HomeಮುಖಪುಟExplainer: ಕೃಷಿ ಕಾನೂನುಗಳ ಉದ್ದೇಶಿತ ಮತ್ತು ನಿರುದ್ದೇಶಿತ ಪರಿಣಾಮಗಳು

Explainer: ಕೃಷಿ ಕಾನೂನುಗಳ ಉದ್ದೇಶಿತ ಮತ್ತು ನಿರುದ್ದೇಶಿತ ಪರಿಣಾಮಗಳು

ಇಟಲಿಯ ಪಾವಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಅಮಿತ್ ಭಾದುರಿಯವರು ನಾನುಗೌರಿ.ಕಾಂಗಾಗಿ ಬರೆದ ವಿಶೇ‍ಷ ಲೇಖನ.

- Advertisement -
- Advertisement -

ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ನೆಲೆಯೂರಿ, ಕಂಪನಿ ಆಡಳಿತವನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟ ನಿರ್ಣಾಯಕ ಪ್ಲಾಸಿ ಕದನವನ್ನು ಅವರಿಗೆ ಯುದ್ಧಭೂಮಿಯಲ್ಲಿ ಗೆಲ್ಲಲಾಗಲಿಲ್ಲ, ಬದಲಿಗೆ ಸೇನಾ ದಂಡನಾಯಕನೊಬ್ಬನ ಪಿತೂರಿಯಿಂದ ಅವರು ಗೆದ್ದದ್ದು. ಇದೇ ನಿಟ್ಟಿನಲ್ಲಿ ಎಚ್ಚರ ನೀಡುವ ಒಂದು ಆಫ್ರಿಕಾ ಗಾದೆಯಿದೆ, “ಸಿಂಹ ಮುಂದಾಳತ್ವ ವಹಿಸಿದ ಕುರಿಯ ಸೇನೆಯು, ಕುರಿಯ ಮುಂದಾಳತ್ವದ ಸಿಂಹಗಳ ಸೇನೆಯನ್ನು ಸೋಲಿಸಲಿಬಲ್ಲುದು” ಎಂದು. ಈ ಗಾದೆಯ ಹಿಂದಿನ ಸತ್ಯ ವಿಶಾಲವಾದದ್ದು ಮತ್ತು ಅದು ಕೇವಲ ಯುದ್ಧಭೂಮಿಗಳಿಗೆ ಮಾತ್ರ ಅನ್ವಯಿಸದೆ ಹಲವು ಆಧುನಿಕ ಸರ್ಕಾರಗಳು ಮತ್ತು ಪ್ರಜಾಸತ್ತಾತ್ಮಕ ನಾಯಕರಿಗೂ ಸರಿಹೊಂದುತ್ತದೆ. ಒಬ್ಬ ತಪ್ಪು ಮುಖಂಡ, ಒಂದು ವಿಷಪೂರಿತ ಸಿದ್ಧಾಂತ, ಒಂದು ಮೂರ್ಖ ಗುರಿ ಅಥವಾ ಭವ್ಯತೆಯ ಬಗೆಗಿನ ಒಂದು ತಪ್ಪು ಕಲ್ಪನೆ ಅತಿ ಸಣ್ಣ ಸಮಯದಲ್ಲಿ ಊಹಿಸಿಕೊಳ್ಳಲಾಗದ ವಿನಾಶ ತರಬಲ್ಲದು. ಆನಂತರ, ಈ ವಿಧ್ವಂಸದಿಂದ ಚೇತರಿಸಿಕೊಳ್ಳಲು, ಅದು ಎಂದಾದರು ಸಾಧ್ಯವಾದರೆ, ದೀರ್ಘವಾದ ಸಮಯ ಹಿಡಿಯುತ್ತದೆ.

