Homeಮುಖಪುಟಪಾರಿಜಾತಾ ಬಳಗದಿಂದ ರಂಗಭೂಮಿಯ ‘ರೀಥಿಂಕಿಂಗ್’ ಅಭಿಯಾನ

ಪಾರಿಜಾತಾ ಬಳಗದಿಂದ ರಂಗಭೂಮಿಯ ‘ರೀಥಿಂಕಿಂಗ್’ ಅಭಿಯಾನ

ಈಗಾಗಲೇ ಇರುವ ಸಿದ್ಧ ಮಾದರಿಯ ರಂಗಭೂಮಿಯ ಚಟುವಟಿಕೆಗಳಲ್ಲಿ ಹಲವು ತೊಡಕುಗಳಿವೆ. ಅವುಗಳನ್ನೇ ಇಟ್ಟಕೊಂಡು ಮತ್ತೆ ಶುರುಮಾಡುವುದು ಏಕತಾನತೆಯನ್ನು ಸೃಷ್ಟಿಸುತ್ತದೆ ಹೊರತು ಮತ್ತೇನು ಪ್ರಯೋಜನವಾಗಲಾರದು.

- Advertisement -
- Advertisement -

ರಂಗಭೂಮಿ ತನ್ನ ಮೂಲ ಗುಣದಂತೆ ನಿಂತ ನೀರಾಗಲು ಬಯಸುವುದಿಲ್ಲ. ಅದು ಸದಾ ಒಂದಿಲ್ಲೊಂದು  ಬದಲಾವಣೆಯ ಪರಿವರ್ತನೆಯಲ್ಲಿ ತೊಡಗಿಕೊಂಡು ಹರಿಯುವ ನದಿಯ ಗುಣವನ್ನು ಹೊಂದಿದೆ. ಕೊರೊನಾ ಸಾಂಕ್ರಾಮಿಕದಿಂದ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ಬಿದ್ದಂತೆ ರಂಗಭೂಮಿ ಕ್ಷೇತ್ರವು ತತ್ತಿರಿಸಿತು. ಆರೇಳು ತಿಂಗಳುಗಳ ಕಾಲ ಚಟುವಟಿಕೆಗಳು ಸ್ಥಗಿತಗೊಂಡವು.

ಈ ಸಮಯದಲ್ಲಿ ರಂಗಭೂಮಿಯ ಮೂಲಕ ಹೊಸದೊಂದನ್ನು ಹೇಳಲು ತವಕಿಸುವ ಸೃಜನಶೀಲ ಕಲಾವಿದರು ಮತ್ತು ರಂಗಭೂಮಿಯೇ ತಮ್ಮ ಜೀವನ ಎಂದು ಬದುಕು ಕಟ್ಟಿಕೊಳ್ಳಲು ಹೊರಟಿದ್ದವರ ಕಥೆ ಏನು? ಕೊರೊನಾ ಹೊಡೆತಕ್ಕೆ ಸಿಕ್ಕಿ ನಲುಗುತ್ತಿರುವ ರಂಗಕರ್ಮಿಗಳ ಮುಂದಿನ ಜೀವನ ಹೇಗೆ ? ರಂಗಭೂಮಿಯನ್ನು ಕಲಿಯುವ ಮತ್ತು ಕಲಿಸುವ ಬಗೆಯಾದರು ಹೇಗೆ? ರಂಗಭೂಮಿಯನ್ನು ಹೊಸ ರೀತಿಯಾಗಿ ಜನಸಮುದಾಯದ ಮಧ್ಯೆ ತರುವುದು ಹೇಗೆ ಎಂಬ ಹತ್ತು ಹಲವು ಹೊಸ ಚಿಂತನೆಗಳ ಮೂಲಕ ರಂಗಭೂಮಿಯನ್ನು ಮತ್ತೆ ಮುನ್ನಲೆಗೆ ತರಬೇಕು ಎಂಬ ಆಶಯದಲ್ಲಿ ‘ಪಾರಿಜಾತ‘ ಯುವಬಳಗವು ‘ಥೀಯೇಟರ್ ರೀಥೀಂಕಿಂಗ್’ ಎಂಬ ಪರಿಕಲ್ಪನೆಯ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಕೊರೊನಾ ಸಮಯದಲ್ಲಿ ರಂಗಭೂಮಿಯನ್ನು ಪ್ರತಿ ದಿನ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದ ನಿರ್ದೇಶಕರು, ನಟರು, ತಂತ್ರಜ್ಞರು ಒಟ್ಟಾರೆ ರಂಗತಂಡಗಳು ಎಲ್ಲರು ಸಹ ಹೈರಾಣಾಗಿ ಹೋದರು. ಇಂತಹ ಸಂಕಷ್ಟದ ಸಮಯದಲ್ಲಿ ರಂಗಭೂಮಿಯ ಜೊತೆಗೆ ನಿಲ್ಲಬೇಕಿದ್ದ ಸರ್ಕಾರ ತನ್ನ ಸಂಸ್ಕೃತಿ ಇಲಾಖೆ ಮತ್ತು ನಾಟಕ ಅಕಾಡೆಮಿ ಮೂಲಕ ಕಲಾವಿದರನ್ನು ಪಟ್ಟಿ ಮಾಡಿ 6 ತಿಂಗಳ ನಷ್ಟಕ್ಕೆ ತಲಾ 2000 ರೂ ಕೊಡುವ ಭರವಸೆ ನೀಡಿ ಕೆಲವರಿಗಷ್ಟೇ ನೀಡಿ ತನ್ನ ಬೇಜಾವಾಬ್ದಾರಿಯನ್ನು ತೋರಿತು.

