Homeಅಂಕಣಗಳುಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

- Advertisement -
- Advertisement -

ಪಂಡಿತರ ಮಾತುಗಳಲ್ಲಿ ಅರ್ಧದಷ್ಟನ್ನಾದರೂ ಮತದಾರರು ಸುಳ್ಳಾಗಿಸಿದ್ದಾರೆ. ಮತದಾರರು ನೀಡಿರುವ ತೀರ್ಪಿನಲ್ಲಿ ಹಲವು ಪಾಠಗಳಿವೆ. ಅದನ್ನು ಗಮನಿಸಬೇಕು. ಮತದಾರರೂ ಸುಳ್ಳುಗಳಿಗೆ ಬಲಿಯಾಗುವ ಎಲ್ಲಾ ಸಾಧ್ಯತೆಗಳಿರುವಾಗ ಅವರನ್ನು ಎಚ್ಚರಿಸುವ ಕರ್ತವ್ಯ ವಿದ್ವಾಂಸರಿಗಿರುವುದಿಲ್ಲವೆಂದಲ್ಲ. ಆದರೆ, ಸಮಷ್ಟಿಯಾಗಿ ಜನರು ನೀಡುವ ತೀರ್ಪುಗಳಿಗೆ ಹೆಚ್ಚಿನ ಮಹತ್ವವಿರುತ್ತದೆ. ಅಂತಹ ಹಲವು ಸಂಗತಿಗಳನ್ನು ಈ ಚುನಾವಣೆಯು ಮುಂದಿಟ್ಟಿದೆ.
ತೆಲಂಗಾಣದಲ್ಲಿ ಟಿಆರ್‍ಎಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ. ಆದರೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೆಸಿಆರ್ ವಿನೂತನವಾಗಿ ಜಾರಿಗೊಳಿಸಿದ್ದರು. ಅದಕ್ಕೆದುರಾಗಿ ಕಾಂಗ್ರೆಸ್‍ಗೆ ಸರಿಯಾದ ನಾಯಕತ್ವವೂ ಇರಲಿಲ್ಲ; ಸರಿಯಾದ ಕಾರ್ಯಕ್ರಮವೂ ಇರಲಿಲ್ಲ; ಅಖಿಲ ಭಾರತ ಮಟ್ಟಕ್ಕೆ ಸೂಕ್ತವಾಗಬಹುದಾದ ಮಹಾಘಟಬಂಧನವು, ತೆಲಂಗಾಣಕ್ಕೆ ಪ್ರಜಾಕೂಟಮಿಯಾಗಿ ಒದಗಿ ಬರಲಿಲ್ಲ.
ಇಂತಹ ತೆಲಂಗಾಣದಲ್ಲಿ ಮೊದಲು ಟಿಆರ್‍ಎಸ್ ಗೆಲುವು ಶತಸ್ಸಿದ್ಧ ಎಂದು ಮಾಧ್ಯಮಗಳು ನುಡಿದಿದ್ದವು. ಚಂದ್ರಬಾಬು ನಾಯ್ಡು ಕಾಂಗ್ರೆಸ್ ಜೊತೆ ಸೇರಿದಾಗ ಟಿಆರ್‍ಎಸ್ ಅಧಿಕಾರಕ್ಕೆ ಬರುವುದಿಲ್ಲವೆಂಬ ಸಮೀಕ್ಷೆಗಳು ಬಂದವು. ಈಗ ನೋಡಿದರೆ ಟಿಡಿಪಿಯ ಜೊತೆಗೆ ಹೋಗಿದ್ದರಿಂದಲೇ ಟಿಆರ್‍ಎಸ್ ಇನ್ನೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ತೆಲಂಗಾಣ ಸಂಸದೆ ಕೆಸಿಆರ್ ಮಗಳು ಕವಿತಾ ಹೇಳಿದಂತೆ, ‘ಅಲೆ ಮೊದಲಿಂದಲೂ ಟಿಆರ್‍ಎಸ್ ಪರವಾಗಿಯೇ ಇತ್ತು. ಚಂದ್ರಬಾಬು ಮಾಧ್ಯಮಗಳನ್ನು ಮ್ಯಾನೇಜ್ ಮಾಡುವುದರಿಂದ ಅಥವಾ ಮಾಧ್ಯಮಗಳು ಬಯಸುವ ಸಿಇಓ ಅವರಾಗಿದ್ದರಿಂದ ತಪ್ಪಾಗಿ ವ್ಯಾಖ್ಯಾನಿಸಲಾಯಿತು’. ಮಾಧ್ಯಮಗಳು ತಮ್ಮ ಪೂರ್ವಗ್ರಹಕ್ಕೆ ತಕ್ಕಂತೆ ಭಾರೀ ದೊಡ್ಡ ಸುಳ್ಳುಗಳನ್ನು ನಂಬಿಕೊಂಡು ಹೇಳುವ ಸಾಧ್ಯತೆಗಳಿವೆ.