ಇತಿಹಾಸದಲ್ಲಿ ಇದಕ್ಕೆ ಲೆಕ್ಕವಿಲ್ಲದಷ್ಟು ಉದಾಹರಣೆಗಳಿವೆ. ಹಿಟ್ಲರ್ ಮತ್ತು ಮುಸಲೋನಿ ಇನ್ನೂ ನೆನಪಿನಿಂದ ಮಾಸಿಹೋಗಿಲ್ಲ. ಕೆಂಪು ಸೇನೆ ನಾಜಿಗಳನ್ನು ಸೋಲಿಸಿದ್ದು, ಮತ್ತು ಅದೇ ಸಮಯದಲ್ಲಿ ತನ್ನ ವಿರೋಧಿಗಳನ್ನು ಇಲ್ಲವಾಗಿಸಲು ನೀತಿಗಳನ್ನು ಹೊಂದಿದ್ದ ಸ್ಟಾಲಿನ್‌ನ ಆಳ್ವಿಕೆಯ ವಿಪರ್ಯಾಸ, ಪೂರ್ವ ಯುರೋಪಿನ ಸ್ವತಂತ್ರ ಕಮ್ಯುನಿಸ್ಟ್ ಪಕ್ಷಗಳಿಗೆ ಅಘಾತ ನೀಡಿತಲ್ಲದೆ, ಅದರಿಂದ ಚೇತರಿಸಿಕೊಳ್ಳಲು ಅವಕ್ಕೆ ಆಗಲೇ ಇಲ್ಲ. ಐಎಂಎಫ್ (ಅಂತಾರಾಷ್ಟ್ರೀಯ ವಿತ್ತೀಯನಿ॒ಧಿ) ಮುಂದುಮಾಡಿ ಪ್ರಚಾರ ಮಾಡಿದ ವಿಷಕಾರಿ ನೀತಿಗಳು ಮತ್ತು ಅವುಗಳನ್ನು ಮಾರುಕಟ್ಟೆ ವ್ಯವಸ್ಥೆಯ ಮೂಲಭೂತವಾದಿ ಮುಖಂಡರು ಅಪ್ಪಿಕೊಂಡಿದ್ದರ ಪರಿಣಾಮ, ಅಷ್ಟು ದೊಡ್ಡ ಮಟ್ಟದ ಪ್ರಾಕೃತಿಕ ಸಂಪನ್ಮೂಲಗಳಿದ್ದ ಅರ್ಜೆಂಟೀನಾ ದೇಶವನ್ನು ವಿಶ್ವದ ಮುಂದೆ ಹೇಗೆ ಕೈಯ್ಯೊಡ್ಡುವಂತೆ ಮಾಡಿತು ಎಂಬುದು ಈಗ ಚೆನ್ನಾಗಿ ದಾಖಲಾಗಿದೆ. ವಿಷಪೂರಿತ ಸಿದ್ಧಾಂತದ ಜೊತೆಗೆ ಬೆರೆತ ಭ್ರಾಂತಿ ಯಾವುದೇ ದೇಶವನ್ನು ಹಳ್ಳ ಹಿಡಿಸುವುದಕ್ಕೆ ಬೇಕಾದ ಪರಿಣಾಮಕಾರಿ ಪಾಕ. ಅಭಿವೃದ್ಧಿಯ ಋಣಾತ್ಮಕ ದರ ಮತ್ತು ಹಿಂದೆಂದೂ ಕಾಣದ ಆರ್ಥಿಕ ಹಿಂಜರಿತ, ದೊಡ್ಡ ಮಟ್ಟದ ನಿರುದ್ಯೋಗದ ಜೊತೆಜೊತೆಗೇ ನೆಲೆಸಿರುವ ಏರುತ್ತಿರುವ ಷೇರು ಮಾರುಕಟ್ಟೆ, ಇವುಗಳ ಜೊತೆಗೆ ದನದ ಮಾಂಸವನ್ನು ನಿಷೇಧಿಸುವಂತಹ, ಮುಖಂಡನೊಬ್ಬನ ಐತಿಹಾಸಿಕ ಪ್ರಾಮುಖ್ಯತೆಯನ್ನು ಜಾಹೀರಾತು ಮಾಡಲು ಸೆಂಟ್ರಲ್ ವಿಸ್ತಾರವನ್ನು ಕಟ್ಟುವಂತಹ ಸೈದ್ಧಾಂತಿಕ ಆದ್ಯತೆಗಳು ಅಂತಹ ವಿಪತ್ತಿನ ಮುನ್ಸೂಚನೆಗಳನ್ನು ನೀಡುತ್ತಿವೆ. ಹೀಗಿದ್ದರೂ, ಈ ದೇಶದ ರೈತರು ರಾಷ್ಟ್ರಕ್ಕೆ ಕನ್ನಡಿ ಹಿಡಿದ ಮೇಲಷ್ಟೇ, ನಮ್ಮ ಬಾಗಿಲಿಗೇ ಈಗ ರಾಕ್ಷಸ ಬಂದಿರುವ ವಾಸ್ತವಾಂಶದ ಅರಿವಾಗಿ ನಿದ್ದೆಯಿಂದ ಎದ್ದಿದ್ದೇವೆ.

