Homeಅಂಕಣಗಳುಕಟ್ಟೆಪುರಾಣ: ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ

ಕಟ್ಟೆಪುರಾಣ: ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ

“ಅದೆ ಕಂಡ್ಳ ನಾನೇಳಿದ್ದು, ಊರಲ್ಲಿ ಪ್ರಾಯಕ್ಕೆ ಬಂದೆದ್ದೆ ಯಲ್ಲ ಹುಡುಗ್ರು ಬೆಂಗಳೂರು ಸೇರಿಕಂಡಿದ್ರು. ನೋಡೀಗ ಯಲ್ಲ ಬಂದವೆ ಯವಸಾಯ ಮಾಡ್ತ ಅವೆ ಊರಿಗೇ ಒಂದು ಕಳೆ ಬಂದದೆ.”

- Advertisement -
- Advertisement -

ವಾಟಿಸ್ಸೆ ಬಂದ ಕೂಡಲೆ ಜುಮ್ಮಿ ಏನೋ ಹೊಳೆದಂತೆ.

“ಲೇ ವಾಟಿಸ್ಸೆ ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ” ಎಂದಳು.

“ನಿನಿಗೇನಾಯ್ತಕ್ಕ ಇಂತ ಮಾತಾಡ್ತೀ.”

“ಪ್ರಪಂಚನೆ ಹೆದರಿಕಂಡು ಕುಂತದೆ ಇವುಳಿಗೆ ವಳ್ಳೆದಾಯ್ತಂತೆ ಇದಕೇನೇಳ್ತಿಯಪ್ಪ” ಎಂದ ಉಗ್ರಿ.

“ಅಕ್ಕನೆ ಹೇಳ್ತಳೆ ಬುಡು. ಅದೇನೇಳಕ್ಕ.”

“ನಮ್ಮೂರು ಮಂದ್ಲಿದ್ದಂಗಾಯ್ತು ಕಂಡ್ಳ.”

“ಯಂಗೇ ಅಂತ.”

“ಹೆಚ್ಚುಕಮ್ಮಿ ಇಪ್ಪತ್ತು ಮನೆ ಬಾಗಲಾಕಿದ್ದೊ ಕಂಡ್ಳ, ಅವುರ್ಯಲ್ಲ ಬೆಂಗಳೂರು ಸೇರಿಕಂಡಿದ್ರು. ಈಗ್ಯಲ್ಲ ಬಂದು ಬಾಗಲತಗದವುರೆ ಕತ್ಲೆ ಮನೆ ಬೆಳಕಾದೊ.”

“ಓಟರ್‍ಲಿಸ್ಟು ಪಿಲಪ್ಪಾದ ರಾಜಕಾರಣಿಯಂಗೆ ಖುಷಿಯಾಗಿದ್ದಿಯಲ್ಲಕ್ಕ. ಜನಕೆ ಇದ್ದ ಜಾಗದಲ್ಲಿ ಕ್ಯಲಸಿರಲಿಲ್ಲ. ಯಲ್ಲ ಬೆಂಗಳೂರಿಗೋಗಿದ್ರು, ಕರೋನಾ ಕಾಯಿಲಗೆ ಹೆದರಿ ತಿರಗ ಊರಿಗೆ ಬಂದವುರೆ ಅಷ್ಟೆಯ.”

“ಅದೆ ಕಂಡ್ಳ ನಾನೇಳಿದ್ದು, ಊರಲ್ಲಿ ಪ್ರಾಯಕ್ಕೆ ಬಂದೆದ್ದೆ ಯಲ್ಲ ಹುಡುಗ್ರು ಬೆಂಗಳೂರು ಸೇರಿಕಂಡಿದ್ರು. ನೋಡೀಗ ಯಲ್ಲ ಬಂದವೆ ಯವಸಾಯ ಮಾಡ್ತ ಅವೆ ಊರಿಗೇ ಒಂದು ಕಳೆ ಬಂದದೆ.”

“ಊರಿಗೆ ಕಳೆ ಬರದು ದುಡಿಯೋಕೈಗೆ ಕ್ಯಲಸಿದ್ದಾಗ ಕಣಕ್ಕ. ಕ್ಯಲಸಿಲ್ದೊರ ಮಕ ನೋಡಕ್ಕಾದತೆ?”

“ಅಲ್ಲಾ ಕಣೊ ವಾಟಿಸ್ಸೆ ರಾಜಕಾರಣಿಗಳಿಗ್ಯಾವ ಕ್ಯಲಸದೊ ಆದ್ರು ಅವುರ ಮಕ ನೋಡು ಯಂಗೆ ಲಕಲಕ ಅಂತ ವಳಿತದೆ” ಎಂದ ಉಗ್ರಿ.

