Homeಕರ್ನಾಟಕಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

ಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

- Advertisement -
- Advertisement -

ಇದುವರೆಗೂ ಸಿದ್ದರಾಮಯ್ಯನವರು ಮತ್ತು ಮೈಸೂರಿನ ದಳಪತಿಗಳ ನಡುವೆ ದೋಸ್ತಿ ಕುದುರಿಲ್ಲ. ಸಮ್ಮಿಶ್ರ ಸರ್ಕಾರವೇ ಈ ಎರಡು ಪಕ್ಷಗಳ ಮೈತ್ರಿಯಿಂದ ರಚನೆಯಾದರೂ, ಮೈಸೂರಿನಲ್ಲಿ ಅಷ್ಟು ಸುಲಭವಿರಲಿಲ್ಲ. ಚಾಮುಂಡೇಶ್ವರಿಯ ಸೋಲು ಸಿದ್ದರಾಮಯ್ಯನವರಿಗೆ ಯಾವ ಮಟ್ಟಿಗಿನ ಬೇಸರ/ಅಸಮಾಧಾನ ಮೂಡಿಸಿದೆಯೆಂದರೆ, 2 ತಿಂಗಳ ಕೆಳಗೆ ಮೈಸೂರಿನಲ್ಲಿ ಮಾತನಾಡಿ ‘ಪ್ರತೀ ವರ್ಷ ಇಲ್ಲಿ ಸಾಮೂಹಿಕ ಮದುವೆ ಏರ್ಪಡಿಸುತ್ತಿದ್ದೆ. ನಾನು ಹೇಳಿದರೆ ಕೆಲವರು ದುಡ್ಡೂ ಕೊಡೋರು. ಈ ವರ್ಷದಿಂದ ಇಲ್ಲಿ ಮಾಡಿಸಲ್ಲ. ಮೈಸೂರಿನಿಂದ ನನ್ನನ್ನು ಓಡಿಸಿದ್ದೀರಿ. ಹಾಗಾಗಿ ಬಾದಾಮಿಯಲ್ಲೇ ಮಾಡಿಸುತ್ತೇನೆ’ ಎಂದಿದ್ದರು. ಒಕ್ಕಲಿಗ ಮತಗಳ ಧ್ರುವೀಕರಣದ ಜೊತೆಗೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದದ ಮೂಲಕ ಸಿದ್ದರಾಮಯ್ಯನವರಿಗೆ ತವರಿನಲ್ಲಿ ಕೊಟ್ಟ ಪೆಟ್ಟು ಆ ಪ್ರಮಾಣಕ್ಕೆ ಇತ್ತು.

ಆದರೂ ಮೈಸೂರು ಲೋಕಸಭಾ ಕ್ಷೇತ್ರ ಬೇಕೆ ಬೇಕೆಂದು ಪಟ್ಟು ಹಿಡಿದು, ಹಾಲಿ ಸಂಸದರಿದ್ದ ತುಮಕೂರನ್ನೂ ಬಿಟ್ಟುಕೊಟ್ಟು ಅದನ್ನು ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಮೈಸೂರಿನ ಮೇಲೆ ಏನೇ ಪಟ್ಟಿದ್ದರೂ, ಅವರು ದೇವೇಗೌಡರನ್ನು ಒಲಿಸಿಕೊಳ್ಳದೇ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕಳೆದ ಎರಡು ಚುನಾವಣೆಗಳ ಅಂಕಗಣಿತ ನೋಡಿದರೆ ಅದು ಸುಸ್ಪಷ್ಟ.

