Homeಕರ್ನಾಟಕಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

ಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

- Advertisement -
- Advertisement -

ಇದುವರೆಗೂ ಸಿದ್ದರಾಮಯ್ಯನವರು ಮತ್ತು ಮೈಸೂರಿನ ದಳಪತಿಗಳ ನಡುವೆ ದೋಸ್ತಿ ಕುದುರಿಲ್ಲ. ಸಮ್ಮಿಶ್ರ ಸರ್ಕಾರವೇ ಈ ಎರಡು ಪಕ್ಷಗಳ ಮೈತ್ರಿಯಿಂದ ರಚನೆಯಾದರೂ, ಮೈಸೂರಿನಲ್ಲಿ ಅಷ್ಟು ಸುಲಭವಿರಲಿಲ್ಲ. ಚಾಮುಂಡೇಶ್ವರಿಯ ಸೋಲು ಸಿದ್ದರಾಮಯ್ಯನವರಿಗೆ ಯಾವ ಮಟ್ಟಿಗಿನ ಬೇಸರ/ಅಸಮಾಧಾನ ಮೂಡಿಸಿದೆಯೆಂದರೆ, 2 ತಿಂಗಳ ಕೆಳಗೆ ಮೈಸೂರಿನಲ್ಲಿ ಮಾತನಾಡಿ ‘ಪ್ರತೀ ವರ್ಷ ಇಲ್ಲಿ ಸಾಮೂಹಿಕ ಮದುವೆ ಏರ್ಪಡಿಸುತ್ತಿದ್ದೆ. ನಾನು ಹೇಳಿದರೆ ಕೆಲವರು ದುಡ್ಡೂ ಕೊಡೋರು. ಈ ವರ್ಷದಿಂದ ಇಲ್ಲಿ ಮಾಡಿಸಲ್ಲ. ಮೈಸೂರಿನಿಂದ ನನ್ನನ್ನು ಓಡಿಸಿದ್ದೀರಿ. ಹಾಗಾಗಿ ಬಾದಾಮಿಯಲ್ಲೇ ಮಾಡಿಸುತ್ತೇನೆ’ ಎಂದಿದ್ದರು. ಒಕ್ಕಲಿಗ ಮತಗಳ ಧ್ರುವೀಕರಣದ ಜೊತೆಗೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದದ ಮೂಲಕ ಸಿದ್ದರಾಮಯ್ಯನವರಿಗೆ ತವರಿನಲ್ಲಿ ಕೊಟ್ಟ ಪೆಟ್ಟು ಆ ಪ್ರಮಾಣಕ್ಕೆ ಇತ್ತು.

ಆದರೂ ಮೈಸೂರು ಲೋಕಸಭಾ ಕ್ಷೇತ್ರ ಬೇಕೆ ಬೇಕೆಂದು ಪಟ್ಟು ಹಿಡಿದು, ಹಾಲಿ ಸಂಸದರಿದ್ದ ತುಮಕೂರನ್ನೂ ಬಿಟ್ಟುಕೊಟ್ಟು ಅದನ್ನು ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಮೈಸೂರಿನ ಮೇಲೆ ಏನೇ ಪಟ್ಟಿದ್ದರೂ, ಅವರು ದೇವೇಗೌಡರನ್ನು ಒಲಿಸಿಕೊಳ್ಳದೇ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕಳೆದ ಎರಡು ಚುನಾವಣೆಗಳ ಅಂಕಗಣಿತ ನೋಡಿದರೆ ಅದು ಸುಸ್ಪಷ್ಟ.

