Homeಕರ್ನಾಟಕಕರ್ನಾಟಕ ಬಂದ್ ಯಶಸ್ವಿಯಾದದ್ದು ಏಕೆ? ಹೇಗೆ? ಚಳವಳಿಗಳ ಮಟ್ಟಿಗೆ ತಿರುವು ಬಿಂದು ಆಗಬಹುದಾದ ಬೆಳವಣಿಗೆ ಇದು

ಕರ್ನಾಟಕ ಬಂದ್ ಯಶಸ್ವಿಯಾದದ್ದು ಏಕೆ? ಹೇಗೆ? ಚಳವಳಿಗಳ ಮಟ್ಟಿಗೆ ತಿರುವು ಬಿಂದು ಆಗಬಹುದಾದ ಬೆಳವಣಿಗೆ ಇದು

ಕರ್ನಾಟಕ ಬಂದ್‌ಗೆ ಕರೆ ಕೊಟ್ಟವರಿಗೇ ಅದು ಈ ಪ್ರಮಾಣದ ಯಶಸ್ಸು ಕಾಣುತ್ತದೆ ಎಂದು ತೋರಿರಲಿಲ್ಲ. ಹೀಗಾಗಿ ಈ ಯಶಸ್ಸಿನ ಕಾರಣಗಳು ಮತ್ತು ಪಾಠಗಳನ್ನು ವಿಶ್ಲೇಷಿಸುವ ಅಗತ್ಯವಿದೆ.

- Advertisement -
- Advertisement -

ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯು ನೀಡಿದ ಕರ್ನಾಟಕ ಬಂದ್‍ಅನ್ನು ಯಶಸ್ವಿ ಎಂದು ಕರೆಯಲು ಬೇಕಾದ ಮಾನದಂಡಗಳನ್ನು ಅದು ಪೂರೈಸಿದೆ. ಲಾಕ್‍ಡೌನ್ ಅಥವಾ ಹೆದರಿಕೆ ಇದ್ದಾಗ ಹೊರತುಪಡಿಸಿ ಸಂಪೂರ್ಣ ಬಂದ್ ಎಂದೂ ಆಗುವುದಿಲ್ಲ. ಕಾವೇರಿ ವಿಚಾರಕ್ಕೆ ಬಂದ್ ಕರೆ ಕೊಟ್ಟಾಗ, ದಕ್ಷಿಣದ ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ಬಂದ್ ಆಗುತ್ತಿತ್ತು; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೂ ಸ್ಪಂದನೆ ಇದ್ದಂತಹ ಬಂದ್‍ಗಳು ನಡೆದದ್ದು ಬಹಳ ಕಡಿಮೆ. ಆದರೆ ಇಂದಿನ ಬಂದ್ ಇಡೀ ರಾಜ್ಯದಲ್ಲಿ ಒಂದಲ್ಲಾ ಒಂದು ಮಟ್ಟಕ್ಕೆ ಪರಿಣಾಮ ಬೀರಿದೆ. ಕೇಂದ್ರ ಬೆಂಗಳೂರಿನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲವೂ ಬಂದ್ ಆಗಿತ್ತೆನ್ನುವುದು ಮಾತ್ರವಲ್ಲದೇ, ವಿವಿಧ ಭಾಗಗಳಲ್ಲಿ ಸಂಚಾರ ಹಾಗೂ ಚಟುವಟಿಕೆ ಕಡಿಮೆಯಾಗಿತ್ತು; ಜೊತೆಗೆ ಇಡೀ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಮತ್ತು ನೂರಕ್ಕೂ ಹೆಚ್ಚು ತಾಲೂಕು ಕೇಂದ್ರಗಳಲ್ಲಿ ಬಂದ್‍ನ ವಾತಾವರಣ ಉಂಟಾಗಿದ್ದು ಸ್ಪಷ್ಟ.‌

