Homeಅಂಕಣಗಳುಕಟ್ಟೆಪುರಾಣ: ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ

ಕಟ್ಟೆಪುರಾಣ: ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ

“ಅದೆ ಕಂಡ್ಳ ನಾನೇಳಿದ್ದು, ಊರಲ್ಲಿ ಪ್ರಾಯಕ್ಕೆ ಬಂದೆದ್ದೆ ಯಲ್ಲ ಹುಡುಗ್ರು ಬೆಂಗಳೂರು ಸೇರಿಕಂಡಿದ್ರು. ನೋಡೀಗ ಯಲ್ಲ ಬಂದವೆ ಯವಸಾಯ ಮಾಡ್ತ ಅವೆ ಊರಿಗೇ ಒಂದು ಕಳೆ ಬಂದದೆ.”

- Advertisement -
- Advertisement -

ವಾಟಿಸ್ಸೆ ಬಂದ ಕೂಡಲೆ ಜುಮ್ಮಿ ಏನೋ ಹೊಳೆದಂತೆ.

“ಲೇ ವಾಟಿಸ್ಸೆ ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ” ಎಂದಳು.

“ನಿನಿಗೇನಾಯ್ತಕ್ಕ ಇಂತ ಮಾತಾಡ್ತೀ.”

“ಪ್ರಪಂಚನೆ ಹೆದರಿಕಂಡು ಕುಂತದೆ ಇವುಳಿಗೆ ವಳ್ಳೆದಾಯ್ತಂತೆ ಇದಕೇನೇಳ್ತಿಯಪ್ಪ” ಎಂದ ಉಗ್ರಿ.

“ಅಕ್ಕನೆ ಹೇಳ್ತಳೆ ಬುಡು. ಅದೇನೇಳಕ್ಕ.”

“ನಮ್ಮೂರು ಮಂದ್ಲಿದ್ದಂಗಾಯ್ತು ಕಂಡ್ಳ.”

“ಯಂಗೇ ಅಂತ.”

“ಹೆಚ್ಚುಕಮ್ಮಿ ಇಪ್ಪತ್ತು ಮನೆ ಬಾಗಲಾಕಿದ್ದೊ ಕಂಡ್ಳ, ಅವುರ್ಯಲ್ಲ ಬೆಂಗಳೂರು ಸೇರಿಕಂಡಿದ್ರು. ಈಗ್ಯಲ್ಲ ಬಂದು ಬಾಗಲತಗದವುರೆ ಕತ್ಲೆ ಮನೆ ಬೆಳಕಾದೊ.”

“ಓಟರ್‍ಲಿಸ್ಟು ಪಿಲಪ್ಪಾದ ರಾಜಕಾರಣಿಯಂಗೆ ಖುಷಿಯಾಗಿದ್ದಿಯಲ್ಲಕ್ಕ. ಜನಕೆ ಇದ್ದ ಜಾಗದಲ್ಲಿ ಕ್ಯಲಸಿರಲಿಲ್ಲ. ಯಲ್ಲ ಬೆಂಗಳೂರಿಗೋಗಿದ್ರು, ಕರೋನಾ ಕಾಯಿಲಗೆ ಹೆದರಿ ತಿರಗ ಊರಿಗೆ ಬಂದವುರೆ ಅಷ್ಟೆಯ.”

“ಅದೆ ಕಂಡ್ಳ ನಾನೇಳಿದ್ದು, ಊರಲ್ಲಿ ಪ್ರಾಯಕ್ಕೆ ಬಂದೆದ್ದೆ ಯಲ್ಲ ಹುಡುಗ್ರು ಬೆಂಗಳೂರು ಸೇರಿಕಂಡಿದ್ರು. ನೋಡೀಗ ಯಲ್ಲ ಬಂದವೆ ಯವಸಾಯ ಮಾಡ್ತ ಅವೆ ಊರಿಗೇ ಒಂದು ಕಳೆ ಬಂದದೆ.”

“ಊರಿಗೆ ಕಳೆ ಬರದು ದುಡಿಯೋಕೈಗೆ ಕ್ಯಲಸಿದ್ದಾಗ ಕಣಕ್ಕ. ಕ್ಯಲಸಿಲ್ದೊರ ಮಕ ನೋಡಕ್ಕಾದತೆ?”

“ಅಲ್ಲಾ ಕಣೊ ವಾಟಿಸ್ಸೆ ರಾಜಕಾರಣಿಗಳಿಗ್ಯಾವ ಕ್ಯಲಸದೊ ಆದ್ರು ಅವುರ ಮಕ ನೋಡು ಯಂಗೆ ಲಕಲಕ ಅಂತ ವಳಿತದೆ” ಎಂದ ಉಗ್ರಿ.