ಇದು ಚೆನ್ನಾಗಿ ಗೊತ್ತಿದ್ದ ಪ್ರತಾಪಸಿಂಹ ಕಳೆದ ಸಾರಿ ಆಡಿದ ಆಟವನ್ನೇ ಈ ಸಾರಿಯೂ ಆಡಲು ಶುರು ಮಾಡಿದ್ದಾರೆ. ಆಗ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ಅವರು ಅಗತ್ಯವಿರಲಿ ಇಲ್ಲದಿರಲು ದೇವೇಗೌಡರನ್ನು ಟೀಕೆ ಮಾಡುವ ಕೆಲಸವನ್ನು ಮಾಡುತ್ತಲೇ ಇದ್ದು, ಒಂದು ನಕಾರಾತ್ಮಕ ಸಂದೇಶವನ್ನು ಕೊಟ್ಟಿದ್ದರು. ಹಾಗಾಗಿಯೇ ಚಿಕ್ಕಮಗಳೂರು ಮೂಲದ, ಬೆಂಗಳೂರಿನಲ್ಲಿ ಪತ್ರಕರ್ತನಾಗಿದ್ದ ಸಿಂಹ, ಪ್ರತಾಪ್ ಸಿಂಹ ಗೌಡನಾಗಿ ಮೈಸೂರಿಗೆ ಎಂಟ್ರಿ ಕೊಟ್ಟಿದ್ದು. ದೇವೇಗೌಡರ ಬಗ್ಗೆ ಹೊಗಳುತ್ತಾ, ಎಚ್.ವಿಶ್ವನಾಥ್ ಅವರು ಆ ರೀತಿ ಗೌಡರ ಬಗ್ಗೆ ಮಾತನಾಡುವುದನ್ನು ತಾನು ಒಪ್ಪುವುದಿಲ್ಲವೆಂದು ಹೇಳುತ್ತಾ ಪ್ರಚಾರ ಮಾಡಿದ್ದರು.

ಸ್ಪಷ್ಟವಾಗಿರುವ ಅಂಕಗಣಿತ
ಅದಕ್ಕೆ ಸರಿಯಾಗಿ ಜೆಡಿಎಸ್ ಅಂತಹ ದೊಡ್ಡ ಹೆಸರಲ್ಲದ ಚಂದ್ರಶೇಖರಯ್ಯನವರನ್ನು ಕಣಕ್ಕಿಳಿಸಿ ಪ್ರತಾಪ್ ಸಿಂಹರ ಪರವಾಗಿ ಒಳ ಸಂದೇಶ ಕೊಟ್ಟಿದ್ದರು. ಇವೆಲ್ಲದರ ಜೊತೆಗೆ ಇಡೀ ದೇಶದಲ್ಲಿ ಆಗ ಇದ್ದ ಮೋದಿ ಅಲೆಯ ಲಾಭವನ್ನು ಪಡೆದುಕೊಂಡರೂ ಪ್ರತಾಪ್ ಸಿಂಹ ಗೆದ್ದಿದ್ದು 31 ಸಾವಿರ ಮತಗಳಲ್ಲಿ. 2009ರಲ್ಲಿ ಎಚ್.ವಿಶ್ವನಾಥ್ 3.54 ಲಕ್ಷ ಮತ ಪಡೆದುಕೊಂಡಿದ್ದರೆ, ಬಿಜೆಪಿಯ ವಿಜಯಶಂಕರ್ 3.47 ಲಕ್ಷ ಪಡೆದುಕೊಂಡಿದ್ದರು. ಕೊಡಗಿನ ಜೀವಿಜಯ ಜನತಾದಳದಿಂದ ಸ್ಪರ್ಧಿಸಿ 2.16 ಲಕ್ಷ ಪಡೆದುಕೊಂಡಿದ್ದರು. ಅದಕ್ಕೆ ಹಿಂದಿನ ಸಾಲಿನಲ್ಲಿ ಜೆಡಿಎಸ್‍ನ ಮತಪ್ರಮಾಣದಲ್ಲಿ ಶೇ.9.8ರಷ್ಟು ನಷ್ಟವಾಗಿ ಮಿಕ್ಕೆರಡೂ ಪಕ್ಷಗಳು ಅದರ ಲಾಭ ಪಡೆದುಕೊಂಡಿದ್ದರೂ, ಜೆಡಿಎಸ್‍ಗೆ 2.16 ಲಕ್ಷ ಮತ ಇದ್ದೇ ಇತ್ತು.

