Homeಕರ್ನಾಟಕಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

ಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

- Advertisement -
- Advertisement -

ನೂರರ ನೋಟ- 40

| ಎಚ್.ಎಸ್ ದೊರೆಸ್ವಾಮಿ |

ಹಿಂದುತ್ವ ಪ್ರತಿಪಾದಕ ಉತ್ತರ ಪ್ರದೇಶದ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲೆಯ ತಲೆಕೆಟ್ಟ ಹಿಂದುತ್ವ ಪ್ರತಿಪಾದಕರು ಗೋವಿನ ಹೆಸರಲ್ಲಿ ಮತೀಯ ದ್ವೇಷ ಸಾಧಿಸುವುದಕ್ಕಾಗಿ ಆಗಾಗ ಕೋಮುದಂಗೆ ಮಾಡಿಸುತ್ತಾರೆ; ಕೊಲೆ ಆಗುವಂತೆ ಮಾಡುತ್ತಾರೆ. ‘ಧರ್ಮವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಧರ್ಮೋರಕ್ಷತಿ ರಕ್ಷಿತಃ ಧರ್ಮವನ್ನು ರಕ್ಷಿಸುವವರನ್ನು ಧರ್ಮ ಕಾಪಾಡುತ್ತದೆ. ಆದ್ದರಿಂದ ಧರ್ಮವನ್ನು ರಕ್ಷಿಸಲು ಹೋರಾಡಬೇಕು. ಧರ್ಮಕ್ಕೆ ಹೋರಾಡದಿದ್ದರೆ ನಮ್ಮ ಸಮಾಜ ಎಲ್ಲಿ ಉಳಿಯುತ್ತದೆ’ ಎಂದು ಹಿಂದೂ ಮತಾಂಧರು, ಮುಸ್ಲಿಂ ಮತಾಂಧರು ವಾದಿಸುತ್ತಾರೆ.

ಈ ಧರ್ಮಾಂಧರಿಗೆ ಧರ್ಮ ರಕ್ಷಣೆ ತಮ್ಮ ಕರ್ತವ್ಯ ಎಂದು ಅನಿಸಿದಾಗ ಗೂಂಡಾಗಳನ್ನು ಸಾಕಿಕೊಳ್ಳುತ್ತಾರೆ. ಈ ಪಡೆ ಶಾಂತಿಕಾಲದಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರಲ್ಲಿ ತೊಡಗುತ್ತಾರೆ ಮತ್ತು ಹೋರಾಡುವ ಸಂದರ್ಭ ಬಂದಾಗ ತಮ್ಮ ನಿಲುವನ್ನು ಒಪ್ಪದ ಜನರ ಮೇಲೆ ಬಿದ್ದು ಅವರನ್ನು ಕೊಲೆಮಾಡುವರು. ಹಣಕ್ಕಾಗಿ ಕೊಲೆಮಾಡಲು ಸುಪಾರಿ ಸ್ವೀಕರಿಸುವವರಿಗೂ ಈ ಮತಾಂಧರು ಸಾಕಿಕೊಂಡಿರುವ ಗೂಂಡಾಗಳಿಗೂ ಏನು ವ್ಯತ್ಯಾಸ? ಧರ್ಮಕ್ಕೂ ಈ ಗೂಂಡಾಗಳಿಗೂ ಯಾವ ನಂಟು? ಗೂಂಡಾಗಳಿಗೊಂದು ಧರ್ಮವಿದೆಯೇ? ಸಿದ್ಧಾಂತವಿದೆಯೇ? ಹಿಂದುತ್ವ ಪ್ರತಿಪಾದಕರು ತಾವೇ ಗೂಂಡಾಗಳಾಗಿರುವುದರಿಂದ ಸಂದರ್ಭ ಸಿಕ್ಕರೆ ಇವರು ಸಮಸ್ತ ಅಧಿಕಾರವನ್ನು ಕರವಶ ಮಾಡಿಕೊಂಡು ವಿಜೃಂಭಿಸುವರು. ತಾತ್ಪರ್ಯವಿಷ್ಟೇ. ಯಾರು ಧರ್ಮ ರಕ್ಷಣೆಗಾಗಿ ಗೂಂಡಾಗಳನ್ನು ಬೆಳೆಸುವರೋ-ಬಳಸುವರೋ ಅವರು ಧರ್ಮವನ್ನು ಹೇಗೆ ಪ್ರತಿಪಾದಿಸುತ್ತಾರೆ?

