Homeಅಂಕಣಗಳುನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

ನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

- Advertisement -
- Advertisement -

ಪಂಥ ಪ್ರಧಾನ ಸೇವಕರು ಮತ್ತು ಅವರ ಆಜ್ಞಾಧಾರಕರಾದ ಕೆಲವು ಮಂತ್ರಿಗಳು ಭಾರತದ ಸರಕಾರ 20 ಲಕ್ಷ ಕೋಟಿ ಪರಿಹಾರ ಬಿಡುಗಡೆ ಮಾಡಿದ್ದರಿಂದ ಭರತ ವರ್ಷದ ಎಲ್ಲಾ ಸಮಸ್ಯೆಗಳು ಮುಗದು ಹೋದವು ಅಂತ ಹೇಳಾಕ ಹತ್ಯಾರ. ಅದ ಖರೆ ಅಂತ ಕೆಲವರು ತಿಳಕೊಂಡೂ ಬಿಟ್ಟಾರ.

ಆದರು ಅದರಾಗ ಚಿಪ್ಸ ಪಾಕೀಟಿನ ಗತೆ ಬರೇ ಹವಾ ಐತಿ, ಆದರ ಅಸಲು ಮಸಾಲೆ ಏನೂ ಇಲ್ಲಾ ಅಂತ ಹೇಳಿ ಕೆಲವು ತಜ್ಞರು ಅಭಿಪ್ರಾಯ ಪಟ್ಟಾರ. ಅದರಾಗ ಬರೇ ಸರಕಾರಿ ಸ್ವತ್ತುಗಳ ಖಾಸಗೀಕರಣ, ಕಾರ್ಮಿಕ ಕಾನೂನುಗಳ ಸಡಿಲಿಕೆ, ರದ್ದು, ಹಾಗೂ ಜನಸಾಮಾನ್ಯರ ಮೇಲಿನ ಸಾಲದ ಹೆಚ್ಚಳ ಬಿಟ್ಟರ ಏನೂ ಇಲ್ಲ ಅಂತ ಅವರ ಅಂಬೋಣ.

ಆ ಮನಿಷಾ ಅಷ್ಟು ಕಷ್ಟ ಪಡಲಿಕ್ಕೆ ಹತ್ಯಾರು, ಏನೇನೋ ಕಸರತ್ತು ಮಾಡತಾರು. ಅವರನ್ನ ಹೊಗಳೋದು ಬಿಟ್ಟು ತೆಗಳಲಿಕ್ಕೆ ಹತ್ತೀರಿ, ನಿಮಗ ಟೀಕೆ ಮಾಡಲಿಕ್ಕೆ ಬ್ಯಾರ ಟೈಮು ಇಲ್ಲೇನು, ನಿಮ ನಿಮ ಟೀಕಾಕಾರ ಒಯ್ದು ಒಂದು ಅಂತ ಕೆಲವರು ಶಾಪ ಹಾಕಾಕ ಹತ್ಯಾರು.

ನಿಮ್ಮ ಹತ್ತರ ಬರೇ ಪ್ರಶ್ನೆ ಅದಾವು. ಯಾವುದಕ್ಕರ ಉತ್ತರ ಏನರ ಅದಾವು ಏನು? ಅಂತ ಕೆಲವರು ಕೇಳತಾರು. ನಿಮ್ಮನ್ನೂ ಕೇಳಬಹುದು.
ಅಂಥವರ ಸಲುವಾಗಿ ಕೆಲವು ಉತ್ತರಗಳು.

ಮೊದಲಿಗೆ ಮಾಡಬೇಕಾಗಿದ್ದು ಆಡಳಿತದ ವಿಕೇಂದ್ರೀಕರಣ. ಈಗ ಐತೆಲ್ಲಾ ಗ್ರಾಮ ಪಂಚಾಯಿತಿ – ನಗರ ಸಭೆ -ಪಟ್ಟಣ ಪಂಚಾಯಿತಿ ಎಲ್ಲಾನೂ ಅದಾವು ಅಂತ ನೀವು ಅನ್ನಬಹುದು. ಆದರ ಅದು ನಿಜವಾದ ಅರ್ಥದೊಳಗ ಇಲ್ಲ.

