Homeಮುಖಪುಟಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? - ಜಿ.ಎನ್‌. ನಾಗರಾಜ್

ಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? – ಜಿ.ಎನ್‌. ನಾಗರಾಜ್

ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ?

- Advertisement -
- Advertisement -

ಭಾರತ ಇಂದು ಎದುರಿಸುತ್ತಿರುವ ಹಲವು ರೀತಿಯ ಸಂಕಟಗಳ ಪರಿಸ್ಥಿತಿಯಲ್ಲಿ ಗಾಂಧಿ ಅವರ ಪ್ರಧಾನ ಕೊಡುಗೆ ಏನೆಂದು ನೆನೆಯುವುದು ಮಾತ್ರವಲ್ಲ, ಅವುಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯಗತ ಮಾಡಬೇಕಾದವುಗಳನ್ನು ಮಾತ್ರ ಈ ಕಿರು ಟಿಪ್ಪಣಿಯಲ್ಲಿ ಪರಿಶೀಲಿಸಬಯಸುತ್ತೇನೆ.

ಕೆಲವೇ ದಿನಗಳ ಹಿಂದೆ ದೇಶಾದ್ಯಂತ ಆರಂಭವಾದ ರೈತ ಹೋರಾಟದ ಮೊದಲ ಸುತ್ತು ಮುಗಿದಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಕೋಟ್ಯಂತರ ರೈತರು, ಕಾರ್ಮಿಕರು ಹಾಗೂ ಇತರ ಅನೇಕ ಜನ ಸಮುದಾಯಗಳು ಚಳುವಳಿಗೆ ಇಳಿದಿದ್ದಾರೆ. ಈ ಚಳುವಳಿ ಗಾಂಧಿಯವರನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಗಾಂಧೀಜಿಯವರು ಭಾರತದಲ್ಲಿ ಮೊದಲು ಕೈಗೊಂಡ ಹೋರಾಟಗಳು ಬ್ರಿಟಿಷ್ ಲೂಟಿಕೋರರು ಭಾರತದ ಬಡ ರೈತಾಪಿ ಜನರ ಮೇಲೆ ಎಸಗುತ್ತಿದ್ದ ದೌರ್ಜನ್ಯಗಳ ವಿರುದ್ಧ. ಈ ರೈತ ಹೋರಾಟಗಳಲ್ಲಿ ಪಡೆದ ಭಾಗಶಃ ಯಶಸ್ಸು ಅವರನ್ನು ಭಾರತದ ಒಬ್ಬ ಪ್ರಮುಖ ನಾಯಕರಾಗಿ ಸ್ಥಾಪಿಸಿತು. ತಿಲಕ್ ಯುಗದ ಅಂತ್ಯಕ್ಕೆ ನಾಂದಿ ಹಾಡಿತು.

PC: Central Press/Getty Images

ಬಿಹಾರದ ಚಂಪಾರಣ್ ಪ್ರದೇಶದಲ್ಲಿ, ಮ್ಯಾಂಚೆಸ್ಟರ್ ಜವಳಿ ಕೈಗಾರಿಕೆಗಳಲ್ಲಿ ಬಣ್ಣ ಹಚ್ಚುವುದಕ್ಕೆ ಬೇಕಾದ ನೀಲಿ ಬೆಳೆಯನ್ನು ಬೆಳೆಯುವಂತೆ ಒತ್ತಾಯ ಮಾಡಿ, ನಂತರ ಅದರ ಬೆಲೆಯನ್ನು ಏರುಪೇರು ಮಾಡುವುದು, ಕಂದಾಯವನ್ನು ಒತ್ತಾಯವಾಗಿ ವಸೂಲಿ ಮಾಡುವುದರ ಮೂಲಕ ಶೋಷಿಸುತ್ತಿದ್ದ ಬ್ರಿಟಿಷರು ಮತ್ತವರ ಬಾಲಂಗೋಚಿಗಳ ವಿರುದ್ಧ ಗಾಂಧೀಜಿ ಹೂಡಿದ ಚಳುವಳಿ ಅದು.