ಮುಖ್ಯವಾಹಿನಿ ಮಾಧ್ಯಮಗಳು ತೋರಿಸುವ ಚಿತ್ರಪಟಗಳು ಮತ್ತು ಪರಿಣಿತರ ಚರ್ಚೆಗಳ ಮೇಲೆ ನಿಮ್ಮೆಲ್ಲಾ ಬುದ್ಧಿವಂತಿಕೆಯನ್ನು ಠೇವಣಿ ಇಟ್ಟಿಲ್ಲವಾದರೆ, ಚಂದಮಾಮ ಕಥೆಯಲ್ಲಿ ಬರುವ ಹಾಗೆ ನೀವು ಹೀಗೆ ಪ್ರಶ್ನಿಸಬಹುದು: “ಕನ್ನಡಿ, ಕನ್ನಡಿ, ಗೋಡೆಯ ಮೇಲಿನ ಕನ್ನಡಿಯೊಳಗಿನ ಗಂಟೆ, ತೋರಿಸು ಅದರ ಹಿಂದೆ ಯಾರುಂಟು” ಎಂದು. ಮತ್ತಾಗ, ಕನ್ನಡಿ ಈಗ ಅಧಿಕಾರ ನಡೆಸುತ್ತಿರುವ ಆಳುವ ಪಕ್ಷದ ಇಬ್ಬರು ಬಲಾಢ್ಯ ರಾಜಕಾರಣಿಗಳನ್ನು (ಇಬ್ಬರೂ ಗುಜರಾತಿಗಳು) ತೋರಿಸದೆ ಇರಬಹುದು, ಆದರೆ ಬೇರೆ ಎರಡು ಮುಖಗಳು, ಈ ದೇಶದ ಇಬ್ಬರು ಸಿರಿವಂತ ಉದ್ದಿಮೆದಾರರನ್ನು (ಮತ್ತೆ ಅವರಿಬ್ಬರೂ ಗುಜರಾತಿನವರು) ತೋರಿಸಬಹುದು. ಅವರ್‍ಯಾರು ಎಂಬದನ್ನು ಊಹಿಸುವುದು ಕಷ್ಟವೇನಲ್ಲ. ಈ ಇಬ್ಬರೂ ಗುಜರಾತಿನ ಮುಖ್ಯಮಂತ್ರಿ ಆಗಿರುವ ಕಾಲದಿಂದಲೂ ಈಗಿನ ಮುಖಂಡರಿಗೆ ಪರಮಾಪ್ತರು (ಕ್ರೋನಿಗಳು).

ಹೀಗಿದ್ದರೂ, ನಾವು ಮಾತನಾಡುತ್ತಿರುವುದು ಕೇವಲ ’ಕ್ರೋನಿ ಬಂಡವಾಳಶಾಹಿ ವ್ಯವಸ್ಥೆ’ಯ ಬಗ್ಗೆ ಮಾತ್ರ ಅಲ್ಲ. ಶಿಥಿಲಾವಸ್ಥೆಯತ್ತ ಸಾಗಿರುವ ಸಂಸತ್ತಿನಲ್ಲಿ ಆತುರಾತುರವಾಗಿ ಮೂರು ಕೃಷಿ ಕಾಯ್ದೆಗಳು ಮಂಜೂರಾಗಿದ್ದು ಈಗಾಗಲೇ ಅವರು ತಮ್ಮ ಹಾದಿಯಲ್ಲಿ ಮೊಳಗಿಸಿರುವ ಟ್ರೆಂಡ್‌ಗೆ ಭಿನ್ನವಾದದ್ದೇನಿರಲಿಲ್ಲ. ಸರ್ಕಾರ ಇದನ್ನು ಮತ್ತೆ ಮತ್ತೆ ಮಾಡಿದೆ ಆದರೆ ಪ್ರತಿಕ್ರಿಯಿಸುವುದಕ್ಕೆ ಅವಕಾಶವನ್ನೇ ನೀಡದೆ ಮಾಡುವ ಒತ್ತಾಯಪೂರ್ವಕ ದಾಳಿಗಳ ಜೊತೆಗೆ ಈ ಮೊದಲೇ ಈ ಟ್ರೆಂಡ್ ಶುರುವಾಗಿತ್ತು. ಡಿಮಾನೆಟೈಸೇಶನ್ ಎಂಬ ಗೆರಿಲ್ಲಾ ದಾಳಿಯ ಜೊತೆಗೆ, ಸಣ್ಣ ವ್ಯವಹಾರಗಳನ್ನು ಮತ್ತು ಒಕ್ಕೂಟ ವಿತ್ತೀಯ ವ್ಯವಸ್ಥೆಯಲ್ಲಿ ರಾಜ್ಯಗಳನ್ನು ಬಲಗುಂದಿಸಿದ ಜಿಎಸ್‌ಟಿಯ ಅತಿಕೆಟ್ಟ ಅನುಷ್ಠಾನದೊಂದಿಗೆ ಇದು ಪ್ರಾರಂಭವಾಯಿತು. ನಾಲ್ಕು ಗಂಟೆಗಳ ನೋಟಿಸ್ ನೀಡಿ ಭೀಕರ ಲಾಕ್‌ಡೌನ್ ಮಾಡಿ ವಲಸೆ ಕಾರ್ಮಿಕರ ಜೀವಗಳನ್ನು ಮತ್ತು ಜೀವನೋಪಾಯಗಳನ್ನು ಹಿಂಸಾತ್ಮಕವಾಗಿ ಪಲ್ಲಟಗೊಳಿಸುವ ಮೂಲಕ ಇದು ಮುಂದುವರೆಯಿತು. ಗೊಣಗಾಟ, ಸಮಸ್ಯೆ, ಯಾತನೆ ಇವೆಲ್ಲವೂ ಇದ್ದರೂ ಸಾರ್ವಜನಿಕ ಪ್ರತಿಕ್ರಿಯೆ ಇನ್ನೂ ಆಕ್ರೋಶದ್ದಾಗಿರಲಿಲ್ಲ.

