Homeಮುಖಪುಟರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ಒರಿಯಾನ್ ನಕ್ಷತ್ರ ಪುಂಜದ ಚಿತ್ರದಲ್ಲಿ ಗುರುತಿಸಿರುವ ಭಾಗವನ್ನು ಚಂದ್ರನಿಲ್ಲದ ರಾತ್ರಿಯಲ್ಲಿ ಬರಿಗಣ್ಣಿನಲ್ಲಿ ನೋಡಿದರೆ, ನಕ್ಷತ್ರಗಳು ಹುಟ್ಟುವ ಪ್ರದೇಶವಾದ ಸುಂದರವಾದ ನೆಬುಲ್ಲಾ ಕಾಣುತ್ತದೆ.

- Advertisement -
- Advertisement -

(ಆಕಾಶ ಕಾಯಗಳು ವೀಕ್ಷಣೆ ಮತ್ತು ವಿವರಣೆ: ಡಿಸೆಂಬರ್ ೦೧-೦೮)

ಭಾರತದಲ್ಲಿ ಮಳೆಗಾಲದ ನಂತರ ಬರುವ ಚಳಿಗಾಲದಲ್ಲಿ, ಆಕಾಶವು ಮೋಡಗಳಿಲ್ಲದೆ ಸ್ಪಷ್ಟವಾಗಿ ಕಾಣುತ್ತದೆ (ಸೈಕ್ಲೋನ್ ಇಲ್ಲದಿದ್ದರೆ). ಹಾಗಾಗಿ, ಅಕ್ಟೋಬರ್ ತಿಂಗಳಿನಿಂದ ಮುಂದಿನ ಮಾರ್ಚ್ ಮತ್ತು ಏಪ್ರಿಲ್‌ವರೆಗೂ ಆಕಾಶ ವೀಕ್ಷಣೆಗೆ ಸದವಕಾಶ. ಡಿಸೆಂಬರ್‌ನ ಕೊರೆಯುವ ಚಳಿಯಲ್ಲಂತೂ ಬಿಸಿಬಿಸಿ ತಿನಿಸುಗಳನ್ನು ತಿನ್ನುತ್ತ ಆಕಾಶ ವೀಕ್ಷಣೆ ಮಾಡುವುದೇ ಒಂದು ವಿಶಿಷ್ಟವಾದ ಅನುಭವ. ಕಳೆದ ವಾರ, ಆಗಸದಲ್ಲಿ ಕಾಣುವ ಪ್ರಮುಖವಾದ ಗ್ರಹಗಳ ಸ್ಥಾನ ಮತ್ತು ಚಂದ್ರನ ಬಿಂಬಾವಸ್ಥೆಯ ಬಗ್ಗೆ ತಿಳಿದೆವು. ಈ ವಾರ ವೈಶಿಷ್ಟತೆಗಳೇನು?

