Homeಮುಖಪುಟಪಾರಿಜಾತಾ ಬಳಗದಿಂದ ರಂಗಭೂಮಿಯ ‘ರೀಥಿಂಕಿಂಗ್’ ಅಭಿಯಾನ

ಪಾರಿಜಾತಾ ಬಳಗದಿಂದ ರಂಗಭೂಮಿಯ ‘ರೀಥಿಂಕಿಂಗ್’ ಅಭಿಯಾನ

ಈಗಾಗಲೇ ಇರುವ ಸಿದ್ಧ ಮಾದರಿಯ ರಂಗಭೂಮಿಯ ಚಟುವಟಿಕೆಗಳಲ್ಲಿ ಹಲವು ತೊಡಕುಗಳಿವೆ. ಅವುಗಳನ್ನೇ ಇಟ್ಟಕೊಂಡು ಮತ್ತೆ ಶುರುಮಾಡುವುದು ಏಕತಾನತೆಯನ್ನು ಸೃಷ್ಟಿಸುತ್ತದೆ ಹೊರತು ಮತ್ತೇನು ಪ್ರಯೋಜನವಾಗಲಾರದು.

- Advertisement -
- Advertisement -

ರಂಗಭೂಮಿ ತನ್ನ ಮೂಲ ಗುಣದಂತೆ ನಿಂತ ನೀರಾಗಲು ಬಯಸುವುದಿಲ್ಲ. ಅದು ಸದಾ ಒಂದಿಲ್ಲೊಂದು  ಬದಲಾವಣೆಯ ಪರಿವರ್ತನೆಯಲ್ಲಿ ತೊಡಗಿಕೊಂಡು ಹರಿಯುವ ನದಿಯ ಗುಣವನ್ನು ಹೊಂದಿದೆ. ಕೊರೊನಾ ಸಾಂಕ್ರಾಮಿಕದಿಂದ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ಬಿದ್ದಂತೆ ರಂಗಭೂಮಿ ಕ್ಷೇತ್ರವು ತತ್ತಿರಿಸಿತು. ಆರೇಳು ತಿಂಗಳುಗಳ ಕಾಲ ಚಟುವಟಿಕೆಗಳು ಸ್ಥಗಿತಗೊಂಡವು.

ಈ ಸಮಯದಲ್ಲಿ ರಂಗಭೂಮಿಯ ಮೂಲಕ ಹೊಸದೊಂದನ್ನು ಹೇಳಲು ತವಕಿಸುವ ಸೃಜನಶೀಲ ಕಲಾವಿದರು ಮತ್ತು ರಂಗಭೂಮಿಯೇ ತಮ್ಮ ಜೀವನ ಎಂದು ಬದುಕು ಕಟ್ಟಿಕೊಳ್ಳಲು ಹೊರಟಿದ್ದವರ ಕಥೆ ಏನು? ಕೊರೊನಾ ಹೊಡೆತಕ್ಕೆ ಸಿಕ್ಕಿ ನಲುಗುತ್ತಿರುವ ರಂಗಕರ್ಮಿಗಳ ಮುಂದಿನ ಜೀವನ ಹೇಗೆ ? ರಂಗಭೂಮಿಯನ್ನು ಕಲಿಯುವ ಮತ್ತು ಕಲಿಸುವ ಬಗೆಯಾದರು ಹೇಗೆ? ರಂಗಭೂಮಿಯನ್ನು ಹೊಸ ರೀತಿಯಾಗಿ ಜನಸಮುದಾಯದ ಮಧ್ಯೆ ತರುವುದು ಹೇಗೆ ಎಂಬ ಹತ್ತು ಹಲವು ಹೊಸ ಚಿಂತನೆಗಳ ಮೂಲಕ ರಂಗಭೂಮಿಯನ್ನು ಮತ್ತೆ ಮುನ್ನಲೆಗೆ ತರಬೇಕು ಎಂಬ ಆಶಯದಲ್ಲಿ ‘ಪಾರಿಜಾತ‘ ಯುವಬಳಗವು ‘ಥೀಯೇಟರ್ ರೀಥೀಂಕಿಂಗ್’ ಎಂಬ ಪರಿಕಲ್ಪನೆಯ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಕೊರೊನಾ ಸಮಯದಲ್ಲಿ ರಂಗಭೂಮಿಯನ್ನು ಪ್ರತಿ ದಿನ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದ ನಿರ್ದೇಶಕರು, ನಟರು, ತಂತ್ರಜ್ಞರು ಒಟ್ಟಾರೆ ರಂಗತಂಡಗಳು ಎಲ್ಲರು ಸಹ ಹೈರಾಣಾಗಿ ಹೋದರು. ಇಂತಹ ಸಂಕಷ್ಟದ ಸಮಯದಲ್ಲಿ ರಂಗಭೂಮಿಯ ಜೊತೆಗೆ ನಿಲ್ಲಬೇಕಿದ್ದ ಸರ್ಕಾರ ತನ್ನ ಸಂಸ್ಕೃತಿ ಇಲಾಖೆ ಮತ್ತು ನಾಟಕ ಅಕಾಡೆಮಿ ಮೂಲಕ ಕಲಾವಿದರನ್ನು ಪಟ್ಟಿ ಮಾಡಿ 6 ತಿಂಗಳ ನಷ್ಟಕ್ಕೆ ತಲಾ 2000 ರೂ ಕೊಡುವ ಭರವಸೆ ನೀಡಿ ಕೆಲವರಿಗಷ್ಟೇ ನೀಡಿ ತನ್ನ ಬೇಜಾವಾಬ್ದಾರಿಯನ್ನು ತೋರಿತು.

