಕಿಂಡಿಯನ್ನು ಮುಚ್ಚಲು ಯಾರಿಗೂ ಅಧಿಕಾರವಿಲ್ಲ.
ಇದು ನಮ್ಮ ಜನಪ್ರಿಯ ಸಂಸ್ಕೃತಿಯನ್ನು ಬದಲಿಸುವ ಆಂದೋಲನವಾಗಬಹುದೇ ಎಂಬುದು ಇದು ಇನ್ನಷ್ಟು ಪ್ರೋತ್ಸಾಹ, ಪ್ರಚಾರ ಪಡೆದುಕೊಳ್ಳುತ್ತದೋ ಅಥವಾ ಇದನ್ನು ಹತ್ತಿಕ್ಕಲಾಗುತ್ತದೋ ಎಂಬುದರ ಮೇಲೆ ನಿಂತಿದೆ.
ಆದರೆ ಇಂದು ಮಹಿಳೆಯರು ಸರ್ವವ್ಯಾಪಿಯಾಗಿರುವ ಅಶ್ಲೀಲ ಪ್ರಪಂಚದಲ್ಲಿ ಪ್ರತಿನಿತ್ಯ ಭೀಷಣ ರೂಪದ ಲೈಂಗಿಕ ದೌರ್ಜನ್ಯಗಳಿಗೆ ಈಡಾಗುತ್ತಲೇ ಇದ್ದಾರೆ. ಅವರ ಪರಿಸ್ಥಿತಿಯನ್ನು ಕೇಳುವವರೇ ಇಲ್ಲ. ಈ ಆಂದೋಲನವು ಮಹಾನಗರಗಳಿಂದ ಕುಗ್ರಾಮಗಳವರೆಗೆ ವಿಸ್ತರಿಸಬೇಕು, ಮಾಧ್ಯಮಗಳಿಂದ ಹಿಡಿದು ಬ್ಯುಸಿನೆಸ್ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದವರೆಗೆ, ಸಂಘಟಿತ ಕ್ಷೇತ್ರದಿಂದ ಅಸಂಘಟಿತ ಕ್ಷೇತ್ರಗಳತನಕ, ಹಾಗೆಯೇ ಸಾರ್ವಜನಿಕ ಜೀವನದಿಂದ ಬಿಡಿಬಿಡಿ ಕೌಟುಂಬಿಕ ಲೈಂಗಿಕ ದೌರ್ಜನ್ಯಗಳ ತನಕ ವ್ಯಾಪಿಸಬೇಕಿದೆ. ಹೀಗಾದಲ್ಲಿ ಭಾರತದಲ್ಲಿ #ಮೀಟೂ ಚಳವಳಿ ನಮ್ಮ ಲೈಂಗಿಕ ಸಂವೇದನಾಶೀಲತೆ ಮತ್ತು ಸಾಮುದಾಯಿಕ ಕಟ್ಟುಪಾಡುಗಳನ್ನು ಪುನರ್ನಿರ್ಮಿಸಬಲ್ಲದು.
ನಾನು ಭಾರತದಲ್ಲಿ #ಮೀಟೂ ವಿಚಾರದಲ್ಲಿ ಓದುತ್ತಿರುವಾಗಲೇ ಎರಡು ಸುದ್ದಿಗಳು ಗಮನ ಸೆಳೆದವು. ಬಿಹಾರದ ಕೆಲ ಶಾಲಾ ವಿದ್ಯಾರ್ಥಿನಿಯರು ಹಲ್ಲೆಗೊಳಗಾಗಿದ್ದರೂ ಲೈಂಗಿಕ ದೌರ್ಜನ್ಯವನ್ನು ವಿರೋಧಿಸುವ ಸಾಹಸ ಮಾಡಿದ್ದಾರೆ. ಟ್ಯಾಗೋರರ ಕನಸಿನ ವಿಶ್ವವಿದ್ಯಾಲಯವಾದ ವಿಶ್ವಭಾರತಿಯಲ್ಲಿ ಎಂಥಾ ಅಕಾಡೆಮಿಕ್ ವ್ಯಕ್ತಿಯನ್ನು ನಮ್ಮ ಭಾರತದ ರಾಷ್ಟ್ರಪತಿಯವರು ಉಪಕುಲಪತಿಯನ್ನಾಗಿ ನಿಯುಕ್ತಗೊಳಿಸಿದ್ದಾರೆಂದರೆ ಆ ವ್ಯಕ್ತಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಸಿಕ್ಕುಬಿದ್ದು ಶಿಕ್ಷೆಗೊಳಗಾಗಿದ್ದಾರೆ.
ಈ ಎರಡು ಉದಾಹರಣೆಗಳು ಯಾವ ಕಪ್ಪು ಕಲೆಗಳ ಕಡೆಗೆ ಬೊಟ್ಟುಮಾಡುತ್ತವೆಯೋ ಅತ್ತ #ಮೀಟೂ ಚಳವಳಿಯ ಗಮನ ಹರಿಯಲೇಬೇಕಾಗಿದೆ. ಈಗ ನಾವು ಸಾರ್ವಜನಿಕವಾಗಿ ದಿಟ್ಟ ದನಿಯೆತ್ತಿರುವ ಆ ಮಹಿಳೆಯರಿಗೂ ಹಾಗೂ ದನಿ ಎತ್ತವಂತೆ ಮಾಡಿದ #ಮೀಟೂ ಅಭಿಯಾನದಲ್ಲಿ ಭಾಗಿಯಾದ ಎಲ್ಲರಿಗೂ ಸಲಾಮು ಹೇಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...