Homeಮುಖಪುಟರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ಒರಿಯಾನ್ ನಕ್ಷತ್ರ ಪುಂಜದ ಚಿತ್ರದಲ್ಲಿ ಗುರುತಿಸಿರುವ ಭಾಗವನ್ನು ಚಂದ್ರನಿಲ್ಲದ ರಾತ್ರಿಯಲ್ಲಿ ಬರಿಗಣ್ಣಿನಲ್ಲಿ ನೋಡಿದರೆ, ನಕ್ಷತ್ರಗಳು ಹುಟ್ಟುವ ಪ್ರದೇಶವಾದ ಸುಂದರವಾದ ನೆಬುಲ್ಲಾ ಕಾಣುತ್ತದೆ.

- Advertisement -
- Advertisement -

(ಆಕಾಶ ಕಾಯಗಳು ವೀಕ್ಷಣೆ ಮತ್ತು ವಿವರಣೆ: ಡಿಸೆಂಬರ್ ೦೧-೦೮)

ಭಾರತದಲ್ಲಿ ಮಳೆಗಾಲದ ನಂತರ ಬರುವ ಚಳಿಗಾಲದಲ್ಲಿ, ಆಕಾಶವು ಮೋಡಗಳಿಲ್ಲದೆ ಸ್ಪಷ್ಟವಾಗಿ ಕಾಣುತ್ತದೆ (ಸೈಕ್ಲೋನ್ ಇಲ್ಲದಿದ್ದರೆ). ಹಾಗಾಗಿ, ಅಕ್ಟೋಬರ್ ತಿಂಗಳಿನಿಂದ ಮುಂದಿನ ಮಾರ್ಚ್ ಮತ್ತು ಏಪ್ರಿಲ್‌ವರೆಗೂ ಆಕಾಶ ವೀಕ್ಷಣೆಗೆ ಸದವಕಾಶ. ಡಿಸೆಂಬರ್‌ನ ಕೊರೆಯುವ ಚಳಿಯಲ್ಲಂತೂ ಬಿಸಿಬಿಸಿ ತಿನಿಸುಗಳನ್ನು ತಿನ್ನುತ್ತ ಆಕಾಶ ವೀಕ್ಷಣೆ ಮಾಡುವುದೇ ಒಂದು ವಿಶಿಷ್ಟವಾದ ಅನುಭವ. ಕಳೆದ ವಾರ, ಆಗಸದಲ್ಲಿ ಕಾಣುವ ಪ್ರಮುಖವಾದ ಗ್ರಹಗಳ ಸ್ಥಾನ ಮತ್ತು ಚಂದ್ರನ ಬಿಂಬಾವಸ್ಥೆಯ ಬಗ್ಗೆ ತಿಳಿದೆವು. ಈ ವಾರ ವೈಶಿಷ್ಟತೆಗಳೇನು?

