Homeಮುಖಪುಟಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? - ಜಿ.ಎನ್‌. ನಾಗರಾಜ್

ಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? – ಜಿ.ಎನ್‌. ನಾಗರಾಜ್

ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ?

- Advertisement -
- Advertisement -

ಭಾರತ ಇಂದು ಎದುರಿಸುತ್ತಿರುವ ಹಲವು ರೀತಿಯ ಸಂಕಟಗಳ ಪರಿಸ್ಥಿತಿಯಲ್ಲಿ ಗಾಂಧಿ ಅವರ ಪ್ರಧಾನ ಕೊಡುಗೆ ಏನೆಂದು ನೆನೆಯುವುದು ಮಾತ್ರವಲ್ಲ, ಅವುಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯಗತ ಮಾಡಬೇಕಾದವುಗಳನ್ನು ಮಾತ್ರ ಈ ಕಿರು ಟಿಪ್ಪಣಿಯಲ್ಲಿ ಪರಿಶೀಲಿಸಬಯಸುತ್ತೇನೆ.

ಕೆಲವೇ ದಿನಗಳ ಹಿಂದೆ ದೇಶಾದ್ಯಂತ ಆರಂಭವಾದ ರೈತ ಹೋರಾಟದ ಮೊದಲ ಸುತ್ತು ಮುಗಿದಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಕೋಟ್ಯಂತರ ರೈತರು, ಕಾರ್ಮಿಕರು ಹಾಗೂ ಇತರ ಅನೇಕ ಜನ ಸಮುದಾಯಗಳು ಚಳುವಳಿಗೆ ಇಳಿದಿದ್ದಾರೆ. ಈ ಚಳುವಳಿ ಗಾಂಧಿಯವರನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಗಾಂಧೀಜಿಯವರು ಭಾರತದಲ್ಲಿ ಮೊದಲು ಕೈಗೊಂಡ ಹೋರಾಟಗಳು ಬ್ರಿಟಿಷ್ ಲೂಟಿಕೋರರು ಭಾರತದ ಬಡ ರೈತಾಪಿ ಜನರ ಮೇಲೆ ಎಸಗುತ್ತಿದ್ದ ದೌರ್ಜನ್ಯಗಳ ವಿರುದ್ಧ. ಈ ರೈತ ಹೋರಾಟಗಳಲ್ಲಿ ಪಡೆದ ಭಾಗಶಃ ಯಶಸ್ಸು ಅವರನ್ನು ಭಾರತದ ಒಬ್ಬ ಪ್ರಮುಖ ನಾಯಕರಾಗಿ ಸ್ಥಾಪಿಸಿತು. ತಿಲಕ್ ಯುಗದ ಅಂತ್ಯಕ್ಕೆ ನಾಂದಿ ಹಾಡಿತು.

PC: Central Press/Getty Images

ಬಿಹಾರದ ಚಂಪಾರಣ್ ಪ್ರದೇಶದಲ್ಲಿ, ಮ್ಯಾಂಚೆಸ್ಟರ್ ಜವಳಿ ಕೈಗಾರಿಕೆಗಳಲ್ಲಿ ಬಣ್ಣ ಹಚ್ಚುವುದಕ್ಕೆ ಬೇಕಾದ ನೀಲಿ ಬೆಳೆಯನ್ನು ಬೆಳೆಯುವಂತೆ ಒತ್ತಾಯ ಮಾಡಿ, ನಂತರ ಅದರ ಬೆಲೆಯನ್ನು ಏರುಪೇರು ಮಾಡುವುದು, ಕಂದಾಯವನ್ನು ಒತ್ತಾಯವಾಗಿ ವಸೂಲಿ ಮಾಡುವುದರ ಮೂಲಕ ಶೋಷಿಸುತ್ತಿದ್ದ ಬ್ರಿಟಿಷರು ಮತ್ತವರ ಬಾಲಂಗೋಚಿಗಳ ವಿರುದ್ಧ ಗಾಂಧೀಜಿ ಹೂಡಿದ ಚಳುವಳಿ ಅದು.