ಭೀಮನ ಗದೆಯಾಗಲೀ, ಅರ್ಜುನನ ಗಾಂಡೀವವಾಗಲೀ ಧರ್ಮವನ್ನು ರಕ್ಷಿಸುವ ಸಾಧನವಾಗಲಾರದು. ಧರ್ಮದಿಂದ ನಡೆದುಕೊಂಡಿದ್ದರಿಂದ ಅವರು ಹೊತ್ತಿದ್ದ ಅಯುಧಗಳಿಗೆ ಕೀರ್ತಿ ಬಂತು. ಹಾಗಿಲ್ಲವಾದರೆ ಭೀಮ ಅರ್ಜುನರು ಕೊಲೆಗಡುಕರು ಅನ್ನಿಸಿಕೊಳ್ಳುತ್ತಿದ್ದರು.

ಹಿಂದುತ್ವ ಪ್ರತಿಪಾದಕರು ಯಾರ ಕೈಯಲ್ಲಿ ಗದೆ ಇದೆಯೋ ಅವರಿಗೇ ಜಯ ಎಂದು ಭಾವಿಸುತ್ತಾರೆ. ಧರ್ಮ ಅವರಿಗೆ ಒಂದು ಕೋಣವಿದ್ದಂತೆ. ಯಾರು ಅಪಮಾರ್ಗದಲ್ಲಿ ಗೆಲ್ಲುವರೋ ಅವರು ಧರ್ಮಿಷ್ಟರು, ಅವರದು ಕೋಣ. ಧರ್ಮದ ರಕ್ಷಣೆ ಎಂದರೆ ಧರ್ಮಿಷ್ಟರಾಗಿ ನಡೆದುಕೊಳ್ಳುವುದು.

ಹಿಂದೂ ಮತಾಂಧರು, ಮುಸ್ಲಿಮ್ ಮತಾಂಧರು, ಕ್ರಿಶ್ಚಿಯನ್ ಮತಾಂಧರು ಧರ್ಮ ಎಂದರೆ, ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಧರ್ಮ ಎಂದು ಅರ್ಥೈಸುತ್ತಾರೆ. ಇವೆಲ್ಲ ಹೊಡೆದಾಡುವ ಧರ್ಮಗಳು. ಬಡಿದಾಡುವ ಧರ್ಮಗಳು ಧರ್ಮವೇ ಅಲ್ಲ. ಯಾವ ಧರ್ಮವು ಪರಸ್ಪರ ಹೊಡೆದಾಡಲು ಹೇಳಿಲ್ಲ. ಶಾಂತಿಯನ್ನು ಬೋಧಿಸುತ್ತದೆ. ಆದರೆ ಈ ಧರ್ಮಾಂಧರು ಧರ್ಮವನ್ನು ಬಳಸಿಕೊಂಡು ಕೋಮು ಸಂಘರ್ಷದ ಕೆಲಸವನ್ನೇ ಮಾಡುತ್ತಾರೆ. ಕ್ರಿಶ್ಚಿಯನ್ ಜನಾಂಗದವರು ಮಾಡಿರುವಷ್ಟು ಯುದ್ಧವನ್ನು ಬೇರಾವ ಜನಾಂಗವೂ ಮಾಡಿಲ್ಲ.

