Homeಅಂಕಣಗಳುನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

ನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

- Advertisement -
- Advertisement -

ಪಂಥ ಪ್ರಧಾನ ಸೇವಕರು ಮತ್ತು ಅವರ ಆಜ್ಞಾಧಾರಕರಾದ ಕೆಲವು ಮಂತ್ರಿಗಳು ಭಾರತದ ಸರಕಾರ 20 ಲಕ್ಷ ಕೋಟಿ ಪರಿಹಾರ ಬಿಡುಗಡೆ ಮಾಡಿದ್ದರಿಂದ ಭರತ ವರ್ಷದ ಎಲ್ಲಾ ಸಮಸ್ಯೆಗಳು ಮುಗದು ಹೋದವು ಅಂತ ಹೇಳಾಕ ಹತ್ಯಾರ. ಅದ ಖರೆ ಅಂತ ಕೆಲವರು ತಿಳಕೊಂಡೂ ಬಿಟ್ಟಾರ.

ಆದರು ಅದರಾಗ ಚಿಪ್ಸ ಪಾಕೀಟಿನ ಗತೆ ಬರೇ ಹವಾ ಐತಿ, ಆದರ ಅಸಲು ಮಸಾಲೆ ಏನೂ ಇಲ್ಲಾ ಅಂತ ಹೇಳಿ ಕೆಲವು ತಜ್ಞರು ಅಭಿಪ್ರಾಯ ಪಟ್ಟಾರ. ಅದರಾಗ ಬರೇ ಸರಕಾರಿ ಸ್ವತ್ತುಗಳ ಖಾಸಗೀಕರಣ, ಕಾರ್ಮಿಕ ಕಾನೂನುಗಳ ಸಡಿಲಿಕೆ, ರದ್ದು, ಹಾಗೂ ಜನಸಾಮಾನ್ಯರ ಮೇಲಿನ ಸಾಲದ ಹೆಚ್ಚಳ ಬಿಟ್ಟರ ಏನೂ ಇಲ್ಲ ಅಂತ ಅವರ ಅಂಬೋಣ.

ಆ ಮನಿಷಾ ಅಷ್ಟು ಕಷ್ಟ ಪಡಲಿಕ್ಕೆ ಹತ್ಯಾರು, ಏನೇನೋ ಕಸರತ್ತು ಮಾಡತಾರು. ಅವರನ್ನ ಹೊಗಳೋದು ಬಿಟ್ಟು ತೆಗಳಲಿಕ್ಕೆ ಹತ್ತೀರಿ, ನಿಮಗ ಟೀಕೆ ಮಾಡಲಿಕ್ಕೆ ಬ್ಯಾರ ಟೈಮು ಇಲ್ಲೇನು, ನಿಮ ನಿಮ ಟೀಕಾಕಾರ ಒಯ್ದು ಒಂದು ಅಂತ ಕೆಲವರು ಶಾಪ ಹಾಕಾಕ ಹತ್ಯಾರು.

ನಿಮ್ಮ ಹತ್ತರ ಬರೇ ಪ್ರಶ್ನೆ ಅದಾವು. ಯಾವುದಕ್ಕರ ಉತ್ತರ ಏನರ ಅದಾವು ಏನು? ಅಂತ ಕೆಲವರು ಕೇಳತಾರು. ನಿಮ್ಮನ್ನೂ ಕೇಳಬಹುದು.
ಅಂಥವರ ಸಲುವಾಗಿ ಕೆಲವು ಉತ್ತರಗಳು.

ಮೊದಲಿಗೆ ಮಾಡಬೇಕಾಗಿದ್ದು ಆಡಳಿತದ ವಿಕೇಂದ್ರೀಕರಣ. ಈಗ ಐತೆಲ್ಲಾ ಗ್ರಾಮ ಪಂಚಾಯಿತಿ – ನಗರ ಸಭೆ -ಪಟ್ಟಣ ಪಂಚಾಯಿತಿ ಎಲ್ಲಾನೂ ಅದಾವು ಅಂತ ನೀವು ಅನ್ನಬಹುದು. ಆದರ ಅದು ನಿಜವಾದ ಅರ್ಥದೊಳಗ ಇಲ್ಲ.

