Homeಅಂಕಣಗಳುಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

- Advertisement -
- Advertisement -

ಪಂಡಿತರ ಮಾತುಗಳಲ್ಲಿ ಅರ್ಧದಷ್ಟನ್ನಾದರೂ ಮತದಾರರು ಸುಳ್ಳಾಗಿಸಿದ್ದಾರೆ. ಮತದಾರರು ನೀಡಿರುವ ತೀರ್ಪಿನಲ್ಲಿ ಹಲವು ಪಾಠಗಳಿವೆ. ಅದನ್ನು ಗಮನಿಸಬೇಕು. ಮತದಾರರೂ ಸುಳ್ಳುಗಳಿಗೆ ಬಲಿಯಾಗುವ ಎಲ್ಲಾ ಸಾಧ್ಯತೆಗಳಿರುವಾಗ ಅವರನ್ನು ಎಚ್ಚರಿಸುವ ಕರ್ತವ್ಯ ವಿದ್ವಾಂಸರಿಗಿರುವುದಿಲ್ಲವೆಂದಲ್ಲ. ಆದರೆ, ಸಮಷ್ಟಿಯಾಗಿ ಜನರು ನೀಡುವ ತೀರ್ಪುಗಳಿಗೆ ಹೆಚ್ಚಿನ ಮಹತ್ವವಿರುತ್ತದೆ. ಅಂತಹ ಹಲವು ಸಂಗತಿಗಳನ್ನು ಈ ಚುನಾವಣೆಯು ಮುಂದಿಟ್ಟಿದೆ.
ತೆಲಂಗಾಣದಲ್ಲಿ ಟಿಆರ್‍ಎಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ. ಆದರೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೆಸಿಆರ್ ವಿನೂತನವಾಗಿ ಜಾರಿಗೊಳಿಸಿದ್ದರು. ಅದಕ್ಕೆದುರಾಗಿ ಕಾಂಗ್ರೆಸ್‍ಗೆ ಸರಿಯಾದ ನಾಯಕತ್ವವೂ ಇರಲಿಲ್ಲ; ಸರಿಯಾದ ಕಾರ್ಯಕ್ರಮವೂ ಇರಲಿಲ್ಲ; ಅಖಿಲ ಭಾರತ ಮಟ್ಟಕ್ಕೆ ಸೂಕ್ತವಾಗಬಹುದಾದ ಮಹಾಘಟಬಂಧನವು, ತೆಲಂಗಾಣಕ್ಕೆ ಪ್ರಜಾಕೂಟಮಿಯಾಗಿ ಒದಗಿ ಬರಲಿಲ್ಲ.
ಇಂತಹ ತೆಲಂಗಾಣದಲ್ಲಿ ಮೊದಲು ಟಿಆರ್‍ಎಸ್ ಗೆಲುವು ಶತಸ್ಸಿದ್ಧ ಎಂದು ಮಾಧ್ಯಮಗಳು ನುಡಿದಿದ್ದವು. ಚಂದ್ರಬಾಬು ನಾಯ್ಡು ಕಾಂಗ್ರೆಸ್ ಜೊತೆ ಸೇರಿದಾಗ ಟಿಆರ್‍ಎಸ್ ಅಧಿಕಾರಕ್ಕೆ ಬರುವುದಿಲ್ಲವೆಂಬ ಸಮೀಕ್ಷೆಗಳು ಬಂದವು. ಈಗ ನೋಡಿದರೆ ಟಿಡಿಪಿಯ ಜೊತೆಗೆ ಹೋಗಿದ್ದರಿಂದಲೇ ಟಿಆರ್‍ಎಸ್ ಇನ್ನೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ತೆಲಂಗಾಣ ಸಂಸದೆ ಕೆಸಿಆರ್ ಮಗಳು ಕವಿತಾ ಹೇಳಿದಂತೆ, ‘ಅಲೆ ಮೊದಲಿಂದಲೂ ಟಿಆರ್‍ಎಸ್ ಪರವಾಗಿಯೇ ಇತ್ತು. ಚಂದ್ರಬಾಬು ಮಾಧ್ಯಮಗಳನ್ನು ಮ್ಯಾನೇಜ್ ಮಾಡುವುದರಿಂದ ಅಥವಾ ಮಾಧ್ಯಮಗಳು ಬಯಸುವ ಸಿಇಓ ಅವರಾಗಿದ್ದರಿಂದ ತಪ್ಪಾಗಿ ವ್ಯಾಖ್ಯಾನಿಸಲಾಯಿತು’. ಮಾಧ್ಯಮಗಳು ತಮ್ಮ ಪೂರ್ವಗ್ರಹಕ್ಕೆ ತಕ್ಕಂತೆ ಭಾರೀ ದೊಡ್ಡ ಸುಳ್ಳುಗಳನ್ನು ನಂಬಿಕೊಂಡು ಹೇಳುವ ಸಾಧ್ಯತೆಗಳಿವೆ.
ರಾಜಸ್ತಾನದ ಒನ್ ಟು ಒನ್ ಫೈಟ್‍ನಲ್ಲಿ ಕಾಂಗ್ರೆಸ್ ಭಾರೀ ದೊಡ್ಡ ಗೆಲುವನ್ನು ಪಡೆಯುತ್ತದೆಂಬ ಭವಿಷ್ಯವು ಮೊದಲಿಂದ ಮತಗಟ್ಟೆ ಸಮೀಕ್ಷೆಯವರೆಗೆ ಬರುತ್ತಿತ್ತು. ಜನರಿಗೆ ಬಿಜೆಪಿಯ ಬಗೆಗಿದ್ದ ಸಿಟ್ಟು ಸ್ಪಷ್ಟವಾಗಿ ವ್ಯಕ್ತವಾಗಿದೆ; ಆದರೆ ಕಾಂಗ್ರೆಸ್ ಅವರ ಸ್ಪಷ್ಟ ಆಯ್ಕೆಯಾಗಿಲ್ಲವೆಂಬುದು ಅದರ ತಿಣುಕಾಟದ ಗೆಲುವಿನಲ್ಲೂ, ಇತರ ಸಣ್ಣಪುಟ್ಟ ಪಕ್ಷಗಳು ಮತ್ತು ಪಕ್ಷೇತರರ ಗೆಲುವಿನಲ್ಲೂ ಗೊತ್ತಾಗುತ್ತಿದೆ. ಅಂದರೆ ಹೊಸ ಭರವಸೆ ಇರದೇ ಇದ್ದಲ್ಲಿ, ಒಮ್ಮೆ ಅವರು, ಇನ್ನೊಮ್ಮೆ ಇವರು ಎಂಬುದು ಸಹಜ ಸತ್ಯವಲ್ಲ ಎಂಬುದೇ ಇದರ ಸಾರಾಂಶ.
ಕಾಂಗ್ರೆಸ್‍ನ ತಿಣುಕಾಟಕ್ಕೆ ಟಿಕೆಟ್ ಹಂಚಿಕೆಯಲ್ಲಿನ ಸಮಸ್ಯೆಯೇ ಕಾರಣವೆಂದೂ, ಸ್ಥಳೀಯವಾಗಿ ದೊಡ್ಡ ಜಾತಿಯ ನಾಯಕನನ್ನು ಪ್ರೊಜೆಕ್ಟ್ ಮಾಡದೇ ಇದ್ದುದೇ ಸಮಸ್ಯೆಯೆಂದು ಹೇಳುತ್ತಿರುವುದೂ ವಾಸ್ತವವಲ್ಲ. ಹಾಗೆ ನೋಡಿದರೆ, ಭಾರೀ ಗೆಲುವನ್ನು ಪಡೆದಿರುವ ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಯಾರನ್ನೂ ಪ್ರೊಜೆಕ್ಟ್ ಮಾಡಿರಲಿಲ್ಲ. ಅದರ ಹಿರಿಯ ನಾಯಕ ಅಜಿತ್ ಜೋಗಿ ಪ್ರತ್ಯೇಕ ಪಕ್ಷ ಸ್ಥಾಪಿಸಿ ಬಹಳ ಕಾಲವಾಗಿತ್ತು.