Homeಕರ್ನಾಟಕದ್ಯಾವೇಗೌಡ್ರು ಖರಗೆ ಭುಜ ಇಡಕಂಡು ಪಾರ್ಲಿಮೆಂಟಿಗೆ ಹೋಗದೆ ಚೆಂದ ಕಣ್ಳಾ..

ದ್ಯಾವೇಗೌಡ್ರು ಖರಗೆ ಭುಜ ಇಡಕಂಡು ಪಾರ್ಲಿಮೆಂಟಿಗೆ ಹೋಗದೆ ಚೆಂದ ಕಣ್ಳಾ..

- Advertisement -
- Advertisement -

‘ನನಿಗನ್ನುಸ್ತಾ ಅದೆ’ ಎಂದು ಗಡ್ಡ ಕೆರೆದ ವಾಟಿಸ್ಸೆ.
‘ಅದೇನನ್ನಸ್ತು ಹೇಳ್ಳ’ ಎಂದಳು ಜುಮ್ಮಿ.
‘ಈ ಕರೋನ ಅಷ್ಟು ಸುಲಬಾಗಿ ಹೋಗದಿಲ್ಲ ಕಣಕ್ಕ’.
‘ಯಾಕ್ಲ’.
‘ಯಾಕೆ ಅಂದ್ರೆ ಅದು ಅವರಿಸಿಗಳದ್ಕೂ ಮದ್ಲು ಇಡೀ ಇಂಡಿಯಾ ಲಾಕ್‍ಡವುನ್ ಅಂದ್ರು. ಅವುರೇಳಿದಂಗೆ ಕೇಳಿದೊ ಈಗ ಅದು ಜಾಸ್ತಿಯಾದ ಮ್ಯಾಲೆ ಲಾಕ್‍ಡವುನ್ ತಗದವುರೆ ಹಿಂಗಾದ್ರೆ ಯಂಗೋಯ್ತದೇ?’.
‘ಹೋಗದಿಲ್ಲ ಅಂತಿಯಾ’.
‘ಚಾನ್ಸೆಯಿಲ್ಲ ದಿನೇ ದಿನೇ ಜಾಸ್ತಿಯಾಯ್ತದೆ’.
‘ಸದ್ಯ ನಮ್ಮೂರಿಗೆ ಬರಲಿಲವಲ್ಲ ಹೇಳು’.
‘ಅಂಗೇಳಂಗೇಯಿಲ್ಲ ಕಣೆ. ಬೊಂಬಾಯಿಲಿರೋರು ಬಂದ್ರೇ ಅದು ಬತ್ತದೆ’.
‘ಮದ್ಲು ಬಂಬಾಯಿಲಿರೋರು ಬಂದಾಗ ಯೇಡಸ ತಂದ್ರು, ಈಗಿವುರು ಬಂದು ಕರೋನ ತತ್ತರಲ್ಲ ಹೇಳು’.
‘ಹೆದರುಬ್ಯಾಡ ಕಣಕ್ಕ ಕರೋನ ಕ್ಯೂರಬಲ್ಲು ಅದೇ ಏಡಸು ನಾನ್ ಕ್ಯೂರಬಲ್’.
‘ಅಂಗದ್ರೆ ಕರೋನ ಬಂದೋರು ಉಸಾರಾಗಿ ಮನಿಗೆದ್ದೊಯ್ತರೆ. ಅದೇ ಏಡಸಾದ್ರೆ ಚಟ್ಟಕಟ್ಟದೆಯ’.
‘ಮತ್ಯಾಕೆ ಹೆದ್ರಿಕಳದು ಬುಡ್ಳ’
‘ನಾನಂತೂ ಯಾವತ್ತು ಹೆದರಿಲ್ಲ ಕಣಕ್ಕ ಈ ಉಗ್ರಿನೆ ಹೆದರಿ ನಡಗ್ತನಂಗೆಯ’.
‘ಅದ್ಯಾಕ್ಲ ಹೆದರತಿ ಉಗ್ರಿ’.