ನೀಲಿ ಬೆಳೆಯ ವಿರುದ್ಧ ಚಳುವಳಿಗೊಂದು ದೊಡ್ಡ ಇತಿಹಾಸವೇ ಇತ್ತು. ಬಂಗಾಲ, ಬಿಹಾರ, ಯುಪಿಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದ ಆಹಾರದ ಬೆಳೆಗಳನ್ನು ಕೈಬಿಟ್ಟು ನೀಲಿ ಮರದ ತೋಟಗಳನ್ನು ನೆಡಲು ಒತ್ತಾಯಿಸಲಾಯಿತು. ಆರಂಭದಲ್ಲಿ ಲಾಭಕರ ಬೆಲೆ, ತೋಟ ಮಾಡಲು ಸಾಲ ಇತ್ಯಾದಿಗಳನ್ನು ನೀಡಿ ಉತ್ತೇಜಿಸಲಾಯಿತು. ಆದರೆ ಒಮ್ಮೆ ಈ ಸಾಲ ಪಡೆದವರು ಎಂದೆಂದಿಗೂ ಸಾಲಗಾರರೇ ಆಗಿ ಉಳಿಯುವಂತಹ ದುಬಾರಿ ಬಡ್ಡಿ ಜೊತೆಗೆ, ಅನಕ್ಷರಸ್ಥ ರೈತರಿಗೆ ಲೆಕ್ಕದಲ್ಲಿ ಮೋಸ ಎಸಗಲಾಗುತ್ತಿತ್ತು.

ಇದನ್ನೂ ಓದಿ: ನೆನೆಯಬೇಕಿದೆ ಮಹಾತ್ಮನ ಮಡದಿಯನು…. : ಡಿ.ಉಮಾಪತಿ

ಇದರ ವಿರುದ್ಧ ಸಿಪಾಯಿ ದಂಗೆಯ ನಂತರದ ಕೆಲವೇ ಸಮಯದಲ್ಲಿ ಬಂಗಾಲದ ಆದಿವಾಸಿಗಳು ಮತ್ತಿತರ ರೈತರು ಸ್ಥಳೀಯ ನಾಯಕತ್ವದಲ್ಲಿ ದೊಡ್ಡ ಹೋರಾಟ ಮಾಡಿದರು. ಈ ಹೋರಾಟ ಬಂಗಾಲದ ಹಲವು ಜಿಲ್ಲೆಗಳಿಗೆ ಹಬ್ಬಿತು. ಸೈನ್ಯ ಬಳಸಿ ದೊಡ್ಡ ಹತ್ಯಾಕಾಂಡ ನಡೆಸಿ ಈ ಹೋರಾಟವನ್ನು ಹತ್ತಿಕ್ಕಿದರೂ ಅದು ಜನರಲ್ಲಿ ವ್ಯಾಪಕ ಜಾಗೃತಿಯನ್ನು ಉಂಟುಮಾಡಿತು. ಆಗ ಮೈಕೆಲ್ ಮಧುಸೂದನ ದತ್ತರು ಬರೆದ ನೀಲ ದರ್ಪಣ ಎಂಬ ನಾಟಕ ಬಹಳ ಜನಪ್ರಿಯವಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ನಿಷೇಧಕ್ಕೊಳಗಾಯಿತು.

ಗಾಂಧೀಜಿಯವರು ಇಂತಹ ಹೋರಾಟದ ವಾರಸುದಾರಿಕೆ ವಹಿಸಿಕೊಂಡಂತಾಯಿತು. ಗಾಂಧೀಜಿಯವರ ಚಳುವಳಿ ಚಂಪಾರಣ್‌ಗೆ ಸೀಮಿತವಾದರೂ ವ್ಯಾಪಕ ಜನಪ್ರಿಯತೆ ಪಡೆಯಿತು. ಇದರ ನಂತರ ಗಾಂಧೀಜಿ ಅಹಮದಾಬಾದ್‌ನಲ್ಲಿ ಜವಳಿ ಕೈಗಾರಿಕಾ ಕಾರ್ಮಿಕರ ಮುಷ್ಕರದಲ್ಲಿ ಮಧ್ಯಪ್ರವೇಶ ಮಾಡಿದರು. ಭಾರತದಲ್ಲಿ ಗಾಂಧೀಜಿಯವರ ಮೊದಲ ಉಪವಾಸ ಸತ್ಯಾಗ್ರಹ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಎಂಬುದು ಗಮನಾರ್ಹ.

