Homeಅಂಕಣಗಳುನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

ನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

- Advertisement -
- Advertisement -

ಪಂಥ ಪ್ರಧಾನ ಸೇವಕರು ಮತ್ತು ಅವರ ಆಜ್ಞಾಧಾರಕರಾದ ಕೆಲವು ಮಂತ್ರಿಗಳು ಭಾರತದ ಸರಕಾರ 20 ಲಕ್ಷ ಕೋಟಿ ಪರಿಹಾರ ಬಿಡುಗಡೆ ಮಾಡಿದ್ದರಿಂದ ಭರತ ವರ್ಷದ ಎಲ್ಲಾ ಸಮಸ್ಯೆಗಳು ಮುಗದು ಹೋದವು ಅಂತ ಹೇಳಾಕ ಹತ್ಯಾರ. ಅದ ಖರೆ ಅಂತ ಕೆಲವರು ತಿಳಕೊಂಡೂ ಬಿಟ್ಟಾರ.

ಆದರು ಅದರಾಗ ಚಿಪ್ಸ ಪಾಕೀಟಿನ ಗತೆ ಬರೇ ಹವಾ ಐತಿ, ಆದರ ಅಸಲು ಮಸಾಲೆ ಏನೂ ಇಲ್ಲಾ ಅಂತ ಹೇಳಿ ಕೆಲವು ತಜ್ಞರು ಅಭಿಪ್ರಾಯ ಪಟ್ಟಾರ. ಅದರಾಗ ಬರೇ ಸರಕಾರಿ ಸ್ವತ್ತುಗಳ ಖಾಸಗೀಕರಣ, ಕಾರ್ಮಿಕ ಕಾನೂನುಗಳ ಸಡಿಲಿಕೆ, ರದ್ದು, ಹಾಗೂ ಜನಸಾಮಾನ್ಯರ ಮೇಲಿನ ಸಾಲದ ಹೆಚ್ಚಳ ಬಿಟ್ಟರ ಏನೂ ಇಲ್ಲ ಅಂತ ಅವರ ಅಂಬೋಣ.

ಆ ಮನಿಷಾ ಅಷ್ಟು ಕಷ್ಟ ಪಡಲಿಕ್ಕೆ ಹತ್ಯಾರು, ಏನೇನೋ ಕಸರತ್ತು ಮಾಡತಾರು. ಅವರನ್ನ ಹೊಗಳೋದು ಬಿಟ್ಟು ತೆಗಳಲಿಕ್ಕೆ ಹತ್ತೀರಿ, ನಿಮಗ ಟೀಕೆ ಮಾಡಲಿಕ್ಕೆ ಬ್ಯಾರ ಟೈಮು ಇಲ್ಲೇನು, ನಿಮ ನಿಮ ಟೀಕಾಕಾರ ಒಯ್ದು ಒಂದು ಅಂತ ಕೆಲವರು ಶಾಪ ಹಾಕಾಕ ಹತ್ಯಾರು.

ನಿಮ್ಮ ಹತ್ತರ ಬರೇ ಪ್ರಶ್ನೆ ಅದಾವು. ಯಾವುದಕ್ಕರ ಉತ್ತರ ಏನರ ಅದಾವು ಏನು? ಅಂತ ಕೆಲವರು ಕೇಳತಾರು. ನಿಮ್ಮನ್ನೂ ಕೇಳಬಹುದು.
ಅಂಥವರ ಸಲುವಾಗಿ ಕೆಲವು ಉತ್ತರಗಳು.

ಮೊದಲಿಗೆ ಮಾಡಬೇಕಾಗಿದ್ದು ಆಡಳಿತದ ವಿಕೇಂದ್ರೀಕರಣ. ಈಗ ಐತೆಲ್ಲಾ ಗ್ರಾಮ ಪಂಚಾಯಿತಿ – ನಗರ ಸಭೆ -ಪಟ್ಟಣ ಪಂಚಾಯಿತಿ ಎಲ್ಲಾನೂ ಅದಾವು ಅಂತ ನೀವು ಅನ್ನಬಹುದು. ಆದರ ಅದು ನಿಜವಾದ ಅರ್ಥದೊಳಗ ಇಲ್ಲ.