1. ಗ್ರಹಗಳು: ಗುರು, ಶನಿ, ಶುಕ್ರ ಮತ್ತು ಮಂಗಳ

ಕಳೆದ ವಾರ ಈ ಗ್ರಹಗಳ ಸ್ಥಾನಗಳನ್ನು ಗಮನಿಸಿದ್ದರೆ, ಈ ವಾರ ಈ ಗ್ರಹಗಳನ್ನು ಆಗಸದಲ್ಲಿ ಹುಡುಕುವುದಕ್ಕೆ ಬಹಳ ಕಷ್ಟವೇನಾಗುವುದಿಲ್ಲ. ಏಕೆಂದರೆ, ಗ್ರಹಗಳ ನೈಜ ಚಲನೆಗಳು ಬಹಳ ನಿಧಾನ. ಹಾಗಾಗಿ ಅದೇ ಸ್ಥಾನದಲ್ಲೆ, ಅಥವಾ ಸ್ವಲ್ಪ ಆಸುಪಾಸಿನಲ್ಲೇ ಈ ಗ್ರಹಗಳನ್ನು ನಾವು ನೋಡಬಹುದು. ಸೂರ್ಯ ಮುಳುಗಿದ ನಂತರ, ದಿಗಂತದಲ್ಲಿ ಕಾಣುವ ಪ್ರಕಾಶಮಾನವಾದ ಜೋಡಿ ಚುಕ್ಕಿಗಳು ಶನಿ ಮತ್ತು ಗುರುಗ್ರಹ ಮತ್ತು ಇವೆರಡರಲ್ಲಿ ಹೆಚ್ಚು ಪ್ರಕಾಶಮಾನವಾಗಿರುವುದು ಗುರುಗ್ರಹ. ಹಿಂದಿನ ವಾರ ಈ ಜೋಡಿ ಗ್ರಹಗಳ ವೀಕ್ಷಣೆ ಮಾಡಿದ್ದರೆ, ಗ್ರಹಗಳ ನಡುವೆ ಇರುವ ಅಂತರ ಕಡಿಮೆಯಾಗುತ್ತಿರುವುದನ್ನು ನೀವು ಗಮನಿಸಬಹುದು. ಈ ಅಂತರ ಹೀಗೆ ಕಡಿಮೆಯಾಗುತ್ತಾ, ಡಿಸೆಂಬರ್ 21ರ ರಾತ್ರಿಯಂದು ಈ ಎರಡೂ ಗ್ರಹಗಳು ಆಗಸದಲ್ಲಿ ಒಂದೇ ಚುಕ್ಕಿಯಂತೆ ಭಾಸವಾಗುವಷ್ಟು ಅಂತರಕ್ಕೆ ಬರಲಿವೆ! ನಿಮ್ಮ ಬಳಿ ಇರುವ ಕ್ಯಾಮರಾ ಮೂಲಕ, ಪ್ರತಿ ದಿನ ಈ ಜೋಡಿ ಗ್ರಹಗಳ ಚಿತ್ರಗಳನ್ನು ತೆಗೆದು ಅಂತರವನ್ನು ದಿನದಿಂದ ದಿನಕ್ಕೆ ಹೋಲಿಕೆ ಮಾಡಬಹುದು. ಗುರು ಮತ್ತು ಶನಿ ಗ್ರಹಗಳು ಸೂರ್ಯನ ಸುತ್ತ ಪ್ರತ್ಯೇಕವಾದ ಕಕ್ಷೆಯಲ್ಲಿ ಸುತ್ತುತ್ತವೆ. ಈ ಕಕ್ಷೆಗಳ ನಡುವಿನ ಅಂತರ ಸುಮಾರು 64 ಕೋಟಿ ಕಿಲೋಮೀಟರ್. ಆದರೂ, ಈ ಗ್ರಹಗಳು ಆಗಸದಲ್ಲಿ ಒಂದೇ ದಿಕ್ಕಿನಲ್ಲಿ ಕಾಣುತ್ತಿರುವದರಿಂದ, ಅಕ್ಕಪಕ್ಕದಲ್ಲಿ ಇರುವಂತೆ ಕಾಣುತ್ತಿವೆ. ವಾಸ್ತವದಲ್ಲಿ ಆ ಎರಡು ಗ್ರಹಗಳು ಊಹೆಗೂ ನಿಲುಕದಷ್ಟು ದೂರದಲ್ಲಿವೆ.

ಸೂರ್ಯ ಮುಳುಗಿದ ನಂತರ ಗುರು ಮತ್ತು ಶನಿ ಗ್ರಹಗಳನ್ನು ನೋಡಿಕೊಂಡು, ನೆತ್ತಿಯ ಆಸುಪಾಸಿನಲ್ಲಿ ಕಣ್ಣಾಯಿಸಿದರೆ, ಕೆಂಪಾಗಿ ಕಾಣುವ ಗ್ರಹವೇ ಮಂಗಳ ಗ್ರಹ. ಇದಲ್ಲದೆ, ಮುಂಜಾನೆ ಸೂರ್ಯ ಉದಯಿಸುವುದಕ್ಕೆ ಮುನ್ನ ಪ್ರಕಾಶಮಾನವಾಗಿ ಕಾಣುವ ಶುಕ್ರಗ್ರಹವನ್ನು ಕೂಡ ನೋಡಬಹುದು. ಈ ಎಲ್ಲಾ ಗ್ರಹಗಳ ಚಲನವಲನವನ್ನು ವಾರದುದ್ದಕ್ಕೂ ಗಮನಿಸಬಹುದಾಗಿದೆ.