1. ಗ್ರಹಗಳು: ಗುರು, ಶನಿ, ಶುಕ್ರ ಮತ್ತು ಮಂಗಳ

ಕಳೆದ ವಾರ ಈ ಗ್ರಹಗಳ ಸ್ಥಾನಗಳನ್ನು ಗಮನಿಸಿದ್ದರೆ, ಈ ವಾರ ಈ ಗ್ರಹಗಳನ್ನು ಆಗಸದಲ್ಲಿ ಹುಡುಕುವುದಕ್ಕೆ ಬಹಳ ಕಷ್ಟವೇನಾಗುವುದಿಲ್ಲ. ಏಕೆಂದರೆ, ಗ್ರಹಗಳ ನೈಜ ಚಲನೆಗಳು ಬಹಳ ನಿಧಾನ. ಹಾಗಾಗಿ ಅದೇ ಸ್ಥಾನದಲ್ಲೆ, ಅಥವಾ ಸ್ವಲ್ಪ ಆಸುಪಾಸಿನಲ್ಲೇ ಈ ಗ್ರಹಗಳನ್ನು ನಾವು ನೋಡಬಹುದು. ಸೂರ್ಯ ಮುಳುಗಿದ ನಂತರ, ದಿಗಂತದಲ್ಲಿ ಕಾಣುವ ಪ್ರಕಾಶಮಾನವಾದ ಜೋಡಿ ಚುಕ್ಕಿಗಳು ಶನಿ ಮತ್ತು ಗುರುಗ್ರಹ ಮತ್ತು ಇವೆರಡರಲ್ಲಿ ಹೆಚ್ಚು ಪ್ರಕಾಶಮಾನವಾಗಿರುವುದು ಗುರುಗ್ರಹ. ಹಿಂದಿನ ವಾರ ಈ ಜೋಡಿ ಗ್ರಹಗಳ ವೀಕ್ಷಣೆ ಮಾಡಿದ್ದರೆ, ಗ್ರಹಗಳ ನಡುವೆ ಇರುವ ಅಂತರ ಕಡಿಮೆಯಾಗುತ್ತಿರುವುದನ್ನು ನೀವು ಗಮನಿಸಬಹುದು. ಈ ಅಂತರ ಹೀಗೆ ಕಡಿಮೆಯಾಗುತ್ತಾ, ಡಿಸೆಂಬರ್ 21ರ ರಾತ್ರಿಯಂದು ಈ ಎರಡೂ ಗ್ರಹಗಳು ಆಗಸದಲ್ಲಿ ಒಂದೇ ಚುಕ್ಕಿಯಂತೆ ಭಾಸವಾಗುವಷ್ಟು ಅಂತರಕ್ಕೆ ಬರಲಿವೆ! ನಿಮ್ಮ ಬಳಿ ಇರುವ ಕ್ಯಾಮರಾ ಮೂಲಕ, ಪ್ರತಿ ದಿನ ಈ ಜೋಡಿ ಗ್ರಹಗಳ ಚಿತ್ರಗಳನ್ನು ತೆಗೆದು ಅಂತರವನ್ನು ದಿನದಿಂದ ದಿನಕ್ಕೆ ಹೋಲಿಕೆ ಮಾಡಬಹುದು. ಗುರು ಮತ್ತು ಶನಿ ಗ್ರಹಗಳು ಸೂರ್ಯನ ಸುತ್ತ ಪ್ರತ್ಯೇಕವಾದ ಕಕ್ಷೆಯಲ್ಲಿ ಸುತ್ತುತ್ತವೆ. ಈ ಕಕ್ಷೆಗಳ ನಡುವಿನ ಅಂತರ ಸುಮಾರು 64 ಕೋಟಿ ಕಿಲೋಮೀಟರ್. ಆದರೂ, ಈ ಗ್ರಹಗಳು ಆಗಸದಲ್ಲಿ ಒಂದೇ ದಿಕ್ಕಿನಲ್ಲಿ ಕಾಣುತ್ತಿರುವದರಿಂದ, ಅಕ್ಕಪಕ್ಕದಲ್ಲಿ ಇರುವಂತೆ ಕಾಣುತ್ತಿವೆ. ವಾಸ್ತವದಲ್ಲಿ ಆ ಎರಡು ಗ್ರಹಗಳು ಊಹೆಗೂ ನಿಲುಕದಷ್ಟು ದೂರದಲ್ಲಿವೆ.

ಸೂರ್ಯ ಮುಳುಗಿದ ನಂತರ ಗುರು ಮತ್ತು ಶನಿ ಗ್ರಹಗಳನ್ನು ನೋಡಿಕೊಂಡು, ನೆತ್ತಿಯ ಆಸುಪಾಸಿನಲ್ಲಿ ಕಣ್ಣಾಯಿಸಿದರೆ, ಕೆಂಪಾಗಿ ಕಾಣುವ ಗ್ರಹವೇ ಮಂಗಳ ಗ್ರಹ. ಇದಲ್ಲದೆ, ಮುಂಜಾನೆ ಸೂರ್ಯ ಉದಯಿಸುವುದಕ್ಕೆ ಮುನ್ನ ಪ್ರಕಾಶಮಾನವಾಗಿ ಕಾಣುವ ಶುಕ್ರಗ್ರಹವನ್ನು ಕೂಡ ನೋಡಬಹುದು. ಈ ಎಲ್ಲಾ ಗ್ರಹಗಳ ಚಲನವಲನವನ್ನು ವಾರದುದ್ದಕ್ಕೂ ಗಮನಿಸಬಹುದಾಗಿದೆ.