ಇದರ ಹಿನ್ನೆಲೆ ಭಾಳ ಮಜಾ ಐತಿ. ಸುಮಾರು 1910 ರವರೆಗೆ ಅಫಘಾನಿಸ್ತಾನದಿಂದ ಹಿಡಿದು ಬರ್ಮಾವರೆಗೆ ಭಾರತದ ಭೂಪಟ ಚಾಚಿತ್ತು. ಅಷ್ಟು ದೊಡ್ಡ ದೇಶ ಆಳೋ ಬ್ರಿಟೀಷರ ಸಂಖ್ಯೆ ಮಾತ್ರ ಎರಡು ಸಾವಿರಕ್ಕಿಂತ ಹೆಚ್ಚು ಇರಲಿಲ್ಲ. ಇದರಿಂದ ಏನಾತಪಾ ಅಂದರ ಏಳೂವರೆ ಸಾವಿರ ಕಿಲೋಮೀಟರು ದೂರದ ಇಂಗ್ಲಂಡಿನ ಈಸ್ಟು ಇಂಡಿಯಾ ಕಂಪನಿ ಕಚೇರಿಯೊಳಗ ಕೂತುಗೊಂಡ ಕೆಲವರು ಇಲ್ಲಿನ ಕೆಲವೇ ಜನ ಬಿಳಿಯ ಅಧಿಕಾರಿಗಳ ಮೂಲಕ ಆಡಳಿತ ನಡಸಿದರು. ಸುಮಾರು 200 ವರ್ಷ ಅವರು ಆಡಳಿತ ನಡೆಸಿದರ, ಒಂದು ನೂರು ವರ್ಷ ಅಲ್ಲಿನ ರಾಣಿ ಹೆಸರಿನಲ್ಲಿ ಅಲ್ಲಿನ ಪ್ರಧಾನಿ ಆಡಳಿತ ನಡೆಸಿದರು. ಆಡಳಿತ ಸುಗಮವಾಗಿರಬೇಕು, ದಿನಾ ಬೆಳಿಗ್ಗೆ ಕಿರಿಕಿರಿ ಇರಬಾರದು ಅಂತ ಹೇಳಿ ಅವರು ಈ ದೇಶವನ್ನ ದೊಡ್ಡ ದೊಡ್ಡ ಜಿಲ್ಲೆಗಳಾಗಿ ವಿಭಜನೆ ಮಾಡಿದರು. ಅದು ಇಂದಿಗೂ ನಡಕೊಂಡು ಬಂದೇತಿ. ಈಗ ಕೇಂದ್ರ ಸರಕಾರನೂ ಸಹಿತ ಜಿಲ್ಲಾಡಳಿತದ ಮುಖಾಂತರ ಯೋಜನೆ ಜಾರಿ ಮಾಡತೇತಿ. ಅದರ ಬದಲಿಗೆ ತಾಲೂಕು ಕೇಂದ್ರಿತ ಆಡಳಿತ ಆಗಬಹುದು. ಆವಾಗ ಜನರಿಗೆ ಕಮ್ಮಿ ಕಷ್ಟ ಆಗತೇತಿ.

ಖರೇ ಹೇಳಬೇಕಂದರ ಜನಾ ವಿಚಾರ ಮಾಡೋದು ನಮ್ಮ ಹಳ್ಳಿ- ನಮ್ಮ ಊರು- ನಮ್ಮ ಪಟ್ಟಣ ಅಂತ. ನಮ್ಮ ಜಿಲ್ಲೆ – ತಾಲೂಕು ಅನ್ನೋದು ಭಾವನಾತ್ಮಕ ವಿಷಯ ಅಷ್ಟ. ಹಂಗಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆ ಮುಂತಾದ ಘಟಕಗಳಿಗೆ ಆದ್ಯತೆ ಸಿಗಬೇಕು. ಇದು ಹೆಚ್ಚು ಆದಂತೆ, ಪ್ರಾದೇಶಿಕ ಅಸಮತೋಲನ ಕಮ್ಮಿ ಆಗತೇತಿ.

ಅಲ್ಲೆ ಒಳ್ಳೆಯದಾದರೂ ಜಲ್ದೀ ತಿಳೀತೇತಿ, ಬ್ರಷ್ಟಾಚಾರ ಆದರೂ ಎಲ್ಲಾರ ಮುಂದ ಆಗತೇತಿ, ಎಲ್ಲಾರಿಗೂ ಕಾಣತೇತಿ. ಅದರಿಂದ ಅದು ಕಮ್ಮಿ ಆದರೂ ಆಗಬಹುದು. ಪಾರದರ್ಶಕತೆ ಇಲ್ಲಾ ಅಂದರ ಅದು ಕಮ್ಮಿ ಆಗೋ ಸಾಧ್ಯತೆ ಇಲ್ಲ.

