Homeಮುಖಪುಟ’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್'

’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್’

ಇನ್ನೂ ಬದಲಾಗದ ವ್ಯವಸ್ಥೆಯ ಬಗ್ಗೆ ನೋಡುಗನಿಗೆ ಸ್ವಲ್ಪವಾದರೂ ತಟ್ಟಿ ಚಿಂತಿಸುವಂತೆ ಮಾಡಬಲ್ಲ ಈ ನಾಲ್ಕು ಕಥೆಗಳ ಗುಚ್ಛ ನಮ್ಮ ಪ್ಯಾಟ್ರಿಯಾರ್ಕಲ್ ಮನಸ್ಥಿತಿಯನ್ನು, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ಮತ್ತು ಇವುಗಳಿಂದ ಹುಟ್ಟಿರುವ ’ಮರ್ಯಾದೆ’ಯ ಕಲ್ಪನೆಯನ್ನು ಅಲ್ಲಾಡಿಸುತ್ತದೆ.

- Advertisement -
- Advertisement -

ಭಾರತದ ಮುಖ್ಯವಾಹಿನಿ ಸಿನಿಮಾಗಳು ಬಹುತೇಕ ಜಾತಿಯ ಬಗ್ಗೆ ಚರ್ಚಿಸಲು ಹಿಂದೇಟು ಹಾಕುವುದೇ ಹೆಚ್ಚು. ಪಾತ್ರಗಳನ್ನು ಹೆಸರಿಸುವುದರಲ್ಲೂ ಕೂಡಾ ಜಾತಿ ಗೊತ್ತಾಗಬಾರದೆಂಬಂತೆ ಜಾಗ್ರತೆ ವಹಿಸಲಾಗುತ್ತೆ. ಆದರೆ ಅವೇ ಸಿನಿಮಾಗಳಲ್ಲಿ ಮೇಲ್ಜಾತಿಗಳ ಬಗ್ಗೆ ಈ ಧೋರಣೆ ತಳೆಯುವುದು ಕಡಿಮೆ. ಬ್ರಾಹ್ಮಣಿಕೆಯ ಪ್ರದರ್ಶನಕ್ಕೆ ಇದು ಅಡ್ಡಿಯೇ ಆಗುವುದಿಲ್ಲ. ಕನ್ನಡದ ಹಲವು ಸಿನಿಮಾಗಳಲ್ಲಿ ’ಗೌಡರ ಗತ್ತಿ’ನೂ ಕಮ್ಮಿಯಿಲ್ಲ. ಇಂತದಕ್ಕೆ ಅತ್ತ ತಮಿಳಿನಲ್ಲಿ ಥೇವರ್ ಮಗನ್‌ನಂತಹ ಚಿತ್ರಗಳೂ ಬಂದಿವೆ. ಆದರೆ ಇದೇ ಮಾತನ್ನು ತಳವರ್ಗಗಳ ಬಗ್ಗೆ ಹೇಳಲು ಬರುವುದಿಲ್ಲ. ಇದಕ್ಕೆ ಭಿನ್ನವಾಗಿ ಇಂದು ತಮಿಳು ಸಿನಿಮಾ ಮಾತ್ರ ಜಾತಿಯ ಪ್ರಶ್ನೆಯನ್ನು ನಿಜವಾಗಿ ಚರ್ಚಿಸುತ್ತಿದೆ ಅನ್ನಿಸುತ್ತೆ.