ಚಂದ್ರ

ನವೆಂಬರ್ 23ರಿಂದ 30ರವರೆಗೂ ನೀವು ಚಂದಿರನನ್ನು ಗಮನಿಸಿರಬೇಕು. ಹೇಗೆ, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ಬದಲಾವಣೆಯಾಯಿತು ಎಂಬುದನ್ನು ಕೂಡ. ಕಳೆದ ವಾರ ಕೃಷ್ಣ ಪಕ್ಷದ ಚಂದ್ರನನ್ನು ಅಂದರೆ, ವೃದ್ಧಿಸುತ್ತಿರುವ ಚಂದ್ರನನ್ನು ನೋಡಿದಿರಿ. ಅದಲ್ಲದೆ, ನವೆಂಬರ್ 30ರಂದು ಹುಣ್ಣಿಮೆ ಚಂದ್ರನನ್ನು ನೋಡಿದಿರಿ. ಅಂದು ನಡೆದಿದ್ದ ಭಾಗಶಃ ಚಂದ್ರಗ್ರಹಣ ದಕ್ಷಿಣ ಭಾರತಕ್ಕೆ ಕಾಣಿಸಿರುವುದಿಲ್ಲ. ಅಲ್ಲದೆ ಭಾಗಶಃ ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ಗ್ರಹಿಸುವುದು ಕಷ್ಟವಾಗಿರುತ್ತದೆ. ಇರಲಿ, ಈ ವಾರ ಚಂದ್ರನ ಹುಣ್ಣಿಮೆಯ ನಂತರದ ಬಿಂಬಾವಸ್ಥೆಯನ್ನು ನೋಡಬಹುದಾಗಿರುತ್ತದೆ. ಇದನ್ನು ನಾವು ಶುಕ್ಲ ಪಕ್ಷ ಅಥವಾ ಕ್ಷೀಣಿಸುತ್ತಿರುವ ಚಂದ್ರ ಎಂದು ಕರೆಯುತ್ತೇವೆ. ಹುಣ್ಣಿಮೆಯ ದಿನ ಚಂದ್ರ, ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದರೆ, ಪೂರ್ವದಲ್ಲಿ ಹುಟ್ಟುತ್ತಿರುತ್ತಾನೆ, ಮತ್ತು ರಾತ್ರಿ ಪೂರಾ ಕಾಣುತ್ತಾನೆ. ಹುಣ್ಣಿಮೆಯ ನಂತರದ ದಿನಗಳಲ್ಲಿ ಚಂದ್ರ, ಈ ಹಿಂದೆ ಹುಟ್ಟಿದ ಸಮಯಕ್ಕಿಂತಲೂ ಸುಮಾರು 50 ನಿಮಿಷಗಳ ತಡವಾಗಿ ಹುಟ್ಟುತ್ತಾನೆ. ಹೀಗೆ 50 ನಿಮಿಷಗಳ ತಡವಾಗಿ ಹುಟ್ಟುವುದು ಪ್ರತಿ ದಿನವು ನಡೆಯುತ್ತದೆ. ಇದಕ್ಕೆ ಕಾರಣ: ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವ ಕಕ್ಷೆಯಲ್ಲಿ, ಒಂದು ದಿನಕ್ಕೆ ಸುಮಾರು ಒಂದು ಡಿಗ್ರಿ ಚಲಿಸುತ್ತದೆ. ಹಾಗಾಗಿ, ಒಂದು ವರ್ಷಕ್ಕೆ ಸುಮಾರು 360(5) ದಿನ (ಪೂರ್ಣ ವೃತ್ತಕ್ಕೆ 360 ಡಿಗ್ರಿ). ಈ ವಾರ ಚಂದ್ರನು ಹುಟ್ಟುವ ಸಮಯ ಮತ್ತು ಮುಳುಗುವ ಸಮಯವನ್ನು ಮತ್ತು ಚಂದ್ರನು ಕ್ಷೀಣಿಸುತ್ತಿರುವ ಬಿಂಬಾವಸ್ಥೆಯನ್ನು ಗಮನಿಸಬಹುದು.

