Homeಕರ್ನಾಟಕತೇಜಸ್ವಿ ಸೂರ್ಯ ವಿರುದ್ಧ ಪ್ರತಾಪ್ ಸಿಂಹನಿಗೆ ದೂರಿದ ನೊಂದ ಮಹಿಳೆ?

ತೇಜಸ್ವಿ ಸೂರ್ಯ ವಿರುದ್ಧ ಪ್ರತಾಪ್ ಸಿಂಹನಿಗೆ ದೂರಿದ ನೊಂದ ಮಹಿಳೆ?

- Advertisement -
- Advertisement -

ಪಾರ್ಲಿಮೆಂಟ್ ಅಭ್ಯರ್ಥಿಯ ಅರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಅರ್ಹತೆಯ ಬಗ್ಗೆ ಬಹಳ ಗಂಭೀರ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗಳು ಏಳುತ್ತಿರುವುದು ಜನಸಾಮಾನ್ಯರಲ್ಲಿ ಮಾತ್ರವಲ್ಲಾ, ಬಿಜೆಪಿಯೊಳಗೇ ದಿಗಿಲು ಉಂಟಾಗಿದೆ. ಒಂದು ವೇಳೆ ಆತನಿಗೆ ಸಂಬಂಧಿಸಿದ ಎಲ್ಲಾ ಸಂಗತಿಗಳೂ ಹೊರಗೆ ಬಿದ್ದರೆ ಅದು ಪಕ್ಷಕ್ಕೆ ಬಹಳ ಕೆಟ್ಟ ಹೆಸರು ತರುತ್ತದೆ ಎಂಬುದೇ ಅವರ ಆತಂಕಕ್ಕೆ ಕಾರಣ. ಇದು ತೇಜಸ್ವಿಗೂ ಗೊತ್ತಿರುವುದರಿಂದಲೇ, ಮೊದಲ ಸುದ್ದಿ ಹೊರಗೆ ಬಂದ 2ನೇ ದಿನಕ್ಕೇ ಕೋರ್ಟಿನಿಂದ ತಡೆ ತಂದದ್ದು. ಅಷ್ಟೇ ಅಲ್ಲ, ನಾನು ಪುರಾವೆಗಳ ಸಮೇತ ಈತನ ಚಾರಿತ್ರ್ಯ ಬಿಚ್ಚಿಡುತ್ತೇನೆ ಎಂದು ಹೇಳಿದ್ದ ಮಹಿಳೆ, ನಂತರ ಆ ಟ್ವೀಟ್‍ಗಳನ್ನು ಅಳಿಸಿ ಹಾಕಿದರು.

