Homeರಾಜಕೀಯಹಠಾತ್ ಸಿಎಂ ಗಾದಿಯ ಕನಸುಗಾರ

ಹಠಾತ್ ಸಿಎಂ ಗಾದಿಯ ಕನಸುಗಾರ

- Advertisement -
- Advertisement -

ಮತ್ತೊಬ್ಬ ಕಲರ್ ಫುಲ್ ರಾಜಕಾರಣಿ ಅನಂತಕುಮಾರ್ ಕಾಲನ ಮನೆ ಸೇರಿದ್ದಾರೆ. ಕೇಂದ್ರ ಸಚಿವರೂ ಆಗಿದ್ದ ರಾಜ್ಯದ ಪ್ರಮುಖ ಬಿಜೆಪಿ ನೇತಾರ ಅನಂತಕುಮಾರ್ ಅಸು ನೀಗಿದ ನಂತರ ಅವರನ್ನು ಕುರಿತು ’ವಾಚಾಮಗೋಚರ’ವಾಗಿ ಹೊಗಳಲಾಗುತ್ತಿದೆ. ಅವರ ವರ್ಣರಂಜಿತ ವ್ಯಕ್ತಿತ್ವವನ್ನು ’ಕಪ್ಪು-ಬಿಳುಪು’ ಬಣ್ಣಕ್ಕೆ ಸೀಮಿತಗೊಳಿಸಲಾಗುತ್ತದೆ. ಹಾಗೆ ನೋಡಿದರೆ ಯಾವ ವ್ಯಕ್ತಿತ್ವವನ್ನೂ ಕೇವಲ ಎರಡು ವರ್ಣ ಬಳಸಿ ಚಿತ್ರಿಸಲು ಆಗುವುದಿಲ್ಲ. ಚಿತ್ರಿಸಬಾರದು ಕೂಡ.
’ಕಪ್ಪು ಚುಕ್ಕೆ’ ಇಲ್ಲದ, ’ಸಜ್ಜನ’, ’ಅಪ್ಪಟ ಪ್ರಾಮಾಣಿಕ’, ’ಸೋಲಿಲ್ಲದ ಅಜಾತಶತ್ರು’ ಪದಗಳನ್ನು ಪುಂಖಾನುಪುಂಖವಾಗಿ ಬಳಸುವುದು ಕೂಡ ಸರಿಯಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಘನತೆ ಇರುವ ಹಾಗೆ ಪದಗಳಿಗೂ ಇರುತ್ತದೆ. ಅವುಗಳು ಅರ್ಥಹೀನವೇ ಆಗುವಂತೆ ಬಳಸಬೇಕಿಲ್ಲ. ಹೊಗಳುವ ಅಥವಾ ತೆಗಳುವ ಭರದಲ್ಲಿ ಭಾವವನ್ನೇ ಕೊಲ್ಲುವ ಭಾಷೆಯನ್ನು ಬಳಸಬಹುದೇ?
ಅನಂತಕುಮಾರ್ ಅವರ ಅಕಾಲಿಕ ಮತ್ತು ಆಕಸ್ಮಿಕ ನಿಧನವು ಕರ್ನಾಟಕದ ರಾಜಕೀಯದಲ್ಲಿ ನಿರ್ವಾತವನ್ನುಂಟು ಮಾಡದಿದ್ದರೂ ಅವರ ’ಕೊರತೆ’ಯನ್ನು ಸರಳವಾಗಿ ತುಂಬಲು ಸಾಧ್ಯವಿಲ್ಲ. ಅದು ತೆರೆಯ ಮೇಲೆ ಮತ್ತು ತೆರೆಯ ಹಿಂದಿನ ರಾಜಕಾರಣದಲ್ಲಿ ಕೂಡ. ಹೀಗೆ ’ಕೊರತೆ’ ನಿರ್ಮಾಣವಾಗುವುದು ಕೂಡ ಸಣ್ಣ ಮಾತೇನಲ್ಲ.
ಪತ್ರಿಕಾ ಕಚೇರಿಗಳಿಗೆ ಪ್ರೆಸ್ ನೋಟ್ ಹಂಚುತ್ತಿದ್ದ ’ಹುಡುಗ’ನೊಬ್ಬ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ’ಕೊರತೆ’ ಉಂಟು ಮಾಡುವಷ್ಟರ ಮಟ್ಟಿಗೆ ಬೆಳೆದಿರುವುದು ಅಚ್ಚರಿ-ಬೆರಗಿಗೆ ಕಾರಣವಾಗುವಂತಹುದು. ವ್ಯಕ್ತಿಯಾಗಿ ತಮ್ಮ ವ್ಯಕ್ತಿಗತ ನಡವಳಿಕೆ ಮತ್ತು ಉತ್ತಮ ಮತ್ತು ಸೌಜನ್ಯಪರ ಮಾತು-ಕಾಳಜಿಗಳಿಂದ ಅನಂತಕುಮಾರ್ ಅವರು ಪತ್ರಕರ್ತರೂ ಸೇರಿದಂತೆ ಹಲವರಿಗೆ-ಒಡನಾಡಿಗಳಿಗೆ ಪ್ರಿಯರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಅದೀಗ ಪದಗಳಲ್ಲಿ ವ್ಯಕ್ತವಾಗುತ್ತಿದೆ.