ನೀಲಿ ಬೆಳೆಯ ವಿರುದ್ಧ ಚಳುವಳಿಗೊಂದು ದೊಡ್ಡ ಇತಿಹಾಸವೇ ಇತ್ತು. ಬಂಗಾಲ, ಬಿಹಾರ, ಯುಪಿಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದ ಆಹಾರದ ಬೆಳೆಗಳನ್ನು ಕೈಬಿಟ್ಟು ನೀಲಿ ಮರದ ತೋಟಗಳನ್ನು ನೆಡಲು ಒತ್ತಾಯಿಸಲಾಯಿತು. ಆರಂಭದಲ್ಲಿ ಲಾಭಕರ ಬೆಲೆ, ತೋಟ ಮಾಡಲು ಸಾಲ ಇತ್ಯಾದಿಗಳನ್ನು ನೀಡಿ ಉತ್ತೇಜಿಸಲಾಯಿತು. ಆದರೆ ಒಮ್ಮೆ ಈ ಸಾಲ ಪಡೆದವರು ಎಂದೆಂದಿಗೂ ಸಾಲಗಾರರೇ ಆಗಿ ಉಳಿಯುವಂತಹ ದುಬಾರಿ ಬಡ್ಡಿ ಜೊತೆಗೆ, ಅನಕ್ಷರಸ್ಥ ರೈತರಿಗೆ ಲೆಕ್ಕದಲ್ಲಿ ಮೋಸ ಎಸಗಲಾಗುತ್ತಿತ್ತು.

ಇದನ್ನೂ ಓದಿ: ನೆನೆಯಬೇಕಿದೆ ಮಹಾತ್ಮನ ಮಡದಿಯನು…. : ಡಿ.ಉಮಾಪತಿ

ಇದರ ವಿರುದ್ಧ ಸಿಪಾಯಿ ದಂಗೆಯ ನಂತರದ ಕೆಲವೇ ಸಮಯದಲ್ಲಿ ಬಂಗಾಲದ ಆದಿವಾಸಿಗಳು ಮತ್ತಿತರ ರೈತರು ಸ್ಥಳೀಯ ನಾಯಕತ್ವದಲ್ಲಿ ದೊಡ್ಡ ಹೋರಾಟ ಮಾಡಿದರು. ಈ ಹೋರಾಟ ಬಂಗಾಲದ ಹಲವು ಜಿಲ್ಲೆಗಳಿಗೆ ಹಬ್ಬಿತು. ಸೈನ್ಯ ಬಳಸಿ ದೊಡ್ಡ ಹತ್ಯಾಕಾಂಡ ನಡೆಸಿ ಈ ಹೋರಾಟವನ್ನು ಹತ್ತಿಕ್ಕಿದರೂ ಅದು ಜನರಲ್ಲಿ ವ್ಯಾಪಕ ಜಾಗೃತಿಯನ್ನು ಉಂಟುಮಾಡಿತು. ಆಗ ಮೈಕೆಲ್ ಮಧುಸೂದನ ದತ್ತರು ಬರೆದ ನೀಲ ದರ್ಪಣ ಎಂಬ ನಾಟಕ ಬಹಳ ಜನಪ್ರಿಯವಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ನಿಷೇಧಕ್ಕೊಳಗಾಯಿತು.

ಗಾಂಧೀಜಿಯವರು ಇಂತಹ ಹೋರಾಟದ ವಾರಸುದಾರಿಕೆ ವಹಿಸಿಕೊಂಡಂತಾಯಿತು. ಗಾಂಧೀಜಿಯವರ ಚಳುವಳಿ ಚಂಪಾರಣ್‌ಗೆ ಸೀಮಿತವಾದರೂ ವ್ಯಾಪಕ ಜನಪ್ರಿಯತೆ ಪಡೆಯಿತು. ಇದರ ನಂತರ ಗಾಂಧೀಜಿ ಅಹಮದಾಬಾದ್‌ನಲ್ಲಿ ಜವಳಿ ಕೈಗಾರಿಕಾ ಕಾರ್ಮಿಕರ ಮುಷ್ಕರದಲ್ಲಿ ಮಧ್ಯಪ್ರವೇಶ ಮಾಡಿದರು. ಭಾರತದಲ್ಲಿ ಗಾಂಧೀಜಿಯವರ ಮೊದಲ ಉಪವಾಸ ಸತ್ಯಾಗ್ರಹ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಎಂಬುದು ಗಮನಾರ್ಹ.