ರಜನೀಕಾಂತ್ ನಾಯಕನಾಗಿದ್ದ ’ಕಬಾಲಿ’ ಸಿನೆಮಾವನ್ನು ಪ. ರಂಜಿತ್ ನಿರ್ದೇಶಿಸುವುದರೊಂದಿಗೆ ಗಟ್ಟಿಯಾದ ದಲಿತ ಧ್ವನಿಯೊಂದು ಹುಟ್ಟಿಕೊಂಡಿತು. ಕಾಲಾ, ಪರೆಯೇರುಂ ಪೆರುಮಾಳ್, ಅಸುರನ್ ಅಂತಹ ಚಿತ್ರಗಳು ಇವತ್ತು ಜಾತಿಯ ಪ್ರಶ್ನೆಯನ್ನು ಪೊಲಿಟಿಕಲ್ ಪ್ರಶ್ನೆಯಾಗಿಯೇ ಚರ್ಚಿಸಿವೆ. ಅತ್ತ ತೆಲುಗಿನಲ್ಲಿ ’ಪಲಾಸ 1976’ ಎಂಬ ಸಿನಿಮಾ ಸಹ ದಲಿತ ಪ್ರಶ್ನೆಯ ಹಿನ್ನೆಲೆಯಲ್ಲಿ ರಾಯಲಸೀಮೆಯ ಫ್ಯೂಡಲ್ ಹಿಂಸೆಯನ್ನು ನೋಡಿತ್ತು. ಇದೆಲ್ಲದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಮರ್ಯಾದೆಗೇಡು ಹತ್ಯೆಗಳನ್ನು ಸಮರ್ಥಿಸುವ ದನಿಯಿದ್ದ ’ದ್ರೌಪದಿ’ ಚಿತ್ರವೂ ತಮಿಳಿನಲ್ಲಿ ಬಂತು. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ನಾಲ್ಕು ಚಿತ್ರಗಳ ಗುಚ್ಛ ’ಪಾವ ಕದೈಗಳ್ ಅನ್ನು ತಮಿಳು ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಜಾತಿ ಪ್ರಶ್ನೆಯ ಚರ್ಚೆಯ ಹಿನ್ನೆಲೆಯಲ್ಲಿ ನೋಡಬೇಕಿದೆ.

’ಪಾವ ಕದೈಗಳ್‌ನ ನಾಲ್ಕು ಚಿತ್ರಗಳೂ “ಮರ್ಯಾದೆ”ಯ ಪ್ರಶ್ನೆಯ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ಮರ್ಯಾದೆ ಪ್ರಶ್ನೆಯಲ್ಲಿ ಹೇಗೆ ಜಾತಿ ಮತ್ತು ಹೆಣ್ಣು ಎರಡೂ ಪ್ರಮುಖ ಎಂಬುದನ್ನು ಈ ನಾಲ್ಕೂ ಚಿತ್ರಗಳು ಅತ್ಯಂತ ಶಕ್ತಿಯುತವಾಗಿ ಕಟ್ಟಿಕೊಡುತ್ತವೆ. ಈ ನಾಲ್ಕರಲ್ಲಿ ಎರಡು ಕಥೆಗಳು ತಮಿಳುನಾಡಿನಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಣೆ ಪಡೆದವು – ಗೌತಂ ಮೆನನ್ ಅವರು ನಿರ್ದೇಶಿಸಿರುವ ’ವಾನ್ಮಗಳ್, ಪೊಲ್ಲಾಚಿ ಸೆಕ್ಸ್ ಹಗರಣದಿಂದ ಮತ್ತು ವೆಟ್ರಿಮಾರನ್ ನಿರ್ದೇಶಿಸಿರುವ ’ಊರ್ ಇರುವು’ ತಮಿಳುನಾಡಿನಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯೊಂದರ ಪ್ರೇರಣೆಯಿಂದ ಹೆಣೆದಿರುವ ಕಥೆಗಳು. ಹಾಗಾಗಿಯೇ ಈ ಚಿತ್ರಗಳಲ್ಲಿ ಪತ್ರಿಕಾ ವರದಿಯ ಛಾಯೆಯಿದೆ ಮತ್ತು ಹಾಗಾಗಿಯೇ ಅವು ಅಷ್ಟು ಪರಿಣಾಮಕಾರಿ ಅಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರಾದರೂ, ಈ ಚಿತ್ರಗಳು ನೀಡುವ ಒಳನೋಟ ಮತ್ತು ಮೂಡಿಸುವ ತಲ್ಲಣ ಆಳವಾದದ್ದು. ಈ ಚಿತ್ರಗಳ ವಿಶೇಷತೆಯೆಂದರೆ “ಮರ್ಯಾದೆ” ಉಳಿಸಿಕೊಳ್ಳಲು ಹಿಂಸೆಗೆ ಇಳಿಯುವ ತಲೆಮಾರಿನ ಬಗ್ಗೆಯೇ ಈ ಕಥೆಗಳ ಫೋಕಸ್ ಇದ್ದು, ಹಿಂಸೆಗೆ ಒಳಗಾದ ಯುವಕರ ಬಗ್ಗೆ ಮಾತ್ರ ಅಲ್ಲ ಎನ್ನಬಹುದು. ಈ ತಲೆಮಾರುಗಳ ನಡುವಿನ ಅಂತರ ಮತ್ತು ತಲ್ಲಣಗಳನ್ನು ಈ ಚಿತ್ರಗಳು ಶಕ್ತವಾಗಿ ಹಿಡಿದುಕೊಡುತ್ತವೆ.

ಗಾಂಧಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುತ್ತಾ, ಪಾಶ್ಚಿಮಾತ್ಯ ನಾಗರಿಕತೆಯು ಕ್ರೈಸಿಸ್‌ನಲ್ಲಿದ್ದು, ಅವರಿಗಾಗಿಯೂ ನಾನು ಹೋರಾಡುತ್ತಿದ್ದೇನೆ ಎಂದೇ ತಿಳಿದಿದ್ದರು. ಈ ಚಿತ್ರಗಳಲ್ಲೂ “ಮರ್ಯಾದೆ” ಎಂಬುದು ಹೇಗೆ ಒಂದು ಸಾಮಾಜಿಕ ಸಂರಚನೆಯಾಗಿದ್ದು ಅದನ್ನು ಒಳಗೊಳ್ಳಲು ಸಮಾಜವು ಹೇಗೆ ಒಬ್ಬನ ಮೇಲೆ ನಿರಂತರ ಒತ್ತಡ ಹೇರುತ್ತದೆ ಮತ್ತು ಅನೇಕ ಮರ್ಯಾದೆಗೇಡು ಹತ್ಯೆಗಳ ಹಿಂದೆ ಇಂಥದೊಂದು ಒತ್ತಡವು ಕೆಲಸ ಮಾಡುತ್ತದೆ, ಮತ್ತು ಸ್ವಂತ ಮಕ್ಕಳನ್ನೇ ಕೊಲ್ಲುವ ಹಂತಕ್ಕೆ ಹೋಗುವ ಜನ ಕೂಡ ಹೇಗೆ ಒಂದು ರೀತಿಯಲ್ಲಿ ಈ ವ್ಯವಸ್ಥೆಯ ವಿಕ್ಟಿಂಗಳು ಮತ್ತು ಅವರಿಗೂ ಈ ಉಸಿರುಕಟ್ಟುವ ವ್ಯವಸ್ಥೆಯಿಂದ ಬಿಡುಗಡೆ ಬೇಕಾಗಿದೆ ಎಂಬ ದನಿಯಲ್ಲಿ ಈ ಚಿತ್ರಗಳಿವೆ. ವಿಗ್ನೇಶ್ ಶಿವನ್ ನಿರ್ದೇಶನದ ’ಲವ್ ಪಣ್ಣಾ ಉತ್ರಾಣಮ್ ಮತ್ತು ’ಊರ್ ಇರುವು’ ಚಿತ್ರಗಳಲ್ಲಿ ಅವರ ಮಕ್ಕಳನ್ನು ಕೊಲ್ಲಲು ಆ ಜಾತಿ ಸಮಾಜದಿಂದ ಇರುವ ಒತ್ತಡ ಸ್ಪಷ್ಟ. ಈ ತಂದೆಯರ ತೊಳಲಾಟವು ವಿದಿತ. ಆದರೆ ಅವರು ಕಡೆಗೆ ತಮ್ಮ ಮಕ್ಕಳನ್ನು ಕೊಲ್ಲುತ್ತಾರೆ. ಶಿವನ್ ಅವರ ಚಿತ್ರದಲ್ಲಿ ಒಬ್ಬ ಮಗಳನ್ನು ಕೊಲ್ಲುವ ತಂದೆ ಕೊನೆಗೆ ಮತ್ತೊಬ್ಬ ಮಗಳನ್ನು ಹಳ್ಳಿಯಿಂದ ತಪ್ಪಿಸಿಕೊಳ್ಳಲು ಬಿಡುವುದಷ್ಟೇ ಅಲ್ಲದೆ, ತಾನೂ ಹಳ್ಳಿಯಿಂದ ತಪ್ಪಿಸಿಕೊಂಡು ಮಗಳ ಜೊತೆ ಫ್ರಾನ್ಸ್‌ನಲ್ಲಿ ಅವಳ ಜೊತೆ ವಾಸ ಮಾಡುತ್ತಾನೆ.

