ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಮಧ್ಯೆ, ಪ್ರಧಾನಿ ಮೋದಿ ಗುಜರಾತ್ನ ಕಚ್ನಲ್ಲಿನ ರೈತರ ನಿಯೋಗದೊಂದಿಗೆ ಭೇಟಿಯಾಗಿದ್ದಾರೆ ಎಂದು ಮಾಧ್ಯಮದಲ್ಲಿ ಸುದ್ದಿಯಾಗಿದ್ದ ವರದಿಯ ಸತ್ಯಾಸತ್ಯತೆ ಹೊರಬಿದ್ದಿದೆ. ವಾಸ್ತವದಲ್ಲಿ ಪ್ರಧಾನಿಯು ಬಿಜೆಪಿ ಕಾರ್ಯಕರ್ತರ ನಿಯೋಗವನ್ನು ಭೇಟಿ ಮಾಡಿದ್ದು ಅದನ್ನು ಮಾಧ್ಯಮಗಳು ರೈತರೊಂದಿಗಿನ ಭೇಟಿಯೆಂದು ಬಿಂಬಿಸಿದ್ದಾರೆ ಎನ್ನಲಾಗಿದೆ.
“ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಕಚ್ಛ್ನ ಕೆಲ ರೈತರ ಜತೆ ಮಾತುಕತೆ ನಡೆಸಿ ಕೃಷಿ ಕಾನೂನಿನ ಕುರಿತಂತೆ ಅವರಿಗೆ ಮನವರಿಕೆ ಮಾಡಿ ಅವರ ಸಂಶಯಗಳನ್ನು ನಿವಾರಿಸಿದರು” ಎಂದು ಮಾಧ್ಯಮಗಲ್ಲಿ ವರದಿಯಾಗಿದ್ದವು.
ಆದರೆ ಈ ವರದಿಗಳು ಸುಳ್ಳಾಗಿದ್ದು, ಇದು ಕೇವಲ ರೈತ ಪ್ರತಿಭಟನೆಯಿಂದ ಜನರ ಗಮನ ಬೇರೆಡೆ ಸೆಳೆಯುವ ತಂತ್ರಗಾರಿಕೆಯಾಗಿತ್ತು ಹಾಗೂ ಪ್ರಧಾನಿಗೆ ರೈತರ ಪ್ರತಿಭಟನೆ ಕುರಿತು ಕಳವಳವಿದೆ ಎಂದು ತೋರಿಸುವ ಯತ್ನವಾಗಿತ್ತು ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ. ಈ ಬಗ್ಗೆ ತನಿಖಾ ಲೇಖನ ಪ್ರಕಟಸಿರುವ ಪತ್ರಿಕೆಯು ಪ್ರಧಾನಿ ಕಚ್ಛ್ ಗೆ ಭೇಟಿ ನೀಡಿದಾಗ ಅವರು ಮಾತುಕತೆ ನಡೆಸಿದ ರೈತರು ವಾಸ್ತವವಾಗಿ ರೈತರಲ್ಲ ಬದಲು ಸಿಖ್ ಸಮುದಾಯಕ್ಕೆ ಸೇರಿದ ಬಿಜೆಪಿ ಕಾರ್ಯಕರ್ತರು ಎಂದು ತಿಳಿದು ಬಂದಿದೆ ಎಂದಿದೆ.
ಇದನ್ನೂ ಓದಿ: ರೈತರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆಪ್ ಮುಖಂಡರು
ರೈತರೆಂದು ಕರೆಯಲ್ಪಡುವ ನಿಯೋಗವನ್ನು ಮುನ್ನಡೆಸಿದ ವ್ಯಕ್ತಿ ರಾಜು ಭಾಯಿ ಸರ್ದಾರ್ ಕಚ್ ವಲಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದು, ಅವರು ಡಿಸೆಂಬರ್ 15 ರಂದು ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿದ ಚಿತ್ರದಲ್ಲಿ ಪ್ರಧಾನಿ ಎದುರು ಕೇಸರಿ ರುಮಾಲು ಧರಿಸಿ ಕುಳಿತಿರುವುದನ್ನು ಕಾಣಬಹುದು.