ಚಂದ್ರ

ನವೆಂಬರ್ 23ರಿಂದ 30ರವರೆಗೂ ನೀವು ಚಂದಿರನನ್ನು ಗಮನಿಸಿರಬೇಕು. ಹೇಗೆ, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ಬದಲಾವಣೆಯಾಯಿತು ಎಂಬುದನ್ನು ಕೂಡ. ಕಳೆದ ವಾರ ಕೃಷ್ಣ ಪಕ್ಷದ ಚಂದ್ರನನ್ನು ಅಂದರೆ, ವೃದ್ಧಿಸುತ್ತಿರುವ ಚಂದ್ರನನ್ನು ನೋಡಿದಿರಿ. ಅದಲ್ಲದೆ, ನವೆಂಬರ್ 30ರಂದು ಹುಣ್ಣಿಮೆ ಚಂದ್ರನನ್ನು ನೋಡಿದಿರಿ. ಅಂದು ನಡೆದಿದ್ದ ಭಾಗಶಃ ಚಂದ್ರಗ್ರಹಣ ದಕ್ಷಿಣ ಭಾರತಕ್ಕೆ ಕಾಣಿಸಿರುವುದಿಲ್ಲ. ಅಲ್ಲದೆ ಭಾಗಶಃ ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ಗ್ರಹಿಸುವುದು ಕಷ್ಟವಾಗಿರುತ್ತದೆ. ಇರಲಿ, ಈ ವಾರ ಚಂದ್ರನ ಹುಣ್ಣಿಮೆಯ ನಂತರದ ಬಿಂಬಾವಸ್ಥೆಯನ್ನು ನೋಡಬಹುದಾಗಿರುತ್ತದೆ. ಇದನ್ನು ನಾವು ಶುಕ್ಲ ಪಕ್ಷ ಅಥವಾ ಕ್ಷೀಣಿಸುತ್ತಿರುವ ಚಂದ್ರ ಎಂದು ಕರೆಯುತ್ತೇವೆ. ಹುಣ್ಣಿಮೆಯ ದಿನ ಚಂದ್ರ, ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದರೆ, ಪೂರ್ವದಲ್ಲಿ ಹುಟ್ಟುತ್ತಿರುತ್ತಾನೆ, ಮತ್ತು ರಾತ್ರಿ ಪೂರಾ ಕಾಣುತ್ತಾನೆ. ಹುಣ್ಣಿಮೆಯ ನಂತರದ ದಿನಗಳಲ್ಲಿ ಚಂದ್ರ, ಈ ಹಿಂದೆ ಹುಟ್ಟಿದ ಸಮಯಕ್ಕಿಂತಲೂ ಸುಮಾರು 50 ನಿಮಿಷಗಳ ತಡವಾಗಿ ಹುಟ್ಟುತ್ತಾನೆ. ಹೀಗೆ 50 ನಿಮಿಷಗಳ ತಡವಾಗಿ ಹುಟ್ಟುವುದು ಪ್ರತಿ ದಿನವು ನಡೆಯುತ್ತದೆ. ಇದಕ್ಕೆ ಕಾರಣ: ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವ ಕಕ್ಷೆಯಲ್ಲಿ, ಒಂದು ದಿನಕ್ಕೆ ಸುಮಾರು ಒಂದು ಡಿಗ್ರಿ ಚಲಿಸುತ್ತದೆ. ಹಾಗಾಗಿ, ಒಂದು ವರ್ಷಕ್ಕೆ ಸುಮಾರು 360(5) ದಿನ (ಪೂರ್ಣ ವೃತ್ತಕ್ಕೆ 360 ಡಿಗ್ರಿ). ಈ ವಾರ ಚಂದ್ರನು ಹುಟ್ಟುವ ಸಮಯ ಮತ್ತು ಮುಳುಗುವ ಸಮಯವನ್ನು ಮತ್ತು ಚಂದ್ರನು ಕ್ಷೀಣಿಸುತ್ತಿರುವ ಬಿಂಬಾವಸ್ಥೆಯನ್ನು ಗಮನಿಸಬಹುದು.