ರಾಜಕಾರಣ ಮತ್ತು ರಾಜಕೀಯ ನಡೆಗಳಿಗೆ ಸಂಬಂಧಿಸಿದಂತೆ ಅದೇ ಮಾತನ್ನು ಹೇಳಲು ಸಾಧ್ಯವಿಲ್ಲ. ಅವರಿಗೆ ’ಸಿಗಬೇಕಾದದ್ದು ಸಿಗಲಿಲ್ಲ’ ಎಂಬ ಮಾತನ್ನು ಎಲ್ಲರಿಗೂ ಅನ್ವಯಿಸಬಹುದು. ಆದೇ ರೀತಿ, ’ಸಿಕ್ಕಾಗ ಏನು ಮಾಡಿದರು’ ಎಂಬುದನ್ನು ಕೂಡ ಎಲ್ಲರಿಗೂ ಕೇಳಬೇಕು. ಅದು ಕೇವಲ ಅಧಿಕಾರ ಮತ್ತು ಅವಕಾಶಕ್ಕೆ ಸಂಬಂಧಿಸಿದ ಸಂಗತಿ ಮಾತ್ರ ಅಲ್ಲ.
’ಸರ್ವಾಧಿಕಾರಿ’ ಇಂದಿರಾಗಾಂಧಿ ಹೇರಿದ ಎಮರ್ಜೆನ್ಸಿಯಿಂದಾಗಿ ಕೆಲವರಿಗೆ ಹೋರಾಟ ಮಾಡುವ ಮತ್ತು ಜೇಲು ಸೇರುವ ಅವಕಾಶ ದೊರಕಿತು. ಹಾಗೆಯೇ ಎಮರ್ಜೆನ್ಸಿಯನ್ನ ’ಗ್ರೇಟ್’ ಎಂದು ಹೇಳುವ, ವ್ಯಾಖ್ಯಾನಿಸುವ ಬರಹಗಾರರು ಇದ್ದರು. ಈಗ ಕೂಡ ಅಗತ್ಯವಿದೆ ಎಂದು ವಾದಿಸುವವರ ಸಂಖ್ಯೆ ಕೂಡ ಕಡಿಮೆಯೇನಿಲ್ಲ. ಅದು ಬಂದಾಗಷ್ಟೇ ಗೊತ್ತಾಗುವುದರಿಂದ ಮತ್ತು ಬಂದಿದ್ದಾಗ ಅನುಭವಿಸಿದವರಿಗೆ ಮಾತ್ರ ಅದರ ಕಷ್ಟ ಗೊತ್ತು. ಉಳಿದವರು ಅದನ್ನು ಕೇವಲ ಅಂದಾಜಿಸಬಹುದು.ಬಹಳಷ್ಟು ಜನ ಅದನ್ನೂ ಮಾಡಲು ಸಿದ್ಧರಿರುವುದಿಲ್ಲ.
ಎಮರ್ಜೆನ್ಸಿ ಕಲ್ಪಿಸಿದ ಅವಕಾಶವು ಸಂಘ ಪರಿವಾರದವರಿಗೆ ಹೋರಾಟ ಮಾಡುವ ಮತ್ತು ಜೈಲುವಾಸ ಅನುಭವಿಸುವುದಕ್ಕೆ ಕಾರಣವಾಯಿತು. ಅನಂತಕುಮಾರ್ ಕೂಡ ಅದರ ಫಲಾನುಭವಿ. ನಾಲ್ಕಾರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ಇರುವ ಕರ್ನಾಟಕದ ಉಳಿದ ರಾಜಕಾರಣಿಗಳಿಗೆ ಹೋಲಿಸಿದರೆ ಅನಂತಕುಮಾರ್ ಲಕ್ಕಿ. ಪ್ರಧಾನಿ ವಾಜಪೇಯಿ ಅವರ ಅಧಿಕಾರ ಅವಧಿಯ ಆರು ವರ್ಷಗಳ ಕಾಲ ಅತ್ಯಂತ ಪ್ರಭಾವಶಾಲಿ ಹುದ್ದೆಗಳಲ್ಲಿದ್ದರು. ಈಗ ಮೋದಿ ಕ್ಯಾಬಿನೆಟ್ ನಲ್ಲಿ ಕೂಡ.