ಸರ್ಕಾರ ಕಪ್ಪುಹಣದ ವಿರುದ್ಧ ಹೋರಾಡುತ್ತಿದೆ ಎಂಬ ಕಣ್ಕಟ್ಟು (15 ಲಕ್ಷ ರೂ ಭರವಸೆಯನ್ನು ಮರೆತುಬಿಡಿ) ಮತ್ತು ವ್ಯಾಪಕವಾಗಿ ಹರಡುತ್ತಿದ್ದ ಸಾಂಕ್ರಾಮಿಕ ರೋಗದ ವಿರುದ್ಧ ಧೀರೋದ್ಧಾತವಾಗಿ ಹೇರಿದ ಲಾಕ್‌ಡೌನ್, ನಂಬಿಕಸ್ಥ ಸಾರ್ವಜನಿಕರ ನಡುವೆ ಇನ್ನೂ ಸ್ವಲ್ಪ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿತ್ತು. ಸಂಸದದೀಯ ಪ್ರಜಾಪ್ರಭುತ್ವದ ಸಾರವನ್ನು ಒಳಗಿನಿಂದಲೇ ನಿಸ್ಸಾರಗೊಳಿಸಲು ಈ ಸಾಂಕ್ರಾಮಿಕವನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದನ್ನು ನಮಗೆಲ್ಲಾ ಕಾಣದೆ ಇರಲಾಗಲಿಲ್ಲ. ಯಾವುದೇ ಪೂರ್ವ ಸೂಚನೆ ನೀಡದೆ ಅಥವಾ ಚರ್ಚೆ ನಡೆಸದೆ ಸರಣಿಸರಣಿಯಾಗಿ ಕಾರ್ಮಿಕ ವಿರೋಧಿ ಮತ್ತು ಕಾರ್ಪೊರೆಟ್ ಪರವಾದ ಕಾನೂನುಗಳನ್ನು ಅಕ್ಷರಶಃ ಜಾರಿ ಮಾಡಲಾಯಿತು ಮತ್ತು ಈಗ ಋಣಾತ್ಮಕ ಅಭಿವೃದ್ಧಿಯಿರುವ ಹಾಗೂ ಭರವಸೆ ಕಳೆದುಕೊಂಡಿರುವ ಆರ್ಥಿಕ ವ್ಯವಸ್ಥೆಯಲ್ಲಿ ಮತ್ತು ನಿರುದ್ಯೋಗ ತಾಂಡವವಾಡುತ್ತಾ ಬಹುತೇಕ ಎಲ್ಲರೂ ಉಸಿರಿಗಾಗಿ ಏದುಸಿರುಬಿಡುತ್ತಿರುವ ಸಂದರ್ಭದಲ್ಲಿ, ಸಂಸತ್ತಿನ ಒಳಗಾಗಲೀ ಅಥವಾ ಹೊರಗಾಗಲೀ ಪ್ರತಿರೋಧವನ್ನು ನಿರೀಕ್ಷಿಸದೆ ಈ ಮೂರು ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಲೆಕ್ಕಾಚಾರದ ಹೆಜ್ಜೆಯಿಟ್ಟಿದೆ.