ನಕ್ಷತ್ರ ಪುಂಜಗಳು

ಇಲ್ಲಿಯವರೆಗೂ ನಾವು ಆಗಸದಲ್ಲಿ ಪ್ರಕಾಶಮಾನವಾಗಿ ಕಾಣುವ ಗ್ರಹಗಳು ಮತ್ತು ಚಂದಿರನ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದೆವು. ಸೌರ ಮಂಡಲದ ಕಾಯಗಳಲ್ಲದೆ, ಆಗಸದಲ್ಲಿ ಸಹಸ್ರಾರು ನಕ್ಷತ್ರಗಳು ಕಾಣುತ್ತವೆ. ನಕ್ಷತ್ರಗಳು ನಮ್ಮ ಸೌರಮಂಡಲದ ಕಾಯಗಳಿಗಿಂತಲೂ ಕೋಟ್ಯಾನುಕೋಟಿ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವುದರಿಂದ, ಈ ನಕ್ಷತ್ರಗಳ ಸ್ಥಾನಗಳು ನೂರಾರು ವರ್ಷಗಳಾದರೂ ಬದಲಾವಣೆಯಾಗುವುದಿಲ್ಲ. ಅಂದರೆ, ನಕ್ಷತ್ರಗಳ ನೈಜ ಸ್ಥಾನದ ಬದಲಾವಣೆ ಇರುವುದಿಲ್ಲ. ಹಾಗಾಗಿ, ಹಲವಾರು ನಾಗರಿಕತೆಗಳು, ಭೂಮಿಯಿಂದ ಕಾಣುವ ನಕ್ಷತ್ರಗಳನ್ನು ಒಂದೊಂದು ಗುಂಪುಗಳಾಗಿ ಮಾಡಿ, ಅವುಗಳಿಗೆ ಕೆಲವೊಂದು ಆಕಾರಗಳನ್ನು ಕೊಟ್ಟು, ದಿಕ್ಕುಗಳನ್ನು ಕಂಡುಹಿಡಿಯಲು, ಸಮುದ್ರಯಾನ ಮಾಡಲು ಮತ್ತು ಕಾಲಗಳನ್ನು ಗುರುತಿಸಲು ಬಳಸಿಕೊಂಡವು. ಇಂತಹ ನಕ್ಷತ್ರಗಳ ಗುಂಪುಗಳನ್ನು ನಕ್ಷತ್ರ ಪುಂಜ ಎಂದು ಕರೆಯಲಾಯಿತು. ಬೇರೆ ಬೇರೆ ನಾಗರಿಕತೆಗಳು ತಮಗೆ ಕಾಣುವ ನಕ್ಷತ್ರಗಳನ್ನು ತಮ್ಮ ದೈವಗಳಿಗೆ ಮತ್ತು ತಮ್ಮ ಸಂಸ್ಕೃತಿಗಳಿಗೆ ಅನುಗುಣವಾಗಿ ಗುಂಪುಗಳನ್ನಾಗಿ ವಿಂಗಡಿಸಿ ಕಥೆಗಳನ್ನು ಕಟ್ಟಿದರು.

