Homeಕರ್ನಾಟಕಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

ಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

- Advertisement -
- Advertisement -

ಇದುವರೆಗೂ ಸಿದ್ದರಾಮಯ್ಯನವರು ಮತ್ತು ಮೈಸೂರಿನ ದಳಪತಿಗಳ ನಡುವೆ ದೋಸ್ತಿ ಕುದುರಿಲ್ಲ. ಸಮ್ಮಿಶ್ರ ಸರ್ಕಾರವೇ ಈ ಎರಡು ಪಕ್ಷಗಳ ಮೈತ್ರಿಯಿಂದ ರಚನೆಯಾದರೂ, ಮೈಸೂರಿನಲ್ಲಿ ಅಷ್ಟು ಸುಲಭವಿರಲಿಲ್ಲ. ಚಾಮುಂಡೇಶ್ವರಿಯ ಸೋಲು ಸಿದ್ದರಾಮಯ್ಯನವರಿಗೆ ಯಾವ ಮಟ್ಟಿಗಿನ ಬೇಸರ/ಅಸಮಾಧಾನ ಮೂಡಿಸಿದೆಯೆಂದರೆ, 2 ತಿಂಗಳ ಕೆಳಗೆ ಮೈಸೂರಿನಲ್ಲಿ ಮಾತನಾಡಿ ‘ಪ್ರತೀ ವರ್ಷ ಇಲ್ಲಿ ಸಾಮೂಹಿಕ ಮದುವೆ ಏರ್ಪಡಿಸುತ್ತಿದ್ದೆ. ನಾನು ಹೇಳಿದರೆ ಕೆಲವರು ದುಡ್ಡೂ ಕೊಡೋರು. ಈ ವರ್ಷದಿಂದ ಇಲ್ಲಿ ಮಾಡಿಸಲ್ಲ. ಮೈಸೂರಿನಿಂದ ನನ್ನನ್ನು ಓಡಿಸಿದ್ದೀರಿ. ಹಾಗಾಗಿ ಬಾದಾಮಿಯಲ್ಲೇ ಮಾಡಿಸುತ್ತೇನೆ’ ಎಂದಿದ್ದರು. ಒಕ್ಕಲಿಗ ಮತಗಳ ಧ್ರುವೀಕರಣದ ಜೊತೆಗೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದದ ಮೂಲಕ ಸಿದ್ದರಾಮಯ್ಯನವರಿಗೆ ತವರಿನಲ್ಲಿ ಕೊಟ್ಟ ಪೆಟ್ಟು ಆ ಪ್ರಮಾಣಕ್ಕೆ ಇತ್ತು.

ಆದರೂ ಮೈಸೂರು ಲೋಕಸಭಾ ಕ್ಷೇತ್ರ ಬೇಕೆ ಬೇಕೆಂದು ಪಟ್ಟು ಹಿಡಿದು, ಹಾಲಿ ಸಂಸದರಿದ್ದ ತುಮಕೂರನ್ನೂ ಬಿಟ್ಟುಕೊಟ್ಟು ಅದನ್ನು ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಮೈಸೂರಿನ ಮೇಲೆ ಏನೇ ಪಟ್ಟಿದ್ದರೂ, ಅವರು ದೇವೇಗೌಡರನ್ನು ಒಲಿಸಿಕೊಳ್ಳದೇ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕಳೆದ ಎರಡು ಚುನಾವಣೆಗಳ ಅಂಕಗಣಿತ ನೋಡಿದರೆ ಅದು ಸುಸ್ಪಷ್ಟ.