ಇದು ಹೇಗೆ ಸಾಧ್ಯವಾಯಿತು ಎಂಬುದು ಒಂದು ಮಟ್ಟಿಗೆ ಅಚ್ಚರಿಯೇ ಸರಿ. ಇದು ಕಾಂಗ್ರೆಸ್ ಅಥವಾ ಜೆಡಿಎಸ್‍ನ ಬೆಂಬಲದಿಂದ ಆಯಿತು ಎಂದೇನಾದರೂ ಭಾವಿಸಿದರೆ ಸ್ವತಃ ಅವರಿಗೇ ಅಚ್ಚರಿಯಾಗುತ್ತದೆ. ಏಕೆಂದರೆ ಅಳೆದೂ ಸುರಿದು ನಿನ್ನೆ ಮಧ್ಯಾಹ್ನದ ಮೇಲೆ ಅವೆರಡೂ ಪಕ್ಷಗಳು ಬಂದ್‍ಗೆ ಬೆಂಬಲ ಘೋಷಿಸಿದವು ಮತ್ತು ಇಂದಿನ ಬಂದ್‍ನ ಸಂದರ್ಭದಲ್ಲೂ ಅವರು ಬೀದಿಗಳಲ್ಲಿ ಹೆಚ್ಚೇನೂ ಕಾಣಲಿಲ್ಲ. ಮಂಡ್ಯದಂತಹ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಇನ್ನೊಬ್ಬ ನಾಯಕರೊಂದಿಗೆ (ಇನ್ನಿಬ್ಬರು ಜೊತೆಗಾರರನ್ನೂ ಕರೆತರದೇ) ಬಂದ್‍ಗೆ ಬೆಂಬಲ ಸೂಚಿಸಿದ್ದರು! ಇದು ಅವರ ಬೆಂಬಲದ ಪರಿ!! ರಾಜಕೀಯ ಪಕ್ಷಗಳ ತೋರಿಕೆಯ ಬೆಂಬಲದ ಘೋಷಣೆಗೆ ಮುಂಚೆಯೇ ಬಹುತೇಕ ಎಲ್ಲಾ ಜಿಲ್ಲೆಗಳು ಮತ್ತು ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಬಂದ್‍ಗೆ ಪೂರ್ವಭಾವಿ ಸಭೆಗಳನ್ನು ಹಲವಾರು ಸಂಘಟನೆಗಳು ಒಟ್ಟುಗೂಡಿ ನಡೆಸಿದ್ದವು; ಸ್ಥಳೀಯ ಜಿಲ್ಲಾಧಿಕಾರಿ ಮತ್ತು ಎಸ್‍ಪಿಗಳು ಅವರೊಂದಿಗೆ ಸಭೆ ನಡೆಸಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ಕೋರಿದ್ದರು.

ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳು ಬೀದಿಗಿಳಿದವಾದರೂ ವಿವಿಧ ಬಡಾವಣೆಗಳಲ್ಲೆಲ್ಲಾ ವ್ಯಾಪಿಸಿದ ಪ್ರಚಾರ, ಬೈಕ್‍ಗಳಲ್ಲಿ ವಿಪರೀತ ಓಡಾಟ, ಸ್ಥಳೀಯವಾದ ಬೆದರಿಕೆ ಇತ್ಯಾದಿಗಳ ಮೂಲಕ ಅದು ವ್ಯಕ್ತಗೊಳ್ಳಲಿಲ್ಲ. ಹೀಗಿದ್ದೂ ಈ ಬಂದ್ ಬಹುಮಟ್ಟಿಗೆ ಯಶಸ್ವಿಯಾದದ್ದು ಹೇಗೆ?‌

ಕರ್ನಾಟಕ ಬಂದ್

ಒಂದು ವೇಳೆ ಟಿವಿ ಮತ್ತು ಪತ್ರಿಕೆಗಳಲ್ಲಿ ನಾಳೆ ಈ ಬಂದ್‍ಅನ್ನು ಭಾಗಶಃ ಯಶಸ್ವಿ ಅಥವಾ ಪರಿಣಾಮಕಾರಿ ಬಂದ್ ಎಂದಾದರೆ ಕರೆಯದೇ ಇದ್ದಲ್ಲಿ ಅದು ಅವರು ಬಿಜೆಪಿಗೆ ಮಾರಿಕೊಂಡಿದ್ದಾರೆನ್ನುವ ಭಾವ ಇನ್ನಷ್ಟು ಗಟ್ಟಿಯಾಗಬಹುದೇ ಹೊರತು ಅದಕ್ಕಿಂತ ಹೆಚ್ಚೇನಿಲ್ಲ.