ನಕ್ಷತ್ರ ಪುಂಜಗಳು

ಇಲ್ಲಿಯವರೆಗೂ ನಾವು ಆಗಸದಲ್ಲಿ ಪ್ರಕಾಶಮಾನವಾಗಿ ಕಾಣುವ ಗ್ರಹಗಳು ಮತ್ತು ಚಂದಿರನ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದೆವು. ಸೌರ ಮಂಡಲದ ಕಾಯಗಳಲ್ಲದೆ, ಆಗಸದಲ್ಲಿ ಸಹಸ್ರಾರು ನಕ್ಷತ್ರಗಳು ಕಾಣುತ್ತವೆ. ನಕ್ಷತ್ರಗಳು ನಮ್ಮ ಸೌರಮಂಡಲದ ಕಾಯಗಳಿಗಿಂತಲೂ ಕೋಟ್ಯಾನುಕೋಟಿ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವುದರಿಂದ, ಈ ನಕ್ಷತ್ರಗಳ ಸ್ಥಾನಗಳು ನೂರಾರು ವರ್ಷಗಳಾದರೂ ಬದಲಾವಣೆಯಾಗುವುದಿಲ್ಲ. ಅಂದರೆ, ನಕ್ಷತ್ರಗಳ ನೈಜ ಸ್ಥಾನದ ಬದಲಾವಣೆ ಇರುವುದಿಲ್ಲ. ಹಾಗಾಗಿ, ಹಲವಾರು ನಾಗರಿಕತೆಗಳು, ಭೂಮಿಯಿಂದ ಕಾಣುವ ನಕ್ಷತ್ರಗಳನ್ನು ಒಂದೊಂದು ಗುಂಪುಗಳಾಗಿ ಮಾಡಿ, ಅವುಗಳಿಗೆ ಕೆಲವೊಂದು ಆಕಾರಗಳನ್ನು ಕೊಟ್ಟು, ದಿಕ್ಕುಗಳನ್ನು ಕಂಡುಹಿಡಿಯಲು, ಸಮುದ್ರಯಾನ ಮಾಡಲು ಮತ್ತು ಕಾಲಗಳನ್ನು ಗುರುತಿಸಲು ಬಳಸಿಕೊಂಡವು. ಇಂತಹ ನಕ್ಷತ್ರಗಳ ಗುಂಪುಗಳನ್ನು ನಕ್ಷತ್ರ ಪುಂಜ ಎಂದು ಕರೆಯಲಾಯಿತು. ಬೇರೆ ಬೇರೆ ನಾಗರಿಕತೆಗಳು ತಮಗೆ ಕಾಣುವ ನಕ್ಷತ್ರಗಳನ್ನು ತಮ್ಮ ದೈವಗಳಿಗೆ ಮತ್ತು ತಮ್ಮ ಸಂಸ್ಕೃತಿಗಳಿಗೆ ಅನುಗುಣವಾಗಿ ಗುಂಪುಗಳನ್ನಾಗಿ ವಿಂಗಡಿಸಿ ಕಥೆಗಳನ್ನು ಕಟ್ಟಿದರು.