Gujarat: PM Narendra Modi met people from various groups in Kutch, today.
PM Narendra Modi attended the foundation stone laying ceremony of development projects in Kutch today. pic.twitter.com/BvRLk57gsO
— ANI (@ANI) December 15, 2020
ಗುಜರಾತ್ ಮುಖ್ಯಮಂತ್ರಿಯ ಟ್ವಿಟ್ಟರ್ ಹ್ಯಾಂಡಲ್ ಚಿತ್ರವನ್ನು ಟ್ವೀಟ್ ಮಾಡುವಾಗ, “ಕರಕುಶಲ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಸ್ಥಳೀಯ ಕಚ್ಚಿ ಮಹಿಳೆಯರ ಗುಂಪುಗಳನ್ನು ಮತ್ತು ಕಚ್ನಲ್ಲಿ ನೆಲೆ ನಿಂತಿರುವ ’ಸಿಖ್ ರೈತ’ರನ್ನು ಭೇಟಿಯಾದರು” ಎಂದು ಹೇಳಿದೆ. ಅಲ್ಲದೆ ಸ್ವತಃ ರಾಜು ಭಾಯಿ ಕೂಡಾ ತಾನು ರೈತರ ನಿಯೋಗವನ್ನು ಮುನ್ನಡೆಸಿದೆ ಎಂದು ಪ್ರತಿಪಾದಿಸಿದ್ದಾರೆ.
During his visit to Kutch, PM Shri @narendramodi, accompanied by CM Shri @vijayrupanibjp, met and interacted with various local groups including Kutchi women active in handicraft activities as well as Sikh farmers who are settled in Kutch. pic.twitter.com/fRIIpYA7oS
— CMO Gujarat (@CMOGuj) December 15, 2020
ಇದನ್ನೂ ಓದಿ: ರೈತರನ್ನು ರಾಷ್ಟ್ರ ವಿರೋಧಿಗಳಂತೆ ಬಿಂಬಿಸಬೇಡಿ: ಮಾಧ್ಯಮಗಳಿಗೆ ಎಡಿಟರ್ಸ್ ಗಿಲ್ಡ್ ಸಲಹೆ
ಆದರೆ ಆಜ್ತಕ್ ಟಿವಿ ನ್ಯೂಸ್ ಚಾನೆಲ್ನ ವರದಿಗಾರ್ತಿ, ಸಭೆಯಲ್ಲಿ ಚರ್ಚಿಸಲಾದ ವಿಷಯದ ಬಗ್ಗೆ ವ್ಯಕ್ತಿಯೊಬ್ಬರೊಂದಿಗೆ ಪ್ರಶ್ನಿಸಿದಾಗ, ಗುರುದ್ವಾರದ ಬಗ್ಗೆ ಚರ್ಚೆಯನ್ನು ಕೇಂದ್ರೀಕರಿಸಲಾಗಿತ್ತು ಎಂದು ಹೇಳಿದ್ದಾರೆ.
BJP Propaganda alert ⚠️
Koi sharam h ya nhi Jhasaram tumko ya Sharam ko bhi privatise kardiya hoga tumne to kisi tucchi company ko?