ತರುವಾಯ, ಇದನ್ನು ಯಾರೂ ಮುಂದುವರೆಸಬೇಡಿ ಎಂದು ಮನವಿ ಮಾಡಿದರು. ಆ ನಂತರ ಟ್ವಿಟ್ಟರ್‍ನಿಂದಲೇ ಹೊರಗೆ ಹೋದರು. ಇದು ಆ ಮಹಿಳೆಯ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ ಎನ್ನುವುದನ್ನಷ್ಟೇ ಅಲ್ಲದೇ, ಸ್ವತಃ ತೇಜಸ್ವಿ ಸೂರ್ಯ ಬಹಳ ಬೆದರಿರಬೇಕು ಎಂಬುದನ್ನೇ ತೋರುತ್ತದೆ. ಈ ಹಿಂದೆ ಗೌರಿ ಲಂಕೇಶರ ಹತ್ಯೆ ಆದಾಗ, ಬಿಜೆಪಿಯಲ್ಲಿ ಬಹುತೇಕರು ಖಂಡನೆ ಹೇಳಿಕೆ ನೀಡಿ ಸುಮ್ಮನಾದರು. ಆದರೆ, ಕೆಲವರಷ್ಟೇ ಅದನ್ನು ಪರೋಕ್ಷವಾಗಿ ಸಮರ್ಥಿಸುವ ಹೀನ ಮನಸ್ಸನ್ನು ತೋರ್ಪಡಿಸಿದರು. ಅಂತಹವರಲ್ಲಿ ತೇಜಸ್ವಿ ಮುಂಚೂಣಿಯಲ್ಲಿದ್ದರು. 26 ವರ್ಷ (ಆಗ) ವಯಸ್ಸಿನ ಒಬ್ಬ ವಕೀಲನಲ್ಲಿ ಇಂತಹ ದುಷ್ಟ ಮನಸ್ಸಿದೆಯಲ್ಲಾ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಆತನನ್ನು ಹತ್ತಿರದಿಂದ ಬಲ್ಲವರಿಗೆ ಇದೇನೂ ವಿಶೇಷ ಎನಿಸಿರಲಿಲ್ಲ. ಇದೀಗ ತೇಜಸ್ವಿ ತನಗೆ ಕೈ ಕೊಟ್ಟಿದ್ದು ಮಾತ್ರವಲ್ಲಾ, ‘ಇದು ಮೊದಲ ಪ್ರಕರಣವೂ ಅಲ್ಲ, ಕೊನೆಯ ಪ್ರಕರಣವೂ ಅಲ್ಲ’ ಎಂದು ಆ ಮಹಿಳೆ ಹೇಳಿದ್ದರು. ನಂತರದಲ್ಲಿ ಮಹಿಳೆಯರಿಗೆ ಹಿಂಸೆ ಕೊಡುವುದು, ಬಡಿಯುವುದು, ಅಸಭ್ಯವಾಗಿ ವರ್ತಿಸುವ ವ್ಯಕ್ತಿ ಈತ ಎಂಬ ವಿಚಾರ ಹೊರಗೆ ಬಂದಿತು. ಬಿಜೆಪಿಯ ವರ್ತುಲದಲ್ಲೇ ಓಡಾಡಿದ ಇನ್ನೊಂದು ವಿಚಾರದಲ್ಲಿ ಇಂಗ್ಲಿಷ್ ಚಾನೆಲ್ಲೊಂದರ ವರದಿಗಾರ್ತಿಯು ಅನುಭವಿಸಿದ ಕಿರುಕುಳದ ವಿಚಾರವೂ ಇತ್ತು.

ಇದರ ಕುರಿತು ಆಗಲೇ ಅದನ್ನು ನಮ್ಮಲ್ಲಿ ಸುದ್ದಿ ಮಾಡಿದ್ದರೂ, ಸ್ಕ್ರೀನ್‍ಷಾಟ್‍ಗಳನ್ನು ಹಾಕಿರಲಿಲ್ಲ. ಆದರೆ, ಇದೀಗ ನಮಗೆ ಲಭ್ಯವಾದ ಹಲವಾರು ಸ್ಕ್ರೀನ್‍ಷಾಟ್‍ಗಳಲ್ಲಿ ಒಂದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತೇಜಸ್ವಿಯ ಕಿರುಕುಳವನ್ನು ತಾಳದೇ ಪ್ರತಾಪ್‍ಸಿಂಹರಲ್ಲಿ ದೂರಿದ್ದಾರೆ. ಬೆಂಗಳೂರು ಬಿಟ್ಟು ಸ್ವಲ್ಪ ಹೊರಗೆ ಬಂದುಬಿಡಬೇಕು ಎನಿಸಿದೆ ಎಂತಲೂ ಹೇಳುತ್ತಾರೆ. ನಿನ್ನ ಬಗ್ಗೆ ನನಗೆ ಕಾಳಜಿ ಇದೆ. ಆದರೆ ನಾನೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲವೆಂದು ಹೇಳುವ ಸಿಂಹ ಕೈತೊಳೆದುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ನಂತರ ಆತನ ಜೊತೆಗೆ ತಾನು ಮಾತಾಡಿದ್ದಾಗಿಯೂ, ತೇಜಸ್ವಿಯ ಹತ್ತಿರ ಈ ವಿಚಾರವನ್ನು ತಾನೇನೂ ಪ್ರಸ್ತಾಪಿಸಿಲ್ಲ, ಆತ ಚೆನ್ನಾಗಿದ್ದಾನೆ, ನೀನೂ ಚೆನ್ನಾಗಿದ್ದುಬಿಡು ಹೇಳುವ ಒಂದು ವಾಟ್ಸಾಪ್ ಚಾಟ್ ಸ್ಕ್ರೀನ್‍ಷಾಟ್‍ನಿಂದ ಆರಂಭವಾಗುವ ಈ ಸರಣಿಯಲ್ಲಿ ಹಲವಾರು ಅಂಶಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ.