PC : Only kollywood

’ಊರ್ ಇರುವು’ ಚಿತ್ರದಲ್ಲಿ ಮನೆಯಿಂದ ಓಡಿಹೋದ ಮಗಳು ಬಹುಶಃ ದಲಿತ ಹುಡುಗನೊಬ್ಬನನ್ನು ಮದುವೆ ಆಗಿ ಬೆಂಗಳೂರಲ್ಲಿ ನೆಲೆಸಿದ್ದಾಳೆ. ಗರ್ಭಿಣಿ. ಆಕೆಯನ್ನು ಹುಡುಕಿಕೊಂಡು ಬರುವ ತಂದೆ ಅಳಿಯ ಕೊಟ್ಟ ನೀರು ಮುಟ್ಟಲೂ ಅಂಜುವವನು. ಮೊಮ್ಮಗುವನ್ನು ಬಿಟ್ಟು ಇರಕ್ಕಾಗಲ್ಲ, ಮಗಳನ್ನು ಕರಕೊಂಡು ಹೋಗಿ ಸೀಮಂತ ಮಾಡ್ತೀನಿ ಅಂದಾಗ ಅಳಿಯ ’ನಾನು ಕೊಟ್ಟ ನೀರನ್ನೇ ಕುಡಿಯದ ನಿಮ್ಮನೆಗೆ ನಾನು ಹೇಗೆ ಬರಲಿ’ ಅಂತ ಕೇಳ್ತಾನೆ. ನನಗೆ ಹೇಳದೆಯೇ ಯಾಕೆ ಓಡಿ ಹೋದೆ ಎಂದು ಕೇಳಿದ್ದಕ್ಕೆ ಮಗಳು ’ಇದೇ ರೀತಿ ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದಕ್ಕೆ ಊರಲ್ಲಿ ಏನು ಮಾಡಿದರು, ನೀನೂ ಸುಮ್ಮನಿದ್ದೆಯಲ್ಲ ಎಂದು ಕೇಳುತ್ತಾಳೆ, ತಂದೆಯಲ್ಲಿ ಉತ್ತರವಿಲ್ಲ. ಒಂದು ಬಾರಿ ಆಕೆಯನ್ನು ಬಿಟ್ಟು ಹೊರಟುಹೋಗಲು ಅನುವಾಗುತ್ತಾನೆ ಕೂಡಾ. ಆದರೆ ಮಗಳೇ ತಡೆಯುತ್ತಾಳೆ. ತಂದೆ ಮಗಳಿಗೆ ಹೇಳ್ತಾನೆ: “ಈ ಜೀವನವನ್ನು ನೀನು ಕಟ್ಟಿಕೊಂಡಿದ್ದೀಯ. ಇದರ ಮೇಲೆ ಯಾರಿಗೂ ಹಕ್ಕಿಲ್ಲ ಎಂದು. ಅತ್ತ ಈಕೆಯ ಅಕ್ಕನನ್ನು ಗಂಡ ಬಿಟ್ಟುಬಿಟ್ಟಿದ್ದಾನೆ. ಕಾರಣ ದಲಿತರ ಹುಡುಗನೊಬ್ಬನಿಗೆ ಹುಟ್ಟುವ ಮಗುವಿನ ಮನೆಯ ಹುಡುಗಿ ಅಂತ! ಇನ್ನೂ ಒಬ್ಬಳು ಮಗಳಿದ್ದಾಳೆ, ಅವಳಿಗೆ ಓದು ಬಿಡಿಸಿದ್ದಾನೆ ಅಪ್ಪ. ಮಗಳನ್ನು ಊರಿಗೆ ಕರಕೊಂಡು ಬಂದು ಸೀಮಂತಕ್ಕೆ ಎಲ್ಲ ತಯಾರಿ ನಡೆದಿದೆ. ಜಾತಿಯ ಹುಡುಗರು ಬಂದು ಇದಕ್ಕೆ ಆಕ್ಷೇಪಿಸುತ್ತಾರೆ. ಬೇರೆಯವರಿಗೊಂದು ನ್ಯಾಯ ತನ್ನ ಮಗಳಿಗೊಂದು ನ್ಯಾಯವಾ ಎಂಬುದು ಅವರ ಪ್ರಶ್ನೆ.