ಉದಾಹರಣೆಗೆ, ಉತ್ತರ ದಿಕ್ಕಿನಲ್ಲಿ ಕಾಣುವ ಏಳು ಪ್ರಕಾಶಮಾನವಾದ ನಕ್ಷತ್ರ ಪುಂಜವನ್ನು ಭಾರತದಲ್ಲಿ ಸಪ್ತಋಷಿಮಂಡಲ (ಏಳು ಋಷಿಗಳ ತಪಸ್ಸು ಮಾಡುತ್ತಿರುವುದು) ಎಂದು ಗ್ರಹಿಸಿದರೆ, ಗ್ರೀಕರು ಇದೇ ನಕ್ಷತ್ರ ಪುಂಜವನ್ನು ದೊಡ್ಡಕರಡಿ ಎಂದು ಕರೆದರು. ಹೀಗೆ, ಹಲವಾರು ನಕ್ಷತ್ರಪುಂಜಗಳನ್ನು ವಿವಿಧ ದೇಶಗಳ ನಾಗರಿಕತೆಗಳು ವಿವಿಧ ರೀತಿಯಲ್ಲಿ ಕರೆದರಾದರೂ, ಕಥೆಗಳನ್ನೂ ಕಟ್ಟಿದರಾದರೂ, ಎಲ್ಲರಿಗೂ ನಕ್ಷತ್ರಪುಂಜಗಳ ವೀಕ್ಷಣೆಯಿಂದ ಪಡೆಯುತ್ತಿದ್ದ ಮಾಹಿತಿ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಆದರೆ, ಪ್ರಸ್ತುತ ಇರುವ International Astronomical Union (IAU) ಸಂಸ್ಥೆಯು, ನಕ್ಷತ್ರಪುಂಜಗಳ ವಿವಿಧ ಹೆಸರುಗಳ ಬದಲಾಗಿ, ಎಲ್ಲರೂ ಒಂದೇ ಹೆಸರನ್ನು ಬಳಸಲು ಅನುಕೂಲವಾಗುವಂತೆ, ಇಡೀ ಆಗಸವನ್ನು 88 ಗುಂಪುಗಳಾಗಿ ವಿಂಗಡಿಸಿ, 88 ನಕ್ಷತ್ರ ಪುಂಜಗಳನ್ನು ಹೆಸರಿಸಿದೆ. ಇದನ್ನು ಜಗತ್ತಿನಾದ್ಯಂತ ಒಪ್ಪಲಾಗಿದೆ. 88 ನಕ್ಷತ್ರಪುಂಜಗಳ ಪೈಕಿ, ಕೆಲವು ಪ್ರಕಾಶಮಾನವಾಗಿದ್ದರೆ, ಇನ್ನು ಕೆಲವು ಅಷ್ಟು ಬೆಳಗುವುದಿಲ್ಲ. ಆದರೂ, ಚಂದ್ರನಿಲ್ಲದ ರಾತ್ರಿಯಲ್ಲಿ ನಕ್ಷತ್ರಪುಂಜಗಳನ್ನು ಬರಿಗಣ್ಣಿನಲ್ಲಿಯೇ ನೋಡಿ ಸವಿಯಬಹುದು. ಈ ವಾರ ಚಳಿಗಾಲದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರಪುಂಜವನ್ನು ನೋಡೋಣ.

ಚಳಿಗಾಲದ ಆಗಸದಲ್ಲಿ ಬಹಳ ಪ್ರಕಾಶಮಾನವಾಗಿ ಮತ್ತು ಸುಲಭವಾಗಿ ಗುರುತಿಸಬಲ್ಲ ಪ್ರಥಮ ನಕ್ಷತ್ರಪುಂಜ ಎಂದರೆ ಅದು ಒರಿಯಾನ್. ಸುಮಾರು ರಾತ್ರಿ ಒಂಭತ್ತು ಗಂಟೆಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತರೆ ಈ ಕೆಳಗಿನ ಚಿತ್ರದಂತೆ ಪ್ರಕಾಶಮಾನವಾದ ನಕ್ಷತ್ರಗಳನ್ನು ಕಾಣಬಹುದು. ಈ ನಕ್ಷತ್ರಪುಂಜದಲ್ಲಿ ಹೆಚ್ಚು ಪ್ರಕಾಶಮಾನವಾದ ಬಿಳಿ ಬಣ್ಣದ ನಕ್ಷತ್ರವನ್ನು ರಿಗಲ್ ಮತ್ತು ಅದರ ವಿರುದ್ಧ ದಿಕ್ಕಿನ ನಸು ಹಳದಿ ಬಣ್ಣದ ನಕ್ಷತ್ರವನ್ನು ಬೀಟಲ್‌ಜೂಸ್ ಎಂದು ಹೆಸರಿಸಲಾಗಿದೆ.