ರಾಜಸ್ತಾನದ ಒನ್ ಟು ಒನ್ ಫೈಟ್‍ನಲ್ಲಿ ಕಾಂಗ್ರೆಸ್ ಭಾರೀ ದೊಡ್ಡ ಗೆಲುವನ್ನು ಪಡೆಯುತ್ತದೆಂಬ ಭವಿಷ್ಯವು ಮೊದಲಿಂದ ಮತಗಟ್ಟೆ ಸಮೀಕ್ಷೆಯವರೆಗೆ ಬರುತ್ತಿತ್ತು. ಜನರಿಗೆ ಬಿಜೆಪಿಯ ಬಗೆಗಿದ್ದ ಸಿಟ್ಟು ಸ್ಪಷ್ಟವಾಗಿ ವ್ಯಕ್ತವಾಗಿದೆ; ಆದರೆ ಕಾಂಗ್ರೆಸ್ ಅವರ ಸ್ಪಷ್ಟ ಆಯ್ಕೆಯಾಗಿಲ್ಲವೆಂಬುದು ಅದರ ತಿಣುಕಾಟದ ಗೆಲುವಿನಲ್ಲೂ, ಇತರ ಸಣ್ಣಪುಟ್ಟ ಪಕ್ಷಗಳು ಮತ್ತು ಪಕ್ಷೇತರರ ಗೆಲುವಿನಲ್ಲೂ ಗೊತ್ತಾಗುತ್ತಿದೆ. ಅಂದರೆ ಹೊಸ ಭರವಸೆ ಇರದೇ ಇದ್ದಲ್ಲಿ, ಒಮ್ಮೆ ಅವರು, ಇನ್ನೊಮ್ಮೆ ಇವರು ಎಂಬುದು ಸಹಜ ಸತ್ಯವಲ್ಲ ಎಂಬುದೇ ಇದರ ಸಾರಾಂಶ.
ಕಾಂಗ್ರೆಸ್‍ನ ತಿಣುಕಾಟಕ್ಕೆ ಟಿಕೆಟ್ ಹಂಚಿಕೆಯಲ್ಲಿನ ಸಮಸ್ಯೆಯೇ ಕಾರಣವೆಂದೂ, ಸ್ಥಳೀಯವಾಗಿ ದೊಡ್ಡ ಜಾತಿಯ ನಾಯಕನನ್ನು ಪ್ರೊಜೆಕ್ಟ್ ಮಾಡದೇ ಇದ್ದುದೇ ಸಮಸ್ಯೆಯೆಂದು ಹೇಳುತ್ತಿರುವುದೂ ವಾಸ್ತವವಲ್ಲ. ಹಾಗೆ ನೋಡಿದರೆ, ಭಾರೀ ಗೆಲುವನ್ನು ಪಡೆದಿರುವ ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಯಾರನ್ನೂ ಪ್ರೊಜೆಕ್ಟ್ ಮಾಡಿರಲಿಲ್ಲ. ಅದರ ಹಿರಿಯ ನಾಯಕ ಅಜಿತ್ ಜೋಗಿ ಪ್ರತ್ಯೇಕ ಪಕ್ಷ ಸ್ಥಾಪಿಸಿ ಬಹಳ ಕಾಲವಾಗಿತ್ತು.