Homeಅಂಕಣಗಳುಮೋದಿಯ ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು...

ಮೋದಿಯ ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು…

- Advertisement -
- Advertisement -

ಸೋನಿಯಾ ಎಂಬ ಸ್ತ್ರೀ ಕಾರಂಜಿ
“ಘಜ್ನಿ ಮಹಮದ್, ತೈಮೂರ್‍ನ ಅನುಯಾಯಿಗಳು ಗಾಂಧೀಜಿಯನ್ನು ಕೊಂದದ್ದು, ಈ ನಾಡಿನ ಮುಸ್ಲಿಂ ಜನಾಂಗದ ದೇವಸ್ಥಾನವನ್ನು ಒಡೆದು ಬೀಳಿಸಿದ್ದು, ಮುಂಬೈನಂಥ ನಗರದಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು ಸುತ್ತುವರಿದು ಹಿಂಸಿಸಿ, ಅಂಗಡಿಗಳನ್ನು ಲೂಟಿ ಮಾಡಿದ್ದು ಇವತ್ತು ಐತಿಹಾಸಿಕ ದಾಖಲೆಯಾಗಿದೆ; ಗಲ್ಲಿಗೇರಬೇಕಾದ, ಜೈಲಲ್ಲಿ ಕೊಳೆಯುತ್ತಿರಬೇಕಾದ ಇಂಥವರು ಇವತ್ತು ಈ ರಾಷ್ಟ್ರದ ಆಡಳಿತ ಸೂತ್ರಗಳನ್ನು ಹಿಡಿದುಕೊಳ್ಳುವ ಮಾತಾಡುತ್ತಿರುವುದು ಭಾರತ ತಲುಪಿರುವ ಕರುಣಾಜನಕ ಸ್ಥಿತಿಯನ್ನು ತೋರುತ್ತದೆ. ಕೇಡಿಗಳನ್ನು ಹಿಡಿದು ಶಿಕ್ಷಿಸುವ ಬದಲು ಅವರು ದಿಗ್ವಿಜಯ ಸಾಧಿಸಿದಂತೆ ಆರತಿ ಬೆಳಗುತ್ತಿರುವುದು ವಿಚಿತ್ರವಾಗಿದೆ. ಯಾರೂ ಯಾವ ದೇಶವನ್ನು ನೋಡಕೂಡದು, ಕೋಶವನ್ನು ಓದಕೂಡದು, ಮೌಢ್ಯದಿಂದ ಹೊರಬರಕೂಡದು ಎಂದು ಇವತ್ತಿಗೂ ಹೇಳುತ್ತಿರುವ ಈ ಸಮಾಜದ್ರೋಹಿ, ಜೀವದ್ರೋಹಿಗಳು ಸಾವಿರಾರು ವರ್ಷಗಳಿಂದ ಈ ದೇಶವನ್ನು ಜಾತಿಪದ್ಧತಿಯಲ್ಲಿ ಹೂತುಹಾಕಿದ್ದು ಕಣ್ಣಿದ್ದು ನೋಡಬಲ್ಲವರಿಗೆ ಗೊತ್ತಿದೆ. ಇಂಥ ವಂಚಕರು ಸೋನಿಯಾ ತರಹದ ಮಹಿಳೆಯನ್ನು ವಿದೇಶದವಳೆಂದು ಹೀಯಾಳಿಸುವುದು ಇವರ ಪರಂಪರೆಗೆ ತಕ್ಕಂತಿದೆ.”
“ಈ ದೇಶದಲ್ಲಿಯೇ ಇದ್ದು ಇಲ್ಲಿಯ ಜನಸಮುದಾಯದ ದುರಂತ, ಸೋಲು, ಸಾವು ಎಲ್ಲವನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ, ಇಲ್ಲಿಯ ಜನರ ಅಸಹಾಯಕ ಸ್ಥಿತಿಯನ್ನೇ ತಮ್ಮ ಏಳ್ಗೆಗೆ ಉಪಯೋಗಿಸಿಕೊಂಡ ಪೂರ್ಣಯ್ಯಗಳೆಂಬ ದುಷ್ಟರು ನಿಜವಾಗಿಯೂ ಪರದೇಶಿಗಳು; ಇಲ್ಲಿಯ ಒಬ್ಬ ವಿಮಾನ ಚಾಲಕನನ್ನು ವರಿಸಿ ಆತನನ್ನು ರಾಜಕೀಯದಿಂದ ಹೊರಗಿಡಲು ಯತ್ನಿಸಿ ವಿಫಲವಾಗಿ ಸಾವು, ನೋವು, ದುಃಖದಲ್ಲಿ ಬೆಂದು ಹೋಗಿ ಇವತ್ತು ಗಾಂಧೀಜಿಯ ಮಾನವೀಯತೆಯನ್ನು ಸಾರ್ವಜನಿಕ ಜೀವನಕ್ಕೆ ತರಲು ಯತ್ನಿಸುತ್ತಿರುವ ಸೋನಿಯಾ ಈ ನಾಡಿನ ಸೊಸೆ, ಇಲ್ಲಿಯ ಹೆಮ್ಮೆಯ ಹೆಣ್ಣುಮಗಳು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಸೋನಿಯಾ ಅತ್ತೆ ಇಂದಿರಾಗಿಂತ, ಪತಿ ರಾಜೀವ್‍ಗಿಂತ ಜಾಣೆ; ಅವರಿಬ್ಬರೂ ಕೆಟ್ಟದಾಗಿ ಅರಚಬಹುದಾಗಿದ್ದ ಸಂದರ್ಭದಲ್ಲಿ ಪಶ್ಚಿಮದ ಖಚಿತತೆ, ಕುಶಲತೆ, ತೀವ್ರತೆ ತೋರುತ್ತಿರುವ ಸೋನಿಯಾ ನಿಜವಾದ ನಾಯಕಿಯಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಈಕೆ ಕೇವಲ ಹತ್ತು ದಿನದಲ್ಲಿ ಭಾರತದ ರಾಜಕೀಯಕ್ಕೆ ಮಿಂಚಿನ ಸಂಚಾರ ಮೂಡಿಸಿರುವುದು ಬಿಜೆಪಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.”
ಫೆಬ್ರವರಿ 11, 1998

