Homeಅಂಕಣಗಳುಮೋದಿಯ ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು...

ಮೋದಿಯ ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು…

- Advertisement -
- Advertisement -

ಸೋನಿಯಾ ಎಂಬ ಸ್ತ್ರೀ ಕಾರಂಜಿ
“ಘಜ್ನಿ ಮಹಮದ್, ತೈಮೂರ್‍ನ ಅನುಯಾಯಿಗಳು ಗಾಂಧೀಜಿಯನ್ನು ಕೊಂದದ್ದು, ಈ ನಾಡಿನ ಮುಸ್ಲಿಂ ಜನಾಂಗದ ದೇವಸ್ಥಾನವನ್ನು ಒಡೆದು ಬೀಳಿಸಿದ್ದು, ಮುಂಬೈನಂಥ ನಗರದಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು ಸುತ್ತುವರಿದು ಹಿಂಸಿಸಿ, ಅಂಗಡಿಗಳನ್ನು ಲೂಟಿ ಮಾಡಿದ್ದು ಇವತ್ತು ಐತಿಹಾಸಿಕ ದಾಖಲೆಯಾಗಿದೆ; ಗಲ್ಲಿಗೇರಬೇಕಾದ, ಜೈಲಲ್ಲಿ ಕೊಳೆಯುತ್ತಿರಬೇಕಾದ ಇಂಥವರು ಇವತ್ತು ಈ ರಾಷ್ಟ್ರದ ಆಡಳಿತ ಸೂತ್ರಗಳನ್ನು ಹಿಡಿದುಕೊಳ್ಳುವ ಮಾತಾಡುತ್ತಿರುವುದು ಭಾರತ ತಲುಪಿರುವ ಕರುಣಾಜನಕ ಸ್ಥಿತಿಯನ್ನು ತೋರುತ್ತದೆ. ಕೇಡಿಗಳನ್ನು ಹಿಡಿದು ಶಿಕ್ಷಿಸುವ ಬದಲು ಅವರು ದಿಗ್ವಿಜಯ ಸಾಧಿಸಿದಂತೆ ಆರತಿ ಬೆಳಗುತ್ತಿರುವುದು ವಿಚಿತ್ರವಾಗಿದೆ. ಯಾರೂ ಯಾವ ದೇಶವನ್ನು ನೋಡಕೂಡದು, ಕೋಶವನ್ನು ಓದಕೂಡದು, ಮೌಢ್ಯದಿಂದ ಹೊರಬರಕೂಡದು ಎಂದು ಇವತ್ತಿಗೂ ಹೇಳುತ್ತಿರುವ ಈ ಸಮಾಜದ್ರೋಹಿ, ಜೀವದ್ರೋಹಿಗಳು ಸಾವಿರಾರು ವರ್ಷಗಳಿಂದ ಈ ದೇಶವನ್ನು ಜಾತಿಪದ್ಧತಿಯಲ್ಲಿ ಹೂತುಹಾಕಿದ್ದು ಕಣ್ಣಿದ್ದು ನೋಡಬಲ್ಲವರಿಗೆ ಗೊತ್ತಿದೆ. ಇಂಥ ವಂಚಕರು ಸೋನಿಯಾ ತರಹದ ಮಹಿಳೆಯನ್ನು ವಿದೇಶದವಳೆಂದು ಹೀಯಾಳಿಸುವುದು ಇವರ ಪರಂಪರೆಗೆ ತಕ್ಕಂತಿದೆ.”
“ಈ ದೇಶದಲ್ಲಿಯೇ ಇದ್ದು ಇಲ್ಲಿಯ ಜನಸಮುದಾಯದ ದುರಂತ, ಸೋಲು, ಸಾವು ಎಲ್ಲವನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ, ಇಲ್ಲಿಯ ಜನರ ಅಸಹಾಯಕ ಸ್ಥಿತಿಯನ್ನೇ ತಮ್ಮ ಏಳ್ಗೆಗೆ ಉಪಯೋಗಿಸಿಕೊಂಡ ಪೂರ್ಣಯ್ಯಗಳೆಂಬ ದುಷ್ಟರು ನಿಜವಾಗಿಯೂ ಪರದೇಶಿಗಳು; ಇಲ್ಲಿಯ ಒಬ್ಬ ವಿಮಾನ ಚಾಲಕನನ್ನು ವರಿಸಿ ಆತನನ್ನು ರಾಜಕೀಯದಿಂದ ಹೊರಗಿಡಲು ಯತ್ನಿಸಿ ವಿಫಲವಾಗಿ ಸಾವು, ನೋವು, ದುಃಖದಲ್ಲಿ ಬೆಂದು ಹೋಗಿ ಇವತ್ತು ಗಾಂಧೀಜಿಯ ಮಾನವೀಯತೆಯನ್ನು ಸಾರ್ವಜನಿಕ ಜೀವನಕ್ಕೆ ತರಲು ಯತ್ನಿಸುತ್ತಿರುವ ಸೋನಿಯಾ ಈ ನಾಡಿನ ಸೊಸೆ, ಇಲ್ಲಿಯ ಹೆಮ್ಮೆಯ ಹೆಣ್ಣುಮಗಳು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಸೋನಿಯಾ ಅತ್ತೆ ಇಂದಿರಾಗಿಂತ, ಪತಿ ರಾಜೀವ್‍ಗಿಂತ ಜಾಣೆ; ಅವರಿಬ್ಬರೂ ಕೆಟ್ಟದಾಗಿ ಅರಚಬಹುದಾಗಿದ್ದ ಸಂದರ್ಭದಲ್ಲಿ ಪಶ್ಚಿಮದ ಖಚಿತತೆ, ಕುಶಲತೆ, ತೀವ್ರತೆ ತೋರುತ್ತಿರುವ ಸೋನಿಯಾ ನಿಜವಾದ ನಾಯಕಿಯಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಈಕೆ ಕೇವಲ ಹತ್ತು ದಿನದಲ್ಲಿ ಭಾರತದ ರಾಜಕೀಯಕ್ಕೆ ಮಿಂಚಿನ ಸಂಚಾರ ಮೂಡಿಸಿರುವುದು ಬಿಜೆಪಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.”
ಫೆಬ್ರವರಿ 11, 1998