ಎಲ್ಲಾ ಮತಗಳ ಹೊಂದಾಣಿಕೆಯೇ ಧರ್ಮ. ಪರಸ್ಪರ ಬಡಿದಾಡುವ ಧರ್ಮ ಧರ್ಮವೇ ಅಲ್ಲ. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಮುಂತಾದ ಎಲ್ಲಾ ಧರ್ಮಗಳ ಅನುಯಾಯಿಗಳು ‘ಧರ್ಮ’ ಪದವನ್ನು ತಮ್ಮ ವಾದಕ್ಕೆ ಅನುಗುಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಸತ್ಯಂವದ, ಧರ್ಮಂಚರ ಎಂದು ನಮ್ಮ ಉಪನಿಷತ್ತು ಹೇಳುತ್ತದೆ. ಸತ್ಯವನ್ನು ನುಡಿ ಧರ್ಮವನ್ನು ಆಚರಣೆ ಮಾಡು ಎಂದು ಇದರ ಅರ್ಥ. ‘ಧರ್ಮ’ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಅದು ವಿಶ್ವ ಧರ್ಮವನ್ನು ಪ್ರತಿಪಾದಿಸುತ್ತದೆ. ಎಲ್ಲಾ ಧರ್ಮಗಳೂ ಅಂಗೀಕರಿಸಬೇಕಾದ ಧರ್ಮ ಅದು, ವಿಶ್ವಧರ್ಮ. ಯಾರನ್ನೂ ದ್ವೇಷಿಸಲು ಹೇಳುವುದಿಲ್ಲ. ಯಾವ ಧರ್ಮವನ್ನೂ ಅದು ಅಲ್ಲಗಳೆಯುವುದಿಲ್ಲ. ಧರ್ಮದ ಹೆಸರಿನಲ್ಲಿ ಇತರ ಧರ್ಮಗಳ ಮೇಲೆ ದಾಳಿಮಾಡಲು ದ್ವೇಷ ಬುದ್ಧಿಯಿಂದ ನಡೆದುಕೊಳ್ಳಲು ಹೇಳುವುದಿಲ್ಲ. ಶ್ರೀರಾಮಕೃಷ್ಣ ಪರಮಹಂಸರು ವಿಶ್ವ ಧರ್ಮ ಪರಿಪಾಲಕರು. ಎಲ್ಲಾ ಮತಗಳಲ್ಲಿರುವ ಉತ್ತಮ ವಿಚಾರಗಳನ್ನು ಹಿಂದೂ ಧರ್ಮ ಅಳವಡಿಸಿಕೊಳ್ಳಬೇಕೆಂದು ಅವರು ಬಯಸಿ, ಸರ್ವಧರ್ಮ ಸಮನ್ವಯದ ಮಾತನಾಡಿದ್ದರು. ಇತರ ಮತಗಳ ಸಂಸ್ಥಾಪಕರು ಪ್ರತಿಪಾದಿಸಿದ ಉತ್ತಮ ಅಂಶಗಳನ್ನು ಹಿಂದೂ ಧರ್ಮಕ್ಕೆ ಜೋಡಿಸಿದರು. ಹಿಂದೂ ಧರ್ಮದಲ್ಲಿ ಪ್ರತಿಪಾದಿಸದಿರುವ ಅನೇಕ ಒಳ್ಳೆಯ ಅಂಶಗಳು ಇತರ ಧರ್ಮಗಳಲ್ಲಿರುವುದನ್ನು ಅರಿತು ಅವನ್ನು ಹಿಂದೂ ಧರ್ಮಕ್ಕೆ ಅಳವಡಿಸಲು ಮುಂದಾದರು. ಪೂಜ್ಯ ವಿನೋಬಾ ಭಾವೆಯವರು ಬೈಬಲ್ ಕುರಾನ್‍ಗಳಲ್ಲಿರುವ ಮೌಲಿಕ ತತ್ವಗಳನ್ನು ಆಯ್ದು ಕಲೆ ಹಾಕಿ ‘ಎಸೆನ್ಸ್ ಆಫ್ ಇಸ್ಲಾಂ, ಎಸೆನ್ಸ್ ಆಫ್ ಕ್ರಿಶ್ಚಿಯಾನಿಟಿ’ ಶೀರ್ಷಿಕೆಯು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮತ ಧರ್ಮಗಳ ಹೊಂದಾಣಿಕೆಯ ಕೆಲಸ ಇದು.

ಹಿಂದೂ ಮತಾಂಧ ಸಂಸ್ಥೆಗಳವರು ಈ ಲೋಕ ಕಲ್ಯಾಣದ ಕೆಲಸ ಮಾಡುವ ಬದಲು, ಮತಧರ್ಮಗಳನ್ನು ಒಡೆಯುವ, ಆ ಮೂಲಕ ಮುಗ್ಧ ಹಿಂದೂಗಳ ಭಾವನೆಗಳನ್ನು ಕೆರಳಿಸಿ ಅನ್ಯ ಧರ್ಮೀಯರನ್ನು ಶತ್ರುಗಳಂತೆ ಕಾಣಲು ಕೈ ಜೋಡಿಸುತ್ತಾರೆ. ಕೃಷ್ಣ ಗೋಕುಲಕ್ಕೆ ಬೆಂಕಿ ಬಿದ್ದಾಗ ಗೋವರ್ಧನ ಪರ್ವತವನ್ನು ಮೇಲೆತ್ತಿ ಅದರ ತಳಗೆ ಗೋಕುಲದವರನ್ನೆಲ್ಲಾ ಇಟ್ಟು ಕಾಪಾಡಿದನಂತೆ. ಆದರೆ ಹಿಂದೂತ್ವ ಪ್ರತಿಪಾದಕರು ಸಮಾಜಕ್ಕೆ ಸಂದರ್ಭ ಒದಗಿದಾಗಲೆಲ್ಲ ಬೆಂಕಿ ಹಾಕುವ ತಯಾರಿಯಲ್ಲಿರುವವರೇ!

ಎಲ್ಲಾ ಮತ ಧರ್ಮಗಳಲ್ಲಿ ಕೆಲವು ಲೋಪ ದೋಷಗಳು ಇದ್ದೇ ಇವೆ. ಹಿಂದೂ ಧರ್ಮ ಇದಕ್ಕೆ ಹೊರತಲ್ಲ. ಹಿಂದೂ ಧರ್ಮದಲ್ಲಿ ಜಾತೀಯತೆ, ಶ್ರೇಣೀಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಹೆಣ್ಣಿನ ಬಗೆಗೆ ತಾರತಮ್ಯ, ಹೀಗೆ ಹತ್ತಾರು ಲೋಪದೋಷಗಳಿವೆ.