You are a PM of this great nation and the nation ashamed of you such a loser you are Narendra Modi
pls go & kwil yourself#CongressForProgress pic.twitter.com/dhRCuuo5fi
— Mechanophilia (@51Mechanophilia) December 17, 2020
ಈ ನಡುವೆ, ಪ್ರಧಾನಿ ಮೋದಿ ರೈತರು ಎಂದು ಕರೆಯಲ್ಪಡುವವರೊಂದಿಗೆ ಸಭೆ ನಡೆಸುತ್ತಿದ್ದ ಅದೇ ಸಮಯದಲ್ಲಿ, ನಿಜವಾದ ರೈತರ ಗುಂಪು ಕೃಷಿ ಕಾನೂನುಗಳ ವಿರುದ್ಧ ಕಚ್ನಲ್ಲಿ ಪ್ರತಿಭಟನೆ ನಡೆಸುತ್ತಿತ್ತು. ಆದರೆ ಪ್ರತಿಭಟನಾ ನಿರತ ರೈತರ ಸುದ್ದಿಯನ್ನು ಗುಜರಾತಿ ಮತ್ತು ರಾಷ್ಟ್ರೀಯ ಮಾಧ್ಯಮಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು ಎನ್ನಲಾಗಿದೆ.
ಇದನ್ನೂ ಓದಿ: ಭಯೋತ್ಪಾದಕರು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ, ಆದರೆ ಸರ್ಕಾರ ರೈತರನ್ನು ಭಯೋತ್ಪಾಕರಂತೆ ನೋಡುತ್ತಿದೆ: ಶಿವಸೇನೆ ಕಿಡಿ
ಕಚ್ ರಾಜಕೀಯವನ್ನು ತಿಳಿದಿರುವವರು ಹೇಳುವಂತೆ, ರಾಜು ಭಾಯ್ ಸರ್ದಾರ್ ಅವರ ನಿಜವಾದ ಹೆಸರು ಜುಗರಾಜ್ ಸಿಂಗ್. ಅವರು ನಾರಾ ಗ್ರಾಮಕ್ಕೆ ಸೇರಿದವರಾಗಿದ್ದು, ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಬಿಜೆಪಿಯ ವಲಯ ಕಾರ್ಯದರ್ಶಿಯಾಗುವ ಮೊದಲು ಅವರು ಬಿಜೆಪಿ ಬೆಂಬಲದೊಂದಿಗೆ ನಾರಾದ ಸರ್ಪಂಚ್ ಆಗಿ ಆಯ್ಕೆಯಾಗಿದ್ದರು.
ಸಿಖ್ ಸಮುದಾಯದ ಹೆಚ್ಚಿನ ಜನಸಂಖ್ಯೆಯಿಂದಾಗಿ ನಾರಾವನ್ನು ಕಚ್ ಪ್ರದೇಶದ ಮಿನಿ-ಪಂಜಾಬ್ ಎಂದು ಕರೆಯಲಾಗುತ್ತದೆ. ಈ ಪ್ರದೇಶದ ನಾರಾ ಮತ್ತು ಕೊಠಾರಾ ಗ್ರಾಮಗಳಲ್ಲಿ ಸಿಖ್ ಸಮುದಾಯವು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.
ಅಲ್ಲದೆ ರಾಜು ಭಾಯ್ ”ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 15 ಅಂಶಗಳ ಕಾರ್ಯಕ್ರಮ ಸಮಿತಿ”ಯ ಸದಸ್ಯರಾಗಿದ್ದಾರೆ ಎಂದು ಅವರ ವೆಬ್ಸೈಟ್ ಹೇಳಿಕೊಂಡಿದೆ. ಪ್ರಸ್ತುತ ಲಖಪತ್ ಸರೈನಲ್ಲಿ 18 ಕೊಠಡಿಗಳ ರೆಸಾರ್ಟ್ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವ ರಾಜು ಭಾಯ್ ಸರ್ದಾರ್ ಲಖಪತ್ ತಾಲ್ಲೂಕು ಗುರುದ್ವಾರದ ಮುಖ್ಯಸ್ಥರಾಗಿದ್ದಾರೆ.
ಇದನ್ನೂ ಓದಿ: BJP ಮತ್ತು RSS ಸಿಖ್ ಜನಾಂಗವನ್ನು ಮುಗಿಸಲು ಪ್ರಯತ್ನಿಸುತ್ತಿದೆ: ಸಿಖ್ ಧರ್ಮಗುರುವಿನ ಆತ್ಮಹತ್ಯಾ ಟಿಪ್ಪಣಿ