ರಾಜ್ಯ ರಾಜಕಾರಣದಲ್ಲಿ ಅವರಿಗೆ ’ಅವಕಾಶ’ ಸಿಗಲಿಲ್ಲ ಎಂದು ಹಲಬುವವರಿಗೆ ಹಠಾತ್ ಆಗಿ ಮುಖ್ಯಮಂತ್ರಿ ಆದ ರಾಮಕೃಷ್ಣ ಹೆಗಡೆ ಗೋಚರಿಸುತ್ತಾರೆ. ಸ್ವತಃ ಅನಂತಕುಮಾರ್ ಅವರಿಗೂ ಅದೇ ತರಹದ ಆಸೆಗಳಿದ್ದವು. ಮುಖ್ಯಮಂತ್ರಿಯಾದ ನಂತರ ’ಸರ್ವರನ್ನೂ ಒಳಗೊಳ್ಳುವ’ ರಾಜಕಾರಣ ಮಾಡಬೇಕು. ’ಜನನಾಯಕ’ ಆಗಬೇಕು ಎಂಬ ಇರಾದೆ ಅವರದಾಗಿತ್ತು. ಹೆಗೆಡೆಯವರಿಗೆ ಆದ ಆಕಸ್ಮಿಕ ಮತ್ತೊಬ್ಬರಿಗೆ ಆಗಲಾರದು. ಅದು ಬೈ ಚಾನ್ಸ್ ಆದ ಬೆಳವಣಿಗೆ. ಇತಿಹಾಸ ಅಥವಾ ನಡೆದು ಹೋದ ಒಂದು ಘಟನೆಯನ್ನು ಇಟ್ಟುಕೊಂಡು ಅದೇ ರೀತಿ ನಡೆಯಲಿ ಎಂದು ಆಸೆ ಪಡುವುದು ತಪ್ಪೇನಲ್ಲ. ಆದರೆ, ಅದು ಮರುಕಳಿಸುವ ಸಾಧ್ಯತೆ ಕಡಿಮೆ.
ರಾಜ್ಯ ರಾಜಕಾರಣದಲ್ಲಿ ಪ್ರಮುಖ ಹುದ್ದೆ ಪಡೆಯಲು ಅಥವಾ ’ಮುಖ್ಯಮಂತ್ರಿ’ ಆಗಲು ಅವರು ತೆರೆಯ ಮರೆಯಲ್ಲಿ ’ಸಕ್ರಿಯ’ ಪ್ರಯತ್ನ ನಡೆಸಿದ್ದು ಗುಟ್ಟಿನ ಸಂಗತಿಯೇನಲ್ಲ. ಸಹಜವಾಗಿಯೇ ಬಯಸದಿದ್ದರೂ ’ಹುಟ್ಟು’ ಕೆಲವರಿಗೆ ವರ ಮತ್ತು ಶಾಪಗಳೆರಡನ್ನೂ ತಂದು ಕೊಡುತ್ತದೆ. ಅವರು ಹುಟ್ಟಿದ ’ಸಮುದಾಯ’ದ ಕಾರಣದಿಂದ ಹಲವು ಲಾಭ ದೊರೆತವು. ಹಾಗೆಯೇ ಅದೇ ’ಮಾಸ್ ಲೀಡರ್’ ಎಂದು ಪರಿಗಣಿಸದೇ ಇರುವಂತೆ ಅಡ್ಡಿಯೂ ಆಯಿತು. ಅವರು ಕೂಡ ಅಧಿಕಾರ ದೊರೆತ ನಂತರ ’ಜನನಾಯಕ’ ಆಗಬೇಕು ಅಂದುಕೊಂಡಿರುವಲ್ಲಿಯೇ ಲೋಪ ಇತ್ತು.
ಬಿಜೆಪಿ ಪಕ್ಷದೊಳಗಿನ ಬದಲಾವಣೆ-ಏರಿಳಿತಗಳು ಕೂಡ ಅನಂತಕುಮಾರ್ ಅವರ ರಾಜಕೀಯ ಬದುಕಿನ ಮೇಲೆ ನೇರ ಪರಿಣಾಮ ಬೀರಿದವು. ಅವರಿಗೆ ಹಲವು ಅವಕಾಶಗಳನ್ನು ನೀಡಿದ ಪಕ್ಷವು ಸಹಜವಾಗಿಯೇ ತನ್ನ ಲಾಭಕ್ಕಾಗಿ ಅನಂತಕುಮಾರ್ ಅವರನ್ನೂ ನಿಯಂತ್ರಿಸಿತು. ಹಾಗೆ ನಿಯಂತ್ರಣ ಮೀರಿ ಹೊರ ಬರುವ ಇರಾದೆ ಅವರಿಗೆ ಇರಲಿಲ್ಲ ಮತ್ತು ಅವರ ವ್ಯಕ್ತಿತ್ವಕ್ಕೆ ಅದು ಸಾಧ್ಯವೂ ಇರಲಿಲ್ಲ.
