Homeಅಂಕಣಗಳುನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

ನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

- Advertisement -
- Advertisement -

ಪಂಥ ಪ್ರಧಾನ ಸೇವಕರು ಮತ್ತು ಅವರ ಆಜ್ಞಾಧಾರಕರಾದ ಕೆಲವು ಮಂತ್ರಿಗಳು ಭಾರತದ ಸರಕಾರ 20 ಲಕ್ಷ ಕೋಟಿ ಪರಿಹಾರ ಬಿಡುಗಡೆ ಮಾಡಿದ್ದರಿಂದ ಭರತ ವರ್ಷದ ಎಲ್ಲಾ ಸಮಸ್ಯೆಗಳು ಮುಗದು ಹೋದವು ಅಂತ ಹೇಳಾಕ ಹತ್ಯಾರ. ಅದ ಖರೆ ಅಂತ ಕೆಲವರು ತಿಳಕೊಂಡೂ ಬಿಟ್ಟಾರ.

ಆದರು ಅದರಾಗ ಚಿಪ್ಸ ಪಾಕೀಟಿನ ಗತೆ ಬರೇ ಹವಾ ಐತಿ, ಆದರ ಅಸಲು ಮಸಾಲೆ ಏನೂ ಇಲ್ಲಾ ಅಂತ ಹೇಳಿ ಕೆಲವು ತಜ್ಞರು ಅಭಿಪ್ರಾಯ ಪಟ್ಟಾರ. ಅದರಾಗ ಬರೇ ಸರಕಾರಿ ಸ್ವತ್ತುಗಳ ಖಾಸಗೀಕರಣ, ಕಾರ್ಮಿಕ ಕಾನೂನುಗಳ ಸಡಿಲಿಕೆ, ರದ್ದು, ಹಾಗೂ ಜನಸಾಮಾನ್ಯರ ಮೇಲಿನ ಸಾಲದ ಹೆಚ್ಚಳ ಬಿಟ್ಟರ ಏನೂ ಇಲ್ಲ ಅಂತ ಅವರ ಅಂಬೋಣ.

ಆ ಮನಿಷಾ ಅಷ್ಟು ಕಷ್ಟ ಪಡಲಿಕ್ಕೆ ಹತ್ಯಾರು, ಏನೇನೋ ಕಸರತ್ತು ಮಾಡತಾರು. ಅವರನ್ನ ಹೊಗಳೋದು ಬಿಟ್ಟು ತೆಗಳಲಿಕ್ಕೆ ಹತ್ತೀರಿ, ನಿಮಗ ಟೀಕೆ ಮಾಡಲಿಕ್ಕೆ ಬ್ಯಾರ ಟೈಮು ಇಲ್ಲೇನು, ನಿಮ ನಿಮ ಟೀಕಾಕಾರ ಒಯ್ದು ಒಂದು ಅಂತ ಕೆಲವರು ಶಾಪ ಹಾಕಾಕ ಹತ್ಯಾರು.

ನಿಮ್ಮ ಹತ್ತರ ಬರೇ ಪ್ರಶ್ನೆ ಅದಾವು. ಯಾವುದಕ್ಕರ ಉತ್ತರ ಏನರ ಅದಾವು ಏನು? ಅಂತ ಕೆಲವರು ಕೇಳತಾರು. ನಿಮ್ಮನ್ನೂ ಕೇಳಬಹುದು.
ಅಂಥವರ ಸಲುವಾಗಿ ಕೆಲವು ಉತ್ತರಗಳು.

ಮೊದಲಿಗೆ ಮಾಡಬೇಕಾಗಿದ್ದು ಆಡಳಿತದ ವಿಕೇಂದ್ರೀಕರಣ. ಈಗ ಐತೆಲ್ಲಾ ಗ್ರಾಮ ಪಂಚಾಯಿತಿ – ನಗರ ಸಭೆ -ಪಟ್ಟಣ ಪಂಚಾಯಿತಿ ಎಲ್ಲಾನೂ ಅದಾವು ಅಂತ ನೀವು ಅನ್ನಬಹುದು. ಆದರ ಅದು ನಿಜವಾದ ಅರ್ಥದೊಳಗ ಇಲ್ಲ.