PC : APN Live

ಬಹಳ ಸಂಕ್ಷಿಪ್ತವಾಗಿ ಹೇಳಬಹುದಾದರೆ, ಈ ಮೂರು ಕಾಯ್ದೆಗಳು ಮಂಡಿ ವ್ಯವಸ್ಥೆಯನ್ನು ಮತ್ತು ಕೃಷಿ ಉತ್ಪನ್ನಗಳಿಗೆ ಇರುವ ಕನಿಷ್ಠ ಬೆಂಬಲ ಬೆಲೆಯನ್ನು ತೊಡೆದುಹಾಕಲು ಬಂದಿರುವಂತವು ಮತ್ತು ಮುಖ್ಯವಾಹಿನಿ ಮಾಧ್ಯಮಗಳು ಗಮನಕೊಡದ ಸಾಮಾನ್ಯರ ಹಿತಾಸಕ್ತಿಯ ಅಂಶವೆಂದರೆ ವ್ಯಾಜ್ಯದ ಸಮಯದಲ್ಲಿ ಎಲ್ಲಾ ಸಾಮಾನ್ಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅಕ್ಷರಶಃ ತೆಗೆದುಹಾಕಿ, ಸರ್ಕಾರಕ್ಕೆ ಏಕಪಕ್ಷೀಯ ಅಧಿಕಾರವನ್ನು ಕೊಡುತ್ತಿರುವುದು. ವಿವಾದ-ವ್ಯಾಜ್ಯಗಳನ್ನು ಬಗೆಹರಿಸುವ ಅಧಿಕಾರದಲ್ಲಿ ನ್ಯಾಯಾಲಯದ ಯಾವುದೇ ಪಾತ್ರ ಇಲ್ಲದಂತೆ ಮಾಡಿ ಅದನ್ನು ಕಾರ್ಯಾಂಗಕ್ಕೆ ವರ್ಗಾಯಿಸಲಾಗುತ್ತಿದೆ. ಕಾನೂನಿನಲ್ಲಿ ಸಾಧ್ಯವಾಗುವ ಎಲ್ಲ ಸ್ವಹಿತಾಸಕ್ತಿ ಸಂಘರ್ಷಗಳ ಧೋರಣೆಗಳನ್ನೆಲ್ಲ ಉಲ್ಲಂಘಿಸಿ ಆರೋಪಿತ ಸಂಚುಕೋರನೇ, ಅಪರಾಧದ ಸ್ವ್ವರೂಪವನ್ನು ಇನ್ನುಮುಂದೆ ವಿಚಾರಣೆ ಮಾಡುತ್ತಾನೆ. ನಮ್ಮ ಪ್ರಜಾಸತ್ತಾತ್ಮಕ ಸಂಸತ್ತಿನಲ್ಲಿ ಅಂತಹ ಕಾನೂನನ್ನು ತರಾತುರಿಯಲ್ಲಿ ಮಂಜೂರು ಮಾಡಲಾಗಿದ್ದು, ಇದು ರೈತರ ಹಕ್ಕುಗಳನ್ನಷ್ಟೇ ನಾಶ ಮಾಡಿಲ್ಲ ಬದಲಿಗೆ ಎಲ್ಲ ಭಾರತೀಯ ನಾಗರಿಕರ ಹಕ್ಕುಗಳಿಗೂ ಬೆದರಿಕೆಯೊಡ್ಡಿದೆ.

ರೈತರು ಇದರ ವಿರುದ್ಧ ಎದ್ದು ನಿಂತಿದ್ದಾರೆ. ಅವರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಎದ್ದು ನಿಂತರು ಮತ್ತದು ಈಗ ಭಾರತೀಯ ನಾಗರಿಕರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಜೊತೆಗೆ ವಿಶಾಲವಾಗಿ ಬೆಸೆದುಕೊಂಡಿದೆ. ಧೃತಿಗೆಟ್ಟಿದ್ದ ಭಾರತದ ಬಹುಸಂಖ್ಯಾತ ಬಡ ಜನರು ಇದರಿಂದಾಗಿ ಅವರ ಮುಂದಿರುವ ಅಪಾಯದ ಬಗ್ಗೆ ತ್ವರಿತವಾಗಿ ತಿಳಿದುಕೊಂಡಿದ್ದಾರೆ. ಕೃಷಿಯ ಕಾರ್ಪೊರೇಟಿಕರಣ ಭಾರತದ ಪ್ರಜಾಪ್ರಭುತ್ವದ, ನಮ್ಮ ಸಾಂವಿಧಾನಿಕ ಹಕ್ಕುಗಳ ಕಾರ್ಪೊರೇಟಿಕರಣಕ್ಕೆ ಮುನ್ನುಡಿಯಂತಿದೆ.