ಎರಡನೇಯದಾಗಿ ಸ್ಥಳೀಯ ಮಾರುಕಟ್ಟೆಗಳ ಆರಂಭ ಮತ್ತು ಪುನರುಜ್ಜೀವನ. ಗಾಂಧೀವಾದಿ ಇಳಾ ಭಟ್ ಅವರು ಹೇಳಿದಂತೆ ಆಹಾರ, ನೀರು- ಬಟ್ಟೆ- ವಸತಿ ಎನ್ನುವ ಸರಕುಗಳು ಹಾಗೂ ಆರೋಗ್ಯ- ಶಿಕ್ಷಣ- ಬ್ಯಾಂಕಿಂಗ್ ಅಥವಾ ಹಣಕಾಸು ಅನುಕೂಲ ಈ ಸೇವೆಗಳನ್ನ ಮೂಲಭೂತವಾದವು ಅಂತ ಪರಿಗಣಿಸಬೇಕು. ಇವುಗಳನ್ನ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯವಾಗಿ ತಯಾರು ಮಾಡಬೇಕು, ಸ್ಥಳೀಯವಾಗಿ ಮಾರಾಟ- ಖರೀದಿ ಮಾಡಬೇಕು. ಇದರಿಂದ ಸಾಗಾಣಿಕೆ ವೆಚ್ಚ ಉಳಿತಾಯ, ಸ್ಥಳೀಯ ಕೆಲಸಗಾರರು ಬದುಕುತ್ತಾರೆ ಹಾಗೂ ವ್ಯವಸ್ಥೆ ಪಾರದರ್ಶಕವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಳ ಸಂಸ್ಕೃತಿ ಉಳಿದುಕೊಳ್ಳುತ್ತದೆ ಅಂತ ಅವರ ಅನಿಸಿಕೆ. ಇನ್ನು ಗುಡಿ ಕೈಗಾರಿಕೆ ಹಾಗೂ ಗೃಹ ಕೈಗಾರಿಕೆ, ಗ್ರಾಮೋದ್ಯೋಗ ಇವಕ್ಕೆ ಉತ್ತೇಜನ ಕೊಡಬೇಕು, ಖಾದಿ ಉಳಿಸಬೇಕು, ಯಂತ್ರಗಳ ಬಳಕೆ ಕಮ್ಮಿ ಆಗಬೇಕು, ಜಾನಪದ ಸಂಸ್ಕೃತಿ ಉಳಿದು – ಬೆಳೆಯಬೇಕು ಅಂತ ಕೆಲವರು ಹೇಳತಾರ.

ಏ ಅದೇನು ಹಚ್ಚೀರಿ? ಯುದ್ಧ ವಿಮಾನ ಏನು ಹಳ್ಳಿಯೊಳಗ ಮಾಡಲಿಕ್ಕೆ ಬರತೇತೇನು? ಯಂತ್ರಗಳಿಲ್ಲದೇ ಉಪಗ್ರಹ ಉಡಾವಣೆ ಮಾಡೋದು ಅಂದರ ಅದೇನು ಬಿದರಿನ ಕಂಬದ ಮ್ಯಾಲೆ ಮಾಡಾಕ ಆಕಾಶ ಬುಟ್ಟಿ ಬಿಟ್ಟಂಗೇನು ಅಂತ ಇನ್ನ ಕೆಲವರು ಅಂತಾರು.

ಈ ಭಿನ್ನಾಭಿಪ್ರಾಯದಿಂದಾಗಿ ಅವರಿಗೂ- ಇವರಿಗೂ ಜಗಳ ಆಗತಾ ಇರತೇತಿ. ಅವರನ್ನ ಇವರು ಅಪ್ರಾಯೋಗಿಕರು ಅಂತ, ಇವರನ್ನ ಅವರು ನಿಜ ಜೀವನದಿಂದ ದೂರ ಇರೋ ರಮ್ಯತಾವಾದಿಗಳು ಅಂತ ಬೈಕೋತ ಇರತಾರ. ಪ್ರತಿಯೊಂದು ಕ್ಷೇತ್ರದೊಳಗ ಕೇವಲ ನಾಲ್ಕು ಸರಕಾರಿ ಸಂಸ್ಥೆಗಳು ಇರಬೇಕು, ಉಳಿದದ್ದನ್ನ ಖಾಸಗಿ ಸಂಸ್ಥೆಗಳು ನೋಡಿಕೋಬೇಕು ಅಂತ ಹಣಕಾಸು ಸಚಿವರಾದ ನಿರ್ಮಲಾ ಅಕ್ಕೋರು ಹೇಳಿದಾರು. ಇದು ತಪ್ಪು, ಸರಕಾರಿ- ಖಾಸಗಿ ಸಂಸ್ಥೆಗಳು ಸಹಭಾಗಿತ್ವ ಇರಬೇಕು ಅಂತ ಕೆಲವರು ಅಂತಾರ. ಬರೇ ಸರಕಾರಿ ಸಂಸ್ಥೆಗಳು ಇರಬೇಕು. ಇಲ್ಲಾ ಅಂದರ ಬರೇ ಖಾಸಗಿ ಸಂಸ್ಥೆಗಳಿಗೆ ಬಿಟ್ಟು ಬಿಟ್ಟರ ಅವರು ಅದನ್ನು ಒಲಿಗಾರ್ಕಿ ಅಥವಾ ಮಿತ ಜನತಂತ್ರ, ಅಲ್ಪಸಂಖ್ಯಾತರ ಪ್ರಭುತ್ವ ಅಥವಾ ಕೂಟಾಳ್ವಿಕೆ ಮಾಡಿಬಿಡತಾರ. ಆಮ್ಯಾಲೆ ಪ್ರತೀ ಕ್ಷೇತ್ರದೊಳಗ ಕೇವಲ ನಾಲ್ಕು ಖಾಸಗಿ ಸಂಸ್ಥೆಗಳು ಉಳಿಯೋ ಹಂಗ ಆಗತೇತಿ ಅಂತ ಇನ್ನ ಕೆಲವರು ಅಂತಾರು.

