Homeಅಂಕಣಗಳುಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

- Advertisement -
- Advertisement -

ಪಂಡಿತರ ಮಾತುಗಳಲ್ಲಿ ಅರ್ಧದಷ್ಟನ್ನಾದರೂ ಮತದಾರರು ಸುಳ್ಳಾಗಿಸಿದ್ದಾರೆ. ಮತದಾರರು ನೀಡಿರುವ ತೀರ್ಪಿನಲ್ಲಿ ಹಲವು ಪಾಠಗಳಿವೆ. ಅದನ್ನು ಗಮನಿಸಬೇಕು. ಮತದಾರರೂ ಸುಳ್ಳುಗಳಿಗೆ ಬಲಿಯಾಗುವ ಎಲ್ಲಾ ಸಾಧ್ಯತೆಗಳಿರುವಾಗ ಅವರನ್ನು ಎಚ್ಚರಿಸುವ ಕರ್ತವ್ಯ ವಿದ್ವಾಂಸರಿಗಿರುವುದಿಲ್ಲವೆಂದಲ್ಲ. ಆದರೆ, ಸಮಷ್ಟಿಯಾಗಿ ಜನರು ನೀಡುವ ತೀರ್ಪುಗಳಿಗೆ ಹೆಚ್ಚಿನ ಮಹತ್ವವಿರುತ್ತದೆ. ಅಂತಹ ಹಲವು ಸಂಗತಿಗಳನ್ನು ಈ ಚುನಾವಣೆಯು ಮುಂದಿಟ್ಟಿದೆ.
ತೆಲಂಗಾಣದಲ್ಲಿ ಟಿಆರ್‍ಎಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ. ಆದರೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೆಸಿಆರ್ ವಿನೂತನವಾಗಿ ಜಾರಿಗೊಳಿಸಿದ್ದರು. ಅದಕ್ಕೆದುರಾಗಿ ಕಾಂಗ್ರೆಸ್‍ಗೆ ಸರಿಯಾದ ನಾಯಕತ್ವವೂ ಇರಲಿಲ್ಲ; ಸರಿಯಾದ ಕಾರ್ಯಕ್ರಮವೂ ಇರಲಿಲ್ಲ; ಅಖಿಲ ಭಾರತ ಮಟ್ಟಕ್ಕೆ ಸೂಕ್ತವಾಗಬಹುದಾದ ಮಹಾಘಟಬಂಧನವು, ತೆಲಂಗಾಣಕ್ಕೆ ಪ್ರಜಾಕೂಟಮಿಯಾಗಿ ಒದಗಿ ಬರಲಿಲ್ಲ.
ಇಂತಹ ತೆಲಂಗಾಣದಲ್ಲಿ ಮೊದಲು ಟಿಆರ್‍ಎಸ್ ಗೆಲುವು ಶತಸ್ಸಿದ್ಧ ಎಂದು ಮಾಧ್ಯಮಗಳು ನುಡಿದಿದ್ದವು. ಚಂದ್ರಬಾಬು ನಾಯ್ಡು ಕಾಂಗ್ರೆಸ್ ಜೊತೆ ಸೇರಿದಾಗ ಟಿಆರ್‍ಎಸ್ ಅಧಿಕಾರಕ್ಕೆ ಬರುವುದಿಲ್ಲವೆಂಬ ಸಮೀಕ್ಷೆಗಳು ಬಂದವು. ಈಗ ನೋಡಿದರೆ ಟಿಡಿಪಿಯ ಜೊತೆಗೆ ಹೋಗಿದ್ದರಿಂದಲೇ ಟಿಆರ್‍ಎಸ್ ಇನ್ನೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ತೆಲಂಗಾಣ ಸಂಸದೆ ಕೆಸಿಆರ್ ಮಗಳು ಕವಿತಾ ಹೇಳಿದಂತೆ, ‘ಅಲೆ ಮೊದಲಿಂದಲೂ ಟಿಆರ್‍ಎಸ್ ಪರವಾಗಿಯೇ ಇತ್ತು. ಚಂದ್ರಬಾಬು ಮಾಧ್ಯಮಗಳನ್ನು ಮ್ಯಾನೇಜ್ ಮಾಡುವುದರಿಂದ ಅಥವಾ ಮಾಧ್ಯಮಗಳು ಬಯಸುವ ಸಿಇಓ ಅವರಾಗಿದ್ದರಿಂದ ತಪ್ಪಾಗಿ ವ್ಯಾಖ್ಯಾನಿಸಲಾಯಿತು’. ಮಾಧ್ಯಮಗಳು ತಮ್ಮ ಪೂರ್ವಗ್ರಹಕ್ಕೆ ತಕ್ಕಂತೆ ಭಾರೀ ದೊಡ್ಡ ಸುಳ್ಳುಗಳನ್ನು ನಂಬಿಕೊಂಡು ಹೇಳುವ ಸಾಧ್ಯತೆಗಳಿವೆ.