ಲವ್ ಪಣ್ಣಾ ಉತ್ರಾಣುಂ

ಶಿವನ್ ಅವರ ’ಲವ್ ಪಣ್ಣಾ ಉತ್ರಾಣುಂ’ ಚಿತ್ರದಲ್ಲಿ ಸ್ವತಃ ಜಾತಿಯನ್ನು ಉಳಿಸಲು ಅಂತರಜಾತಿ ವಿವಾಹಗಳಾಗುತ್ತಿರುವ ಯುವಕರನ್ನು ಕೊಲ್ಲುತ್ತಿರುವ ತಂದೆಗೆ ಆತನ ಬಂಟ ಕೇಳುವುದೂ ಅದೇ ಪ್ರಶ್ನೆ. ಈ ಪಾತ್ರವು ’ಪರೆಯೇರುಂ ಪೆರುಮಾಳ್ ಚಿತ್ರದಲ್ಲಿ ಹೀಗೆ ಉಚ್ಛಜಾತಿಯ ಹುಡುಗಿಯರನ್ನು ಪ್ರೇಮಿಸುವ ಹುಡುಗರನ್ನು ಕೊಲ್ಲುವುದೇ ಕಾಯಕ ಮಾಡಿಕೊಂಡ ಮುದುಕನ ಪಾತ್ರ ನೆನಪಿಸುತ್ತದೆ. ’ಊರ್ ಇರುವು’ನಲ್ಲಿ ಸೀಮಂತದ ಹಿಂದಿನ ರಾತ್ರಿ ಮಗಳಿಗೆ ಅಪ್ಪನೇ ವಿಷ ಹಾಕಿ ಸಾಯಿಸುತ್ತಾನೆ. “ನಿನ್ನನ್ನು ನಾನು ಬಿಡಲಾಗುವುದಿಲ್ಲ. ನನಗೆ ಇನ್ನೂ ಬೇರೆ ಮಕ್ಕಳಿದ್ದಾರೆ. ಅವರ ಒಳತಿಗಾಗಿ…”, ಎಂಬ ಆತನ ವಾದ ಹುಚ್ಚು ಎನಿಸಿದರೂ ಆ ಹಳ್ಳಿಯಲ್ಲಿ (ಎಲ್ಲೆಲ್ಲೂ) ಜಾತಿ ಸಮಾಜದಲ್ಲಿ ಅದು ವಾಸ್ತವೂ ಹೌದು ಎಂಬುದು ನಮ್ಮನ್ನು ತಟ್ಟುತ್ತದೆ. ಇದೇ ಮಾತನ್ನು ಸುಧಾ ಕೊಂಗಾರಾ ಅವರ ನಿರ್ದೇಶನದ ’ತಂಗಮ್ ಎಂಬ ಚಿತ್ರದಲ್ಲಿ ತಾಯಿ ತನ್ನ ತೃತೀಯ ಲಿಂಗ ಮಗ ಸತ್ತಾರ್‌ನಿಗೆ ಹೇಳುತ್ತಾಳೆ: ’ನಿನ್ನ ತಂಗಿ, ತಮ್ಮಂದಿರಿಗಾಗಿ ನೀನು ಸತ್ತು ಹೋಗು’ ಎಂದು.

