Homeಮುಖಪುಟಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? - ಜಿ.ಎನ್‌. ನಾಗರಾಜ್

ಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? – ಜಿ.ಎನ್‌. ನಾಗರಾಜ್

ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ?

- Advertisement -
- Advertisement -

ಭಾರತ ಇಂದು ಎದುರಿಸುತ್ತಿರುವ ಹಲವು ರೀತಿಯ ಸಂಕಟಗಳ ಪರಿಸ್ಥಿತಿಯಲ್ಲಿ ಗಾಂಧಿ ಅವರ ಪ್ರಧಾನ ಕೊಡುಗೆ ಏನೆಂದು ನೆನೆಯುವುದು ಮಾತ್ರವಲ್ಲ, ಅವುಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯಗತ ಮಾಡಬೇಕಾದವುಗಳನ್ನು ಮಾತ್ರ ಈ ಕಿರು ಟಿಪ್ಪಣಿಯಲ್ಲಿ ಪರಿಶೀಲಿಸಬಯಸುತ್ತೇನೆ.

ಕೆಲವೇ ದಿನಗಳ ಹಿಂದೆ ದೇಶಾದ್ಯಂತ ಆರಂಭವಾದ ರೈತ ಹೋರಾಟದ ಮೊದಲ ಸುತ್ತು ಮುಗಿದಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಕೋಟ್ಯಂತರ ರೈತರು, ಕಾರ್ಮಿಕರು ಹಾಗೂ ಇತರ ಅನೇಕ ಜನ ಸಮುದಾಯಗಳು ಚಳುವಳಿಗೆ ಇಳಿದಿದ್ದಾರೆ. ಈ ಚಳುವಳಿ ಗಾಂಧಿಯವರನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಗಾಂಧೀಜಿಯವರು ಭಾರತದಲ್ಲಿ ಮೊದಲು ಕೈಗೊಂಡ ಹೋರಾಟಗಳು ಬ್ರಿಟಿಷ್ ಲೂಟಿಕೋರರು ಭಾರತದ ಬಡ ರೈತಾಪಿ ಜನರ ಮೇಲೆ ಎಸಗುತ್ತಿದ್ದ ದೌರ್ಜನ್ಯಗಳ ವಿರುದ್ಧ. ಈ ರೈತ ಹೋರಾಟಗಳಲ್ಲಿ ಪಡೆದ ಭಾಗಶಃ ಯಶಸ್ಸು ಅವರನ್ನು ಭಾರತದ ಒಬ್ಬ ಪ್ರಮುಖ ನಾಯಕರಾಗಿ ಸ್ಥಾಪಿಸಿತು. ತಿಲಕ್ ಯುಗದ ಅಂತ್ಯಕ್ಕೆ ನಾಂದಿ ಹಾಡಿತು.

PC: Central Press/Getty Images

ಬಿಹಾರದ ಚಂಪಾರಣ್ ಪ್ರದೇಶದಲ್ಲಿ, ಮ್ಯಾಂಚೆಸ್ಟರ್ ಜವಳಿ ಕೈಗಾರಿಕೆಗಳಲ್ಲಿ ಬಣ್ಣ ಹಚ್ಚುವುದಕ್ಕೆ ಬೇಕಾದ ನೀಲಿ ಬೆಳೆಯನ್ನು ಬೆಳೆಯುವಂತೆ ಒತ್ತಾಯ ಮಾಡಿ, ನಂತರ ಅದರ ಬೆಲೆಯನ್ನು ಏರುಪೇರು ಮಾಡುವುದು, ಕಂದಾಯವನ್ನು ಒತ್ತಾಯವಾಗಿ ವಸೂಲಿ ಮಾಡುವುದರ ಮೂಲಕ ಶೋಷಿಸುತ್ತಿದ್ದ ಬ್ರಿಟಿಷರು ಮತ್ತವರ ಬಾಲಂಗೋಚಿಗಳ ವಿರುದ್ಧ ಗಾಂಧೀಜಿ ಹೂಡಿದ ಚಳುವಳಿ ಅದು.