ಇದರ ಹಿನ್ನೆಲೆ ಭಾಳ ಮಜಾ ಐತಿ. ಸುಮಾರು 1910 ರವರೆಗೆ ಅಫಘಾನಿಸ್ತಾನದಿಂದ ಹಿಡಿದು ಬರ್ಮಾವರೆಗೆ ಭಾರತದ ಭೂಪಟ ಚಾಚಿತ್ತು. ಅಷ್ಟು ದೊಡ್ಡ ದೇಶ ಆಳೋ ಬ್ರಿಟೀಷರ ಸಂಖ್ಯೆ ಮಾತ್ರ ಎರಡು ಸಾವಿರಕ್ಕಿಂತ ಹೆಚ್ಚು ಇರಲಿಲ್ಲ. ಇದರಿಂದ ಏನಾತಪಾ ಅಂದರ ಏಳೂವರೆ ಸಾವಿರ ಕಿಲೋಮೀಟರು ದೂರದ ಇಂಗ್ಲಂಡಿನ ಈಸ್ಟು ಇಂಡಿಯಾ ಕಂಪನಿ ಕಚೇರಿಯೊಳಗ ಕೂತುಗೊಂಡ ಕೆಲವರು ಇಲ್ಲಿನ ಕೆಲವೇ ಜನ ಬಿಳಿಯ ಅಧಿಕಾರಿಗಳ ಮೂಲಕ ಆಡಳಿತ ನಡಸಿದರು. ಸುಮಾರು 200 ವರ್ಷ ಅವರು ಆಡಳಿತ ನಡೆಸಿದರ, ಒಂದು ನೂರು ವರ್ಷ ಅಲ್ಲಿನ ರಾಣಿ ಹೆಸರಿನಲ್ಲಿ ಅಲ್ಲಿನ ಪ್ರಧಾನಿ ಆಡಳಿತ ನಡೆಸಿದರು. ಆಡಳಿತ ಸುಗಮವಾಗಿರಬೇಕು, ದಿನಾ ಬೆಳಿಗ್ಗೆ ಕಿರಿಕಿರಿ ಇರಬಾರದು ಅಂತ ಹೇಳಿ ಅವರು ಈ ದೇಶವನ್ನ ದೊಡ್ಡ ದೊಡ್ಡ ಜಿಲ್ಲೆಗಳಾಗಿ ವಿಭಜನೆ ಮಾಡಿದರು. ಅದು ಇಂದಿಗೂ ನಡಕೊಂಡು ಬಂದೇತಿ. ಈಗ ಕೇಂದ್ರ ಸರಕಾರನೂ ಸಹಿತ ಜಿಲ್ಲಾಡಳಿತದ ಮುಖಾಂತರ ಯೋಜನೆ ಜಾರಿ ಮಾಡತೇತಿ. ಅದರ ಬದಲಿಗೆ ತಾಲೂಕು ಕೇಂದ್ರಿತ ಆಡಳಿತ ಆಗಬಹುದು. ಆವಾಗ ಜನರಿಗೆ ಕಮ್ಮಿ ಕಷ್ಟ ಆಗತೇತಿ.

ಖರೇ ಹೇಳಬೇಕಂದರ ಜನಾ ವಿಚಾರ ಮಾಡೋದು ನಮ್ಮ ಹಳ್ಳಿ- ನಮ್ಮ ಊರು- ನಮ್ಮ ಪಟ್ಟಣ ಅಂತ. ನಮ್ಮ ಜಿಲ್ಲೆ – ತಾಲೂಕು ಅನ್ನೋದು ಭಾವನಾತ್ಮಕ ವಿಷಯ ಅಷ್ಟ. ಹಂಗಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆ ಮುಂತಾದ ಘಟಕಗಳಿಗೆ ಆದ್ಯತೆ ಸಿಗಬೇಕು. ಇದು ಹೆಚ್ಚು ಆದಂತೆ, ಪ್ರಾದೇಶಿಕ ಅಸಮತೋಲನ ಕಮ್ಮಿ ಆಗತೇತಿ.

ಅಲ್ಲೆ ಒಳ್ಳೆಯದಾದರೂ ಜಲ್ದೀ ತಿಳೀತೇತಿ, ಬ್ರಷ್ಟಾಚಾರ ಆದರೂ ಎಲ್ಲಾರ ಮುಂದ ಆಗತೇತಿ, ಎಲ್ಲಾರಿಗೂ ಕಾಣತೇತಿ. ಅದರಿಂದ ಅದು ಕಮ್ಮಿ ಆದರೂ ಆಗಬಹುದು. ಪಾರದರ್ಶಕತೆ ಇಲ್ಲಾ ಅಂದರ ಅದು ಕಮ್ಮಿ ಆಗೋ ಸಾಧ್ಯತೆ ಇಲ್ಲ.