ಪರಕೀಯ ವಾಜಪೇಯಿ ನಮ್ಮ ಹೆಣ್ಣುಮಗಳು ಸೋನಿಯಾ
“ಮಾಸ್ತಿಯವರು ತುಂಬ ಸುಶಿಕ್ಷಿತರಾಗಿದ್ದರು. ಆದರೆ ಅವರಿಗೆ ಭಾರತೀಯ ಸಮಾಜದಲ್ಲಿರುವ ಅನ್ಯಾಯಗಳು, ಶೋಷಣೆ, ಜಾತಿಪದ್ಧತಿ, ಪ್ರಚ್ಛನ್ನ ದಬ್ಬಾಳಿಕೆ- ಯಾವುದೂ ಕಾಣಿಸುತ್ತಿರಲಿಲ್ಲ. ಹಾಗೆಯೇ ಬ್ರಾಹ್ಮಣೇತರರ ಮೌಢ್ಯದ ಸೂಕ್ಷ್ಮಗಳು, ಅಪಾಯಗಳೂ ತಿಳಿಯುತ್ತಿರಲಿಲ್ಲ. ಅವರ ಪ್ರಕಾರ ವಸ್ತುನಿಷ್ಠೆ ಯಾವುದೆಂದರೆ, ಈಗಿರುವ ವ್ಯವಸ್ಥೆಯನ್ನು ಕಿಂಚಿತ್ತೂ ಕೆಡದಂತೆ ಕಾಪಾಡಿಕೊಂಡು ಬರುವುದು. ಮಾಸ್ತಿಯವರ ವಸ್ತುನಿಷ್ಠೆಯ ಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ಅವರು ಭಗವದ್ಗೀತೆಗೆ ನೀಡುವ ಅರ್ಥವನ್ನು ಒಪ್ಪಬಹುದು. ಅವರ ಪ್ರಕಾರ ಧರ್ಮ, ಸ್ವಧರ್ಮ, ಆತ್ಮ, ಪರಮಾತ್ಮ ಮುಂತಾದವೆಲ್ಲ ಎಂದೂ ಬದಲಾಗದ ವಸ್ತುಗಳು; ಧರ್ಮ ಜಾತಿಯಾಗಿಯೂ ವರ್ಗವಾಗಿಯೂ ಧರ್ಮವಾಗಿಯೂ ಬರುತ್ತದೆ. ಹಾಗಾಗಿಯೇ ಇಲ್ಲಿ ಕಂದಾಚಾರಿಯೊಬ್ಬನನ್ನು ಧರ್ಮವಂತ ಎಂದು ಕರೆಯುವುದು ಸುಲಭವಾಗುತ್ತದೆ. ಹಾಗೆಯೇ ಸೋನಿಯಾ ಇಟಾಲಿಯನ್ ಹೆಣ್ಣುಮಗಳು ಎಂಬ ಕಾರಣಕ್ಕೆ ನಮ್ಮ ಧರ್ಮಕ್ಕೆ ಸೇರಿದವಳಲ್ಲ, ನಮ್ಮ ಜೀವನಕ್ರಮದಿಂದ ಬಂದವಳಲ್ಲ ಎಂದು ವಾದಿಸುವುದು ಸುಲಭವಾಗುತ್ತದೆ. ಇದು ಶೋಷಕರ ಮಾರ್ಗ, ಸುಳ್ಳರ ದಾರಿ. ಯಾರೂ ಸಮುದ್ರವನ್ನು ದಾಟಿ ಹೊರದೇಶಗಳಿಗೆ ಹೋಗದಿದ್ದರೆ, ಯಾರೂ ಹೊರದೇಶದಿಂದ ಇಲ್ಲಿಗೆ ಬರದಿದ್ದರೆ ಇಲ್ಲಿ ತಾಳೆಗರಿಯ ಮೂಲಕ ವಂಚಿಸುತ್ತಾ ಹೋಗಬಹುದು. ಈ ಪರಕೀಯ ಎಂಬ ಮಾತನ್ನೇ ತೆಗೆದುಕೋ. ನನ್ನ ಪ್ರಕಾರ ಇಲ್ಲಿಯ ಪ್ರಕೃತಿ, ಜನ, ಸಂಪತ್ತು, ಆತ್ಮಗೌರವ ಇವೆಲ್ಲವುಗಳ ಬಗ್ಗೆ ಯಾವುದೇ ಪ್ರೀತಿ, ಗೌರವ ಇಲ್ಲದವನು ಪರಕೀಯ. ಇಂಥ ಪರಕೀಯತೆಗೆ ಉದಾಹರಣೆಯಾಗಿ ನಾನು ದಿವಾನ್ ಪೂರ್ಣಯ್ಯನವರ ಬಗ್ಗೆ ಹೇಳುತ್ತಿರುತ್ತೇನೆ. ಮೈಸೂರು ರಾಜ್ಯದ ಸೋಲು, ಟಿಪ್ಪುವಿನ ಸಾವು, ಇಂಗ್ಲಿಷರ ದಬ್ಬಾಳಿಕೆ ಎಲ್ಲವೂ ಈ ದೇಶದ ಚೈತನ್ಯವನ್ನು ಮುರಿಯುತ್ತಿದ್ದಾಗ ಪೂರ್ಣಯ್ಯನವರು ದಿವಾನ ಸ್ಥಾನದಲ್ಲಿ ನೆಮ್ಮದಿಯಾಗಿದ್ದರು; ಆದರೆ ಫ್ರೆಂಚರ ದೂಬಾಯಿ ಪಾದ್ರಿ ಸಾವಿರಾರು ಜನರಿಗೆ ನೆರವಾದ; ಸಿಡುಬು ಬಂದಾಗ ಲಸಿಕೆ ಹಾಕಿಸಿ ಜೀವ ಉಳಿಸಿದ. ಇಲ್ಲಿಯ ಅನಕ್ಷರತೆ, ಅಸಹಾಯಕತೆಯನ್ನು ತಮ್ಮ ವೈಭವಕ್ಕಾಗಿ ಬಳಸಿಕೊಂಡ ಪೂರ್ಣಯ್ಯ ಈ ದೇಶದವರು, ಇಲ್ಲಿಯ ಜನರನ್ನು ಪ್ರೀತಿಸಿ ಪೊರೆದ ದೂಬಾಯಿ ಪಾದ್ರಿ ಪರಕೀಯ ಎಂದು ನಾನು ನಂಬುವುದಿಲ್ಲ. ಆದ್ದರಿಂದಲೇ ನನ್ನ ದೃಷ್ಟಿಯಲ್ಲಿ ಪೂರ್ಣಯ್ಯ ಪರಕೀಯ, ವಿಶ್ವೇಶ್ವರಯ್ಯ ಸ್ವಕೀಯ, ಅನ್ಯಜಾತಿಯ ದೇವಾಲಯ ಬೀಳಿಸುವ ಅಡ್ವಾಣಿ, ವಾಜಪೇಯಿಗಳು ಪರಕೀಯ, ಸೋನಿಯಾ ಈ ದೇಶದ ಹೆಣ್ಣುಮಗಳು. ನಮ್ಮ ಜನಕ್ಕೆ ಎಲ್ಲ ದೇಶಗಳಿಂದ, ಎಲ್ಲ ಬಗೆಯ ಜನರಿಂದ ಆರ್ಥಿಕ ನೆರವು, ಬೆಚ್ಚನೆಯ ಪ್ರೀತಿ, ವೈಜ್ಞಾನಿಕ ದೃಷ್ಟಿ, ಆಧುನಿಕ ಧೋರಣೆ ಬೇಕಾಗಿದೆ.”
ಮಾರ್ಚ್ 4, 1998

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...