PC:NYTimes

ಒಂದು ಕಡೆ ರೈತರ ಮೇಲೆ ಮತ್ತೊಂದು ಕಡೆ ಕಾರ್ಮಿಕರ ಮೇಲೆ ಆಳರಸರ ದಬ್ಬಾಳಿಕೆಯ ವಿರುದ್ಧ ಹೋರಾಟಗಳ ಮೂಲಕವೇ ಗಾಂಧೀಜಿ ಭಾರತದ ರಾಜಕೀಯ ನಭಕ್ಕೆ ಕಾಲಿಟ್ಟರು. ಹೀಗೆ ಸ್ವಾತಂತ್ರ್ಯ ಚಳುವಳಿಗೆ ಈ ಎರಡು ಬಹು ಮುಖ್ಯ ವರ್ಗಗಳನ್ನು ಸೆಳೆದರು ಎಂಬುದು ಗಮನಾರ್ಹ. ಚಂಪಾರಣ್ ಹೋರಾಟದಲ್ಲಿಯೇ ಗಾಂಧೀಜಿ ನಾಗರಿಕ ಹಕ್ಕುಗಳನ್ನು ಎತ್ತಿ ಹಿಡಿದು ಬ್ರಿಟಿಷ್ ಸರ್ಕಾರ ವಿಧಿಸಿದ್ದ ನಿಷೇಧವನ್ನು ಧಿಕ್ಕರಿಸಿ ಚಂಪಾರಣ್‌ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡರು. ಭಾರತದಲ್ಲಿ ಮೊದಲ ಬಾರಿಗೆ ಬಂಧನಕ್ಕೊಳಗಾದರು. ಜನ ಪೊಲೀಸ್ ಠಾಣೆಗಳು, ಕೋರ್ಟ್‌ಗೆ ಮುತ್ತಿಗೆ ಹಾಕಿ ಬಿಡಿಸಿಕೊಂಡು ಬಂದರು.

ಇದನ್ನೂ ಓದಿ: ನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ಈ ಎರಡು ಹೋರಾಟಗಳ ಮೂಲಕ ಗಾಂಧೀಜಿ ತಾವು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗ ಮಾಡಿ ರೂಪಿಸಿಕೊಂಡಿದ್ದ ಸತ್ಯಾಗ್ರಹವೆಂದು ಜನಜನಿತವಾದ ಶಾಂತಿಯುತ ಚಳುವಳಿಯ ವಿಧಾನವನ್ನು ಭಾರತದಲ್ಲಿ ಪ್ರಯೋಗಕ್ಕೆ ತಂದರು. ಮತ್ತಷ್ಟು ಉತ್ತಮಗೊಳಿಸಿ ಪರಿಣಾಮಕಾರಿಯಾಗಿಸಿದರು.

ಈ ವಿಧಾನಗಳು ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಗಳ (ಕೆಲವು ಹೋರಾಟಗಳು ಬೇರೆ ವಿಧಾನಗಳನ್ನು ರೂಪಿಸಿಕೊಂಡವು ಎಂಬ ಮಾತು ಬೇರೆ) ಪ್ರಮುಖ ಅಸ್ತ್ರವಾದವು ಎಂಬುದು ಎಲ್ಲರೂ ತಿಳಿದಿರುವ ಸಂಗತಿ. ಸತ್ಯಾಗ್ರಹ ವಿಧಾನವು ಇಡೀ ಜಗತ್ತಿನ ಜನಹೋರಾಟಗಳ ಚರಿತ್ರೆಗೆ ಪ್ರಸಿದ್ಧವಾದ ಕೊಡುಗೆಗಳಾದವು. ಸ್ವಾತಂತ್ರ್ಯಾನಂತರದ ಕಾಲದಲ್ಲಿಯೂ ಕೂಡಾ ವ್ಯಾಪಕವಾಗಿ ಬಳಕೆಯಾಗುತ್ತಿವೆ.

ಸತ್ಯಾಗ್ರಹ ವಿಧಾನ ಇಷ್ಟು ಪ್ರಾಮುಖ್ಯತೆ ಪಡೆಯಲು ಮುಖ್ಯವಾದ ಅಂಶವೆಂದರೆ ದೊಡ್ಡ ಪ್ರಮಾಣದಲ್ಲಿ ಜನ ಸಮುದಾಯಗಳು ಹೋರಾಟಗಳಲ್ಲಿ ಭಾಗವಹಿಸುವಂತೆ ಮಾಡಿದ್ದು. ಬಹಳ ಪ್ರಬಲವಾದ ಮಿಲಿಟರಿ ಹೊಂದಿದ, ದಬ್ಬಾಳಿಕೆ, ಕ್ರೌರ್ಯಗಳನ್ನು ನಿತ್ಯ ಬಳಸುವ ಬಲಶಾಲಿ ಸರ್ಕಾರದ ವಿರುದ್ಧ ಶಸ್ತ್ರಹೀನ ಅಥವಾ ಪ್ರಾಥಮಿಕ ರೂಪದ ಶಸ್ತ್ರಗಳನ್ನು ಮಾತ್ರ ಹೊಂದಿರುವ ಸಾಮಾನ್ಯ ಜನತೆ ಎದುರುಗೊಳ್ಳುವುದಕ್ಕೆ ಮತ್ತು ಅವು ಬೃಹತ್ ಹೋರಾಟಗಳಾಗಿ ಪರಿಣಮಿಸುವುದಕ್ಕೆ ಈ ವಿಧಾನಗಳು ನೆರವಾದವು.