ರಾಜಸ್ತಾನದ ಒನ್ ಟು ಒನ್ ಫೈಟ್‍ನಲ್ಲಿ ಕಾಂಗ್ರೆಸ್ ಭಾರೀ ದೊಡ್ಡ ಗೆಲುವನ್ನು ಪಡೆಯುತ್ತದೆಂಬ ಭವಿಷ್ಯವು ಮೊದಲಿಂದ ಮತಗಟ್ಟೆ ಸಮೀಕ್ಷೆಯವರೆಗೆ ಬರುತ್ತಿತ್ತು. ಜನರಿಗೆ ಬಿಜೆಪಿಯ ಬಗೆಗಿದ್ದ ಸಿಟ್ಟು ಸ್ಪಷ್ಟವಾಗಿ ವ್ಯಕ್ತವಾಗಿದೆ; ಆದರೆ ಕಾಂಗ್ರೆಸ್ ಅವರ ಸ್ಪಷ್ಟ ಆಯ್ಕೆಯಾಗಿಲ್ಲವೆಂಬುದು ಅದರ ತಿಣುಕಾಟದ ಗೆಲುವಿನಲ್ಲೂ, ಇತರ ಸಣ್ಣಪುಟ್ಟ ಪಕ್ಷಗಳು ಮತ್ತು ಪಕ್ಷೇತರರ ಗೆಲುವಿನಲ್ಲೂ ಗೊತ್ತಾಗುತ್ತಿದೆ. ಅಂದರೆ ಹೊಸ ಭರವಸೆ ಇರದೇ ಇದ್ದಲ್ಲಿ, ಒಮ್ಮೆ ಅವರು, ಇನ್ನೊಮ್ಮೆ ಇವರು ಎಂಬುದು ಸಹಜ ಸತ್ಯವಲ್ಲ ಎಂಬುದೇ ಇದರ ಸಾರಾಂಶ.
ಕಾಂಗ್ರೆಸ್‍ನ ತಿಣುಕಾಟಕ್ಕೆ ಟಿಕೆಟ್ ಹಂಚಿಕೆಯಲ್ಲಿನ ಸಮಸ್ಯೆಯೇ ಕಾರಣವೆಂದೂ, ಸ್ಥಳೀಯವಾಗಿ ದೊಡ್ಡ ಜಾತಿಯ ನಾಯಕನನ್ನು ಪ್ರೊಜೆಕ್ಟ್ ಮಾಡದೇ ಇದ್ದುದೇ ಸಮಸ್ಯೆಯೆಂದು ಹೇಳುತ್ತಿರುವುದೂ ವಾಸ್ತವವಲ್ಲ. ಹಾಗೆ ನೋಡಿದರೆ, ಭಾರೀ ಗೆಲುವನ್ನು ಪಡೆದಿರುವ ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಯಾರನ್ನೂ ಪ್ರೊಜೆಕ್ಟ್ ಮಾಡಿರಲಿಲ್ಲ. ಅದರ ಹಿರಿಯ ನಾಯಕ ಅಜಿತ್ ಜೋಗಿ ಪ್ರತ್ಯೇಕ ಪಕ್ಷ ಸ್ಥಾಪಿಸಿ ಬಹಳ ಕಾಲವಾಗಿತ್ತು.