Homeಅಂಕಣಗಳುಮೋದಿಯ ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು...

ಮೋದಿಯ ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು…

- Advertisement -
- Advertisement -

ಸೋನಿಯಾ ಎಂಬ ಸ್ತ್ರೀ ಕಾರಂಜಿ
“ಘಜ್ನಿ ಮಹಮದ್, ತೈಮೂರ್‍ನ ಅನುಯಾಯಿಗಳು ಗಾಂಧೀಜಿಯನ್ನು ಕೊಂದದ್ದು, ಈ ನಾಡಿನ ಮುಸ್ಲಿಂ ಜನಾಂಗದ ದೇವಸ್ಥಾನವನ್ನು ಒಡೆದು ಬೀಳಿಸಿದ್ದು, ಮುಂಬೈನಂಥ ನಗರದಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು ಸುತ್ತುವರಿದು ಹಿಂಸಿಸಿ, ಅಂಗಡಿಗಳನ್ನು ಲೂಟಿ ಮಾಡಿದ್ದು ಇವತ್ತು ಐತಿಹಾಸಿಕ ದಾಖಲೆಯಾಗಿದೆ; ಗಲ್ಲಿಗೇರಬೇಕಾದ, ಜೈಲಲ್ಲಿ ಕೊಳೆಯುತ್ತಿರಬೇಕಾದ ಇಂಥವರು ಇವತ್ತು ಈ ರಾಷ್ಟ್ರದ ಆಡಳಿತ ಸೂತ್ರಗಳನ್ನು ಹಿಡಿದುಕೊಳ್ಳುವ ಮಾತಾಡುತ್ತಿರುವುದು ಭಾರತ ತಲುಪಿರುವ ಕರುಣಾಜನಕ ಸ್ಥಿತಿಯನ್ನು ತೋರುತ್ತದೆ. ಕೇಡಿಗಳನ್ನು ಹಿಡಿದು ಶಿಕ್ಷಿಸುವ ಬದಲು ಅವರು ದಿಗ್ವಿಜಯ ಸಾಧಿಸಿದಂತೆ ಆರತಿ ಬೆಳಗುತ್ತಿರುವುದು ವಿಚಿತ್ರವಾಗಿದೆ. ಯಾರೂ ಯಾವ ದೇಶವನ್ನು ನೋಡಕೂಡದು, ಕೋಶವನ್ನು ಓದಕೂಡದು, ಮೌಢ್ಯದಿಂದ ಹೊರಬರಕೂಡದು ಎಂದು ಇವತ್ತಿಗೂ ಹೇಳುತ್ತಿರುವ ಈ ಸಮಾಜದ್ರೋಹಿ, ಜೀವದ್ರೋಹಿಗಳು ಸಾವಿರಾರು ವರ್ಷಗಳಿಂದ ಈ ದೇಶವನ್ನು ಜಾತಿಪದ್ಧತಿಯಲ್ಲಿ ಹೂತುಹಾಕಿದ್ದು ಕಣ್ಣಿದ್ದು ನೋಡಬಲ್ಲವರಿಗೆ ಗೊತ್ತಿದೆ. ಇಂಥ ವಂಚಕರು ಸೋನಿಯಾ ತರಹದ ಮಹಿಳೆಯನ್ನು ವಿದೇಶದವಳೆಂದು ಹೀಯಾಳಿಸುವುದು ಇವರ ಪರಂಪರೆಗೆ ತಕ್ಕಂತಿದೆ.”
“ಈ ದೇಶದಲ್ಲಿಯೇ ಇದ್ದು ಇಲ್ಲಿಯ ಜನಸಮುದಾಯದ ದುರಂತ, ಸೋಲು, ಸಾವು ಎಲ್ಲವನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ, ಇಲ್ಲಿಯ ಜನರ ಅಸಹಾಯಕ ಸ್ಥಿತಿಯನ್ನೇ ತಮ್ಮ ಏಳ್ಗೆಗೆ ಉಪಯೋಗಿಸಿಕೊಂಡ ಪೂರ್ಣಯ್ಯಗಳೆಂಬ ದುಷ್ಟರು ನಿಜವಾಗಿಯೂ ಪರದೇಶಿಗಳು; ಇಲ್ಲಿಯ ಒಬ್ಬ ವಿಮಾನ ಚಾಲಕನನ್ನು ವರಿಸಿ ಆತನನ್ನು ರಾಜಕೀಯದಿಂದ ಹೊರಗಿಡಲು ಯತ್ನಿಸಿ ವಿಫಲವಾಗಿ ಸಾವು, ನೋವು, ದುಃಖದಲ್ಲಿ ಬೆಂದು ಹೋಗಿ ಇವತ್ತು ಗಾಂಧೀಜಿಯ ಮಾನವೀಯತೆಯನ್ನು ಸಾರ್ವಜನಿಕ ಜೀವನಕ್ಕೆ ತರಲು ಯತ್ನಿಸುತ್ತಿರುವ ಸೋನಿಯಾ ಈ ನಾಡಿನ ಸೊಸೆ, ಇಲ್ಲಿಯ ಹೆಮ್ಮೆಯ ಹೆಣ್ಣುಮಗಳು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಸೋನಿಯಾ ಅತ್ತೆ ಇಂದಿರಾಗಿಂತ, ಪತಿ ರಾಜೀವ್‍ಗಿಂತ ಜಾಣೆ; ಅವರಿಬ್ಬರೂ ಕೆಟ್ಟದಾಗಿ ಅರಚಬಹುದಾಗಿದ್ದ ಸಂದರ್ಭದಲ್ಲಿ ಪಶ್ಚಿಮದ ಖಚಿತತೆ, ಕುಶಲತೆ, ತೀವ್ರತೆ ತೋರುತ್ತಿರುವ ಸೋನಿಯಾ ನಿಜವಾದ ನಾಯಕಿಯಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಈಕೆ ಕೇವಲ ಹತ್ತು ದಿನದಲ್ಲಿ ಭಾರತದ ರಾಜಕೀಯಕ್ಕೆ ಮಿಂಚಿನ ಸಂಚಾರ ಮೂಡಿಸಿರುವುದು ಬಿಜೆಪಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.”
ಫೆಬ್ರವರಿ 11, 1998