ಪ್ರತಾಪ್ ಸಿಂಹನ ಬಳಿ ಅಳಲು ತೋಡಿಕೊಂಡಿರುವ ಸಂತ್ರಸ್ತೆ

ತಾವೇ ಬಹಿರಂಗಗೊಳಿಸಲಿಚ್ಛಿಸದ ನೊಂದವರ ಐಡೆಂಟಿಟಿಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಯಲುಗೊಳಿಸುವ ಸುದ್ದಿಗಳನ್ನು ಸುದ್ದಿಯ ‘ರೋಚಕತೆ’ಯ ಕಾರಣಕ್ಕೆ ಮಾಡುತ್ತಾ ಹೋಗದೆ, ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಿದ್ದೇವೆ. ಕೇವಲ 28 ವರ್ಷ ವಯಸ್ಸಿನ ಈ ವ್ಯಕ್ತಿಯು ಸಂಸತ್ ಸದಸ್ಯನಾಗುವಷ್ಟು ಅರ್ಹತೆ ಪಡೆದುಕೊಂಡಿದ್ದಾನೆಂದು ರಾಷ್ಟ್ರೀಯ ಪಕ್ಷವೊಂದು ಭಾವಿಸಿರುವುದಾದರೆ, ಈ ಅವಗುಣಗಳನ್ನು, ಅನರ್ಹತೆಗಳನ್ನು ಅವರು ಗಮನಕ್ಕೆ ತೆಗೆದುಕೊಂಡಿಲ್ಲವೇ? ಬಿಜೆಪಿ ಸರ್ಕಾರವು ಮುಂದಿಟ್ಟ ಮಹಿಳಾ ಮೀಸಲಾತಿಯ ಪ್ರಸ್ತಾಪಕ್ಕೆ ಅಷ್ಟೇ ತೇಜಸ್ವಿಯ ವಿರೋಧವಿರಲಿಲ್ಲ; ಮಹಿಳೆಯರ ಬಗ್ಗೆ ಬಹಳ ಕೀಳು ಮಟ್ಟದ ಮನಸ್ಥಿತಿಯನ್ನು ಈತ ಹೊಂದಿರುವುದಕ್ಕೆ ಹಲವು ಪುರಾವೆಗಳು ಹೊರಬೀಳುತ್ತಿವೆ. ಇದು ಬಿಜೆಪಿ ಪಕ್ಷದ ನೀತಿಯಾ? ಇಂತಹ ವ್ಯಕ್ತಿಯು ದೇಶಕ್ಕೇ ಅನ್ವಯಿಸುವ ಕಾನೂನುಗಳನ್ನು ರೂಪಿಸುವ ಸಂಸತ್‍ನಲ್ಲಿ ಇರುವುದಕ್ಕೆ ಎಷ್ಟರ ಮಟ್ಟಿಗೆ ಅರ್ಹ? ಈ ಎಲ್ಲಾ ಸುದ್ದಿಗಳು ಒಂದೊಂದಾಗಿ ಹೊರಗೆ ಬರುತ್ತಿರುವುದು ಬಿಜೆಪಿಯ ವಲಯದಿಂದಲೇ ಆಗಿದೆ. ಹಾಗಿದ್ದ ಮೇಲೆ ಬಿಜೆಪಿಯ ಇತರ ‘ಸಭ್ಯರು’ ಇದನ್ನು ಬಹಿರಂಗಗೊಳಿಸದೇ ಪಕ್ಷ ನಿಷ್ಠೆಯ ಹೆಸರಿನಲ್ಲಿ, ಅಪಾಯಕಾರಿ ವ್ಯಕ್ತಿಯು ಪಕ್ಷದ ಪ್ರತಿನಿಧಿಯಾಗಿ ಆರಿಸಿ ಹೋದರೆ ಪರವಾಗಿಲ್ಲವೆಂದು ಭಾವಿಸಿದ್ದಾರೆಯೇ? ಸ್ವತಃ ತೇಜಸ್ವಿ ಸೂರ್ಯ ತನ್ನ ಆತ್ಮವಿಮರ್ಶೆಯನ್ನು, ಪಶ್ಚಾತ್ತಾಪವನ್ನು ಮುಂದಿಡಲು ಇದು ಸುಸಮಯ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...