ಎಲ್ಲಾ ವಿಷಯಗಳಲ್ಲಿ ಇದ್ದಂತೆ ಇದರಲ್ಲಿಯೂ ಯಾವುದೋ ಒಂದು ಮಂತ್ರದಂಡ ಅಂತ ಇಲ್ಲ. ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ಇಲ್ಲ, ಇರಲಿಕ್ಕೆ ಸಾಧ್ಯ ಇಲ್ಲ. ಆಯಾ ಕ್ಷೇತ್ರದ ಅವಶ್ಯಕತೆಗಳಿಗೆ ತಕ್ಕಂತೆ ಇದನ್ನು ಒಂದು ಸ್ವಲ್ಪು ಅದನ್ನ ಒಂದು ಸ್ವಲ್ಪು ಉಪಯೋಗಿಸಿಕೊಂಡು ಎಲ್ಲರಿಗೂ ಸಮಾವಕಾಶ ಕಲ್ಪಿಸುವ ಸಮ ಸಮಾಜದ ಕಡೆ ಹೋಗಬೇಕು. ಜನ ಬರೇ ಮತದಾರರಾಗಿ ಉಳಿಯಬಾರದು. ನಾಗರಿಕರಾಗಿ ವಿಕಾಸಗೊಳ್ಳಬೇಕು. ನಾಗರಿಕರು ತಮ್ಮನ್ನಾಳುವವರು ದಾರಿ ತಪ್ಪಿದಾಗ ಅವರನ್ನ ಸರಿ ಮಾಡಬೇಕು. ತಿದ್ದಿ ಹೇಳಿದ್ದು ಕೇಳದಾಗ, ತಮ್ಮ ಮಾತು ಕೇಳುವವರನ್ನು ಆರಿಸಿ ತರಬೇಕು.

`ಅರ್ಥ ಶಾಸ್ತ್ರ ಎನ್ನುವುದು ಊರ ಮುಂದಿನ ಜಾತ್ರೆ ಇದ್ದಂತೆ. ಎಲ್ಲರೂ ತಮಗೆ ತಿಳಿದದ್ದನ್ನ ಜೋರಾಗಿ ಮಾತಾಡೋದಕ್ಕೆ ಯಾರ ಮಾತೂ ಯಾರಿಗೂ ತಿಳಿಯೋದಿಲ್ಲ’ ಅಂತ ಯುವ ಅರ್ಥ ಶಾಸ್ತ್ರಜ್ಞ ಸ್ಟೀಫನ್ ಲೆವಿಟ್ ಹೇಳಿದಾರು. ಈ ಮಾತು ನಾವು ನೆನಪು ಇಟಗೋಬೇಕು. ಒಳ್ಳೆಯ ವಿಚಾರಗಳು ಎಲ್ಲರಿಗೂ ತಲುಪಬೇಕು. ಅವರು ಒಪ್ಪಲಿ – ಬಿಡಲಿ ಚರ್ಚೆ ಆಗಬೇಕು. ಸಕಲ ಕಲ್ಯಾಣಕ್ಕೆ ಕಾರಣವಾಗೋ ವಿಚಾರಗಳನ್ನ ಜಾರಿ ಮಾಡೋ ಪ್ರಯತ್ನ ಮಾಡಬೇಕು. ಅಲ್ಲವೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...