“ಅದೇನೊ ನಿಜ ಆ ಸಿ.ಟಿ ರವಿ ಅನ್ನೊ ಮಿನಿಸ್ಟ್ರಿಗೆ ಪಾಪ ಏನೂ ಕ್ಯಲಸಿಲ್ಲ ಅದ್ಕೆ ಲೇಖನ ಬರಿತ ಕುಂತವುನೆ.”

“ಏನು ಬರದವುನೆ.”

“ನಾವು ಚೀಣಾ ದೇಸದ ಪದಾರ್ಥ ಬಳಸಬಾರ್ದು ನಾವೇ ತಯಾರು ಮಾಡಿಕಬೇಕು ಅಂತ ಬರದವುನೆ.”

“ಅಲ್ಲಾ ಕಣೊ ವಾಟಿಸ್ಸೆ ಅವುನ ಮನೆಲಿರೊ ಅರ್ದಕ್ಕರ್ದ ಪದಾರ್ಥ ಚೀಣಾ ದೇಸದ ಪದಾರ್ಥ. ಅಂತದ್ರಲ್ಲಿ ಲೇಖನ ಬರಿತನೆ ಅಂದ್ರೆ, ಅವುನ ಮನೆಲಿರೊ ಚೀಣಾ ದೇಸದ ಪದಾರ್ಥವ ವರಿಕಾಕಿ ಬೆಂಕಿ ಹಚ್ಚಿ ಅಮ್ಯಾಲೆ ಲೇಖನ ಪಾಕನ ಬರಿಬೇಕಲವೇನೊ.”

“ಬಿಜೆಪಿಗಳೇ ಅಂಗಲವೇನೊ, ಹೇಳದೊಂದು ಮಾಡದೊಂದು. ಯಲ್ಲಾನು ನಾವೇ ತಯಾರು ಮಾಡಿಕಬೇಕು ಅಂದ್ರೆ ಈ ಚೆಡ್ಡಿಗಳ ಕೈಲಿ ಏನಾಯ್ತದಪ್ಪಾ ಅಂದ್ರೇ, ಅವು ಕುಂಕುಮ ಗಂಧವ ಅವೇ ತಯಾರಿಸತ್ತವೆ? ಮಡಿ ಪಂಚೆ, ಟವಲ್ಲು, ಗಂಟೆ, ಮಂಗಳಾರತಿ ತಟ್ಟೆ ಕರ್ಪೂರನು ಬೇಕಾದ್ರೆ ಮಾಡಿಕತ್ತವೆ. ಇನ್ನುಳದಂಗೆ ಪೂಜಾರಿ ಕೈಲಿರೊ ಮೊಬೈಲು, ಗಡಿಯಾರ, ಮಂಗಳಾರತಿ ತಟ್ಟಿಗೆ ಬಿದ್ದ ಕಾಸಿನ ಲೆಕ್ಕ ಬರಿಯೋ ಪೆನ್ನೂ ಕೂಡ ಚೀಣಾ ದೇಸದ್ದೆಯಪ್ಪ ಅಂತದರಲ್ಲಿ ಚೀಣಾ ದೇಸದಿಂದ ಬರೋ ಪದಾರ್ಥವ ತಾವೇ ತಯಾರಿಸಿಕೊಳಕ್ಕಾದತೆ.”

“ಸಿ.ಟಿ ರವಿ ಅಂದ್ರೆ ಅವುನ್ಯಾರ್ಲ.”

“ಇದೇನಕ್ಕ ಹಿಂಕೇಳ್ತಿ ಅವುನು ಚಿಕ್ಕಮಗಳೂರು ಕಡೆ ರಾಜಕಾರಣಿ. ಬಾಬಾಬುಡನ್‍ಗಿರಿಯ ದತ್ತಪೀಠ ಮಾಡಕ್ಕೊಗಿ ಗಲಾಟೆ ಎಬ್ಬಿಸಿ ಎಮ್ಮೆಲ್ಲೆ ಆದೋನು. ಈಗ ಮಂತ್ರಿಯಾಗ್ಯವುನೆ, ಕರೋನಾ ಕಾಯ್ಲದ ಕಾರಣಕ್ಕೆ ಕ್ಯಲಸಕ್ಕೆ ಬಾರದೋನಂಗಾಗ್ಯವುನೆ.”

“ಅದ್ಯಾಕಂಗಾದ.”