ಪ್ರಭುತ್ವದ ಪರವಾದ ಆರ್ಥಿಕತಜ್ಞರು ತಮ್ಮ ಪರಿಣಿತಿಯ ಜ್ಞಾನಕ್ಕೆ ಹೆಸರುವಾಸಿಯಾದವರಲ್ಲ ಬದಲಿಗೆ ಪರಿಭಾಷೆಗಳಿಂದ ತುಂಬಿದ ಅಪ್ರಸ್ತುತವಾದ ಅರ್ಧ ಸತ್ಯಗಳಿಗೆ ಹೆಸರಾದವರು. ಮಿಲ್ಟನ್ ಫ್ರೀಡನ್ ಜನಪ್ರಿಯಗೊಳಿಸಿದ ಅವರ ವಾದದ ಮೂಲಾಧಾರ ಹೀಗಿದೆ: ’ಮುಕ್ತ ಪ್ರಜಾಪ್ರಭುತ್ವಕ್ಕೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಅವಶ್ಯಕತೆ ಇದೆ’ಯೆಂಬ ಮಾತು. ಕೃಷಿ ಕಾನೂನುಗಳು ಈ ಪ್ರಶ್ನೆಯನ್ನು ಎತ್ತಿದೆ: ಕಾರ್ಯಾಂಗವೇ ನ್ಯಾಯಾಧೀಶನಾಗುವುದು ಪ್ರಜಾಪ್ರಭುತ್ವವೇ? ಪ್ರಜಾಪ್ರಭುತ್ವದ ಹೊಸ ವ್ಯಾಖ್ಯಾನವೇ ಇದು? ಮತ್ತೆ, ಸಣ್ಣ ಮತ್ತು ದುರ್ಬಲ ರೈತ, ಅಂಬಾನಿ ಅಥವಾ ಅದಾನಿಯ ಜೊತೆಗೆ ಬೆಲೆ ಚೌಕಾಸಿ ಮಾಡಬೇಕಾಗಿ ಬರುವಂತಹ ಮಾರುಕಟ್ಟೆ ಎಷ್ಟು ಮುಕ್ತವಾದದ್ದು? ಪ್ರ್ರಾಮಾಣಿತ ಆರ್ಥಿಕ ಸಿದ್ಧಾಂತದಲ್ಲಿ ಎಲ್ಲರಿಗೂ ತಿಳಿದಿರುವ ಮಾತೆಂದರೆ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೊಳ್ಳುವವರೆಲ್ಲರೂ ಮತ್ತು ಮಾರಾಟಗಾರರೆಲ್ಲರೂ ನಿಗದಿತ ಬೆಲೆಯನ್ನು ಒಪ್ಪಿಕೊಳ್ಳುವವರಾಗಬೇಕಿದ್ದು ಏಕಸ್ವಾಮ್ಯ ರೂಪಿಸುವವರಾಗಬಾರದು, ಅಲ್ಲದೆ ಹೋದರೆ ಬೆಲೆ ವ್ಯವಸ್ಥೆ ಕೆಲಸ ಮಾಡುವುದಿಲ್ಲ. ಇದರ ಅರ್ಥ ಬೆಲೆಗಳನ್ನು ರೂಪಿಸುವ ಮಾರುಕಟ್ಟೆ ಶಕ್ತಿ ಯಾರಿಗೂ ಇರುವುದಿಲ್ಲ. ಬಹಳ ಮುಖ್ಯವಾದ ಸಾಮಾನ್ಯ ಸಮತೋಲನ ಸಿದ್ಧಾಂತ ಅದಕ್ಕಾಗಿ ನಿರಾಸಕ್ತ ಹೊರಗಿನ ’ಹರಾಜುದಾರ’ನನ್ನು ಸೃಷ್ಟಿಸಬೇಕಾಯ್ತು.