ಇದು ಚೆನ್ನಾಗಿ ಗೊತ್ತಿದ್ದ ಪ್ರತಾಪಸಿಂಹ ಕಳೆದ ಸಾರಿ ಆಡಿದ ಆಟವನ್ನೇ ಈ ಸಾರಿಯೂ ಆಡಲು ಶುರು ಮಾಡಿದ್ದಾರೆ. ಆಗ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ಅವರು ಅಗತ್ಯವಿರಲಿ ಇಲ್ಲದಿರಲು ದೇವೇಗೌಡರನ್ನು ಟೀಕೆ ಮಾಡುವ ಕೆಲಸವನ್ನು ಮಾಡುತ್ತಲೇ ಇದ್ದು, ಒಂದು ನಕಾರಾತ್ಮಕ ಸಂದೇಶವನ್ನು ಕೊಟ್ಟಿದ್ದರು. ಹಾಗಾಗಿಯೇ ಚಿಕ್ಕಮಗಳೂರು ಮೂಲದ, ಬೆಂಗಳೂರಿನಲ್ಲಿ ಪತ್ರಕರ್ತನಾಗಿದ್ದ ಸಿಂಹ, ಪ್ರತಾಪ್ ಸಿಂಹ ಗೌಡನಾಗಿ ಮೈಸೂರಿಗೆ ಎಂಟ್ರಿ ಕೊಟ್ಟಿದ್ದು. ದೇವೇಗೌಡರ ಬಗ್ಗೆ ಹೊಗಳುತ್ತಾ, ಎಚ್.ವಿಶ್ವನಾಥ್ ಅವರು ಆ ರೀತಿ ಗೌಡರ ಬಗ್ಗೆ ಮಾತನಾಡುವುದನ್ನು ತಾನು ಒಪ್ಪುವುದಿಲ್ಲವೆಂದು ಹೇಳುತ್ತಾ ಪ್ರಚಾರ ಮಾಡಿದ್ದರು.

ಸ್ಪಷ್ಟವಾಗಿರುವ ಅಂಕಗಣಿತ
ಅದಕ್ಕೆ ಸರಿಯಾಗಿ ಜೆಡಿಎಸ್ ಅಂತಹ ದೊಡ್ಡ ಹೆಸರಲ್ಲದ ಚಂದ್ರಶೇಖರಯ್ಯನವರನ್ನು ಕಣಕ್ಕಿಳಿಸಿ ಪ್ರತಾಪ್ ಸಿಂಹರ ಪರವಾಗಿ ಒಳ ಸಂದೇಶ ಕೊಟ್ಟಿದ್ದರು. ಇವೆಲ್ಲದರ ಜೊತೆಗೆ ಇಡೀ ದೇಶದಲ್ಲಿ ಆಗ ಇದ್ದ ಮೋದಿ ಅಲೆಯ ಲಾಭವನ್ನು ಪಡೆದುಕೊಂಡರೂ ಪ್ರತಾಪ್ ಸಿಂಹ ಗೆದ್ದಿದ್ದು 31 ಸಾವಿರ ಮತಗಳಲ್ಲಿ. 2009ರಲ್ಲಿ ಎಚ್.ವಿಶ್ವನಾಥ್ 3.54 ಲಕ್ಷ ಮತ ಪಡೆದುಕೊಂಡಿದ್ದರೆ, ಬಿಜೆಪಿಯ ವಿಜಯಶಂಕರ್ 3.47 ಲಕ್ಷ ಪಡೆದುಕೊಂಡಿದ್ದರು. ಕೊಡಗಿನ ಜೀವಿಜಯ ಜನತಾದಳದಿಂದ ಸ್ಪರ್ಧಿಸಿ 2.16 ಲಕ್ಷ ಪಡೆದುಕೊಂಡಿದ್ದರು. ಅದಕ್ಕೆ ಹಿಂದಿನ ಸಾಲಿನಲ್ಲಿ ಜೆಡಿಎಸ್‍ನ ಮತಪ್ರಮಾಣದಲ್ಲಿ ಶೇ.9.8ರಷ್ಟು ನಷ್ಟವಾಗಿ ಮಿಕ್ಕೆರಡೂ ಪಕ್ಷಗಳು ಅದರ ಲಾಭ ಪಡೆದುಕೊಂಡಿದ್ದರೂ, ಜೆಡಿಎಸ್‍ಗೆ 2.16 ಲಕ್ಷ ಮತ ಇದ್ದೇ ಇತ್ತು.