ನೀಲಿ ಬೆಳೆಯ ವಿರುದ್ಧ ಚಳುವಳಿಗೊಂದು ದೊಡ್ಡ ಇತಿಹಾಸವೇ ಇತ್ತು. ಬಂಗಾಲ, ಬಿಹಾರ, ಯುಪಿಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದ ಆಹಾರದ ಬೆಳೆಗಳನ್ನು ಕೈಬಿಟ್ಟು ನೀಲಿ ಮರದ ತೋಟಗಳನ್ನು ನೆಡಲು ಒತ್ತಾಯಿಸಲಾಯಿತು. ಆರಂಭದಲ್ಲಿ ಲಾಭಕರ ಬೆಲೆ, ತೋಟ ಮಾಡಲು ಸಾಲ ಇತ್ಯಾದಿಗಳನ್ನು ನೀಡಿ ಉತ್ತೇಜಿಸಲಾಯಿತು. ಆದರೆ ಒಮ್ಮೆ ಈ ಸಾಲ ಪಡೆದವರು ಎಂದೆಂದಿಗೂ ಸಾಲಗಾರರೇ ಆಗಿ ಉಳಿಯುವಂತಹ ದುಬಾರಿ ಬಡ್ಡಿ ಜೊತೆಗೆ, ಅನಕ್ಷರಸ್ಥ ರೈತರಿಗೆ ಲೆಕ್ಕದಲ್ಲಿ ಮೋಸ ಎಸಗಲಾಗುತ್ತಿತ್ತು.

ಇದನ್ನೂ ಓದಿ: ನೆನೆಯಬೇಕಿದೆ ಮಹಾತ್ಮನ ಮಡದಿಯನು…. : ಡಿ.ಉಮಾಪತಿ

ಇದರ ವಿರುದ್ಧ ಸಿಪಾಯಿ ದಂಗೆಯ ನಂತರದ ಕೆಲವೇ ಸಮಯದಲ್ಲಿ ಬಂಗಾಲದ ಆದಿವಾಸಿಗಳು ಮತ್ತಿತರ ರೈತರು ಸ್ಥಳೀಯ ನಾಯಕತ್ವದಲ್ಲಿ ದೊಡ್ಡ ಹೋರಾಟ ಮಾಡಿದರು. ಈ ಹೋರಾಟ ಬಂಗಾಲದ ಹಲವು ಜಿಲ್ಲೆಗಳಿಗೆ ಹಬ್ಬಿತು. ಸೈನ್ಯ ಬಳಸಿ ದೊಡ್ಡ ಹತ್ಯಾಕಾಂಡ ನಡೆಸಿ ಈ ಹೋರಾಟವನ್ನು ಹತ್ತಿಕ್ಕಿದರೂ ಅದು ಜನರಲ್ಲಿ ವ್ಯಾಪಕ ಜಾಗೃತಿಯನ್ನು ಉಂಟುಮಾಡಿತು. ಆಗ ಮೈಕೆಲ್ ಮಧುಸೂದನ ದತ್ತರು ಬರೆದ ನೀಲ ದರ್ಪಣ ಎಂಬ ನಾಟಕ ಬಹಳ ಜನಪ್ರಿಯವಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ನಿಷೇಧಕ್ಕೊಳಗಾಯಿತು.

ಗಾಂಧೀಜಿಯವರು ಇಂತಹ ಹೋರಾಟದ ವಾರಸುದಾರಿಕೆ ವಹಿಸಿಕೊಂಡಂತಾಯಿತು. ಗಾಂಧೀಜಿಯವರ ಚಳುವಳಿ ಚಂಪಾರಣ್‌ಗೆ ಸೀಮಿತವಾದರೂ ವ್ಯಾಪಕ ಜನಪ್ರಿಯತೆ ಪಡೆಯಿತು. ಇದರ ನಂತರ ಗಾಂಧೀಜಿ ಅಹಮದಾಬಾದ್‌ನಲ್ಲಿ ಜವಳಿ ಕೈಗಾರಿಕಾ ಕಾರ್ಮಿಕರ ಮುಷ್ಕರದಲ್ಲಿ ಮಧ್ಯಪ್ರವೇಶ ಮಾಡಿದರು. ಭಾರತದಲ್ಲಿ ಗಾಂಧೀಜಿಯವರ ಮೊದಲ ಉಪವಾಸ ಸತ್ಯಾಗ್ರಹ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಎಂಬುದು ಗಮನಾರ್ಹ.