“ಅದೇನೊ ನಿಜ ಆ ಸಿ.ಟಿ ರವಿ ಅನ್ನೊ ಮಿನಿಸ್ಟ್ರಿಗೆ ಪಾಪ ಏನೂ ಕ್ಯಲಸಿಲ್ಲ ಅದ್ಕೆ ಲೇಖನ ಬರಿತ ಕುಂತವುನೆ.”

“ಏನು ಬರದವುನೆ.”

“ನಾವು ಚೀಣಾ ದೇಸದ ಪದಾರ್ಥ ಬಳಸಬಾರ್ದು ನಾವೇ ತಯಾರು ಮಾಡಿಕಬೇಕು ಅಂತ ಬರದವುನೆ.”

“ಅಲ್ಲಾ ಕಣೊ ವಾಟಿಸ್ಸೆ ಅವುನ ಮನೆಲಿರೊ ಅರ್ದಕ್ಕರ್ದ ಪದಾರ್ಥ ಚೀಣಾ ದೇಸದ ಪದಾರ್ಥ. ಅಂತದ್ರಲ್ಲಿ ಲೇಖನ ಬರಿತನೆ ಅಂದ್ರೆ, ಅವುನ ಮನೆಲಿರೊ ಚೀಣಾ ದೇಸದ ಪದಾರ್ಥವ ವರಿಕಾಕಿ ಬೆಂಕಿ ಹಚ್ಚಿ ಅಮ್ಯಾಲೆ ಲೇಖನ ಪಾಕನ ಬರಿಬೇಕಲವೇನೊ.”

“ಬಿಜೆಪಿಗಳೇ ಅಂಗಲವೇನೊ, ಹೇಳದೊಂದು ಮಾಡದೊಂದು. ಯಲ್ಲಾನು ನಾವೇ ತಯಾರು ಮಾಡಿಕಬೇಕು ಅಂದ್ರೆ ಈ ಚೆಡ್ಡಿಗಳ ಕೈಲಿ ಏನಾಯ್ತದಪ್ಪಾ ಅಂದ್ರೇ, ಅವು ಕುಂಕುಮ ಗಂಧವ ಅವೇ ತಯಾರಿಸತ್ತವೆ? ಮಡಿ ಪಂಚೆ, ಟವಲ್ಲು, ಗಂಟೆ, ಮಂಗಳಾರತಿ ತಟ್ಟೆ ಕರ್ಪೂರನು ಬೇಕಾದ್ರೆ ಮಾಡಿಕತ್ತವೆ. ಇನ್ನುಳದಂಗೆ ಪೂಜಾರಿ ಕೈಲಿರೊ ಮೊಬೈಲು, ಗಡಿಯಾರ, ಮಂಗಳಾರತಿ ತಟ್ಟಿಗೆ ಬಿದ್ದ ಕಾಸಿನ ಲೆಕ್ಕ ಬರಿಯೋ ಪೆನ್ನೂ ಕೂಡ ಚೀಣಾ ದೇಸದ್ದೆಯಪ್ಪ ಅಂತದರಲ್ಲಿ ಚೀಣಾ ದೇಸದಿಂದ ಬರೋ ಪದಾರ್ಥವ ತಾವೇ ತಯಾರಿಸಿಕೊಳಕ್ಕಾದತೆ.”

“ಸಿ.ಟಿ ರವಿ ಅಂದ್ರೆ ಅವುನ್ಯಾರ್ಲ.”

“ಇದೇನಕ್ಕ ಹಿಂಕೇಳ್ತಿ ಅವುನು ಚಿಕ್ಕಮಗಳೂರು ಕಡೆ ರಾಜಕಾರಣಿ. ಬಾಬಾಬುಡನ್‍ಗಿರಿಯ ದತ್ತಪೀಠ ಮಾಡಕ್ಕೊಗಿ ಗಲಾಟೆ ಎಬ್ಬಿಸಿ ಎಮ್ಮೆಲ್ಲೆ ಆದೋನು. ಈಗ ಮಂತ್ರಿಯಾಗ್ಯವುನೆ, ಕರೋನಾ ಕಾಯ್ಲದ ಕಾರಣಕ್ಕೆ ಕ್ಯಲಸಕ್ಕೆ ಬಾರದೋನಂಗಾಗ್ಯವುನೆ.”

“ಅದ್ಯಾಕಂಗಾದ.”