‘ಕ್ವಾರಂಟೈನು ಮಾಡಿ ನಾಯಿ ನೋಡಿದಂಗೆ ನೋಡಿಕತ್ತರಂತೆ. ದೂರ ನಿಂತಗಂಡು ಬಿಸ್ಕತ್ತ ಯಸಿತರಂತೆ. ಅದ್ಕೆ ಕಣೆ’.
‘ಇನ್ನೆನು ನಿನಗೆ ತ್ವಡೆಮ್ಯಾಲೆ ಕುಂಡ್ರಿಸಿಗಂಡು ಉಣ್ಣುಸ್ತರ್ಲ. ಕಾಯಿಲೆ ಬಂದಾಗ ಯಲ್ಲಾನು ಅನುಬವುಸಬೇಕು’.
‘ಯಾವ ಕಾಯಿಲೆ ಬಂದ್ರು ಹೆದರಸೋ ಧೈರ್ಯ ಬರಬೇಕಾದ್ರೆ ವಳ್ಳೆ ಸರಕಾರ ಇರಬೇಕು ಕಣೆ. ಈ ಹಾಳು ಸರಕಾರ ಯಂಗದೆ ಅಂತೀ. ಇದಿಲ್ದೆಯಿದ್ರೆ ಯಂಗೋ ಚನ್ನಾಗಿರತಿದ್ದೊ’.
‘ಮಿಸ್ಟರ್ ಉಗ್ರಿ ಬಿಜೆಪಿ ಸರಕಾರ ಇರದೇ ಹಿಂಗಲವೇನೋ ಅದು ಗೊತ್ತಿಲವೆ ನಿನಗೆ’.
‘ಇರದೆ ಹಿಂಗೆ ಅಂದ್ರೆ’.
‘ಅಂದ್ರೆ ಈ ಸರಕಾರ ನಡೆಸೋರು ಪರಂಪರೆ ಜನ. ಪರಕೀಯರು ದಾಳಿ ಮಾಡಿ ಇಂಡಿಯಾ ದೇಸವ ಆಳತಾಯಿದ್ರೆ ಅವುರು ದೇವಸ್ಥಾನದಲ್ಲಿ ಭಜನೆ ಮಾಡಿಕೊಂಡು ಪ್ರಸಾದ ತಿಂತಾಯಿದ್ರಂತೆ. ಈಗ್ಲು ಅಂಗೇ ಅವುರೆ. ಕೊರೋನಾ ಬಂದ್ರೇನು, ಜನ ಸತ್ತರೆ ಅವುರಿಗೇನೂ. ಯಾವುದ್ಕು ಕೇರ್ ಮಾಡದಂಗೆ ತಾವು ಒಂದು ವರುಸದಲ್ಲಿ ಏನೇನು ಮಾಡಿದೊ ಅಂತ ಪುಸ್ತಕ ಬರದು ಹಂಚತಾಕುಂತವುರೆ ಇದಕೇನೇಳ್ತೀ’.
‘ಹೇಳದಿನ್ನೇನು ನೀನು ಮದ್ಲೆ ಹೇಳಿದಲ್ಲ ಅಂಗೆ ಆಗ್ಯಾದೆ’.
‘ಈಗ್ಯಾವುದೊ ಯಲಕ್ಸನ್ನ ಬಂದು ದ್ಯಾವೇಗೌಡ್ರು ನಿಂತವುರಂತಲ್ಲಾ ಯಾವುದ್ಲ’ ಎಂದಳು ಜುಮ್ಮಿ.
‘ಅದು ಧಾರುಣವಾದ ಯಲಕ್ಸನ್ನು ಕಣಕ್ಕ’.
‘ಅದ್ಯಾಕ್ಲ’.