PC:NYTimes

ಒಂದು ಕಡೆ ರೈತರ ಮೇಲೆ ಮತ್ತೊಂದು ಕಡೆ ಕಾರ್ಮಿಕರ ಮೇಲೆ ಆಳರಸರ ದಬ್ಬಾಳಿಕೆಯ ವಿರುದ್ಧ ಹೋರಾಟಗಳ ಮೂಲಕವೇ ಗಾಂಧೀಜಿ ಭಾರತದ ರಾಜಕೀಯ ನಭಕ್ಕೆ ಕಾಲಿಟ್ಟರು. ಹೀಗೆ ಸ್ವಾತಂತ್ರ್ಯ ಚಳುವಳಿಗೆ ಈ ಎರಡು ಬಹು ಮುಖ್ಯ ವರ್ಗಗಳನ್ನು ಸೆಳೆದರು ಎಂಬುದು ಗಮನಾರ್ಹ. ಚಂಪಾರಣ್ ಹೋರಾಟದಲ್ಲಿಯೇ ಗಾಂಧೀಜಿ ನಾಗರಿಕ ಹಕ್ಕುಗಳನ್ನು ಎತ್ತಿ ಹಿಡಿದು ಬ್ರಿಟಿಷ್ ಸರ್ಕಾರ ವಿಧಿಸಿದ್ದ ನಿಷೇಧವನ್ನು ಧಿಕ್ಕರಿಸಿ ಚಂಪಾರಣ್‌ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡರು. ಭಾರತದಲ್ಲಿ ಮೊದಲ ಬಾರಿಗೆ ಬಂಧನಕ್ಕೊಳಗಾದರು. ಜನ ಪೊಲೀಸ್ ಠಾಣೆಗಳು, ಕೋರ್ಟ್‌ಗೆ ಮುತ್ತಿಗೆ ಹಾಕಿ ಬಿಡಿಸಿಕೊಂಡು ಬಂದರು.

ಇದನ್ನೂ ಓದಿ: ನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ಈ ಎರಡು ಹೋರಾಟಗಳ ಮೂಲಕ ಗಾಂಧೀಜಿ ತಾವು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗ ಮಾಡಿ ರೂಪಿಸಿಕೊಂಡಿದ್ದ ಸತ್ಯಾಗ್ರಹವೆಂದು ಜನಜನಿತವಾದ ಶಾಂತಿಯುತ ಚಳುವಳಿಯ ವಿಧಾನವನ್ನು ಭಾರತದಲ್ಲಿ ಪ್ರಯೋಗಕ್ಕೆ ತಂದರು. ಮತ್ತಷ್ಟು ಉತ್ತಮಗೊಳಿಸಿ ಪರಿಣಾಮಕಾರಿಯಾಗಿಸಿದರು.

ಈ ವಿಧಾನಗಳು ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಗಳ (ಕೆಲವು ಹೋರಾಟಗಳು ಬೇರೆ ವಿಧಾನಗಳನ್ನು ರೂಪಿಸಿಕೊಂಡವು ಎಂಬ ಮಾತು ಬೇರೆ) ಪ್ರಮುಖ ಅಸ್ತ್ರವಾದವು ಎಂಬುದು ಎಲ್ಲರೂ ತಿಳಿದಿರುವ ಸಂಗತಿ. ಸತ್ಯಾಗ್ರಹ ವಿಧಾನವು ಇಡೀ ಜಗತ್ತಿನ ಜನಹೋರಾಟಗಳ ಚರಿತ್ರೆಗೆ ಪ್ರಸಿದ್ಧವಾದ ಕೊಡುಗೆಗಳಾದವು. ಸ್ವಾತಂತ್ರ್ಯಾನಂತರದ ಕಾಲದಲ್ಲಿಯೂ ಕೂಡಾ ವ್ಯಾಪಕವಾಗಿ ಬಳಕೆಯಾಗುತ್ತಿವೆ.

ಸತ್ಯಾಗ್ರಹ ವಿಧಾನ ಇಷ್ಟು ಪ್ರಾಮುಖ್ಯತೆ ಪಡೆಯಲು ಮುಖ್ಯವಾದ ಅಂಶವೆಂದರೆ ದೊಡ್ಡ ಪ್ರಮಾಣದಲ್ಲಿ ಜನ ಸಮುದಾಯಗಳು ಹೋರಾಟಗಳಲ್ಲಿ ಭಾಗವಹಿಸುವಂತೆ ಮಾಡಿದ್ದು. ಬಹಳ ಪ್ರಬಲವಾದ ಮಿಲಿಟರಿ ಹೊಂದಿದ, ದಬ್ಬಾಳಿಕೆ, ಕ್ರೌರ್ಯಗಳನ್ನು ನಿತ್ಯ ಬಳಸುವ ಬಲಶಾಲಿ ಸರ್ಕಾರದ ವಿರುದ್ಧ ಶಸ್ತ್ರಹೀನ ಅಥವಾ ಪ್ರಾಥಮಿಕ ರೂಪದ ಶಸ್ತ್ರಗಳನ್ನು ಮಾತ್ರ ಹೊಂದಿರುವ ಸಾಮಾನ್ಯ ಜನತೆ ಎದುರುಗೊಳ್ಳುವುದಕ್ಕೆ ಮತ್ತು ಅವು ಬೃಹತ್ ಹೋರಾಟಗಳಾಗಿ ಪರಿಣಮಿಸುವುದಕ್ಕೆ ಈ ವಿಧಾನಗಳು ನೆರವಾದವು.