ಹಾಗೆಯೇ ಛತ್ತೀಸ್‍ಗಢದಲ್ಲಿ ರಮಣ್‍ಸಿಂಗ್ ಗೆಲ್ಲುತ್ತಾರೆ ಎಂಬುದನ್ನು ಬಹುತೇಕರು ಬಿಂಬಿಸುತ್ತಿದ್ದರು. ಕಾಂಗ್ರೆಸ್‍ಗಿದ್ದ ಅನಾನುಕೂಲತೆಗಳ ನಡುವೆಯೂ ಇದಕ್ಕೇನು ಕಾರಣ ಎಂಬುದನ್ನು ಸರಿಯಾಗಿ ವಿಶ್ಲೇಷಿಸುವ ಅಗತ್ಯವಿದೆ. ತಾನು ಇದ್ದುದರಲ್ಲಿ ಸೇಫ್ ಆದ ಭವಿಷ್ಯ ನುಡಿಯಬೇಕೆಂದು ಕರ್ನಾಟಕದ ಸಂದೀಪ್ ಶಾಸ್ತ್ರಿಯವರು ತನ್ನ ಲೇಖನದಲ್ಲಿ ಹಿಂದಿ ರಾಜ್ಯಗಳ ಚುನಾವಣೆಯ ಫಲಿತಾಂಶ 2:1 ಆಗಿರುತ್ತದೆ ಅಂದಿದ್ದರು. ಅದೂ ಸುಳ್ಳಾಯಿತು.ಅದೇನೇ ಇರಲಿ, ಇದು ಮೋದಿ ಮಾದರಿಯ ರಾಜಕಾರಣದ ವಿರುದ್ಧದ ಸ್ಪಷ್ಟ ಸಂದೇಶವಾಗಿದೆ. ರಾಹುಲ್‍ಗಾಂಧಿ ಭರವಸೆ ಮೂಡಿಸಿದ್ದಾರಾದರೂ ಅವರಿಗೆ ಈ ಚುನಾವಣೆಯು ಹಲವು ಎಚ್ಚರಿಕೆಗಳನ್ನು ನೀಡಿದೆ. ರಾಜಸ್ತಾನವು ಒಂದು ಎಚ್ಚರಿಕೆಯಾಗಿದ್ದರೆ, ಮಿಜೋರಾಂ ಇನ್ನೊಂದು ಎಚ್ಚರಿಕೆಯಾಗಿದೆ. ದೇಶವು ಕಾಂಗ್ರೆಸ್ ಮುಕ್ತವಾಗಿರದಿದ್ದರೂ ಈಶಾನ್ಯ ಭಾರತವು ಕಾಂಗ್ರೆಸ್ ಮುಕ್ತವಾಗಿದೆ. ಬಹುತೇಕ ಬುಡಕಟ್ಟು ಜನರು, ಕ್ರಿಶ್ಚಿಯನ್ನರು ಇರುವ ಈ ಪ್ರದೇಶದಲ್ಲಿ ಕಾಂಗ್ರೆಸ್ ‘ಸಹಜ ಆಯ್ಕೆ’ಯಲ್ಲ ಎಂಬುದು ಗಮನಾರ್ಹ. ಆ ಭಾಗದಲ್ಲಿ ಮುಂಚಿನಿಂದಲೂ ಹಲವು ಬಗೆಯ ‘ವಿಚ್ಛಿದ್ರತೆ’ಗೆ ಸ್ವತಃ ಕಾಂಗ್ರೆಸ್ಸೇ ಕಾರಣವಾಗಿತ್ತು. ಈಗದು ಅವಕಾಶವಾದಿತನಕ್ಕೆ ಕಾರಣವಾಗಿದ್ದು, ಅದರ ನೇರ ಹೊಣೆಯನ್ನು ಕಾಂಗ್ರೆಸ್ಸೇ ಹೊರಬೇಕು.