ಏಕೆಂದರೆ ಯಾವುದೇ ‘ಭಾವನಾತ್ಮಕವಾದ ವಿಚಾರ’ ಇಲ್ಲದೇ, ತೋಳ್ಬಲ ಅಥವಾ ಅಧಿಕಾರದ ಬಲವಿಲ್ಲದೇ, ಸರ್ಕಾರವನ್ನು ಎದುರು ಹಾಕಿಕೊಂಡು ನಡೆದು ಈ ಮಟ್ಟಿಗಿನ ಪರಿಣಾಮ ಬೀರಿರುವುದು ಸದ್ಯದ ಸಂದರ್ಭದಲ್ಲಿ ಅಸಾಧಾರಣವೇ ಸರಿ. ಅದರಲ್ಲೂ ಬಹುತೇಕ ಮಾಧ್ಯಮಗಳು ಆಳುವ ಪಕ್ಷದ ಮತ್ತು ಸಿದ್ಧಾಂತದ ತುತ್ತೂರಿಗಳಾಗಿರುವಾಗ ಅದರ ಬಲವೂ ಖಾತರಿಯಿರಲಿಲ್ಲ. ಆದರೂ ಇದ್ದುದರಲ್ಲಿ ಕೆಲವು ಟಿವಿ ಚಾನೆಲ್‍ಗಳು ಬಂದ್ ನಡೆಯಲಿದೆ ಎನ್ನುವ ಸಂದೇಶವನ್ನು ಬಲವಾಗಿಯೇ ಸಾರಿದ್ದವು. ಹಾಗೆಂದು ಈ ಬಂದ್‍ನ ಕ್ರೆಡಿಟ್‍ಅನ್ನು ಮಾಧ್ಯಮಗಳು ತೆಗೆದುಕೊಳ್ಳುವುದೂ ಸಾಧ್ಯವಿಲ್ಲ. ‌

ಹಾಗಾದರೆ ಈ ಬಂದ್ ಕರೆ ಇಷ್ಟು ಯಶಸ್ವಿಯಾದದ್ದು ಹೇಗೆ?

ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆ

ಮೊದಲನೆಯದಾಗಿ, ನರೇಂದ್ರ ಮೋದಿಯವರು, ಯಡಿಯೂರಪ್ಪನವರು ಹಾಗೂ ಬಿಜೆಪಿ ಪಕ್ಷವು ತಾವು ರೈತರ ಪರವಾದ ನೀತಿಗಳನ್ನು ಅನುಸರಿಸುತ್ತಿದ್ದೇವೆ ಎಂದು ಎಷ್ಟೇ ಹೇಳಿದರೂ ಹೌದೆಂದು ಬಹುತೇಕ ಯಾರಿಗೂ ಅನ್ನಿಸುತ್ತಿಲ್ಲ. ಇವರಿಗಿಂತ ಕಾಂಗ್ರೆಸ್ ಅಥವಾ ಜೆಡಿಎಸ್ ಅಥವಾ ಇನ್ಯಾವುದೋ ಪಕ್ಷಗಳು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದರು ಎಂದೂ ಅನ್ನಿಸಿರಲಿಕ್ಕಿಲ್ಲ. ಆದರೆ ಬಿಜೆಪಿ ನೇತೃತ್ವದ ಸರ್ಕಾರಗಳು ರೈತರ ಪರವಾಗಿದ್ದಾರೆ ಎಂಬುದು ಅದರ ಬೆಂಬಲಿಗರ ಭಾವನೆಯೂ ಆಗಿಲ್ಲ. ಈ ಹೊತ್ತಿನಲ್ಲಂತೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ರೈತರಿಗೆ ಅನ್ಯಾಯವಾಗಿದೆ ಮತ್ತು ಆಗುತ್ತಿದೆ ಎಂಬ ಭಾವವು ಎಲ್ಲೆಡೆ ಮೂಡಿದೆ. ಎಪಿಎಂಸಿ ಮತ್ತು ಇನ್ನಿತರ ಕಾಯ್ದೆ ತಿದ್ದುಪಡಿಗಳು ಒಳ್ಳೆಯದಲ್ಲ ಎಂಬ ಭಾವನೆ ವ್ಯಾಪಕವಾಗತೊಡಗಿದೆ. ನಿಜಕ್ಕೂ ಕೆಟ್ಟಿದ್ದ, ಒಂದು ಮಟ್ಟಿಗೆ ರೈತವಿರೋಧಿಯೂ ಆಗಿದ್ದ ಎಪಿಎಂಸಿಯ ಕುರಿತು ದೊಡ್ಡ ನಿರೀಕ್ಷೆಯು ರೈತರಲ್ಲಿಲ್ಲ; ಹಾಗೆಂದು ಅದರ ರಚನೆಯನ್ನೇ ಬದಲಿಸುವುದು ಸರಿಯೆಂದು ಯಾರಿಗೂ ಅನ್ನಿಸಿದಂತಿಲ್ಲ.