ಎರಡನೇಯದಾಗಿ ಸ್ಥಳೀಯ ಮಾರುಕಟ್ಟೆಗಳ ಆರಂಭ ಮತ್ತು ಪುನರುಜ್ಜೀವನ. ಗಾಂಧೀವಾದಿ ಇಳಾ ಭಟ್ ಅವರು ಹೇಳಿದಂತೆ ಆಹಾರ, ನೀರು- ಬಟ್ಟೆ- ವಸತಿ ಎನ್ನುವ ಸರಕುಗಳು ಹಾಗೂ ಆರೋಗ್ಯ- ಶಿಕ್ಷಣ- ಬ್ಯಾಂಕಿಂಗ್ ಅಥವಾ ಹಣಕಾಸು ಅನುಕೂಲ ಈ ಸೇವೆಗಳನ್ನ ಮೂಲಭೂತವಾದವು ಅಂತ ಪರಿಗಣಿಸಬೇಕು. ಇವುಗಳನ್ನ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯವಾಗಿ ತಯಾರು ಮಾಡಬೇಕು, ಸ್ಥಳೀಯವಾಗಿ ಮಾರಾಟ- ಖರೀದಿ ಮಾಡಬೇಕು. ಇದರಿಂದ ಸಾಗಾಣಿಕೆ ವೆಚ್ಚ ಉಳಿತಾಯ, ಸ್ಥಳೀಯ ಕೆಲಸಗಾರರು ಬದುಕುತ್ತಾರೆ ಹಾಗೂ ವ್ಯವಸ್ಥೆ ಪಾರದರ್ಶಕವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಳ ಸಂಸ್ಕೃತಿ ಉಳಿದುಕೊಳ್ಳುತ್ತದೆ ಅಂತ ಅವರ ಅನಿಸಿಕೆ. ಇನ್ನು ಗುಡಿ ಕೈಗಾರಿಕೆ ಹಾಗೂ ಗೃಹ ಕೈಗಾರಿಕೆ, ಗ್ರಾಮೋದ್ಯೋಗ ಇವಕ್ಕೆ ಉತ್ತೇಜನ ಕೊಡಬೇಕು, ಖಾದಿ ಉಳಿಸಬೇಕು, ಯಂತ್ರಗಳ ಬಳಕೆ ಕಮ್ಮಿ ಆಗಬೇಕು, ಜಾನಪದ ಸಂಸ್ಕೃತಿ ಉಳಿದು – ಬೆಳೆಯಬೇಕು ಅಂತ ಕೆಲವರು ಹೇಳತಾರ.

ಏ ಅದೇನು ಹಚ್ಚೀರಿ? ಯುದ್ಧ ವಿಮಾನ ಏನು ಹಳ್ಳಿಯೊಳಗ ಮಾಡಲಿಕ್ಕೆ ಬರತೇತೇನು? ಯಂತ್ರಗಳಿಲ್ಲದೇ ಉಪಗ್ರಹ ಉಡಾವಣೆ ಮಾಡೋದು ಅಂದರ ಅದೇನು ಬಿದರಿನ ಕಂಬದ ಮ್ಯಾಲೆ ಮಾಡಾಕ ಆಕಾಶ ಬುಟ್ಟಿ ಬಿಟ್ಟಂಗೇನು ಅಂತ ಇನ್ನ ಕೆಲವರು ಅಂತಾರು.

ಈ ಭಿನ್ನಾಭಿಪ್ರಾಯದಿಂದಾಗಿ ಅವರಿಗೂ- ಇವರಿಗೂ ಜಗಳ ಆಗತಾ ಇರತೇತಿ. ಅವರನ್ನ ಇವರು ಅಪ್ರಾಯೋಗಿಕರು ಅಂತ, ಇವರನ್ನ ಅವರು ನಿಜ ಜೀವನದಿಂದ ದೂರ ಇರೋ ರಮ್ಯತಾವಾದಿಗಳು ಅಂತ ಬೈಕೋತ ಇರತಾರ. ಪ್ರತಿಯೊಂದು ಕ್ಷೇತ್ರದೊಳಗ ಕೇವಲ ನಾಲ್ಕು ಸರಕಾರಿ ಸಂಸ್ಥೆಗಳು ಇರಬೇಕು, ಉಳಿದದ್ದನ್ನ ಖಾಸಗಿ ಸಂಸ್ಥೆಗಳು ನೋಡಿಕೋಬೇಕು ಅಂತ ಹಣಕಾಸು ಸಚಿವರಾದ ನಿರ್ಮಲಾ ಅಕ್ಕೋರು ಹೇಳಿದಾರು. ಇದು ತಪ್ಪು, ಸರಕಾರಿ- ಖಾಸಗಿ ಸಂಸ್ಥೆಗಳು ಸಹಭಾಗಿತ್ವ ಇರಬೇಕು ಅಂತ ಕೆಲವರು ಅಂತಾರ. ಬರೇ ಸರಕಾರಿ ಸಂಸ್ಥೆಗಳು ಇರಬೇಕು. ಇಲ್ಲಾ ಅಂದರ ಬರೇ ಖಾಸಗಿ ಸಂಸ್ಥೆಗಳಿಗೆ ಬಿಟ್ಟು ಬಿಟ್ಟರ ಅವರು ಅದನ್ನು ಒಲಿಗಾರ್ಕಿ ಅಥವಾ ಮಿತ ಜನತಂತ್ರ, ಅಲ್ಪಸಂಖ್ಯಾತರ ಪ್ರಭುತ್ವ ಅಥವಾ ಕೂಟಾಳ್ವಿಕೆ ಮಾಡಿಬಿಡತಾರ. ಆಮ್ಯಾಲೆ ಪ್ರತೀ ಕ್ಷೇತ್ರದೊಳಗ ಕೇವಲ ನಾಲ್ಕು ಖಾಸಗಿ ಸಂಸ್ಥೆಗಳು ಉಳಿಯೋ ಹಂಗ ಆಗತೇತಿ ಅಂತ ಇನ್ನ ಕೆಲವರು ಅಂತಾರು.

ಎಲ್ಲಾ ವಿಷಯಗಳಲ್ಲಿ ಇದ್ದಂತೆ ಇದರಲ್ಲಿಯೂ ಯಾವುದೋ ಒಂದು ಮಂತ್ರದಂಡ ಅಂತ ಇಲ್ಲ. ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ಇಲ್ಲ, ಇರಲಿಕ್ಕೆ ಸಾಧ್ಯ ಇಲ್ಲ. ಆಯಾ ಕ್ಷೇತ್ರದ ಅವಶ್ಯಕತೆಗಳಿಗೆ ತಕ್ಕಂತೆ ಇದನ್ನು ಒಂದು ಸ್ವಲ್ಪು ಅದನ್ನ ಒಂದು ಸ್ವಲ್ಪು ಉಪಯೋಗಿಸಿಕೊಂಡು ಎಲ್ಲರಿಗೂ ಸಮಾವಕಾಶ ಕಲ್ಪಿಸುವ ಸಮ ಸಮಾಜದ ಕಡೆ ಹೋಗಬೇಕು. ಜನ ಬರೇ ಮತದಾರರಾಗಿ ಉಳಿಯಬಾರದು. ನಾಗರಿಕರಾಗಿ ವಿಕಾಸಗೊಳ್ಳಬೇಕು. ನಾಗರಿಕರು ತಮ್ಮನ್ನಾಳುವವರು ದಾರಿ ತಪ್ಪಿದಾಗ ಅವರನ್ನ ಸರಿ ಮಾಡಬೇಕು. ತಿದ್ದಿ ಹೇಳಿದ್ದು ಕೇಳದಾಗ, ತಮ್ಮ ಮಾತು ಕೇಳುವವರನ್ನು ಆರಿಸಿ ತರಬೇಕು.

`ಅರ್ಥ ಶಾಸ್ತ್ರ ಎನ್ನುವುದು ಊರ ಮುಂದಿನ ಜಾತ್ರೆ ಇದ್ದಂತೆ. ಎಲ್ಲರೂ ತಮಗೆ ತಿಳಿದದ್ದನ್ನ ಜೋರಾಗಿ ಮಾತಾಡೋದಕ್ಕೆ ಯಾರ ಮಾತೂ ಯಾರಿಗೂ ತಿಳಿಯೋದಿಲ್ಲ’ ಅಂತ ಯುವ ಅರ್ಥ ಶಾಸ್ತ್ರಜ್ಞ ಸ್ಟೀಫನ್ ಲೆವಿಟ್ ಹೇಳಿದಾರು. ಈ ಮಾತು ನಾವು ನೆನಪು ಇಟಗೋಬೇಕು. ಒಳ್ಳೆಯ ವಿಚಾರಗಳು ಎಲ್ಲರಿಗೂ ತಲುಪಬೇಕು. ಅವರು ಒಪ್ಪಲಿ – ಬಿಡಲಿ ಚರ್ಚೆ ಆಗಬೇಕು. ಸಕಲ ಕಲ್ಯಾಣಕ್ಕೆ ಕಾರಣವಾಗೋ ವಿಚಾರಗಳನ್ನ ಜಾರಿ ಮಾಡೋ ಪ್ರಯತ್ನ ಮಾಡಬೇಕು. ಅಲ್ಲವೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...