ಚಿತ್ರದಲ್ಲಿ ನಕ್ಷತ್ರಗಳ ಪುಂಜವನ್ನು ಗುರುತಿಸಲು ಸಹಾಯವಾಗುವಂತೆ ಗೆರೆಯನ್ನು ಬಳಸಲಾಗಿದೆ. ಈ ಕಾಲ್ಪನಿಕ ಗೆರೆಗಳನ್ನು ಕಲ್ಪಿಸಿಕೊಂಡು ಆಗಸದಲ್ಲಿ ಈ ನಕ್ಷತ್ರ ಪುಂಜವನ್ನು ಗುರುತಿಸಬಹುದು. ಈ ನಕ್ಷತ್ರಪುಂಜವನ್ನು ಗ್ರೀಕ್ ಪುರಾಣ ಕಥೆಯಲ್ಲಿ ಬರುವ ’ದಿ ಗ್ರೇಟ್ ಹಂಟರ್ – ಬೇಟೆಗಾರನಾದ ಒರಿಯಾನ್ ಎಂದು ಹೆಸರಿಸಲಾಗಿದೆ. ಭಾರತದಲ್ಲಿ ಈ ನಕ್ಷತ್ರ ಪುಂಜವನ್ನು ಮಹಾವ್ಯಾಧ ಎಂದು ಹೆಸರಿಸಿದ್ದು, ಈ ಮಹಾವ್ಯಾಧ ತನ್ನ ಮುಂದಿರುವ ವೃಷಭ-ಗೂಳಿ (ಟಾರಸ್ ಎಂದು ಕರೆಯುತ್ತಾರೆ)ವನ್ನು ಅಟ್ಟುತ್ತಿದ್ದಾನೆ ಎನ್ನುವುದು ಪುರಾಣ ಕಥೆ. ಆಗಸದಲ್ಲೂ, ಮಹಾವ್ಯಾಧ ನಕ್ಷತ್ರಪುಂಜದ ಮುಂದೆ ವೃಷಭ ನಕ್ಷತ್ರ ಪುಂಜ ಇದೆ.

ಅಂದಹಾಗೆ, ಈ ಕೆಳಗೆ ನೀಡಿರುವ ಒರಿಯಾನ್ ನಕ್ಷತ್ರ ಪುಂಜದ ಚಿತ್ರದಲ್ಲಿ ಗುರುತಿಸಿರುವ ಭಾಗವನ್ನು ಚಂದ್ರನಿಲ್ಲದ ರಾತ್ರಿಯಲ್ಲಿ ಬರಿಗಣ್ಣಿನಲ್ಲಿ ನೋಡಿದರೆ, ನಕ್ಷತ್ರಗಳು ಹುಟ್ಟುವ ಪ್ರದೇಶವಾದ ಸುಂದರವಾದ ನೆಬುಲ್ಲಾ ಕಾಣುತ್ತದೆ. ಇದನ್ನು ಬೈನಾಕ್ಯೂಲರ್ ಅಥವಾ ದೂರದರ್ಶಕದಲ್ಲಿ ನೋಡಿದರೆ, ಬಹಳ ಸುಂದರವಾಗಿ ಕಾಣುತ್ತದೆ. ಆಗಸದ ಚಿತ್ರಗಳನ್ನು ತೆಗೆಯುವ ಹವ್ಯಾಸಿ ಛಾಯಾಗ್ರಾಹಕರ ನೆಚ್ಚಿನ ವಸ್ತು ಒರಿಯಾನ್ ನೆಬುಲ್ಲಾ. ಅತ್ಯಂತ ಸುಂದರವಾದ ಹೈಡ್ರೋಜನ್ ಮೋಡಗಳು ಮತ್ತು ಎಳೆ ನಕ್ಷತ್ರಗಳು ಹುಟ್ಟುವ ಜಾಗವನ್ನು ಸೆರೆಹಿಡಿಯಬಹುದು. ನಕ್ಷತ್ರದ ಹುಟ್ಟು ಸಾವು ಅಧ್ಯಯನ ಮಾಡಲು ಅತ್ಯಂತ ಉಪಯೋಗವಾದ ನೆಬುಲ್ಲಾ ಇದಾಗಿದೆ.

  • ವಿಶ್ವ ಕೀರ್ತಿ ಎಸ್

ಚಿತ್ರ ಕೃಪೆ: Stellarium, Hubblesite

ಚಿತ್ರ ಕೃಪೆ: www.moongiant.com
(ಮುಂದಿನ ವಾರ ಡಿಸೆಂಬರ್‌ನ ವಿಶೇಷ ಖಗೋಳೀಯ ಘಟನೆಯಾದ ಮತ್ತು ಪ್ರತಿ ವರ್ಷದ ಪ್ರಕಾಶಮಾನ ಜಮಿನೈಡ್ಸ್ ಉಲ್ಕಾಪಾತದ ಬಗ್ಗೆ ವಿವರಗಳನ್ನು ನಿರೀಕ್ಷಿಸಿ.)

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...