“ಅವುನೊಬ್ಬನೆ ಅಂಗಾಗಿಲ್ಲ ಕಣಕ್ಕ ಇಡೀ ಎಡೂರಪ್ಪನ ಸಂಪುಟವೇ ಅಂಗಾಗ್ಯದೆ. ಮಂತ್ರಿಗಳಾಗಿ ಮ್ಯರಿತ ಸನ್ಮಾನ ಮ್ಯರವಣಿಗೆ ದೇಸಭಕ್ತಿ ಬಾಸಣ ಮಾಡಿಕಂಡು ಮೋದಿ ಹೊಗಳಿಕಂಡು ಮ್ಯರಿಯನ ಅಂತ ಇದ್ದೊರಿಗೆ ಶನಿ ವಕ್ರಿಸಿದಂಗೆ ಕರೋನಾ ವಕ್ರಿಸಿಬುಡ್ತು ಹಂಗಾಗಿ ಯಲ್ಲ ಡಲ್ಲಾಗ್ಯವುರೆ.”

“ಎಡೂರಪ್ಪನೆ ಡಲ್ಲಾಗ್ಯವುರೆ.”

“ಅವುನ್ಯಾವತ್ತು ಲವುಲವಿಕೆ ಆಗಿದ್ನೊ ಪಾಪ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಪೈಲ್ಸ್ ತರ ಶೋಭಾ ಕಾಡಿದ್ಲು, ಈಗ ಕರೋನಾ ಕಾಡ್ತಾ ಅದೆ. ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಕ್ಕೆ ಆಗಲಿಲ್ಲ.”

“ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಿದೋರು ಅಂದ್ರೆ ಸಿದ್ದರಾಮಯ್ಯ, ಕುಮಾರಣ್ಣ ಕಣೊ.”

“ಸಿದ್ದರಾಮಯ್ಯನಿಗಿಂತ ಕುಮಾರಣ್ಣ ಕಣೊ ಎಂಜಾಯ್ ಮಾಡಿದ್ದು.”

“ಅದ್ಯಂಗ್ಲಾ ಎಂದಳು ಜುಮ್ಮಿ.”

“ಕುಮಾರಣ್ಣ ಕ್ಯಲಸದ ಒತ್ತಡ ಜಾಸ್ತಿಯಾಯ್ತು ಅಂದ್ರೆ ರಾಧಿಕನ ಮನೆಗೋಗಿ ಮನಗಿಬುಡತಿದ್ದ. ಆಗ ಎಂ.ಪಿ ಪ್ರಕಾಸಿದ್ರು ಯಲ್ಲನು ನೋಡಿಕಳರು. ಈಗ ಹೋಟ್ಳಲ್ಲಿದ್ದ ಕಣಕ್ಕ ಮುಖ್ಯಮಂತ್ರಿಯಾದೊನು ಹೋಟ್ಳಲ್ಲಿರತರೇನಕ್ಕ ಅದ್ಕೆ ಪವರ್ ಕಳಕಂಡ.”

“ಆ ಹೋಟ್ಳು ರೂಮು ದೆಸೆರೂಮಂತೆ ಕಣೊ. ಅದರಲ್ಲಿದ್ದಾಗ ಮುಖ್ಯಮಂತ್ರಿಯಾದೆ ಅದಕೆ ಅದರೊಳಗಿದ್ದಿನಿ ಅಂದಿದ್ದ.”

“ಸರಿಯಪ್ಪ ಆ ರೂಮಲ್ಲೆ ಇದ್ದಾಗ ಮುಖ್ಯಮಂತ್ರಿಗಿರಿ ಕಳಕಂಡನಲ್ಲ ಅದಕೇನೇಳ್ತನೆ.”

“ಅದನ್ನ ತಗದು ಶಾಸಕರ ಮ್ಯಾಲಾಕ್ತನೆ. ಏನೇ ಆಗ್ಲಿ ಕುಮಾರಣ್ಣ ಅವುರ್ಯಲ್ಲ ಈ ಬಿಜೆಪಿಗಳಷ್ಟು ಕ್ಯಟ್ಟೊರಲ್ಲ ಕಣೊ ಈ ಮುಂಡೆ ಮಕ್ಕಳು ಭ್ಯಳೆಮ್ಯಾಲೆ ಎರಗತಾಯಿರೋ ಮಿಡತೆ ದಂಡಿದ್ದಂಗೆ. ಯಲ್ಲನು ವಕ್ಕತಿಂದ ಸರ್ವನಾಶ ಮಾಡ್ತರೆ ನೋಡ್ತಾಯಿರು.”

“ !?


ಇದನ್ನು ಓದಿ:

ಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...