ಪರಕೀಯ ವಾಜಪೇಯಿ ನಮ್ಮ ಹೆಣ್ಣುಮಗಳು ಸೋನಿಯಾ
“ಮಾಸ್ತಿಯವರು ತುಂಬ ಸುಶಿಕ್ಷಿತರಾಗಿದ್ದರು. ಆದರೆ ಅವರಿಗೆ ಭಾರತೀಯ ಸಮಾಜದಲ್ಲಿರುವ ಅನ್ಯಾಯಗಳು, ಶೋಷಣೆ, ಜಾತಿಪದ್ಧತಿ, ಪ್ರಚ್ಛನ್ನ ದಬ್ಬಾಳಿಕೆ- ಯಾವುದೂ ಕಾಣಿಸುತ್ತಿರಲಿಲ್ಲ. ಹಾಗೆಯೇ ಬ್ರಾಹ್ಮಣೇತರರ ಮೌಢ್ಯದ ಸೂಕ್ಷ್ಮಗಳು, ಅಪಾಯಗಳೂ ತಿಳಿಯುತ್ತಿರಲಿಲ್ಲ. ಅವರ ಪ್ರಕಾರ ವಸ್ತುನಿಷ್ಠೆ ಯಾವುದೆಂದರೆ, ಈಗಿರುವ ವ್ಯವಸ್ಥೆಯನ್ನು ಕಿಂಚಿತ್ತೂ ಕೆಡದಂತೆ ಕಾಪಾಡಿಕೊಂಡು ಬರುವುದು. ಮಾಸ್ತಿಯವರ ವಸ್ತುನಿಷ್ಠೆಯ ಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ಅವರು ಭಗವದ್ಗೀತೆಗೆ ನೀಡುವ ಅರ್ಥವನ್ನು ಒಪ್ಪಬಹುದು. ಅವರ ಪ್ರಕಾರ ಧರ್ಮ, ಸ್ವಧರ್ಮ, ಆತ್ಮ, ಪರಮಾತ್ಮ ಮುಂತಾದವೆಲ್ಲ ಎಂದೂ ಬದಲಾಗದ ವಸ್ತುಗಳು; ಧರ್ಮ ಜಾತಿಯಾಗಿಯೂ ವರ್ಗವಾಗಿಯೂ ಧರ್ಮವಾಗಿಯೂ ಬರುತ್ತದೆ. ಹಾಗಾಗಿಯೇ ಇಲ್ಲಿ ಕಂದಾಚಾರಿಯೊಬ್ಬನನ್ನು ಧರ್ಮವಂತ ಎಂದು ಕರೆಯುವುದು ಸುಲಭವಾಗುತ್ತದೆ. ಹಾಗೆಯೇ ಸೋನಿಯಾ ಇಟಾಲಿಯನ್ ಹೆಣ್ಣುಮಗಳು ಎಂಬ ಕಾರಣಕ್ಕೆ ನಮ್ಮ ಧರ್ಮಕ್ಕೆ ಸೇರಿದವಳಲ್ಲ, ನಮ್ಮ ಜೀವನಕ್ರಮದಿಂದ ಬಂದವಳಲ್ಲ ಎಂದು ವಾದಿಸುವುದು ಸುಲಭವಾಗುತ್ತದೆ. ಇದು ಶೋಷಕರ ಮಾರ್ಗ, ಸುಳ್ಳರ ದಾರಿ. ಯಾರೂ ಸಮುದ್ರವನ್ನು ದಾಟಿ ಹೊರದೇಶಗಳಿಗೆ ಹೋಗದಿದ್ದರೆ, ಯಾರೂ ಹೊರದೇಶದಿಂದ ಇಲ್ಲಿಗೆ ಬರದಿದ್ದರೆ ಇಲ್ಲಿ ತಾಳೆಗರಿಯ ಮೂಲಕ ವಂಚಿಸುತ್ತಾ ಹೋಗಬಹುದು. ಈ ಪರಕೀಯ ಎಂಬ ಮಾತನ್ನೇ ತೆಗೆದುಕೋ. ನನ್ನ ಪ್ರಕಾರ ಇಲ್ಲಿಯ ಪ್ರಕೃತಿ, ಜನ, ಸಂಪತ್ತು, ಆತ್ಮಗೌರವ ಇವೆಲ್ಲವುಗಳ ಬಗ್ಗೆ ಯಾವುದೇ ಪ್ರೀತಿ, ಗೌರವ ಇಲ್ಲದವನು ಪರಕೀಯ. ಇಂಥ ಪರಕೀಯತೆಗೆ ಉದಾಹರಣೆಯಾಗಿ ನಾನು ದಿವಾನ್ ಪೂರ್ಣಯ್ಯನವರ ಬಗ್ಗೆ ಹೇಳುತ್ತಿರುತ್ತೇನೆ. ಮೈಸೂರು ರಾಜ್ಯದ ಸೋಲು, ಟಿಪ್ಪುವಿನ ಸಾವು, ಇಂಗ್ಲಿಷರ ದಬ್ಬಾಳಿಕೆ ಎಲ್ಲವೂ ಈ ದೇಶದ ಚೈತನ್ಯವನ್ನು ಮುರಿಯುತ್ತಿದ್ದಾಗ ಪೂರ್ಣಯ್ಯನವರು ದಿವಾನ ಸ್ಥಾನದಲ್ಲಿ ನೆಮ್ಮದಿಯಾಗಿದ್ದರು; ಆದರೆ ಫ್ರೆಂಚರ ದೂಬಾಯಿ ಪಾದ್ರಿ ಸಾವಿರಾರು ಜನರಿಗೆ ನೆರವಾದ; ಸಿಡುಬು ಬಂದಾಗ ಲಸಿಕೆ ಹಾಕಿಸಿ ಜೀವ ಉಳಿಸಿದ. ಇಲ್ಲಿಯ ಅನಕ್ಷರತೆ, ಅಸಹಾಯಕತೆಯನ್ನು ತಮ್ಮ ವೈಭವಕ್ಕಾಗಿ ಬಳಸಿಕೊಂಡ ಪೂರ್ಣಯ್ಯ ಈ ದೇಶದವರು, ಇಲ್ಲಿಯ ಜನರನ್ನು ಪ್ರೀತಿಸಿ ಪೊರೆದ ದೂಬಾಯಿ ಪಾದ್ರಿ ಪರಕೀಯ ಎಂದು ನಾನು ನಂಬುವುದಿಲ್ಲ. ಆದ್ದರಿಂದಲೇ ನನ್ನ ದೃಷ್ಟಿಯಲ್ಲಿ ಪೂರ್ಣಯ್ಯ ಪರಕೀಯ, ವಿಶ್ವೇಶ್ವರಯ್ಯ ಸ್ವಕೀಯ, ಅನ್ಯಜಾತಿಯ ದೇವಾಲಯ ಬೀಳಿಸುವ ಅಡ್ವಾಣಿ, ವಾಜಪೇಯಿಗಳು ಪರಕೀಯ, ಸೋನಿಯಾ ಈ ದೇಶದ ಹೆಣ್ಣುಮಗಳು. ನಮ್ಮ ಜನಕ್ಕೆ ಎಲ್ಲ ದೇಶಗಳಿಂದ, ಎಲ್ಲ ಬಗೆಯ ಜನರಿಂದ ಆರ್ಥಿಕ ನೆರವು, ಬೆಚ್ಚನೆಯ ಪ್ರೀತಿ, ವೈಜ್ಞಾನಿಕ ದೃಷ್ಟಿ, ಆಧುನಿಕ ಧೋರಣೆ ಬೇಕಾಗಿದೆ.”
ಮಾರ್ಚ್ 4, 1998

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...