ಹಾಗೆಯೇ ಛತ್ತೀಸ್‍ಗಢದಲ್ಲಿ ರಮಣ್‍ಸಿಂಗ್ ಗೆಲ್ಲುತ್ತಾರೆ ಎಂಬುದನ್ನು ಬಹುತೇಕರು ಬಿಂಬಿಸುತ್ತಿದ್ದರು. ಕಾಂಗ್ರೆಸ್‍ಗಿದ್ದ ಅನಾನುಕೂಲತೆಗಳ ನಡುವೆಯೂ ಇದಕ್ಕೇನು ಕಾರಣ ಎಂಬುದನ್ನು ಸರಿಯಾಗಿ ವಿಶ್ಲೇಷಿಸುವ ಅಗತ್ಯವಿದೆ. ತಾನು ಇದ್ದುದರಲ್ಲಿ ಸೇಫ್ ಆದ ಭವಿಷ್ಯ ನುಡಿಯಬೇಕೆಂದು ಕರ್ನಾಟಕದ ಸಂದೀಪ್ ಶಾಸ್ತ್ರಿಯವರು ತನ್ನ ಲೇಖನದಲ್ಲಿ ಹಿಂದಿ ರಾಜ್ಯಗಳ ಚುನಾವಣೆಯ ಫಲಿತಾಂಶ 2:1 ಆಗಿರುತ್ತದೆ ಅಂದಿದ್ದರು. ಅದೂ ಸುಳ್ಳಾಯಿತು.ಅದೇನೇ ಇರಲಿ, ಇದು ಮೋದಿ ಮಾದರಿಯ ರಾಜಕಾರಣದ ವಿರುದ್ಧದ ಸ್ಪಷ್ಟ ಸಂದೇಶವಾಗಿದೆ. ರಾಹುಲ್‍ಗಾಂಧಿ ಭರವಸೆ ಮೂಡಿಸಿದ್ದಾರಾದರೂ ಅವರಿಗೆ ಈ ಚುನಾವಣೆಯು ಹಲವು ಎಚ್ಚರಿಕೆಗಳನ್ನು ನೀಡಿದೆ. ರಾಜಸ್ತಾನವು ಒಂದು ಎಚ್ಚರಿಕೆಯಾಗಿದ್ದರೆ, ಮಿಜೋರಾಂ ಇನ್ನೊಂದು ಎಚ್ಚರಿಕೆಯಾಗಿದೆ. ದೇಶವು ಕಾಂಗ್ರೆಸ್ ಮುಕ್ತವಾಗಿರದಿದ್ದರೂ ಈಶಾನ್ಯ ಭಾರತವು ಕಾಂಗ್ರೆಸ್ ಮುಕ್ತವಾಗಿದೆ. ಬಹುತೇಕ ಬುಡಕಟ್ಟು ಜನರು, ಕ್ರಿಶ್ಚಿಯನ್ನರು ಇರುವ ಈ ಪ್ರದೇಶದಲ್ಲಿ ಕಾಂಗ್ರೆಸ್ ‘ಸಹಜ ಆಯ್ಕೆ’ಯಲ್ಲ ಎಂಬುದು ಗಮನಾರ್ಹ. ಆ ಭಾಗದಲ್ಲಿ ಮುಂಚಿನಿಂದಲೂ ಹಲವು ಬಗೆಯ ‘ವಿಚ್ಛಿದ್ರತೆ’ಗೆ ಸ್ವತಃ ಕಾಂಗ್ರೆಸ್ಸೇ ಕಾರಣವಾಗಿತ್ತು. ಈಗದು ಅವಕಾಶವಾದಿತನಕ್ಕೆ ಕಾರಣವಾಗಿದ್ದು, ಅದರ ನೇರ ಹೊಣೆಯನ್ನು ಕಾಂಗ್ರೆಸ್ಸೇ ಹೊರಬೇಕು.
ಇದರೊಂದಿಗೆ ಇನ್ನೊಂದು ಅಂಶ, ದಕ್ಷಿಣ ಭಾರತವು ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಮುಕ್ತವಾಗಿದೆ. ಕರ್ನಾಟಕದಲ್ಲಿ ಇವೆರಡೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಎರಡೂ ದೊಡ್ಡ ಪಕ್ಷಗಳು ಎಂದು ಹೇಳಿಕೊಳ್ಳಬಹುದು ಮತ್ತು ಕೇರಳದಲ್ಲಿ ಪ್ರತಿ ಎರಡು ಚುನಾವಣೆಯಲ್ಲಿ ಒಂದು ಸಾರಿ ಗೆಲ್ಲುತ್ತೇನೆಂದು ಭಾವಿಸಬಹುದಾದರೂ ಈ ಸದ್ಯ ಎರಡೂ ಪಕ್ಷಗಳಿಗೆ ದಕ್ಷಿಣ ಭಾರತದಲ್ಲಿ ಮುಖ್ಯಮಂತ್ರಿಗಳಿಲ್ಲ. ಅಂದರೆ, ತಾವು ಅಖಿಲ ಭಾರತ ಪಕ್ಷ ಎಂದು ಹೆಚ್ಚು ಕೊಚ್ಚಿಕೊಳ್ಳುವಂತಿಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿಗಳಾಚೆ ಇರುವ ಬಹುತೇಕ ಪ್ರಾದೇಶಿಕ ಪಕ್ಷಗಳಲ್ಲಿ ಇರುವ ಸಮಾನ ಅಂಶವೆಂದರೆ ಅವೆಲ್ಲವೂ ವ್ಯಕ್ತಿ ಅಥವಾ ಕುಟುಂಬವೊಂದರ ಕಪಿಮುಷ್ಟಿಯಲ್ಲಿರುವ ಪಕ್ಷಗಳು. ತೆಲಂಗಾಣದಲ್ಲಿ ಗೆದ್ದಿರುವ ಟಿಆರ್‍ಎಸ್ ಸೇರಿದಂತೆ. ಇದನ್ನು ದಾಟಿ ನಿಜಕ್ಕೂ ಫೆಡರಲ್ ಆದ ಪರ್ಯಾಯ ಶಕ್ತಿಗೆ ದೇಶದಲ್ಲಿ ಅವಕಾಶ ಈಗಲೂ ಉಳಿದುಕೊಂಡಿದೆ.
ಅಂತಿಮವಾಗಿ, ಪ್ರಗತಿಪರ ಆಲೋಚನೆಯುಳ್ಳವರಿಗೆ ಈ ಫಲಿತಾಂಶವು ನೆಮ್ಮದಿ ತಂದಿರಬಹುದು. ಇದರೊಂದಿಗೆ 2014-16ಕ್ಕೆ ಹೋಲಿಸಿದರೆ ಬಿಜೆಪಿ ದುರ್ಬಲವೂ ಆಗಬಹುದು. ಆದರೆ, 2009ರ ಚುನಾವಣೆಯವರೆಗೆ ಒಂದು ರೀತಿಯ ಮತಗಳಿಕೆಯ ಸ್ಥಗಿತತೆ ಮತ್ತು ಕೆಲವು ಜಾತಿಕೋಟೆಗಳನ್ನು ದಾಟಲಾಗಿರದ ಬಿಜೆಪಿಯು 2014ರ ನಂತರ ಅವೆಲ್ಲವನ್ನೂ ದಾಟಿತು ಮತ್ತು ದೇಶದ ಮೂಲೆಮೂಲೆಗಳಲ್ಲೂ ಬಲ ಪಡೆದುಕೊಂಡಿತು. ಬಿಜೆಪಿ ಮಾತ್ರವಲ್ಲದೇ, ಆರೆಸ್ಸೆಸ್‍ನ ಮತೀಯ ರಾಜಕಾರಣ ಹಾಗೂ ಸುಳ್ಳಿನ ಬಲ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಇಂತಹ ಪ್ರಜಾತಂತ್ರ ವಿರೋಧಿ ವಿದ್ಯಮಾನಗಳನ್ನು ಸೋಲಿಸಿ, ನಿಜವಾದ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಭಿನ್ನ ಹೊಸದಾರಿಯನ್ನು ತುಳಿಯುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...