ಯೋಚಿಸುವುದು ದಿನವೂ ಇರುತ್ತದೆ. ಆದರೆ ಇಂದಿನ ಅಸಹನೆ, ಸಿನಿಕತನಗಳ ನಡುವೆ ಕಳೆದುಕೊಳ್ಳುತ್ತಿರುವ ಸಾಂಸ್ಕೃತಿಕ ಪ್ರಜ್ಞೆಯನ್ನು ಮತ್ತೊಮ್ಮೆ ಮರುಪರಿಶೀಲಿಸುವ ರೀಥಿಂಕ್ ಇಂದಿನ ಅಗತ್ಯವಾಗಿದೆ. – ಮಹದೇವ ಹಡಪದ, ರಂಗನಿರ್ದೇಶಕರು.

ಕೊರೊನಾ ಪೆಟ್ಟಿನಿಂದ ಕಳೆದುಕೊಂಡ ಉತ್ಸಾಹವನ್ನು ರಂಗಭೂಮಿ ಮತ್ತೆ ಮುನ್ನೆಲೆಗೆ ತರಬೇಕಿದೆ. ಈಗಾಗಲೇ ಇರುವ ಸಿದ್ಧ ಮಾದರಿಯ ರಂಗಭೂಮಿಯ ಚಟುವಟಿಕೆಗಳಲ್ಲಿ ಹಲವು ತೊಡಕುಗಳಿವೆ. ಅವುಗಳನ್ನೇ ಇಟ್ಟಕೊಂಡು ಮತ್ತೆ ಶುರುಮಾಡುವುದು ಏಕತಾನತೆಯನ್ನು ಸೃಷ್ಟಿಸುತ್ತದೆ ಹೊರತು ಮತ್ತೇನು ಪ್ರಯೋಜನವಾಗಲಾರದು. ಜಗತ್ತೇ ಆನ್‍ಲೈನ್ ಹಿಂದೆ ಓಡುತ್ತಿರುವಾಗ ಆಫ್‌ಲೈನ್ ರಂಗಭೂಮಿಯ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ರಂಗಭೂಮಿಯಲ್ಲಿ ಹೊಸ ಬದಲಾವಣೆ, ಮರುಹಟ್ಟು ಹೇಗಿರಬೇಕೆಂಬ ಚಿಂತನೆಗಳಾಗಬೇಕಿದೆ. ರಂಗಭೂಮಿಯ ಹಿರಿಕಿರಿಯಿರೆಲ್ಲರೂ ಸೇರಿ ಈ ಚಿಂತನೆ ನಡೆಸಬೇಕೆಂಬುದು ಪಾರಿಜಾತ ಬಳಗದ ಅಭಿಮತವಾಗಿದೆ.

ನಾವು ಈಗ ಒಳಗೂ ಹೊರಗೂ ವಿಚಿತ್ರ ಬಗೆಯ ಬರ ಭಯ ರೋಗದ ಕಾಲವನ್ನು ಅನುಭವಿಸುತ್ತಿದ್ದೇನೆ. ಇದನ್ನು ನಾವು ಕಾಲದ ಎಚ್ಚರಿಕೆ ಅಂತಲೇ ಭಾವಿಸಿ, ನಮಗೆ ಕಾಲವು ನೀಡಿರುವ ಪಾಠಗಳನ್ನು ಸರಿಯಾಗಿ ಗ್ರಹಿಸಿ ನಮ್ಮ ಮುಂದಿನ ಸಾಂಸ್ಕೃತಿಕ ಮಾದರಿಗಳ ಕುರಿತು ‘ರೀ-ಥಿಂಕ್’ ಮಾಡಲೇಬೇಕಿದೆ. ಇದು ಸಾಂಸ್ಕೃತಿಕ ಸಮುದಾಯ – ಜನ ಸಮುದಾಯ- ಸರಕಾರ ಎಲ್ಲರೂ ಕೂಡಿ ಮಾಡಬೇಕಾದ ಕೆಲಸ. – ಲಕ್ಷ್ಮಣ್ ಕೆ ಪಿ, ಯುವ ರಂಗಕರ್ಮಿ.