ಯೋಚಿಸುವುದು ದಿನವೂ ಇರುತ್ತದೆ. ಆದರೆ ಇಂದಿನ ಅಸಹನೆ, ಸಿನಿಕತನಗಳ ನಡುವೆ ಕಳೆದುಕೊಳ್ಳುತ್ತಿರುವ ಸಾಂಸ್ಕೃತಿಕ ಪ್ರಜ್ಞೆಯನ್ನು ಮತ್ತೊಮ್ಮೆ ಮರುಪರಿಶೀಲಿಸುವ ರೀಥಿಂಕ್ ಇಂದಿನ ಅಗತ್ಯವಾಗಿದೆ. – ಮಹದೇವ ಹಡಪದ, ರಂಗನಿರ್ದೇಶಕರು.

ಕೊರೊನಾ ಪೆಟ್ಟಿನಿಂದ ಕಳೆದುಕೊಂಡ ಉತ್ಸಾಹವನ್ನು ರಂಗಭೂಮಿ ಮತ್ತೆ ಮುನ್ನೆಲೆಗೆ ತರಬೇಕಿದೆ. ಈಗಾಗಲೇ ಇರುವ ಸಿದ್ಧ ಮಾದರಿಯ ರಂಗಭೂಮಿಯ ಚಟುವಟಿಕೆಗಳಲ್ಲಿ ಹಲವು ತೊಡಕುಗಳಿವೆ. ಅವುಗಳನ್ನೇ ಇಟ್ಟಕೊಂಡು ಮತ್ತೆ ಶುರುಮಾಡುವುದು ಏಕತಾನತೆಯನ್ನು ಸೃಷ್ಟಿಸುತ್ತದೆ ಹೊರತು ಮತ್ತೇನು ಪ್ರಯೋಜನವಾಗಲಾರದು. ಜಗತ್ತೇ ಆನ್‍ಲೈನ್ ಹಿಂದೆ ಓಡುತ್ತಿರುವಾಗ ಆಫ್‌ಲೈನ್ ರಂಗಭೂಮಿಯ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ರಂಗಭೂಮಿಯಲ್ಲಿ ಹೊಸ ಬದಲಾವಣೆ, ಮರುಹಟ್ಟು ಹೇಗಿರಬೇಕೆಂಬ ಚಿಂತನೆಗಳಾಗಬೇಕಿದೆ. ರಂಗಭೂಮಿಯ ಹಿರಿಕಿರಿಯಿರೆಲ್ಲರೂ ಸೇರಿ ಈ ಚಿಂತನೆ ನಡೆಸಬೇಕೆಂಬುದು ಪಾರಿಜಾತ ಬಳಗದ ಅಭಿಮತವಾಗಿದೆ.

ನಾವು ಈಗ ಒಳಗೂ ಹೊರಗೂ ವಿಚಿತ್ರ ಬಗೆಯ ಬರ ಭಯ ರೋಗದ ಕಾಲವನ್ನು ಅನುಭವಿಸುತ್ತಿದ್ದೇನೆ. ಇದನ್ನು ನಾವು ಕಾಲದ ಎಚ್ಚರಿಕೆ ಅಂತಲೇ ಭಾವಿಸಿ, ನಮಗೆ ಕಾಲವು ನೀಡಿರುವ ಪಾಠಗಳನ್ನು ಸರಿಯಾಗಿ ಗ್ರಹಿಸಿ ನಮ್ಮ ಮುಂದಿನ ಸಾಂಸ್ಕೃತಿಕ ಮಾದರಿಗಳ ಕುರಿತು ‘ರೀ-ಥಿಂಕ್’ ಮಾಡಲೇಬೇಕಿದೆ. ಇದು ಸಾಂಸ್ಕೃತಿಕ ಸಮುದಾಯ – ಜನ ಸಮುದಾಯ- ಸರಕಾರ ಎಲ್ಲರೂ ಕೂಡಿ ಮಾಡಬೇಕಾದ ಕೆಲಸ. – ಲಕ್ಷ್ಮಣ್ ಕೆ ಪಿ, ಯುವ ರಂಗಕರ್ಮಿ.