ಉದಾಹರಣೆಗೆ, ಉತ್ತರ ದಿಕ್ಕಿನಲ್ಲಿ ಕಾಣುವ ಏಳು ಪ್ರಕಾಶಮಾನವಾದ ನಕ್ಷತ್ರ ಪುಂಜವನ್ನು ಭಾರತದಲ್ಲಿ ಸಪ್ತಋಷಿಮಂಡಲ (ಏಳು ಋಷಿಗಳ ತಪಸ್ಸು ಮಾಡುತ್ತಿರುವುದು) ಎಂದು ಗ್ರಹಿಸಿದರೆ, ಗ್ರೀಕರು ಇದೇ ನಕ್ಷತ್ರ ಪುಂಜವನ್ನು ದೊಡ್ಡಕರಡಿ ಎಂದು ಕರೆದರು. ಹೀಗೆ, ಹಲವಾರು ನಕ್ಷತ್ರಪುಂಜಗಳನ್ನು ವಿವಿಧ ದೇಶಗಳ ನಾಗರಿಕತೆಗಳು ವಿವಿಧ ರೀತಿಯಲ್ಲಿ ಕರೆದರಾದರೂ, ಕಥೆಗಳನ್ನೂ ಕಟ್ಟಿದರಾದರೂ, ಎಲ್ಲರಿಗೂ ನಕ್ಷತ್ರಪುಂಜಗಳ ವೀಕ್ಷಣೆಯಿಂದ ಪಡೆಯುತ್ತಿದ್ದ ಮಾಹಿತಿ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಆದರೆ, ಪ್ರಸ್ತುತ ಇರುವ International Astronomical Union (IAU) ಸಂಸ್ಥೆಯು, ನಕ್ಷತ್ರಪುಂಜಗಳ ವಿವಿಧ ಹೆಸರುಗಳ ಬದಲಾಗಿ, ಎಲ್ಲರೂ ಒಂದೇ ಹೆಸರನ್ನು ಬಳಸಲು ಅನುಕೂಲವಾಗುವಂತೆ, ಇಡೀ ಆಗಸವನ್ನು 88 ಗುಂಪುಗಳಾಗಿ ವಿಂಗಡಿಸಿ, 88 ನಕ್ಷತ್ರ ಪುಂಜಗಳನ್ನು ಹೆಸರಿಸಿದೆ. ಇದನ್ನು ಜಗತ್ತಿನಾದ್ಯಂತ ಒಪ್ಪಲಾಗಿದೆ. 88 ನಕ್ಷತ್ರಪುಂಜಗಳ ಪೈಕಿ, ಕೆಲವು ಪ್ರಕಾಶಮಾನವಾಗಿದ್ದರೆ, ಇನ್ನು ಕೆಲವು ಅಷ್ಟು ಬೆಳಗುವುದಿಲ್ಲ. ಆದರೂ, ಚಂದ್ರನಿಲ್ಲದ ರಾತ್ರಿಯಲ್ಲಿ ನಕ್ಷತ್ರಪುಂಜಗಳನ್ನು ಬರಿಗಣ್ಣಿನಲ್ಲಿಯೇ ನೋಡಿ ಸವಿಯಬಹುದು. ಈ ವಾರ ಚಳಿಗಾಲದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರಪುಂಜವನ್ನು ನೋಡೋಣ.

ಚಳಿಗಾಲದ ಆಗಸದಲ್ಲಿ ಬಹಳ ಪ್ರಕಾಶಮಾನವಾಗಿ ಮತ್ತು ಸುಲಭವಾಗಿ ಗುರುತಿಸಬಲ್ಲ ಪ್ರಥಮ ನಕ್ಷತ್ರಪುಂಜ ಎಂದರೆ ಅದು ಒರಿಯಾನ್. ಸುಮಾರು ರಾತ್ರಿ ಒಂಭತ್ತು ಗಂಟೆಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತರೆ ಈ ಕೆಳಗಿನ ಚಿತ್ರದಂತೆ ಪ್ರಕಾಶಮಾನವಾದ ನಕ್ಷತ್ರಗಳನ್ನು ಕಾಣಬಹುದು. ಈ ನಕ್ಷತ್ರಪುಂಜದಲ್ಲಿ ಹೆಚ್ಚು ಪ್ರಕಾಶಮಾನವಾದ ಬಿಳಿ ಬಣ್ಣದ ನಕ್ಷತ್ರವನ್ನು ರಿಗಲ್ ಮತ್ತು ಅದರ ವಿರುದ್ಧ ದಿಕ್ಕಿನ ನಸು ಹಳದಿ ಬಣ್ಣದ ನಕ್ಷತ್ರವನ್ನು ಬೀಟಲ್‌ಜೂಸ್ ಎಂದು ಹೆಸರಿಸಲಾಗಿದೆ.