ಪರಕೀಯ ವಾಜಪೇಯಿ ನಮ್ಮ ಹೆಣ್ಣುಮಗಳು ಸೋನಿಯಾ
“ಮಾಸ್ತಿಯವರು ತುಂಬ ಸುಶಿಕ್ಷಿತರಾಗಿದ್ದರು. ಆದರೆ ಅವರಿಗೆ ಭಾರತೀಯ ಸಮಾಜದಲ್ಲಿರುವ ಅನ್ಯಾಯಗಳು, ಶೋಷಣೆ, ಜಾತಿಪದ್ಧತಿ, ಪ್ರಚ್ಛನ್ನ ದಬ್ಬಾಳಿಕೆ- ಯಾವುದೂ ಕಾಣಿಸುತ್ತಿರಲಿಲ್ಲ. ಹಾಗೆಯೇ ಬ್ರಾಹ್ಮಣೇತರರ ಮೌಢ್ಯದ ಸೂಕ್ಷ್ಮಗಳು, ಅಪಾಯಗಳೂ ತಿಳಿಯುತ್ತಿರಲಿಲ್ಲ. ಅವರ ಪ್ರಕಾರ ವಸ್ತುನಿಷ್ಠೆ ಯಾವುದೆಂದರೆ, ಈಗಿರುವ ವ್ಯವಸ್ಥೆಯನ್ನು ಕಿಂಚಿತ್ತೂ ಕೆಡದಂತೆ ಕಾಪಾಡಿಕೊಂಡು ಬರುವುದು. ಮಾಸ್ತಿಯವರ ವಸ್ತುನಿಷ್ಠೆಯ ಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ಅವರು ಭಗವದ್ಗೀತೆಗೆ ನೀಡುವ ಅರ್ಥವನ್ನು ಒಪ್ಪಬಹುದು. ಅವರ ಪ್ರಕಾರ ಧರ್ಮ, ಸ್ವಧರ್ಮ, ಆತ್ಮ, ಪರಮಾತ್ಮ ಮುಂತಾದವೆಲ್ಲ ಎಂದೂ ಬದಲಾಗದ ವಸ್ತುಗಳು; ಧರ್ಮ ಜಾತಿಯಾಗಿಯೂ ವರ್ಗವಾಗಿಯೂ ಧರ್ಮವಾಗಿಯೂ ಬರುತ್ತದೆ. ಹಾಗಾಗಿಯೇ ಇಲ್ಲಿ ಕಂದಾಚಾರಿಯೊಬ್ಬನನ್ನು ಧರ್ಮವಂತ ಎಂದು ಕರೆಯುವುದು ಸುಲಭವಾಗುತ್ತದೆ. ಹಾಗೆಯೇ ಸೋನಿಯಾ ಇಟಾಲಿಯನ್ ಹೆಣ್ಣುಮಗಳು ಎಂಬ ಕಾರಣಕ್ಕೆ ನಮ್ಮ ಧರ್ಮಕ್ಕೆ ಸೇರಿದವಳಲ್ಲ, ನಮ್ಮ ಜೀವನಕ್ರಮದಿಂದ ಬಂದವಳಲ್ಲ ಎಂದು ವಾದಿಸುವುದು ಸುಲಭವಾಗುತ್ತದೆ. ಇದು ಶೋಷಕರ ಮಾರ್ಗ, ಸುಳ್ಳರ ದಾರಿ. ಯಾರೂ ಸಮುದ್ರವನ್ನು ದಾಟಿ ಹೊರದೇಶಗಳಿಗೆ ಹೋಗದಿದ್ದರೆ, ಯಾರೂ ಹೊರದೇಶದಿಂದ ಇಲ್ಲಿಗೆ ಬರದಿದ್ದರೆ ಇಲ್ಲಿ ತಾಳೆಗರಿಯ ಮೂಲಕ ವಂಚಿಸುತ್ತಾ ಹೋಗಬಹುದು. ಈ ಪರಕೀಯ ಎಂಬ ಮಾತನ್ನೇ ತೆಗೆದುಕೋ. ನನ್ನ ಪ್ರಕಾರ ಇಲ್ಲಿಯ ಪ್ರಕೃತಿ, ಜನ, ಸಂಪತ್ತು, ಆತ್ಮಗೌರವ ಇವೆಲ್ಲವುಗಳ ಬಗ್ಗೆ ಯಾವುದೇ ಪ್ರೀತಿ, ಗೌರವ ಇಲ್ಲದವನು ಪರಕೀಯ. ಇಂಥ ಪರಕೀಯತೆಗೆ ಉದಾಹರಣೆಯಾಗಿ ನಾನು ದಿವಾನ್ ಪೂರ್ಣಯ್ಯನವರ ಬಗ್ಗೆ ಹೇಳುತ್ತಿರುತ್ತೇನೆ. ಮೈಸೂರು ರಾಜ್ಯದ ಸೋಲು, ಟಿಪ್ಪುವಿನ ಸಾವು, ಇಂಗ್ಲಿಷರ ದಬ್ಬಾಳಿಕೆ ಎಲ್ಲವೂ ಈ ದೇಶದ ಚೈತನ್ಯವನ್ನು ಮುರಿಯುತ್ತಿದ್ದಾಗ ಪೂರ್ಣಯ್ಯನವರು ದಿವಾನ ಸ್ಥಾನದಲ್ಲಿ ನೆಮ್ಮದಿಯಾಗಿದ್ದರು; ಆದರೆ ಫ್ರೆಂಚರ ದೂಬಾಯಿ ಪಾದ್ರಿ ಸಾವಿರಾರು ಜನರಿಗೆ ನೆರವಾದ; ಸಿಡುಬು ಬಂದಾಗ ಲಸಿಕೆ ಹಾಕಿಸಿ ಜೀವ ಉಳಿಸಿದ. ಇಲ್ಲಿಯ ಅನಕ್ಷರತೆ, ಅಸಹಾಯಕತೆಯನ್ನು ತಮ್ಮ ವೈಭವಕ್ಕಾಗಿ ಬಳಸಿಕೊಂಡ ಪೂರ್ಣಯ್ಯ ಈ ದೇಶದವರು, ಇಲ್ಲಿಯ ಜನರನ್ನು ಪ್ರೀತಿಸಿ ಪೊರೆದ ದೂಬಾಯಿ ಪಾದ್ರಿ ಪರಕೀಯ ಎಂದು ನಾನು ನಂಬುವುದಿಲ್ಲ. ಆದ್ದರಿಂದಲೇ ನನ್ನ ದೃಷ್ಟಿಯಲ್ಲಿ ಪೂರ್ಣಯ್ಯ ಪರಕೀಯ, ವಿಶ್ವೇಶ್ವರಯ್ಯ ಸ್ವಕೀಯ, ಅನ್ಯಜಾತಿಯ ದೇವಾಲಯ ಬೀಳಿಸುವ ಅಡ್ವಾಣಿ, ವಾಜಪೇಯಿಗಳು ಪರಕೀಯ, ಸೋನಿಯಾ ಈ ದೇಶದ ಹೆಣ್ಣುಮಗಳು. ನಮ್ಮ ಜನಕ್ಕೆ ಎಲ್ಲ ದೇಶಗಳಿಂದ, ಎಲ್ಲ ಬಗೆಯ ಜನರಿಂದ ಆರ್ಥಿಕ ನೆರವು, ಬೆಚ್ಚನೆಯ ಪ್ರೀತಿ, ವೈಜ್ಞಾನಿಕ ದೃಷ್ಟಿ, ಆಧುನಿಕ ಧೋರಣೆ ಬೇಕಾಗಿದೆ.”
ಮಾರ್ಚ್ 4, 1998

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....