ಇದು ಚೆನ್ನಾಗಿ ಗೊತ್ತಿದ್ದ ಪ್ರತಾಪಸಿಂಹ ಕಳೆದ ಸಾರಿ ಆಡಿದ ಆಟವನ್ನೇ ಈ ಸಾರಿಯೂ ಆಡಲು ಶುರು ಮಾಡಿದ್ದಾರೆ. ಆಗ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ಅವರು ಅಗತ್ಯವಿರಲಿ ಇಲ್ಲದಿರಲು ದೇವೇಗೌಡರನ್ನು ಟೀಕೆ ಮಾಡುವ ಕೆಲಸವನ್ನು ಮಾಡುತ್ತಲೇ ಇದ್ದು, ಒಂದು ನಕಾರಾತ್ಮಕ ಸಂದೇಶವನ್ನು ಕೊಟ್ಟಿದ್ದರು. ಹಾಗಾಗಿಯೇ ಚಿಕ್ಕಮಗಳೂರು ಮೂಲದ, ಬೆಂಗಳೂರಿನಲ್ಲಿ ಪತ್ರಕರ್ತನಾಗಿದ್ದ ಸಿಂಹ, ಪ್ರತಾಪ್ ಸಿಂಹ ಗೌಡನಾಗಿ ಮೈಸೂರಿಗೆ ಎಂಟ್ರಿ ಕೊಟ್ಟಿದ್ದು. ದೇವೇಗೌಡರ ಬಗ್ಗೆ ಹೊಗಳುತ್ತಾ, ಎಚ್.ವಿಶ್ವನಾಥ್ ಅವರು ಆ ರೀತಿ ಗೌಡರ ಬಗ್ಗೆ ಮಾತನಾಡುವುದನ್ನು ತಾನು ಒಪ್ಪುವುದಿಲ್ಲವೆಂದು ಹೇಳುತ್ತಾ ಪ್ರಚಾರ ಮಾಡಿದ್ದರು.

ಸ್ಪಷ್ಟವಾಗಿರುವ ಅಂಕಗಣಿತ
ಅದಕ್ಕೆ ಸರಿಯಾಗಿ ಜೆಡಿಎಸ್ ಅಂತಹ ದೊಡ್ಡ ಹೆಸರಲ್ಲದ ಚಂದ್ರಶೇಖರಯ್ಯನವರನ್ನು ಕಣಕ್ಕಿಳಿಸಿ ಪ್ರತಾಪ್ ಸಿಂಹರ ಪರವಾಗಿ ಒಳ ಸಂದೇಶ ಕೊಟ್ಟಿದ್ದರು. ಇವೆಲ್ಲದರ ಜೊತೆಗೆ ಇಡೀ ದೇಶದಲ್ಲಿ ಆಗ ಇದ್ದ ಮೋದಿ ಅಲೆಯ ಲಾಭವನ್ನು ಪಡೆದುಕೊಂಡರೂ ಪ್ರತಾಪ್ ಸಿಂಹ ಗೆದ್ದಿದ್ದು 31 ಸಾವಿರ ಮತಗಳಲ್ಲಿ. 2009ರಲ್ಲಿ ಎಚ್.ವಿಶ್ವನಾಥ್ 3.54 ಲಕ್ಷ ಮತ ಪಡೆದುಕೊಂಡಿದ್ದರೆ, ಬಿಜೆಪಿಯ ವಿಜಯಶಂಕರ್ 3.47 ಲಕ್ಷ ಪಡೆದುಕೊಂಡಿದ್ದರು. ಕೊಡಗಿನ ಜೀವಿಜಯ ಜನತಾದಳದಿಂದ ಸ್ಪರ್ಧಿಸಿ 2.16 ಲಕ್ಷ ಪಡೆದುಕೊಂಡಿದ್ದರು. ಅದಕ್ಕೆ ಹಿಂದಿನ ಸಾಲಿನಲ್ಲಿ ಜೆಡಿಎಸ್‍ನ ಮತಪ್ರಮಾಣದಲ್ಲಿ ಶೇ.9.8ರಷ್ಟು ನಷ್ಟವಾಗಿ ಮಿಕ್ಕೆರಡೂ ಪಕ್ಷಗಳು ಅದರ ಲಾಭ ಪಡೆದುಕೊಂಡಿದ್ದರೂ, ಜೆಡಿಎಸ್‍ಗೆ 2.16 ಲಕ್ಷ ಮತ ಇದ್ದೇ ಇತ್ತು.