ಇದರ ಹಿನ್ನೆಲೆ ಭಾಳ ಮಜಾ ಐತಿ. ಸುಮಾರು 1910 ರವರೆಗೆ ಅಫಘಾನಿಸ್ತಾನದಿಂದ ಹಿಡಿದು ಬರ್ಮಾವರೆಗೆ ಭಾರತದ ಭೂಪಟ ಚಾಚಿತ್ತು. ಅಷ್ಟು ದೊಡ್ಡ ದೇಶ ಆಳೋ ಬ್ರಿಟೀಷರ ಸಂಖ್ಯೆ ಮಾತ್ರ ಎರಡು ಸಾವಿರಕ್ಕಿಂತ ಹೆಚ್ಚು ಇರಲಿಲ್ಲ. ಇದರಿಂದ ಏನಾತಪಾ ಅಂದರ ಏಳೂವರೆ ಸಾವಿರ ಕಿಲೋಮೀಟರು ದೂರದ ಇಂಗ್ಲಂಡಿನ ಈಸ್ಟು ಇಂಡಿಯಾ ಕಂಪನಿ ಕಚೇರಿಯೊಳಗ ಕೂತುಗೊಂಡ ಕೆಲವರು ಇಲ್ಲಿನ ಕೆಲವೇ ಜನ ಬಿಳಿಯ ಅಧಿಕಾರಿಗಳ ಮೂಲಕ ಆಡಳಿತ ನಡಸಿದರು. ಸುಮಾರು 200 ವರ್ಷ ಅವರು ಆಡಳಿತ ನಡೆಸಿದರ, ಒಂದು ನೂರು ವರ್ಷ ಅಲ್ಲಿನ ರಾಣಿ ಹೆಸರಿನಲ್ಲಿ ಅಲ್ಲಿನ ಪ್ರಧಾನಿ ಆಡಳಿತ ನಡೆಸಿದರು. ಆಡಳಿತ ಸುಗಮವಾಗಿರಬೇಕು, ದಿನಾ ಬೆಳಿಗ್ಗೆ ಕಿರಿಕಿರಿ ಇರಬಾರದು ಅಂತ ಹೇಳಿ ಅವರು ಈ ದೇಶವನ್ನ ದೊಡ್ಡ ದೊಡ್ಡ ಜಿಲ್ಲೆಗಳಾಗಿ ವಿಭಜನೆ ಮಾಡಿದರು. ಅದು ಇಂದಿಗೂ ನಡಕೊಂಡು ಬಂದೇತಿ. ಈಗ ಕೇಂದ್ರ ಸರಕಾರನೂ ಸಹಿತ ಜಿಲ್ಲಾಡಳಿತದ ಮುಖಾಂತರ ಯೋಜನೆ ಜಾರಿ ಮಾಡತೇತಿ. ಅದರ ಬದಲಿಗೆ ತಾಲೂಕು ಕೇಂದ್ರಿತ ಆಡಳಿತ ಆಗಬಹುದು. ಆವಾಗ ಜನರಿಗೆ ಕಮ್ಮಿ ಕಷ್ಟ ಆಗತೇತಿ.

ಖರೇ ಹೇಳಬೇಕಂದರ ಜನಾ ವಿಚಾರ ಮಾಡೋದು ನಮ್ಮ ಹಳ್ಳಿ- ನಮ್ಮ ಊರು- ನಮ್ಮ ಪಟ್ಟಣ ಅಂತ. ನಮ್ಮ ಜಿಲ್ಲೆ – ತಾಲೂಕು ಅನ್ನೋದು ಭಾವನಾತ್ಮಕ ವಿಷಯ ಅಷ್ಟ. ಹಂಗಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆ ಮುಂತಾದ ಘಟಕಗಳಿಗೆ ಆದ್ಯತೆ ಸಿಗಬೇಕು. ಇದು ಹೆಚ್ಚು ಆದಂತೆ, ಪ್ರಾದೇಶಿಕ ಅಸಮತೋಲನ ಕಮ್ಮಿ ಆಗತೇತಿ.

ಅಲ್ಲೆ ಒಳ್ಳೆಯದಾದರೂ ಜಲ್ದೀ ತಿಳೀತೇತಿ, ಬ್ರಷ್ಟಾಚಾರ ಆದರೂ ಎಲ್ಲಾರ ಮುಂದ ಆಗತೇತಿ, ಎಲ್ಲಾರಿಗೂ ಕಾಣತೇತಿ. ಅದರಿಂದ ಅದು ಕಮ್ಮಿ ಆದರೂ ಆಗಬಹುದು. ಪಾರದರ್ಶಕತೆ ಇಲ್ಲಾ ಅಂದರ ಅದು ಕಮ್ಮಿ ಆಗೋ ಸಾಧ್ಯತೆ ಇಲ್ಲ.