ಈ ಸರ್ಕಾರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಅನಿಸಿಕೆ

ರೈತರಿಗೆ ಮಾತ್ರವಲ್ಲದೇ, ಮಿಕ್ಕ ಜನರಿಗೂ ಈ ಸರ್ಕಾರಗಳು ಏಕೋ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಭಾವ ಹೆಚ್ಚಾಗುತ್ತಿದೆ. ಅಂತಹ ಅಭಿಪ್ರಾಯ ರೂಪಿಸುವಲ್ಲಿ ಸೋಷಿಯಲ್‌ ಮೀಡಿಯಾ ವಾರಿಯರ್‌ಗಳು ಮಾತ್ರ ಪಾತ್ರ ಹೊಂದಿಲ್ಲ. ಅನಕ್ಷರಸ್ಥರು, ಹಳ್ಳಿಯ ಹಿರಿಯರು, ಮೇಲ್ನೋಟಕ್ಕೆ ಅಷ್ಟು ಸುಶಿಕ್ಷಿತರೆಂದು ತೋರದವರು ಸಾಮಾನ್ಯವಾಗಿ ಪ್ರಮುಖ ಪಾತ್ರ ವಹಿಸುತ್ತಾರೆ. ‘ಈ ಮೋದಿದು ಬರೀ ಮಾತೇ ಆಯಿತು. ಜನರಿಗೆ ಸಹಾಯಕ್ಕೆ ಬರೋ ಅಂಥದ್ದು ಏನೂ ಆಗಲಿಲ್ಲ’ ಎಂಬ ಮಾತುಗಳು ಹಳ್ಳಿಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ತಾಲೂಕು ಕೇಂದ್ರವೊಂದರಲ್ಲಿ ವಾಸಿಸುವ ಅಂತಹ ಒಬ್ಬ ಹಿರಿಯರು ತಾವೇ ಸ್ವತಃ ಬಿಜೆಪಿಯಲ್ಲಿದ್ದರೂ ‘ಎಷ್ಟು ದಿನಾ ಅಂತ ನಿರೀಕ್ಷೆ ಇಟ್ಟುಕೊಳ್ಳೋದು ಇವ್ರೇ, ಜನರಿಗೆ ಗೊತ್ತಾಗೋಗುತ್ತೆ ಇದು ಬರೀ ಬುಡ್‍ಬುಡಿಕೆ ಅಂತ’ ಎಂದು ಹೇಳಿದ ಮಾತು ಅಚ್ಚರಿ ಹುಟ್ಟಿಸುತ್ತಿದೆ.