2014ರಲ್ಲಿ ಒಂದೂ ಮುಕ್ಕಾಲು ಲಕ್ಷ ಹೆಚ್ಚು ಮತಗಳು ಚಲಾವಣೆಯಾದವು. ದೇವೇಗೌಡರು ಪ್ರತಾಪಸಿಂಹರಿಗೆ ಬೆಂಬಲಿಸಿದದರೂ, ಜೆಡಿಎಸ್‍ನ ಡಮ್ಮಿ ಕ್ಯಾಂಡಿಡೇಟ್‍ಗೆ 1.38 ಲಕ್ಷ ಮತಗಳು ಬಂದವು. ಕಾಂಗ್ರೆಸ್‍ನ ಎಚ್.ವಿಶ್ವನಾಥ್ ಹಿಂದಿಗಿಂತ 1 ಲಕ್ಷ 20 ಸಾವಿರ ಹೆಚ್ಚು ಮತ ಪಡೆದುಕೊಂಡರೂ ಸೋತರು. ಇವೆಲ್ಲವೂ ದೇವೇಗೌಡರ ಕಾರಣಕ್ಕೆ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಆದರೂ ಸಂದರ್ಭದ ಅನಿವಾರ್ಯತೆಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ‘ಗೌಡರ ವಿರೋಧಿ’ ವಿಶ್ವನಾಥ್ ಜೆಡಿಎಸ್ ಸೇರಿ ಅದರ ರಾಜ್ಯಾಧ್ಯಕ್ಷರಾಗಿದ್ದಾರೆ.
ಈ ಚುನಾವಣೆಯ ಹೊತ್ತಿಗೆ ಒಕ್ಕಲಿಗರ ಮತ ಧ್ರುವೀಕರಣದಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತಷ್ಟು ಪ್ರಬಲವಾಗಿದೆ. ಕಾಂಗ್ರೆಸ್‍ಗೆ ಒಬ್ಬ ಎಂಎಲ್‍ಎ ಇದ್ದರೆ, ಜೆಡಿಎಸ್‍ಗೆ ಮೂವರು ಎಂಎಲ್‍ಎಗಳಿದ್ದಾರೆ. ಅಂದರೆ, ಇಂದಿನ ಮತದಾರರ ಸಂಖ್ಯೆಗೆ ತಾಳೆ ಹಾಕುವುದಾದರೆ ಜೆಡಿಎಸ್ ಕನಿಷ್ಠ 3 ಲಕ್ಷ ಓಟುಗಳನ್ನು ಹೊಂದಿದೆ. ಜೊತೆಗೆ ಇದೊಂಥರಾ ಟ್ರಾನ್ಸಫರಬಲ್ ಮತಗಳು. ಹೀಗಾಗಿ ಇಲ್ಲಿ ದೇವೇಗೌಡರೇ ನಿರ್ಣಾಯಕ. ಅವರ ನೆರವಿಲ್ಲದೇ ಸಿದ್ದರಾಮಯ್ಯನವರು ವಿಜಯಶಂಕರ್‍ರನ್ನು ಗೆಲ್ಲಿಸಿಕೊಳ್ಳುವುದು ಸುಲಭವಿಲ್ಲ.

ಮೈತ್ರಿ ಧರ್ಮ ಪಾಲನೆಯಾದರೆ, ಪ್ರತಾಪ್‍ಸಿಂಹ 2 ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಮುಂದಿನ ಒಂದು ವಾರದಲ್ಲೇ ದೋಸ್ತಿಗಳ ನಡುವಿನ ಬಂಧ ಎಷ್ಟು ಗಟ್ಟಿಯಿದೆ ಎಂಬುದು ತೀರ್ಮಾನವಾಗಿಬಿಡುವುದರಿಂದ, ಮೈಸೂರು ಕ್ಷೇತ್ರದ ಫಲಿತಾಂಶವೂ ಈ ವಾರದಲ್ಲೇ ಅಂತಿಮಗೊಂಡುಬಿಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...