ಮಾರುಕಟ್ಟೆಯ ಸಮತೋಲನ ಬೆಲೆಗಳತ್ತ ತೆರಳಲು ಬೆಲೆಗಳನ್ನು ನಿಗದಿಪಡಿಸುವ ಮತ್ತು ಪರಿಷ್ಕರಿಸುವ ವಾಲ್ಟೇರ್‌ನ ದೇವರಂತೆ ಅವನು. ಎಲ್ಲ ಅಪೂರ್ಣತೆಗಳು ಮತ್ತು ಭ್ರಷ್ಟಾಚಾರಗಳ ಜೊತೆಗೂ, ’ಹರಾಜುದಾರ’ ನಿಗದಿಪಡಿಸುವ ಬೆಲೆಗೆ ಹತ್ತಿರವಾಗಿ ’ಕನಿಷ್ಠ ಬೆಂಬಲ ಬೆಲೆ’ ಇದೆ. ಇದು ಕಾನೂನಿನಲ್ಲಿ ಕೆತ್ತನೆಯಾಗಬೇಕೆಂಬುದು ರೈತರ ಬೇಡಿಕೆ; ಆದರೆ ಇದಕ್ಕೆ ಸರ್ಕಾರ ಒಪ್ಪುತ್ತಿಲ್ಲ ಏಕೆಂದರೆ, ಮುಂದೆಂದೋ ನಡೆಯುವ ಬದಲು ಶೀಘ್ರವಾಗಿಯೇ ಕಾರ್ಪೊರೇಶನ್‌ಗಳು ಬೆಲೆಯನ್ನು ನಿಗದಿಪಡಿಸುವಂತಾಗಬೇಕೆಂಬುದು ಅದರ ಇರಾದೆ. ಇದಕ್ಕಾಗಿ ತಿದ್ದುಪಡಿಗಳಿರಲಿ ಇಲ್ಲವಾಗಲಿ ಸದ್ಯದ ಕಾನೂನುಗಳ ಪ್ರಕಾರ ಮಂಡಿ ವ್ಯವಸ್ಥೆ ನಿಷ್ಕ್ರಿಯವಾಗುತ್ತಿರುವುದು. ದೊಡ್ಡ ಕಾರ್ಪೊರೆಟ್ ಸಂಸ್ಥೆಗಳು ಬಂಡವಾಳ ಹೂಡಿದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ತಥಾಕಥಿತ ಪರಿಣಿತರು ಚರ್ಚಿಸುವ, ಮುಖ್ಯವಾಹಿನಿ ಆರ್ಥಿಕತಜ್ಞರು ಸಂಭ್ರಮಿಸುವ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಇದೆ. ಇದರ ನಡುವೆ ಅಂಬಾನಿಯವರ ರಿಲಾಯನ್ಸ್, ಕೃಷಿ ಉತ್ಪನ್ನಗಳ ಚಿಲ್ಲರೆ ಮಾರುಕಟ್ಟೆಗೆ ತನ್ನ ಹೆಜ್ಜೆಯನ್ನಿಡಲು ಹವಣಿಸಿದೆ ಮತ್ತು ಜಿಯೋ ಎಲ್ಲ ಕಾರ್ಪೊರೆಟ್ ಅಂತರ್ಜಾಲದ ದೊಡ್ಡ ಖರೀದಿಯನ್ನು ನಿಯಂತ್ರಿಸಲಿದೆ. ಇದೇ ಸಮಯದಲ್ಲಿ ಅದಾನಿ, ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡುವ ಬೃಹತ್ ಶೈತ್ಯಾಗಾರಗಳು ಹಾಗು ಕಾರ್ಪೊರೆಟ್ ಸಂಪರ್ಕ ವ್ಯವಸ್ಥೆಯನ್ನು ವಿಸ್ತರಿಸುವುದರಲ್ಲಿ ಆಗಲೇ ಕಾರ್ಯನಿರತರಾಗಿದ್ದಾರೆ. 5ಜಿ ಜೊತೆಗೆ ಬರುವ ಡಿಜಿಟಲ್ ಬಂಡವಾಳಶಾಹಿಯನ್ನು ಭಾರತದಲ್ಲಿ ಜಿಯೋ ನಿಯಂತ್ರಿಸಲಿದೆ ಎಂದು ಸರ್ಕಾರ ಉತ್ಸುಕವಾಗಿರುವುದು ತಿಳಿಯುವಂತಾದ್ದೇ. ಇದಕ್ಕೆ ಏನಾದರೂ ಪರಿಹಾರ, ಬದಲಿ ಮಾರ್ಗ ಸಾಧ್ಯವಿದೆಯೇ?