ಕೊರೊನಾ ಮತ್ತು ಲಾಕ್‍ಡೌನ್ ಸಂದರ್ಭದ ಸಮಸ್ಯೆಗಳು

ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲಿ ಸರ್ಕಾರಗಳ ಯಶಸ್ಸು, ವೈಫಲ್ಯಗಳನ್ನು ಜನರು ಕೂಡಲೇ ಅಳೆಯಲು ಹೋಗುವುದಿಲ್ಲ. ಆದರೆ ಇಲ್ಲಿ ಸುದೀರ್ಘ ಆರು ತಿಂಗಳುಗಳೇ ಕಳೆದು ಹೋದವು. ಸಾಮಾನ್ಯ ಸಂದರ್ಭದಲ್ಲಿ ಇನ್ಯಾರ ಮೇಲೋ ಹಾಕಿ ನುಣುಚಿಕೊಳ್ಳುವುದು ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಧ್ಯವಾಗದು. ಒಂದೆರಡು ತಿಂಗಳುಗಳ ಕಾಲ ‘ಯಾವ ಸರ್ಕಾರವಾದರೂ ಏನು ಮಾಡಲಾದೀತು?’ ಎಂದುಕೊಳ್ಳುತ್ತಿರುತ್ತಾರೆ. ಆದರೆ ಎಡವಟ್ಟುಗಳ ಪರಂಪರೆ ಮುಂದುವರೆದಂತೆ ಜನರಿಗೆ ಅಸಮಾಧಾನ ಹೆಚ್ಚಾಗುತ್ತಾ ಹೋಗುತ್ತದೆ. ‘ನಮ್ಮ ಜನರೇ ಸರಿಯಿಲ್ಲ’ ಎಂದು ಜನರಲ್ ಆಗಿ ಹೇಳುವುದು ಈಗಲೂ ಇದೆ, ಆದರೆ ‘ಮೇಲಿಂದಲೇ ಎಲ್ಲೋ ಎಡವಟ್ಟಾಗಿದೆ’ ಎಂಬುದು ಎಲ್ಲರಿಗೂ ಗೊತ್ತಾದಂತಿದೆ. ಇದರ ಅರಿವು ನರೇಂದ್ರ ಮೋದಿಯವರಿಗೂ ಇತ್ತು. ಹಾಗಾಗಿಯೇ ಮೊದಲ ಒಂದೆರಡು ಸಾರಿ ಬಿಟ್ಟರೆ ನಂತರ ಅವರು ಕೊರೊನಾ ವಿಚಾರದಲ್ಲಿ ದೇಶವನ್ನುದ್ದೇಶಿಸಿ ಮಾತಾಡಿ, ಎಲ್ಲದರ ಹೊಣೆಯನ್ನು ತಾವೇ ಹೊತ್ತುಕೊಳ್ಳಲು ಹೋಗಲಿಲ್ಲ.

ಕರ್ನಾಟಕ ಬಂದ್

ಕೊರೊನಾ ಹೊತ್ತಿನ ಆಕ್ರೋಶಕ್ಕೆ ವೇದಿಕೆ

ಈ ಸಂದರ್ಭವೇ ಹೇಗಿತ್ತೆಂದರೆ ಜನರು ವಿಪರೀತವಾಗಿ ತಮ್ಮ ಆಕ್ರೋಶವನ್ನು ಹೊರಚೆಲ್ಲಲು ಸಾಧ್ಯವಿರಲಿಲ್ಲ. ಹೆಚ್ಚಿನವರು ಮನೆಯಲ್ಲೇ ಇದ್ದರು. ಹಬ್ಬ ಹರಿದಿನಗಳು, ಮದುವೆ, ತಿಥಿಗಳೂ ದೊಡ್ಡದಾಗಿ ಜನರನ್ನು ಸೇರಿಸಿ ನಡೆದಿರಲಿಲ್ಲ. ಹೀಗಾಗಿ ಸಾರ್ವಜನಿಕವಾಗಿ ಹರಿದು ಹೋಗಬಹುದಾದ ಅಸಮಾಧಾನಗಳಿಗೂ ವೇದಿಕೆ ಸಿಕ್ಕಿರಲಿಲ್ಲ. ಅದಕ್ಕೂ ಈಗೊಂದು ವೇದಿಕೆ ಸಿಕ್ಕಿದೆ. ಅದು ಇನ್ಯಾವುದೋ ನಿರ್ದಿಷ್ಟ ಸಮುದಾಯವಾಗಿದ್ದರೆ ಅಷ್ಟು ಸುಲಭಕ್ಕೆ ಬೆಸೆದುಕೊಳ್ಳುತ್ತಿರಲಿಲ್ಲ; ‘ಅನ್ನ ನೀಡುವ’ ರೈತರದ್ದಾಗಿರುವುದರಿಂದ ಮಿಕ್ಕವರಿಗೂ ಲಿಂಕ್ ಮಾಡಿಕೊಳ್ಳಲು ಸಾಧ್ಯವಾಗಿದೆ.