ಇದರ ಹಿನ್ನೆಲೆ ಭಾಳ ಮಜಾ ಐತಿ. ಸುಮಾರು 1910 ರವರೆಗೆ ಅಫಘಾನಿಸ್ತಾನದಿಂದ ಹಿಡಿದು ಬರ್ಮಾವರೆಗೆ ಭಾರತದ ಭೂಪಟ ಚಾಚಿತ್ತು. ಅಷ್ಟು ದೊಡ್ಡ ದೇಶ ಆಳೋ ಬ್ರಿಟೀಷರ ಸಂಖ್ಯೆ ಮಾತ್ರ ಎರಡು ಸಾವಿರಕ್ಕಿಂತ ಹೆಚ್ಚು ಇರಲಿಲ್ಲ. ಇದರಿಂದ ಏನಾತಪಾ ಅಂದರ ಏಳೂವರೆ ಸಾವಿರ ಕಿಲೋಮೀಟರು ದೂರದ ಇಂಗ್ಲಂಡಿನ ಈಸ್ಟು ಇಂಡಿಯಾ ಕಂಪನಿ ಕಚೇರಿಯೊಳಗ ಕೂತುಗೊಂಡ ಕೆಲವರು ಇಲ್ಲಿನ ಕೆಲವೇ ಜನ ಬಿಳಿಯ ಅಧಿಕಾರಿಗಳ ಮೂಲಕ ಆಡಳಿತ ನಡಸಿದರು. ಸುಮಾರು 200 ವರ್ಷ ಅವರು ಆಡಳಿತ ನಡೆಸಿದರ, ಒಂದು ನೂರು ವರ್ಷ ಅಲ್ಲಿನ ರಾಣಿ ಹೆಸರಿನಲ್ಲಿ ಅಲ್ಲಿನ ಪ್ರಧಾನಿ ಆಡಳಿತ ನಡೆಸಿದರು. ಆಡಳಿತ ಸುಗಮವಾಗಿರಬೇಕು, ದಿನಾ ಬೆಳಿಗ್ಗೆ ಕಿರಿಕಿರಿ ಇರಬಾರದು ಅಂತ ಹೇಳಿ ಅವರು ಈ ದೇಶವನ್ನ ದೊಡ್ಡ ದೊಡ್ಡ ಜಿಲ್ಲೆಗಳಾಗಿ ವಿಭಜನೆ ಮಾಡಿದರು. ಅದು ಇಂದಿಗೂ ನಡಕೊಂಡು ಬಂದೇತಿ. ಈಗ ಕೇಂದ್ರ ಸರಕಾರನೂ ಸಹಿತ ಜಿಲ್ಲಾಡಳಿತದ ಮುಖಾಂತರ ಯೋಜನೆ ಜಾರಿ ಮಾಡತೇತಿ. ಅದರ ಬದಲಿಗೆ ತಾಲೂಕು ಕೇಂದ್ರಿತ ಆಡಳಿತ ಆಗಬಹುದು. ಆವಾಗ ಜನರಿಗೆ ಕಮ್ಮಿ ಕಷ್ಟ ಆಗತೇತಿ.

ಖರೇ ಹೇಳಬೇಕಂದರ ಜನಾ ವಿಚಾರ ಮಾಡೋದು ನಮ್ಮ ಹಳ್ಳಿ- ನಮ್ಮ ಊರು- ನಮ್ಮ ಪಟ್ಟಣ ಅಂತ. ನಮ್ಮ ಜಿಲ್ಲೆ – ತಾಲೂಕು ಅನ್ನೋದು ಭಾವನಾತ್ಮಕ ವಿಷಯ ಅಷ್ಟ. ಹಂಗಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆ ಮುಂತಾದ ಘಟಕಗಳಿಗೆ ಆದ್ಯತೆ ಸಿಗಬೇಕು. ಇದು ಹೆಚ್ಚು ಆದಂತೆ, ಪ್ರಾದೇಶಿಕ ಅಸಮತೋಲನ ಕಮ್ಮಿ ಆಗತೇತಿ.

ಅಲ್ಲೆ ಒಳ್ಳೆಯದಾದರೂ ಜಲ್ದೀ ತಿಳೀತೇತಿ, ಬ್ರಷ್ಟಾಚಾರ ಆದರೂ ಎಲ್ಲಾರ ಮುಂದ ಆಗತೇತಿ, ಎಲ್ಲಾರಿಗೂ ಕಾಣತೇತಿ. ಅದರಿಂದ ಅದು ಕಮ್ಮಿ ಆದರೂ ಆಗಬಹುದು. ಪಾರದರ್ಶಕತೆ ಇಲ್ಲಾ ಅಂದರ ಅದು ಕಮ್ಮಿ ಆಗೋ ಸಾಧ್ಯತೆ ಇಲ್ಲ.