ಕೇಂದ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಅನಂತಕುಮಾರ್ ಯಶಸ್ವಿಯಾಗಿದ್ದರು. ಸಚಿವರಾಗಿ, ಬಿಜೆಪಿ ನಾಯಕರಾಗಿ ಅನಂತಕುಮಾರ್ ಅವರ ’ಸಾಧನೆ’ ನಗಣ್ಯವೇನಲ್ಲ. ಆದರೆ, ಪಕ್ಷದ ಗುಂಪುಗಾರಿಕೆ ಅವರು ಮತ್ತಷ್ಟು ಬೆಳೆಯದಂತೆ ಬಿಡಲಿಲ್ಲ ಎಂಬುದನ್ನೂ ಗಮನಿಸಬೇಕು. ಹಾಲಿ ಪ್ರಧಾನಿ ಅವರು ಅನಂತಕುಮಾರ ಅವರನ್ನು ’ವಿರೋಧಿ ಬಣ’ದವರು ಎಂದೇ ಪರಿಗಣಿಸುತ್ತಿದ್ದರು. ಸಂಪುಟದಿಂದ ಕೈ ಬಿಡಲಾಗದ ಆದರೆ ಪ್ರಮುಖ ಸ್ಥಾನ ನೀಡಲು ಮನಸ್ಸಿಲ್ಲದ ಸ್ಥಿತಿ ಅವರದಾಗಿತ್ತು. ಆಡಳಿತದ ಅನುಭವ ಇದ್ದ ಅನಂತಕುಮಾರ್ ಅವರನ್ನು ರಸಗೊಬ್ಬರ ಖಾತೆಯಿಂದ ಸಂಸದೀಯ ವ್ಯವಹಾರಗಳ ಖಾತೆಗೆ ಪ್ರಮೋಷನ್ ನೀಡುವಷ್ಟು ಮಾತ್ರ ಔದಾರ್ಯ ತೋರಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ್ ಅವರನ್ನು ಸೋಲಿಸುವವರೇ ಇರಲಿಲ್ಲ. ಕಾಂಗ್ರೆಸ್ ಎದುರಾಳಿಯನ್ನು ಆರಿಸುವುದಕ್ಕಾಗಿ ಎಲ್ಲ ಬಗೆಯ ಪ್ರಯತ್ನ ನಡೆಸಿತ್ತು. ಚುನಾವಣಾ ರಾಜಕೀಯದಲ್ಲಿ ಸಂಸತ್ ಗೆ ಮಾತ್ರ ಸೀಮಿತರಾಗಿದ್ದ ಅನಂತಕುಮಾರ್ ಅವರು ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿಯುವುದು ಕೂಡ ಕಷ್ಟ ಸಾಧ್ಯವಾದ ಸಂಗತಿಯಾಗಿತ್ತು.
ಅನಂತಕುಮಾರ್ ಅವರದು ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಎಂದು ಹೇಳುವುದು ಸಾಧ್ಯವೇ? ಇಲ್ಲ. ಟೆಲಿಕಾಮ್ ಹಗರಣ, ಹೌಸಿಂಗ್ ಹಗರಣ, ನೀರಾ ರಾಡಿಯಾ ಟೇಪ್ ಪ್ರಕರಣ, ಅಶೋಕಾ ಹೋಟೆಲ್ ಪ್ರಕರಣ ಹೀಗೆ ಪಟ್ಟಿ ಬೆಳೆಯುತ್ತದೆ. ಅವು ಯಾವುವೂ ಸಣ್ಣ-ಪುಟ್ಟವುಗಳೇನಲ್ಲ. ಅನಂತಕುಮಾರ್ ಸುದೈವಿ ಮತ್ತು ಚಾಣಾಕ್ಷ ಅವುಗಳ ’ಮಸಿ’ ತಮಗೆ ಹತ್ತದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಅಳೆದು ತೂಗಿದ ಮೇಲೆ ಅನಂತಕುಮಾರ್ ಸಾವು ಕೆಲಕಾಲ ಅವರಿದ್ದ ಪಕ್ಷಕ್ಕೆ ’ಖಾಲಿತನ’ ಅನುಭವಿಸುವಂತೆ ಮಾಡುತ್ತದೆ ಎಂಬುದಷ್ಟೇ ಉಳಿಯುತ್ತದೆ.

– ಡಿ.ಪಿ.ಗೌತಮ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...