ಪ್ರಜ್ಞಾವಂತ ಗುಂಪುಗಳ ಬೆಂಬಲ

ವಿವಿಧ ಸಂಘಟನೆಗಳ (ವಿಶೇಷವಾಗಿ ಕನ್ನಡ ಸಂಘಟನೆಗಳ) ಸ್ವಯಂಪ್ರೇರಿತ ಬೆಂಬಲವು ಈ ಹೋರಾಟಕ್ಕೆ ಹರಿದುಬಂದಿದ್ದು ಎದ್ದು ಕಾಣುತ್ತಿತ್ತು. ಇನ್ನೂ ಬಂದ್‍ಗೆ ಕರೆಯೇ ಹೊರಬರದ ಹೊತ್ತಿನಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರು ವಿಡಿಯೋ ಮಾಡಿ ಬೆಂಬಲ ಸೂಚಿಸಿದ್ದರು! ಕಳೆದ ಆರು ತಿಂಗಳಿನಿಂದ ಪ್ರತಿಭಟನೆಗಳನ್ನು ಮಾಡಲಾಗದಿದ್ದ ಸಂಘಟನೆಗಳು, ಕ್ರಿಯಾಶೀಲರೆಲ್ಲರೂ ತಮ್ಮ ಸಾರ್ವಜನಿಕ ಅಭಿವ್ಯಕ್ತಿ ಹಾಗೂ ವ್ಯವಸ್ಥೆಯ ವಿರೋಧಿ ದನಿಗೆ ಇದೊಂದು ಸಂದರ್ಭ ಎಂದು ಅಪ್ರಜ್ಞಾಪೂರ್ವಕವಾಗಿ ಜೊತೆಗೂಡಿರುವ ಸಾಧ್ಯತೆಯೂ ಇದೆ.‌

 

 

ಐಕ್ಯ ಕರೆಯ ಶಕ್ತಿ

ಅಲ್ಪಸ್ವಲ್ಪ ಭಿನ್ನದನಿಗಳಿದ್ದರೂ, ರೈತ ಸಂಘಟನೆಗಳು ಒಟ್ಟಾರೆಯಾಗಿ ಜೊತೆಗೂಡಿ ಕರೆ ನೀಡಿದ್ದು ಸಹಾ ಈ ಬಂದ್‍ಗೆ ಒಳ್ಳೆಯದನ್ನೇ ಮಾಡಿತು. ಸೆ.21ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಗುಂಪಿನೊಂದಿಗೆ ಪ್ರತ್ಯೇಕತೆ ಕಾಯ್ದುಕೊಂಡಿದ್ದು ಗೊಂದಲವನ್ನು ಮೂಡಿಸಿತ್ತು. ಸೆ.25ರಂದು ಬಂದ್ ಕರೆ ಕೊಡುವ ವಿಚಾರದಲ್ಲೂ ಗೊಂದಲವುಂಟಾಗಿತ್ತು. ಆದರೆ ನಂತರ ಬಡಗಲಪುರ ನಾಗೇಂದ್ರ ಮತ್ತು ಗುರುಪ್ರಸಾದ್ ಕೆರಗೋಡು ಅವರುಗಳು ತೋರಿದ ಪ್ರಬುದ್ಧತೆಯಿಂದ ಭಿನ್ನದನಿಗಳಿಗೆ ಅವಕಾಶವಿರದೇ ಒಂದೇ ದನಿಯ ಕರೆಯು ಸ್ಪಷ್ಟ ಸಂದೇಶವನ್ನು ರವಾನೆ ಮಾಡಿತು. ಹಾಗಾಗಿ ಯಾರು ಕರೆ ಕೊಟ್ಟಿದ್ದಾರೆ ಎಂಬುದನ್ನು ಹೆಚ್ಚು ನೋಡದೇ ಪ್ರತೀ ಜಿಲ್ಲೆ, ತಾಲೂಕಿನಲ್ಲಿ ಹಲವರು ಪ್ರತಿಕ್ರಿಯಿಸಿದ್ದು ನಡೆಯಿತು.