ಮುಖ್ಯವಾಗಿ ಪರಿಜಾತ ಬಳಗ ಸದ್ಯಕ್ಕೆ ಈ ಕೆಳಗಿನ ಐದು ಪ್ರಮುಖ ಚಿಂತನೆಗಳನ್ನು ಬೇಡಿಕೆಯ ರೂಪದಲ್ಲಿ ಮುಂದಿಟ್ಟಿದೆ.

  1. ಕರ್ನಾಟಕದ ಎಲ್ಲ ಮುಖ್ಯ ಸಾಂಸ್ಕೃತಿಕ ಸಂಸ್ಥೆಗಳು, ರಂಗಶಾಲೆಗಳು, ರೆಪರ್ಟರಿಗಳು ತಮ್ಮ ಪಠ್ಯಕ್ರಮ ಮತ್ತು ಕೆಲಸದ ರೂಪುರೇಷೆಗಳನ್ನು ರೀಥಿಂಕ್ ಮಾಡಬೇಕು.
  2. ರಂಗಶಾಲೆಗಳು ತಮ್ಮ ಪಠ್ಯಕ್ರಮದ ಕುರಿತು ರೀಥಿಂಕ್ ಮಾಡಬೇಕು.
  3. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಅನುದಾನದ ನೀತಿಗಳ ಕುರಿತು ರೀಥಿಂಕ್‌ ಮಾಡಬೇಕು.
  4. ಹೊಸ ರಂಗಮಂದಿರಗಳನ್ನು ಕಟ್ಟುವ ಮೊದಲು ಈಗಿರುವ ಜಿಲ್ಲಾ ಮತ್ತು ತಾಲ್ಲೂಕು ರಂಗಮಂದಿರಗಳ ಸಾಂಸ್ಕೃತಿಕ ಜೀವಂತಿಕೆಯ ಬಗ್ಗೆ ರೀಥಿಂಕ್ ಮಾಡಬೇಕು.
  5. ನಗರ ಕೇಂದ್ರಿತ ಸಾಂಸ್ಕೃತಿಕ ಯಜಮಾನ್ಯವನ್ನು ನಿಲ್ಲಿಸಿ, ಸಾಂಸ್ಕೃತಿಕ ವಿಕೇಂದ್ರೀಕರಣ ಸಾಧಿಸಲು ಯೋಜನೆಗಳನ್ನು ರೂಪಿಸಬೇಕು.
  6. ಈಗಿರುವ ರಂಗಮಂದಿರಗಳನ್ನು ತೆರೆಯುವ ಮತ್ತು ಅಲ್ಲಿ ಕೊರೊನಾ ಸುರಕ್ಷತೆಗಳೊಂದಿಗೆ ಪ್ರದರ್ಶನಗಳನ್ನು ಆರಂಭಿಸುವಂತೆ ಅವಕಾಶ ನೀಡಲು ಮತ್ತು ಅದಕ್ಕೆ ಬೇಕಾದ ತಯಾರಿ ನಡೆಸಲು ಸರ್ಕಾರ ಸಹಾಯ ನೀಡಲು ಒತ್ತಾಯಿಸುತ್ತೇವೆ.

ಈ  ಬೇಡಿಕೆಗಳನ್ನು ತಮ್ಮದು ಎಂದುಕೊಂಡಂತಹ ಎಲ್ಲಾ ರಂಗಕರ್ಮಿಗಳು ಈ ಕುರಿತು ಎಲ್ಲ ಜಿಲ್ಲೆಗಳಲ್ಲಿ ಅಕ್ಟೋಬರ್ 2 ರಂದು (ಗಾಂಧಿ ಜಯಂತಿ ದಿನ) ತಾವು ಇರುವಲ್ಲಿಯೇ ಪ್ರತಿಭಟನೆ ದಾಖಲಿಸಬೇಕಾಗಿ ‘ಪಾರಿಜಾತ ಬಳಗ’ ಕೋರಿದೆ.


ಇದನ್ನೂ ಓದಿ: ಬಾದಲ್ ಸರ್ಕಾರ್‌ರವರ ‘ಏವಂ ಇಂದ್ರಜಿತ್’: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...