ಎರಡನೇಯದಾಗಿ ಸ್ಥಳೀಯ ಮಾರುಕಟ್ಟೆಗಳ ಆರಂಭ ಮತ್ತು ಪುನರುಜ್ಜೀವನ. ಗಾಂಧೀವಾದಿ ಇಳಾ ಭಟ್ ಅವರು ಹೇಳಿದಂತೆ ಆಹಾರ, ನೀರು- ಬಟ್ಟೆ- ವಸತಿ ಎನ್ನುವ ಸರಕುಗಳು ಹಾಗೂ ಆರೋಗ್ಯ- ಶಿಕ್ಷಣ- ಬ್ಯಾಂಕಿಂಗ್ ಅಥವಾ ಹಣಕಾಸು ಅನುಕೂಲ ಈ ಸೇವೆಗಳನ್ನ ಮೂಲಭೂತವಾದವು ಅಂತ ಪರಿಗಣಿಸಬೇಕು. ಇವುಗಳನ್ನ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯವಾಗಿ ತಯಾರು ಮಾಡಬೇಕು, ಸ್ಥಳೀಯವಾಗಿ ಮಾರಾಟ- ಖರೀದಿ ಮಾಡಬೇಕು. ಇದರಿಂದ ಸಾಗಾಣಿಕೆ ವೆಚ್ಚ ಉಳಿತಾಯ, ಸ್ಥಳೀಯ ಕೆಲಸಗಾರರು ಬದುಕುತ್ತಾರೆ ಹಾಗೂ ವ್ಯವಸ್ಥೆ ಪಾರದರ್ಶಕವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಳ ಸಂಸ್ಕೃತಿ ಉಳಿದುಕೊಳ್ಳುತ್ತದೆ ಅಂತ ಅವರ ಅನಿಸಿಕೆ. ಇನ್ನು ಗುಡಿ ಕೈಗಾರಿಕೆ ಹಾಗೂ ಗೃಹ ಕೈಗಾರಿಕೆ, ಗ್ರಾಮೋದ್ಯೋಗ ಇವಕ್ಕೆ ಉತ್ತೇಜನ ಕೊಡಬೇಕು, ಖಾದಿ ಉಳಿಸಬೇಕು, ಯಂತ್ರಗಳ ಬಳಕೆ ಕಮ್ಮಿ ಆಗಬೇಕು, ಜಾನಪದ ಸಂಸ್ಕೃತಿ ಉಳಿದು – ಬೆಳೆಯಬೇಕು ಅಂತ ಕೆಲವರು ಹೇಳತಾರ.

ಏ ಅದೇನು ಹಚ್ಚೀರಿ? ಯುದ್ಧ ವಿಮಾನ ಏನು ಹಳ್ಳಿಯೊಳಗ ಮಾಡಲಿಕ್ಕೆ ಬರತೇತೇನು? ಯಂತ್ರಗಳಿಲ್ಲದೇ ಉಪಗ್ರಹ ಉಡಾವಣೆ ಮಾಡೋದು ಅಂದರ ಅದೇನು ಬಿದರಿನ ಕಂಬದ ಮ್ಯಾಲೆ ಮಾಡಾಕ ಆಕಾಶ ಬುಟ್ಟಿ ಬಿಟ್ಟಂಗೇನು ಅಂತ ಇನ್ನ ಕೆಲವರು ಅಂತಾರು.

ಈ ಭಿನ್ನಾಭಿಪ್ರಾಯದಿಂದಾಗಿ ಅವರಿಗೂ- ಇವರಿಗೂ ಜಗಳ ಆಗತಾ ಇರತೇತಿ. ಅವರನ್ನ ಇವರು ಅಪ್ರಾಯೋಗಿಕರು ಅಂತ, ಇವರನ್ನ ಅವರು ನಿಜ ಜೀವನದಿಂದ ದೂರ ಇರೋ ರಮ್ಯತಾವಾದಿಗಳು ಅಂತ ಬೈಕೋತ ಇರತಾರ. ಪ್ರತಿಯೊಂದು ಕ್ಷೇತ್ರದೊಳಗ ಕೇವಲ ನಾಲ್ಕು ಸರಕಾರಿ ಸಂಸ್ಥೆಗಳು ಇರಬೇಕು, ಉಳಿದದ್ದನ್ನ ಖಾಸಗಿ ಸಂಸ್ಥೆಗಳು ನೋಡಿಕೋಬೇಕು ಅಂತ ಹಣಕಾಸು ಸಚಿವರಾದ ನಿರ್ಮಲಾ ಅಕ್ಕೋರು ಹೇಳಿದಾರು. ಇದು ತಪ್ಪು, ಸರಕಾರಿ- ಖಾಸಗಿ ಸಂಸ್ಥೆಗಳು ಸಹಭಾಗಿತ್ವ ಇರಬೇಕು ಅಂತ ಕೆಲವರು ಅಂತಾರ. ಬರೇ ಸರಕಾರಿ ಸಂಸ್ಥೆಗಳು ಇರಬೇಕು. ಇಲ್ಲಾ ಅಂದರ ಬರೇ ಖಾಸಗಿ ಸಂಸ್ಥೆಗಳಿಗೆ ಬಿಟ್ಟು ಬಿಟ್ಟರ ಅವರು ಅದನ್ನು ಒಲಿಗಾರ್ಕಿ ಅಥವಾ ಮಿತ ಜನತಂತ್ರ, ಅಲ್ಪಸಂಖ್ಯಾತರ ಪ್ರಭುತ್ವ ಅಥವಾ ಕೂಟಾಳ್ವಿಕೆ ಮಾಡಿಬಿಡತಾರ. ಆಮ್ಯಾಲೆ ಪ್ರತೀ ಕ್ಷೇತ್ರದೊಳಗ ಕೇವಲ ನಾಲ್ಕು ಖಾಸಗಿ ಸಂಸ್ಥೆಗಳು ಉಳಿಯೋ ಹಂಗ ಆಗತೇತಿ ಅಂತ ಇನ್ನ ಕೆಲವರು ಅಂತಾರು.