ಹಾಗೆಯೇ ಛತ್ತೀಸ್‍ಗಢದಲ್ಲಿ ರಮಣ್‍ಸಿಂಗ್ ಗೆಲ್ಲುತ್ತಾರೆ ಎಂಬುದನ್ನು ಬಹುತೇಕರು ಬಿಂಬಿಸುತ್ತಿದ್ದರು. ಕಾಂಗ್ರೆಸ್‍ಗಿದ್ದ ಅನಾನುಕೂಲತೆಗಳ ನಡುವೆಯೂ ಇದಕ್ಕೇನು ಕಾರಣ ಎಂಬುದನ್ನು ಸರಿಯಾಗಿ ವಿಶ್ಲೇಷಿಸುವ ಅಗತ್ಯವಿದೆ. ತಾನು ಇದ್ದುದರಲ್ಲಿ ಸೇಫ್ ಆದ ಭವಿಷ್ಯ ನುಡಿಯಬೇಕೆಂದು ಕರ್ನಾಟಕದ ಸಂದೀಪ್ ಶಾಸ್ತ್ರಿಯವರು ತನ್ನ ಲೇಖನದಲ್ಲಿ ಹಿಂದಿ ರಾಜ್ಯಗಳ ಚುನಾವಣೆಯ ಫಲಿತಾಂಶ 2:1 ಆಗಿರುತ್ತದೆ ಅಂದಿದ್ದರು. ಅದೂ ಸುಳ್ಳಾಯಿತು.ಅದೇನೇ ಇರಲಿ, ಇದು ಮೋದಿ ಮಾದರಿಯ ರಾಜಕಾರಣದ ವಿರುದ್ಧದ ಸ್ಪಷ್ಟ ಸಂದೇಶವಾಗಿದೆ. ರಾಹುಲ್‍ಗಾಂಧಿ ಭರವಸೆ ಮೂಡಿಸಿದ್ದಾರಾದರೂ ಅವರಿಗೆ ಈ ಚುನಾವಣೆಯು ಹಲವು ಎಚ್ಚರಿಕೆಗಳನ್ನು ನೀಡಿದೆ. ರಾಜಸ್ತಾನವು ಒಂದು ಎಚ್ಚರಿಕೆಯಾಗಿದ್ದರೆ, ಮಿಜೋರಾಂ ಇನ್ನೊಂದು ಎಚ್ಚರಿಕೆಯಾಗಿದೆ. ದೇಶವು ಕಾಂಗ್ರೆಸ್ ಮುಕ್ತವಾಗಿರದಿದ್ದರೂ ಈಶಾನ್ಯ ಭಾರತವು ಕಾಂಗ್ರೆಸ್ ಮುಕ್ತವಾಗಿದೆ. ಬಹುತೇಕ ಬುಡಕಟ್ಟು ಜನರು, ಕ್ರಿಶ್ಚಿಯನ್ನರು ಇರುವ ಈ ಪ್ರದೇಶದಲ್ಲಿ ಕಾಂಗ್ರೆಸ್ ‘ಸಹಜ ಆಯ್ಕೆ’ಯಲ್ಲ ಎಂಬುದು ಗಮನಾರ್ಹ. ಆ ಭಾಗದಲ್ಲಿ ಮುಂಚಿನಿಂದಲೂ ಹಲವು ಬಗೆಯ ‘ವಿಚ್ಛಿದ್ರತೆ’ಗೆ ಸ್ವತಃ ಕಾಂಗ್ರೆಸ್ಸೇ ಕಾರಣವಾಗಿತ್ತು. ಈಗದು ಅವಕಾಶವಾದಿತನಕ್ಕೆ ಕಾರಣವಾಗಿದ್ದು, ಅದರ ನೇರ ಹೊಣೆಯನ್ನು ಕಾಂಗ್ರೆಸ್ಸೇ ಹೊರಬೇಕು.