2014ರಲ್ಲಿ ಒಂದೂ ಮುಕ್ಕಾಲು ಲಕ್ಷ ಹೆಚ್ಚು ಮತಗಳು ಚಲಾವಣೆಯಾದವು. ದೇವೇಗೌಡರು ಪ್ರತಾಪಸಿಂಹರಿಗೆ ಬೆಂಬಲಿಸಿದದರೂ, ಜೆಡಿಎಸ್‍ನ ಡಮ್ಮಿ ಕ್ಯಾಂಡಿಡೇಟ್‍ಗೆ 1.38 ಲಕ್ಷ ಮತಗಳು ಬಂದವು. ಕಾಂಗ್ರೆಸ್‍ನ ಎಚ್.ವಿಶ್ವನಾಥ್ ಹಿಂದಿಗಿಂತ 1 ಲಕ್ಷ 20 ಸಾವಿರ ಹೆಚ್ಚು ಮತ ಪಡೆದುಕೊಂಡರೂ ಸೋತರು. ಇವೆಲ್ಲವೂ ದೇವೇಗೌಡರ ಕಾರಣಕ್ಕೆ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಆದರೂ ಸಂದರ್ಭದ ಅನಿವಾರ್ಯತೆಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ‘ಗೌಡರ ವಿರೋಧಿ’ ವಿಶ್ವನಾಥ್ ಜೆಡಿಎಸ್ ಸೇರಿ ಅದರ ರಾಜ್ಯಾಧ್ಯಕ್ಷರಾಗಿದ್ದಾರೆ.
ಈ ಚುನಾವಣೆಯ ಹೊತ್ತಿಗೆ ಒಕ್ಕಲಿಗರ ಮತ ಧ್ರುವೀಕರಣದಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತಷ್ಟು ಪ್ರಬಲವಾಗಿದೆ. ಕಾಂಗ್ರೆಸ್‍ಗೆ ಒಬ್ಬ ಎಂಎಲ್‍ಎ ಇದ್ದರೆ, ಜೆಡಿಎಸ್‍ಗೆ ಮೂವರು ಎಂಎಲ್‍ಎಗಳಿದ್ದಾರೆ. ಅಂದರೆ, ಇಂದಿನ ಮತದಾರರ ಸಂಖ್ಯೆಗೆ ತಾಳೆ ಹಾಕುವುದಾದರೆ ಜೆಡಿಎಸ್ ಕನಿಷ್ಠ 3 ಲಕ್ಷ ಓಟುಗಳನ್ನು ಹೊಂದಿದೆ. ಜೊತೆಗೆ ಇದೊಂಥರಾ ಟ್ರಾನ್ಸಫರಬಲ್ ಮತಗಳು. ಹೀಗಾಗಿ ಇಲ್ಲಿ ದೇವೇಗೌಡರೇ ನಿರ್ಣಾಯಕ. ಅವರ ನೆರವಿಲ್ಲದೇ ಸಿದ್ದರಾಮಯ್ಯನವರು ವಿಜಯಶಂಕರ್‍ರನ್ನು ಗೆಲ್ಲಿಸಿಕೊಳ್ಳುವುದು ಸುಲಭವಿಲ್ಲ.

ಮೈತ್ರಿ ಧರ್ಮ ಪಾಲನೆಯಾದರೆ, ಪ್ರತಾಪ್‍ಸಿಂಹ 2 ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಮುಂದಿನ ಒಂದು ವಾರದಲ್ಲೇ ದೋಸ್ತಿಗಳ ನಡುವಿನ ಬಂಧ ಎಷ್ಟು ಗಟ್ಟಿಯಿದೆ ಎಂಬುದು ತೀರ್ಮಾನವಾಗಿಬಿಡುವುದರಿಂದ, ಮೈಸೂರು ಕ್ಷೇತ್ರದ ಫಲಿತಾಂಶವೂ ಈ ವಾರದಲ್ಲೇ ಅಂತಿಮಗೊಂಡುಬಿಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...