ಎಲ್ಲಾ ವಿಷಯಗಳಲ್ಲಿ ಇದ್ದಂತೆ ಇದರಲ್ಲಿಯೂ ಯಾವುದೋ ಒಂದು ಮಂತ್ರದಂಡ ಅಂತ ಇಲ್ಲ. ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ಇಲ್ಲ, ಇರಲಿಕ್ಕೆ ಸಾಧ್ಯ ಇಲ್ಲ. ಆಯಾ ಕ್ಷೇತ್ರದ ಅವಶ್ಯಕತೆಗಳಿಗೆ ತಕ್ಕಂತೆ ಇದನ್ನು ಒಂದು ಸ್ವಲ್ಪು ಅದನ್ನ ಒಂದು ಸ್ವಲ್ಪು ಉಪಯೋಗಿಸಿಕೊಂಡು ಎಲ್ಲರಿಗೂ ಸಮಾವಕಾಶ ಕಲ್ಪಿಸುವ ಸಮ ಸಮಾಜದ ಕಡೆ ಹೋಗಬೇಕು. ಜನ ಬರೇ ಮತದಾರರಾಗಿ ಉಳಿಯಬಾರದು. ನಾಗರಿಕರಾಗಿ ವಿಕಾಸಗೊಳ್ಳಬೇಕು. ನಾಗರಿಕರು ತಮ್ಮನ್ನಾಳುವವರು ದಾರಿ ತಪ್ಪಿದಾಗ ಅವರನ್ನ ಸರಿ ಮಾಡಬೇಕು. ತಿದ್ದಿ ಹೇಳಿದ್ದು ಕೇಳದಾಗ, ತಮ್ಮ ಮಾತು ಕೇಳುವವರನ್ನು ಆರಿಸಿ ತರಬೇಕು.

`ಅರ್ಥ ಶಾಸ್ತ್ರ ಎನ್ನುವುದು ಊರ ಮುಂದಿನ ಜಾತ್ರೆ ಇದ್ದಂತೆ. ಎಲ್ಲರೂ ತಮಗೆ ತಿಳಿದದ್ದನ್ನ ಜೋರಾಗಿ ಮಾತಾಡೋದಕ್ಕೆ ಯಾರ ಮಾತೂ ಯಾರಿಗೂ ತಿಳಿಯೋದಿಲ್ಲ’ ಅಂತ ಯುವ ಅರ್ಥ ಶಾಸ್ತ್ರಜ್ಞ ಸ್ಟೀಫನ್ ಲೆವಿಟ್ ಹೇಳಿದಾರು. ಈ ಮಾತು ನಾವು ನೆನಪು ಇಟಗೋಬೇಕು. ಒಳ್ಳೆಯ ವಿಚಾರಗಳು ಎಲ್ಲರಿಗೂ ತಲುಪಬೇಕು. ಅವರು ಒಪ್ಪಲಿ – ಬಿಡಲಿ ಚರ್ಚೆ ಆಗಬೇಕು. ಸಕಲ ಕಲ್ಯಾಣಕ್ಕೆ ಕಾರಣವಾಗೋ ವಿಚಾರಗಳನ್ನ ಜಾರಿ ಮಾಡೋ ಪ್ರಯತ್ನ ಮಾಡಬೇಕು. ಅಲ್ಲವೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...