PC: Commons

ಇವು ಮುಂದೆ 1920 ರ ಅಸಹಕಾರ ಚಳುವಳಿಗಳಲ್ಲಿ ಮತ್ತಷ್ಟು ವಿಸ್ತಾರಗೊಂಡವು. ಸುಡು ಸುಡು ಪರದೇಶಿಯರ ವಸ್ತ್ರವ, ತೊಡು ಖಾದಿ ಸಮಸ್ತವಾ ಎಂದು ಜನಪದವೇ ಆಗಿಬಿಟ್ಟ ಪರದೇಶಿ ವಸ್ತುಗಳ ಬಹಿಷ್ಕಾರ, ಕಾಲೇಜುಗಳು, ಕೋರ್ಟ್‌ಗಳ ಬಹಿಷ್ಕಾರ, ಸೀಮಿತ ಪ್ರಮಾಣದಲ್ಲಿ ಮಾತ್ರ ಪ್ರಯೋಗಕ್ಕೆ ಅವಕಾಶ ನೀಡಲ್ಪಟ್ಟ ಕರ ನಿರಾಕರಣೆ, ಜೈಲು ಭರೋ, ಸಾಮೂಹಿಕ ಹರತಾಳ ಇಂತಹವುಗಳು ಸತ್ಯಾಗ್ರಹಕ್ಕೆ ಸೇರಿಸಲ್ಪಟ್ಟ ಹೊಸ ವಿಧಾನಗಳಾದವು.

ಇದನ್ನೂ ಓದಿ: ಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ಇತ್ತೀಚಿನ ರೈತ ಪ್ರತಿರೋಧದ ಸಮಯದಲ್ಲಿ ಈ ವಿಧಾನಗಳು ವ್ಯಾಪಕ ಬಳಕೆಯಾಗುವಾಗ ಗಾಂಧೀಜಿಯವರ ನೆನಪು ಬಾರದಿದ್ದೀತೆ?

ಜೊತೆಗೆ ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ? ತಮ್ಮ ಬದುಕಿಗೆ ಅತ್ಯಗತ್ಯವಾದ ಆಹಾರದ ಬೆಳೆಗಳನ್ನು ಬಿಟ್ಟು ಪರದೇಶಗಳಿಗೆ ಅವಶ್ಯವಾದ ಬೆಳೆಗಳನ್ನು ಬೆಳೆದುದರ ಪರಿಣಾಮವಾಗಿ ಭಾರತದ ಮಿಲಿಯಗಟ್ಟಲೆ ಜನ ಹಸಿವಿನಿಂದ ನರಳಿ ಸತ್ತದ್ದು ನಮ್ಮ ನೆನಪಿಗೆ ಈಗ ಬಾರದೇ ಹೋದರೆ ಹೇಗೆ?

ಹತ್ತಿ ಬಿತ್ತಿ ಬೆಳೆಕೊಂಡೆವು ಹಾಳು

ತಿನ್ನಲು ದೊರೆಯದು ತುಸು ಕಡಿಕಾಳು

ಬಕ್ಕರಿಸುವುದೋ ಹೆಂಟೆಯ ಕೂಳು

ಬತ್ತಿತ್ತು ಅನ್ನ ಹೊತ್ತಿತು ಚಿನ್ನ

ಅನ್ನವೆಲ್ಲವೂ ಆದರೆ ಚಿನ್ನ ತಿನ್ನುವುದೇ ನನ್ನ

ಎಂಬೆಲ್ಲಾ ತುತ್ತಿನ ಚೀಲದ ಸಂಕಷ್ಟಗಳನ್ನು, ಕುರುಡು ಕಾಂಚಾಣದ ಮೆರೆದಾಟವನ್ನು ಮರೆಯುವುದು ಹೇಗೆ?

ಕಾರ್ಮಿಕರ ಮೂಲಭೂತ ಪ್ರಜಾಪ್ರಭುತ್ವ ಹಕ್ಕುಗಳನ್ನು ನಾಶ ಮಾಡುತ್ತಿರುವಾಗ ಗಾಂಧಿ ಅವರು ಕಾರ್ಮಿಕರ ಸಮಸ್ಯೆಗಳಿಗಾಗಿ ಮಾಡಿದ ಇಪ್ಪತ್ತೊಂದು ದಿನಗಳ ಉಪವಾಸವನ್ನು ಮರೆಯಲಾದೀತೆ?

ಜಿ. ಎನ್. ನಾಗರಾಜ್‌

ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್  80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣವಾಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.

ಇದನ್ನೂ ಓದಿ: ’ನಮ್ಮನ್ನ ಕ್ಷಮಿಸಿ’: ಗಾಂಧಿ ಶಿಲ್ಪ ವಿರೂಪ ಘಟನೆಗೆ ಅಮೆರಿಕ ರಾಯಭಾರಿ ಕ್ಷಮೆಯಾಚನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...