PC: Commons

ಇವು ಮುಂದೆ 1920 ರ ಅಸಹಕಾರ ಚಳುವಳಿಗಳಲ್ಲಿ ಮತ್ತಷ್ಟು ವಿಸ್ತಾರಗೊಂಡವು. ಸುಡು ಸುಡು ಪರದೇಶಿಯರ ವಸ್ತ್ರವ, ತೊಡು ಖಾದಿ ಸಮಸ್ತವಾ ಎಂದು ಜನಪದವೇ ಆಗಿಬಿಟ್ಟ ಪರದೇಶಿ ವಸ್ತುಗಳ ಬಹಿಷ್ಕಾರ, ಕಾಲೇಜುಗಳು, ಕೋರ್ಟ್‌ಗಳ ಬಹಿಷ್ಕಾರ, ಸೀಮಿತ ಪ್ರಮಾಣದಲ್ಲಿ ಮಾತ್ರ ಪ್ರಯೋಗಕ್ಕೆ ಅವಕಾಶ ನೀಡಲ್ಪಟ್ಟ ಕರ ನಿರಾಕರಣೆ, ಜೈಲು ಭರೋ, ಸಾಮೂಹಿಕ ಹರತಾಳ ಇಂತಹವುಗಳು ಸತ್ಯಾಗ್ರಹಕ್ಕೆ ಸೇರಿಸಲ್ಪಟ್ಟ ಹೊಸ ವಿಧಾನಗಳಾದವು.

ಇದನ್ನೂ ಓದಿ: ಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ಇತ್ತೀಚಿನ ರೈತ ಪ್ರತಿರೋಧದ ಸಮಯದಲ್ಲಿ ಈ ವಿಧಾನಗಳು ವ್ಯಾಪಕ ಬಳಕೆಯಾಗುವಾಗ ಗಾಂಧೀಜಿಯವರ ನೆನಪು ಬಾರದಿದ್ದೀತೆ?

ಜೊತೆಗೆ ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ? ತಮ್ಮ ಬದುಕಿಗೆ ಅತ್ಯಗತ್ಯವಾದ ಆಹಾರದ ಬೆಳೆಗಳನ್ನು ಬಿಟ್ಟು ಪರದೇಶಗಳಿಗೆ ಅವಶ್ಯವಾದ ಬೆಳೆಗಳನ್ನು ಬೆಳೆದುದರ ಪರಿಣಾಮವಾಗಿ ಭಾರತದ ಮಿಲಿಯಗಟ್ಟಲೆ ಜನ ಹಸಿವಿನಿಂದ ನರಳಿ ಸತ್ತದ್ದು ನಮ್ಮ ನೆನಪಿಗೆ ಈಗ ಬಾರದೇ ಹೋದರೆ ಹೇಗೆ?

ಹತ್ತಿ ಬಿತ್ತಿ ಬೆಳೆಕೊಂಡೆವು ಹಾಳು

ತಿನ್ನಲು ದೊರೆಯದು ತುಸು ಕಡಿಕಾಳು

ಬಕ್ಕರಿಸುವುದೋ ಹೆಂಟೆಯ ಕೂಳು

ಬತ್ತಿತ್ತು ಅನ್ನ ಹೊತ್ತಿತು ಚಿನ್ನ

ಅನ್ನವೆಲ್ಲವೂ ಆದರೆ ಚಿನ್ನ ತಿನ್ನುವುದೇ ನನ್ನ

ಎಂಬೆಲ್ಲಾ ತುತ್ತಿನ ಚೀಲದ ಸಂಕಷ್ಟಗಳನ್ನು, ಕುರುಡು ಕಾಂಚಾಣದ ಮೆರೆದಾಟವನ್ನು ಮರೆಯುವುದು ಹೇಗೆ?

ಕಾರ್ಮಿಕರ ಮೂಲಭೂತ ಪ್ರಜಾಪ್ರಭುತ್ವ ಹಕ್ಕುಗಳನ್ನು ನಾಶ ಮಾಡುತ್ತಿರುವಾಗ ಗಾಂಧಿ ಅವರು ಕಾರ್ಮಿಕರ ಸಮಸ್ಯೆಗಳಿಗಾಗಿ ಮಾಡಿದ ಇಪ್ಪತ್ತೊಂದು ದಿನಗಳ ಉಪವಾಸವನ್ನು ಮರೆಯಲಾದೀತೆ?

ಜಿ. ಎನ್. ನಾಗರಾಜ್‌

ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್  80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣವಾಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.

ಇದನ್ನೂ ಓದಿ: ’ನಮ್ಮನ್ನ ಕ್ಷಮಿಸಿ’: ಗಾಂಧಿ ಶಿಲ್ಪ ವಿರೂಪ ಘಟನೆಗೆ ಅಮೆರಿಕ ರಾಯಭಾರಿ ಕ್ಷಮೆಯಾಚನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....