ಇದರೊಂದಿಗೆ ಇನ್ನೊಂದು ಅಂಶ, ದಕ್ಷಿಣ ಭಾರತವು ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಮುಕ್ತವಾಗಿದೆ. ಕರ್ನಾಟಕದಲ್ಲಿ ಇವೆರಡೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಎರಡೂ ದೊಡ್ಡ ಪಕ್ಷಗಳು ಎಂದು ಹೇಳಿಕೊಳ್ಳಬಹುದು ಮತ್ತು ಕೇರಳದಲ್ಲಿ ಪ್ರತಿ ಎರಡು ಚುನಾವಣೆಯಲ್ಲಿ ಒಂದು ಸಾರಿ ಗೆಲ್ಲುತ್ತೇನೆಂದು ಭಾವಿಸಬಹುದಾದರೂ ಈ ಸದ್ಯ ಎರಡೂ ಪಕ್ಷಗಳಿಗೆ ದಕ್ಷಿಣ ಭಾರತದಲ್ಲಿ ಮುಖ್ಯಮಂತ್ರಿಗಳಿಲ್ಲ. ಅಂದರೆ, ತಾವು ಅಖಿಲ ಭಾರತ ಪಕ್ಷ ಎಂದು ಹೆಚ್ಚು ಕೊಚ್ಚಿಕೊಳ್ಳುವಂತಿಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿಗಳಾಚೆ ಇರುವ ಬಹುತೇಕ ಪ್ರಾದೇಶಿಕ ಪಕ್ಷಗಳಲ್ಲಿ ಇರುವ ಸಮಾನ ಅಂಶವೆಂದರೆ ಅವೆಲ್ಲವೂ ವ್ಯಕ್ತಿ ಅಥವಾ ಕುಟುಂಬವೊಂದರ ಕಪಿಮುಷ್ಟಿಯಲ್ಲಿರುವ ಪಕ್ಷಗಳು. ತೆಲಂಗಾಣದಲ್ಲಿ ಗೆದ್ದಿರುವ ಟಿಆರ್‍ಎಸ್ ಸೇರಿದಂತೆ. ಇದನ್ನು ದಾಟಿ ನಿಜಕ್ಕೂ ಫೆಡರಲ್ ಆದ ಪರ್ಯಾಯ ಶಕ್ತಿಗೆ ದೇಶದಲ್ಲಿ ಅವಕಾಶ ಈಗಲೂ ಉಳಿದುಕೊಂಡಿದೆ.
ಅಂತಿಮವಾಗಿ, ಪ್ರಗತಿಪರ ಆಲೋಚನೆಯುಳ್ಳವರಿಗೆ ಈ ಫಲಿತಾಂಶವು ನೆಮ್ಮದಿ ತಂದಿರಬಹುದು. ಇದರೊಂದಿಗೆ 2014-16ಕ್ಕೆ ಹೋಲಿಸಿದರೆ ಬಿಜೆಪಿ ದುರ್ಬಲವೂ ಆಗಬಹುದು. ಆದರೆ, 2009ರ ಚುನಾವಣೆಯವರೆಗೆ ಒಂದು ರೀತಿಯ ಮತಗಳಿಕೆಯ ಸ್ಥಗಿತತೆ ಮತ್ತು ಕೆಲವು ಜಾತಿಕೋಟೆಗಳನ್ನು ದಾಟಲಾಗಿರದ ಬಿಜೆಪಿಯು 2014ರ ನಂತರ ಅವೆಲ್ಲವನ್ನೂ ದಾಟಿತು ಮತ್ತು ದೇಶದ ಮೂಲೆಮೂಲೆಗಳಲ್ಲೂ ಬಲ ಪಡೆದುಕೊಂಡಿತು. ಬಿಜೆಪಿ ಮಾತ್ರವಲ್ಲದೇ, ಆರೆಸ್ಸೆಸ್‍ನ ಮತೀಯ ರಾಜಕಾರಣ ಹಾಗೂ ಸುಳ್ಳಿನ ಬಲ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಇಂತಹ ಪ್ರಜಾತಂತ್ರ ವಿರೋಧಿ ವಿದ್ಯಮಾನಗಳನ್ನು ಸೋಲಿಸಿ, ನಿಜವಾದ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಭಿನ್ನ ಹೊಸದಾರಿಯನ್ನು ತುಳಿಯುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...