PC:NYTimes

ಒಂದು ಕಡೆ ರೈತರ ಮೇಲೆ ಮತ್ತೊಂದು ಕಡೆ ಕಾರ್ಮಿಕರ ಮೇಲೆ ಆಳರಸರ ದಬ್ಬಾಳಿಕೆಯ ವಿರುದ್ಧ ಹೋರಾಟಗಳ ಮೂಲಕವೇ ಗಾಂಧೀಜಿ ಭಾರತದ ರಾಜಕೀಯ ನಭಕ್ಕೆ ಕಾಲಿಟ್ಟರು. ಹೀಗೆ ಸ್ವಾತಂತ್ರ್ಯ ಚಳುವಳಿಗೆ ಈ ಎರಡು ಬಹು ಮುಖ್ಯ ವರ್ಗಗಳನ್ನು ಸೆಳೆದರು ಎಂಬುದು ಗಮನಾರ್ಹ. ಚಂಪಾರಣ್ ಹೋರಾಟದಲ್ಲಿಯೇ ಗಾಂಧೀಜಿ ನಾಗರಿಕ ಹಕ್ಕುಗಳನ್ನು ಎತ್ತಿ ಹಿಡಿದು ಬ್ರಿಟಿಷ್ ಸರ್ಕಾರ ವಿಧಿಸಿದ್ದ ನಿಷೇಧವನ್ನು ಧಿಕ್ಕರಿಸಿ ಚಂಪಾರಣ್‌ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡರು. ಭಾರತದಲ್ಲಿ ಮೊದಲ ಬಾರಿಗೆ ಬಂಧನಕ್ಕೊಳಗಾದರು. ಜನ ಪೊಲೀಸ್ ಠಾಣೆಗಳು, ಕೋರ್ಟ್‌ಗೆ ಮುತ್ತಿಗೆ ಹಾಕಿ ಬಿಡಿಸಿಕೊಂಡು ಬಂದರು.

ಇದನ್ನೂ ಓದಿ: ನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ಈ ಎರಡು ಹೋರಾಟಗಳ ಮೂಲಕ ಗಾಂಧೀಜಿ ತಾವು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗ ಮಾಡಿ ರೂಪಿಸಿಕೊಂಡಿದ್ದ ಸತ್ಯಾಗ್ರಹವೆಂದು ಜನಜನಿತವಾದ ಶಾಂತಿಯುತ ಚಳುವಳಿಯ ವಿಧಾನವನ್ನು ಭಾರತದಲ್ಲಿ ಪ್ರಯೋಗಕ್ಕೆ ತಂದರು. ಮತ್ತಷ್ಟು ಉತ್ತಮಗೊಳಿಸಿ ಪರಿಣಾಮಕಾರಿಯಾಗಿಸಿದರು.

ಈ ವಿಧಾನಗಳು ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಗಳ (ಕೆಲವು ಹೋರಾಟಗಳು ಬೇರೆ ವಿಧಾನಗಳನ್ನು ರೂಪಿಸಿಕೊಂಡವು ಎಂಬ ಮಾತು ಬೇರೆ) ಪ್ರಮುಖ ಅಸ್ತ್ರವಾದವು ಎಂಬುದು ಎಲ್ಲರೂ ತಿಳಿದಿರುವ ಸಂಗತಿ. ಸತ್ಯಾಗ್ರಹ ವಿಧಾನವು ಇಡೀ ಜಗತ್ತಿನ ಜನಹೋರಾಟಗಳ ಚರಿತ್ರೆಗೆ ಪ್ರಸಿದ್ಧವಾದ ಕೊಡುಗೆಗಳಾದವು. ಸ್ವಾತಂತ್ರ್ಯಾನಂತರದ ಕಾಲದಲ್ಲಿಯೂ ಕೂಡಾ ವ್ಯಾಪಕವಾಗಿ ಬಳಕೆಯಾಗುತ್ತಿವೆ.

ಸತ್ಯಾಗ್ರಹ ವಿಧಾನ ಇಷ್ಟು ಪ್ರಾಮುಖ್ಯತೆ ಪಡೆಯಲು ಮುಖ್ಯವಾದ ಅಂಶವೆಂದರೆ ದೊಡ್ಡ ಪ್ರಮಾಣದಲ್ಲಿ ಜನ ಸಮುದಾಯಗಳು ಹೋರಾಟಗಳಲ್ಲಿ ಭಾಗವಹಿಸುವಂತೆ ಮಾಡಿದ್ದು. ಬಹಳ ಪ್ರಬಲವಾದ ಮಿಲಿಟರಿ ಹೊಂದಿದ, ದಬ್ಬಾಳಿಕೆ, ಕ್ರೌರ್ಯಗಳನ್ನು ನಿತ್ಯ ಬಳಸುವ ಬಲಶಾಲಿ ಸರ್ಕಾರದ ವಿರುದ್ಧ ಶಸ್ತ್ರಹೀನ ಅಥವಾ ಪ್ರಾಥಮಿಕ ರೂಪದ ಶಸ್ತ್ರಗಳನ್ನು ಮಾತ್ರ ಹೊಂದಿರುವ ಸಾಮಾನ್ಯ ಜನತೆ ಎದುರುಗೊಳ್ಳುವುದಕ್ಕೆ ಮತ್ತು ಅವು ಬೃಹತ್ ಹೋರಾಟಗಳಾಗಿ ಪರಿಣಮಿಸುವುದಕ್ಕೆ ಈ ವಿಧಾನಗಳು ನೆರವಾದವು.