ಮುಖ್ಯವಾಗಿ ಪರಿಜಾತ ಬಳಗ ಸದ್ಯಕ್ಕೆ ಈ ಕೆಳಗಿನ ಐದು ಪ್ರಮುಖ ಚಿಂತನೆಗಳನ್ನು ಬೇಡಿಕೆಯ ರೂಪದಲ್ಲಿ ಮುಂದಿಟ್ಟಿದೆ.

  1. ಕರ್ನಾಟಕದ ಎಲ್ಲ ಮುಖ್ಯ ಸಾಂಸ್ಕೃತಿಕ ಸಂಸ್ಥೆಗಳು, ರಂಗಶಾಲೆಗಳು, ರೆಪರ್ಟರಿಗಳು ತಮ್ಮ ಪಠ್ಯಕ್ರಮ ಮತ್ತು ಕೆಲಸದ ರೂಪುರೇಷೆಗಳನ್ನು ರೀಥಿಂಕ್ ಮಾಡಬೇಕು.
  2. ರಂಗಶಾಲೆಗಳು ತಮ್ಮ ಪಠ್ಯಕ್ರಮದ ಕುರಿತು ರೀಥಿಂಕ್ ಮಾಡಬೇಕು.
  3. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಅನುದಾನದ ನೀತಿಗಳ ಕುರಿತು ರೀಥಿಂಕ್‌ ಮಾಡಬೇಕು.
  4. ಹೊಸ ರಂಗಮಂದಿರಗಳನ್ನು ಕಟ್ಟುವ ಮೊದಲು ಈಗಿರುವ ಜಿಲ್ಲಾ ಮತ್ತು ತಾಲ್ಲೂಕು ರಂಗಮಂದಿರಗಳ ಸಾಂಸ್ಕೃತಿಕ ಜೀವಂತಿಕೆಯ ಬಗ್ಗೆ ರೀಥಿಂಕ್ ಮಾಡಬೇಕು.
  5. ನಗರ ಕೇಂದ್ರಿತ ಸಾಂಸ್ಕೃತಿಕ ಯಜಮಾನ್ಯವನ್ನು ನಿಲ್ಲಿಸಿ, ಸಾಂಸ್ಕೃತಿಕ ವಿಕೇಂದ್ರೀಕರಣ ಸಾಧಿಸಲು ಯೋಜನೆಗಳನ್ನು ರೂಪಿಸಬೇಕು.
  6. ಈಗಿರುವ ರಂಗಮಂದಿರಗಳನ್ನು ತೆರೆಯುವ ಮತ್ತು ಅಲ್ಲಿ ಕೊರೊನಾ ಸುರಕ್ಷತೆಗಳೊಂದಿಗೆ ಪ್ರದರ್ಶನಗಳನ್ನು ಆರಂಭಿಸುವಂತೆ ಅವಕಾಶ ನೀಡಲು ಮತ್ತು ಅದಕ್ಕೆ ಬೇಕಾದ ತಯಾರಿ ನಡೆಸಲು ಸರ್ಕಾರ ಸಹಾಯ ನೀಡಲು ಒತ್ತಾಯಿಸುತ್ತೇವೆ.

ಈ  ಬೇಡಿಕೆಗಳನ್ನು ತಮ್ಮದು ಎಂದುಕೊಂಡಂತಹ ಎಲ್ಲಾ ರಂಗಕರ್ಮಿಗಳು ಈ ಕುರಿತು ಎಲ್ಲ ಜಿಲ್ಲೆಗಳಲ್ಲಿ ಅಕ್ಟೋಬರ್ 2 ರಂದು (ಗಾಂಧಿ ಜಯಂತಿ ದಿನ) ತಾವು ಇರುವಲ್ಲಿಯೇ ಪ್ರತಿಭಟನೆ ದಾಖಲಿಸಬೇಕಾಗಿ ‘ಪಾರಿಜಾತ ಬಳಗ’ ಕೋರಿದೆ.


ಇದನ್ನೂ ಓದಿ: ಬಾದಲ್ ಸರ್ಕಾರ್‌ರವರ ‘ಏವಂ ಇಂದ್ರಜಿತ್’: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...