ಇನ್ನು ’ವಾನ್ಮಗಳ್ ಚಿತ್ರದಲ್ಲಿ ಹನ್ನೆರಡು ವರ್ಷದ ಹುಡುಗಿಯನ್ನು ಕೆಲವು ಹುಡುಗರು ರೇಪ್ ಮಾಡಿದ್ದಾರೆ. ಅದಕ್ಕೆ ಆ ಹುಡುಗಿಯ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಚಿತ್ರ ಕಟ್ಟಿಕೊಡುತ್ತದೆ. ತಂದೆಗೆ ಮಗಳನ್ನು ಮಾತಾಡಿಸಲೇ ಆಗುತ್ತಿಲ್ಲ, ಆಕೆಯನ್ನು ಆತ ತಪ್ಪಿಸುತ್ತಿದ್ದಾನೆ, ಮಗನ ಸ್ನೇಹಿತರೇ ಈ ಕೃತ್ಯ ಎಸಗಿದ್ದು ಅದು ತಿಳಿದು ಪೊಲೀಸರಿಗೆ ದೂರು ನೀಡೋಣ ಎಂದು ಮಗ ತಂದೆಯನ್ನು ಕರೆಯುತ್ತಾನೆ. ಆದರೆ ತಾಯಿ ಪೊಲೀಸರಿಗೆ ದೂರು ನೀಡಿದರೆ ಮರ್ಯಾದೆ ಹೋಗುತ್ತದೆ ಬೇಡ ಎಂದು ತಡೆಯುತ್ತಾಳೆ. ಮಗ ಹೋಗಿ ತನ್ನ ತಂಗಿಯನ್ನು ಅಬ್ಯೂಸ್ ಮಾಡಿದ ಹುಡುಗನ ಶಿಶ್ನ ಕತ್ತರಿಸುತ್ತಾನೆ. ಆದರೆ ಈ ಕುಟುಂಬದಲ್ಲಿ ಅತ್ಯಂತ ಹೆಚ್ಚು ಪಿತೃಪ್ರಧಾನ್ಯವಾಗಿ ಯೋಚಿಸುವುದು, ತಳಮಳಕ್ಕೆ ಒಳಗಾಗುವುದು ತಾಯಿ. ಹಿರಿಯ ಮಗಳು ದೊಡ್ಡವಳಾದಾಗ ಮನೆಯ ಗೌರವ ಹೆಣ್ಣಿನ ದೇಹ, ನಡತೆಯಲ್ಲಿರುತ್ತದೆ ಎಂದು ಪಾಠ ಮಾಡುವ ಈ ತಾಯಿಗೆ ತನ್ನ ಕಿರಿಯ ಮಗಳನ್ನು ಯಾರೋ ಹುಡುಗರು ಬಲಾತ್ಕಾರ ಮಾಡಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲೇ ಆಗುವುದಿಲ್ಲ. ಆ ಮಗುವಿಗೆ ಪದೇ ಪದೇ ಸ್ನಾನ ಮಾಡಿಸುತ್ತಾ ಆ ಘಾತವನ್ನು ತೊಳೆದುಬಿಡಬೇಕೆಂಬಂತೆ ಮೈಉಜ್ಜುತ್ತಲೇ ಇರುವ ತಾಯಿಗೆ, ಆ ಮಗುವನ್ನೇ ಕೊಂದುಬಿಡುವ ಯೋಚನೆ! ಕೂಡಲೇ ಎಚ್ಚೆತ್ತುಕೊಳ್ಳುವ ಆಕೆ ತನ್ನ ಮಗಳನ್ನೇ ಕೊಂದುಬಿಡುವ ಯೋಚನೆ ನನಗೆ ಮೂಡಿಸಿದ ಈ “ಮರ್ಯಾದೆ”ಗೆ ಬೆಂಕಿ ಹಾಕ, ನನ್ನ ಮಗಳು ಬೆಳೆದು ದೊಡ್ಡವಳಾಗಿ ಅಂತರಿಕ್ಷದಲ್ಲಿ ಪ್ರಯಾಣಿಸುತ್ತಿದ್ದಾಗ ಮರ್ಯಾದೆ ಎಂದು ಮುಂದಿನ ಜೀವನಕ್ಕೆ ಅಣಿಯಾಗುತ್ತಾಳೆ. ನಾವಿರುವ ಜಾತಿ ಸಮಾಜದಲ್ಲಿ ಇಂತಹ ಯೋಚನೆಗಳೂ ನಮಗೂ ಬರಬಹುದು, ಆದರೆ ಇಂಥ ಒಂದು ಕ್ಷಣದ ಎಚ್ಚರ, ಯಾವುದು ಮರ್ಯಾದೆ ಎಂಬ ಒಂದು ಸಣ್ಣ ಪ್ರಶ್ನೆ ನಮ್ಮನ್ನು ಮನುಷ್ಯರಾಗೇ ಉಳಿಸಬಲ್ಲದು.