ಅದರ ಜೊತೆಗೆ ಹಿಂದೂ ಮತಾಂಧತೆ, ಅನ್ಯ ಧರ್ಮೀಯರ ವಿಚಾರದಲ್ಲಿ ಕ್ರೌರ್ಯ, ಅಸಹನೆ, ವೈಚಾರಿಕ ಭಿನ್ನಾಭಿಪ್ರಾಯ ಉಳ್ಳವರನ್ನು, ಹಿಂದುತ್ವ ಪ್ರತಿಪಾದಕರನ್ನು ಪ್ರಶ್ನಿಸುವವರನ್ನು ವ್ಯವಸ್ಥಿತವಾಗಿ ಕೊಲೆ ಮಾಡುವುದು, ಸೆರೆಮನೆಗೆ ದೂಡುವುದು, ಖಟ್ಲೆಗಳನ್ನು ಹಾಕುವುದು ಅವ್ಯಾಹತವಾಗಿ ನಡೆದಿದೆ. ಇಷ್ಟೆಲ್ಲಾ ಅನಾಹುತ ಹಿಂದುತ್ವ ಪ್ರತಿಪಾದಕರಿಂದ ಮೇಲಿಂದ ಮೇಲೆ ನಡೆಯುತ್ತಿದ್ದರೂ, ಪ್ರಧಾನಿ ಮೋದಿಯವರು ಒಂದು ಸಾರಿಯೂ ಈ ಕುರಿತು ಪ್ರಸ್ತಾಪಿಸಿದ್ದೇ ಇಲ್ಲ. ಇಷ್ಟೇ ಅಲ್ಲ, ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅವರೂ ಅಮಿತ್ ಷಾರವರು ಕೂಡಿಕೊಂಡು ವ್ಯವಸ್ಥಿತವಾಗಿ ಮುಸ್ಲಿಮರ ಸಾಲ್ಗೊಲೆ ಮಾಡಿಸಿದ್ದೂ ಜಗಜ್ಜಾಹೀರಾಗಿದೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಈ ಎಲ್ಲ ಪಿಡುಗುಗಳಿಂದ ಹಿಂದೂ ಮತವನ್ನು ಪಾರು ಮಾಡಲೇಬೇಕಾದ್ದು ಮತದಾರರ ಆದ್ಯ ಕರ್ತವ್ಯವಾಗಿದೆ. ಆಸ್ಟ್ರೇಲಿಯಾ ಪ್ರಜೆಯೊಬ್ಬ ನ್ಯೂಜಿಲೆಂಡಿನಲ್ಲಿ ನೌಕರಿ ಮಾಡುತ್ತಿದ್ದು, ಕಳೆದ ಶುಕ್ರವಾರ 2 ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 50 ಮುಸ್ಲಿಂ ಮುಗ್ಧರನ್ನು ಬಂದೂಕಿನಿಂದ ಹೊಡೆದು ಕೊಂದಿದ್ದಾನೆ. ಅವನು ಇವರನ್ನು ಏಕೆ ಕೊಂದನೆಂಬುದಕ್ಕೆ, ಬಿಳಿಯರಿಗೆ ಮಾತ್ರ ಈ ದೇಶ ಇರುವುದು ಎಂದು ಹೇಳಿದ್ದಾನೆ.

ಭಾರತದಲ್ಲಿ ಆರ್‍ಎಸ್‍ಎಸ್, ಬಿಜೆಪಿ, ಮೋದಿ ಹೇಳುವುದೂ ಇದನ್ನೇ. ಭಾರತ ಹಿಂದೂಗಳ ರಾಷ್ಟ್ರ, ಇಲ್ಲಿ ಬೇರೆಯವರಿಗೆ ಇರಲು ಅವಕಾಶವಿಲ್ಲ, ಇದ್ದರೂ ಅವರು 2ನೇ ದರ್ಜೆಯ ಪ್ರಜೆಗಳಾಗಿ ಇರಬೇಕು.

ಈ ವಿಚಿತ್ರ ನಿಲುವಿನ ಕೊಲೆಗಡುಕ ಜನ ಅಲ್ಲೊಬ್ಬರು ಇಲ್ಲೊಬ್ಬರು ಇದ್ದರೆ, ಭಾರತದಲ್ಲಿ ಇಂತಹ ತಲೆ ಕೆಟ್ಟವರ ಸಂಘಟನೆಗಳೇ ಇವೆ. ರಾಜಕೀಯದಲ್ಲಿ ವಿಷ ಸೇರಿಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...