‘ಪಾಪ ಆ ಉಮೇಸ್ ಕತ್ತಿ ಬಂಡಾಯದ ನಾಟಕ ಎಬ್ಬಿಸಿ ತನ್ನ ತಮ್ಮನಿಗೇ ಟಿಕೇಟು ಗ್ಯಾರಂಟಿ ಅಂತ ಕಾಯ್ತಾಯಿದ್ದ. ಇನ್ನು ಎಜುಕೇಷನ್ ಮಾರ್ವಾಡಿಯಂತಿರೊ ಕೋರೆ, ಈಗಾಗ್ಲೇ ಎಲ್ಡು ಸಲ ಆಗಿದ್ದು ಸಾಲ್ದು ಅಂತ ಮೂರ್ನೇ ಸಲಕ್ಕೂ ಯಡ್ಯೂರಪ್ಪನ ಜಪ ಮಾಡಿಕ್ಯಂಡು ಕುಂತಿದ್ದ. ಅಂತೋರಿಗೆಲ್ಲ ರಾಜ್ಯಸಭೆ ಸಿಗಲಿಲ್ಲ. ಅಂಗಾಗಿ ಅವುರ ಪಾಲಿಗೆ ಇದು ಧಾರುಣವಾದ ವಿಷಯ’.
‘ಮತ್ಯಾರಿಗೆ ಕೊಟ್ರು’.
‘ಬಿಜೆಪೀಲಿ ಯಾವುದೇ ಬೆನಿಫಿಟ್ ಕೊಡಬೇಕಾದ್ರು ಸಣ್ಣುಡಗರಿಂದ ಲಾಟಿ ಬೀಸಿರಬೇಕು. ಅಂಗಾಗಿ ಬೆಳಗಾವಿ ಈರಣ್ಣ, ರಾಯಚೂರು ಅಶೋಕ ಅನ್ನೊರ್ನ ಕ್ಯಾಂಡಿಡೇಟ್ ಮಾಡಿದ್ರು ಕಣಕ್ಕ. ಅವುರು ಹುಟ್ಟಿದಾಗಿಂದ ಲಾಟಿ ಬೀಸಿದ್ರಂತೆ’.
‘ಕಾಂಗ್ರೆಸ್ಸಿಂದ ಯಾರ್ಲ’.
‘ಕಾಂಗ್ರೆಸ್ಸಿಂದ ಖರಗೆ, ದ್ಯಾವೇಗೌಡ್ರು ಕಣಕ್ಕ. ಕಾಂಗ್ರೆಸ್ಸಲ್ಲಿ ಜಾಸ್ತಿ ಓಟಿದ್ದವಂತೆ ಅದ ದ್ಯಾವೇಗೌಡ್ರಿಗೆ ಕೊಡ್ತರೆ ಅಂಗಾಗಿ ದ್ಯಾವೇಗೌಡ್ರು ಅರ್ಧ ಕಾಂಗ್ರೆಸ್ಸು, ಅರ್ಧ ದಳದ ಕ್ಯಾಂಡೇಟು’.
‘ಈ ಯಂಬತ್ತೇಳನೇ ವಯಸಲ್ಲಿ ಅವುರಿಗೆ ಬೇಕಿತ್ತೆ’ ಎಂದ ಉಗ್ರಿ.
‘ಯಂಬತ್ತೇಳು ಅವರ ಶರೀರಕ್ಕಾಗ್ಯದೆ ಮನಸಿಗಲ್ಲ ಕಣೊ, ನೋಡಿವಿರು ಗೆದ್ದು ಪಾರ್ಲಿಮೆಂಟಿಗೆ ಯಂಗೆ ಇಬ್ಬರು ಭುಜ ಹಿಡಕಂಡೋಯ್ತರೆ ಅದ ನೋಡಕ್ಕೆ ಚಂದ’.


ಇದನ್ನು ಓದಿ: ನಮ್ಮೂರ ಡಾ.ಎಚ್ಚೆನ್‍ಗೆ ನೂರು: ವೈಯಕ್ತಿಕ ನೆನಪುಗಳ ಹಿನ್ನೆಲೆಯಲ್ಲೊಂದು ಸಾಮಾಜಿಕ ನೋಟ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...