ವಾನ್ಮಗಳ್

’ತಂಗಮ್ ಚಿತ್ರದಲ್ಲಿ ಓಡಿಹೋಗಿ ಮದುವೆಯಾಗಿರುವ ದಂಪತಿ (ಇಲ್ಲಿ ಒಂದು ಸಂಕೀರ್ಣ ಪ್ರೇಮಕಥೆಯೂ ಅಡಗಿದೆ. ಸತ್ತಾರ್ ತನ್ನ ಪ್ರಿಯಕರ ಶರವಣನಿಗೆ ಅವನ ಬಯಕೆಯಂತೆ ತನ್ನ ತಂಗಿ ಸಾಯಿರಾ ಜೊತೆ ಓಡಿಹೋಗಿ ಅಂತರಧರ್ಮೀಯ ಮದುವೆ ಮಾಡಿಕೊಳ್ಳಲು ಸಹಕರಿಸುತ್ತಾರೆ) ಹಿಂದಿರುಗಿದಾಗ, ಅವರನ್ನು ಒಪ್ಪಿಕೊಳ್ಳಲು ಎರಡೂ ಕುಟುಂಬದವರು ಸಿದ್ಧರಿದ್ದರೂ, ಸತ್ತಾರ್‌ನನ್ನು ಮನೆಯಿಂದ ಹೊರದಬ್ಬಿ ಅವನ ಸಾವಿಗೆ ಕಾರಣವಾಗಿರುವ ತಮ್ಮ ಕುಟುಂಬದ ಸದಸ್ಯರ ಬಗ್ಗೆ, ಊರ ಜನರ ಬಗ್ಗೆ ಆ ದಂಪತಿ ತಳೆಯುವ, ಸಿಟ್ಟು, ಹತಾಶೆ, ಆಕ್ರೋಶ ಎಲ್ಲವೂ ಪ್ರೇಕ್ಷಕನದ್ದೂ ಆಗುತ್ತದೆ.

ತಂಗಮ್

ಇನ್ನೂ ಬದಲಾಗದ ವ್ಯವಸ್ಥೆಯ ಬಗ್ಗೆ ನೋಡುಗನಿಗೆ ಸ್ವಲ್ಪವಾದರೂ ತಟ್ಟಿ ಚಿಂತಿಸುವಂತೆ ಮಾಡಬಲ್ಲ ಈ ನಾಲ್ಕು ಕಥೆಗಳ ಗುಚ್ಛ ನಮ್ಮ ಪ್ಯಾಟ್ರಿಯಾರ್ಕಲ್ ಮನಸ್ಥಿತಿಯನ್ನು, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ಮತ್ತು ಇವುಗಳಿಂದ ಹುಟ್ಟಿರುವ ’ಮರ್ಯಾದೆ’ಯ ಕಲ್ಪನೆಯನ್ನು ಅಲ್ಲಾಡಿಸುತ್ತದೆ.

ಒರು ಇರವು

ಇದನ್ನೂ ಓದಿ: ಮರ್ಯಾದಾಹೀನ ಹತ್ಯೆ: ಸಿನಿಮಾ ಶೈಲಿಯಲ್ಲಿ ಕಥೆ ಕಟ್ಟಿದ ಯುವತಿಯ ಕುಟುಂಬ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...