ಇದರೊಂದಿಗೆ ಇನ್ನೊಂದು ಅಂಶ, ದಕ್ಷಿಣ ಭಾರತವು ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಮುಕ್ತವಾಗಿದೆ. ಕರ್ನಾಟಕದಲ್ಲಿ ಇವೆರಡೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಎರಡೂ ದೊಡ್ಡ ಪಕ್ಷಗಳು ಎಂದು ಹೇಳಿಕೊಳ್ಳಬಹುದು ಮತ್ತು ಕೇರಳದಲ್ಲಿ ಪ್ರತಿ ಎರಡು ಚುನಾವಣೆಯಲ್ಲಿ ಒಂದು ಸಾರಿ ಗೆಲ್ಲುತ್ತೇನೆಂದು ಭಾವಿಸಬಹುದಾದರೂ ಈ ಸದ್ಯ ಎರಡೂ ಪಕ್ಷಗಳಿಗೆ ದಕ್ಷಿಣ ಭಾರತದಲ್ಲಿ ಮುಖ್ಯಮಂತ್ರಿಗಳಿಲ್ಲ. ಅಂದರೆ, ತಾವು ಅಖಿಲ ಭಾರತ ಪಕ್ಷ ಎಂದು ಹೆಚ್ಚು ಕೊಚ್ಚಿಕೊಳ್ಳುವಂತಿಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿಗಳಾಚೆ ಇರುವ ಬಹುತೇಕ ಪ್ರಾದೇಶಿಕ ಪಕ್ಷಗಳಲ್ಲಿ ಇರುವ ಸಮಾನ ಅಂಶವೆಂದರೆ ಅವೆಲ್ಲವೂ ವ್ಯಕ್ತಿ ಅಥವಾ ಕುಟುಂಬವೊಂದರ ಕಪಿಮುಷ್ಟಿಯಲ್ಲಿರುವ ಪಕ್ಷಗಳು. ತೆಲಂಗಾಣದಲ್ಲಿ ಗೆದ್ದಿರುವ ಟಿಆರ್‍ಎಸ್ ಸೇರಿದಂತೆ. ಇದನ್ನು ದಾಟಿ ನಿಜಕ್ಕೂ ಫೆಡರಲ್ ಆದ ಪರ್ಯಾಯ ಶಕ್ತಿಗೆ ದೇಶದಲ್ಲಿ ಅವಕಾಶ ಈಗಲೂ ಉಳಿದುಕೊಂಡಿದೆ.
ಅಂತಿಮವಾಗಿ, ಪ್ರಗತಿಪರ ಆಲೋಚನೆಯುಳ್ಳವರಿಗೆ ಈ ಫಲಿತಾಂಶವು ನೆಮ್ಮದಿ ತಂದಿರಬಹುದು. ಇದರೊಂದಿಗೆ 2014-16ಕ್ಕೆ ಹೋಲಿಸಿದರೆ ಬಿಜೆಪಿ ದುರ್ಬಲವೂ ಆಗಬಹುದು. ಆದರೆ, 2009ರ ಚುನಾವಣೆಯವರೆಗೆ ಒಂದು ರೀತಿಯ ಮತಗಳಿಕೆಯ ಸ್ಥಗಿತತೆ ಮತ್ತು ಕೆಲವು ಜಾತಿಕೋಟೆಗಳನ್ನು ದಾಟಲಾಗಿರದ ಬಿಜೆಪಿಯು 2014ರ ನಂತರ ಅವೆಲ್ಲವನ್ನೂ ದಾಟಿತು ಮತ್ತು ದೇಶದ ಮೂಲೆಮೂಲೆಗಳಲ್ಲೂ ಬಲ ಪಡೆದುಕೊಂಡಿತು. ಬಿಜೆಪಿ ಮಾತ್ರವಲ್ಲದೇ, ಆರೆಸ್ಸೆಸ್‍ನ ಮತೀಯ ರಾಜಕಾರಣ ಹಾಗೂ ಸುಳ್ಳಿನ ಬಲ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಇಂತಹ ಪ್ರಜಾತಂತ್ರ ವಿರೋಧಿ ವಿದ್ಯಮಾನಗಳನ್ನು ಸೋಲಿಸಿ, ನಿಜವಾದ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಭಿನ್ನ ಹೊಸದಾರಿಯನ್ನು ತುಳಿಯುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...