2014ರಲ್ಲಿ ಒಂದೂ ಮುಕ್ಕಾಲು ಲಕ್ಷ ಹೆಚ್ಚು ಮತಗಳು ಚಲಾವಣೆಯಾದವು. ದೇವೇಗೌಡರು ಪ್ರತಾಪಸಿಂಹರಿಗೆ ಬೆಂಬಲಿಸಿದದರೂ, ಜೆಡಿಎಸ್‍ನ ಡಮ್ಮಿ ಕ್ಯಾಂಡಿಡೇಟ್‍ಗೆ 1.38 ಲಕ್ಷ ಮತಗಳು ಬಂದವು. ಕಾಂಗ್ರೆಸ್‍ನ ಎಚ್.ವಿಶ್ವನಾಥ್ ಹಿಂದಿಗಿಂತ 1 ಲಕ್ಷ 20 ಸಾವಿರ ಹೆಚ್ಚು ಮತ ಪಡೆದುಕೊಂಡರೂ ಸೋತರು. ಇವೆಲ್ಲವೂ ದೇವೇಗೌಡರ ಕಾರಣಕ್ಕೆ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಆದರೂ ಸಂದರ್ಭದ ಅನಿವಾರ್ಯತೆಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ‘ಗೌಡರ ವಿರೋಧಿ’ ವಿಶ್ವನಾಥ್ ಜೆಡಿಎಸ್ ಸೇರಿ ಅದರ ರಾಜ್ಯಾಧ್ಯಕ್ಷರಾಗಿದ್ದಾರೆ.
ಈ ಚುನಾವಣೆಯ ಹೊತ್ತಿಗೆ ಒಕ್ಕಲಿಗರ ಮತ ಧ್ರುವೀಕರಣದಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತಷ್ಟು ಪ್ರಬಲವಾಗಿದೆ. ಕಾಂಗ್ರೆಸ್‍ಗೆ ಒಬ್ಬ ಎಂಎಲ್‍ಎ ಇದ್ದರೆ, ಜೆಡಿಎಸ್‍ಗೆ ಮೂವರು ಎಂಎಲ್‍ಎಗಳಿದ್ದಾರೆ. ಅಂದರೆ, ಇಂದಿನ ಮತದಾರರ ಸಂಖ್ಯೆಗೆ ತಾಳೆ ಹಾಕುವುದಾದರೆ ಜೆಡಿಎಸ್ ಕನಿಷ್ಠ 3 ಲಕ್ಷ ಓಟುಗಳನ್ನು ಹೊಂದಿದೆ. ಜೊತೆಗೆ ಇದೊಂಥರಾ ಟ್ರಾನ್ಸಫರಬಲ್ ಮತಗಳು. ಹೀಗಾಗಿ ಇಲ್ಲಿ ದೇವೇಗೌಡರೇ ನಿರ್ಣಾಯಕ. ಅವರ ನೆರವಿಲ್ಲದೇ ಸಿದ್ದರಾಮಯ್ಯನವರು ವಿಜಯಶಂಕರ್‍ರನ್ನು ಗೆಲ್ಲಿಸಿಕೊಳ್ಳುವುದು ಸುಲಭವಿಲ್ಲ.

ಮೈತ್ರಿ ಧರ್ಮ ಪಾಲನೆಯಾದರೆ, ಪ್ರತಾಪ್‍ಸಿಂಹ 2 ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಮುಂದಿನ ಒಂದು ವಾರದಲ್ಲೇ ದೋಸ್ತಿಗಳ ನಡುವಿನ ಬಂಧ ಎಷ್ಟು ಗಟ್ಟಿಯಿದೆ ಎಂಬುದು ತೀರ್ಮಾನವಾಗಿಬಿಡುವುದರಿಂದ, ಮೈಸೂರು ಕ್ಷೇತ್ರದ ಫಲಿತಾಂಶವೂ ಈ ವಾರದಲ್ಲೇ ಅಂತಿಮಗೊಂಡುಬಿಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...