PC: Commons

ಇವು ಮುಂದೆ 1920 ರ ಅಸಹಕಾರ ಚಳುವಳಿಗಳಲ್ಲಿ ಮತ್ತಷ್ಟು ವಿಸ್ತಾರಗೊಂಡವು. ಸುಡು ಸುಡು ಪರದೇಶಿಯರ ವಸ್ತ್ರವ, ತೊಡು ಖಾದಿ ಸಮಸ್ತವಾ ಎಂದು ಜನಪದವೇ ಆಗಿಬಿಟ್ಟ ಪರದೇಶಿ ವಸ್ತುಗಳ ಬಹಿಷ್ಕಾರ, ಕಾಲೇಜುಗಳು, ಕೋರ್ಟ್‌ಗಳ ಬಹಿಷ್ಕಾರ, ಸೀಮಿತ ಪ್ರಮಾಣದಲ್ಲಿ ಮಾತ್ರ ಪ್ರಯೋಗಕ್ಕೆ ಅವಕಾಶ ನೀಡಲ್ಪಟ್ಟ ಕರ ನಿರಾಕರಣೆ, ಜೈಲು ಭರೋ, ಸಾಮೂಹಿಕ ಹರತಾಳ ಇಂತಹವುಗಳು ಸತ್ಯಾಗ್ರಹಕ್ಕೆ ಸೇರಿಸಲ್ಪಟ್ಟ ಹೊಸ ವಿಧಾನಗಳಾದವು.

ಇದನ್ನೂ ಓದಿ: ಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ಇತ್ತೀಚಿನ ರೈತ ಪ್ರತಿರೋಧದ ಸಮಯದಲ್ಲಿ ಈ ವಿಧಾನಗಳು ವ್ಯಾಪಕ ಬಳಕೆಯಾಗುವಾಗ ಗಾಂಧೀಜಿಯವರ ನೆನಪು ಬಾರದಿದ್ದೀತೆ?

ಜೊತೆಗೆ ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ? ತಮ್ಮ ಬದುಕಿಗೆ ಅತ್ಯಗತ್ಯವಾದ ಆಹಾರದ ಬೆಳೆಗಳನ್ನು ಬಿಟ್ಟು ಪರದೇಶಗಳಿಗೆ ಅವಶ್ಯವಾದ ಬೆಳೆಗಳನ್ನು ಬೆಳೆದುದರ ಪರಿಣಾಮವಾಗಿ ಭಾರತದ ಮಿಲಿಯಗಟ್ಟಲೆ ಜನ ಹಸಿವಿನಿಂದ ನರಳಿ ಸತ್ತದ್ದು ನಮ್ಮ ನೆನಪಿಗೆ ಈಗ ಬಾರದೇ ಹೋದರೆ ಹೇಗೆ?

ಹತ್ತಿ ಬಿತ್ತಿ ಬೆಳೆಕೊಂಡೆವು ಹಾಳು

ತಿನ್ನಲು ದೊರೆಯದು ತುಸು ಕಡಿಕಾಳು

ಬಕ್ಕರಿಸುವುದೋ ಹೆಂಟೆಯ ಕೂಳು

ಬತ್ತಿತ್ತು ಅನ್ನ ಹೊತ್ತಿತು ಚಿನ್ನ

ಅನ್ನವೆಲ್ಲವೂ ಆದರೆ ಚಿನ್ನ ತಿನ್ನುವುದೇ ನನ್ನ

ಎಂಬೆಲ್ಲಾ ತುತ್ತಿನ ಚೀಲದ ಸಂಕಷ್ಟಗಳನ್ನು, ಕುರುಡು ಕಾಂಚಾಣದ ಮೆರೆದಾಟವನ್ನು ಮರೆಯುವುದು ಹೇಗೆ?

ಕಾರ್ಮಿಕರ ಮೂಲಭೂತ ಪ್ರಜಾಪ್ರಭುತ್ವ ಹಕ್ಕುಗಳನ್ನು ನಾಶ ಮಾಡುತ್ತಿರುವಾಗ ಗಾಂಧಿ ಅವರು ಕಾರ್ಮಿಕರ ಸಮಸ್ಯೆಗಳಿಗಾಗಿ ಮಾಡಿದ ಇಪ್ಪತ್ತೊಂದು ದಿನಗಳ ಉಪವಾಸವನ್ನು ಮರೆಯಲಾದೀತೆ?

ಜಿ. ಎನ್. ನಾಗರಾಜ್‌

ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್  80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣವಾಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.

ಇದನ್ನೂ ಓದಿ: ’ನಮ್ಮನ್ನ ಕ್ಷಮಿಸಿ’: ಗಾಂಧಿ ಶಿಲ್ಪ ವಿರೂಪ ಘಟನೆಗೆ ಅಮೆರಿಕ ರಾಯಭಾರಿ ಕ್ಷಮೆಯಾಚನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...