“ಅವುನೊಬ್ಬನೆ ಅಂಗಾಗಿಲ್ಲ ಕಣಕ್ಕ ಇಡೀ ಎಡೂರಪ್ಪನ ಸಂಪುಟವೇ ಅಂಗಾಗ್ಯದೆ. ಮಂತ್ರಿಗಳಾಗಿ ಮ್ಯರಿತ ಸನ್ಮಾನ ಮ್ಯರವಣಿಗೆ ದೇಸಭಕ್ತಿ ಬಾಸಣ ಮಾಡಿಕಂಡು ಮೋದಿ ಹೊಗಳಿಕಂಡು ಮ್ಯರಿಯನ ಅಂತ ಇದ್ದೊರಿಗೆ ಶನಿ ವಕ್ರಿಸಿದಂಗೆ ಕರೋನಾ ವಕ್ರಿಸಿಬುಡ್ತು ಹಂಗಾಗಿ ಯಲ್ಲ ಡಲ್ಲಾಗ್ಯವುರೆ.”

“ಎಡೂರಪ್ಪನೆ ಡಲ್ಲಾಗ್ಯವುರೆ.”

“ಅವುನ್ಯಾವತ್ತು ಲವುಲವಿಕೆ ಆಗಿದ್ನೊ ಪಾಪ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಪೈಲ್ಸ್ ತರ ಶೋಭಾ ಕಾಡಿದ್ಲು, ಈಗ ಕರೋನಾ ಕಾಡ್ತಾ ಅದೆ. ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಕ್ಕೆ ಆಗಲಿಲ್ಲ.”

“ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಿದೋರು ಅಂದ್ರೆ ಸಿದ್ದರಾಮಯ್ಯ, ಕುಮಾರಣ್ಣ ಕಣೊ.”

“ಸಿದ್ದರಾಮಯ್ಯನಿಗಿಂತ ಕುಮಾರಣ್ಣ ಕಣೊ ಎಂಜಾಯ್ ಮಾಡಿದ್ದು.”

“ಅದ್ಯಂಗ್ಲಾ ಎಂದಳು ಜುಮ್ಮಿ.”

“ಕುಮಾರಣ್ಣ ಕ್ಯಲಸದ ಒತ್ತಡ ಜಾಸ್ತಿಯಾಯ್ತು ಅಂದ್ರೆ ರಾಧಿಕನ ಮನೆಗೋಗಿ ಮನಗಿಬುಡತಿದ್ದ. ಆಗ ಎಂ.ಪಿ ಪ್ರಕಾಸಿದ್ರು ಯಲ್ಲನು ನೋಡಿಕಳರು. ಈಗ ಹೋಟ್ಳಲ್ಲಿದ್ದ ಕಣಕ್ಕ ಮುಖ್ಯಮಂತ್ರಿಯಾದೊನು ಹೋಟ್ಳಲ್ಲಿರತರೇನಕ್ಕ ಅದ್ಕೆ ಪವರ್ ಕಳಕಂಡ.”

“ಆ ಹೋಟ್ಳು ರೂಮು ದೆಸೆರೂಮಂತೆ ಕಣೊ. ಅದರಲ್ಲಿದ್ದಾಗ ಮುಖ್ಯಮಂತ್ರಿಯಾದೆ ಅದಕೆ ಅದರೊಳಗಿದ್ದಿನಿ ಅಂದಿದ್ದ.”

“ಸರಿಯಪ್ಪ ಆ ರೂಮಲ್ಲೆ ಇದ್ದಾಗ ಮುಖ್ಯಮಂತ್ರಿಗಿರಿ ಕಳಕಂಡನಲ್ಲ ಅದಕೇನೇಳ್ತನೆ.”

“ಅದನ್ನ ತಗದು ಶಾಸಕರ ಮ್ಯಾಲಾಕ್ತನೆ. ಏನೇ ಆಗ್ಲಿ ಕುಮಾರಣ್ಣ ಅವುರ್ಯಲ್ಲ ಈ ಬಿಜೆಪಿಗಳಷ್ಟು ಕ್ಯಟ್ಟೊರಲ್ಲ ಕಣೊ ಈ ಮುಂಡೆ ಮಕ್ಕಳು ಭ್ಯಳೆಮ್ಯಾಲೆ ಎರಗತಾಯಿರೋ ಮಿಡತೆ ದಂಡಿದ್ದಂಗೆ. ಯಲ್ಲನು ವಕ್ಕತಿಂದ ಸರ್ವನಾಶ ಮಾಡ್ತರೆ ನೋಡ್ತಾಯಿರು.”

“ !?


ಇದನ್ನು ಓದಿ:

ಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...