ಈ ನಿರಾಶಾವಾದ ತಳೆಯುವುದರಲ್ಲಿ ನಾವೆಷ್ಟು ತಪ್ಪು ಎಂಬುದನ್ನು ರೈತರು ನಮಗೆ ತೋರಿಸುತ್ತಿದ್ದಾರೆ. ಸಾಮಾನ್ಯ ಜನರು ತಮ್ಮೆಲ್ಲಾ ಮಾಮೂಲಿ ದೌರ್ಬಲ್ಯಗಳನ್ನು ಬದಿಗಿಟ್ಟು ಒಂದಾದರೆ ಮತ್ತು ಸಾಮಾನ್ಯವಾಗಿ ಬಡ ಜನರ ಪರವಾದ ಆಭಿವೃದ್ಧಿ ಪಥದ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹೊಂದಿರದ ಅಥವಾ ಯಾಂತ್ರಿಕ ಕಾರ್ಪೊರೆಟ್ ಕೃಷಿಯ ಮೋಸವನ್ನು ಭವಿಷ್ಯದ ಎಲ್ ದೊರ್‍ಯಾದೋ (ಮಿಥ್ಯ ನಗರಿ) ಎಂದು ಕರೆಯಲು ಧೈರ್ಯ ತೋರದ ವಿರೋಧ ಪಕ್ಷಗಳನ್ನು ಈ ಒಂದು ಸಮಸ್ಯೆಯ ದೃಷ್ಟಿಯಿಂದಲಾದರೂ ಒಗ್ಗೂಡುವಂತೆ ಮಾಡಿದರೆ, ಸಂಗತಿಗಳು ಬದಲಾದರೂ ಸಿರಿವಂತ ಅಧಿಕಾರಸ್ಥರ ಮತ್ತು ಅವರ ಚಾಕರಿಗಳಿಗೆ ಬೇಕಾದಂತೆಯೇ ಬದಲಾಗುವುದಿಲ್ಲ. ಈ ಬಾರಿ ರೈತರ ದೃಢ ಪ್ರತಿರೋಧ ಬಹಳ ಅಗತ್ಯವಾದ ಸನ್ನಿವೇಶಗಳನ್ನು ಸೃಷ್ಟಿಸಿದೆ. ದಿಟ್ಟತನದಿಂದ ಅವರ ಜೊತೆಗೆ ಸೇರಿಕೊಳ್ಳುವುದು ಈಗ ನಮಗೆ ಬಿಟ್ಟಿರುವ ವಿಷಯವಾಗಿದೆ. ಇದೇ ಸಮಯದಲ್ಲಿ ಒಂದು ವಿವೇಕದ ಮಾತು ನೆನಪಿಗೆ ಬರುತ್ತದೆ:

“ಪುರುಷರು (ಮತ್ತು ಮಹಿಳೆಯರು) ಇತಿಹಾಸವನ್ನು ಸೃಷ್ಟಿಸುತ್ತಾರೆ ಆದರೆ ಅವರೇ ಸೃಷ್ಟಿಸುವ ಸನ್ನಿವೇಶಗಳಲ್ಲಿಯೇ ಅದು ಘಟಿಸಬೇಕಿಲ್ಲ (ಪ್ಲೆಖನೋವ್)”. ಈಗ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಅಜೇಯ ಶತ್ರುವಿನಂತೆ ಕಾಣುತ್ತಿದ್ದವನ್ನು ಸೋಲಿಸಲು ಆಫ್ರಿಕನ್ ಗಾದೆಯಲ್ಲಿರುವಂತೆ ಕುರಿಗಳ ಸೇನೆಯನ್ನು ಸಿಂಹ ಈಗ ಇನ್ನೂ ಮುನ್ನಡೆಸಲು ಸಾಧ್ಯವಿದೆ.

  • ಪ್ರೊ. ಅಮಿತ್ ಭಾದುರಿ

(ಕನ್ನಡಕ್ಕೆ: ಗುರುಪ್ರಸಾದ್ ಡಿ. ಎನ್)

ಭಾದುರಿ ಅವರು ಪ್ರಸ್ತುತ ಇಟಲಿಯ ಪಾವಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಸಾಮಾಜಿಕ ಅಭಿವೃದ್ಧಿ ಕೌನ್ಸಿಲ್‌ನಲ್ಲಿ ಅತಿಥಿ ಪ್ರಾಧ್ಯಾಪಕರು.


ಇದನ್ನೂ ಓದಿ: ಅಯೋಧ್ಯೆ: ಗಣರಾಜ್ಯೋತ್ಸವದಂದು ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...