ಎರಡನೇಯದಾಗಿ ಸ್ಥಳೀಯ ಮಾರುಕಟ್ಟೆಗಳ ಆರಂಭ ಮತ್ತು ಪುನರುಜ್ಜೀವನ. ಗಾಂಧೀವಾದಿ ಇಳಾ ಭಟ್ ಅವರು ಹೇಳಿದಂತೆ ಆಹಾರ, ನೀರು- ಬಟ್ಟೆ- ವಸತಿ ಎನ್ನುವ ಸರಕುಗಳು ಹಾಗೂ ಆರೋಗ್ಯ- ಶಿಕ್ಷಣ- ಬ್ಯಾಂಕಿಂಗ್ ಅಥವಾ ಹಣಕಾಸು ಅನುಕೂಲ ಈ ಸೇವೆಗಳನ್ನ ಮೂಲಭೂತವಾದವು ಅಂತ ಪರಿಗಣಿಸಬೇಕು. ಇವುಗಳನ್ನ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯವಾಗಿ ತಯಾರು ಮಾಡಬೇಕು, ಸ್ಥಳೀಯವಾಗಿ ಮಾರಾಟ- ಖರೀದಿ ಮಾಡಬೇಕು. ಇದರಿಂದ ಸಾಗಾಣಿಕೆ ವೆಚ್ಚ ಉಳಿತಾಯ, ಸ್ಥಳೀಯ ಕೆಲಸಗಾರರು ಬದುಕುತ್ತಾರೆ ಹಾಗೂ ವ್ಯವಸ್ಥೆ ಪಾರದರ್ಶಕವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಳ ಸಂಸ್ಕೃತಿ ಉಳಿದುಕೊಳ್ಳುತ್ತದೆ ಅಂತ ಅವರ ಅನಿಸಿಕೆ. ಇನ್ನು ಗುಡಿ ಕೈಗಾರಿಕೆ ಹಾಗೂ ಗೃಹ ಕೈಗಾರಿಕೆ, ಗ್ರಾಮೋದ್ಯೋಗ ಇವಕ್ಕೆ ಉತ್ತೇಜನ ಕೊಡಬೇಕು, ಖಾದಿ ಉಳಿಸಬೇಕು, ಯಂತ್ರಗಳ ಬಳಕೆ ಕಮ್ಮಿ ಆಗಬೇಕು, ಜಾನಪದ ಸಂಸ್ಕೃತಿ ಉಳಿದು – ಬೆಳೆಯಬೇಕು ಅಂತ ಕೆಲವರು ಹೇಳತಾರ.

ಏ ಅದೇನು ಹಚ್ಚೀರಿ? ಯುದ್ಧ ವಿಮಾನ ಏನು ಹಳ್ಳಿಯೊಳಗ ಮಾಡಲಿಕ್ಕೆ ಬರತೇತೇನು? ಯಂತ್ರಗಳಿಲ್ಲದೇ ಉಪಗ್ರಹ ಉಡಾವಣೆ ಮಾಡೋದು ಅಂದರ ಅದೇನು ಬಿದರಿನ ಕಂಬದ ಮ್ಯಾಲೆ ಮಾಡಾಕ ಆಕಾಶ ಬುಟ್ಟಿ ಬಿಟ್ಟಂಗೇನು ಅಂತ ಇನ್ನ ಕೆಲವರು ಅಂತಾರು.

ಈ ಭಿನ್ನಾಭಿಪ್ರಾಯದಿಂದಾಗಿ ಅವರಿಗೂ- ಇವರಿಗೂ ಜಗಳ ಆಗತಾ ಇರತೇತಿ. ಅವರನ್ನ ಇವರು ಅಪ್ರಾಯೋಗಿಕರು ಅಂತ, ಇವರನ್ನ ಅವರು ನಿಜ ಜೀವನದಿಂದ ದೂರ ಇರೋ ರಮ್ಯತಾವಾದಿಗಳು ಅಂತ ಬೈಕೋತ ಇರತಾರ. ಪ್ರತಿಯೊಂದು ಕ್ಷೇತ್ರದೊಳಗ ಕೇವಲ ನಾಲ್ಕು ಸರಕಾರಿ ಸಂಸ್ಥೆಗಳು ಇರಬೇಕು, ಉಳಿದದ್ದನ್ನ ಖಾಸಗಿ ಸಂಸ್ಥೆಗಳು ನೋಡಿಕೋಬೇಕು ಅಂತ ಹಣಕಾಸು ಸಚಿವರಾದ ನಿರ್ಮಲಾ ಅಕ್ಕೋರು ಹೇಳಿದಾರು. ಇದು ತಪ್ಪು, ಸರಕಾರಿ- ಖಾಸಗಿ ಸಂಸ್ಥೆಗಳು ಸಹಭಾಗಿತ್ವ ಇರಬೇಕು ಅಂತ ಕೆಲವರು ಅಂತಾರ. ಬರೇ ಸರಕಾರಿ ಸಂಸ್ಥೆಗಳು ಇರಬೇಕು. ಇಲ್ಲಾ ಅಂದರ ಬರೇ ಖಾಸಗಿ ಸಂಸ್ಥೆಗಳಿಗೆ ಬಿಟ್ಟು ಬಿಟ್ಟರ ಅವರು ಅದನ್ನು ಒಲಿಗಾರ್ಕಿ ಅಥವಾ ಮಿತ ಜನತಂತ್ರ, ಅಲ್ಪಸಂಖ್ಯಾತರ ಪ್ರಭುತ್ವ ಅಥವಾ ಕೂಟಾಳ್ವಿಕೆ ಮಾಡಿಬಿಡತಾರ. ಆಮ್ಯಾಲೆ ಪ್ರತೀ ಕ್ಷೇತ್ರದೊಳಗ ಕೇವಲ ನಾಲ್ಕು ಖಾಸಗಿ ಸಂಸ್ಥೆಗಳು ಉಳಿಯೋ ಹಂಗ ಆಗತೇತಿ ಅಂತ ಇನ್ನ ಕೆಲವರು ಅಂತಾರು.