ಚಿತ್ರದಲ್ಲಿ ನಕ್ಷತ್ರಗಳ ಪುಂಜವನ್ನು ಗುರುತಿಸಲು ಸಹಾಯವಾಗುವಂತೆ ಗೆರೆಯನ್ನು ಬಳಸಲಾಗಿದೆ. ಈ ಕಾಲ್ಪನಿಕ ಗೆರೆಗಳನ್ನು ಕಲ್ಪಿಸಿಕೊಂಡು ಆಗಸದಲ್ಲಿ ಈ ನಕ್ಷತ್ರ ಪುಂಜವನ್ನು ಗುರುತಿಸಬಹುದು. ಈ ನಕ್ಷತ್ರಪುಂಜವನ್ನು ಗ್ರೀಕ್ ಪುರಾಣ ಕಥೆಯಲ್ಲಿ ಬರುವ ’ದಿ ಗ್ರೇಟ್ ಹಂಟರ್ – ಬೇಟೆಗಾರನಾದ ಒರಿಯಾನ್ ಎಂದು ಹೆಸರಿಸಲಾಗಿದೆ. ಭಾರತದಲ್ಲಿ ಈ ನಕ್ಷತ್ರ ಪುಂಜವನ್ನು ಮಹಾವ್ಯಾಧ ಎಂದು ಹೆಸರಿಸಿದ್ದು, ಈ ಮಹಾವ್ಯಾಧ ತನ್ನ ಮುಂದಿರುವ ವೃಷಭ-ಗೂಳಿ (ಟಾರಸ್ ಎಂದು ಕರೆಯುತ್ತಾರೆ)ವನ್ನು ಅಟ್ಟುತ್ತಿದ್ದಾನೆ ಎನ್ನುವುದು ಪುರಾಣ ಕಥೆ. ಆಗಸದಲ್ಲೂ, ಮಹಾವ್ಯಾಧ ನಕ್ಷತ್ರಪುಂಜದ ಮುಂದೆ ವೃಷಭ ನಕ್ಷತ್ರ ಪುಂಜ ಇದೆ.

ಅಂದಹಾಗೆ, ಈ ಕೆಳಗೆ ನೀಡಿರುವ ಒರಿಯಾನ್ ನಕ್ಷತ್ರ ಪುಂಜದ ಚಿತ್ರದಲ್ಲಿ ಗುರುತಿಸಿರುವ ಭಾಗವನ್ನು ಚಂದ್ರನಿಲ್ಲದ ರಾತ್ರಿಯಲ್ಲಿ ಬರಿಗಣ್ಣಿನಲ್ಲಿ ನೋಡಿದರೆ, ನಕ್ಷತ್ರಗಳು ಹುಟ್ಟುವ ಪ್ರದೇಶವಾದ ಸುಂದರವಾದ ನೆಬುಲ್ಲಾ ಕಾಣುತ್ತದೆ. ಇದನ್ನು ಬೈನಾಕ್ಯೂಲರ್ ಅಥವಾ ದೂರದರ್ಶಕದಲ್ಲಿ ನೋಡಿದರೆ, ಬಹಳ ಸುಂದರವಾಗಿ ಕಾಣುತ್ತದೆ. ಆಗಸದ ಚಿತ್ರಗಳನ್ನು ತೆಗೆಯುವ ಹವ್ಯಾಸಿ ಛಾಯಾಗ್ರಾಹಕರ ನೆಚ್ಚಿನ ವಸ್ತು ಒರಿಯಾನ್ ನೆಬುಲ್ಲಾ. ಅತ್ಯಂತ ಸುಂದರವಾದ ಹೈಡ್ರೋಜನ್ ಮೋಡಗಳು ಮತ್ತು ಎಳೆ ನಕ್ಷತ್ರಗಳು ಹುಟ್ಟುವ ಜಾಗವನ್ನು ಸೆರೆಹಿಡಿಯಬಹುದು. ನಕ್ಷತ್ರದ ಹುಟ್ಟು ಸಾವು ಅಧ್ಯಯನ ಮಾಡಲು ಅತ್ಯಂತ ಉಪಯೋಗವಾದ ನೆಬುಲ್ಲಾ ಇದಾಗಿದೆ.

  • ವಿಶ್ವ ಕೀರ್ತಿ ಎಸ್

ಚಿತ್ರ ಕೃಪೆ: Stellarium, Hubblesite

ಚಿತ್ರ ಕೃಪೆ: www.moongiant.com
(ಮುಂದಿನ ವಾರ ಡಿಸೆಂಬರ್‌ನ ವಿಶೇಷ ಖಗೋಳೀಯ ಘಟನೆಯಾದ ಮತ್ತು ಪ್ರತಿ ವರ್ಷದ ಪ್ರಕಾಶಮಾನ ಜಮಿನೈಡ್ಸ್ ಉಲ್ಕಾಪಾತದ ಬಗ್ಗೆ ವಿವರಗಳನ್ನು ನಿರೀಕ್ಷಿಸಿ.)

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...