ಎಲ್ಲಕ್ಕಿಂತ ಮುಖ್ಯವಾಗಿ ಈ ಸಂದರ್ಭದಲ್ಲಿ ಬಂದ್ ಕರೆ ಕೊಡಬಹುದು ಎಂಬ ತೀರ್ಮಾನಕ್ಕೆ ಬಂದಿದ್ದು ಅತ್ಯಂತ ಮಹತ್ವಪೂರ್ಣವಾದದ್ದು. ಕರ್ನಾಟಕದ ಜನತೆಯು ಸದರಿ ಮಸೂದೆಗಳ ವಿರುದ್ಧವಾದ ಅನಿಸಿಕೆ ಹೊಂದಿದ್ದಾರೆ ಎಂಬುದನ್ನು ಗ್ರಹಿಸಿ ಸೂಕ್ತ ಕಾಲದಲ್ಲಿ ಕರೆ ಕೊಡದಿದ್ದರೆ ಈ ಸಾಧ್ಯತೆಯೇ ಉಂಟಾಗುತ್ತಿರಲಿಲ್ಲ.

ಕೆಲವು ಪಾಠಗಳು
1. ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಅನಿವಾರ್ಯವಲ್ಲ.
2. ಬಿಜೆಪಿಯ ವಿರುದ್ಧ ಜನಾಭಿಪ್ರಾಯವು ರೂಪುಗೊಳ್ಳುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಿ ಮುಂದಡಿಯಿಟ್ಟರೆ ಅದು ಜನಾಂದೋಲನವಾಗಿ ರೂಪುಗೊಳ್ಳುವ ಸಾಧ್ಯತೆ ಹೊಂದಿದೆ.
3. ಅದಿನ್ನೂ ಚುನಾವಣಾ ರಾಜಕೀಯ ಶಕ್ತಿಯಾಗಿ ಘನೀಭವಿಸುವ ರೀತಿ ಕೂಡಲೇ ಕಾಣುತ್ತಿಲ್ಲ.
4. ಸಂಘಟನೆಗಳು ತಮ್ಮ ಸೀಮಿತ ಹಿತಾಸಕ್ತಿಗಳಾಚೆ ಯೋಚಿಸುವ ಅಗತ್ಯವಿದೆ.

ಕೊನೆಯದಾಗಿ,
ಇದರ ಹತ್ತುಭಾಗದಷ್ಟು ಬಲ (ಹಣಬಲ, ಅಧಿಕಾರದ ಬಲ, ತೋಳ್ಬಲ ಇತ್ಯಾದಿ) ಇದ್ದು, ಇದರ ಅರ್ಧ ಭಾಗದಷ್ಟು ಬಂದ್ ನಡೆದರೂ ಅದನ್ನು ಯಶಸ್ಸು ಎಂದು ಹೇಳಿ, ಇದನ್ನು ಯಶಕಾಣದ ಬಂದ್ ಎಂದು ಹೇಳಬಹುದಾದವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬುದನ್ನು ರಾಜ್ಯದ ಎಲ್ಲಾ ಭಾಗಗಳಲ್ಲೂ ನಡೆದ ಪರಿಣಾಮಕಾರಿ ಪ್ರತಿಭಟನೆಗಳು ತೋರಿವೆ. ಆದರೆ ತಲೆ ಕೆಡಿಸಿಕೊಳ್ಳದೇ ಮುಂದಕ್ಕೆ ಹೋಗುವ ಅಗತ್ಯವಿದೆ. ಇದರಿಂದ ಅಲ್ಪತೃಪ್ತರಾದರೆ ಪ್ರಯೋಜನವಾಗದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...