ಎಲ್ಲಾ ವಿಷಯಗಳಲ್ಲಿ ಇದ್ದಂತೆ ಇದರಲ್ಲಿಯೂ ಯಾವುದೋ ಒಂದು ಮಂತ್ರದಂಡ ಅಂತ ಇಲ್ಲ. ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ಇಲ್ಲ, ಇರಲಿಕ್ಕೆ ಸಾಧ್ಯ ಇಲ್ಲ. ಆಯಾ ಕ್ಷೇತ್ರದ ಅವಶ್ಯಕತೆಗಳಿಗೆ ತಕ್ಕಂತೆ ಇದನ್ನು ಒಂದು ಸ್ವಲ್ಪು ಅದನ್ನ ಒಂದು ಸ್ವಲ್ಪು ಉಪಯೋಗಿಸಿಕೊಂಡು ಎಲ್ಲರಿಗೂ ಸಮಾವಕಾಶ ಕಲ್ಪಿಸುವ ಸಮ ಸಮಾಜದ ಕಡೆ ಹೋಗಬೇಕು. ಜನ ಬರೇ ಮತದಾರರಾಗಿ ಉಳಿಯಬಾರದು. ನಾಗರಿಕರಾಗಿ ವಿಕಾಸಗೊಳ್ಳಬೇಕು. ನಾಗರಿಕರು ತಮ್ಮನ್ನಾಳುವವರು ದಾರಿ ತಪ್ಪಿದಾಗ ಅವರನ್ನ ಸರಿ ಮಾಡಬೇಕು. ತಿದ್ದಿ ಹೇಳಿದ್ದು ಕೇಳದಾಗ, ತಮ್ಮ ಮಾತು ಕೇಳುವವರನ್ನು ಆರಿಸಿ ತರಬೇಕು.

`ಅರ್ಥ ಶಾಸ್ತ್ರ ಎನ್ನುವುದು ಊರ ಮುಂದಿನ ಜಾತ್ರೆ ಇದ್ದಂತೆ. ಎಲ್ಲರೂ ತಮಗೆ ತಿಳಿದದ್ದನ್ನ ಜೋರಾಗಿ ಮಾತಾಡೋದಕ್ಕೆ ಯಾರ ಮಾತೂ ಯಾರಿಗೂ ತಿಳಿಯೋದಿಲ್ಲ’ ಅಂತ ಯುವ ಅರ್ಥ ಶಾಸ್ತ್ರಜ್ಞ ಸ್ಟೀಫನ್ ಲೆವಿಟ್ ಹೇಳಿದಾರು. ಈ ಮಾತು ನಾವು ನೆನಪು ಇಟಗೋಬೇಕು. ಒಳ್ಳೆಯ ವಿಚಾರಗಳು ಎಲ್ಲರಿಗೂ ತಲುಪಬೇಕು. ಅವರು ಒಪ್ಪಲಿ – ಬಿಡಲಿ ಚರ್ಚೆ ಆಗಬೇಕು. ಸಕಲ ಕಲ್ಯಾಣಕ್ಕೆ ಕಾರಣವಾಗೋ ವಿಚಾರಗಳನ್ನ ಜಾರಿ ಮಾಡೋ ಪ್ರಯತ್ನ ಮಾಡಬೇಕು. ಅಲ್ಲವೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...